ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ವಿರೋಧ ಪಕ್ಷದ ನಾಯಕರ ಅಭಿಪ್ರಾಯ ಪಡೆದು, ರಾಜ್ಯದ ಮುಂದಿನ ಕ್ರಮ ನಿರ್ಧರಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಭಾನುವಾರ ಸರ್ವ ಪಕ್ಷ ಸಭೆ ನಡೆಯಲಿದೆ.
ಮಳೆ ಕೊರತೆಯಿಂದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಹರಿವು ಕುಸಿತ ಕಂಡಿದ್ದು, ಇಂಥ ಸಂಕಷ್ಟದ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವುದು ಅಸಾಧ್ಯ ಎಂದು ರಾಜ್ಯ ಸರ್ಕಾರ ಹೇಳಿದೆ. ಹೀಗಿರುವಾಗಲೂ ತಮಿಳುನಾಡಿಗೆ ಪ್ರತಿದಿನ 3500 ಕ್ಯುಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಆದೇಶಿಸಿದೆ. ಈ ಆದೇಶ ಪಾಲನೆ ಅಥವಾ ತಿರಸ್ಕಾರ ಹಾಗೂ ರಾಜ್ಯದ ಮುಂದಿರುವ ಆಯ್ಕೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವ ಪಕ್ಷ ಸಭೆ ನಡೆಸಲಾಗುತ್ತಿದೆ.
ಜತೆಗೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಆದೇಶ ಪಾಲಿಸದಿದ್ದರೆ ಮುಂದೆ ಎದುರಾಗಬಹುದಾದ ಸಮಸ್ಯೆಗಳು ಹಾಗೂ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವುದಾದರೆ, ಯಾವೆಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಅರ್ಜಿ ಸಲ್ಲಿಸಬೇಕು ಎಂಬ ಬಗ್ಗೆಯೂ ಚರ್ಚಿಸಿ ನಿರ್ಧರಿಸಲಾಗುತ್ತದೆ. ಒಂದು ವೇಳೆ ಸುಪ್ರೀಂ ಕೋರ್ಟ್ ಕೂಡ ನೀರು ಬಿಡಲು ಆದೇಶಿಸಿದರೆ, ಆಗ ರಾಜ್ಯ ಸರ್ಕಾರ ಯಾವ ನಡೆ ಇಡಬೇಕು ಎಂಬ ಬಗ್ಗೆಯೂ ವಿಪಕ್ಷಗಳಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ.
10:47 PM (IST) Aug 02
Tungabhadra Reservoir: ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡಲು ಸರಕಾರ ಬದ್ಧವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗು ಕಾಂಗ್ರೆಸ್ ಮುಖಂಡ ಎನ್.ಎಸ್.ಬೋಸರಾಜು ಹೇಳಿದರು.
10:32 PM (IST) Aug 02
Chamarajanagar News: ಆಧುನಿಕ ತಂತ್ರಜ್ಞಾನವೇ ಇಲ್ಲದ ಕಾಲದಲ್ಲಿ, ಕೇವಲ ಸುಣ್ಣದ ಗಾರೆ ಮತ್ತು ಕಲ್ಲು ಕಂಬಗಳಿಂದಲೇ ನಿರ್ಮಿಸಲಾದ ಆ ಅದ್ಭುತ ನಿಮಾರ್ಣಕ್ಕೆ ಈಗ ಕಾಲದ ಕುತ್ತು ಬಂದೊದಗಿದೆ.
10:32 PM (IST) Aug 02
ಅಂದು ಶಾಲಾ ದಿನಗಳಲ್ಲಿ ಸಾಯಿ ಪಲ್ಲವಿ ಬರೆದ ಆ ಒಂದು ಪತ್ರ ಇಂದು ವೈರಲ್ ಆಗುತ್ತಿರುವುದು ಅವರ ಸ್ಟಾರ್ಡಮ್ಗೆ ಸಾಕ್ಷಿ. ಮುಗ್ಧ ಹುಡುಗಿಯಾಗಿ ಪತ್ರ ಬರೆದು ಏಟು ತಿಂದಿದ್ದ ಸಾಯಿ ಪಲ್ಲವಿ, ಇಂದು ಇಡೀ ಭಾರತವೇ ಪೂಜಿಸುವ 'ಸೀತಾಮಾತೆ' ಆಗಿದ್ದಾರೆ..
09:59 PM (IST) Aug 02
ಸ್ಯಾಂಡಲ್ವುಡ್ನಲ್ಲಿ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಬೆಂಬಲದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಡಿಂಪಲ್ ಕ್ವೀನ್, ನಟಿ ರಚಿತಾ ರಾಮ್ ಈ ಬಾರಿ ತಮ್ಮ ಮನದಾಳದ ಬೇಸರವನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ.
09:35 PM (IST) Aug 02
ಅಂತಿಮವಾಗಿ ಶ್ರೀದೇವಿ ಅವರು ದಿವ್ಯಾ ಅವರ ಸ್ಥಾನವನ್ನು ತುಂಬಿದರು ಮತ್ತು ಸಿನಿಮಾ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿತು. ಆದರೂ, ಶೂಟಿಂಗ್ ಸೆಟ್ನಲ್ಲಿ ದಿವ್ಯಾ ಭಾರತಿ ಅವರ ನೆನಪುಗಳು ಚಿತ್ರತಂಡವನ್ನು ಸದಾ ಕಾಡುತ್ತಿದ್ದವು ಎನ್ನುತ್ತದೆ ಚಿತ್ರತಂಡ. ಆದರೆ, ಕೊನೆಯ ದಿನ ದವ್ಯಾ ಭಾರತಿ ಹಾಗೆ ಹೇಳಿದ್ರು..!
08:32 PM (IST) Aug 02
ತಿರುಪತಿ ತಿಮ್ಮಪ್ಪನ ದೇವಸ್ಥಾನದ ಫೇಮಸ್ ಶ್ರೀವಾರಿ ಲಡ್ಡು ಇತ್ತೀಚೆಗೆ 311ನೇ ವರ್ಷದ ಮೈಲಿಗಲ್ಲು ತಲುಪಿದೆ. ಈ ಲಡ್ಡು ಯಾಕೆ ಇಷ್ಟು ಸ್ಪೆಷಲ್? ಇದರ ಇತಿಹಾಸವೇನು? ಅದೇ ರುಚಿಯಲ್ಲಿ ಮನೆಯಲ್ಲೇ ಇದನ್ನು ಮಾಡೋದು ಹೇಗೆ? ತಿಳಿಯೋಣ ಬನ್ನಿ.
07:49 PM (IST) Aug 02
Sanvi Sudeep Tattoo: ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಬೆನ್ನಿನ ಮೇಲೆ ಹಾಕಿಸಿಕೊಂಡಿರುವ ಗಣೇಶನ ಟ್ಯಾಟೂ ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಗೆ ಕಾರಣವಾಗಿದೆ.
07:08 PM (IST) Aug 02
Thirthahalli Landslide: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿ ದುಡಿಯಲು ಹೋಗಿದ್ದ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಕಕ್ಕರಗೋಳ್ ಗ್ರಾಮದ ಮಗು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.
06:42 PM (IST) Aug 02
Monsoon Hydration: ಮಳೆಗಾಲದಲ್ಲೂ ನಮ್ಮ ದೇಹಕ್ಕೆ ಬೇಕಾದ ನೀರಿನ ಪ್ರಮಾಣ ಕಡಿಮೆಯಾಗಲ್ಲ. ಮೆದುಳು, ಕಿಡ್ನಿ ಮತ್ತು ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಲು ಸಾಕಷ್ಟು ನೀರು ಬೇಕೇಬೇಕು.
06:09 PM (IST) Aug 02
Anupama Parameswaran Breakup: ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಅನುಪಮಾ ಪರಮೇಶ್ವರನ್ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಆದರೆ ಈ ಬಾರಿ ಕಾರಣ ಅವರ ಹೊಸ ಸಿನಿಮಾ ಅಲ್ಲ.
05:17 PM (IST) Aug 02
2000ರ ಆರಂಭದಲ್ಲಿ ಕನ್ನಡ ಹಾಗೂ ತೆಲುಗು ಚಿತ್ರರಂಗದ ಬಹುಬೇಡಿಕೆಯ ನಾಯಕಿಯಾಗಿದ್ದ ನಟಿ ಪ್ರೇಮಾ, ಸಂದರ್ಶನವೊಂದರಲ್ಲಿ ತಮ್ಮ ಸಿನಿ ಬದುಕಿನ ಹಲವು ಅಪರೂಪದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
04:41 PM (IST) Aug 02
ಸ್ಯಾಂಡಲ್ವುಡ್ನ ಮಿಲ್ಕಿ ಬ್ಯೂಟಿ ನಟಿ ಆಶಿಕಾ ರಂಗನಾಥ್ ಸಿನಿಮಾಗಳಷ್ಟೇ ಅಲ್ಲ, ತಮ್ಮ ಫುಡ್ ಲವ್ಗೂ ಸಾಕಷ್ಟು ಜನಪ್ರಿಯರು. ಹೊಸಹೊಸ ಖಾದ್ಯಗಳನ್ನು ಸವಿಯುವುದು ಅವರ ನೆಚ್ಚಿನ ಹವ್ಯಾಸ.
04:32 PM (IST) Aug 02
ನಟ ದರ್ಶನ್ ಐತಿಹಾಸಿಕ ಸಿನಿಮಾ ಸಂಗೊಳ್ಳಿ ರಾಯಣ್ಣ ರೋಲ್ ಮಾಡಿದ್ರು. ಅಂದು ಸಂಗೊಳ್ಳಿ ರಾಯಣ್ಣ ಲುಕ್ ನಲ್ಲಿ ದರ್ಶನ್ಅವರನ್ನು ನೋಡಿ ಬಹಳಷ್ಟು ಜನರು ಮೆಚ್ಚಿಕೊಂಡಿದ್ರು. ಈಗ ಅದೇ ಸಿನಿರಸಿಕರು ನಟ ಯಶ್ ಅವರನ್ನು ರಾವಣಾಸುರನ ಪಾತ್ರದಲ್ಲಿ ನೋಡಿ ಶಹಬ್ಬಾಸ್ ಎಂದಿದ್ದಾರೆ. ಆದರೆ ಏನಾಗ್ತಿದೆ ಈಗ?
03:53 PM (IST) Aug 02
03:28 PM (IST) Aug 02
02:49 PM (IST) Aug 02
ಸಿಲಿಕಾನ್ ಸಿಟಿಯ ಹೋಟೆಲ್ ಉದ್ಯಮಿಗಳು ಹಾಗೂ ಆನ್ಲೈನ್ ಫುಡ್ ಡೆಲಿವರಿ ದೈತ್ಯ ಸ್ವಿಗ್ಗಿ ನಡುವಿನ ಸಂಘರ್ಷ ತಾರಕಕ್ಕೇರಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಆಗಸ್ಟ್ 15ರ ನಂತರ ಸ್ವಿಗ್ಗಿ ವೇದಿಕೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಾಗಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.
01:52 PM (IST) Aug 02
01:07 PM (IST) Aug 02
12:57 PM (IST) Aug 02
ಸಾಮಾನ್ಯವಾಗಿ ನಟಿಯರು ತಮಗೆ ಯಾವುದಾದರೂ ದೊಡ್ಡ ಸಿನಿಮಾದಲ್ಲಿ ಅವಕಾಶ ಸಿಗದೇ ಹೋದರೆ ಅದನ್ನು ಮುಚ್ಚಿಡುತ್ತಾರೆ ಅಥವಾ "ನಾನೇ ಆ ಸಿನಿಮಾವನ್ನು ರಿಜೆಕ್ಟ್ ಮಾಡಿದೆ" ಎಂದು ಬಿಲ್ಡಪ್ ಕೊಡುತ್ತಾರೆ. ಆದರೆ, ಈ ಕನ್ನಡದ ನಟಿ ಹೇಳಿದ್ದೇನು ಗೊತ್ತಾ? ನೋಡಿ..
12:42 PM (IST) Aug 02
ಕುರ್ಕುರೆ ಪಾಕೆಟ್ನಲ್ಲಿದ್ದ ಪ್ಲಾಸ್ಟಿಕ್ ಗಿಫ್ಟ್ ಬಾಲ್ ಕುರ್ಕುರೆ ಎಂದುಕೊಂಡು ನುಂಗಿ ಐದು ವರ್ಷದ ಕಂದ ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ನಡೆದಿದೆ.
12:32 PM (IST) Aug 02
11:55 AM (IST) Aug 02
11:53 AM (IST) Aug 02
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆಂದು ಕರೆತಂದಿದ್ದ ಖಲೀಲ್ ಎಂಬ ವ್ಯಕ್ತಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಪೊಲೀಸರು ಫಿಟ್ಸ್ನಿಂದ ಸಾವು ಸಂಭವಿಸಿದೆ ಎಂದು ಹೇಳಿದರೆ, ಇದು 'ಲಾಕಪ್ ಡೆತ್' ಎಂದು ಆರೋಪಿಸಿ ಕುಟುಂಬಸ್ಥರು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
11:16 AM (IST) Aug 02
10:47 AM (IST) Aug 02
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ 'ಬಿಡದಿ ಉಳಿಸಿ, ರೈತರ ರಕ್ಷಿಸಿ' ಘೋಷಣೆಯೊಂದಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಬಿಡದಿ ಟೌನ್ಶಿಪ್ ಯೋಜನೆ ವಿರೋಧಿಸಿ ಆಗಸ್ಟ್ 9 ರಿಂದ 11ರ ವರೆಗೆ ಬೈರಮಂಗಲದಿಂದ ಬೆಂಗಳೂರಿನವರೆಗೆ ಈ ಯಾತ್ರೆ ನಡೆಯಲಿದೆ.
10:21 AM (IST) Aug 02
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಹೊರವಲಯದಲ್ಲಿ ಚಿರತೆ ಕಳೆಬರ ಪತ್ತೆಯಾಗಿದೆ. ಮೇಲ್ನೋಟಕ್ಕೆ ಮುಳ್ಳಹಂದಿ ಬೇಟೆಯಾಡಲು ಮುಂದಾಗಿ ಅದರೊಂದಿಗೆ ಕಾದಾಟಕ್ಕಿಳಿದು ಸಾವನ್ನಪ್ಪಿರಬಹುದು ಎಂದ ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.
08:44 AM (IST) Aug 02
ದಾವಣಗೆರೆ ಜಿಲ್ಲೆಯ ಬೆಳಲಗೆರೆ ಗ್ರಾಮದಲ್ಲಿ ದೇವಸ್ಥಾನ ಪ್ರವೇಶಿಸಿದ ಕಾರಣಕ್ಕೆ ದಲಿತ ಸಮುದಾಯದ ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿ, ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ ಹಾಕದಂತೆ ಎಚ್ಚರಿಕೆ
08:21 AM (IST) Aug 02
08:16 AM (IST) Aug 02
08:09 AM (IST) Aug 02
Bengaluru Belagavi Vande Bharat Express train: ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿನ ವೇಳಾಪಟ್ಟಿ ಬದಲಾವಣೆ ಕುರಿತು ಕೆಲವು ಪ್ರಯಾಣಿಕರಿಗೆ ತಪ್ಪು ಸಂದೇಶ ರವಾನೆಯಾದ ಕಾರಣ, ಹಲವರು ರೈಲು ತಪ್ಪಿಸಿಕೊಂಡಿದ್ದಾರೆ.
07:45 AM (IST) Aug 02
ರಾಜಸ್ಥಾನದ ಅಲೆಮಾರಿ ಕುಟುಂಬಗಳು ಬೀಡುಬಿಟ್ಟಿದ್ದು, ಕೈಗೆಟುಕುವ ದರದಲ್ಲಿ ಗಾಳಿ ತುಂಬುವ ಪ್ಲಾಸ್ಟಿಕ್ ಗೊಂಬೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಕುದುರೆ, ನವಿಲು, ಆನೆಯಂತಹ ಆಕರ್ಷಕ ಗೊಂಬೆಗಳು ಕಡಿಮೆ ಬೆಲೆಗೆ ಸಿಗುತ್ತಿರುವುದರಿಂದ, ಮಕ್ಕಳಿಂದ ಹಿಡಿದು ಪಾಲಕರವರೆಗೂ ಎಲ್ಲರೂ ಖರೀದಿಗೆ ಮುಗಿಬೀಳುತ್ತಿದ್ದು, ವ್ಯಾಪಾರ ಜೋರಾಗಿ ನಡೆಯುತ್ತಿದೆ.
07:31 AM (IST) Aug 02
07:27 AM (IST) Aug 02
ಆಗಸ್ಟ್ 15 ರಿಂದ 'ಬೆಂಗಳೂರು ಹಸಿರೂರು' ಅಭಿಯಾನ ಆರಂಭವಾಗಲಿದ್ದು, ನಾಗರಿಕರು ತಮ್ಮ ಬಡಾವಣೆಗಳಲ್ಲಿ ಸಸಿಗಳನ್ನು ನೆಡಲು ಆಗಸ್ಟ್ 10ರೊಳಗೆ ಮನವಿ ಸಲ್ಲಿಸಬಹುದು. ಪಾಲಿಕೆಯು ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ಸ್ಥಳಗಳಲ್ಲಿ ತಾನೇ ಸಸಿಗಳನ್ನು ನೆಡಲಿದೆ. ಈ ಅಭಿಯಾನದಡಿ 60 ಸಾವಿರ ಸಸಿ ನೆಡುವ ಗುರಿ ಹೊಂದಲಾಗಿದೆ.
07:20 AM (IST) Aug 02
06:59 AM (IST) Aug 02
ಬಹುನಿರೀಕ್ಷಿತ ಡಾ.ಕೆ.ಶಿವರಾಮ ಕಾರಂತ ಬಡಾವಣೆಯ ನಿವೇಶನಗಳಿಗೆ ಬಿಡಿಎ ಆಗಸ್ಟ್ 5ರಿಂದ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಈ ಬಡಾವಣೆಯಲ್ಲಿ ಭೂಮಿ ನೀಡಿದ ರೈತರಿಗೆ ಮತ್ತು ಸಾರ್ವಜನಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಪ್ರಾಧಿಕಾರ ಸಿದ್ಧತೆ ನಡೆಸಿದೆ.