LIVE NOW
Published : Jul 16, 2026, 07:12 AM ISTUpdated : Jul 16, 2026, 09:36 AM IST

Karnataka News Live: ಹೈಪ್ರೊಫೈಲ್ ಮರ್ಡರ್‌ಗೆ ಬೆಚ್ಚಿಬಿದ್ದ ಧಾರವಾಡ, ವೈದ್ಯ ಪತಿಗೆ ಅನಸ್ತೇಷಿಯಾ ಕೊಟ್ಟು ವೈದ್ಯೆ ಪತ್ನಿ ಕೊಂದಿರುವ ಶಂಕೆ!

ಸಾರಾಂಶ

ತೀರ್ಥಹಳ್ಳಿ: ಆಗುಂಬೆ ಘಾಟ್‌ ಮಾರ್ಗದ ಅಗಲೀಕರಣಕ್ಕೆ ಸಂಬಂಧಿಸಿ ತಾಂತ್ರಿಕ ತಜ್ಞರ ಅಭಿಪ್ರಾಯದ ಆಧಾರದಲ್ಲಿ ಕೇಂದ್ರ ಸರ್ಕಾರದ ತೀರ್ಮಾನ ಅಂತಿಮವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆಗುಂಬೆ ಮಾರ್ಗದ ಅಗಲೀಕರಣ ಮತ್ತು ಸುರಂಗ ಮಾರ್ಗ ನಿರ್ಮಾಣ ಎರಡಕ್ಕೂ ಅವಕಾಶವಿದ್ದು, ರಾಜ್ಯ ಸರ್ಕಾರದ ಪೂರ್ಣ ಸಹಕಾರವೂ ಇದೆ. ಅಂತಿಮ ತೀರ್ಮಾನ ಕೇಂದ್ರ ಸರ್ಕಾರದ್ದು ಎಂದರು. 

ಹುಲಿಕಲ್ ಘಾಟಿಯ ಬಗ್ಗೆ ಪ್ರತಿಕ್ರಿಯಿಸಿ, ಹುಲಿಕಲ್ ಘಾಟಿಯ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಕಾರು ಮತ್ತು ಪ್ರಯಾಣಿಕರ ಬಸ್ಸುಗಳಿಗೆ ಅನುಮತಿ ನೀಡಲಾಗಿದೆ. ಉಳಿದಂತೆ ಭಾರಿ ವಾಹನಗಳ ಸಂಚಾರದ ಬಗ್ಗೆ ತೀರ್ಮಾನ ತೆಗೆದುಕೊಂಡಿಲ್ಲ ಎಂದರು.

09:36 AM (IST) Jul 16

ಹೈಪ್ರೊಫೈಲ್ ಮರ್ಡರ್‌ಗೆ ಬೆಚ್ಚಿಬಿದ್ದ ಧಾರವಾಡ, ವೈದ್ಯ ಪತಿಗೆ ಅನಸ್ತೇಷಿಯಾ ಕೊಟ್ಟು ವೈದ್ಯೆ ಪತ್ನಿ ಕೊಂದಿರುವ ಶಂಕೆ!

ಧಾರವಾಡದ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ, ನೇತ್ರತಜ್ಞೆ ಡಾ. ಪ್ರಿಯಾಂಕಾ ತನ್ನ ಪತಿ, ಅರವಳಿಕೆ ತಜ್ಞ ಡಾ. ಕಿರಣ್ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾಳೆ. ಈ ಕೃತ್ಯವನ್ನು ಮುಚ್ಚಿಹಾಕಲು ತನ್ನ 8 ವರ್ಷದ ಮಗನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದು, ಸದ್ಯ ಮಗು ಸಾವು-ಬದುಕಿನ ನಡುವೆ ಹೋರಾಡುತ್ತಿದೆ.

Read Full Story

09:29 AM (IST) Jul 16

Belagavi - ಜುಲೈ 22ರಿಂದ 28ರವರೆಗೆ ಹಲವು ರೈಲುಗಳು ಭಾಗಶಃ ರದ್ದು, ಸಂಚಾರದಲ್ಲಿ ಬದಲಾವಣೆ,

ಲೊಂಡಾ ರೈಲು ನಿಲ್ದಾಣದಲ್ಲಿ ಇಂಜಿನಿಯರಿಂಗ್ ಕಾಮಗಾರಿಯಿಂದಾಗಿ ಜು.22ರಿಂದ 28ರವರೆಗೆ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಮಿರಜ್-ಲೊಂಡಾ ಮತ್ತು ಮಿರಜ್-ಕ್ಯಾಸಲ್ ರಾಕ್ ಮಾರ್ಗದ ನಾಲ್ಕು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದ್ದು, ಕೆಲವು ರೈಲುಗಳು ವಿಳಂಬವಾಗಿ ಸಂಚರಿಸಲಿವೆ.
Read Full Story

09:25 AM (IST) Jul 16

ರಾಯಚೂರಲ್ಲಿ ದಾರುಣ ಘಟನೆ.. ಬೀದಿ ನಾಯಿಗಳ ದಾಳಿಗೆ ಒಂದೂವರೆ ವರ್ಷದ ಕಂದಮ್ಮ ಬಲಿ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ ಪರಿಣಾಮ 18 ತಿಂಗಳ ಮಗು ಸಾವನ್ನಪ್ಪಿದೆ. ಮನೆಯಿಂದ ಹೊರಬಂದ ಮಗುವಿನ ಮೇಲೆ ಚಿಕನ್ ಅಂಗಡಿ ಬಳಿ ಜಮಾಯಿಸಿದ್ದ ನಾಯಿಗಳು ದಾಳಿ ಮಾಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮಗು ಕೊನೆಯುಸಿರೆಳೆದಿದೆ.
Read Full Story

08:56 AM (IST) Jul 16

Hubballi - 1909ರಲ್ಲಿ 13 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಶತಮಾನ ಕಂಡ ಶಾಲೆಗೆ ಹೊಸ ರೂಪ

115 ವರ್ಷಗಳ ಇತಿಹಾಸ ಹೊಂದಿರುವ ಹಳೇಹುಬ್ಬಳ್ಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ. 19, ಇದೀಗ ₹2.50 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡದೊಂದಿಗೆ ಆಧುನಿಕ ರೂಪ ಪಡೆಯಲು ಸಜ್ಜಾಗಿದೆ. ಸಿದ್ಧಾರೂಢರು ಅಡಿಗಲ್ಲು ಹಾಕಿದ್ದ ಈ ಶಾಲೆಯು, ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 12 ಕೊಠಡಿಗಳುಳ್ಳ ಸ್ಮಾರ್ಟ್‌ ಶಾಲೆಯಾಗಿ ಅಭಿವೃದ್ಧಿ ಹೊಂದಲಿದೆ.
Read Full Story

08:40 AM (IST) Jul 16

ಹಗ್ಗವೇ ಸೇತುವೆ - ಬಾಐನೆಕಿದು ಗ್ರಾಮದ ಬಾಣೂರಿನ BLO ಕರ್ತವ್ಯನಿಷ್ಠೆ; ಮೂರು ಮನೆಗಾಗಿ ಸಾಹಸ

ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಬಾಣೂರು ಪ್ರದೇಶದಲ್ಲಿ, ಮತಗಟ್ಟೆ ಮಟ್ಟದ ಅಧಿಕಾರಿಗಳು ರಸ್ತೆ ಸಂಪರ್ಕವಿಲ್ಲದ ಮೂರು ಮನೆಗಳನ್ನು ತಲುಪಲು ಹಗ್ಗದ ಮೂಲಕ ಹೊಳೆ ದಾಟಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕಾಗಿ, ಅನಾರೋಗ್ಯಪೀಡಿತ ಮತದಾರರೂ ಸೇರಿದಂತೆ ಎಲ್ಲರ ವಿವರಗಳನ್ನು ಖಚಿತಪಡಿಸಿಕೊಳ್ಳಲು ಅವರು ಈ ಸಾಹಸಮಯ ಕರ್ತವ್ಯವನ್ನು ನಿರ್ವಹಿಸಿದರು.
Read Full Story

07:56 AM (IST) Jul 16

ಪತಿ ವಿರುದ್ಧವೇ 9 ಕೇಸ್‌ ದಾಖಲಿಸಿದ ಪತ್ನಿ - ಗಂಡನ 'ಬದುಕು ಜಟಕಾಬಂಡಿ' ಕಥೆ!

ಇಂಗ್ಲೆಂಡ್‌ನಿಂದ ಮರಳಿದ ಪತಿಯು ತನ್ನ ಮನೆಗೆ ಪ್ರವೇಶಿಸಿದ್ದಕ್ಕೆ ಪತ್ನಿ ಅತಿಕ್ರಮ ಪ್ರವೇಶದ ದೂರು ದಾಖಲಿಸಿದ್ದಾರೆ. ಇದು ಪತ್ನಿ ದಾಖಲಿಸಿದ 9ನೇ ಪ್ರಕರಣವಾಗಿದ್ದು, ಈ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ತನ್ನದೇ ಮನೆಗೆ ಪ್ರವೇಶಿಸಿದ್ದಕ್ಕೆ ಪತಿಯ ಮೇಲೆ ಅತಿಕ್ರಮ ಪ್ರವೇಶದ ಕೇಸ್ ಹಾಕಲಾಗದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
Read Full Story

07:36 AM (IST) Jul 16

BDA - ಕಾರಂತ ಬಡಾವಣೆಯಲ್ಲಿ ಸೈಟ್‌ ಬೇಕಿದ್ದರೆ ಜುಲೈ ಒಳಗೆಯೇ ಅರ್ಜಿ ಹಾಕಿ, ಬೆಲೆ ಎಷ್ಟು?

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಹೈಕೋರ್ಟ್‌ ಅನುಮತಿಯ ನಂತರ ಡಾ. ಶಿವರಾಮ ಕಾರಂತ ಬಡಾವಣೆಯ ನಿವೇಶನಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲು ಸಿದ್ಧತೆ ನಡೆಸಿದೆ. ಜುಲೈ ಅಂತ್ಯದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸ್ವೀಕಾರ ಆರಂಭವಾಗಲಿದ್ದು, ಭೂಮಾಲೀಕರು, ಕಂದಾಯ ನಿವೇಶನದಾರರು ಹಾಗೂ ಸಾರ್ವಜನಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯು ಪಾರದರ್ಶಕತೆಗಾಗಿ ಸಾಫ್ಟ್‌ವೇರ್‌ ಮೂಲಕ ನಡೆಯಲಿದೆ.
Read Full Story

07:34 AM (IST) Jul 16

ಸ್ತ್ರೀಯರ ಒಳ ಉಡುಪು ರಾತ್ರಿ ಕದ್ದು ಮತ್ತೆ ತಂದಿಡುತ್ತಿದ್ದ ಸೈಕೋ ಡೆಲವರಿ ಬಾಯ್ ಅರೆಸ್ಟ್!

ಮನೆ ಹೊರಗೆ ಒಣ ಹಾಕುತ್ತಿದ್ದ ಒಳ ಉಡುಪುಗಳನ್ನು ರಾತ್ರಿ ಕಳವು ಮಾಡುತ್ತಿದ್ದ ಕಿಡಿಗೇಡಿಯೊಬ್ಬನನ್ನು ಇಬ್ಬರು ಯುವತಿಯರು ಪತ್ತೆ ಹಚ್ಚಿ ಇಂದಿರಾನಗರ ಠಾಣೆ ಪೊಲೀಸರಿಗೆ ಹಿಡಿದು ಕೊಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Read Full Story

More Trending News