Published : May 29, 2025, 06:17 AM ISTUpdated : May 29, 2025, 09:00 PM IST

Karnataka news Live: ಗೋವಾ ಪ್ರವಾಸಿಗರಿಗೆ ಹಣ ಉಳಿತಾಯದ ಸಿಹಿಸುದ್ದಿ; ಆ್ಯಪ್ ಆಧಾರಿತ ಕ್ಯಾಬ್‌ ಸೇವೆ ಆರಂಭಿಸಿದ ಸರ್ಕಾರ!

ಸಾರಾಂಶ

ಬೆಂಗಳೂರು: ಸರ್ಕಾರಿ ಕಾಮಗಾರಿಗಳ ಗುತ್ತಿಗೆ, ಖರೀದಿ ಪ್ರಕ್ರಿಯೆಗಳಲ್ಲಿ 2-ಬಿ ಪ್ರವರ್ಗದವರಿಗೆ (ಮುಸ್ಲಿಮರಿಗೆ) ಶೇ.4ರಷ್ಟು ಮೀಸಲಾತಿ ಕಲಿಸುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಪಿಪಿ) ನಿಯಮ ಗಳ ತಿದ್ದುಪಡಿ ವಿಧೇಯಕವನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಬುಧವಾರ ಮತ್ತೊಮ್ಮೆ ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಅಲ್ಲದೆ, ಏ.15 ರಂದು ರಾಜ್ಯ ಸರ್ಕಾರಕ್ಕೆ ವಿಧೇ ಯಕ ವಾಪಸ್ ಕಳುಹಿಸಿ ನಾನು ತಿಳಿಸಿದ್ದ ಅಭಿಪ್ರಾಯಕ್ಕೆ ಬದ್ಧನಾಗಿದ್ದೇನೆ. ವಿಧೇಯಕವು ಸಾಂವಿಧಾನಿಕ ಬಿಕಟ್ಟು ಸೃಷ್ಟಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಬೇಕು ಎಂದು ಪುನರುಚ್ಚರಿಸಿದ್ದಾರೆ.

ರಾಜ್ಯ ಸರ್ಕಾರವು ಮುಸ್ಲಿಮರಿಗೆ 2 ಕೋಟಿ ರು.ವರೆಗಿನ ಕಾಮಗಾರಿಗಳಲ್ಲಿ ಹಾಗೂ ವಿವಿಧ ಇಲಾಖೆ, ನಿಗಮ-ಮಂಡಳಿಗಳಲ್ಲಿನ ಖರೀದಿ ಪ್ರಕ್ರಿಯೆಯಲ್ಲಿ 1 ಕೋಟಿ ರು.ವರೆಗೆ ಮೀಸಲಾತಿ ಕಲ್ಪಿಸಲು ತಿದ್ದುಪಡಿ ವಿಧೇಯಕ ಮಂಡಿಸಿ ಉಭಯ ಸದನಗಳಲ್ಲಿ ಅಂಗೀಕಾರ ಪಡೆದು ರಾಜ್ಯಪಾಲರ ಅನುಮೋದನೆಗೆ ಕಳುಹಿಸಿತ್ತು.

09:00 PM (IST) May 29

ಗೋವಾ ಪ್ರವಾಸಿಗರಿಗೆ ಹಣ ಉಳಿತಾಯದ ಸಿಹಿಸುದ್ದಿ; ಆ್ಯಪ್ ಆಧಾರಿತ ಕ್ಯಾಬ್‌ ಸೇವೆ ಆರಂಭಿಸಿದ ಸರ್ಕಾರ!

ಗೋವಾಗೆ ಒಮ್ಮೆಯಾದರೂ ಹೋಗಬೇಕೆಂದು ಬಹಳಷ್ಟು ಜನರು ಆಸೆಪಡುತ್ತಾರೆ. ವಿಶೇಷವಾಗಿ ಯುವಕರು ಗೋವಾಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ಗೋವಾದಲ್ಲಿ ಪ್ರವಾಸಿಗರಿಗೆ ಎದುರಾಗುವ ಪ್ರಮುಖ ಸಮಸ್ಯೆಗಳಲ್ಲಿ ಪ್ರಯಾಣವೂ ಒಂದು.

Read Full Story

08:59 PM (IST) May 29

ಪ್ರೀತಿಯಲ್ಲಿ ಮೋಸ ಹೋಗಿದ್ದಕ್ಕೆ ಪ್ರಾಣವನ್ನೇ ಕಳೆದುಕೊಂಡ ಮಿಸ್ ಇಂಡಿಯಾ ವಿಜೇತೆ… ಯಾರಿವರು

ನಫೀಸಾ ಜೋಸೆಫ್ 1997 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಯೂನಿವರ್ಸ್ ಪ್ರಶಸ್ತಿಯನ್ನು ಗೆದ್ದ ಬೆಂಗಳೂರಿನ ಬೆಡಗಿ. ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಆತ್ಮ*ಹತ್ಯೆ ಮಾಡಿಕೊಂಡಿದ್ದರು.

Read Full Story

08:56 PM (IST) May 29

ಬೆಂಗಳೂರು - ಪತ್ನಿಯಿಂದ ಪತಿಯ ಹತ್ಯೆ, ಪೊಲೀಸರಿಂದ ಹೆಂಡತಿ ಬಂಧನ

ಬೊಮ್ಮನಹಳ್ಳಿಯಲ್ಲಿ ಪತ್ನಿಯೇ ಗಂಡನನ್ನು ಕೊಲೆಗೈದಿರುವ ಘಟನೆ ಬೆಳಕಿಗೆ ಬಂದಿದೆ. ಮರಣೋತ್ತರ ಪರೀಕ್ಷೆಯ ವರದಿಯಿಂದ ಕೊಲೆ ಪ್ರಕರಣ ಬಯಲಾಗಿದ್ದು, ಪೊಲೀಸರು ಆರೋಪಿ ಪತ್ನಿಯನ್ನು ಬಂಧಿಸಿದ್ದಾರೆ.
Read Full Story

08:25 PM (IST) May 29

ಹಳ್ಳಿಕಟ್ಟೆ ಮೇಲೆ ಕುಳಿತವರಿಗೆ ಕೆಸರು ಸಿಡಿಸಿದ ಬಸ್; ಸಾರಿಗೆ ಸಿಬ್ಬಂದಿ ದೂರು ಕೊಟ್ಟಿದ್ದಕ್ಕೆ ಹಲ್ಲೆಗೈದ ಯುವಕ ಸಾವು!

ರಾಯಚೂರಿನಲ್ಲಿ ಕೆಸರು ಸಿಡಿದ ಹಿನ್ನೆಲೆಯಲ್ಲಿ ಬಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆದಿತ್ತು. ದೂರಿನ ನಂತರ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬಸ್ಥರು ಬಸ್ ಡಿಪೋ ಎದುರು ಪ್ರತಿಭಟನೆ ನಡೆಸಿದ್ದಾರೆ.
Read Full Story

08:20 PM (IST) May 29

ಕೊಡಗಿನಲ್ಲಿ ಸುರಿದ ನಾಲ್ಕೇ ದಿನದ ಮಳೆಗೆ ಬಿರುಕು ಬಿಟ್ಟ ಕೆರೆ ಏರಿ! ಆತಂಕದಲ್ಲಿ ಜನ

ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಗೊಂದಿಬಸವನಹಳ್ಳಿಯ ರೊಂಡೆಕೆರೆಯ ಏರಿ ಒಡೆದು ಹೋಗುವ ಸ್ಥಿತಿ ತಲುಪಿದೆ. 15 ಮೀಟರ್ ನಷ್ಟು ಉದ್ದಕ್ಕೆ ಏರಿ ಬಿರುಕು ಬಿಟ್ಟಿದ್ದು, ಕೆರೆ ತುಂಬಿದಂತೆ ಯಾವುದೇ ಕ್ಷಣದಲ್ಲಿ ಏರಿ ಒಡೆದು ಹೋಗುವ ಆತಂಕ ಎದುರಾಗಿದೆ.  

Read Full Story

07:50 PM (IST) May 29

ಬೆಂಗಳೂರು ಐಪಿಎಲ್ ಟಿಕೆಟ್ ಹಗರಣ - ಪೊಲೀಸರೇ ಕಾಳಸಂತೆಕೋರರು, ಮಾರಾಟ ಮಾಡುವಾಗ್ಲೆ ಇಬ್ಬರು ಸಿಕ್ಕಿಬಿದ್ರು!

ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರಿನಲ್ಲಿ ಐಪಿಎಲ್ ಟಿಕೆಟ್‌ಗಳ ಕಾಳಸಂತೆ ಮಾರಾಟದಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಟಿಕೆಟ್ ಮಾರಾಟ ಮಾಡುವಾಗ ಇಬ್ಬರು ಕಾನ್ಸ್‌ಟೇಬಲ್‌ಗಳು ಸಿಕ್ಕಿಬಿದ್ದಿದ್ದು,ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

Read Full Story

07:42 PM (IST) May 29

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು ನಗರದಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಜೂನ್ 30 ರೊಳಗೆ ಅರ್ಜಿ ಸಲ್ಲಿಸಬಹುದು.
Read Full Story

07:34 PM (IST) May 29

ಐಪಿಎಲ್ 2025ರಲ್ಲಿ ಹೊರಹೊಮ್ಮಿದ ತಾರೆಗಳು, ತಂಡವನ್ನು ವೈಭವಕ್ಕೆ ಕೊಂಡೊಯ್ಯಬಲ್ಲ ಉದಯೋನ್ಮುಖ ಆಟಗಾರರು

ಐಪಿಎಲ್ 2025 ರಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಸಕಾರಾತ್ಮಕ ಬದಲಾವಣೆಗಳನ್ನು ಮಾಡುತ್ತಿರುವ ಉದಯೋನ್ಮುಖ ತಾರೆಯರನ್ನು ನೋಡೋಣ; ಪ್ರಸ್ತುತ ಸೀಸನ್ನಿನಲ್ಲಿ ಐಪಿಎಲ್-ಗೆ ಪ್ರಪ್ರಥಮವಾಗಿ ಪಾದಾರ್ಪಣೆ ಮಾಡಿದ ಆಟಗಾರರನ್ನು ಮಾತ್ರ ಪರಿಗಣಿಸಲಾಗಿದೆ:

Read Full Story

07:28 PM (IST) May 29

ಹರಿದು ಹೋದ ನೋಟು & ಗಾಜಿನ ಬಳೆ ಸರಿಮಾಡುವ ಸುಲಭ ಟ್ರಿಕ್ಸ್!

ಹರಿದ ನೋಟುಗಳನ್ನು ಮೇಣದಬತ್ತಿಯಿಂದ ಸರಿಪಡಿಸುವ ಟ್ರಿಕ್ ವೈರಲ್ ಆಗಿದೆ. ಗಾಜಿನ ಬಳೆಗಳ ಬಾಳಿಕೆ ಹೆಚ್ಚಿಸಲು ಬಿಸಿ ನೀರಿನಲ್ಲಿ ಕುದಿಸುವ ಸಲಹೆಯನ್ನೂ ನೀಡಲಾಗಿದೆ. ಹೆಚ್ಚಿನ ಉಪಾಯಗಳನ್ನು ಲೇಖನದಲ್ಲಿ ತಿಳಿಯಿರಿ.
Read Full Story

07:19 PM (IST) May 29

44ನೇ ವಯಸ್ಸಿನಲ್ಲಿ ಮೂರನೇ ಹೆಣ್ಣು ಮಗು ಜನನ, ಹಸುಗೂಸು ಮಾರಿದ ಪೋಷಕರು ಸೇರಿ ಮೂವರ ಬಂಧನ

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 
ಚಿಕ್ಕಮಗಳೂರು ಜಿಲ್ಲೆಯಲ್ಲಿ ದಂಪತಿಗಳು ತಮ್ಮ ಎರಡು ದಿನದ ಹೆಣ್ಣು ಮಗುವನ್ನು ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಅನುಮಾನದ ಮೇರೆಗೆ ಪೊಲೀಸರು ತನಿಖೆ ನಡೆಸಿ ದಂಪತಿಗಳು ಮತ್ತು ಮಧ್ಯವರ್ತಿಯನ್ನು ಬಂಧಿಸಿದ್ದಾರೆ. 

Read Full Story

07:05 PM (IST) May 29

ಕ್ವಾಲಿಫೈಯರ್ 1, ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ, ತಂಡ ಸೇರಿದ ಹೇಜಲ್‌ವುಡ್

2025ರ ಐಪಿಎಲ್ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ ಕೆಲ ಮಹತ್ವದ ಬದಲಾವಣೆಯಾಗಿದೆ.

Read Full Story

06:49 PM (IST) May 29

ನಮಗೆ ಬೇಡ ತಮನ್ನಾ; ಹಸುಗಳಿಗೆ ಮೈಸೂರು ಸ್ಯಾಂಡಲ್ ಸೋಪು ಹಚ್ಚಿ ಸ್ನಾನ ಮಾಡಿದಸಿದ ಮಂಡ್ಯದ ಜನ!

ಮೈಸೂರು ಸ್ಯಾಂಡಲ್ ಸೋಪ್ ಬ್ರಾಂಡ್ ಅಂಬಾಸಿಡರ್ ಆಗಿ ತಮನ್ನಾ ಆಯ್ಕೆಯನ್ನು ವಿರೋಧಿಸಿ ಮಂಡ್ಯದಲ್ಲಿ ಹಸುಗಳಿಗೆ ಸೋಪಿನಿಂದ ಸ್ನಾನ ಮಾಡಿಸಿ ಪ್ರತಿಭಟನೆ ನಡೆಸಲಾಗಿದೆ. ರಾಜ್ಯದ ನಟಿಯರಿಗೆ ಆದ್ಯತೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
Read Full Story

06:41 PM (IST) May 29

ಕ್ವಾಲಿಫೈಯರ್ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಕಾಡುತ್ತಿದೆಯಾ ವಿರಾಟ್ ಕೊಹ್ಲಿ ಪ್ಲೇ ಆಫ್ ರೆಕಾರ್ಡ್?

ಮೊದಲ ಕ್ವಾಲಿಫೈಯರ್ ಪಂದ್ಯಕ್ಕೂ ಮೊದಲು ಇದೀಗ ಆರ್‌ಸಿಬಿಗೆ ವಿರಾಟ್ ಕೊಹ್ಲಿ ಪ್ಲೇ ಆಫ್ ಚಿಂತೆ ಕಾಡುತ್ತಿದೆಯಾ? ಇದುವರೆಗಿನ ಕೊಹ್ಲಿ ಪ್ಲೇ ಆಫ್ ರೆಕಾರ್ಡ್ ಹೇಗಿದೆ? ಪ್ಲೇ ಅಫ್ ಸುತ್ತು ಆರ್‌ಸಿಬಿಗೆ ಕಠಿಣವಾಗುತ್ತಾ? 

Read Full Story

06:26 PM (IST) May 29

ಬಸ್​ ಪ್ರಯಾಣವೂ ಡೇಂಜರ್​! ಮತ್ತೊಬ್ಬ ಚಾಲಕನಿಗೆ ಹೃದಯಾಘಾತ- ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆ

ಚಾಲಕರಿಗೆ ಹೃದಯಘಾತವಾಗುತ್ತಿರುವ ಘಟನೆಗಳೂ ಹೆಚ್ಚುತ್ತಿದ್ದು, ಬಸ್​ ಪ್ರಯಾಣವೂ ಭಯಪಡುವಂತಾಗಿದೆ. ಇದೀಗ ಇನ್ನೊಂದು ಘಟನೆಯಲ್ಲಿ ವಾಹನ ಚಲಾಯಿಸುವಾಗಲೇ ಚಾಲಕ ಮೃತಪಟ್ಟಿರುವ ಘಟನೆ ನಡೆದಿದೆ!

Read Full Story

06:05 PM (IST) May 29

WhatsApp ಮೆಸೇಜ್‌ಗೆ ಇನ್ನು ಶುಲ್ಕ? ಹೊಸ ನಿಯಮ ತರಲು ಮುಂದಾದ ಮೆಟಾ!

WhatsApp ಉಚಿತ ಬಳಕೆ ಇನ್ನಿಲ್ಲ! ಪ್ರತಿ ಮೆಸೇಜ್‌ಗೂ ದುಬಾರಿ ಶುಲ್ಕ ತೆರಬೇಕು! ಉಚಿತ ದಿನಗಳು ಮುಗಿದವು! ಹೌದು, ಮೆಟಾ ಒಡೆತನದ WhatsApp ತಮ್ಮ ಪ್ಲಾಟ್‌ಫಾರ್ಮ್ ಬಳಕೆಗೆ ಶುಲ್ಕ ಘೋಷಿಸಿದೆ. ಪ್ರತಿ ಮೆಸೇಜ್‌ಗೆ ಎಷ್ಟು ಖರ್ಚಾಗುತ್ತದೆ?

Read Full Story

05:50 PM (IST) May 29

ಬೆಂಗಳೂರಿನಲ್ಲಿ ಚಿನ್ನಕ್ಕಾಗಿ ವಿವಾಹಿತೆ ಹತ್ಯೆ, ಬೀದರ್‌ನಿಂದ ಮಹಿಳೆಯನ್ನೇ ಹುಡುಕಿ ಬಂದ ಹಂತಕ!

ಬೆಂಗಳೂರಿನ ಕಾಟನ್ ಪೇಟೆಯಲ್ಲಿ ವಿವಾಹಿತ ಮಹಿಳೆ ಲತಾ ಅವರನ್ನು ಚಿನ್ನಾಭರಣಕ್ಕಾಗಿ ಹತ್ಯೆ ಮಾಡಲಾಗಿದೆ. ಆಘಾತಕಾರಿ ಸಂಗತಿಯೆಂದರೆ, ಈ ಕೃತ್ಯದ ಹಿಂದೆ ಲತಾ ಅವರ ಸಂಬಂಧಿ ಮತ್ತು ಆತನ ಸ್ನೇಹಿತನ ಕೈವಾಡವಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
Read Full Story

05:46 PM (IST) May 29

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರಿಗೆ ನಾಳೆಯಿಂದ ಬೆಳಗ್ಗಿನ ಉಪಾಹಾರವೂ ವಿತರಣೆ!

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಮೇ 30, 2025 ರಿಂದ ಭಕ್ತರಿಗೆ ಬೆಳಗಿನ ಉಪಹಾರ ಪ್ರಸಾದವನ್ನು ನೀಡಲಿದೆ. ಪ್ರತಿದಿನ ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ ಉಪಹಾರ ಲಭ್ಯವಿರುತ್ತದೆ. ಭವಿಷ್ಯದಲ್ಲಿ 3,000 ಜನರಿಗೆ ಏಕಕಾಲದಲ್ಲಿ ಊಟ ನೀಡಲು ನೂತನ ಭೋಜನ ಶಾಲೆ ನಿರ್ಮಾಣವಾಗಲಿದೆ.
Read Full Story

05:44 PM (IST) May 29

ಲೈವ್ ಪಂದ್ಯದಲ್ಲೇ ಹೊಡೆದಾಡಿಕೊಂಡ ಬಾಂಗ್ಲಾದೇಶ- ಸೌತ್ ಆಫ್ರಿಕಾ ಕ್ರಿಕೆಟಿಗರು, ವಿಡಿಯೋ

ಬಾಂಗ್ಲಾದೇಶ ಹಾಗೂ ಸೌತ್ ಆಫ್ರಿಕಾ ಕ್ರಿಕೆಟಿಗರು ಪಂದ್ಯದ ನಡುವೆ ಮಾರಾಮಾರಿ ನಡೆಸಿದ ಘಟನೆ ನಡೆದಿದೆ. ಬಾಂಗ್ಲಾದೇಶ ಬ್ಯಾಟರ್ ಹಾಗೂ ಸೌತ್ ಆಫ್ರಿಕಾ ವೇಗಿ ಇಬ್ಬರು ನೂಕಾಟ, ತಳ್ಳಾಟ ನಡೆಸಿದ್ದಾರೆ. ಲೈವ್ ಪಂದ್ಯದಲ್ಲೇ ಈ ಘಟನೆ ನಡೆದಿದೆ.

Read Full Story

05:43 PM (IST) May 29

ಬಿಜೆಪಿ ನಿಮ್ಮನ್ನು ನಿರ್ಲಕ್ಷ್ಯ ಮಾಡಿದೆಯಾ? ಸುಮಲತಾ ಅಂಬರೀಶ್ ಉತ್ತರ ಹೀಗಿತ್ತು

ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಪಕ್ಷದಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟ ಕಮಲ್ ಹಾಸನ್ ಅವರ ಕನ್ನಡ ಭಾಷೆ ಕುರಿತ ಹೇಳಿಕೆಯನ್ನು ಖಂಡಿಸಿದ್ದಾರೆ ಮತ್ತು ಕ್ಷಮೆ ಯಾಚಿಸುವಂತೆ ಸೂಚಿಸಿದ್ದಾರೆ. 

Read Full Story

05:41 PM (IST) May 29

ಬಂಪರ್‌ ಆಫರ್‌ ನೀಡಿದ ಓಯೋ, ಕಂಪನಿಗೆ ಹೆಸರು ಸೂಚಿಸಿ 3 ಲಕ್ಷ ಗೆಲ್ಲಿ!

ಭಾರತದಲ್ಲಿ ಒಂದು ಸಣ್ಣ ಸ್ಟಾರ್ಟ್‌ಅಪ್ ಆಗಿ ಶುರುವಾದ OYO ಈಗ ಜಾಗತಿಕವಾಗಿ ಬೆಳೆದಿದೆ. ಭಾರಿ ಲಾಭ ಗಳಿಸುತ್ತಿರುವ OYO ಶೀಘ್ರದಲ್ಲೇ IPOಗೆ ಹೋಗಲು ಸಿದ್ಧವಾಗುತ್ತಿದೆ. ಈ ಹೊತ್ತಿನಲ್ಲಿ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

Read Full Story

05:32 PM (IST) May 29

ಭೂಗತ ಲೋಕದಿಂದ ವರ್ಷಕ್ಕೊಮ್ಮೆ ಮೇಲೇರಿ ಬರುವ 'ಮಹಾಬಲಿ' ಕಪ್ಪೆ ರೋಚಕ ಸ್ಟೋರಿ ಕೇಳಿ...

ಪ್ರಕೃತಿಯೇ ವಿಸ್ಮಯಗಳಲ್ಲಿ ಒಂದು ಮಹಾಬಲಿ ಕಪ್ಪೆ. ನೇರಳೆ ಕಪ್ಪೆ ಎಂದೂ ಕರೆಯುವ ಇದು ವರ್ಷಕ್ಕೊಮ್ಮೆ ಮಾತ್ರ ಭೂಮಿಯಿಂದ ಮೇಲೆ ಬರುತ್ತದೆ. ಕೇರಳದ ಈ ಕಪ್ಪೆಯ ರೋಚಕ ಸ್ಟೋರಿ ಇಲ್ಲಿದೆ...

Read Full Story

05:06 PM (IST) May 29

ಸೋದರ ಸಂಬಂಧಿ ಜೊತೆ ಲವ್‌, ಪೋಷಕರ ವಿರೋಧದ ಬೆನ್ನಲ್ಲೇ 16 ಬಾಲಕಿ ಆತ್ಮ*ಹತ್ಯೆ!

ಥಾಣೆಯಲ್ಲಿ 16 ವರ್ಷದ ಬಾಲಕಿ ಸೋದರಸಂಬಂಧಿಯನ್ನು ಪ್ರೀತಿಸುತ್ತಿದ್ದಳು. ಆಕೆಯ ಮನೆಯವರು ಸಂಬಂಧವನ್ನು ವಿರೋಧಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Read Full Story

05:04 PM (IST) May 29

ಮಗುವಾದ ಮೇಲೆ ಬ್ಯೂಟಿ ಹೆಚ್ಚಾಗಿದ್ದು ಹೇಗೆ? ಗುಟ್ಟು ರಟ್ಟು ಮಾಡಿದ ಆಲಿಯಾ ಭಟ್​

ಮಗುವಾದ ಮೇಲೆ ಇನ್ನಷ್ಟು ಹಾಟ್​ ಆಗಿರುವ ನಟಿ ಆಲಿಯಾ ಭಟ್​ ತಮ್ಮ ಸೌಂದರ್ಯದ ಗುಟ್ಟನ್ನು ರಟ್ಟು ಮಾಡಿದ್ದಾರೆ. ನಟಿ ಹೇಳಿದ್ದೇನು?

Read Full Story

04:55 PM (IST) May 29

ಹುಬ್ಬಳ್ಳಿ ಗಲಭೆ ಕೇಸ್ ರದ್ದು - ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿಗೆ ಬೊಮ್ಮಾಯಿ ಖುಷ್!

ಹುಬ್ಬಳ್ಳಿ ಪೊಲೀಸ್ ಠಾಣೆ ದಾಳಿ ಪ್ರಕರಣ ವಾಪಸ್ ಪಡೆದ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ. ಓಲೈಕೆ ರಾಜಕಾರಣಕ್ಕೆ ಕೇಸ್ ವಾಪಸ್ ಪಡೆಯಲಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
Read Full Story

04:47 PM (IST) May 29

ಎನ್‌ಕೌಂಟರ್ ಸ್ಟೆಷಲಿಸ್ಟ್ ದಯಾ ನಾಯಕ್‌ಗೆ ಹೊಸ ಹುದ್ದೆ, ACP ಆಗಿ ಬಡ್ತಿ

ಮುಂಬೈನ ಗೂಂಡಾ ಜಗತ್ತನ್ನು ನಡುಗಿಸಿದ್ದ ಪ್ರಸಿದ್ಧ ಪೊಲೀಸ್ ಅಧಿಕಾರಿ ದಯಾ ನಾಯಕ್ ಅವರಿಗೆ ಸಹಾಯಕ ಪೊಲೀಸ್ ಆಯುಕ್ತ (ACP) ಹುದ್ದೆಗೆ ಬಡ್ತಿ ದೊರೆತಿದೆ.  ನಾಯಕ್, 85ಕ್ಕೂ ಹೆಚ್ಚು ಎನ್‌ಕೌಂಟರ್‌ಗಳನ್ನು ಮಾಡಿ ಮುಂಬೈನ ಅನೇಕ ಕುಖ್ಯಾತ ಗೂಂಡಾಗಳನ್ನು ಶಾಶ್ವತವಾಗಿ ತಡೆದಿದ್ದಾರೆ.

Read Full Story

04:44 PM (IST) May 29

RBI ಚಿನ್ನದ ಸಂಗ್ರಹದಲ್ಲಿ ಏರಿಕೆ

ಹೊಸ ಖರೀದಿಗಳು, ಅಮೂಲ್ಯ ಲೋಹದ ಬೆಲೆಯಲ್ಲಿ ಶೇ. 30 ರಷ್ಟು ಹೆಚ್ಚಳ ಮತ್ತು ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿತ ಇವೆಲ್ಲವೂ ಬೆಲೆ ಏರಿಕೆಗೆ ಕಾರಣವಾಯಿತು.

Read Full Story

04:38 PM (IST) May 29

ಬೆಂಗಳೂರು ಟೆಕ್ಕಿಯ ಇನ್‌ಸ್ಟಾಗ್ರಾಮ್ ಪ್ರೀತಿ; ಲವ್, ಸೆಕ್ಸ್ ದೋಖಾ ಮಾಡಿ ಫಾರಿನ್‌ಗೆ ಪರಾರಿ!

ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಟೆಕ್ಕಿ ಭರತ್ ಎಂಬಾತ, ಮದುವೆ ಆಮಿಷವೊಡ್ಡಿ ಯುವತಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ ವಿದೇಶಕ್ಕೆ ಪರಾರಿಯಾಗಿದ್ದಾನೆ. ಮದುವೆಗೆ ಲಕ್ಷ ಲಕ್ಷ ಖರ್ಚು ಮಾಡಿದ್ದ ಯುವತಿ ಕುಟುಂಬ ಚೆನ್ನಮ್ಮನಕೆರೆ ಪೊಲೀಸ್ ಠಾಣೆಗೆ ಭರತ್ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದೆ.

Read Full Story

04:20 PM (IST) May 29

'ಒಪ್ಪಂದಕ್ಕೆ ಸಹಿ ಹಾಕ್ತೇವೆ ಆದರೆ, ಸಿಸ್ಟಮ್‌ಗಳು ಎಂದಿಗೂ ಬರೋದಿಲ್ಲ' HAL ಬಗ್ಗೆ ಐಎಎಫ್‌ ಚೀಫ್‌ ಬೇಸರ

IAF ಮುಖ್ಯಸ್ಥರ ಪ್ರಕಾರ, ವಿಳಂಬವು ತೇಜಸ್ Mk1A ಯುದ್ಧ ವಿಮಾನ ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳ ಮೇಲೆ ಪರಿಣಾಮ ಬೀರಿದೆ, ಮೂರು ವರ್ಷಗಳ ಹಿಂದೆ ದೊಡ್ಡ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದರೂ ಇವು ವಿತರಣೆಯಾಗದೆ ಉಳಿದಿವೆ.

Read Full Story

03:59 PM (IST) May 29

ಮದುವೆ ಸೀಸನ್ ಮುಗಿಯುತ್ತಿದ್ದಂತೆ ಕರ್ನಾಟಕದಲ್ಲಿ ಇಳಿಕೆಯಾದ ಚಿನ್ನದ ಬೆಲೆ

ಮೇ ತಿಂಗಳು ಅಂತ್ಯಗೊಳ್ಳುತ್ತಿದೆ. ಮುಂಗಾರು ಮಳೆ ಅಬ್ಬರಿಸುತ್ತಿದೆ. ಮದುವೆ ಸಮಾರಂಭ, ಕಾರ್ಯಕ್ರಮಗಳು ಸೀಸನ್ ಮುಗಿಯುತ್ತಿದ್ದಂತೆ ಇತ್ತ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಪ್ರಮುಖವಾಗಿ ಕರ್ನಾಟಕದಲ್ಲಿ ಇಂದು(ಮೇ.29) ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.

Read Full Story

03:54 PM (IST) May 29

Khauf - ನಿರ್ಜನ ಪ್ರದೇಶದ ಲೇಡೀಸ್ ಹಾಸ್ಟೆಲ್‌ನಲ್ಲಿ ನಡೆಯುವ ಅತಿಮಾನುಷ ಘಟನೆಗಳ ಹಾರರ್ ಸೀರೀಸ್

ದೆಹಲಿಯ ನಿರ್ಜನ ಪ್ರದೇಶದ ಮಹಿಳಾ ಹಾಸ್ಟೆಲ್‌ನಲ್ಲಿ ನಡೆಯುವ ಅತಿಮಾನುಷ ಘಟನೆಗಳನ್ನು ಕುರಿತ ಹಾರರ್ ಸೀರೀಸ್ 'ಕ್ವಾಫ್'. ಅಲೌಕಿಕ ಘಟನೆಗಳು, ಭಯಾನಕ ರಹಸ್ಯಗಳು ಮತ್ತು ಪಾತ್ರಗಳ ನಡುವಿನ ಸಂಕೀರ್ಣ ಸಂಬಂಧಗಳನ್ನು ಈ ಸೀರೀಸ್ ಒಳಗೊಂಡಿದೆ.
Read Full Story

03:50 PM (IST) May 29

ಶಶಿ ತರೂರ್ ಹೇಳಿಕೆಗೆ ಕಾಂಗ್ರೆಸ್‌ನ ಉದಿತ್ ರಾಜ್ ತಿರುಗೇಟು, ಸುಳ್ಯಾಕೆ ಹೇಳ್ತೀರಿ ಎಂದು ಪ್ರಶ್ನೆ

ಶಶಿ ತರೂರ್ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕ ಉದಿತ್ ರಾಜ್ ತಿರುಗೇಟು ನೀಡಿದ್ದಾರೆ. ಮೋದಿಯವರನ್ನು ಹೊಗಳಬಹುದು, ಆದರೆ ಸುಳ್ಳು ಹೇಳಬಾರದು ಮತ್ತು ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ನಡೆದ ಆರು ಸರ್ಜಿಕಲ್ ಸ್ಟ್ರೈಕ್‌ಗಳನ್ನು ತರೂರ್ ಅವಹೇಳನ ಮಾಡಿದ್ದಾರೆ ಎಂದು ಉದಿತ್ ರಾಜ್ ಹೇಳಿದ್ದಾರೆ.
Read Full Story

03:25 PM (IST) May 29

ಸಚಿವ ದರ್ಶನಾಪುರ ಇಲ್ನೋಡಿ, ಹಂದಿಗೂಡಿನ ಹಾಗೆ ಇದೆ ನಿಮ್ಮೂರ ಕನ್ನಡ ಶಾಲೆ!

ಯಾದಗಿರಿ ಜಿಲ್ಲೆಯ ದರಿಯಾಪುರ ಗ್ರಾಮದ ಸರ್ಕಾರಿ ಶಾಲೆಯೊಂದು ಅಕ್ಷರಶಃ ಹಂದಿಗೂಡಿನಂತಾಗಿದೆ. ಮಳೆ ನೀರು ಮತ್ತು ಚರಂಡಿ ನೀರು ಶಾಲಾ ಆವರಣಕ್ಕೆ ನುಗ್ಗಿ, ಮಕ್ಕಳು ಜಲಾವೃತದಲ್ಲಿ ಓಡಾಡುವಂತಾಗಿದೆ. ಈ ಶೋಚನೀಯ ಸ್ಥಿತಿಯನ್ನು ಕಂಡ ಮಕ್ಕಳ ಹಕ್ಕುಗಳ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿದೆ.
Read Full Story

03:16 PM (IST) May 29

ದರ್ಶನ್ ಪತ್ನಿ ಲೈಫ್ ಸ್ಟೈಲ್ ಬಲು ದುಬಾರಿ… ಹಾಕಿರೋ ಡ್ರೆಸ್ 28 ಸಾವಿರ, ಬ್ಯಾಗ್ ಇಷ್ಟೊಂದು ಲಕ್ಷಾನ?

ನಟ ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮಿ ಲೈಫ್ ಸ್ಟೈಲ್ ತುಂಬಾನೆ ದುಬಾರಿಯಾಗಿದೆ. ಆಕೆ ಧರಿಸುವ ಬಟ್ಟೆ, ಕ್ಯಾರಿ ಮಾಡೋ ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗುತ್ತೆ.

Read Full Story

03:07 PM (IST) May 29

ಕೈಯಲ್ಲಿ ತಿನ್ನೋದೇ ತಪ್ಪಾ - ಲಂಡನ್‌ನಲ್ಲಿ ಬರಿಗೈಲಿ ಆಹಾರ ಸೇವಿಸ್ತಿದ್ದ ಮಹಿಳೆಗೆ ಅವಮಾನ

ಬ್ರಿಟನ್‌ನ ಮೆಟ್ರೋದಲ್ಲಿ ಭಾರತೀಯ ಮಹಿಳೆಯೊಬ್ಬರು ಕೈಯಲ್ಲಿ ಊಟ ಮಾಡಿದ ವಿಡಿಯೋ ವೈರಲ್ ಆಗಿದ್ದು, ಅನೇಕರು ಅವರನ್ನು ಟೀಕಿಸಿದ್ದಾರೆ. ಕೆಲವರು ಇದನ್ನು ಸಾಂಸ್ಕೃತಿಕ ಅಭ್ಯಾಸ ಎಂದರೆ ಇನ್ನು ಕೆಲವರು ಅಸಹ್ಯಕರ ಎಂದಿದ್ದಾರೆ.
Read Full Story

03:06 PM (IST) May 29

ವೀರ್ಯ ದಾನ ಪಡೆದು ಹುಟ್ಟಿದ 10 ಮಕ್ಕಳಿಗೆ ಕ್ಯಾನ್ಸರ್​ - ಆಘಾತಕಾರಿ ವಿಷಯ ಬಯಲಿಗೆ!

ವೀರ್ಯ ದಾನ ಮಾಡಿ ಮಕ್ಕಳನ್ನು ಪಡೆಯುವುದು ಭಾರತದಲ್ಲಿಯೂ ಸಾಮಾನ್ಯವಾಗಿರುವ ಈ ದಿನಗಳಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಒಬ್ಬ ವ್ಯಕ್ತಿಯ ವೀರ್ಯದಿಂದ ಹುಟ್ಟಿದ 10 ಮಕ್ಕಳಲ್ಲಿ ಕ್ಯಾನ್ಸರ್​ ಪತ್ತೆಯಾಗಿದೆ!

Read Full Story

02:54 PM (IST) May 29

ಕ್ರೆಡಿಟ್‌ ಕಾರ್ಡ್‌, ಪಿಎಫ್‌, ಯುಪಿಐ..ಜೂನ್ 1 ರಿಂದ ನಿಮ್ಮ ಹಣಕಾಸು ವಿಚಾರದಲ್ಲಿ ಆಗಲಿರುವ ದೊಡ್ಡ ಬದಲಾಣೆಗಳಿವು!

ಜೂನ್ ತಿಂಗಳು ಕ್ರೆಡಿಟ್ ಕಾರ್ಡ್ ದಂಡಗಳು, ಆಧಾರ್ ತಿದ್ದುಪಡಿಗಳು, ಪಿಎಫ್ ಸೌಲಭ್ಯಗಳು, ಎಫ್‌ಡಿ ಬಡ್ಡಿ ದರಗಳು, ಫಾರ್ಮ್-16 ಮತ್ತು ಯುಪಿಐ ನಿಯಮಗಳಂತಹ ಹಲವು ಹಣಕಾಸಿನ ಬದಲಾವಣೆಗಳನ್ನು ತರುತ್ತಿದೆ. ಈ ಬದಲಾವಣೆಗಳು ನಿಮ್ಮ ಹಣಕಾಸಿನ ಮೇಲೆ ನೇರ ಪರಿಣಾಮ ಬೀರಬಹುದು, ಆದ್ದರಿಂದ ತಿಳಿದಿರುವುದು ಮುಖ್ಯ.
Read Full Story

02:48 PM (IST) May 29

ತುಂಬಾ ಪ್ರಾಣಿಕರಾಗಬೇಡಿ, ಸಣ್ಣ ಸುಳ್ಳು ಒಕೆ; ಚರ್ಚೆಗೆ ಗ್ರಾಸವಾದ ಸುಪ್ರೀಂ ಕೋರ್ಟ್ ಜಸ್ಟೀಸ್ ಸಲಹೆ

ಸುಪ್ರೀಂ ಕೋರ್ಟ್ ಜಸ್ಟೀಸ್ ಅರ್ಜಿ ವಿಚಾರಣೆ ವೇಳೆ ಲಾಯರ್‌ಗೆ ನೀಡಿದ ಸಲಹೆ ಇದೀಗ ಚರ್ಚೆಯಾಗುತ್ತಿದೆ. ಕೋರ್ಟ್‌ನಲ್ಲಿ ನೀವು ಇಷ್ಟು ಪ್ರಾಮಾಣಿಕರಾಗಿ ಇರಬೇಡಿ, ಸಣ್ಣ ಸಣ್ಣ ಸುಳ್ಳು ಹೇಳಬಹುದು ಎಂದಿದ್ದಾರೆ. ಅಷ್ಟಕ್ಕೂ ಲಾಯರ್‌ಗೆ ಸುಳ್ಳು ಹೇಳಿ ಎಂದಿದ್ದೇಕೆ?

Read Full Story

02:00 PM (IST) May 29

RCB vs ಪಂಜಾಬ್ ಕ್ವಾಲಿಫೈಯರ್-1 ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ? ಹವಾಮಾನ ವರದಿ ಏನು?

2025ರ ಐಪಿಎಲ್ ಕ್ವಾಲಿಫೈಯರ್ 1ರಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಆರ್‌ಸಿಬಿ ಮುಖಾಮುಖಿಯಾಗಲಿದ್ದು, ಫೈನಲ್ ಪ್ರವೇಶಕ್ಕಾಗಿ ಹೋರಾಟ ನಡೆಸಲಿವೆ. ಮುಲ್ಲಾನಪುರದಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆಯೇ ಎಂಬ ಆತಂಕ ಮನೆಮಾಡಿದೆ.  

Read Full Story

02:00 PM (IST) May 29

ಕೂಲ್ ವೆದರ್’ನಲ್ಲಿ ಬಾಯ್ ಫ್ರೆಂಡ್ ಜೊತೆ ನಟಿ ರಂಜನಿ ರಾಘವನ್ ಜಾಲಿ ಟ್ರಿಪ್

ಕನ್ನಡ ಕಿರುತೆರೆಯ ನಟಿ ರಂಜನಿ ರಾಘವನ್, ತಮ್ಮ ನಿರ್ದೇಶನಕ್ಕೆ ಕೊಂಚ ಬ್ರೇಕ್ ಕೊಟ್ಟು ತಮ್ಮ ಬಾಯ್ ಫ್ರೆಂಡ್ ಜೊತೆ ಈ ಕೂಲ್ ವೆದರ್’ನಲ್ಲಿ ಜಾಲಿ ರೈಡ್ ಮಾಡ್ತಿದ್ದಾರೆ.

Read Full Story

01:56 PM (IST) May 29

ಬಿಆರ್‌ಎಸ್‌ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡುವ ಕುತಂತ್ರ; ಕವಿತಾ ಗಂಭೀರ ಆರೋಪ

ಎಂಎಲ್‌ಸಿ ಕವಿತಾ ಅವರ ವರ್ತನೆ ತೆಲಂಗಾಣ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಬಿಆರ್‌ಎಸ್‌-ಬಿಜೆಪಿ ವಿಲೀನ ಮಾಡಲು ಕುತಂತ್ರ ನಡೆದಿವೆ ಎಂಬ ಅವರ ಹೊಸ ಹೇಳಿಕೆಗಳು ತೀವ್ರ ಸಂಚಲನ ಮೂಡಿಸಿವೆ.

Read Full Story

More Trending News