MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Davanagere: ಹೈ ಸ್ಪೀಡ್ ಮಣಿ ಹೆಸರಿನ ಟಗರು ಸಾವು; ಗ್ರಾಮದಲ್ಲಿ ಮೆರವಣಿಗೆ ಮಾಡಿ ಅಂತ್ಯಕ್ರಿಯೆ

Davanagere: ಹೈ ಸ್ಪೀಡ್ ಮಣಿ ಹೆಸರಿನ ಟಗರು ಸಾವು; ಗ್ರಾಮದಲ್ಲಿ ಮೆರವಣಿಗೆ ಮಾಡಿ ಅಂತ್ಯಕ್ರಿಯೆ

ಟಗರು ಕಾಳಗದಲ್ಲಿ ಹೆಸರುವಾಸಿಯಾಗಿದ್ದ 'ಹೈ ಸ್ಪೀಡ್ ಮಣಿ' ಎಂಬ ಟಗರು ಸಾವನ್ನಪ್ಪಿದೆ. ಉತ್ತರ ಕರ್ನಾಟಕದಾದ್ಯಂತ ಜನಪ್ರಿಯತೆ ಗಳಿಸಿದ್ದ ಈ ಟಗರಿನ ಮಾಲೀಕರು, ಅಂತ್ಯಕ್ರಿಯೆಗೂ ಮುನ್ನ ಗ್ರಾಮದಲ್ಲಿ ಭವ್ಯ ಮೆರವಣಿಗೆ ನಡೆಸಿ ಅಂತಿಮ ನಮನ ಸಲ್ಲಿಸಿದ್ದಾರೆ.

1 Min read
Mahmad Rafik
Published : Nov 03 2025, 09:16 AM IST
Share this Photo Gallery
  • FB
  • TW
  • Linkdin
  • Whatsapp
14
ಹೈ ಸ್ಪೀಡ್ ಮಣಿ
Image Credit : Asianet News

ಹೈ ಸ್ಪೀಡ್ ಮಣಿ

ಹೈ ಸ್ಪೀಡ್ ಮಣಿ ಅಂತಾನೇ ಹೆಸರು ಮಾಡಿದ್ದ ಟಗರು ಸಾವನ್ನಪ್ಪಿದೆ. ಟಗರಿನ ಮಾಲೀಕರು ಅಂತ್ಯಕ್ರಿಯೆಗೂ ಮುನ್ನ ಟಗರನ್ನು ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಿಸಿದ್ದಾರೆ. ಅಪಾಯ ಅಭಿಮಾನಿ ಬಳಗ ಹೊಂದಿದ್ದ ಹೈ ಸ್ಪೀಡ್ ಮಣಿಯ ಅಂತ್ಯಕ್ರಿಯೆಯಲ್ಲಿ ನೂರಾರು ಜನರು ಭಾಗಿಯಾಗಿದ್ದರು.

24
 ಟಗರು ಕಾಳಗ
Image Credit : Asianet News

ಟಗರು ಕಾಳಗ

ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಟಗರು ಕಾಳಗ ಅತ್ಯಂತ ಜನಪ್ರಿಯವಾಗಿದೆ. ಗ್ರಾಮೀಣ ಭಾಗದ ಜನರು ತಮ್ಮ ಮನೆಯಲ್ಲಿರುವ ಟಗರುಗಳಿಗೆ ಪೌಷ್ಠಿಕ ಆಹಾರ ನೀಡಿ ಸಾಕಿ ಸ್ಪರ್ಧೆಗೆ ಬಿಡುತ್ತಾರೆ. ಸ್ಪರ್ಧೆಯಲ್ಲಿ ಗೆದ್ದ ಟಗರು ಮಾಲೀಕರು ಲಕ್ಷಗಟ್ಟಲೇ ಬಹುಮಾನ ಪಡೆಯುತ್ತಾರೆ.

Related Articles

Related image1
ಟಗರು ಹಾಡಿಗೆ ಯಶ್ ಹೆಂಗೆ ಡ್ಯಾನ್ಸ್ ಮಾಡ್ತಿದ್ದಾರೆ ನೋಡಿ! ಮಗನ ಬರ್ತ್‌ಡೇಗೆ ರಾಕಿಭಾಯ್ ಮಸ್ತ್ ಸ್ಟೆಪ್ಸ್‌
Related image2
ಬಂಡೂರು ಟಗರು ₹1.48 ಲಕ್ಷಕ್ಕೆ ಮಾರಾಟ!
34
ಹಲವು ಪ್ರಶಸ್ತಿ
Image Credit : Asianet News

ಹಲವು ಪ್ರಶಸ್ತಿ

ಇದೇ ಹೈ ಸ್ಪೀಡ್ ಮಣಿ ಸಹ ಟಗರು ಕಾಳಗದಿಂದ ದಾವಣಗೆರೆ, ಹಾವೇರಿ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಹೈ ಸ್ಪೀಡ್ ಮಣಿ ಟಗರು ಕಾಳಗದಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು.

ಇದನ್ನೂ ಓದಿ: ಒಂದು ತೊಗೊಂಡ್ರೆ ಮತ್ತೊಂದು ಫ್ರೀ ಬಾಟೆಲ್; ಹೊಸ ಅಬಕಾರಿ ನೀತಿಯಲ್ಲಿ ಮಹತ್ವದ ಬದಲಾವಣೆ?

44
ಹೊಸ ಕುಂದುವಾಡ ಗ್ರಾಮದ ಹಾಲೇಶ್
Image Credit : Asianet News

ಹೊಸ ಕುಂದುವಾಡ ಗ್ರಾಮದ ಹಾಲೇಶ್

ರಾಜ್ಯಾದ್ಯಂತ ವಿವಿಧ ಭಾಗಗಳಲ್ಲಿ ಟಗರು ಕಾಳಗದಲ್ಲಿ ಹೆಸರು ಮಾಡಿದ್ದ ಹೈ ಸ್ಪೀಡ್ ಮಣಿಯನ್ನು ಹೊಸ ಕುಂದುವಾಡ ಗ್ರಾಮದ ಹಾಲೇಶ್ ಎಂಬುವರು ಸಾಕಿದ್ದರು. ಅಂತ್ಯಸಂಸ್ಕಾರಕ್ಕೂ ಮುನ್ನ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗಿತ್ತು. ಅಂತಿಮವಾಗಿ ತಮ್ಮ ಮನೆ ಮುಂದೆಯೇ ಟಗರಿನ ಅಂತ್ಯಸಂಸ್ಕಾರವನ್ನು ಹಾಲೇಶ್ ಮಾಡಿದ್ದಾರೆ.

ಇದನ್ನೂ ಓದಿ : ಅಬ್ಬಿಗೆರೆ ದೇವಾಲಯದಲ್ಲಿ ಡಿಸಿಎಂ: ನಮ್ಮ ಒಳ್ಳೆಯ ಕೆಲಸಗಳೇ ಶಾಶ್ವತ ಎಂದ ಡಿಕೆ ಶಿವಕುಮಾರ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ದಾವಣಗೆರೆ
ಕರ್ನಾಟಕ ಸುದ್ದಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved