Published : Mar 28, 2026, 06:47 AM ISTUpdated : Mar 28, 2026, 11:04 PM IST

Karnataka News Live: ದೇಶದಲ್ಲಿ ಮೊದಲ ಬಾರಿಗೆ ಮಕ್ಕಳಿಗಾಗಿ 450 ಹಾಸಿಗೆಯ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ - ಸಚಿವ ಶರಣಪ್ರಕಾಶ್‌ ಪಾಟೀಲ್‌

ಸಾರಾಂಶ

ಶಿವಮೊಗ್ಗ: ಹಿಂದೂಗಳ ಪರವಾಗಿ ಮಾತನಾಡಿದರೆ ಕೋಮುವಾದ ಎನ್ನುತ್ತಾರೆ. ಆದರೆ, ಮುಸ್ಲಿಮರ ಪರವಾಗಿ ಮಾತನಾಡಿದರೆ ಕೋಮುವಾದವಲ್ಲವೇ? ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೂಗಳು ಒಗ್ಗಟ್ಟು ಪ್ರದರ್ಶಿಸುವುದು ಕೋಮುವಾದ ಆಗುವುದಾದರೆ ದಾವಣಗೆರೆ ಮುಸ್ಲಿಮರಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕೆಂದು ಬ್ಲಾಕ್‌ಮೇಲ್ ಮಾಡಿರುವುದು ಕೋಮುವಾದವಲ್ಲವೇ?. 

ಏ.9ರಂದು ನಡೆಯಲಿರುವ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಧರ್ಮವನ್ನು ಆಧಾರವಾಗಿ ಇಟ್ಟುಕೊಂಡು ಮತದಾರರಲ್ಲಿ ಧರ್ಮಾಂದತೆಯನ್ನು ಮೂಡಿಸಿ ಮತ ವಿಭಜನೆ ಮಾಡುತ್ತಿದೆ ಎಂದು ಆರೋಪಿಸಿದರು.

11:04 PM (IST) Mar 28

ದೇಶದಲ್ಲಿ ಮೊದಲ ಬಾರಿಗೆ ಮಕ್ಕಳಿಗಾಗಿ 450 ಹಾಸಿಗೆಯ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ - ಸಚಿವ ಶರಣಪ್ರಕಾಶ್‌ ಪಾಟೀಲ್‌

ಮಕ್ಕಳಿಗಾಗಿ 450 ಹಾಸಿಗೆಯುಳ್ಳ ಬೃಹತ್‌, ಅತ್ಯಾಧುನಿಕ ಹಾಗೂ ಸುಸಜ್ಜಿತ ಆಸ್ಪತ್ರೆಯನ್ನು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ನಿರ್ಮಾಣ ಮಾಡಿದೆ ಎಂದು ಸಚಿವ ಡಾ.ಶರಣಪ್ರಕಾಶ್ ಆರ್. ಪಾಟೀಲ್ ತಿಳಿಸಿದ್ದಾರೆ.

Read Full Story

08:46 PM (IST) Mar 28

ಸೇತುವೆಯಡಿ ಪತ್ತೆಯಾಯ್ತು ಸುಟ್ಟ ಶವ - ಗದಗದಲ್ಲಿ ಯುವಕನ ನಿಗೂಢ ಸಾವು, ಹಂತಕರ ಪತ್ತೆಗೆ ಪೊಲೀಸರ ಬಲೆ

ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ಚಂದ್ರು ಕುರಿ ಎಂಬ ಯುವಕ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ. ಇದೀಗ ಹೊಂಬಳ ಗ್ರಾಮದ ಬಳಿ ಸುಟ್ಟ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಇದು ಕೊಲೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. 

Read Full Story

08:23 PM (IST) Mar 28

ನವಜಾತ ಶಿಶುವನ್ನು ಕಸದ ತೊಟ್ಟಿಯಲ್ಲಿ ಎಸೆದ ಪಾಪಿ ತಾಯಿ, ಮಗುವನ್ನು ಕಿತ್ತು ತಿಂದ ನಾಯಿ!

ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ, ಹೆತ್ತ ತಾಯಿಯೊಬ್ಬಳು ತನ್ನ ಒಂದು ದಿನದ ನವಜಾತ ಶಿಶುವನ್ನು ಕಸದ ತೊಟ್ಟಿಗೆ ಎಸೆದಿದ್ದಾಳೆ. ನಾಯಿಗಳು ಮಗುವನ್ನು ಎಳೆದಾಡಿ ಕೊಂದಿದ್ದು, ಈ ಅಮಾನುಷ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

07:33 PM (IST) Mar 28

Ustaad Bhagat Singh - ಧುರಂಧರ್ ಜೊತೆ ಸ್ಪರ್ಧಿಸಲಾಗದೇ ಒಟಿಟಿ ಕಡೆ ಓಡಿದ ಪವನ್ ಕಲ್ಯಾಣ್ ಉಸ್ತಾದ್ ಭಗತ್ ಸಿಂಗ್, ಸ್ಟ್ರೀಮಿಂಗ್ ಎಲ್ಲಿ?

ಚಿತ್ರಮಂದಿರಗಳಲ್ಲಿ ಸಾಧಾರಣ ಕಲೆಕ್ಷನ್ ಮಾಡಿದರೂ, ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಪವರ್ ಸ್ಟಾರ್ ಸಿನಿಮಾ ಯಾವ ರೀತಿಯ ದಾಖಲೆ ಬರೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಾರೆಯಾಗಿ, ಈ ಬೇಸಿಗೆಯಲ್ಲಿ ಪವನ್ ಕಲ್ಯಾಣ್ ಒಟಿಟಿ ಮೂಲಕ ಮತ್ತೊಮ್ಮೆ ಧೂಳೆಬ್ಬಿಸುವುದು ಗ್ಯಾರಂಟಿನಾ? ಕಾದು ನೋಡಬೇಕಿದೆ

Read Full Story

07:20 PM (IST) Mar 28

Egg Curry - ಒಂದೇ ತರ ಮೊಟ್ಟೆ ಸಾರು ತಿಂದು ಬೇಜಾರಾ? ಇಲ್ಲಿದೆ 3 ಹೊಸ ಸ್ಟೈಲ್ ರೆಸಿಪಿ!

ಯಾವಾಗ್ಲೂ ಒಂದೇ ತರ ಮೊಟ್ಟೆ ಸಾರು ತಿಂದು ಬೇಜಾರಾಗಿದ್ರೆ, ನಿಮಗಾಗಿ ಇಲ್ಲಿದೆ 3 ಹೊಸ ಬಗೆಯ ಎಗ್ ಕರಿ ರೆಸಿಪಿಗಳು. ಈ ಮೂರೂ ರೆಸಿಪಿಗಳ ರುಚಿ ಒಂದಕ್ಕಿಂತ ಒಂದು ಭಿನ್ನವಾಗಿದ್ದು, ನಿಮ್ಮ ಊಟಕ್ಕೆ ಹೊಸ ಟೇಸ್ಟ್ ಕೊಡುತ್ತೆ.

Read Full Story

06:35 PM (IST) Mar 28

₹499ಕ್ಕೆ ಡಯಾಲಿಸಿಸ್ - ಚಾಮರಾಜನಗರ ರೋಟರಿ ಸೇವೆ ಬಡವರಿಗೆ ವರದಾನ, ಜನರಿಂದ ಪ್ರಶಂಸೆ

ಅಲ್ಲಿನ ಬಡ ಕಿಡ್ನಿ ರೋಗಿಗಳು ಡಯಾಲಿಸಿಸ್ಗಾಗಿ ದುಬಾರಿ ವೆಚ್ಚ ಮಾಡಬೇಕಿತ್ತು. ಜಿಲ್ಲಾಸ್ಪತ್ರೆಯಲ್ಲಿರುವ ಡಯಾಲಿಸಿಸ್ ಯಂತ್ರಗಳು ಸಾಕಾಗದೆ ಮೈಸೂರು ಬೆಂಗಳೂರಿನಂತಹ ನಗರಗಳಿಗೆ ಹೋಗಬೇಕಿತ್ತು.

Read Full Story

05:03 PM (IST) Mar 28

Dhurandhar 2 - ಪತ್ನಿ ದೀಪಿಕಾ ಪಡುಕೋಣೆಗಾಗಿ ಸೇಡು ತೀರಿಸಿಕೊಂಡ ರಣವೀರ್? ವೈರಲ್ ಆಯ್ತು ಆ ಫೈರ್ ಸೀನ್!

ಬಾಕ್ಸಾಫೀಸ್‌ನಲ್ಲಿ 'ಧುರಂಧರ್ 2' (Dhurandhar 2) ಚಿತ್ರದ ಅಬ್ಬರ ಮುಂದುವರೆದಿದೆ. ರಣವೀರ್ ಸಿಂಗ್, ಅರ್ಜುನ್ ರಾಂಪಾಲ್ ಮತ್ತು ಸಂಜಯ್ ದತ್ ಅವರಂತಹ ಸ್ಟಾರ್ ನಟರಿರುವ ಈ ಚಿತ್ರಕ್ಕೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Read Full Story

04:54 PM (IST) Mar 28

ಮಾಂಗಲ್ಯದ ಜೊತೆ ಪ್ರಾಣವೂ ಹೋದೀತು ಎಚ್ಚರ - ಬೆಂಗಳೂರಿನ ಭಯಾನಕ ಘಟನೆ ವಿಡಿಯೋ ವೈರಲ್​

ಇತ್ತೀಚೆಗೆ ಮಹಿಳೆಯರ ಮಾಂಗಲ್ಯಸರವನ್ನೇ ಗುರಿಯಾಗಿಸಿ ಸರಗಳ್ಳತನ ಹೆಚ್ಚಾಗುತ್ತಿದ್ದು, ಬೆಂಗಳೂರಿನ ಮಾಗಡಿ ಬಳಿ ಗ್ರಾಹಕರಂತೆ ನಟಿಸಿದ ಕಳ್ಳರು ಮಹಿಳೆಯ ಸರ ಕಿತ್ತು ಪರಾರಿಯಾಗಿದ್ದಾರೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಹಿಳೆಯರ ಸುರಕ್ಷತೆಗಾಗಿ ಪೊಲೀಸರು ಸರವನ್ನು ಪ್ರದರ್ಶಿಸದೆ, ದುಪ್ಪಟ್ಟಾ ಅಥವಾ ಸೀರೆಯ ಸೆರಗಿನಿಂದ ಮುಚ್ಚಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
Read Full Story

04:48 PM (IST) Mar 28

ಆರೆಂಜ್ ಕ್ಯಾಪ್ ರೇಸ್ - ವಿರಾಟ್ ಕೊಹ್ಲಿಗೆ ಕಠಿಣ ಪೈಪೋಟಿ ನೀಡಲು ರೆಡಿಯಾಗಿದ್ದಾರೆ ಈ ಯುವ ಕ್ರಿಕೆಟರ್ಸ್!

2026ರ ಐಪಿಎಲ್ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ವಿರಾಟ್ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಫಾಫ್ ಡು ಪ್ಲೆಸಿಸ್ ಅಭಿಪ್ರಾಯಪಟ್ಟಿದ್ದಾರೆ. ಕೊಹ್ಲಿಯ ಜೊತೆಗೆ, ಕೆಎಲ್ ರಾಹುಲ್, ಶುಭ್‌ಮನ್ ಗಿಲ್, ಸಾಯಿ ಸುದರ್ಶನ್, ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಸ್ಥಿರ ಪ್ರದರ್ಶನ ನೀಡುವ ಆಟಗಾರರು ಕೂಡ ಈ ಪ್ರಶಸ್ತಿಯ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
Read Full Story

04:47 PM (IST) Mar 28

ಸೂರತ್-ಮಂಗಳೂರು ರೈಲು ಕಾಯುವಿಕೆಗೆ ಬಿತ್ತು ತೆರೆ, ಕಾಯಂ ರೈಲು ಆಗಿ ಪರಿವರ್ತನೆ

ವಾರದಲ್ಲಿ ಎರಡು ದಿನ ಸಂಚರಿಸುತ್ತಿದ್ದ ಸೂರತ್–ಮಂಗಳೂರು ಜಂಕ್ಷನ್ ವಿಶೇಷ ರೈಲನ್ನು ಭಾರತೀಯ ರೈಲ್ವೆ ಇಲಾಖೆ ಇದೀಗ ಶಾಶ್ವತ ರೈಲಾಗಿ ಪರಿವರ್ತಿಸಿದೆ. ಈ ನಿರ್ಧಾರದಿಂದ ಕರಾವಳಿ ಕರ್ನಾಟಕದ ಪ್ರಯಾಣಿಕರಿಗೆ ಮುಂಬೈ ಮೂಲಕ ಸೂರತ್‌ಗೆ ನಿಯಮಿತ ಹಾಗೂ ವಿಶ್ವಾಸಾರ್ಹ ಸಂಪರ್ಕ ಲಭ್ಯವಾಗಲಿದೆ.
Read Full Story

04:39 PM (IST) Mar 28

ರೈಲ್ವೆಯಿಂದ 'ಭಾರತ್ ಗೌರವ್' ಯೋಜನೆಯಡಿ, ಏ. 25 ರಿಂದ 14 ದಿನಗಳ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ, ಎಲ್ಲಿಗೆ ಪ್ರವಾಸ

ಭಾರತೀಯ ರೈಲ್ವೆಯ 'ಭಾರತ್ ಗೌರವ್' ಯೋಜನೆಯಡಿ, ಏಪ್ರಿಲ್ 25 ರಿಂದ ಈಶಾನ್ಯ ಭಾರತಕ್ಕೆ 14 ದಿನಗಳ ವಿಶೇಷ ಪ್ರವಾಸಿ ರೈಲು ಸಂಚರಿಸಲಿದೆ. ಈ ರೈಲು ಗ್ಯಾಂಗ್ಟಾಕ್-ಡಾರ್ಜಿಲಿಂಗ್, ಈಶಾನ್ಯದ ಪ್ರಮುಖ ತಾಣಗಳು ಮತ್ತು ಭೂತಾನ್ ಸೇರಿದಂತೆ ಮೂರು ವಿಭಿನ್ನ ಪ್ರವಾಸ ಪ್ಯಾಕೇಜ್‌ಗಳನ್ನು ನೀಡುತ್ತದೆ.
Read Full Story

04:29 PM (IST) Mar 28

18ನೇ ವರ್ಷಕ್ಕೆ ಕಾಲಿಟ್ಟ ಗೋಲ್ಡನ್​ ಸ್ಟಾರ್​ ಪುತ್ರಿ ಚಾರಿತ್ರ್ಯ - ಬರ್ತ್​ಡೇ ಕ್ಯೂಟ್​ ಫೋಟೋಸ್​ ಇಲ್ಲಿವೆ

ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಪುತ್ರಿ ಚಾರಿತ್ರ್ಯಳ 17ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಈಗಾಗಲೇ 'ಚಮಕ್' ಚಿತ್ರದಲ್ಲಿ ಬಣ್ಣ ಹಚ್ಚಿರುವ ಚಾರಿತ್ರ್ಯ ಹಾಗೂ 'ಸಕತ್' ಚಿತ್ರದಲ್ಲಿ ಕಾಣಿಸಿಕೊಂಡಿರುವ ಪುತ್ರ ವಿಹಾನ್ ಇಬ್ಬರೂ ನಟನೆಯಲ್ಲಿ ಆಸಕ್ತಿ ಹೊಂದಿದ್ದಾರೆ.
Read Full Story

04:24 PM (IST) Mar 28

ವಾಯುವ್ಯ ಸಾರಿಗೆ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಅನಿರೀಕ್ಷಿತ ತಿರುವು, KEA ಮಹತ್ವದ ಘೋಷಣೆ

ವಿಧಾನಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ, ಏಪ್ರಿಲ್ 9ರಂದು ನಡೆಯಬೇಕಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ನೇಮಕಾತಿ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಏಪ್ರಿಲ್ 10ಕ್ಕೆ ಮುಂದೂಡಿದೆ. ಒಟ್ಟು 33 ಹುದ್ದೆಗಳಿಗೆ ನಡೆಯುವ ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪರಿಷ್ಕೃತ ದಿನಾಂಕದಂದು ಪರೀಕ್ಷೆಗೆ ಹಾಜರಾಗಬೇಕೆಂದು ಪ್ರಾಧಿಕಾರ ಸೂಚಿಸಿದೆ.
Read Full Story

04:23 PM (IST) Mar 28

ಲವ್‌ ಮಾಕ್‌ಟೇಲ್‌ 3 ಕೃತಿಚೌರ್ಯ ವಿವಾದ ಸುಖಾಂತ್ಯ - ಒಂದಾದ ಡಾರ್ಲಿಂಗ್‌ ಕೃಷ್ಣ-ಗುರು ದೇಶಪಾಂಡೆ!

ಈ ಕಥೆಯ ತಿರುಳನ್ನು ಒಂದೇ ಮೂಲದಿಂದ ಇಬ್ಬರೂ ಸ್ಫೂರ್ತಿ ಪಡೆದಿದ್ದಾರೆ. ಹೀಗಾಗಿ ಡಾರ್ಲಿಂಗ್‌ ಕೃಷ್ಣ ಅವರ ‘ಲವ್‌ ಮಾಕ್‌ಟೇಲ್‌ 3’ ಚಿತ್ರಕಥೆಯೇ ಬೇರೆ ಹಾಗೂ ಗುರು ದೇಶಪಾಂಡೆ ಬಳಿಯಿರುವ ಚಿತ್ರಕಥೆಯೇ ಬೇರೆ.

Read Full Story

03:40 PM (IST) Mar 28

ದಾವಣಗೆರೆ - 1 ಕೋಟಿಗೆ ಜಮೀನು ಮಾರಿದ್ದ ವರ್ತಕನ ವಾಹನ ಅಡ್ಡಗಟ್ಟಿ ₹38 ಲಕ್ಷ ದರೋಡೆ! ಹಣದ ಚೀಲವೆಂದು ಬಟ್ಟೆಗಂಟು ಹೊತ್ತೊಯ್ದರು!

ಹೊನ್ನಾಳಿ ಬಳಿ ಜಮೀನು ಮಾರಾಟದ ಹಣದೊಂದಿಗೆ ಸಾಗುತ್ತಿದ್ದ ವರ್ತಕನ ಓಮಿನಿ ವಾಹನವನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಹಲ್ಲೆ ನಡೆಸಿ ₹38 ಲಕ್ಷ ದರೋಡೆಮಾಡಿದ್ದಾರೆ. ಘಟನೆಯ ಕುರಿತು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Read Full Story

03:12 PM (IST) Mar 28

ಮೊನಾಲಿಸಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಗುಡುಗಿದ ಸನೋಜ್ ಮಿಶ್ರಾ; ರುದ್ರಾಕ್ಷಿ ಹುಡುಗಿ ಕಥೆ ಏನಾಗ್ತಿದೆ?

ನಾನು ಅವಳಿಗೆ ನಟನೆಯನ್ನು ಕಲಿಸಿದವನು. ಅವಳು ನಟನೆಯ ಮೂಲಕವೇ ನನ್ನನ್ನು ಬಲೆಗೆ ಬೀಳಿಸುತ್ತಿದ್ದಾಳೆ. ಅವಳು ನನ್ನನ್ನು ಇಷ್ಟು ದೊಡ್ಡ ವಿವಾದದಲ್ಲಿ ಸಿಲುಕಿಸುತ್ತಿರೋದು ಏಕೆಂದರೆ ಅವಳ ಕುಟುಂಬವು ಇಂದಿಗೂ ಉಜ್ಜಯಿನಿಯಲ್ಲಿರುವ ನನ್ನ ಮನೆಯಲ್ಲಿ ವಾಸಿಸುತ್ತಿದೆ." ಎಂದು ಸನೋಜ್ ಮಿಶ್ರಾ ಹೇಳಿದ್ದಾರೆ.

Read Full Story

03:05 PM (IST) Mar 28

ಗೋವಿಂದಾ...ಗೋವಿಂದ....ಭದ್ರಾಮೇಲ್ದಂಡೆಗೆ ಎಳ್ಳು ನೀರು ಬಿಟ್ಟ ಸಿದ್ದರಾಮಯ್ಯ ಸರ್ಕಾರ, ಇಚ್ಚಾಶಕ್ತಿ ಕಳೆದುಕೊಂಡ ಜನ ಪ್ರತಿನಿಧಿಗಳು

ವರದಿ: ಚಿಕ್ಕಪ್ಪನಹಳ್ಳಿ ಷಣ್ಮುಖ

ಸಿದ್ದರಾಮಯ್ಯ ಸರ್ಕಾರವು ಭದ್ರಾ ಮೇಲ್ದಂಡೆ ಯೋಜನೆಗೆ ಕೇವಲ 150 ಕೋಟಿ ರೂ. ಅನುದಾನ ನೀಡಿ ನಿರ್ಲಕ್ಷ್ಯ ತೋರಿದೆ. ಸಾವಿರಾರು ಕೋಟಿ ಬಿಲ್ ಬಾಕಿ ಉಳಿದಿದ್ದು, ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿದ್ದಾರೆ. ಇದರಿಂದಾಗಿ, ಬಯಲು ಸೀಮೆಗೆ ನೀರು ಹರಿಸುವ ಮಹತ್ವಾಕಾಂಕ್ಷಿ  

Read Full Story

02:38 PM (IST) Mar 28

Raichur - ಜ್ವರಕ್ಕೆ ಇಂಜೆಕ್ಷನ್; ನಕಲಿ ವೈದ್ಯನ ಎಡವಟ್ಟಿಗೆ 9ನೇ ತರಗತಿ ಬಾಲಕಿ ಸಾವು!

ರಾಯಚೂರು ಜಿಲ್ಲೆಯಲ್ಲಿ ಜ್ವರಕ್ಕೆ ಚಿಕಿತ್ಸೆ ಪಡೆದ 13 ವರ್ಷದ ಬಾಲಕಿ ಸಿಂಧೂ ಇಂಜೆಕ್ಷನ್ ಪಡೆದ ನಂತರ ಮೃತಪಟ್ಟಿದ್ದಾಳೆ. ನಕಲಿ ವೈದ್ಯ ಉತ್ತಮ ಕುಮಾರ್ ಸರ್ಕಾರ್ ನೀಡಿದ ಚಿಕಿತ್ಸೆಯೇ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
Read Full Story

01:41 PM (IST) Mar 28

ಬೆಂಗಳೂರು - ತರಗತಿಯಲ್ಲಿ ಪಾಠ ಮಾಡುತ್ತಿದ್ದ ವೇಳೆ ವಿದ್ಯಾರ್ಥಿಗೆ ಉಗ್ರನ ಪಟ್ಟ ಕಟ್ಟಿ ಅವಮಾನಿಸಿದ ಪ್ರೊಫೆಸರ್!

ಬೆಂಗಳೂರಿನ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ, ಪ್ರೊಫೆಸರ್ ಡಾ. ಮುರಳಿಧರ ದೇಶಪಾಂಡೆ ಅವರು ಮುಸ್ಲಿಂ ವಿದ್ಯಾರ್ಥಿಯೊಬ್ಬನನ್ನು 'ಭಯೋತ್ಪಾದಕ' ಎಂದು ಕರೆದು ಅವಮಾನಿಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆದ ನಂತರ, ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಆರೋಪಿ ಪ್ರೊಫೆಸರ್‌ನನ್ನು ಸೇವೆಯಿಂದ ವಜಾಗೊಳಿಸಿದೆ.
Read Full Story

01:32 PM (IST) Mar 28

Viral - ಪರೀಕ್ಷಾ ಕೊಠಡಿಯಲ್ಲೂ 'ಧುರಂಧರ್' ಹವಾ.. ವೈರಲ್ ಆಯ್ತು ಪ್ರಶ್ನೆ ಪತ್ರಿಕೆಯಲ್ಲಿ ಈ ಸಿನಿಮಾ ಮಾಡಿರೋ ಕಮಾಲ್!

ಧುರಂಧರ್' ಸಿನಿಮಾ ಕೇವಲ ಮನರಂಜನೆಯಾಗಿ ಉಳಿಯದೆ ಜನರ ದೈನಂದಿನ ಜೀವನದ ಭಾಗವಾಗುತ್ತಿದೆ ಎನ್ನುವುದಕ್ಕೆ ಈ ವೈರಲ್ ಪ್ರಶ್ನೆ ಪತ್ರಿಕೆಯೇ ಸಾಕ್ಷಿ. ವಿದ್ಯಾರ್ಥಿಗಳಂತೂ ಇಂತಹ 'ಸಿನಿಮ್ಯಾಟಿಕ್' ಪರೀಕ್ಷೆಯನ್ನು ಬರೆಯಲು ಖಂಡಿತವಾಗಿಯೂ ಖುಷಿ ಪಟ್ಟಿರುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ!

Read Full Story

01:23 PM (IST) Mar 28

Bagalkote Bypolls - ನೆತ್ತಿ ಸುಡುವ ಬಿಸಿಲಿನ ಮಧ್ಯೆ ಕಾವೇರಿದ ಉಪಕದನ - ಕಾಂಗ್ರೆಸ್‌ನ ಮೇಟಿ, ಬಿಜೆಪಿಯ ಚರಂತಿಮಠ ಪರ ನಾಯಕರ ಭರ್ಜರಿ ಮತಬೇಟೆ

ಬಾಗಲಕೋಟೆ ಉಪಚುನಾವಣೆ ಪ್ರಚಾರವು ಚುರುಕುಗೊಂಡಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ತಮ್ಮ ಅಭ್ಯರ್ಥಿಗಳ ಪರವಾಗಿ ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟು ಮತಯಾಚಿಸಿದರೆ, ಬಿಜೆಪಿ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿ ಮತದಾರರ ಮನವೊಲಿಸುತ್ತಿದೆ.
Read Full Story

01:13 PM (IST) Mar 28

ಈ ಸೀಕ್ರೆಟ್ ಗೊತ್ತಾ? 30 ವರ್ಷಕ್ಕೆ 'ಎಚ್ಚರಿಕೆ ಗಂಟೆ' ಬಾರಿಸಿದೆ.. ತಕ್ಷಣ ಈ ನಟ ಮಾಡಿದ್ದೇನು ನೋಡಿ!

ತರುಣ್ ಭಾಸ್ಕರ್ ನಿರ್ದೇಶನದ 'ಈ ನಗರಾನಿಕಿ ಏಮೈಂದಿ' (ENE) ಚಿತ್ರದ ಮೂಲಕ ದೊಡ್ಡ ಬ್ರೇಕ್ ಪಡೆದ ಈ ನಟ, ಈಗ ತಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿಜೀವನ ಎರಡರಲ್ಲೂ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಎಂಥಾ ಸೀಕ್ರೆಟ್ ರಿವೀಲ್ ಮಾಡಿದ್ದಾರೆ ನೋಡಿ.. 

Read Full Story

01:11 PM (IST) Mar 28

ಮೂರು ಮಕ್ಕಳನ್ನು ಹೆತ್ತವರಿಗೆ ಸನ್ಮಾನ - ರಾಘವೇಶ್ವರ ಶ್ರೀ

ಸಂತಾನವೇ ಸಂಪತ್ತಾಗಿದ್ದು, ಮಕ್ಕಳು ಬೇಡ ಎಂಬ ಆಧುನಿಕ ಚಿಂತನೆ ದೇಶದ ವಿನಾಶಕ್ಕೆ ಕಾರಣವಾಗಬಹುದಾಗಿದೆ. ಮಿತ ಸಂತಾನದಿಂದ ಸಮಾಜವೇ ಕ್ಷಯವಾಗುವ ಆಪತ್ತು ಎದುರಾಗಿದ್ದು, ಸಮಾಜ ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಹೇಳಿದರು.

Read Full Story

01:01 PM (IST) Mar 28

Bagalkote Bypolls - ಮೇಟಿ ಸಾಹೇಬರ ಜನಪರ ಕಾರ್ಯ ನೋಡಿ ಮತ ಕೊಡಿ - ಉಮೇಶ್ ಮೇಟಿ ಪರ ಭರ್ಜರಿ ಪ್ರಚಾರ

ಬಾಗಲಕೋಟೆಯ ವಿವಿಧೆಡೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಪರವಾಗಿ ಭರ್ಜರಿ ಪ್ರಚಾರ ನಡೆಸಲಾಯಿತು. ಮಾಜಿ ಸಚಿವ ಅಜಯಕುಮಾರ್ ಸರನಾಯಕ ಹಾಗೂ ಸಚಿವ ಆರ್.ಬಿ. ತಿಮ್ಮಾಪೂರ ಸರ್ಕಾರದ ಗ್ಯಾರಂಟಿ ಯೋಜನೆ ಮುಂದಿಟ್ಟು ಮತಯಾಚಿಸಿದರು. ಈ ಸಂದರ್ಭ ಹಲವು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

Read Full Story

12:47 PM (IST) Mar 28

ಮತಾಂತರ - ಸುಪ್ರೀಂ ರೀತಿ ಹಿಂದೆಯೇ ಎಚ್ಚರಿಸಿದ್ದ ಅಂಬೇಡ್ಕರ್ ಮಾತು ನಿಜವಾಯಿತೇ?

Supreme Court on Religious Conversion ಮತಾಂತರಗೊಂಡರೆ ಪರಿಶಿಷ್ಟ ಜಾತಿ ಸೌಲಭ್ಯ ಸಿಗುವುದೇ? ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪು ಮತ್ತು ಅಂಬೇಡ್ಕರ್ ಅವರ ಎಚ್ಚರಿಕೆಯ ಕುರಿತು ಸಂಪೂರ್ಣವಾಗಿ ತಿಳಿಯಿರಿ.

Read Full Story

12:34 PM (IST) Mar 28

ಏಪ್ರಿಲ್ 2ರಿಂದ 5 ರಾಶಿಗಳಲ್ಲಿ ಮಂಗಳ ಗೋಚರ - ಶನಿಯುತಿ ರಚನೆಯಿಂದ ಮುಟ್ಟಿದ್ದೆಲ್ಲಾ ಚಿನ್ನ

ಏಪ್ರಿಲ್ 2 ರಂದು ಮೀನ ರಾಶಿಯಲ್ಲಿ ಶನಿ ಮತ್ತು ಮಂಗಳ ಗ್ರಹಗಳ ಸಂಯೋಗದಿಂದ ಶನಿ-ಮಂಗಳ ಯೋಗವು ರೂಪುಗೊಳ್ಳಲಿದೆ. ಈ ಯೋಗವು 5 ರಾಶಿಗಳ ಮೇಲೆ ನೇರ ಪರಿಣಾಮ ಬೀರಲಿದ್ದು, ಅವರ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿದೆ.

Read Full Story

12:23 PM (IST) Mar 28

ಮೈಸೂರಿನಲ್ಲಿ ಹುಸಿಬಾಂಬ್ ಬೆದರಿಕೆ ಮೂಲಕ ಆತಂಕ ಸೃಷ್ಟಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ದೆಹಲಿ ಪೊಲೀಸರು!

ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ನ್ಯಾಯಾಲಯಗಳಿಗೆ ಹುಸಿಬಾಂಬ್ ಬೆದರಿಕೆಯ ಇ-ಮೇಲ್ ಕಳುಹಿಸುತ್ತಿದ್ದ ಮೈಸೂರಿನ ಶ್ರೀನಿವಾಸ್ ಎಂಬ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ತಾಂತ್ರಿಕ ఆధారಗಳ ಮೇಲೆ ಆರೋಪಿಯನ್ನು ಪತ್ತೆಹಚ್ಚಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಕರೆದೊಯ್ಯಲು ಸಿದ್ಧತೆ ನಡೆಸಲಾಗಿದೆ.
Read Full Story

12:18 PM (IST) Mar 28

Breaking News - ಮೈಸೂರಿನಲ್ಲಿ ದೆಹಲಿ ಪೊಲೀಸರ ಬಿಗ್ ಆಪರೇಷನ್; ದೇಶಾದ್ಯಂತ ಹುಸಿ ಬಾಂಬ್ ಬೆದರಿಕೆ ಹಾಕುತ್ತಿದ್ದ ಕಿಡಿಗೇಡಿ ಕೊನೆಗೂ ಅರೆಸ್ಟ್!

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೆಹಲಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ದೇಶಾದ್ಯಂತ ಸರ್ಕಾರಿ ಕಚೇರಿ ಮತ್ತು ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇಮೇಲ್ ಕಳುಹಿಸುತ್ತಿದ್ದ ಶ್ರೀನಿವಾಸ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. 

Read Full Story

11:48 AM (IST) Mar 28

'ಎಣ್ಣೆ ಕೊಡಿಸ್ತಿನಂದ್ರೆ ಕೆಳಗಿಳ್ತೀನಿ..' ಕುಡಿಯಲು ಹಣವಿಲ್ಲದ್ದಕ್ಕೆ ಮೊಬೈಲ್ ಟವರ್ ಏರಿ ಕುಳಿತ 'ಕಿಂಗ್ ಕಾಂಗ್' ಕುಡುಕ!

ವಿಜಯಪುರ ಜಿಲ್ಲೆಯ ಕೋಟ್ಯಾಳ ಗ್ರಾಮದಲ್ಲಿ ಶ್ರೀಶೈಲ್ ಎಂಬ ಮದ್ಯವ್ಯಸನಿಯೊಬ್ಬ ಕುಡಿಯಲು ಹಣಕ್ಕಾಗಿ ಪದೇ ಪದೇ ಮೊಬೈಲ್ ಟವರ್ ಏರಿ ಹುಚ್ಚಾಟ ಮೆರೆದಿದ್ದಾನೆ. ಟವರ್ ಮೇಲಿಂದ ಮದ್ಯ ಕೊಡಿಸುವಂತೆ ಬೇಡಿಕೆಯಿಟ್ಟು, ಕೆಳಗಿಳಿಸಲು ಬಂದ ಪೊಲೀಸರು ಮತ್ತು ಸಾರ್ವಜನಿಕರನ್ನು ಹೈರಾಣಾಗಿಸಿದ್ದಾನೆ.
Read Full Story

11:26 AM (IST) Mar 28

ಮಂಗಳೂರು ರೌಡಿಶೀಟರ್ ಹತ್ಯೆ ಪ್ರಕರಣ, ಹಂತಕರಿಗೆ ಅರ್ಧದಾರಿಯಲ್ಲಿ ಕೈಕೊಟ್ಟ ಕಾರು, ರಿಕ್ಷಾ ಹತ್ತಿ ಬೆಂಗಳೂರಿಗೆ ಪರಾರಿ!

ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿ 66ರ ಫ್ಲೈಓವರ್‌ನಲ್ಲಿ ರೌಡಿಶೀಟರ್ ಆಗಿದ್ದ ಮೀನು ವ್ಯಾಪಾರಿ ಆರೀಫ್ ಹುಸೇನ್‌ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬುಲೆಟ್ ಬೈಕ್‌ನಲ್ಲಿ ತೆರಳುತ್ತಿದ್ದಾಗ ಇನೋವಾ ಕಾರಿನಿಂದ ಡಿಕ್ಕಿ ಹೊಡೆದು, ಬಳಿಕ ತಲವಾರಿನಿಂದ ಕೊಚ್ಚಿ ಕೊಲೆಗೈಯಲಾಗಿದೆ. ಈ ಕೃತ್ಯವು 2022ರಲ್ಲಿ ನಡೆದಿದ್ದ ಕೊಲೆ ಯತ್ನದ ಮುಂದುವರಿದ ಭಾಗವಾಗಿರಬಹುದು ಎಂದು ಶಂಕಿಸಲಾಗಿದೆ.
Read Full Story

10:58 AM (IST) Mar 28

ಧಾರವಾಡ ವಿದ್ಯಾರ್ಥಿಗಳ ಪ್ರತಿಭಟನೆ ರೀತಿ ಕಲಬುರಗಿಯಲ್ಲೂ ಉದ್ಯೋಗ ಆಕಾಂಕ್ಷಿಗಳ ಹೋರಾಟ

ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘಟನೆ (ಅಕ್ಸಾ) ನೇತೃತ್ವದಲ್ಲಿ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.80 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಕಲಬುರಗಿಯಲ್ಲಿ ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸಿದರು. 

Read Full Story

10:44 AM (IST) Mar 28

211 ವರ್ಕ್‌ ಇನ್ಸ್​ಪೆಕ್ಟರ್‌ ಹುದ್ದೆ ರದ್ದುಪಡಿಸಿದ್ದ ಸರ್ಕಾರದ ಆದೇಶಕ್ಕೆ ತಡೆ, ಹೈಕೋರ್ಟ್ ಮಹತ್ವದ ತೀರ್ಪು, ಏನಿದು ಪ್ರಕರಣ?

2016ರ ಅಧಿಸೂಚನೆಯಂತೆ ಆಯ್ಕೆಯಾದ 211 ವರ್ಕ್‌ ಇನ್ಸ್​ಪೆಕ್ಟರ್‌ಗಳಿಗೆ ನೇಮಕಾತಿ ಆದೇಶ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ. ಸೇವಾ ನಿಯಮಗಳಿಗೆ ತಿದ್ದುಪಡಿ ಮಾಡದೆ, ಕೇವಲ ಸರ್ಕಾರಿ ಆದೇಶದಿಂದ ಕಾನೂನಾತ್ಮಕವಾಗಿ ರಚಿಸಿದ ವೃಂದವನ್ನು ರದ್ದುಪಡಿಸಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
Read Full Story

10:27 AM (IST) Mar 28

Tragedy in Belagavi - ಬೆಳ್ಳಂ ಬೆಳಗ್ಗೆ ಟಿಪ್ಪರ್ ಹರಿದು ಮಹಿಳಾ ಪೌರಕಾರ್ಮಿಕ ಸ್ಥಳದಲ್ಲೇ ದುರ್ಮರಣ!

ಬೆಳಗಾವಿಯ ಖಾನಾಪುರ ರಸ್ತೆಯಲ್ಲಿ ಕರ್ತವ್ಯನಿರತರಾಗಿದ್ದ ಅವಕ್ಕಾ ಕೋಲಕಾರ ಎಂಬ 50 ವರ್ಷದ ಮಹಿಳಾ ಪೌರಕಾರ್ಮಿಕರ ಮೇಲೆ ವೇಗವಾಗಿ ಬಂದ ಟಿಪ್ಪರ್ ಹರಿದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ನಂತರ ಚಾಲಕ ಪರಾರಿಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

10:26 AM (IST) Mar 28

Drinking Water - ಹುಬ್ಬಳ್ಳಿ-ಧಾರವಾಡ ಜನತೆಯ ನೀರಿನ ದಾಹ - ನನಸಾಗುವುದೇ 3 ದಿನದ ಕನಸು?

ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಮಾರ್ಚ್ ಅಂತ್ಯದೊಳಗೆ 3 ದಿನಗಳಿಗೊಮ್ಮೆ ನೀರು ಪೂರೈಸುವ ಭರವಸೆಯನ್ನು ಪಾಲಿಕೆ ನೀಡಿದೆ. ಪ್ರಸ್ತುತ ಕೆಲವು ವಾರ್ಡ್‌ಗಳಲ್ಲಿ 7-10 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ.

Read Full Story

10:05 AM (IST) Mar 28

ರಿಪ್ಪನ್‌ಪೇಟೆಯಲ್ಲಿ ಆಕಸ್ಮಿಕವಾಗಿ ಕೆರೆಗೆ ಕಾಲುಜಾರಿ ಬಿದ್ದು SSLC ವಿದ್ಯಾರ್ಥಿ ಸಾವು

ರಿಪ್ಪನ್‍ಪೇಟೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಮಹಮ್ಮದ್ ತಮಿಮ್, ಹೊಸನಗರ ತಾಲೂಕಿನ ಬರುವೆ ಗ್ರಾಮದ ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಸ್ನೇಹಿತರೊಂದಿಗೆ ಈಜಲು ಹೋಗಿದ್ದಾಗ ಅಥವಾ ಕಾಲುಜಾರಿ ಬಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಮೃತಪಟ್ಟಿದ್ದ.
Read Full Story

10:00 AM (IST) Mar 28

Karnataka Bypolls - ಮುಸ್ಲಿಮರ ಪರ ಮಾತನಾಡಿದ್ರೆ ಕೋಮುವಾದವಲ್ಲವೇ? - ಕೆ.ಎಸ್.ಈಶ್ವರಪ್ಪ

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು, ಹಿಂದೂಗಳ ಪರ ಮಾತನಾಡಿದರೆ ಕೋಮುವಾದ ಎನ್ನುವುದಾದರೆ, ಮುಸ್ಲಿಮರ ಪರ ಮಾತನಾಡುವುದು ಕೋಮುವಾದವಲ್ಲವೇ ಎಂದು ಪ್ರಶ್ನಿಸಿದ್ದಾರೆ. ದಾವಣಗೆರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಧರ್ಮದ ಆಧಾರದ ಮೇಲೆ ಮತ ವಿಭಜನೆ ಮಾಡುತ್ತಿದೆ ಎಂದು ಆರೋಪಿಸಿದರು.

Read Full Story

08:51 AM (IST) Mar 28

ಬಂಡೆದ್ದ ಪೈಲ್ವಾನ್‌ ಹಿಂದೆ ಸರಿದ್ರೂ ಕಾಂಗ್ರೆಸ್‌ಗೆ ಮತ್ತೊಂದು ತಲೆನೋವು, ಇನ್ನೂ 10 ಅಭ್ಯರ್ಥಿಗಳು ಕಣದಲ್ಲಿದ್ದೇವೆ, ನಮ್ಮ ತಂತ್ರ ಹೇಳೋಲ್ಲ ಎಂದ ಮನ್ಸೂರ್ ಅಲಿ

ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣಾ ಕಣದಿಂದ ಸಾದಿಕ್ ಪೈಲ್ವಾನರು ಹಿಂದೆ ಸರಿದರೂ, ನಾವು 10ಕ್ಕೂ ಹೆಚ್ಚು ಜನ ಇನ್ನೂ ಸ್ಪರ್ಧೆಯಲ್ಲಿದ್ದೇವೆ ಎಂದು ಮುಸ್ಲಿಂ ಮುಖಂಡ ಯು.ಎಂ. ಮನ್ಸೂರ್ ಅಲಿ ಹೇಳಿದ್ದಾರೆ. ಸಾದಿಕ್ ಅವರ ಈ ನಡೆಯಿಂದ ಸಮಾಜಕ್ಕೆ ಬೇಸರ. ಕಾಂಗ್ರೆಸ್‌ಗೆ ಮತ ಹಾಕದಿರಲು ನಿರ್ಧರಿಸಲಾಗಿದೆ .

Read Full Story

08:38 AM (IST) Mar 28

ಕಿಕ್ಕೇರಿ ಜಾತ್ರೆಯ ವಿಚಿತ್ರ ಆಚರಣೆ - ಸೊಂಟಕ್ಕೆ ಮರದ ಗುಪ್ತಾಂಗ ಕಟ್ಕೊಂಡು ಕುಣಿತ, ಹಾಡು

ಕಿಕ್ಕೇರಿ ಪಟ್ಟಣದಲ್ಲಿ ನಡೆದ ಕಿಕ್ಕೇರಮ್ಮನ ಜಾತ್ರೆಯ ಅಂಗವಾಗಿ ವಸಕೊಂತನ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಈ ಹಬ್ಬದಲ್ಲಿ ದೇವರಗುಡ್ಡಪ್ಪನು ಸೊಂಟಕ್ಕೆ ಮರದ ಗುಪ್ತಾಂಗವನ್ನು ಕಟ್ಟಿಕೊಂಡು ಕುಣಿಯುವುದು ಮತ್ತು ಹಿರಿಯರು ದೇವಿಯನ್ನು ಅಶ್ಲೀಲವಾಗಿ ಮೂದಲಿಸಿ ಹಾಡುವುದು ಪ್ರಮುಖ ಆಚರಣೆಯಾಗಿದೆ.

Read Full Story

08:33 AM (IST) Mar 28

ಮುಸ್ಲಿಂ ನಾಯಕರಿಂದಲೇ ಆಪರೇಷನ್ ಪೈಲ್ವಾನ್ ಯಶಸ್ವಿ,ಪರಮಾತ್ಮ ಬಂದ್ರೂ ಹಿಂದೆ ಸರಿಯೊಲ್ಲ ಎಂದಿದ್ದ ಸಾದಿಕ್, ಈಗ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ!

ದಾವಣಗೆರೆ ಕಾಂಗ್ರೆಸ್‌ನಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಬಂಡಾಯವನ್ನು ಅಂತಿಮವಾಗಿ ಶಮನಗೊಳಿಸಲಾಗಿದೆ. ಸರ್ಕಾರದ ಮುಖ್ಯಸಚೇತಕ ಸಲೀಂ ಅಹಮದ್ ಹಾಗೂ ಶಾಸಕ ರಿಜ್ವಾನ್‌ ಅರ್ಷದ್ ಅವರು ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ, ಬಂಡಾಯ ಅಭ್ಯರ್ಥಿ ಸಾದಿಕ್‌ ಪೈಲ್ವಾನ್‌ ಅವರನ್ನು ಮನವೊಲಿಸುವಲ್ಲಿ ಯಶಸ್ವಿ.

Read Full Story

08:22 AM (IST) Mar 28

ನಿಧಿ ಆಸೆಗಾಗಿ ಚಾಲುಕ್ಯರ ಕಾಲದ ದೇಗುಲ ಧ್ವಂಸ; ಗಂಗಾವತಿಯಲ್ಲಿ ಕೃಷ್ಣದೇವರಾಯನ ಕಾಲದ ಶಾಸನ ಪತ್ತೆ

ಕಲಬುರಗಿಯಲ್ಲಿ ನಿಧಿಯ ಆಸೆಗಾಗಿ ದುಷ್ಕರ್ಮಿಗಳು ಚಾಲುಕ್ಯರ ಕಾಲದ ಪುರಾತನ ದೇಗುಲವನ್ನು ಧ್ವಂಸಗೊಳಿಸಿದ್ದಾರೆ. ಮತ್ತೊಂದೆಡೆ, ಗಂಗಾವತಿಯಲ್ಲಿ ಚಾರಣಿಗರ ತಂಡವು ವಿಜಯನಗರ ಸಾಮ್ರಾಟ ಕೃಷ್ಣದೇವರಾಯನ ಕಾಲದ, ಭೂದಾನದ ಮಾಹಿತಿ ನೀಡುವ ಅಪರೂಪದ ಶಿಲಾಶಾಸನವನ್ನು ಪತ್ತೆ ಮಾಡಿದೆ.
Read Full Story

More Trending News