Published : Feb 14, 2026, 06:54 AM ISTUpdated : Feb 14, 2026, 10:34 PM IST

Karnataka News Live: ಸೆಟ್​ನಲ್ಲಿ ಚಪ್ಪಲಿ ಬದಲಿಸಿದ ಸಿಬ್ಬಂದಿಗೆ ನಟಿ Megha Shetty ಮಾಡಿದ್ದೇನು? ವಿಡಿಯೋ ವೈರಲ್​

ಸಾರಾಂಶ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ ಇಳಿಕೆಯ ಪರ್ವ ಮುಂದುವರೆದಿದೆ. ಶುಕ್ರವಾರ ಒಂದೇ ದಿನ ಬೆಳ್ಳಿ ಕೇಜಿಗೆ 15,000 ರು. ಕುಸಿತ ಕಂಡು ಗ್ರಾಹಕರಿಗೆ ಸಂತಸ ಮೂಡಿಸಿದೆ. ಗುರುವಾರ 2.95 ಲಕ್ಷ ರು.ಗಳಷ್ಟಿದ್ದ ಕೆಜಿ ಬೆಳ್ಳಿ ದರ ಶುಕ್ರವಾರ 2,80,000ಕ್ಕೆ ಇಳಿದಿದೆ. ಇನ್ನು ಚಿನ್ನದ ಬೆಲೆಯಲ್ಲೂ ಇಳಿಕೆ ಕಂಡುಬಂದಿದೆ. 22 ಕ್ಯಾರೆಟ್‌ನ 1 ಗ್ರಾಂ ಚಿನ್ನ 240 ರು . ಕುಸಿದು 14,280 ರು., 24 ಕ್ಯಾರೆಟ್‌ನ ಚಿನ್ನ ಗ್ರಾಂಗೆ 262 ರು. ಇಳಿದು 15578 ರು.ಗೆ ತಲುಪಿದೆ.

Megha Shetty

10:34 PM (IST) Feb 14

ಸೆಟ್​ನಲ್ಲಿ ಚಪ್ಪಲಿ ಬದಲಿಸಿದ ಸಿಬ್ಬಂದಿಗೆ ನಟಿ Megha Shetty ಮಾಡಿದ್ದೇನು? ವಿಡಿಯೋ ವೈರಲ್​

'ಜೊತೆಜೊತೆಯಲಿ' ಖ್ಯಾತಿಯ ಮೇಘಾ ಶೆಟ್ಟಿ 'ಚೀತಾ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶೂಟಿಂಗ್ ವೇಳೆ ತಮ್ಮ ಚಪ್ಪಲಿ ಬದಲಿಸಿದ ಸಿಬ್ಬಂದಿಗೆ ನಮಸ್ಕರಿಸುವ ಮೂಲಕ ಅವರು ತೋರಿದ ವಿನಯವಂತಿಕೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

09:34 PM (IST) Feb 14

ಭೂತಾಯಿ ಮೀನಂತಿದ್ದೋಳು ಬಂಗಡೆ ಥರ ಆದ್ರೆ ಹೇಗೆ ಪ್ರಪೋಸ್​ ಮಾಡೋದು ಅನು ಡಿಯರ್​?

ಕಿರುತೆರೆಯಲ್ಲಿ ಬಹುಬೇಡಿಕೆಯ ಆ್ಯಂಕರ್ ಆಗಿರುವ ಅನುಶ್ರೀ, ತಮ್ಮ ನಿರರ್ಗಳ ಮಾತಿನಿಂದಲೇ ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ 'ಡಾನ್ಸ್ ಕರ್ನಾಟಕ ಡಾನ್ಸ್' ವೇದಿಕೆಯಲ್ಲಿ ಕೋರಿಯೋಗ್ರಫರ್ ಒಬ್ಬರು ಅವರನ್ನು 'ಬಂಗಡೆ ಮೀನು' ಎಂದು ಹಾಸ್ಯ ಮಾಡಿದ್ದು, ಈ ವಿಡಿಯೋ ವೈರಲ್ ಆಗಿದೆ.  

Read Full Story

09:23 PM (IST) Feb 14

ಗಾಂಧಾರಿ ನಟಿ ಕಾವ್ಯಾ ಗೌಡ, ಪತಿ ಸೋಮಶೇಖರ್‌ಗೆ ರಿಲೀಫ್‌ ನೀಡಿದ ಹೈಕೋರ್ಟ್‌!

Relief for Kavya Gowda: High Court Stays FIR & Probe in Family Dispute ಕೌಟುಂಬಿಕ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನಟಿ ಕಾವ್ಯ ಗೌಡ ಮತ್ತು ಅವರ ಪತಿ ಸೋಮಶೇಖರ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

Read Full Story

08:34 PM (IST) Feb 14

SIM Swap Fraud - ಈ 1 ತಪ್ಪಿನಿಂದ 1 ನಿಮಿಷದಲ್ಲೇ ಬ್ಯಾಂಕ್ ಖಾತೆ ಖಾಲಿ ಆಗಬಹುದು, ಬಚಾವಾಗೋದು ಹೇಗೆ?

ಇವತ್ತಿನ ದಿನಗಳಲ್ಲಿ ಸಿಮ್ ಕಾರ್ಡ್ ಕೇವಲ ಕಾಲ್-ಮೆಸೇಜ್‌ಗೆ ಮಾತ್ರ ಸೀಮಿತವಾಗಿಲ್ಲ. ಯುಪಿಐ, ಬ್ಯಾಂಕ್ ಒಟಿಪಿ, ಇಮೇಲ್, ಸೋಶಿಯಲ್ ಮೀಡಿಯಾ ಮತ್ತು ಮ್ಯಾಪ್ಸ್‌ಗೂ ಇದೇ ದಾರಿ. ಹಾಗಾಗಿಯೇ, ಸಿಮ್ ಕಾರ್ಡ್‌ಗೆ ಸಂಬಂಧಿಸಿದ ವಂಚನೆಗಳು ಹೆಚ್ಚುತ್ತಿವೆ. 'ಸಿಮ್ ಸ್ವಾಪ್ ಫ್ರಾಡ್' ನಿಂದ ಬಚಾವಾಗುವುದು ಹೇಗೆ ನೋಡಿ..

Read Full Story

07:15 PM (IST) Feb 14

ಬೆಂಗಳೂರು ರೇಸ್‌ಕೋರ್ಸ್‌ ಕುಣಿಗಲ್‌ಗೆ ಸ್ಥಳಾಂತರ, ಶಿಫ್ಟ್ ಆಗೋವರೆಗೆ ವರ್ಷಕ್ಕೆ ₹39 ಕೋಟಿ ಬಾಡಿಗೆ! ತೆರವಾದ ಜಾಗದಲ್ಲಿ ಮುಂದೇನು?

ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಬೆಂಗಳೂರು ಟರ್ಫ್ ಕ್ಲಬ್ ಅನ್ನು ಕುಣಿಗಲ್ ಸ್ಟಡ್ ಫಾರಂಗೆ ಸ್ಥಳಾಂತರಿಸಲು ರಾಜ್ಯ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಯೋಜನೆಯಂತೆ, 110.20 ಎಕರೆ ಜಮೀನನ್ನು 29 ವರ್ಷಗಳ ಗುತ್ತಿಗೆಗೆ ನೀಡಲಾಗಿದೆ.

Read Full Story

06:32 PM (IST) Feb 14

Mysuru - ಪುತ್ರ ಸಂತಾನದ ನೆನಪಿಗೆ ಒಡೆಯರ್ ನೀಡಿದ 11 ಕೆಜಿ ಬಂಗಾರದ ಮುಖವಾಡ; ತ್ರಿಣೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ

ಶಿವರಾತ್ರಿಯಂದು ಮೈಸೂರಿನ ತ್ರಿಣೇಶ್ವರ ದೇವಸ್ಥಾನದಲ್ಲಿ ಶಿವಲಿಂಗಕ್ಕೆ 11 ಕೆಜಿ ತೂಕದ ಅಪರಂಜಿ ಚಿನ್ನದ ಮುಖವಾಡವನ್ನು ಧಾರಣೆ ಮಾಡಲಾಗುತ್ತದೆ. ಜಯಚಾಮರಾಜೇಂದ್ರ ಒಡೆಯರ್ ಅವರು 1954ರಲ್ಲಿ ನೀಡಿದ ಈ ಮುಖವಾಡದ ದರ್ಶನವು ವರ್ಷಕ್ಕೊಮ್ಮೆ ಮಾತ್ರ ಲಭ್ಯವಿದೆ.

Read Full Story

06:32 PM (IST) Feb 14

ಬೆಂಗಳೂರಿನ ನಿವೃತ್ತ ನೇವಿ ಕ್ಯಾಪ್ಟನ್ ಹತ್ಯೆ ಪ್ರಕರಣ - ಹುಟ್ಟಿಸಿದ ತಂದೆ-ತಾಯಿಯನ್ನೇ ಕೊಂದವನ ಕೈಯಲ್ಲೇ ಅಂತ್ಯಸಂಸ್ಕಾರ!

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ತಂದೆ-ತಾಯಿಯನ್ನು ಹತ್ಯೆ ಮಾಡಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ ರೋಹನ್‌ ಚಂದ್ರ ಭಟ್, ಇದೀಗ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದಾನೆ. ಸಹೋದರಿಯ ಮನವಿಯ ಮೇರೆಗೆ ನ್ಯಾಯಾಲಯದ ಅನುಮತಿ ಪಡೆದು,  ಚಿತಾಗಾರಕ್ಕೆ ಬಂದು ವಿಧಿವಿಧಾನ  ಪೂರ್ಣಗೊಳಿಸಿದ್ದಾನೆ.

Read Full Story

05:50 PM (IST) Feb 14

ಹೊಸಕೋಟೆ ಭೀಕರ ಅಪಘಾತದ ಇಂಪ್ಯಾಕ್ಟ್, PWD-ನ್ಯಾಷನಲ್ ಹೈವೆ ಅಥಾರಿಟಿ-ಪೊಲೀಸರಿಂದ ಜಂಟಿ ಸರ್ವೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ-ದಾಬಸ್‌ಪೇಟೆ ಹೆದ್ದಾರಿಯಲ್ಲಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಆರು ವಿದ್ಯಾರ್ಥಿಗಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಒಂದೇ ಸ್ಥಳದಲ್ಲಿ ಪದೇ ಪದೇ ಅಪಘಾತಗಳಾಗುತ್ತಿರುವುದರಿಂದ ಪೊಲೀಸರು ಮತ್ತು ಹೈವೇ ಪ್ರಾಧಿಕಾರದ ಅಧಿಕಾರಿಗಳು ಜಂಟಿ ಸರ್ವೇ ನಡೆಸಿದ್ದಾರೆ.

Read Full Story

05:42 PM (IST) Feb 14

ಒಂದು ಸಿನಿಮಾ ಮಾಡಿ ಎಂಗೇಜ್‌ ಆದ 'ಗತವೈಭವ' ಹೀರೋ; ತುಮಕೂರು ರಾಜಕಾರಣದಲ್ಲ ಬೀಗರಾದ ಅಪ್ಪಂದಿರು!

ಗತವೈಭವ ಸಿನಿಮಾದ ನಟ ದುಷ್ಯಂತ್‌ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಅವರು ರಿಲೇಶನ್‌ಶಿಪ್‌ನಲ್ಲಿದ್ದಾರೆ ಎನ್ನುವ ಸುಳಿವು ಕೊಟ್ಟಿದ್ದರು. ಈಗ ಎಂಗೇಜ್‌ ಆಗಿರೋ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Read Full Story

05:27 PM (IST) Feb 14

ಜೀವ ಬೇಡವೆಂದೆನಿಸಿದರೂ ಬದುಕಬೇಕು ಅಂತೇಕೆ ಅನ್ಸುತ್ತೆ? ಪ್ರೀತಿ ಡೆಫಿನೇಷನ್ ಹೇಳಿದ ಕಿರಣ್ ರಾಜ್

'ಕರ್ಣ' ಸೀರಿಯಲ್ ಖ್ಯಾತಿಯ ನಟ ಕಿರಣ್ ರಾಜ್, ಪ್ರೀತಿಯ ಬಗ್ಗೆ ತಮ್ಮದೇ ವ್ಯಾಖ್ಯಾನ ನೀಡಿದ್ದಾರೆ. ಬದುಕೇ ಬೇಡವೆನಿಸಿದಾಗ ಉತ್ಸಾಹ ಮೂಡಿಸುವುದೇ ಪ್ರೀತಿ ಎಂದಿರುವ ಅವರ ಮಾತುಗಳು ವೈರಲ್ ಆಗಿವೆ.  

Read Full Story

05:18 PM (IST) Feb 14

ವಯಸ್ಸು 41 ಆಯ್ತು, ದಿನೇ ದಿನೇ ಮಾದಕ ಬೆಡಗಿಯಾಗಿ ಬದಲಾಗ್ತಿರೋ ಜ್ಯೋತಿ ರೈ; ಗುಟ್ಟು ಬಯಲಾಯ್ತು!

Actress Jyothi Rai Photos: ಕಿನ್ನರಿ ಸೇರಿದಂತೆ ಕನ್ನಡದ ಅನೇಕ ಧಾರಾವಾಹಿಗಳಲ್ಲಿ ಲೀಡ್‌ ಪಾತ್ರಗಳಲ್ಲಿ ನಟಿಸಿರುವ ಜ್ಯೋತಿ ರೈ ಸಣ್ಣಗಾಗಿ, ಈಗ ಸಿನಿಮಾದತ್ತ ಮುಖ ಮಾಡಿದ್ದಾರೆ. ಇಷ್ಟು ಚೆಂದ ಕಾಣಲು ಕಾರಣ ಏನು?

 

Read Full Story

04:48 PM (IST) Feb 14

ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದ ಕನ್ನಡಿಗ ನಿಗೂಢ ಕಣ್ಮರೆ, ಪಾರ್ಕ್ ಬಳಿ ಕೊನೆಯದಾಗಿ ಕಾಣಿಸಿಕೊಂಡಾತ ಎಲ್ಲಿ ಹೋದ?

ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ನಾಪತ್ತೆಯಾಗಿದ್ದಾರೆ. ಫೆಬ್ರವರಿ 12ರಂದು ಟಿಲ್ಡೆನ್ ರೀಜನಲ್ ಪಾರ್ಕ್ ಬಳಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಅವರ ಪತ್ತೆಗಾಗಿ ಸ್ಥಳೀಯ ಪೊಲೀಸ್ ಶೋಧ ಕಾರ್ಯ ನಡೆಸುತ್ತಿವೆ.

Read Full Story

04:45 PM (IST) Feb 14

ಏನ್‌ ಗೊತ್ತಾ? I LoveYou ಅಷ್ಟೇ...; ನಟಿ ರಚಿತಾ ರಾಮ್‌ ಪ್ರಪೋಸ್ ಮಾಡಾಯ್ತು, ಈ ವರ್ಷವೇ ಮದುವೆ!

ಕನ್ನಡದ ಅನೇಕ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ನಟಿಸಿರುವ ಡಿಂಪಲ್‌ ಕ್ವೀನ್‌ ಸಿನಿಮಾ ಖ್ಯಾತಿಯ ನಟಿ ರಚಿತಾ ರಾಮ್‌ ಅವರು ಈ ವರ್ಷ ಮದುವೆ ಆಗ್ತೀನಿ ಎಂದು ಅನೇಕ ಬಾರಿ ಹೇಳಿದ್ದರು. ಈಗ ಐ ಲವ್‌ ಯು ಎಂದು ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

 

Read Full Story

04:45 PM (IST) Feb 14

ವಂದೇ ಭಾರತ್‌ ಟ್ರೇನ್‌ ಟಾಯ್ಲೆಟ್‌ನಲ್ಲಿ ಬುಸ್‌ ಬುಸ್‌ ಎಂದ ಹಾವು, ಎದ್ನೋ ಬಿದ್ನೋ ಅಂತಾ ಓಡಿದ ಪ್ರಯಾಣಿಕರು!

Man Arrested for Leaving Snake in Vande Bharat Express Toilet ಸಿಸಿಟಿವಿ ದೃಶ್ಯ ಮತ್ತು ಸುಳಿವು ಆಧರಿಸಿದ ತನಿಖೆಯ ನಂತರ, ಫೆಬ್ರವರಿ 12 ರಂದು (ಗುರುವಾರ) ಮುಂಬ್ರಾದಲ್ಲಿ ನಾಸಿಕ್ ಜಿಲ್ಲೆಯ ಜಗನ್ ಅರ್ಜುನ್ ಭಲೆ ಎಂಬ ಆರೋಪಿಯನ್ನು ಬಂಧಿಸಲಾಯಿತು.

 

Read Full Story

04:18 PM (IST) Feb 14

ಬೆಂಗಳೂರು ಬೇಕರಿಯ ದುರಹಂಕಾರ - 2 ಸಾವಿರ ಟೇಬಲ್‌ ಚಾರ್ಜ್‌ ಪ್ರಶ್ನಿಸಿದ ಗ್ರಾಹಕನಿಗೆ 'ಬಡವ' ಎಂದು ನಿಂದಿಸಿದ ಸಿಬ್ಬಂದಿ!

Bask Bakery Koramangala Row: Customer Called 'Poor' Over Table Fee Query ಬೇಕರಿಯ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗೆ ಗ್ರಾಹಕರೊಬ್ಬರು ಕಾಮೆಂಟ್‌ ಮಾಡಿ ಅಲ್ಲಿನ ಅನುಭವವನ್ನು ಟೀಕಿಸಿದ್ದರು. ಅಲ್ಲಿನ 2 ಸಾವಿರ ರೂಪಾಯಿ ಟೇಬಲ್‌ ಶುಲ್ಕವನ್ನು ಅವರು ಪ್ರಶ್ನೆ ಮಾಡಿದ್ದಾರೆ.

 

Read Full Story

04:05 PM (IST) Feb 14

ಹೊಸಕೋಟೆ ದುರಂತ ಮಾಸುವ ಮುನ್ನವೇ ಆಂಧ್ರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ, ಯಾದಗಿರಿಯ ಶಿವನ ಭಕ್ತರ ಸಾವು!

ಶಿವರಾತ್ರಿ ಹಿನ್ನೆಲೆಯಲ್ಲಿ ಶ್ರೀಶೈಲಂಗೆ ತೆರಳುತ್ತಿದ್ದ ಯಾದಗಿರಿ ಜಿಲ್ಲೆಯ ಗೋಗಿ ಗ್ರಾಮದ ಮೂವರು ಭಕ್ತರು ಆಂಧ್ರಪ್ರದೇಶದ ಕಲಕುರ್ತಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.  ಕ್ರೂಸರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು  ಈ ದುರ್ಘಟನೆ ಸಂಭವಿಸಿದೆ. 

Read Full Story

03:39 PM (IST) Feb 14

ಕೊರಿಯನ್ ಗೇಮ್‌ನ ಸುಳಿಯಲ್ಲಿ ಸಾವಿಗೆ ಶರಣಾದ್ನಾ ಧಾರವಾಡದ ಬಾಲಕ, ಮೊಬೈಲ್ ಚೆಕ್ ಮಾಡಿದ ಪೊಲೀಸರು ಶಾಕ್!

ಧಾರವಾಡದಲ್ಲಿ 20 ವರ್ಷದ ಯುವಕನೊಬ್ಬ ನೇಣಿಗೆ ಶರಣಾಗಿದ್ದು, ಈ ಸಾವಿನ ಹಿಂದೆ ಕೊರಿಯನ್ ಗೇಮ್‌ಗಳ ಅತಿಯಾದ ವ್ಯಸನವಿರುವ ಶಂಕೆ ವ್ಯಕ್ತವಾಗಿದೆ. ಸಾವಿಗೂ ಮುನ್ನ 'ನನ್ನ ಸಾವಿಗೆ ನಾನೇ ಕಾರಣ' ಎಂದು ಸೆಲ್ಫ್ ಮೆಸೇಜ್ ಕಳುಹಿಸಿದ್ದ.

Read Full Story

03:02 PM (IST) Feb 14

ಆಸೀಸ್ ಸೋಲುತ್ತೆ ಅಂದಿದ್ದವನಿಂದ ಮತ್ತೊಂದು ಶಾಕಿಂಗ್ ಭವಿಷ್ಯ - ಭಾರತ-ಪಾಕ್ ಪಂದ್ಯದಲ್ಲಿ ಗೆಲ್ಲೋದ್ಯಾರು?

ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ-ಆಸ್ಟ್ರೇಲಿಯಾ ಪಂದ್ಯದ ಬಗ್ಗೆ ನಿಖರವಾಗಿ ಭವಿಷ್ಯ ನುಡಿದಿದ್ದ ವ್ಯಕ್ತಿಯೊಬ್ಬ, ಇದೀಗ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಭಾರತ ಸೋಲಲಿದೆ ಎಂದು ಹೇಳಿದ್ದಾನೆ. ಈತನ ಭವಿಷ್ಯವಾಣಿ ಆತಂಕ ಮೂಡಿಸಿದೆ.

Read Full Story

02:55 PM (IST) Feb 14

ಅರ್ಜುನ್ ಸರ್ಜಾ-ಆಶಾರಾಣಿ ಲವ್ ಸ್ಟೋರಿ ಸೀಕ್ರೆಟ್ ಗೊತ್ತಾ? ಇದು ತೀರಾ ಡಿಫ್ರಂಟ್ ಆಂಗಲ್..!

ಅರ್ಜುನ್ ಸರ್ಜಾ-ಆಶಾರಾಣಿ ಜೋಡಿ 1988 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ನಂತರ ಆಶಾ ರಾಣಿ ಗಂಡ, ಮನೆ ಮತ್ತು ಮಕ್ಕಳು ಅಂತ ತೊಡಗಿಸಿಕೊಂಡರು. ಇವರಿಗೆ ಐಶ್ವರ್ಯ ಮತ್ತು ಅಂಜನಾ ಅನ್ನುವ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಐಶ್ವರ್ಯ ಚಿತ್ರರಂಗದಲ್ಲಿ, ಅಂಜನಾ ಓದಿನಲ್ಲಿ ಬ್ಯುಸಿಯಾಗಿದ್ದಾರೆ.

Read Full Story

02:27 PM (IST) Feb 14

Maha Shivaratri 2026 - ಆರ್ಟ್ ಆಫ್ ಲಿವಿಂಗ್‌ನಲ್ಲಿ ಮಹಾಶಿವರಾತ್ರಿ ಸಂಭ್ರಮ - ಗುರುದೇವ ಸಮ್ಮುದಲ್ಲಿ ವಿಶೇಷ ಧ್ಯಾನಕ್ಕೆ ಸಜ್ಜಾಗಿ

ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಗುರುದೇವ ಶ್ರೀ ಶ್ರೀ ರವಿ ಶಂಕರರೊಂದಿಗೆ ಮಹಾಶಿವರಾತ್ರಿ ಮಹೋತ್ಸವ ನಡೆಯಲಿದ್ದು ರುದ್ರ ಪೂಜೆ, ಉತ್ಸವ ಮತ್ತು ಮಧ್ಯರಾತ್ರಿಯ ಧ್ಯಾನದಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಸ್ವಾಗತವಿದೆ. ಕಾರ್ಯಕ್ರಮದ ವಿವರ ಇಲ್ಲಿದೆ

Read Full Story

01:43 PM (IST) Feb 14

Vijayapur Election row - ಸುಪ್ರೀಂ ಅಂಗಳದಲ್ಲೂ ಯತ್ನಾಳ್‌ಗೆ ಜಯ; ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಹಮೀದ್ ಮುಶ್ರೀಫ್‌ಗೆ ಮುಖಭಂಗ

ವಿಜಯಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಆದೇಶದಿಂದ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್‌ಗೆ ಹಿನ್ನಡೆಯಾಗಿದೆ.

Read Full Story

01:36 PM (IST) Feb 14

ರಾಯಚೂರು - ರಾಷ್ಟ್ರ ಧ್ವಜ ಮತ್ತು ಭಗವದ್ಗೀತೆಗೆ ಚಪ್ಪಲಿ ಹಾಕಿ ಮೆಟ್ಟಿ ಅವಮಾನ, ಸ್ಟೇಟಸ್ ಶೋಕಿ ತೋರಿದ ಇಬ್ಬರು ಅರೆಸ್ಟ್

ರಾಯಚೂರಿನಲ್ಲಿ ರಾಷ್ಟ್ರ ಧ್ವಜ ಮತ್ತು ಭಗವದ್ಗೀತೆಗೆ ಚಪ್ಪಲಿಯಿಂದ ತುಳಿದು ವಾಟ್ಸಾಪ್ ಸ್ಟೇಟಸ್ ಹಾಕಿ ಅವಮಾನಿಸಿದ ಘಟನೆ ನಡೆದಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ನವಾಜ್ ಮತ್ತು ಸೋಹೆಲ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
Read Full Story

01:22 PM (IST) Feb 14

ಸಹನಟಿ, ಬದುಕಿಗೆ ಪ್ರೇಮ ರಶ್ಮಿಯಾದಳು! 14 ವರ್ಷದ ಪ್ರೀತಿಗೆ ಸದ್ಯದಲ್ಲೆ ಮದುವೆ ಬಂಧ - ಜೆ.ಪಿ. ತುಮಿನಾಡು

ಎಲ್ಲರ ಬದುಕಿನಲ್ಲಿ ಇರುವ ಹಾಗೆ ಶಾಲೆಯಲ್ಲಿ ಹುಡುಗಿಯ ಮೇಲೆ ಕ್ರಶ್ ಆಗುವುದು, ಗೆಳೆಯರೊಂದಿಗೆ ಆ ಬಗ್ಗೆ ಕಾಲೆಳೆಸಿಕೊಳ್ಳುವುದು ಇತ್ಯಾದಿ ಘಟ್ಟ ದಾಟಿದ ಮೇಲೆ ನಾನು ಲವ್‌ ಲೆಟರ್‌ ಬರೆಯಲು ಶುರು ಮಾಡಿದ್ದು. ಆದರೆ ಅದು ನನಗಲ್ಲ, ಸ್ನೇಹಿತರಿಗೆ.

Read Full Story

01:05 PM (IST) Feb 14

ಹಾಸನ - 30 ಲಕ್ಷದ ಒಡವೆ ಧರಿಸಿ ಮದುವೆಗೆ ಬಂದಿದ್ದ ಮಹಿಳೆ ಮಿಸ್ಸಿಂಗ್, ಸ್ಥಳದಲ್ಲಿ ಬ್ಯಾಗ್, ಒಳ ಉಡುಪು ಪತ್ತೆ!

ಚಿಕ್ಕಮಗಳೂರಿನ ಮದುವೆಗೆ ಬಂದಿದ್ದ ಪ್ರಿಯಾಂಕ ಎಂಬ ಮಹಿಳೆ ಬೇಲೂರಿನಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಸುಮಾರು 30 ಲಕ್ಷ ಮೌಲ್ಯದ ಚಿನ್ನಾಭರಣ ಧರಿಸಿದ್ದ ಆಕೆಯನ್ನು ಅಪಹರಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆಕೆಯ ಒಳ ಉಡುಪು ಹಾಗೂ ಬ್ಯಾಗ್ ಪತ್ತೆಯಾಗಿದೆ. ಪೊಲೀಸರ ವಿಳಂಬ ಧೋರಣೆಗೆ ಮಹಿಳೆ ಬಲಿ?

Read Full Story

12:54 PM (IST) Feb 14

ಚಿಕ್ಕಮಗಳೂರು - ಮಲೆನಾಡು ಭಾಗದಲ್ಲಿ ಆತಂಕ ಹುಟ್ಟಿಸಿದ್ದ ನಿಗೂಢ ಲಘು ವಿಮಾನ ಹಾರಾಟ, ಕೊನೆಗೂ ಸತ್ಯ ಗೊತ್ತಾಯ್ತು

ಚಿಕ್ಕಮಗಳೂರು ಮತ್ತು ಮಲೆನಾಡು ಭಾಗದಲ್ಲಿ ನಿರಂತರವಾಗಿ ಹಾರಾಡುತ್ತಿದ್ದ ಲಘು ವಿಮಾನ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾಡಳಿತ, ಇದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯು ನಡೆಸುತ್ತಿರುವ ಖನಿಜ ನಿಕ್ಷೇಪ ಪತ್ತೆಯ ವೈಜ್ಞಾನಿಕ ಸಮೀಕ್ಷೆಯಾಗಿದೆ.

Read Full Story

12:53 PM (IST) Feb 14

ಇವ್ರೇ ನನ್ನ ವ್ಯಾಲೆಂಟೈನ್; ಕನ್ನಡದ ಈ ಸೆಲೆಬ್ರಿಟಿಗಳು ಅಧಿಕೃತವಾಗಿ ಗುಡ್‌ನ್ಯೂಸ್‌ ಕೊಡೋದು ಯಾವಾಗ?

ಇಡೀ ನಾಡು ಪ್ರೇಮಿಗಳ ದಿನ ಖುಷಿಯಲ್ಲಿದೆ. ಅನೇಕರು ವಿಭಿನ್ನವಾಗಿ ಈ ದಿನವನ್ನು ಆಚರಿಸಿದ್ದರೆ, ಇನ್ನೂ ಕೆಲವರು ಪ್ರೀತಿಗೆ ಒಂದು ದಿನ ಎಂದಿಲ್ಲ. ದಿನವೂ ವ್ಯಾಲಂಟೈನ್ಸ್‌ ಡೇ ಎಂದು ಹೇಳೋದುಂಟು. ಅಂದಹಾಗೆ ಕನ್ನಡದ ಈ ಸೆಲೆಬ್ರಿಟಿಗಳು ಲವ್‌ನಲ್ಲಿದ್ದಾರೆ ಎನ್ನಲಾಗ್ತಿದೆ. ಅಧಿಕೃತವಾಗಿ ಹೇಳೋದು ಯಾವಾಗ?

Read Full Story

12:09 PM (IST) Feb 14

ಕಾಂಗ್ರೆಸ್ ಸರ್ಕಾರದಲ್ಲಿ 'ಸ್ವಾಮೀಜಿ'ಗೂ ಬಡ್ತಿ ಭಾಗ್ಯ! ಸರ್ಕಾರಿ ಅಧಿಕಾರಿಗಳ ಮಹಾ ಎಡವಟ್ಟು ಬಯಲು!

Promotion Bhagya for a Swamiji ರಾಜ್ಯ ಸರ್ಕಾರವು ಇತ್ತೀಚೆಗೆ 20 ಕೆಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಿದ್ದು, ಈ ಪಟ್ಟಿಯಲ್ಲಿ ಸ್ವಯಂ ನಿವೃತ್ತಿ ಪಡೆದು ಪೀಠಾಧಿಪತಿಯಾಗಿರುವ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರ ಹೆಸರೂ ಸೇರಿದೆ. 

Read Full Story

12:07 PM (IST) Feb 14

ಸುದೀಪ್ ಗೂಳಿ ಸಿನಿಮಾ ಹೀರೋಯಿನ್‌ಗೆ ಹಾರ್ಟ್ ಬ್ರೇಕ್ - ಎಂಗೇಜ್ಮೆಂಟ್ ಆದವನೊಂದಿಗೆ ಅದೆಲ್ಲಾ ಮಾಡ್ಬಿಟ್ಟೆ-ನಟಿ ಮಮತಾ!

ಬಹುಭಾಷಾ ನಟಿ ಮಮತಾ ಮೋಹನ್‌ದಾಸ್ ತಮ್ಮ ನೋವಿನ ಡೇಟಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ. ಕ್ಯಾನ್ಸರ್‌ನಿಂದ ಗುಣಮುಖರಾದ ನಂತರ, ಅವರು ಚಿತ್ರರಂಗದ ನಟನೊಬ್ಬನೊಂದಿಗೆ ಡೇಟಿಂಗ್ ಮಾಡಿದ್ದರು, ಆದರೆ ಆತ ತನ್ನ ನಿಶ್ಚಿತಾರ್ಥವನ್ನು ಮುಚ್ಚಿಟ್ಟು ನಂಬಿಕೆ ದ್ರೋಹ ಮಾಡಿದ್ದನು ಎಂದು ಬಹಿರಂಗಪಡಿಸಿದ್ದಾರೆ.

Read Full Story

11:51 AM (IST) Feb 14

ಬೆಂಗಳೂರಿನಲ್ಲಿ ಪಾನಿಪುರಿ ಮಾರಿ, ಹಾಸನದಲ್ಲಿ ಡುಪ್ಲೆಕ್ಸ್‌ ಮನೆ ಕಟ್ಟಿದ್ರು - ಪಾನಿಪುರಿ ನಿಲಯವೆಂದೇ ನಾಮಕರಣ

Pani Puri Seller Home: ಬೀದಿಯಲ್ಲಿ ವ್ಯಾಪಾರ ಮಾಡೋರು, ಸಾಫ್ಟ್‌ವೇರ್‌ ಇಂಜಿನಿಯರ್‌ಗಳಿಗಿಂತ ಹೆಚ್ಚು ಸಂಪಾದನೆ ಮಾಡುವ ಉದಾಹರಣೆ ಸಾಕಷ್ಟಿದೆ. ಹೀಗಿರುವಾಗ ಬೆಂಗಳೂರಿನಲ್ಲಿ ಪಾನಿಪುರಿ ಮಾರುವ ಈ ವ್ಯಕ್ತಿ ಶ್ರವಣಬೆಳಗೊಳದಲ್ಲಿ ಮನೆ ಕಟ್ಟಿದ್ದಾರೆ. ಸುಂದರ ವಿಡಿಯೋ ನೋಡಿ.‌ 

Read Full Story

11:43 AM (IST) Feb 14

ಮಾ.1ರಿಂದ ಸೇವೆ ಬಂದ್‌ ಸರ್ಕಾರಿ ವೈದ್ಯರಿಂದ ಎಚ್ಚರಿಕೆ

ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿ, ಖಾಲಿ ಹುದ್ದೆ ಭರ್ತಿ, ಸಮರ್ಪಕ ಔಷಧ ಪೂರೈಕೆ ಸೇರಿ ವಿವಿಧ ಬೇಡಿಕೆ ಈಡೇರಿಸದಿದ್ದರೆ ಮಾ.11 ರಿಂದ ಮಾ.15ರವರೆಗೆ ಹೊರ ರೋಗಿಗಳ ಸೇವೆ ನಿಲ್ಲಿಸಿ ಕೇವಲ ತುರ್ತು ಸೇವೆ ಮಾತ್ರ ಒದಗಿಸುವುದಾಗಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಎಚ್ಚರಿಕೆ ನೀಡಿದೆ.

Read Full Story

11:28 AM (IST) Feb 14

ಕಸ ವಿಂಗಡಿಸಿ ಅಂದಿದ್ದೇ ತಪ್ಪಾ? ದಾವಣಗೆರೆಯಲ್ಲಿ ಪೌರಕಾರ್ಮಿಕರ ಮೇಲೆ ಪುಂಡರ ಅಟ್ಟಹಾಸ!

ದಾವಣಗೆರೆಯ ಮೆಹಬೂಬ್ ನಗರದಲ್ಲಿ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ನೀಡುವಂತೆ ಕೇಳಿದ್ದಕ್ಕೆ ಪೌರಕಾರ್ಮಿಕ ಕರಿಬಸಪ್ಪ ಅವರ ಮೇಲೆ ಇಬ್ಬರು ಪುಂಡರು ಹಲ್ಲೆ ನಡೆಸಿದ್ದಾರೆ. ಈ ಘಟನೆಯನ್ನು ಖಂಡಿಸಿ ಸಹೋದ್ಯೋಗಿಗಳು ಪ್ರತಿಭಟನೆ ನಡೆಸಿದ ನಂತರ, ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನ.

Read Full Story

10:58 AM (IST) Feb 14

Shivamogga - ರೈತರನ್ನು ಒಕ್ಕಲೆಬ್ಬಿಸಲು ಬಿಡೋಲ್ಲ - ರಾಜ್ಯ ಸರ್ಕಾರದ ವಿರುದ್ಧ ಹರತಾಳು ಹಾಲಪ್ಪ ಕಿಡಿ

ಸಾಗರ ತಾಲೂಕಿನ ಎಡಮನೆ ಗ್ರಾಮದ 16 ಕುಟುಂಬಗಳ ತೆರವಿಗೆ ಅರಣ್ಯ ಇಲಾಖೆ ನೋಟಿಸ್ ನೀಡಿದೆ. ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಹರತಾಳು ಹಾಲಪ್ಪ, ಶರಾವತಿ ಸಂತ್ರಸ್ತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಭರವಸೆ ನೀಡಿ, ರಾಜ್ಯ ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
Read Full Story

10:44 AM (IST) Feb 14

ಮನೆಗೆ ಬಂದವ್ರಿಗೆ ನಾನು ಇದ್ದರೂ ಊಟ ಹಾಕಲ್ಲ - ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಗೆ ಇಂಥ ಬುದ್ಧಿ ಯಾಕೆ?

ಮನೆಗೆ ಅತಿಥಿಗಳು ಬಂದರೆ ಊಟ ಹಾಕಿ ಕಳುಹಿಸುವುದು ನಮ್ಮ ಸಂಪ್ರದಾಯ. ಆದರೆ, ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತ್ರ ತಮ್ಮ ಮನೆಗೆ ಬಂದವರಿಗೆ ಊಟ ಹಾಕುವುದಿಲ್ಲವಂತೆ. ಯಾಕೆ ಗೊತ್ತಾ?

 

Read Full Story

10:41 AM (IST) Feb 14

ಸಿಂಧನೂರು ಪೊಲೀಸರ ಭರ್ಜರಿ ಕಾರ್ಯಾಚರಣೆ, ದ್ಯಾವಮ್ಮ ದೇವಿಯ ಚಿನ್ನಾಭರಣ ಕದ್ದಿದ್ದವ ಅರೆಸ್ಟ್

ಸಿಂಧನೂರು ತಾಲೂಕಿನ ಹರೇಟನೂರು ದ್ಯಾವಮ್ಮ ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ದನಗಳ ಕೊಬ್ಬು ಕೆತ್ತುವ ನೆಪದಲ್ಲಿ ದೇವಸ್ಥಾನಗಳನ್ನು ಗುರುತಿಸುತ್ತಿದ್ದ ಖದೀಮನನ್ನು ಬಂಧಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ.
Read Full Story

10:31 AM (IST) Feb 14

ಜೈಲಿನಿಂದ ಹೊರ ಬರ್ತಾರಾ ದರ್ಶನ್? ಬರ್ತ್‌ಡೇಗೂ ಮುನ್ನ ಫ್ಯಾನ್ಸ್ ಮಾಡೋ ಆ ಕೆಲಸದಿಂದಾಗುತ್ತಾ ಪವಾಡ?

ದರ್ಶನ್ ಜೈಲಿನಿಂದ ಶೀಘ್ರದಲ್ಲೇ ಹೊರಬರಲಿ ಎಂದು ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ವಿಶೇಷ ಹೋಮ, ಹವನ ಹಾಗೂ ಪೂಜೆಗಳನ್ನು ಆಯೋಜಿಸಿದ್ದಾರೆ. ಜುಲೈ ಅಥವಾ ಆಗಸ್ಟ್‌ನಲ್ಲಿ ದರ್ಶನ್‌ಗೆ ಜಾಮೀನು ಸಿಗುವ ಸಾಧ್ಯತೆ ಇದೆ ಎಂದು ವಕೀಲರು ಹೇಳಿದ್ದು, ಅಭಿಮಾನಿಗಳ ಪ್ರಾರ್ಥನೆ ಫಲಿಸುತ್ತದೆಯೇ ಕಾದುನೋಡಬೇಕಿದೆ.

Read Full Story

10:08 AM (IST) Feb 14

ಮದುವೆ ಗುಸುಗುಸು ನಡುವೆ ಡಿನ್ನರ್ ಡೇಟ್ ಫೋಟೋ ಹಂಚಿಕೊಂಡ ನಮ್ರತಾ ಗೌಡ! ಯಾರು ಪ್ರಿಯಕರ?

ಕಿರುತೆರೆ ನಟಿ ನಮ್ರತಾ ಗೌಡ ತಮ್ಮ ಡಿನ್ನರ್ ಡೇಟ್ ಫೋಟೋವನ್ನು ಹಂಚಿಕೊಂಡಿದ್ದು, ಮದುವೆ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದ್ದಾರೆ. ಪ್ರೇಮಿಗಳ ದಿನದಂದು ಈ ಪೋಸ್ಟ್ ಹಾಕಿದ್ದರೂ, ತಮ್ಮ ಪ್ರಿಯಕರ ಯಾರೆಂಬುದನ್ನು ಅವರು ಬಹಿರಂಗಪಡಿಸಿಲ್ಲ, ಇದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
Read Full Story

09:48 AM (IST) Feb 14

ಪಿಯು - 2 ಪರೀಕ್ಷೆ - ಕೆಎಸ್ಸಾರ್ಟಿಸಿ ಬಸ್ಸಲ್ಲಿ ಫ್ರೀ ಪ್ರಯಾಣಕ್ಕೆ ಅವಕಾಶ-ಕೋರಿಕೆಯ ನಿಲುಗಡೆ ನೀಡಬೇಕು

ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಫೆ. 28ರಿಂದ ಮಾ. 17ರವರೆಗೆ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ. ರಾಜ್ಯದಲ್ಲಿ ಫೆ. 28ರಿಂದ ದ್ವಿತೀಯ ಪಿಯು ಪರೀಕ್ಷೆಗಳು ಆರಂಭವಾಗುತ್ತಿದೆ.

Read Full Story

09:26 AM (IST) Feb 14

₹5 Crore Bribe Scam - ನಕಲಿ ಪಿಐಡಿ ಸೃಷ್ಟಿಸಿ ಎ ಖಾತಾ - ನಾಲ್ವರು ಅಧಿಕಾರಿಗಳಿಗೆ ನೋಟಿಸ್

ಬೆಂಗಳೂರಿನ ಮಲ್ಲಸಂದ್ರದಲ್ಲಿ ಖಾಸಗಿ ಬಿಲ್ಡರ್‌ಗೆ ನಕಲಿ ಪಿಐಡಿ ಸಂಖ್ಯೆ ಸೃಷ್ಟಿಸಿ ಎ ಖಾತಾ ಮಾಡಿಕೊಟ್ಟ ಆರೋಪದ ಮೇಲೆ ಬಿಬಿಎಂಪಿ ಪಶ್ಚಿಮ ವಲಯದ ನಾಲ್ವರು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಎನ್.ಆರ್.ರಮೇಶ್ ನೀಡಿದ ದೂರಿನ ಅನ್ವಯ, 48 ಗಂಟೆಯೊಳಗೆ ಸಮಜಾಯಿಷಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ

Read Full Story

09:11 AM (IST) Feb 14

ಪ್ರಯಾಣಿಕರಿಗೆ ಗುಡ್ ನ್ಯೂಸ್! ಇನ್ಮುಂದೆ ಈ ರೈಲುಗಳಲ್ಲಿ ವಿಶೇಷ ಸೌಲಭ್ಯ! ಈ ಅವಕಾಶ ಮಿಸ್ ಮಾಡ್ಕೋಬೇಡಿ

ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಐಆರ್‌ಸಿಟಿಸಿ ಈಗ 25 ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಇ-ಪ್ಯಾಂಟ್ರಿ ಸೇವೆಗಳನ್ನು ಆರಂಭಿಸಿದೆ. ಇದರಿಂದ ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗ ಅಥವಾ ನಂತರ ಆನ್‌ಲೈನ್‌ನಲ್ಲಿ ತಮಗೆ ಬೇಕಾದ ಊಟ ಮತ್ತು ನೀರನ್ನು ಮುಂಚಿತವಾಗಿ ಬುಕ್ ಮಾಡಬಹುದು.

Read Full Story

09:10 AM (IST) Feb 14

ಸಿಲಿಕಾನ್‌ ಸಿಟಿಯಲ್ಲಿ ಕೋಟಿ ಗುಲಾಬಿ ಹೂವುಗಳ ಮಾರಾಟ

ಪ್ರೇಮಿಗಳ ದಿನಾಚರಣೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗಿದ್ದು, ಪ್ರೇಮಿಗಳ ದಿನದ ಪ್ರತೀಕವಾಗಿರುವ ಕೆಂಪು ಗುಲಾಬಿ ಹೂವುಗಳು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿವೆ. ಹೆಬ್ಬಾಳದ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದಲ್ಲಿ (ಐಫ್ಯಾಬ್) ಫೆ.1ರಿಂದ ಫೆ.13ರವರೆಗೆ ಒಂದು ಕೋಟಿ ಗುಲಾಬಿ ಹೂವುಗಳ ಮಾರಾಟವಾಗಿದೆ

Read Full Story

More Trending News