LIVE NOW
Published : Mar 28, 2026, 06:47 AM ISTUpdated : Mar 28, 2026, 10:05 AM IST

Karnataka News Live: ರಿಪ್ಪನ್‌ಪೇಟೆಯಲ್ಲಿ ಆಕಸ್ಮಿಕವಾಗಿ ಕೆರೆಗೆ ಕಾಲುಜಾರಿ ಬಿದ್ದು SSLC ವಿದ್ಯಾರ್ಥಿ ಸಾವು

ಸಾರಾಂಶ

ಶಿವಮೊಗ್ಗ: ಹಿಂದೂಗಳ ಪರವಾಗಿ ಮಾತನಾಡಿದರೆ ಕೋಮುವಾದ ಎನ್ನುತ್ತಾರೆ. ಆದರೆ, ಮುಸ್ಲಿಮರ ಪರವಾಗಿ ಮಾತನಾಡಿದರೆ ಕೋಮುವಾದವಲ್ಲವೇ? ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೂಗಳು ಒಗ್ಗಟ್ಟು ಪ್ರದರ್ಶಿಸುವುದು ಕೋಮುವಾದ ಆಗುವುದಾದರೆ ದಾವಣಗೆರೆ ಮುಸ್ಲಿಮರಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕೆಂದು ಬ್ಲಾಕ್‌ಮೇಲ್ ಮಾಡಿರುವುದು ಕೋಮುವಾದವಲ್ಲವೇ?. 

ಏ.9ರಂದು ನಡೆಯಲಿರುವ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಧರ್ಮವನ್ನು ಆಧಾರವಾಗಿ ಇಟ್ಟುಕೊಂಡು ಮತದಾರರಲ್ಲಿ ಧರ್ಮಾಂದತೆಯನ್ನು ಮೂಡಿಸಿ ಮತ ವಿಭಜನೆ ಮಾಡುತ್ತಿದೆ ಎಂದು ಆರೋಪಿಸಿದರು.

10:05 AM (IST) Mar 28

ರಿಪ್ಪನ್‌ಪೇಟೆಯಲ್ಲಿ ಆಕಸ್ಮಿಕವಾಗಿ ಕೆರೆಗೆ ಕಾಲುಜಾರಿ ಬಿದ್ದು SSLC ವಿದ್ಯಾರ್ಥಿ ಸಾವು

ರಿಪ್ಪನ್‍ಪೇಟೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಮಹಮ್ಮದ್ ತಮಿಮ್, ಹೊಸನಗರ ತಾಲೂಕಿನ ಬರುವೆ ಗ್ರಾಮದ ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಸ್ನೇಹಿತರೊಂದಿಗೆ ಈಜಲು ಹೋಗಿದ್ದಾಗ ಅಥವಾ ಕಾಲುಜಾರಿ ಬಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಮೃತಪಟ್ಟಿದ್ದ.
Read Full Story

10:00 AM (IST) Mar 28

Karnataka Bypolls - ಮುಸ್ಲಿಮರ ಪರ ಮಾತನಾಡಿದ್ರೆ ಕೋಮುವಾದವಲ್ಲವೇ? - ಕೆ.ಎಸ್.ಈಶ್ವರಪ್ಪ

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು, ಹಿಂದೂಗಳ ಪರ ಮಾತನಾಡಿದರೆ ಕೋಮುವಾದ ಎನ್ನುವುದಾದರೆ, ಮುಸ್ಲಿಮರ ಪರ ಮಾತನಾಡುವುದು ಕೋಮುವಾದವಲ್ಲವೇ ಎಂದು ಪ್ರಶ್ನಿಸಿದ್ದಾರೆ. ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಧರ್ಮದ ಆಧಾರದ ಮೇಲೆ ಮತ ವಿಭಜನೆ ಮಾಡುತ್ತಿದೆ ಎಂದು ಆರೋಪಿಸಿದರು.

Read Full Story

08:51 AM (IST) Mar 28

ಬಂಡೆದ್ದ ಪೈಲ್ವಾನ್‌ ಹಿಂದೆ ಸರಿದ್ರೂ ಕಾಂಗ್ರೆಸ್‌ಗೆ ಮತ್ತೊಂದು ತಲೆನೋವು, ಇನ್ನೂ 10 ಅಭ್ಯರ್ಥಿಗಳು ಕಣದಲ್ಲಿದ್ದೇವೆ, ನಮ್ಮ ತಂತ್ರ ಹೇಳೋಲ್ಲ ಎಂದ ಮನ್ಸೂರ್ ಅಲಿ

ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣಾ ಕಣದಿಂದ ಸಾದಿಕ್ ಪೈಲ್ವಾನರು ಹಿಂದೆ ಸರಿದರೂ, ನಾವು 10ಕ್ಕೂ ಹೆಚ್ಚು ಜನ ಇನ್ನೂ ಸ್ಪರ್ಧೆಯಲ್ಲಿದ್ದೇವೆ ಎಂದು ಮುಸ್ಲಿಂ ಮುಖಂಡ ಯು.ಎಂ. ಮನ್ಸೂರ್ ಅಲಿ ಹೇಳಿದ್ದಾರೆ. ಸಾದಿಕ್ ಅವರ ಈ ನಡೆಯಿಂದ ಸಮಾಜಕ್ಕೆ ಬೇಸರ. ಕಾಂಗ್ರೆಸ್‌ಗೆ ಮತ ಹಾಕದಿರಲು ನಿರ್ಧರಿಸಲಾಗಿದೆ .

Read Full Story

08:38 AM (IST) Mar 28

ಕಿಕ್ಕೇರಿ ಜಾತ್ರೆಯ ವಿಚಿತ್ರ ಆಚರಣೆ - ಸೊಂಟಕ್ಕೆ ಮರದ ಗುಪ್ತಾಂಗ ಕಟ್ಕೊಂಡು ಕುಣಿತ, ಹಾಡು

ಕಿಕ್ಕೇರಿ ಪಟ್ಟಣದಲ್ಲಿ ನಡೆದ ಕಿಕ್ಕೇರಮ್ಮನ ಜಾತ್ರೆಯ ಅಂಗವಾಗಿ ವಸಕೊಂತನ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಈ ಹಬ್ಬದಲ್ಲಿ ದೇವರಗುಡ್ಡಪ್ಪನು ಸೊಂಟಕ್ಕೆ ಮರದ ಗುಪ್ತಾಂಗವನ್ನು ಕಟ್ಟಿಕೊಂಡು ಕುಣಿಯುವುದು ಮತ್ತು ಹಿರಿಯರು ದೇವಿಯನ್ನು ಅಶ್ಲೀಲವಾಗಿ ಮೂದಲಿಸಿ ಹಾಡುವುದು ಪ್ರಮುಖ ಆಚರಣೆಯಾಗಿದೆ.

Read Full Story

08:33 AM (IST) Mar 28

ಮುಸ್ಲಿಂ ನಾಯಕರಿಂದಲೇ ಆಪರೇಷನ್ ಪೈಲ್ವಾನ್ ಯಶಸ್ವಿ,ಪರಮಾತ್ಮ ಬಂದ್ರೂ ಹಿಂದೆ ಸರಿಯೊಲ್ಲ ಎಂದಿದ್ದ ಸಾದಿಕ್, ಈಗ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ!

ದಾವಣಗೆರೆ ಕಾಂಗ್ರೆಸ್‌ನಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಬಂಡಾಯವನ್ನು ಅಂತಿಮವಾಗಿ ಶಮನಗೊಳಿಸಲಾಗಿದೆ. ಸರ್ಕಾರದ ಮುಖ್ಯಸಚೇತಕ ಸಲೀಂ ಅಹಮದ್ ಹಾಗೂ ಶಾಸಕ ರಿಜ್ವಾನ್‌ ಅರ್ಷದ್ ಅವರು ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ, ಬಂಡಾಯ ಅಭ್ಯರ್ಥಿ ಸಾದಿಕ್‌ ಪೈಲ್ವಾನ್‌ ಅವರನ್ನು ಮನವೊಲಿಸುವಲ್ಲಿ ಯಶಸ್ವಿ.

Read Full Story

08:22 AM (IST) Mar 28

ನಿಧಿ ಆಸೆಗಾಗಿ ಚಾಲುಕ್ಯರ ಕಾಲದ ದೇಗುಲ ಧ್ವಂಸ; ಗಂಗಾವತಿಯಲ್ಲಿ ಕೃಷ್ಣದೇವರಾಯನ ಕಾಲದ ಶಾಸನ ಪತ್ತೆ

ಕಲಬುರಗಿಯಲ್ಲಿ ನಿಧಿಯ ಆಸೆಗಾಗಿ ದುಷ್ಕರ್ಮಿಗಳು ಚಾಲುಕ್ಯರ ಕಾಲದ ಪುರಾತನ ದೇಗುಲವನ್ನು ಧ್ವಂಸಗೊಳಿಸಿದ್ದಾರೆ. ಮತ್ತೊಂದೆಡೆ, ಗಂಗಾವತಿಯಲ್ಲಿ ಚಾರಣಿಗರ ತಂಡವು ವಿಜಯನಗರ ಸಾಮ್ರಾಟ ಕೃಷ್ಣದೇವರಾಯನ ಕಾಲದ, ಭೂದಾನದ ಮಾಹಿತಿ ನೀಡುವ ಅಪರೂಪದ ಶಿಲಾಶಾಸನವನ್ನು ಪತ್ತೆ ಮಾಡಿದೆ.
Read Full Story

08:16 AM (IST) Mar 28

ಕೇಂದ್ರದ ಪೆಟ್ರೋಲ್, ಡೀಸೆಲ್ ಸುಂಕ ಕಡಿತ ಕೇವಲ ಚುನಾವಣಾ ಗಿಮಿಕ್, ಇದರಿಂದ ಜನರಿಗಲ್ಲ, ತೈಲ ಕಂಪನಿಗಳಿಗೆ ಲಾಭ - ಕಾಂಗ್ರೆಸ್

ಕೇಂದ್ರ ಸರ್ಕಾರದ ಇಂಧನ ಸುಂಕ ಕಡಿತವು ಚುನಾವಣಾ ಗಿಮಿಕ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಈ ವಿನಾಯಿತಿಯಿಂದ ಖಾಸಗಿ ತೈಲ ಕಂಪನಿಗಳಿಗೆ ವಾರ್ಷಿಕ ₹3,60,000 ಕೋಟಿ ಲಾಭವಾಗಲಿದ್ದು, ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲ ಎಂದರು.

Read Full Story

08:00 AM (IST) Mar 28

ಮಂಗಳೂರಿಂದ IRCTC ವಿಶೇಷ ಟೂರ್ ಪ್ಯಾಕೇಜ್ - ದ್ವಾರಕಾ, ಸೋಮನಾಥಕ್ಕೆ ರೈಲು, ಶಿರಡಿಗೆ ವಿಮಾನ, ಯಾತ್ರೆ, ಟಿಕೆಟ್ ಬುಕಿಂಗ್ ವಿವರ ಇಲ್ಲಿದೆ

ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು (IRCTC) ಮಂಗಳೂರಿನಿಂದ ಎರಡು ವಿಶೇಷ ಯಾತ್ರಾ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಮೇ 10 ರಿಂದ 'ದಿವ್ಯ ದ್ವಾರಕಾ ಸೋಮನಾಥ ಯಾತ್ರೆ' ಎಂಬ ವಿಶೇಷ ರೈಲು ಹಾಗೂ ಏಪ್ರಿಲ್ 22 ರಿಂದ ಶಿರಡಿಗೆ ವಿಶೇಷ ವಿಮಾನ ಪ್ಯಾಕೇಜ್ ಲಭ್ಯವಿದೆ. 

Read Full Story

07:41 AM (IST) Mar 28

ರಾಜ್ಯ ಸರ್ಕಾರಿ ನೌಕರರ ಪಿಂಚಣಿ ನಿಯಮಗಳಲ್ಲಿ ಹೊಸ ಬದಲಾವಣೆ - ಸರ್ಕಾರದಿಂದ ಹೊಸ ನಡೆ

ರಾಜ್ಯದ ಎನ್‌ಪಿಎಸ್‌ ನೌಕರರ ಪಿಂಚಣಿ ಸಮಸ್ಯೆಗಳ ಕುರಿತು ಪರಿಶೀಲಿಸಲು ರಚಿಸಲಾದ ಸಮಿತಿಗೆ ಅಂತಿಮ ವರದಿ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ಬೇಕಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ಆಂಧ್ರಪ್ರದೇಶ, ಹಿಮಾಚಲ ಪ್ರದೇಶದ ಮಾದರಿಗಳನ್ನು ಅಧ್ಯಯನ ಮಾಡಲಾಗುತ್ತಿದ್ದು, ಸಮಗ್ರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.
Read Full Story

07:32 AM (IST) Mar 28

ಕೊಪ್ಪಳ - ಅಧಿಕಾರಿಗಳ ಕಾರ್ಯಾಚರಣೆ, ಎರಡು ದಿನಗಳಲ್ಲಿ ತಪ್ಪಿದ ಐದು ಬಾಲ್ಯವಿವಾಹ!

ಕೊಪ್ಪಳ ಜಿಲ್ಲೆಯಲ್ಲಿ, ಮಕ್ಕಳ ಸಹಾಯವಾಣಿ 1098ಕ್ಕೆ ಬಂದ ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಈ ಮೂಲಕ ಯಲಬುರ್ಗಾ ಮತ್ತು ಕಾರಟಗಿ ತಾಲೂಕುಗಳಲ್ಲಿ ನಡೆಯಲಿದ್ದ ಐದು ಬಾಲ್ಯ ವಿವಾಹಗಳನ್ನು ಕೇವಲ ಎರಡು ದಿನಗಳ ಅಂತರದಲ್ಲಿ ಯಶಸ್ವಿಯಾಗಿ ತಡೆಯಲಾಗಿದೆ.
Read Full Story

07:19 AM (IST) Mar 28

ಜನರ ಜೀವ ಮುಖ್ಯವೋ? ಐಪಿಎಲ್‌ ಟಿಕೆಟ್‌ ಮುಖ್ಯವೋ? ಉಚಿತ ವಿಐಪಿ ಟಿಕೆಟ್‌ ಕೇಳಿದ ಶಾಸಕರಿಗೆ ಮಾತಲ್ಲೇ ಬೆಂಡೆತ್ತಿದ ನಿಖಿಲ್

ಶಾಸಕರು ಐಪಿಎಲ್‌ ಉಚಿತ ವಿಐಪಿ ಟಿಕೆಟ್‌ಗಾಗಿ ಹಠ ಹಿಡಿದಿರುವುದನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ. ಜನರ ಜೀವಕ್ಕಿಂತ ವೈಯಕ್ತಿಕ ಸೌಲಭ್ಯಗಳಿಗೆ ಆದ್ಯತೆ ನೀಡುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Read Full Story

07:18 AM (IST) Mar 28

ಬಳ್ಳಾರಿ - ಮೂರು ತಿಂಗಳಲ್ಲಿ 4300 ಮಂದಿಗೆ ಬೀದಿ ನಾಯಿ ಕಡಿತ! ಚಿಕಿತ್ಸೆ ಫಲಿಸದೇ ಇಬ್ಬರ ಸಾವು

ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು, ಕಳೆದ ಮೂರು ತಿಂಗಳಲ್ಲಿ 4000ಕ್ಕೂ ಹೆಚ್ಚು ಜನರಿಗೆ ಕಚ್ಚಿ, ಚಿಕಿತ್ಸೆ ಫಲಿಸದೆ ಇಬ್ಬರು ಸಾವನ್ನಪ್ಪಿದ್ದಾರೆ. ಜಿಲ್ಲಾಡಳಿತವು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರೂ, ಶೆಲ್ಟರ್‌ ನಿರ್ಮಾಣಕ್ಕೆ ಜಾಗದ ಕೊರತೆಯಿಂದಾಗಿ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.
Read Full Story

07:02 AM (IST) Mar 28

ತಡವಾಗಿ ಬಂದ ವಿದ್ಯಾರ್ಥಿಗಳಿಗೆ ಬಸ್ಕಿ ಶಿಕ್ಷೆ ಕೊಟ್ಟ ಆರೋಪ - ಪ್ರಾಂಶುಪಾಲೆ ಮೇಲಿನ ಕೇಸ್‌ಗೆ ಹೈಕೋರ್ಟ್ ತಡೆ

Bangalore school student punishment case ಶಾಲೆಗೆ ತಡವಾಗಿ ಬಂದ ವಿದ್ಯಾರ್ಥಿಗಳಿಗೆ ಬಸ್ಕಿ ಹೊಡೆಸಿದ ಆರೋಪದ ಮೇಲೆ ಬೆಂಗಳೂರಿನ ಟೆಕ್ನೋ ಶಾಲೆಯ ಪ್ರಾಂಶುಪಾಲೆ ಮತ್ತು ಮೂವರು ಶಿಕ್ಷಕರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿದೆ. ಏನಿದು ಪ್ರಕರಣ? ಪೂರ್ಣ ವರದಿ ಇಲ್ಲಿದೆ.

Read Full Story

More Trending News