ಬಾಗಲಕೋಟೆ: ಬಜೆಟ್ ಬಳಿಕವೂ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಯುತ್ತಾರಾ ಎಂಬ ಪ್ರಶ್ನೆಗೆ ಬಾಗಲಕೋಟೆಯಲ್ಲಿ ಭಾನುವಾರ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ಈಗ ಅವರೇ ಇದ್ದಾರೆ, ಮುಂದೆ ಅವರೇ ಮುಂದುವರೀತಾರೆ ಎಂದು ಲೆಕ್ಕಾಚಾರ ಅಷ್ಟೇ. ಅರ್ಧಗಿರ್ಧ ಎಂದು ನಾವೆಲ್ಲೂ ಕೇಳಿಲ್ಲ, ಈಗ ಅವರಿದ್ದಾರೆ. ಅವರೇ ಮುಂದುವರೀತಾರೆ ಅನ್ನೋದಷ್ಟೇ ನಮ್ಮ ಲೆಕ್ಕಾಚಾರ. ಮಿಕ್ಕಿದ್ದೆಲ್ಲಾ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದರು.
ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಬೇರೆ ಬೇರೆ ಕಾರ್ಯಕ್ರಮ ಇರುತ್ತವೆ. ಹಾಗಾಗಿ ದೆಹಲಿಗೆ ಹೋಗ್ತಿವಿ. ಇದೇನು ಹೊಸದಲ್ಲ, ತಿಂಗಳಿಗೊಮ್ಮೆ ದೆಹಲಿ ವಿಸಿಟ್ ಮಾಡೇ ಮಾಡ್ತೀವಿ. ಆ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಆಗಿದ್ದೇವೆ. ಸ್ವಾಭಾವಿಕವಾಗಿ ರಾಜಕೀಯ ಮಾತಾಡಬೇಕಾಗುತ್ತದೆ ಮಾತಾಡಿದ್ದೇವೆ. ದೆಹಲಿಯಲ್ಲಿ ನಿರ್ಣಯ ಆಗಿದೆ ಎನ್ನುವ ವಿಚಾರ ಇರುವ ಗೊಂದಲ ಬಗೆಹರಿಸುವ ನಿರ್ಣಯ ಆಗಿದೆ. ರಾಜ್ಯದಲ್ಲಿ ಗೊಂದಲ ಇದೆ ಅದನ್ನ ಬಗೆಹರಿಸಲು ಹೇಳಿದ್ದೇವೆ. ನೀವು ಮಧ್ಯ ಪ್ರವೇಶಿಸಬೇಕು, ಇಲ್ಲವಾದರೆ ಕಾರ್ಯಕರ್ತರಿಗೆ, ಸರ್ಕಾರಕ್ಕೆ, ಪಕ್ಷಕ್ಕೂ ತೊಂದರೆ ಆಗುತ್ತದೆ ಎಂದು ಹೇಳಿದ್ದೇವೆ. ಆದಷ್ಟು ಬೇಗ ಮಾಡುತ್ತೇವೆ ಎಂದು ಖರ್ಗೆಯವರು ಹೇಳಿದ್ದಾರೆ ಎಂದು ಹೇಳಿದರು.
09:23 AM (IST) Feb 23
ಭಾನುವಾರ ರಾತ್ರಿ ನಡೆದ ಬೈಕ್ ಅಪಘಾತದಲ್ಲಿ ಪ್ರಿಯಾ (23) ಎಂಬ ಯುವತಿ ಮೃತಪಟ್ಟಿದ್ದಾರೆ. ರಸ್ತೆಯಲ್ಲಿದ್ದ ಹಂಪ್ ಕಾಣದ ಕಾರಣ ನಿಯಂತ್ರಣ ತಪ್ಪಿ ಬಿದ್ದಿದ್ದು, ಹೆಲ್ಮೆಟ್ ಧರಿಸದ ಕಾರಣ ತಲೆಗೆ ತೀವ್ರ ಪೆಟ್ಟಾಗಿ ಸಾವನ್ನಪ್ಪಿದ್ದಾರೆ. ಜೊತೆಗಿದ್ದ ಮತ್ತೋರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
08:18 AM (IST) Feb 23
ಅಪ್ಪನ ಹೆಸರಿಲ್ಲದಿದ್ದರೆ ಪ್ರಿಯಾಂಕ್ ಗ್ರಾಮ ಪಂಚಾಯಿತಿ ಸದಸ್ಯರಾಗಲೂ ಅರ್ಹರಲ್ಲ ಎಂದ ಅವರು, ದಲಿತರ ಪರ ಹೋರಾಡದ ಮತ್ತು ಒಳ ಮೀಸಲಾತಿ ಬಗ್ಗೆ ಮಾತನಾಡದ ಖರ್ಗೆಯವರನ್ನು ಟೀಕಿಸಿದ್ದಾರೆ.
08:17 AM (IST) Feb 23
ಕಲಾವಿದ ಎನ್.ಕೆ.ರಾಮಕೃಷ್ಣ ಅವರೂ ಬಂದು ಕಪ್ಪಣ್ಣ ಅವರಿಗೆ ಬೇಗ ಭಾಷಣ ಮುಗಿಸಿ ಎಂದರೂ ಪ್ರಯೋಜನವಾಗಲಿಲ್ಲ. ನಿರೂಪಕಿಯೂ ಬಂದು ಕಪ್ಪಣ್ಣ ಅವರನ್ನು ‘ಎಚ್ಚರಿಸಿದರೂ’ ಯಾವುದೇ ಉಪಯೋಗವಾಗಲಿಲ್ಲ. ನಟಿ ಉಮಾಶ್ರೀ ಎಚ್ಚರಿಕೆಗೆ ಹಿರಿಯ ರಂಗಕರ್ಮಿ ಪೆಚ್ಚು
08:08 AM (IST) Feb 23
ಮದುವೆ ಚರ್ಚೆ ವಾಗ್ವಾದಕ್ಕೆ ತಿರುಗಿದ ಪರಿಣಾಮ ಯುವಕನೊಬ್ಬ ತನ್ನ ಲಿವ್-ಇನ್ ಸಂಗಾತಿಯ ಗುಪ್ತಾಂಗಕ್ಕೆ ಸ್ಯಾನಿಟೈಸರ್ ಹಾಕಿ ಬೆಂಕಿ ಹಚ್ಚಿದ್ದಲ್ಲದೆ, ಲೋಹದ ಬಾಟಲಿಯಿಂದ ಆಕೆಯ ತಲೆಗೆ ಹೊಡೆದು ಸತತ 3 ದಿನಗಳ ಕಾಲ ಚಿತ್ರಹಿಂಸೆ
08:05 AM (IST) Feb 23
ಮೈಸೂರು ರಸ್ತೆಯ ದೀಪಾಂಜಲಿ ನಗರದಿಂದ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ 1.5 ಕಿ.ಮೀ ಉದ್ದದ ಹೊಸ ಲಿಂಕ್ ರಸ್ತೆ ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ. ಈ ರಸ್ತೆಯು ರಿಂಗ್ ರಸ್ತೆ ಹಾಗೂ ನೈಸ್ ರಸ್ತೆಯ ಮೂಲಕ ಮೈಸೂರು, ಮಾಗಡಿ, ಮತ್ತು ತುಮಕೂರು ರಸ್ತೆಗಳಿಗೆ ಸುಗಮ ಪ್ರಯಾಣವನ್ನು ಒದಗಿಸಲಿದೆ.
07:50 AM (IST) Feb 23
07:24 AM (IST) Feb 23
07:13 AM (IST) Feb 23
ಕಾರವಾರದ ಕಠಿಣಕೋಣ ಗ್ರಾಮದ ಮನೆಯೊಂದರ ಅಂಗಳದಲ್ಲಿ 8 ರಿಂದ 12 ಅಡಿ ಉದ್ದದ ಆರು ಬೃಹತ್ ಹೆಬ್ಬಾವುಗಳು ಪತ್ತೆಯಾಗಿವೆ. ಉರಗ ರಕ್ಷಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಈ ಹಾವುಗಳನ್ನು ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ.
06:54 AM (IST) Feb 23
ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ಶ್ರೀರಾಮುಲು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರನ್ನು ಮಾತ್ರ ಬಂಧಿಸಿ, ಉಳಿದವರನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿದರು.
06:50 AM (IST) Feb 23
ಇತ್ತೀಚೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ನ ಮಹಿಳಾ ಸಂಸದರು ತಮ್ಮ ಸ್ಥಾನದತ್ತ ಧಾವಿಸಿ ಬಂದ ಘಟನೆಯ ಬಗ್ಗೆ ಮೊದಲ ಬಾರಿ ಮೌನ ಮುರಿದಿರುವ ಪ್ರಧಾನಿ ನರೇಂದ್ರ ಮೋದಿ ‘ಸಂಸತ್ತಿನಲ್ಲಿ ಕಾಂಗ್ರೆಸ್ ತಾನೂ ಕೆಲಸ ಮಾಡಲ್ಲ, ತನ್ನ ಮಿತ್ರ ಪಕ್ಷಗಳಿಗೂ ಕೆಲಸ ಮಾಡಲು ಬಿಡಲ್ಲ.
06:45 AM (IST) Feb 23
‘ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ದೇವೇಗೌಡ ಜಾತಿವಾದಿಗಳಲ್ಲ, ಸ್ವಜಾತಿ ವಿರೋಧಿಗಳು. ಸ್ವಜಾತಿ ನಾಯಕರು ಬೆಳೆಯದಂತೆ ಒಬ್ಬೊಬ್ಬರನ್ನು ಮುಗಿಸಿದ ಕುಟುಂಬವಾದಿಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪಾದಿಸಿದ್ದಾರೆ.
06:39 AM (IST) Feb 23
ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ₹5 ಲಕ್ಷ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದು ಜೈಲು ಪಾಲಾಗಿರುವ ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ, ಈ ಹಿಂದೆಯೂ ಲೋಕಾಯುಕ್ತ ಬಿಸಿ ಎದುರಿಸಿದ್ದರು.