Published : Jun 14, 2025, 06:56 AM ISTUpdated : Jun 14, 2025, 11:23 PM IST

Karnataka News Live: ರಾಯಚೂರು ಯೂತ್ ಕಾಂಗ್ರೆಸ್ ಕ್ರಿಕೆಟ್ ಟೂರ್ನಿಯಲ್ಲಿ ಅಜರುದ್ದೀನ್; ಗ್ಯಾರಂಟಿಗೆ ಶ್ಲಾಘನೆ, ಐಪಿಎಲ್-ಏರ್ ಇಂಡಿಯಾ ದುರಂತಕ್ಕೆ ವಿಷಾದ

ಸಾರಾಂಶ

ನವದೆಹಲಿ : ‘ಕೇಂದ್ರೀಯ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಹೀಗಾಗಿ ದೇಶದ ಒಕ್ಕೂಟ ವ್ಯವಸ್ಥೆ ಬಲಪಡಿಸಿ, ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸಬೇಕು’ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಅಲ್ಲದೆ, ’ಕರ್ನಾಟಕಕ್ಕೆ ನಮ್ಮ ಪಾಲಿನ ತೆರಿಗೆಯ ನ್ಯಾಯಯುತ ಪಾಲನ್ನು ಕೊಡಿ’ ಎಂದು ಒತ್ತಾಯಿಸಿದ್ದಾರೆ. ದೆಹಲಿಯಲ್ಲಿ ಶುಕ್ರವಾರ ನಡೆದ 16ನೇ ಹಣಕಾಸು ಆಯೋಗದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 

11:23 PM (IST) Jun 14

ರಾಯಚೂರು ಯೂತ್ ಕಾಂಗ್ರೆಸ್ ಕ್ರಿಕೆಟ್ ಟೂರ್ನಿಯಲ್ಲಿ ಅಜರುದ್ದೀನ್; ಗ್ಯಾರಂಟಿಗೆ ಶ್ಲಾಘನೆ, ಐಪಿಎಲ್-ಏರ್ ಇಂಡಿಯಾ ದುರಂತಕ್ಕೆ ವಿಷಾದ

ರಾಯಚೂರಿನಲ್ಲಿ ಯೂತ್ ಕಾಂಗ್ರೆಸ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ ಮಾಜಿ ಕ್ರಿಕೆಟಿಗ ಅಜರುದ್ದೀನ್, ಕಾಂಗ್ರೆಸ್ ಗ್ಯಾರಂಟಿಗಳನ್ನು ಶ್ಲಾಘಿಸಿದರು, ಐಪಿಎಲ್ ದುರಂತ ಮತ್ತು ಏರ್ ಇಂಡಿಯಾ ದುರಂತದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
Read Full Story

10:50 PM (IST) Jun 14

ಇನ್ಮುಂದೆ ಜನ್ಮದಲ್ಲಿ 'ಅದನ್ನ' ತೋರಿಸಲ್ಲ, ಬಿಡ್ರಪ್ಪೋ... ಹೆಂಗಸರ ಧರ್ಮದೇಟಿಗೆ ಮುದುಕನ ಸ್ಥಿತಿ ನೋಡಿ!

ರೈಲಿನಲ್ಲಿ ವೃದ್ಧನೊಬ್ಬ ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ವೇಳೆ ಅಲ್ಲಿನ ಮಹಿಳೆಯರು ಮಾಡಿದ್ದೇನು ನೋಡಿ! ಮಹಿಳೆಯರ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರ...

 

Read Full Story

10:31 PM (IST) Jun 14

ಬಾರ್ಬಿ ಬಳಿಕ ಜಗತ್ತನ್ನು ಆವರಿಸಿದ Labubu - ವೈರಲ್‌ ಟಾಯ್‌ನಿಂದ ಚೀನಾದ 10ನೇ ಶ್ರೀಮಂತ ವ್ಯಕ್ತಿಯಾದ ಲಬುಬು ಮಾಲೀಕ!

ಚೇಷ್ಟೆಯ ನೋಟದ ಲಬುಬು ಗೊಂಬೆಗಳು ರೋಹಿತ್ ಶರ್ಮಾ ಅವರಂತಹ ಕ್ರಿಕೆಟಿಗರಿಂದ ಹಿಡಿದು ಜಾಗತಿಕ ತಾರೆಯರವರೆಗೆ ಎಲ್ಲರನ್ನೂ ಆಕರ್ಷಿಸಿವೆ. ಈ ಗೊಂಬೆಗಳ ಜನಪ್ರಿಯತೆಯು ಅವುಗಳ ತಯಾರಕ ಪಾಪ್ ಮಾರ್ಟ್‌ಗೆ ಅಪಾರ ಲಾಭ ತಂದುಕೊಟ್ಟಿದೆ, ಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹೊಸ ಹವಾ ಸೃಷ್ಟಿಸಿದೆ.
Read Full Story

09:56 PM (IST) Jun 14

ಮನೆ ಹೊರಗೆ ಹೊಂಚುಹಾಕಿ ದಾಳಿ ಮಾಡಿದ ಚಿರತೆ; ಪ್ರಾಣಾಪಾಯದಿಂದ ಯುವಕ ಜಸ್ಟ್ ಮಿಸ್!

ಉತ್ತರ ಕನ್ನಡ ಜಿಲ್ಲೆಯ ಉಲಗದ್ದೆ ಗ್ರಾಮದಲ್ಲಿ ಚಿರತೆ ದಾಳಿ ನಡೆಸಿ ಯುವಕನಿಗೆ ಗಾಯಗೊಳಿಸಿದೆ. ಮನೆಯೊಳಗೆ ಅವಿತಿದ್ದ ಚಿರತೆ ಯುವಕನ ಮೇಲೆ ದಾಳಿ ಮಾಡಿದ್ದು, ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
Read Full Story

09:50 PM (IST) Jun 14

ಮದುವೆ ಸಿದ್ಧವಾಗಿದ್ದವಳು, ಮಸಣ ಸೇರಿದಳು - ವಿಮಾನ ದುರಂತದಲ್ಲಿ ಮೃತಪಟ್ಟ ಗಗನಸಖಿಯ ಮನೆಯಲ್ಲಿ ಶೋಕ!

ಲಂಡನ್‌ಗೆ ಹೊರಟಿದ್ದ ವಿಮಾನ ದುರಂತದಲ್ಲಿ ಗಗನಸಖಿ ರೋಶ್ನಿ ಸಾವನ್ನಪ್ಪಿದ್ದಾರೆ. ಮದುವೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಈ ದುರಂತ ಸಂಭವಿಸಿದೆ. ಕುಟುಂಬದವರ ಆಕೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
Read Full Story

09:34 PM (IST) Jun 14

ಅಮೆರಿಕದ ಪೌರತ್ವದಿಂದ ಸಂಜಯ್ ಕಪೂರ್ ಪಾರ್ಥೀವ ಶರೀರ ಭಾರತಕ್ಕೆ ತರಲು ಕಾನೂನು ತೊಡಕು!

ಉದ್ಯಮಿ ಸಂಜಯ್ ಕಪೂರ್ ಪೋಲೋ ಪಂದ್ಯದ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜೇನುನೊಣ ನುಂಗಿದ್ದೇ ಸಾವಿಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದ್ದು, ಅಮೆರಿಕದ ಪೌರತ್ವ ಹೊಂದಿರುವ ಕಾರಣ ಅಂತ್ಯಕ್ರಿಯೆ ವಿಳಂಬವಾಗುವ ಸಾಧ್ಯತೆಯಿದೆ.
Read Full Story

08:44 PM (IST) Jun 14

ಮಧ್ಯಪ್ರಾಚ್ಯ ಸಂಘರ್ಷ, ಇಸ್ರೇಲಲ್ಲಿ ಸಿಲುಕಿದ ಕಾಂಗ್ರೆಸ್ ವಕ್ತಾರ ನಟರಾಜ್ ಗೌಡ ಸೇರಿ 19 ಕನ್ನಡಿಗರು

ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ವಿಮಾನ ಹಾರಾಟಗಳು ಸ್ಥಗಿತಗೊಂಡ ಪರಿಣಾಮ, ಅಧ್ಯಯನ ಪ್ರವಾಸಕ್ಕೆ ತೆರಳಿದ್ದ 19 ಮಂದಿ ಕನ್ನಡಿಗರು ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಭಾರತೀಯ ವಿದೇಶಾಂಗ ಇಲಾಖೆ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸ್ಥಳೀಯ ಭಾರತೀಯರೊಂದಿಗೆ ನಿರಂತರ ಸಂಪರ್ಕದಲ್ಲಿದೆ.
Read Full Story

08:22 PM (IST) Jun 14

ಕೆಡೆಂಜೊಡಿತ್ತಾಯಿ ದೈವ ನುಡಿದಂತೆ 27 ದಿನಕ್ಕೆ ಜೈಲಿನಿಂದ ಬಿಡುಗಡೆಯಾದ ಜನಾರ್ಧನ ರೆಡ್ಡಿ!

ಕಡಬ ತಾಲೂಕಿನ ಸವಣೂರು ಗ್ರಾಮದ ಅರೇಲ್ತಾಡಿ ಶ್ರೀ ಉಲ್ಲಾಕ್ಳು, ಕೆಡೆಂಜೊಡಿತ್ತಾಯಿ ದೇವಳದಲ್ಲಿ ನಡೆದ ನೇಮೋತ್ಸವದಲ್ಲಿ ದೈವ ನುಡಿದಂತೆ ಜನಾರ್ಧನ ರೆಡ್ಡಿ 27 ದಿನದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ದೈವವು 'ಒಂದು ತಿಂಗಳೊಳಗೆ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ' ಎಂದು ನುಡಿದಿತ್ತು.

Read Full Story

08:19 PM (IST) Jun 14

Bengaluru ಬಾಡಿಗೆ ಮನೆ ಗೋಳು - 1.5 ಲಕ್ಷ ಡೆಪಾಸಿಟ್‌ನಲ್ಲಿ 82 ಸಾವಿರ ಕಟ್‌ ಮಾಡಿದ ಮಾಲೀಕ!

ಶ್ರವಣ್ ಟಿಕೂ ಅವರು ಸರ್ಜಾಪುರ ರಸ್ತೆಯಲ್ಲಿರುವ 2BHK ಅಪಾರ್ಟ್‌ಮೆಂಟ್‌ನಲ್ಲಿ ಎರಡು ವರ್ಷ ವಾಸ ಮಾಡಿ ಬಳಿಕ ದೊಡ್ಡ ನಿವಾಸಕ್ಕೆ ತೆರಳಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಅವರ ಬಾಡಿಗೆ ಅವಧಿಯಲ್ಲಿ, ಅವರು ಎಂದಿಗೂ ಮನೆ ಮಾಲೀಕರೊಂದಿಗೆ ನೇರವಾಗಿ ಸಂವಹನ ನಡೆಸಲಿಲ್ಲ ಎಂದಿದ್ದಾರೆ.

 

Read Full Story

07:45 PM (IST) Jun 14

ಪದವಿ ಪರೀಕ್ಷೆ ನಡುವೆಯೇ PG ಪ್ರವೇಶ ಪರೀಕ್ಷೆ - ವಿದ್ಯಾರ್ಥಿಗಳ ಆಕ್ರೋಶ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪದವಿ ಪರೀಕ್ಷೆ ನಡೆಯುತ್ತಿರುವಾಗಲೇ ಎಂಬಿಎ ಮತ್ತು ಎಂಸಿಎ ಪ್ರವೇಶ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ. ಇದರಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಪರೀಕ್ಷೆ ಮುಂದೂಡುವಂತೆ ಒತ್ತಾಯಿಸುತ್ತಿದ್ದಾರೆ. 

Read Full Story

07:35 PM (IST) Jun 14

ಕುಖ್ಯಾತಿ ಗಳಿಸಿದ್ದ ಸೀಟ್​ ನಂಬರ್​ 11Aಗೆ ಭಾರಿ ಬೇಡಿಕೆ! 27 ವರ್ಷಗಳ ಹಿಂದೆಯೂ ನಡೆದಿತ್ತು ಪವಾಡ....

ವಿಮಾನದಲ್ಲಿ ಪ್ರಯಾಣಿಸುವಾಗ 11A ಸೀಟನ್ನು ಮಾತ್ರ ಬುಕ್​ ಮಾಡಬೇಡಿ ಎಂದೇ ಹೇಳಲಾಗುತ್ತಿತ್ತು. ಇದಕ್ಕೆ ಕಾರಣ ಏನು? ಈಗ ಅದೇ ಸೀಟಿಗೆ ಭಾರಿ ಡಿಮಾಂಡ್​ ಶುರುವಾಗಿದ್ದು 27 ವರ್ಷಗಳ ಹಿಂದೆ ನಡೆದ ಪವಾಡವೇನು?

 

Read Full Story

07:34 PM (IST) Jun 14

Breaking News - ಹಾಡುಹಗಲೇ ವೇಶ್ಯಾವಾಟಿಕೆ ದಂಧೆ; ಮುದ್ದೇಬಿಹಾಳ ಸಾಂಗವಿ ಲಾಡ್ಜ್ ಮೇಲೆ ಪೊಲೀಸರ ಯಶಸ್ವಿ ದಾಳಿ!

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಸಾಂಗವಿ ಬಾರ್ ಅಂಡ್ ಲಾಡ್ಜ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಬೇಧಿಸಿದ್ದಾರೆ. ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದ್ದು, ಕೆಲವು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ.
Read Full Story

07:34 PM (IST) Jun 14

ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಏರ್‌ ಇಂಡಿಯಾದಿಂದ 25 ಲಕ್ಷ ಪರಿಹಾರ

ಇದು ಟಾಟಾ ಸನ್ಸ್ ಈ ಹಿಂದೆ ಘೋಷಿಸಿದ ಪ್ರತಿ ವ್ಯಕ್ತಿಯ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರದ ಹೊರತಾಗಿ ಘೋಷಣೆ ಮಾಡಿರುವ ಮೊತ್ತವಾಗಿದೆ.

 

Read Full Story

07:31 PM (IST) Jun 14

ಪತ್ನಿ ಜೊತೆ ಗಲಾಟೆ ಮಾಡಿ ಶಾಂತವಾಗಲು 450 ಕಿ.ಮೀ. ನಡೆದ ವ್ಯಕ್ತಿ!

ಹೆಂಡತಿಯ ಜಗಳದಿಂದ ಮನನೊಂದ ಇಟಲಿ ವ್ಯಕ್ತಿಯೊಬ್ಬ 450 ಕಿ.ಮೀ. ನಡೆದು ಸುದ್ದಿಯಾದರು. ಲಾಕ್‌ಡೌನ್‌ ಉಲ್ಲಂಘನೆಗೆ ದಂಡ ವಿಧಿಸಲಾಯಿತಾದರೂ, ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
Read Full Story

07:14 PM (IST) Jun 14

ಕರ್ನಾಟಕದಲ್ಲಿ ಕನ್ನಡ ಮಾತನಾಡಿದ್ದಕ್ಕೆ ಕೆಲಸ ಕಳೆದುಕೊಂಡ ಏಕೈಕ ಉಪನ್ಯಾಸಕ ಇವರೇ ನೋಡಿ!

ಬೆಂಗಳೂರಿನ ಆರ್.ವಿ ಲರ್ನಿಂಗ್ ಹಬ್ ಕಾಲೇಜಿನಲ್ಲಿ ವಿದ್ಯಾರ್ಥಿಗೆ ಕನ್ನಡದಲ್ಲಿ ಉತ್ತರಿಸಿದ್ದಕ್ಕೆ ಉಪನ್ಯಾಸಕರನ್ನು ಅಮಾನತು ಮಾಡಲಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸ ಕಳೆದುಕೊಂಡ ಉಪನ್ಯಾಸಕ ಆರುಣ್ ವಿಡಿಯೋ ಹಂಚಿಕೊಂಡಿದ್ದಾರೆ.

Read Full Story

07:11 PM (IST) Jun 14

ಫಾಲ್ಕನ್‌ ರಾಕೆಟ್‌ನಲ್ಲಿ ಲೀಕ್‌ - ಬಾಹ್ಯಾಕಾಶದಲ್ಲಿ ಆಗಲಿದ್ದ ಮಹಾದುರಂತ ತಪ್ಪಿಸಿದ ಇಸ್ರೋ!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರ ಸೂಚನೆಯ ನಂತರ ಈ ದೋಷವನ್ನು ಗಮನಿಸಲಾಗಿದೆ.

 

Read Full Story

07:06 PM (IST) Jun 14

world blood donor day 2025 - ಬರೋಬ್ಬರಿ 108 ಬಾರಿ ರಕ್ತದಾನ ಮಾಡಿದ ಮಹಾದಾನಿ ಎಸ್‌ಬಿಐ ದೇವಣ್ಣ!

ಬಳ್ಳಾರಿಯ ಬಿ. ದೇವಣ್ಣ ಅವರು 108 ಬಾರಿ ರಕ್ತದಾನ ಮಾಡಿ, 1000ಕ್ಕೂ ಹೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದಾರೆ. ತಮ್ಮ ಜೀವನವನ್ನು ಸಮಾಜಸೇವೆಗೆ ಅರ್ಪಿಸಿಕೊಂಡಿರುವ ಅವರು, ನಿರಂತರವಾಗಿ ರಕ್ತದಾನದ ಮಹತ್ವ ಸಾರುತ್ತಿದ್ದಾರೆ.
Read Full Story

06:28 PM (IST) Jun 14

ಹಾರಂಗಿ ಜಲಾಶಯ ಭರ್ತಿಗೆ ಕೇವಲ 7 ಅಡಿ ಬಾಕಿ, ಮುಂಜಾಗ್ರತೆಗೆ 4,000 ಕ್ಯೂಸೆಕ್ ನೀರು ನದಿಗೆ ಬಿಡುಗಡೆ

ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಹಾರಂಗಿ ಜಲಾಶಯವು ಬಹುತೇಕ ಭರ್ತಿಯಾಗಿದೆ. 2859 ಅಡಿ ಗರಿಷ್ಠ ಮಟ್ಟದ ಜಲಾಶಯಕ್ಕೆ 2852 ಅಡಿ ನೀರು ತುಂಬಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನಾಲ್ಕು ಕ್ರೆಸ್ಟ್ ಗೇಟ್‌ಗಳನ್ನು ತೆರೆದು ನೀರನ್ನು ಹರಿಬಿಡಲಾಗುತ್ತಿದೆ.
Read Full Story

06:00 PM (IST) Jun 14

ಏರ್‌ ಇಂಡಿಯಾ ವಿಮಾನ ಅಪಘಾತ, ದುರಂತದ 'ವೈರಲ್‌' ವಿಡಿಯೋ ಮಾಡಿದ್ದ 17 ವರ್ಷ ಆರ್ಯನ್‌ ಅಸಾರಿ ಹೇಳಿದ್ದೇನು?

ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದ ಭೀಕರ ದೃಶ್ಯವನ್ನು 17 ವರ್ಷದ ಆರ್ಯನ್ ಅಸಾರಿ ಸೆರೆಹಿಡಿದಿದ್ದಾರೆ. ವಿಮಾನವು ತನ್ನ ಮನೆಯ ಮೇಲೆ ಕಡಿಮೆ ಎತ್ತರದಲ್ಲಿ ಹಾರುತ್ತಿರುವುದನ್ನು ಗಮನಿಸಿದ ಅವರು, ಅದರ ವಿಡಿಯೋವನ್ನು ಚಿತ್ರೀಕರಿಸಿದರು.

Read Full Story

05:57 PM (IST) Jun 14

ಹೊಸ ಡಬಲ್ ಡೆಕ್ಕರ್ ಫ್ಲೈಓವರ್ ನಟ್-ಬೋಲ್ಟ್ ಬಿಚ್ಚಿದ ಮಕ್ಕಳು! ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು!

ಹೊಸ ಡಬಲ್ ಡೆಕ್ಕರ್ ಫ್ಲೈಓವರ್‌ನಲ್ಲಿ ಮಕ್ಕಳು ನಟ್ ಮತ್ತು ಬೋಲ್ಟ್‌ಗಳನ್ನು ತೆಗೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಕೃತ್ಯವು ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ.

Read Full Story

05:42 PM (IST) Jun 14

WTC Final - ಹರಿಣಗಳನ್ನು ಗೆಲ್ಲಿಸಿದ ಮಾರ್ಕ್‌ರಮ್, 7 ವರ್ಷದ ಹಿಂದೆಯೇ ಭವಿಷ್ಯ ನುಡಿದಿದ್ದ ವಿರಾಟ್ ಕೊಹ್ಲಿ!

ದಕ್ಷಿಣ ಆಫ್ರಿಕಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದು 27 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿದೆ. ಏಯ್ಡನ್ ಮಾರ್ಕ್‌ರಮ್ ಅವರ ಅದ್ಭುತ ಇನ್ನಿಂಗ್ಸ್ ಗೆಲುವಿನ ರೂವಾರಿ ಎನಿಸಿಕೊಂಡಿತು. ವಿರಾಟ್ ಕೊಹ್ಲಿ ಅವರ ಹಳೆಯ ಟ್ವೀಟ್ ಈಗ ವೈರಲ್ ಆಗುತ್ತಿದೆ.
Read Full Story

05:34 PM (IST) Jun 14

ಜೂನ್ 16ರಿಂದ ಕರ್ನಾಟಕದಲ್ಲಿ 1.2 ಲಕ್ಷ ಬೈಕ್ ಗಳು ರಸ್ತೆಗಿಳಿಯುವಂತಿಲ್ಲ!

ಬೈಕ್ ಟ್ಯಾಕ್ಸಿ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ವಿಭಾಗೀಯ ಪೀಠ ನಿರಾಕರಿಸಿದೆ. ಜೂನ್ 16ರಿಂದ ರಾಪಿಡೋ, ಓಲಾ, ಉಬರ್ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿಲ್ಲಿಸಬೇಕಾಗಿದೆ. ನಾಸ್ಕಾಮ್ ಸರ್ಕಾರಕ್ಕೆ ನಿಯಂತ್ರಣ ನೀತಿ ರೂಪಿಸಲು ಒತ್ತಾಯಿಸಿದೆ.
Read Full Story

05:34 PM (IST) Jun 14

ಬಿಎಂಟಿಸಿ ಬಸ್ ಡ್ರೈವರ್‌ಗೆ ಚಪ್ಪಲಿಯಿಂದ ಹೊಡೆದ ಮಹಿಳಾ ಟೆಕ್ಕಿ! ಸಿಲ್ಲಿ ಕಾರಣಕ್ಕೆ ಇದೆಲ್ಲಾ ಬೇಕಿತ್ತಾ?

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಚಾಲಕರೊಬ್ಬರ ಮೇಲೆ ಮಹಿಳಾ ಪ್ರಯಾಣಿಕರೊಬ್ಬರು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಬಸ್ ನಿಲ್ದಾಣವಲ್ಲದ ಸ್ಥಳದಲ್ಲಿ ಬಸ್ ನಿಲ್ಲಿಸಲು ಚಾಲಕ ನಿರಾಕರಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.
Read Full Story

05:28 PM (IST) Jun 14

195 ಆಶಾ ಮೆಂಟರ್‌ಗಳ ಕೆಲಸಕ್ಕೆ ಕುತ್ತು; ಸೇವೆಯಿಂದ ಮುಕ್ತಗೊಳಿಸಿದ ಸರ್ಕಾರ!

ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 195 ಆಶಾ ಕಾರ್ಯಕರ್ತೆಯರ ಮಾರ್ಗದರ್ಶಕರನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ. ಈ ಜವಾಬ್ದಾರಿಗಳನ್ನು ಇತರ ಆರೋಗ್ಯ ಅಧಿಕಾರಿಗಳು ನಿರ್ವಹಿಸಲಿದ್ದಾರೆ. 

Read Full Story

05:27 PM (IST) Jun 14

ವಿಮಾನ ದುರಂತದ ಬೆನ್ನಲ್ಲಿಯೇ AI-171 ಫ್ಲೈಟ್‌ ನಂಬರ್‌ಗೆ ವಿದಾಯ ಹೇಳಿದ ಏರ್‌ ಇಂಡಿಯಾ!

ಅಹಮದಾಬಾದ್‌ನಲ್ಲಿ 275 ಜೀವಗಳನ್ನು ಬಲಿ ಪಡೆದ ದುರಂತ ವಿಮಾನ ಅಪಘಾತದ ನಂತರ, ಏರ್ ಇಂಡಿಯಾ 'AI-171' ವಿಮಾನ ಸಂಖ್ಯೆಯನ್ನು ಸ್ಥಗಿತಗೊಳಿಸಿದೆ. ಪ್ರಯಾಣಿಕರಿಗೆ ಹಿಂದಿನ ಯಾವ ನೆನಪುಗಳು ಕಾಡಬಾರದು ಎನ್ನುವ ಪ್ರಯತ್ನದ ಭಾಗವಾಗಿ ಈ ನಿರ್ಧಾರ.
Read Full Story

05:15 PM (IST) Jun 14

ದಕ್ಷಿಣ ಆಫ್ರಿಕಾಗೆ ಟೆಸ್ಟ್ ವಿಶ್ವಕಪ್ ಗೆಲ್ಲಿಸಿಕೊಟ್ಟ ಮಾರ್ಕ್‌ರಮ್! ಚೋಕರ್ಸ್ ಪಟ್ಟಕ್ಕೆ ಗೇಟ್‌ಪಾಸ್

ಲಾರ್ಡ್ಸ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಸೋಲಿಸಿ ಚೊಚ್ಚಲ ಪ್ರಶಸ್ತಿ ಜಯಿಸಿದೆ. ಏಯ್ಡನ್ ಮಾರ್ಕ್‌ರಮ್ ಅವರ ಶತಕ ಮತ್ತು ತೆಂಬಾ ಬವುಮಾ ಅವರ ಅರ್ಧಶತಕವು ಹರಿಣಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.
Read Full Story

04:46 PM (IST) Jun 14

ಏರ್‌ ಇಂಡಿಯಾ ಪ್ರಯಾಣಿಕರು ಮಾತ್ರವಲ್ಲ, ಬಿಜೆ ಹಾಸ್ಟೆಲ್‌ ಮೃತರಿಗೂ ಟಾಟಾದಿಂದ 1 ಕೋಟಿ ಪರಿಹಾರ!

ಅಹಮದಾಬಾದ್‌ನ ಏರ್ ಇಂಡಿಯಾ ಡ್ರೀಮ್‌ಲೈನರ್ ಅಪಘಾತದಲ್ಲಿ ಮೃತಪಟ್ಟ 275 ಜನರಿಗೆ ಟಾಟಾ ಗ್ರೂಪ್ ₹1 ಕೋಟಿ ಪರಿಹಾರ ಘೋಷಿಸಿದೆ. ವಿಮಾನ ಪ್ರಯಾಣಿಕರು ಮತ್ತು ಬಿಜೆ ಹಾಸ್ಟೆಲ್‌ನಲ್ಲಿ ಮೃತಪಟ್ಟವರಿಗೆ ಈ ಪರಿಹಾರ ಅನ್ವಯಿಸುತ್ತದೆ. ಗಾಯಾಳುಗಳ ವೈದ್ಯಕೀಯ ವೆಚ್ಚವನ್ನು ಸಹ ಭರಿಸಲಾಗುವುದು.
Read Full Story

04:27 PM (IST) Jun 14

ಆ್ಯಪಲ್ ಐಫೋನ್‌ಗಳು ಭಾರತದಿಂದ ಅಮೆರಿಕಾಗೆ ರಫ್ತು ಆಗ್ತಿದೆ; ಥ್ರಿಲ್‌ ಕೊಡೋ ಈ ಸುದ್ದಿ ಗೊತ್ತಿಲ್ವಾ ಇನ್ನೂ...!?

ರಾಯಿಟರ್ಸ್ ವರದಿಯ ಪ್ರಕಾರ, ಮಾರ್ಚ್ ಮತ್ತು ಮೇ 2025 ರ ನಡುವೆ, ಆ್ಯಪಲ್‌ನ ಪ್ರಾಥಮಿಕ ಪೂರೈಕೆದಾರ ಫಾಕ್ಸ್‌ಕಾನ್ ಭಾರತದಲ್ಲಿ ಜೋಡಿಸಿದ ಸುಮಾರು 97% ಐಫೋನ್‌ಗಳನ್ನು USಗೆ ರವಾನಿಸಲಾಗಿದೆ.
Read Full Story

04:24 PM (IST) Jun 14

ಮೊದಲ‌ ಮಗುವಿನ ನಿರೀಕ್ಷೆಯಲ್ಲಿ ನನ್ನರಸಿ ರಾಧೆ ನಟಿ... ಬೇಬಿ ಬಂಪ್ ಫೋಟೋ ಶೂಟ್ ವೈರಲ್

ನನ್ನರಸಿ ರಾಧೆ ಸೀರಿಯಲ್ ನಲ್ಲಿ ನಟಿಸಿ ಜನಪ್ರಿಯತೆ ಪಡೆದ ನಟಿ ಕೌಸ್ತುಭ ಮಣಿ ತಮ್ಮ ಬೇಬಿ ಬಂಪ್ ಫೋಟೊ ಶೂಟ್ ಶೇರ್ ಮಾಡಿದ್ದಾರೆ.

 

Read Full Story

04:18 PM (IST) Jun 14

ಚಾಮರಾಜಪೇಟೆಯಲ್ಲಿ ₹1.57 ಕೋಟಿ ಕದ್ದ ಕೇರ್ ಟೇಕರ್ ಉಮಾ; ಮನೆ ಕೆಲಸಕ್ಕೆ ಸೇರಿಸಿಕೊಳ್ಳೋ ಮುನ್ನ ಎಚ್ಚರ!

ಚಾಮರಾಜಪೇಟೆಯಲ್ಲಿ ಕೇರ್‌ಟೇಕರ್ ಒಬ್ಬರು ₹1.57 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣವನ್ನು ಕದ್ದಿದ್ದಾರೆ. ಆರೋಪಿ ಉಮಾಳನ್ನು ಬಂಧಿಸಲಾಗಿದ್ದು, ₹60 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
Read Full Story

04:03 PM (IST) Jun 14

ಬೋಯಿಂಗ್‌ನಲ್ಲಿ ದೋಷ , ಕಾನೂನು ಹೋರಾಟಕ್ಕಿಳಿದ ನೌಕರ ಗುಂಡೇಟಿಗೆ ಬಲಿ! ವಿಸ್ಲ್‌ಬ್ಲೋವರ್‌ಗಳ ಆತಂಕ ನಿಜವೇ?

ಅಹಮದಾಬಾದ್‌ನಲ್ಲಿ ಸಂಭವಿಸಿದ ಬೋಯಿಂಗ್ 787-8 ಡ್ರೀಮ್‌ಲೈನರ್ ಅಪಘಾತವು ವಿಮಾನದ ಸುರಕ್ಷತೆ ಬಗ್ಗೆ ವಿಸ್ಲ್‌ಬ್ಲೋವರ್‌ಗಳು ವ್ಯಕ್ತಪಡಿಸಿದ್ದ ಆತಂಕಗಳನ್ನು ಮತ್ತೆ ಬೆಳಕಿಗೆ ತಂದಿದೆ.  ಲೋಪಗಳು ಮತ್ತು ತಾಂತ್ರಿಕ ದೋಷಗಳ ಬಗ್ಗೆ ಮಾಜಿ ಮತ್ತು ಪ್ರಸ್ತುತ ಉದ್ಯೋಗಿಗಳು ಎಚ್ಚರಿಕೆ ನೀಡಿದ್ದು ಚರ್ಚೆಯಾಗುತ್ತಿದೆ. 

Read Full Story

03:59 PM (IST) Jun 14

Airbus vs Boeing - ಜಗತ್ತಿನ ಎರಡು ದೈತ್ಯ ವಿಮಾನ ನಿರ್ಮಾಣ ಕಂಪನಿಗಳ ನಡುವಿನ ವ್ಯತ್ಯಾಸವೇನು?

ಲಂಡನ್‌ಗೆ ಹೋಗುತ್ತಿದ್ದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾಯಿತು. ಬೋಯಿಂಗ್ ಮತ್ತು ಏರ್‌ಬಸ್ ನಡುವೆ ವಿಮಾನ ನಿರ್ಮಾಣದಲ್ಲಿ ಭಾರೀ ವ್ಯತ್ಯಾಸವಿದೆ. ಅದನ್ನು ಇಲ್ಲಿ ನೋಡೋಣ.

Read Full Story

03:31 PM (IST) Jun 14

NEET UG 2025 ಫಲಿತಾಂಶ - ರಾಜಸ್ಥಾನದ ವಿದ್ಯಾರ್ಥಿ ಟಾಪರ್, ಕರ್ನಾಟಕದ ನಿಖಿಲ್‌ಗೆ 17 ರ‍್ಯಾಂಕ್

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) NEET UG 2025ರ ಫಲಿತಾಂಶವನ್ನು ಪ್ರಕಟಿಸಿದೆ. ರಾಜಸ್ಥಾನದ ಮಹೇಶ್ ಕುಮಾರ್ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. 12.36 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.
Read Full Story

03:29 PM (IST) Jun 14

WTC Final ಚಾಂಪಿಯನ್ ತಂಡಕ್ಕೆ ಸಿಗುವ ನಗದು ಬಹುಮಾನ ಇಷ್ಟೊಂದಾ? ರನ್ನರ್‌-ಅಪ್‌ಗೆ ಸಿಗುವ ನಗದು ಬಹುಮಾನ ಎಷ್ಟು?

ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಭರ್ಜರಿಯಾಗಿ ಸಾಗುತ್ತಿದ್ದು, ನಾಲ್ಕನೇ ದಿನದಾಟದಲ್ಲಿಯೇ ಫಲಿತಾಂಶ ಹೊರಬೀಳುವುದು ದಟ್ಟವಾಗಿದೆ. ಚಾಂಪಿಯನ್‌ ತಂಡಕ್ಕೆ, ರನ್ನರ್ ಅಪ್ ತಂಡಕ್ಕೆ ಹಾಗೂ ಮೂರು ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ಐಸಿಸಿಯಿಂದ ಸಿಗುವ ನಗದು ಬಹುಮಾನವೆಷ್ಟು ನೋಡೋಣ

 

Read Full Story

02:02 PM (IST) Jun 14

ನಾನು ಇನ್ಯಾವತ್ತೂ ಏರ್‌ ಇಂಡಿಯಾ ಹತ್ತೊಲ್ಲ - ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್!

ಜೂನ್ 12 ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಪತನವಾಗಿ ಭೀಕರ ದುರಂತ ಸಂಭವಿಸಿದೆ. ಡೇವಿಡ್ ವಾರ್ನರ್ ಈ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೈಲಟ್‌ನ ಸಮಯಪ್ರಜ್ಞೆಯಿಂದ ಸಾವಿರಾರು ಜನರ ಪ್ರಾಣ ಉಳಿದಿದೆ.
Read Full Story

01:34 PM (IST) Jun 14

NEET UG 2025 - MBBS ಅಷ್ಟೇ ಅಲ್ಲ, ಇನ್ನು 9 ಕೋರ್ಸ್‌ಗಳಿವೆ!

NEET UG 2025 ರಿಸಲ್ಟ್: MBBS ಜೊತೆಗೆ ಬೇರೆ ಕೋರ್ಸ್‌ಗಳು ಇವೆ. BSc ನರ್ಸಿಂಗ್, BPharm, BDS, BAMS ಇತ್ಯಾದಿ ಆಯ್ಕೆಗಳು ನಿಮ್ಮ ವೈದ್ಯಕೀಯ ವೃತ್ತಿಜೀವನಕ್ಕೆ ಹೊಸ ದಿಕ್ಕು ತೋರಿಸಬಹುದು. ಇಂತಹ ಅದ್ಭುತ ಕೋರ್ಸ್‌ಗಳು, ವೃತ್ತಿ ಮತ್ತು ಸಂಬಳದ ವಿವರಗಳನ್ನು ತಿಳಿದುಕೊಳ್ಳಿ.

Read Full Story

01:31 PM (IST) Jun 14

ಕ್ಯಾನ್ಸರ್ ಪೀಡಿತ ವಸತಿ ಶಾಲೆ ಆರಂಭಕ್ಕೆ ಸಿದ್ದತೆ - ಸಚಿವ ಮಧು ಬಂಗಾರಪ್ಪ ಹೇಳಿದಿಷ್ಟು?

ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಉಚಿತ ಆರೋಗ್ಯ ಸೌಲಭ್ಯದ ಜೊತೆಗೆ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಕ್ಯಾನ್ಸರ್ ಪೀಡಿತ ವಸತಿ ಶಾಲೆಯನ್ನು ತೆರೆಯಲು ಯೋಜನೆ ರೂಪಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

Read Full Story

01:12 PM (IST) Jun 14

ಆದಿ ದ್ರಾವಿಡ ಹಾಸ್ಟೆಲ್‌ನಲ್ಲಿ ಉಪಹಾರ ಸೇವಿಸಿ 30 ವಿದ್ಯಾರ್ಥಿನಿಯರು ಅಸ್ವಸ್ಥ

ತಂಜಾವೂರು ಜಿಲ್ಲೆಯ ಪಟ್ಟುಕೊಟ್ಟೈನಲ್ಲಿರುವ ಸರ್ಕಾರಿ ಆದಿ ದ್ರಾವಿಡ ಬಾಲಕಿಯರ ಹಾಸ್ಟೆಲ್‌ನಲ್ಲಿ ಉಪಾಹಾರ ಸೇವಿಸಿದ ಬಳಿಕ ಸುಮಾರು 30 ವಿದ್ಯಾರ್ಥಿನಿಯರು ಅಸ್ವಸ್ಥರಾದರು. ಫುಡ್‌ ಪಾಯಿಸನ್ ಆಗಿ ಈ ಘಟನೆ ನಡೆದಿದ್ದು, ಅವರನ್ನು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.  

Read Full Story

01:04 PM (IST) Jun 14

ಅಪ್ಪನ ಕನಸು ನನಸಾಗಲಿಲ್ಲ… ವಧುವಿಗೆ ಮದುವೆ ಆಗದೇ ಎಂಡ್ ಆಗೋಯ್ತು ಡಿವೋರ್ಸ್ ಲಾಯರ್ ಕಥೆ!

ಮಗಳ ಮದುವೆಯ ಕನಸು ಕಂಡು ವಧು ಅಂತ ಹೆಸರಿಟ್ಟ ಅಪ್ಪನ ಕಥೆಯಿಂದ ಆರಂಭವಾದ ವಧು ಸೀರಿಯಲ್ ವಧುವಿನ ಮದುವೆಯಾಗದೇ, ತರಾತುರಿಯಲ್ಲಿ ಮುಕ್ತಾಯಗೊಂಡಿದೆ.

 

Read Full Story

12:28 PM (IST) Jun 14

ಹೆರಿಗೆ ಆಗ್ತಿದ್ದಂತೆ ಮಗು ಬಿಟ್ಟು ಪರಾರಿಯಾದ 19ರ ತಾಯಿ; ಅಮ್ಮನಿಗಾಗಿ ಹಂಬಲಿಸುತ್ತಿರೋ ಕಂದಮ್ಮ!

ಟೀ ಕುಡಿದು ಬರುವುದಾಗಿ ಹೇಳಿ ಹೋದ ಯುವತಿ ವಾಪಸ್ ಬಾರದೆ ಇರುವುದು ಆಸ್ಪತ್ರೆಯ ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ. ಸುಳ್ಳು ಮಾಹಿತಿ ನೀಡಿ ದಾಖಲಾಗಿದ್ದ ಯುವತಿಯನ್ನು ಪೊಲೀಸರು ಹುಡುಕುತ್ತಿದ್ದಾರೆ.

Read Full Story

More Trending News