LIVE NOW
Published : Sep 14, 2026, 06:58 AM ISTUpdated : Sep 14, 2026, 07:47 AM IST

Karnataka News Live: IAS Officer - ವರ್ಗಾವಣೆಯಾದ ಒಂದೇ ದಿನಕ್ಕೆ ವಾಪಸ್ ಆದ ಸೆಸ್ಕ್ ಎಂಡಿ MS ಅರ್ಚನಾ!

ಸಾರಾಂಶ

ಬೆಂಗಳೂರು: ಆರೆಸ್ಸೆಸ್‌ನಂಥ ನೂರು ಸಂಘಟನೆಗಳು ಬಂದರೂ ಈ ದೇಶ ಹಾಳು ಮಾಡಲು ಸಾಧ್ಯವಿಲ್ಲ. ಯಾಕೆಂದರೆ, ಇಲ್ಲಿರುವ ಹಿಂದುಳಿದ, ದಲಿತ, ಅಲ್ಪಸಂಖ್ಯಾತರು ಈ ದೇಶದ ಆತ್ಮವಿದ್ದಂತೆ. ಅವರು ಈ ದೇಶ ಕಾಯುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಆರೆಸ್ಸೆಸ್‌ ಎಂದರೆ ರೂಮರ್ ಸ್ಪ್ರೆಡಿಂಗ್ ಸಂಘ. ನಾವೆಲ್ಲ ದಕ್ಷಿಣ ಭಾರತೀಯರು ಪುಣ್ಯವಂತರು, ಮಹಾರಾಷ್ಟ್ರದಲ್ಲಿ ಅಂಬೇಡ್ಕರ್, ಕರ್ನಾಟಕದಲ್ಲಿ ಬಸವಣ್ಣ, ಕೇರಳದಲ್ಲಿ ನಾರಾಯಣಗುರು, ತಮಿಳುನಾಡಿನಲ್ಲಿ ಪೆರಿಯಾರ್ ಸೇರಿ ಹಲವು ಸಾಮಾಜಿಕ ಹರಿಕಾರರು ಹುಟ್ಟಿ ದಕ್ಷಿಣ ಭಾರತ ರಕ್ಷಿಸಿದ್ದಾರೆ ಎಂದರು. ಮಹಾತ್ಮ ಗಾಂಧಿ ಅವರನ್ನು ನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದಾಗ ಸರ್ದಾರ್ ವಲ್ಲಭಬಾಯಿ ಪಟೇಲ್ ಆರೆಸ್ಸೆಸ್‌ ಸಂಘಟನೆಯನ್ನು ಪ್ರಥಮ ಬಾರಿಗೆ ನಿಷೇಧಿಸಿದರು. ಈಗ ಪ್ರಧಾನಿ ಮೋದಿ ಪಟೇಲ್ ಪ್ರತಿಮೆ ಸ್ಥಾಪಿಸಿ ಅವರಿಗೆ ಅರ್ಪಿಸಿದ್ದಾರೆ. ಅಂದರೆ ಮೋದಿ ಅವರಿಗೂ ಈ ಸಂಘಟನೆ ನಿಷೇಧಿಸಿದ್ದು ಸರಿ ಅಂತ ಅನಿಸಿದೆ ಎಂದು ವ್ಯಂಗ್ಯವಾಡಿದರು.

07:47 AM (IST) Sep 14

IAS Officer - ವರ್ಗಾವಣೆಯಾದ ಒಂದೇ ದಿನಕ್ಕೆ ವಾಪಸ್ ಆದ ಸೆಸ್ಕ್ ಎಂಡಿ MS ಅರ್ಚನಾ!

ಸೆಸ್ಕ್ ಎಂಡಿ ಹುದ್ದೆಯಿಂದ ವರ್ಗಾವಣೆಗೊಂಡಿದ್ದ ಐಎಎಸ್ ಅಧಿಕಾರಿ ಎಂ.ಎಸ್. ಅರ್ಚನಾ, ಕಾನೂನು ಸಂಘರ್ಷದ ಮೂಲಕ ಒಂದೇ ದಿನದಲ್ಲಿ ಮರಳಿ ಅಧಿಕಾರ ಸ್ವೀಕರಿಸಿದ್ದಾರೆ. ಎನ್. ಚಂದ್ರಶೇಖರ್ ಅವರು ಮೈಸೂರಿಗೆ ಬಂದು ಅಧಿಕಾರ ಸಹ ಸ್ವೀಕರಿಸಿದ್ದರು.

Read Full Story

07:30 AM (IST) Sep 14

ಕೇಳಿದ್ದು 40, ಸಿಕ್ಕಿದ್ದು 100 - ಮಂಡ್ಯ ಜಿಲ್ಲೆಗೆ ಬಂಪರ್ ಕೊಡುಗೆ ನೀಡಿದ ಭೈರತಿ ಸುರೇಶ್

ಸಾರಿಗೆ ಸಚಿವ ಭೈರತಿ ಸುರೇಶ್ ಅವರು ಮಂಡ್ಯ ಜಿಲ್ಲೆಗೆ 100 ಹೊಸ ಬಸ್‌ಗಳನ್ನು ಶೀಘ್ರದಲ್ಲೇ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ. ರಾಜ್ಯಾದ್ಯಂತ 1 ಸಾವಿರ ಹೊಸ ಬಸ್‌ಗಳ ಖರೀದಿ ಹಾಗೂ ಬಸ್ ನಿಲ್ದಾಣಗಳ ಉನ್ನತೀಕರಣಕ್ಕೂ ಸರ್ಕಾರ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

Read Full Story

07:21 AM (IST) Sep 14

Bengaluru - ಉಮರ್‌ ಖಾಲಿದ್‌ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ತಾತ್ಕಾಲಿಕ ಮುಂದೂಡಿಕೆ

ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ (ಎನ್‌ಎಲ್‌ಎಸ್‌ಐಯು) ಉಮರ್ ಖಾಲಿದ್ ಕುರಿತ ‘ಪ್ರಿಸನರ್ ನಂ. 626710’ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಎಬಿವಿಪಿ ವಿರೋಧದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಲಾಗಿದೆ.

Read Full Story

More Trending News