ಚಿಕ್ಕಬಳ್ಳಾಪುರ: ಹಿಂದೂ ಸಂಸ್ಕೃತಿ ಬೆಳೆಯಬೇಕಾದರೆ ವಾಲ್ಮೀಕಿ ಕಾರಣ, ಹಿಂದೂ ಸಂಸ್ಕೃತಿಯವರು ಮೊದಲು ವಾಲ್ಮೀಕಿಗೆ ಜೈ ಎನ್ನಬೇಕು, ಆ ಮೇಲೆ ಜೈ ಶ್ರೀರಾಮ ಎನ್ನಬೇಕು ಎಂದು ಮಾಜಿ ಸಚಿವ ರಾಜನರಸಿಂಹನಾಯಕ (ರಾಜುಗೌಡ) ಹೇಳಿದರು. ನಗರದಲ್ಲಿ ಮದಕರಿ ನಾಯಕ ಜಯಂತಿ ಉದ್ಘಾಟಿಸಿ ಮಾತನಾಡಿದರು. ನಮ್ಮವರಿಗೆ ರಾಜಕೀಯ ವಿಷ ಕೊಟ್ಟು ಸಾಯಿಸುತ್ತಿದ್ದಾರೆ, ಆದರೆ ನಾವು ವಾಲ್ಮೀಕಿ ಸಮಾಜದವರು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ರಾಜುಗೌಡ ಹೇಳಿದರು.

11:07 PM (IST) Nov 03
ಅಪಘಾತದಲ್ಲಿ ಪೋಷಕರಿಗೆ ಗಂಭೀರ ಗಾಯ, ಕಂದನ ಎದೆಗಪ್ಪಿ ಚಿಕಿತ್ಸೆಗಾಗಿ ಅಲೆದಾಡಿದ ಮಹಾತಾಯಿ , ಸ್ಕ್ಯಾನಿಂಗ್ ಮಾಡಿಸಲು ಮಗುವನ್ನು ಹಿಡಿದು ನಗರದಲ್ಲಿ ಸಂಚರಿಸಿ ಪರೀಕ್ಷೆ ನಡೆಸಿದ ಮಹಾತಾಯಿಗೆ ರಾಜ್ಯವೇ ಸಲಾಂ ಹೇಳಿದೆ. ಯಾರು ಈ ತಾಯಿ, ಏನಿದು ಘಟನೆ?
11:03 PM (IST) Nov 03
Bigg Boss Kannada surprise elimination: ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿರುವ ನಡುವೆ, ಅನಿರೀಕ್ಷಿತವಾಗಿ ಅಶ್ವಿನಿ ಗೌಡ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ. ಇದು ನಿಜವಾದ ಎಲಿಮಿನೇಷನ್ನೇ ಅಥವಾ ಸೀಕ್ರೆಟ್ ರೂಮ್ಗೆ ಕಳುಹಿಸಲಾಗಿದೆಯೇ ಎಂಬ ಕುತೂಹಲ ಮೂಡಿದೆ.
10:34 PM (IST) Nov 03
ಅಪಘಾತದಿಂದ ಕೋಮಾಗೆ ಜಾರಿದ್ದ ಅಪೂರ್ವ ಭಟ್ ನಿಧನದ ಬೆನ್ನಲ್ಲೇ ಗಾಯಾಳು ತಂದೆಯೂ ನಿಧನ, ಮೇ 27ರಂದು ನಡೆದ ಅಫಘಾತದಲ್ಲಿ ಗಾಯಗೊಂಡ ಅಪೂರ್ವ 130 ದಿನ ಕೋಮಾದಲ್ಲಿದ್ದು ಮೃತಪಟ್ಟಿದ್ದರು. ಇದೀಗ ಇದೇ ಅಪಘಾತದಲ್ಲಿ ಗಾಯಗೊಂಡ ತಂದೆ ನಿಧನ.
10:01 PM (IST) Nov 03
ಗಿಲ್ಲಿ ನಟ ಮತ್ತು ರಿಷಾ ಗೌಡ ನಡುವಿನ ಜಗಳಕ್ಕೆ ಬಕೆಟ್ ಬಿಸಿನೀರು ಕಾರಣವಾಗಿದೆ. ರಿಷಾ ಸ್ನಾನಕ್ಕೆ ಹೋದಾಗ ಗಿಲ್ಲಿ ನಟ ಆಕೆಯ ಬಟ್ಟೆಗಳನ್ನು ಬಾತ್ರೂಮ್ಗೆ ಎಸೆದಿದ್ದು, ಈ ಸಂಪೂರ್ಣ ಘಟನೆಯನ್ನು ಕಾವ್ಯಾ ಅವರು ಕ್ಯಾಪ್ಟನ್ ಧನುಷ್ ಮುಂದೆ ವಿವರಿಸಿದ್ದಾರೆ.
09:02 PM (IST) Nov 03
ಸಿಎಂ ಮಾತಿಗೂ ಬೆಲೆ ಇಲ್ಲ, ಬೆಂಗಳೂರು ರಸ್ತೆ ಗುಂಡಿ ಮುಚ್ಚುವ ಡೆಡ್ಲೈನ್ ನ.10ಕ್ಕೆ ಮುಂದೂಡಿಕೆ ಮಾಡಲಾಗಿದೆ. ನವೆಂಬರ್ 3ರೊಳಗೆ ಗುಂಡಿ ಮುಚ್ಚಲು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದರು.
08:29 PM (IST) Nov 03
ಹೀರೋ ತೆರೆ ಮೇಲೆ ಇದ್ದಂಗೆ ನಿಜ ಜೀವನದಲ್ಲೂ ಇದ್ದರೆ ಒಳ್ಳೇದು, ಸಿಎಂ ಸಿದ್ದರಾಮಯ್ಯ ಹೇಳಿದ್ದು ಯಾರಿಗೆ? 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದ ಭಾಷಣದಲ್ಲಿ ಆಡಿದ ಮಾತುಗಳು ಇದೀಗ ಚರ್ಚೆಯಾಗುತ್ತಿದೆ.
08:28 PM (IST) Nov 03
07:55 PM (IST) Nov 03
07:18 PM (IST) Nov 03
ಕಾಂತಾರಾ 1 ಭಾರಿ ದುಡ್ಡು ಮಾಡಿದೆಯಂತೆ, ಬಿಡುವು ಮಾಡಿ ಸಿನ್ಮಾ ನೋಡ್ತೇನೆ ಎಂದ ಸಿದ್ದರಾಮಯ್ಯ, ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಾಂತಾರಾ ಸಿನಿಮಾ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ. ನೋಡುತ್ತೇನೆ ಎಂದಿದ್ದಾರೆ.
07:05 PM (IST) Nov 03
Actor Darshan First Look After 81 Days ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 81 ದಿನಗಳ ಬಳಿಕ ನಟ ದರ್ಶನ್ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ದೋಷಾರೋಪವನ್ನು ನಿರಾಕರಿಸಿದ ದರ್ಶನ್ ಮತ್ತು ಇತರ ಆರೋಪಿಗಳ ವಿಚಾರಣೆಯನ್ನು ನ.10 ರಿಂದ ಆರಂಭಿಸಲು ನ್ಯಾಯಾಲಯ ಆದೇಶಿಸಿದೆ.
06:43 PM (IST) Nov 03
06:35 PM (IST) Nov 03
Bengaluru house rent deposit: ಬೆಂಗಳೂರಿನ ಪ್ರೇಜರ್ ಟೌನ್ನಲ್ಲಿ 2BHK ಮನೆಯೊಂದಕ್ಕೆ ಮಾಲೀಕರು 30 ಲಕ್ಷ ರೂಪಾಯಿ ಡೆಪಾಸಿಟ್ ಕೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
06:15 PM (IST) Nov 03
ಬಿಗ್ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ರಿಷಾ ಗೌಡ, ಸಹ ಸ್ಪರ್ಧಿ ಗಿಲ್ಲಿ ನಟನ ಮೇಲೆ ಕೈ ಮಾಡಿ ನಿಯಮ ಉಲ್ಲಂಘಿಸಿದ್ದಾರೆ. ಈ ಘಟನೆಯಿಂದ ಅವರು ಎಲಿಮಿನೇಟ್ ಆಗುವ ಸಾಧ್ಯತೆಗಳಿದ್ದು, ಇದರ ನಡುವೆಯೇ ಅವರ ತಂದೆ ಮಗಳ ನಿಜವಾದ ಸ್ವഭാവದ ಬಗ್ಗೆ ಮಾತನಾಡಿದ್ದಾರೆ.
05:29 PM (IST) Nov 03
ಅಮೃತಧಾರೆ ಧಾರಾವಾಹಿಯು ಕುತೂಹಲಕಾರಿ ಘಟ್ಟ ತಲುಪಿದೆ. ಮಗಳ ಕಿಡ್ನ್ಯಾಪ್ ವಿಷಯ ಮುಚ್ಚಿಟ್ಟಿದ್ದಕ್ಕೆ ಭೂಮಿಕಾ ದೂರವಾಗಿದ್ದಾಳೆಂದು ಗೌತಮ್ ಭಾವಿಸಿದ್ದರೆ, ಗೌತಮ್ಗೆ ಮಧ್ಯರಾತ್ರಿ ಬಂದ ಕರೆಯೊಂದು ಹೊಸ ರಹಸ್ಯಕ್ಕೆ ಕಾರಣವಾಗಿದೆ. ಇವರಿಬ್ಬರ ಈ ಅಗಲಿಕೆಯ ಸತ್ಯವೇನು ಎನ್ನುವುದು ಸಸ್ಪೆನ್ಸ್ ಮೂಡಿಸಿದೆ.
05:00 PM (IST) Nov 03
ನಟ ದರ್ಶನ್ ವಿರುದ್ಧ ದೋಷಾರೋಪ ನಿಗದಿ ದಿನವೇ ಎರಡು ಮಹತ್ವದ ಬೆಳವಣಿಗೆ, ಎರಡು ಘಟನೆಗಳು ದರ್ಶನ್ ಜೈಲುವಾಸದಲ್ಲಿ ಪ್ರಮುಖ ಘಟನೆಯಗಳಾಗಿದೆ. ಕೋರ್ಟ್ ಆವರಣದಲ್ಲಿ ನಡೆದ ಪ್ರಮುಖ ಬೆಳವಣಿಗೆ ಏನು?
04:51 PM (IST) Nov 03
Kartik Purnima : ಇದೇ ನವೆಂಬರ್ 5 ರಂದು ಕಾರ್ತಿಕ ಪೂರ್ಣಿಮೆ ಆಚರಿಸಲಾಗ್ತಿದೆ. ಈ ದಿನ ಸ್ನಾನ, ದಾನಕ್ಕೆ ಮಹತ್ವವಿದೆ. ಮನೆ ಬಾಗಿಲಿಗೆ ಲಕ್ಷ್ಮಿ ಬರಬೇಕು ಅಂದ್ರೆ ಈ ಎರಡು ಕೆಲ್ಸದ ಜೊತೆ ಮಹತ್ವದ ವಸ್ತುವೊಂದನ್ನು ಮನೆಗೆ ತನ್ನಿ.
03:53 PM (IST) Nov 03
ಮುಂಬೈನಲ್ಲಿ ನಡೆದ ಎನ್ರಿಕ್ ಇಗ್ಲೇಷಿಯಸ್ ಕನ್ಸರ್ಟ್ ನಲ್ಲಿ ಮಲೈಕಾ ಅರೋರಾ ಹ್ಯಾಂಡ್ಸಮ್ ಹಂಕ್ ಜೊತೆ ಕಾಣಿಸಿಕೊಂಡಿತ್ತು, ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಆ ವ್ಯಕ್ತಿ ಯಾರು? ನಿಜಕ್ಕೂ ಇವರಿಬ್ಬರು ಲವ್ ಮಾಡ್ತಿದ್ದಾರೆಯೇ? ಇಲ್ಲಿದೆ ಮಾಹಿತಿ.
03:44 PM (IST) Nov 03
ರೇಣುಕಾಸ್ವಾಮಿ ಕೊಲೆ ಕೇಸ್, ಕೋರ್ಟ್ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ದ ಆರೋಪ ನಿಗದಿ ಮಾಡಲಾಗಿದೆ. ಇನ್ನು ಪ್ರಕರಣದ ವಿಚಾರಣೆಯನ್ನು ನವೆಂಬರ್ 10ರಿಂದ ಆರಂಭಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ.
02:39 PM (IST) Nov 03
ರೇಣುಕಾಸ್ವಾಮಿ ಕೊಲೆ ಪ್ರಕರಣ, ನಟ ದರ್ಶನ್, ಪವಿತ್ರ ಗೌಡ ಸೇರಿ 6 ಆರೋಪಿಗಳು ಕೋರ್ಟ್ಗೆ ಹಾಜರ್, ಭಾರಿ ಭಿಗಿ ಭದ್ರತೆಯೊಂದಿಗೆ 6 ಆರೋಪಿಗಳನ್ನು ಕೋರ್ಟ್ಗೆ ಕರೆ ತಂದಿದ್ದಾರೆ. ಕೋರ್ಟ್ ಸುತ್ತಲೂ ಭಿಗಿ ಭದ್ರತೆ ಕಲ್ಪಿಸಲಾಗಿದೆ.
02:27 PM (IST) Nov 03
ಅಫಜಲಪುರ ಬಸ್ ಘಟಕದ ಚಾಲಕ ನಾಗಪ್ಪ ಉಪ್ಪಿನ, ಕಳೆದ 13 ವರ್ಷಗಳಿಂದ ತಮ್ಮ ಸ್ವಂತ ಖರ್ಚಿನಲ್ಲಿ ಸಾರಿಗೆ ಬಸ್ಸನ್ನು ಕನ್ನಡಮಯಗೊಳಿಸಿ ವಿಭಿನ್ನವಾಗಿ ರಾಜ್ಯೋತ್ಸವ ಆಚರಿಸುತ್ತಿದ್ದಾರೆ. ಬಸ್ಸಿನ ಒಳಗೆ ನಾಡಿನ ಹಿರಿಮೆಯ ಬಗ್ಗೆ ಮಾಹಿತಿ ನೀಡಿ, ಕನ್ನಡದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
02:07 PM (IST) Nov 03
01:35 PM (IST) Nov 03
Varthur police assault on woman ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ಕಳ್ಳತನ ಆರೋಪದ ಮೇಲೆ ಪಶ್ಚಿಮ ಬಂಗಾಳ ಮೂಲದ ಮನೆಗೆಲಸದ ಮಹಿಳೆಗೆ ವರ್ತೂರು ಪೊಲೀಸರು ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ.ತೀವ್ರವಾಗಿ ಗಾಯಗೊಂಡ ಮಹಿಳೆಯ ಆರೋಗ್ಯವನ್ನು ಪಶ್ಚಿಮ ಬಂಗಾಳ ಸಿಎಂ ಕಚೇರಿ ವಿಚಾರಿಸಿದೆ.
01:32 PM (IST) Nov 03
Malnad Gidda cow ಕರ್ನಾಟಕದ ಹೆಮ್ಮೆಯ ಮಲ್ನಾಡು ಗಿಡ್ಡ ದೇಶಿ ತಳಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಳ್ಳಾರೆಯ ಗೋಪಾಲಕ ಪ್ರವೀಣ್ ಬೆಳ್ಳಾರೆ ಅವರು ಎರಡು ಕರುಗಳನ್ನು ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಮಾರಾಟ ಮಾಡಿದ್ದಾರೆ. ವಿಶೇಷ ದಾಖಲೆಗಳೊಂದಿಗೆ ಈ ಕರುಗಳು ರೈಲಿನ ಮೂಲಕ ತಮ್ಮ ಹೊಸ ಮನೆಯನ್ನು ತಲುಪಿವೆ.
01:14 PM (IST) Nov 03
Mallamma Bigg Boss eviction ಬಿಗ್ಬಾಸ್ ಮನೆಯಿಂದ ಹೊರಬಂದಿರುವ ಸ್ಪರ್ಧಿ ಮಲ್ಲಮ್ಮ ಅವರಿಗೆ ಅದ್ಧೂರಿ ಸ್ವಾಗತ ದೊರೆತಿದೆ. ನಟ ಮನೋಜ್ ಕುಮಾರ್ ಮತ್ತು ಪ್ರಿಯಾಂಕ ಅವರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದು, ಅವರ ನಿರ್ಗಮನಕ್ಕೆ ಸಹ ಸ್ಪರ್ಧಿಗಳಾದ ರಕ್ಷಿತಾ, ಧ್ರುವಂತ್ ಭಾವುಕರಾಗಿದ್ದಾರೆ.
01:06 PM (IST) Nov 03
ಭಾರತದ ಆರ್ಥಿಕ ಬೆಳವಣಿಗೆಯ ಮೂಲಾಧಾರ ಎಂಎಸ್ಎಂಇ ವಲಯವು, ಜಿಡಿಪಿಗೆ ಸುಮಾರು 30% ರಫ್ತಿಗೆ 45% ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿದೆ. 26 ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಟಿಸಿ, ನಗರ-ಗ್ರಾಮೀಣ ಅಂತರ ಕಡಿಮೆ ಮಾಡುತ್ತಿರುವ ಈ ವಲಯ ಉತ್ತೇಜಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಹಲವಾರು ಯೋಜನೆ ಜಾರಿಗೆ ತಂದಿವೆ.
01:06 PM (IST) Nov 03
Youth Dies After Being Falsely Accused in Minor Pregnancy Case ಅಪ್ರಾಪ್ತೆ ಗರ್ಭಿಣಿ ಪ್ರಕರಣದಲ್ಲಿ ತನ್ನ ಮೇಲೆ ಬಂದ ಸುಳ್ಳು ಆರೋಪದಿಂದ ಮನನೊಂದು, ಮೈಸೂರಿನ ಪಿರಿಯಾಪಟ್ಟಣದ ಯುವಕನೊಬ್ಬ ವಾಟ್ಸಾಪ್ ಆಡಿಯೋ ನೋಟ್ ಕಳುಹಿಸಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
12:44 PM (IST) Nov 03
12:42 PM (IST) Nov 03
mangalore athlete publicity stunt: ಮಗಳೂರಿನಲ್ಲಿ ಪ್ರಚಾರಕ್ಕಾಗಿ ಕ್ರೀಡಾಪಟುವೊಬ್ಬರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಂತೆ ಪೋಸು ನೀಡಿದರೆ, ಧಾರವಾಡದಲ್ಲಿ ಭಾಷಣದ ವೇಳೆ ಕರೆಂಟ್ ಕೈಕೊಟ್ಟಾಗ ಸಚಿವ ಸಂತೋಷ್ ಲಾಡ್ ಸಮಯಪ್ರಜ್ಞೆ ಮೆರೆದರು. ಈ ಎರಡೂ ಸ್ವಾರಸ್ಯಕರ ಘಟನೆಗಳ ಕುರಿತಾದ ವರದಿ ಇಲ್ಲಿದೆ.
12:19 PM (IST) Nov 03
ನಟ ಯಶ್ ಮತ್ತು ರಾಧಿಕಾ ಪಂಡಿತ್ ಪುತ್ರ ಯಥರ್ವ್, ತನ್ನ ಆರನೇ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದಾನೆ. ಬೆಂಗಳೂರಿನ ಹೊರವಲಯದಲ್ಲಿರುವ ಪ್ರಾಣಿ ಅಭಯಾರಣ್ಯದಲ್ಲಿ, ರಕ್ಷಿಸಲ್ಪಟ್ಟ ಪ್ರಾಣಿ-ಪಕ್ಷಿಗಳ ನಡುವೆ ಜಂಗಲ್ ಥೀಮ್ನಲ್ಲಿ ಈ ಸಂಭ್ರಮ ನಡೆದಿದೆ. ಇದರ ವಿಡಿಯೋ ರಿಲೀಸ್ ಆಗಿದೆ.
12:16 PM (IST) Nov 03
'ನವೆಂಬರ್ ಕ್ರಾಂತಿ' ವದಂತಿಗಳ ನಡುವೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ದಿಢೀರ್ ದೆಹಲಿ ಪ್ರವಾಸವು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಈ ಭೇಟಿಯಲ್ಲಿ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ನಿರೀಕ್ಷೆಯಿದೆ
12:08 PM (IST) Nov 03
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಸಖತ್ ಇಂಟ್ರೆಸ್ಟಿಂಗ್ ಆಗಿರುವ ಪ್ರೊಮೋ ರಿಲೀಸ್ ಆಗಿದೆ. ಒಂದು ಕಡೆ ತನ್ನ ಗಂಡನನ್ನು ಬುಟ್ಟಿಗೆ ಹಾಕಲು ಪ್ರಯತ್ನಿಸುತ್ತಿರುವ ಪಿಂಕಿಗೆ ರಶ್ಮಿ ಪೊರಕೆ ಏಟು ಕೊಟ್ಟರೆ. ಇನ್ನೊಂದೆಡೆ ಪಾರು ಮಾಡಿದ ಕರಾಮತ್ತಿಗೆ ರೌಡಿಗಳು ಸುಸ್ತಾಗಿದ್ದಾರೆ.
11:23 AM (IST) Nov 03
ಮಹೇಶ್ ಶೆಟ್ಟಿ ತಿಮರೋಡಿ, ಕೆಲವು ದಿನಗಳಿಂದ ನಾಪತ್ತೆಯಾದ ನಂತರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಧರ್ಮಸ್ಥಳದ ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಎಸ್ಐಟಿ ನೋಟಿಸ್ ಎದುರಿಸುತ್ತಿರುವ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದ್ದು, ಅವರ ಮೇಲೆ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ.
11:01 AM (IST) Nov 03
10:28 AM (IST) Nov 03
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಮತ್ತು ಇದರಿಂದ ಸರ್ಕಾರ ದಿವಾಳಿಯಾಗದು ಎಂದು ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಈ ಯೋಜನೆಗಳು ಅಬಾಧಿತವಾಗಿ ಮುಂದುವರೆಯಲಿವೆ ಎಂದರು.
09:55 AM (IST) Nov 03
Vehicle vandalism in Byadarahalli ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಧ್ರಳ್ಳಿಯಲ್ಲಿ, ಐವರು ಯುವಕರು ಮನೆ ಹಾಗೂ ಅಂಗಡಿಗಳ ಮುಂದೆ ನಿಲ್ಲಿಸಿದ್ದ ಕಾರು ಮತ್ತು ಆಟೋಗಳ ಗ್ಲಾಸ್ಗಳನ್ನು ಒಡೆದು ಅಟ್ಟಹಾಸ ಮೆರೆದಿದ್ದಾರೆ.
09:16 AM (IST) Nov 03
09:16 AM (IST) Nov 03
ಕನ್ನಡದ ಉಳಿವಿಗಾಗಿ ಹೋರಾಡಿದ 135 ವರ್ಷಗಳ ಇತಿಹಾಸದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಮುಖ್ಯಮಂತ್ರಿಗಳ ಭರವಸೆಯ ಹೊರತಾಗಿಯೂ ಶಾಶ್ವತ ಅನುದಾನ,ಜಾಗದ ಕೊರತೆಯಿಂದ ಸಂಘವು ತನ್ನ ಚಟುವಟಿಕೆ ವಿಸ್ತರಿಸಲು ಪ್ರಯಾಸಪಡುತ್ತಿದೆ.
08:50 AM (IST) Nov 03
ಸುರಂಗ ರಸ್ತೆ ವಿರೋಧಿಸಿ ನಾಗರಿಕ ಸಂಘಟನೆಗಳ ಕಾರ್ಯಕರ್ತರನ್ನು ಒಳಗೊಂಡ ‘ಲಾಲ್ ಬಾಗ್ ಉಳಿಸಿ ಹೋರಾಟ ಸಮಿತಿ’ಯಿಂದ ಭಾನುವಾರ ಲಾಲ್ ಬಾಗ್ನಲ್ಲಿ ‘ಬೆಂಗಳೂರು ರಕ್ಷಿಸಿ, ಟನಲ್ ರೋಡಿ ನಿಲ್ಲಿಸಿ’ ಎಂಬ ಘೋಷವಾಕ್ಯದೊಂದಿಗೆ ಸಹಿ ಸಂಗ್ರಹ ಅಭಿಯಾನ, ಪ್ರತಿಭಟನೆ ನಡೆಸಲಾಯಿತು.
08:49 AM (IST) Nov 03
Gilli Nata and Risha Gowda conflict: ಬಕೆಟ್ ವಿಚಾರಕ್ಕೆ ಶುರುವಾದ ಜಗಳ ತಾರಕಕ್ಕೇರಿದೆ. ಗಿಲ್ಲಿ ನಟ ಮಾಡಿದ ಕೆಲಸಕ್ಕೆ ಕೋಪಗೊಂಡ ರಿಷಾ ಗೌಡ, ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಈ ನಿಯಮ ಉಲ್ಲಂಘನೆಗಾಗಿ ರಿಷಾ ಮನೆಯಿಂದ ಹೊರಬರಬೇಕೆಂಬ ಕೂಗು ವೀಕ್ಷಕರಿಂದ ಕೇಳಿಬರುತ್ತಿದೆ.
08:37 AM (IST) Nov 03
ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ವಿಫಲರಾದ ಬಿಬಿಎಂಪಿ ಅಧಿಕಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಕ್ಟೋಬರ್ 31ರ ಡೆಡ್ಲೈನ್ ಮುಗಿದರೂ ಕೆಲಸವಾಗದ ಕಾರಣ, ಇಂದು ಸಂಜೆಯೊಳಗೆ ಎಲ್ಲಾ ಗುಂಡಿಗಳನ್ನು ಮುಚ್ಚಿ ವರದಿ ನೀಡುವಂತೆ ಖಡಕ್ ಎಚ್ಚರಿಕೆ.