LIVE NOW
Published : Feb 14, 2026, 06:54 AM ISTUpdated : Feb 14, 2026, 09:26 AM IST

Karnataka News Live: ₹5 Crore Bribe Scam - ನಕಲಿ ಪಿಐಡಿ ಸೃಷ್ಟಿಸಿ ಎ ಖಾತಾ - ನಾಲ್ವರು ಅಧಿಕಾರಿಗಳಿಗೆ ನೋಟಿಸ್

ಸಾರಾಂಶ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ ಇಳಿಕೆಯ ಪರ್ವ ಮುಂದುವರೆದಿದೆ. ಶುಕ್ರವಾರ ಒಂದೇ ದಿನ ಬೆಳ್ಳಿ ಕೇಜಿಗೆ 15,000 ರು. ಕುಸಿತ ಕಂಡು ಗ್ರಾಹಕರಿಗೆ ಸಂತಸ ಮೂಡಿಸಿದೆ. ಗುರುವಾರ 2.95 ಲಕ್ಷ ರು.ಗಳಷ್ಟಿದ್ದ ಕೆಜಿ ಬೆಳ್ಳಿ ದರ ಶುಕ್ರವಾರ 2,80,000ಕ್ಕೆ ಇಳಿದಿದೆ. ಇನ್ನು ಚಿನ್ನದ ಬೆಲೆಯಲ್ಲೂ ಇಳಿಕೆ ಕಂಡುಬಂದಿದೆ. 22 ಕ್ಯಾರೆಟ್‌ನ 1 ಗ್ರಾಂ ಚಿನ್ನ 240 ರು . ಕುಸಿದು 14,280 ರು., 24 ಕ್ಯಾರೆಟ್‌ನ ಚಿನ್ನ ಗ್ರಾಂಗೆ 262 ರು. ಇಳಿದು 15578 ರು.ಗೆ ತಲುಪಿದೆ.

₹5 Crore Bribe Scam

09:26 AM (IST) Feb 14

₹5 Crore Bribe Scam - ನಕಲಿ ಪಿಐಡಿ ಸೃಷ್ಟಿಸಿ ಎ ಖಾತಾ - ನಾಲ್ವರು ಅಧಿಕಾರಿಗಳಿಗೆ ನೋಟಿಸ್

ಬೆಂಗಳೂರಿನ ಮಲ್ಲಸಂದ್ರದಲ್ಲಿ ಖಾಸಗಿ ಬಿಲ್ಡರ್‌ಗೆ ನಕಲಿ ಪಿಐಡಿ ಸಂಖ್ಯೆ ಸೃಷ್ಟಿಸಿ ಎ ಖಾತಾ ಮಾಡಿಕೊಟ್ಟ ಆರೋಪದ ಮೇಲೆ ಬಿಬಿಎಂಪಿ ಪಶ್ಚಿಮ ವಲಯದ ನಾಲ್ವರು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಎನ್.ಆರ್.ರಮೇಶ್ ನೀಡಿದ ದೂರಿನ ಅನ್ವಯ, 48 ಗಂಟೆಯೊಳಗೆ ಸಮಜಾಯಿಷಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ

Read Full Story

09:11 AM (IST) Feb 14

ಪ್ರಯಾಣಿಕರಿಗೆ ಗುಡ್ ನ್ಯೂಸ್! ಇನ್ಮುಂದೆ ಈ ರೈಲುಗಳಲ್ಲಿ ವಿಶೇಷ ಸೌಲಭ್ಯ! ಈ ಅವಕಾಶ ಮಿಸ್ ಮಾಡ್ಕೋಬೇಡಿ

ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಐಆರ್‌ಸಿಟಿಸಿ ಈಗ 25 ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಇ-ಪ್ಯಾಂಟ್ರಿ ಸೇವೆಗಳನ್ನು ಆರಂಭಿಸಿದೆ. ಇದರಿಂದ ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗ ಅಥವಾ ನಂತರ ಆನ್‌ಲೈನ್‌ನಲ್ಲಿ ತಮಗೆ ಬೇಕಾದ ಊಟ ಮತ್ತು ನೀರನ್ನು ಮುಂಚಿತವಾಗಿ ಬುಕ್ ಮಾಡಬಹುದು.

Read Full Story

09:10 AM (IST) Feb 14

ಸಿಲಿಕಾನ್‌ ಸಿಟಿಯಲ್ಲಿ ಕೋಟಿ ಗುಲಾಬಿ ಹೂವುಗಳ ಮಾರಾಟ

ಪ್ರೇಮಿಗಳ ದಿನಾಚರಣೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗಿದ್ದು, ಪ್ರೇಮಿಗಳ ದಿನದ ಪ್ರತೀಕವಾಗಿರುವ ಕೆಂಪು ಗುಲಾಬಿ ಹೂವುಗಳು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿವೆ. ಹೆಬ್ಬಾಳದ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದಲ್ಲಿ (ಐಫ್ಯಾಬ್) ಫೆ.1ರಿಂದ ಫೆ.13ರವರೆಗೆ ಒಂದು ಕೋಟಿ ಗುಲಾಬಿ ಹೂವುಗಳ ಮಾರಾಟವಾಗಿದೆ

Read Full Story

09:02 AM (IST) Feb 14

ವಿಜಯಪುರ-ಬೆಂಗಳೂರು ನಡುವಿನ ಬೈಪಾಸ್ ರೈಲು ಮಾರ್ಗಕ್ಕೆ ಆರಂಭದಲ್ಲಿಯೇ ಕೊಕ್ಕೆ? ಗದಗ ಜನರಿಂದ ಅಸ್ತಿತ್ವದ ವಾದ

ವಿಜಯಪುರ-ಬೆಂಗಳೂರು ನಡುವಿನ ಪ್ರಯಾಣದ ಸಮಯ ಕಡಿಮೆ ಮಾಡಲು, ರೈಲ್ವೆ ಇಲಾಖೆಯು ಗದಗ-ಹುಬ್ಬಳ್ಳಿ ಬೈಪಾಸ್ ಮಾರ್ಗದಲ್ಲಿ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಈ ಮಾರ್ಗಕ್ಕೆ ಆರಂಭದಲ್ಲಿಯೇ ಕೊಕ್ಕೆ ಬೀಳುವ ಸಾಧ್ಯತೆಗಳು ಕಂಡು ಬರುತ್ತಿವೆ.

Read Full Story

08:33 AM (IST) Feb 14

ಬೆಂಗಳೂರಿಗರ ಗಮನಕ್ಕೆ - ಇಂದು ನಗರದ ಈ ಏರಿಯಾಗಳಲ್ಲಿ 7 ಗಂಟೆಗಳ ಕಾಲ ಪವರ್ ಕಟ್!

Bengaluru Power Cut Today ಬೆಂಗಳೂರಿನಲ್ಲಿ ಬೆಸ್ಕಾಂ ಮತ್ತು ಕೆಪಿಟಿಸಿಎಲ್ ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ, ಇಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

Read Full Story

07:59 AM (IST) Feb 14

Pulwama Attack - ಪುಲ್ವಾಮಾ ದಾಳಿಗೆ 7 ವರ್ಷ - 40 ಯೋಧರ ಬಲಿದಾನ, ದೇಶ ಮರೆಯದ ಕರಾಳ ದಿನ

Pulwama Attack ಪುಲ್ವಾಮಾ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಯಾಗಿ ಭಾರತ ಬಾಲಾಕೋಟ್ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಹುತಾತ್ಮರಾದವರಲ್ಲಿ ಕೇರಳದ ವಯನಾಡಿನ ವಿ.ವಿ. ವಸಂತಕುಮಾರ್ ಕೂಡ ಒಬ್ಬರು.

Read Full Story

07:35 AM (IST) Feb 14

Hampi Utsav 2026 - 'ಚರಿತ್ರೆ ಗೊತ್ತಿದ್ದರಷ್ಟೇ ಚರಿತ್ರೆ ಸೃಷ್ಟಿಸಲು ಸಾಧ್ಯ' - ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೂರು ದಿನಗಳ ಹಂಪಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಇನ್ನು ಮುಂದೆ ಪ್ರತಿ ವರ್ಷ ನವೆಂಬರ್ 3, 4, ಮತ್ತು 5 ರಂದು ಹಂಪಿ ಉತ್ಸವವನ್ನು ನಡೆಸಲಾಗುವುದು ಎಂದು ಅವರು ಘೋಷಿಸಿದರು. ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸರ್ಕಾರದ ಪ್ರೋತ್ಸಾಹವಿದೆ ಎಂದರು

Read Full Story

07:34 AM (IST) Feb 14

ಬಿಪಿಎಲ್ ಕಾರ್ಡ್‌ದಾರರಿಗೆ ಸರ್ಕಾರದ ಸಿಹಿ ಸುದ್ದಿ - ಏನೆಲ್ಲಾ ಸಿಗುತ್ತೆ ?

ಸರ್ಕಾರದಿಂದ ಇಂದಿರಾ ಕಿಟ್ ನೀಡುವ ಯೋಜನೆ ಜಾರಿಗೊಳಿಸಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ತಿಂಗಳಲ್ಲಿ ಬೇಳೆ, ಸಕ್ಕರೆ, ಅಡುಗೆ ಎಣ್ಣೆ, ಉಪ್ಪು ಒಳಗೊಂಡ ಕಿಟ್ ನೀಡಲಾಗುವುದು

Read Full Story

07:15 AM (IST) Feb 14

ತಂದೆ-ತಾಯಿ ಕೊಂದ ಅಣ್ಣನೇ ಅಂತ್ಯಸಂಸ್ಕಾರ ಮಾಡಲಿ ಎಂದ ಸಹೋದರಿ!

ಬೆಂಗಳೂರಿನಲ್ಲಿ ಪುತ್ರನಿಂದಲೇ ಹತ್ಯೆಯಾದ ದಂಪತಿಯ ಮಗಳು ಅಮೆರಿಕಾದಿಂದ ಆಗಮಿಸಿದ್ದಾರೆ. ತಮ್ಮ ಪೋಷಕರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಆರೋಪಿ ಸಹೋದರನಿಗೆ ಅವಕಾಶ ನೀಡುವಂತೆ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

Read Full Story

More Trending News