ಬೆಂಗಳೂರು: ಅಧಿಕಾರ ಹಸ್ತಾಂತರದ ಗೊಂದಲಗಳ ನಡುವೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸದಾಶಿವನಗರದ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸೋಮವಾರ ಬೆಳಗ್ಗೆ ಶಿವಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದರು. ಇಬ್ಬರೂ ನಾಯಕರ ನಡುವೆ ನಡೆದ ಗೌಪ್ಯ ಚರ್ಚೆ ಏನು ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಆದರೂ ಅಧಿಕಾರ ಹಸ್ತಾಂತರ ಸೇರಿದಂತೆ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ಮಾಡಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

10:55 PM (IST) Jan 13
ಸಂಕ್ರಾಂತಿ ದಿನ ನಮ್ಮ ಮೆಟ್ರೋಗೆ ಮತ್ತೊಂದು ರೈಲು ಸೇರ್ಪಡೆ, ಮೆಟ್ರೋ ಪ್ರಯಾಣಕ್ಕೆ ಕಾಯಬೇಕಿಲ್ಲ. ಒಂದರ ಹಿಂದೆ ಒಂದರಂತೆ ಮೆಟ್ರೋ ರೈಲುಗಳು ಪ್ರಯಾಣಕರಿಗೆ ಸೇವೆ ನೀಡಲಿದೆ. ಯಾವ ಮಾರ್ಗದಲ್ಲಿ ಹೊಸ ರೈಲು ಸೇರ್ಪಡೆ?
07:09 PM (IST) Jan 13
06:45 PM (IST) Jan 13
06:34 PM (IST) Jan 13
05:54 PM (IST) Jan 13
05:05 PM (IST) Jan 13
ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಮೊಬೈಲ್ ಕ್ಯೂಆರ್ ಆಧಾರಿತ ಅನಿಯಮಿತ ಪ್ರಯಾಣದ ಪಾಸ್ಗಳನ್ನು ಪರಿಚಯಿಸಿದೆ. ಮೆಟ್ರೋದಲ್ಲಿ ಜನವರಿ 15 ರಿಂದ 1, 3 ಮತ್ತು 5 ದಿನಗಳ ಮೊಬೈಲ್ ಕ್ಯೂಆರ್ ಅನಿಯಮಿತ ಪ್ರಯಾಣ ಪಾಸ್ ಲಭ್ಯ. ದರ ಮತ್ತು ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ.
05:04 PM (IST) Jan 13
ಬಿಗ್ಬಾಸ್ ಕನ್ನಡ ಫಿನಾಲೆ ಸಮೀಪಿಸುತ್ತಿದ್ದಂತೆ, ವಾಹಿನಿ ಬಿಡುಗಡೆ ಮಾಡಿರುವ ಹೊಸ ಪ್ರೊಮೋವೊಂದು ಚರ್ಚೆಗೆ ಕಾರಣವಾಗಿದೆ. ಕೆಲ ಸ್ಪರ್ಧಿಗಳು ಅಭಿಮಾನಿಗಳನ್ನು ಭೇಟಿಯಾಗಿದ್ದರೆ, ಕೆಲವರು ಮಿಸ್ ಆಗಿದ್ದಾರೆ. ಇದು ಬಿಗ್ಬಾಸ್ ವಿನ್ ಮತ್ತು ರನ್ನರ್ಸ್ ಅಪ್ ಆಗುವವರ ಹಿಂಟ್ ಎಂದೇ ಬಣ್ಣಿಸಲಾಗುತ್ತಿದೆ!
04:25 PM (IST) Jan 13
04:16 PM (IST) Jan 13
ಶಿವಮೊಗ್ಗದ ಭದ್ರಾವತಿಯಲ್ಲಿ, ಪ್ರೀತಿಸಿ ಅಪಹರಿಸಿ ಮದುವೆಯಾಗಿದ್ದ ಪತಿಯೇ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಪರಸ್ತ್ರೀ ವ್ಯಾಮೋಹ ಮತ್ತು ಎರಡನೇ ಮದುವೆಯ ಆಸೆಗೆ ಬಿದ್ದ ಗಂಡ ಗೋಪಿ, ಪತ್ನಿ ಚಂದನಬಾಯಿ ಕೊಲೆಗೈದು ಮಕ್ಕಳು ಅನಾಥ ಮಾಡಿದ್ದಾರೆ.
02:56 PM (IST) Jan 13
02:42 PM (IST) Jan 13
ಬಿಗ್ಬಾಸ್ 12ರಲ್ಲಿ ಗಿಲ್ಲಿ ನಟನ ಬದಲು ಅಶ್ವಿನಿ ಗೌಡ ಮತ್ತು ಧ್ರುವಂತ್ಗೆ ಸೀಸನ್ ಚಪ್ಪಾಳೆ ನೀಡಿದ ಸುದೀಪ್ ನಿರ್ಧಾರಕ್ಕೆ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇದು ಅಶ್ವಿನಿಯನ್ನು ಗೆಲ್ಲಿಸುವ ತಂತ್ರ ಎಂದು ಆರೋಪಿಸಲಾಗುತ್ತಿದ್ದು, ಈ ಬಗ್ಗೆ ನಟ ವಿನಯ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.
02:27 PM (IST) Jan 13
ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ, ಪ್ರಜ್ವಲ್ ರಿತ್ತಿ ನಿಧಿ ಹಸ್ತಾಂತರಿಸಿದ ಬೆನ್ನಲ್ಲೇ, ಬಸಪ್ಪ ಬಡಿಗೇರ ಎಂಬ ಹವ್ಯಾಸಿ ಪ್ರಾಚ್ಯವಸ್ತು ಸಂಗ್ರಹಕಾರರಿಗೆ ಮುತ್ತು, ಹವಳ, ನೀಲಮಣಿ ಹಾಗೂ ಅಪರೂಪದ ಕಪ್ಪು ಸ್ಪಟಿಕದಂತಹ ಪುರಾತನ ಮಣಿಗಳು ಸಿಕ್ಕಿವೆ.
01:53 PM (IST) Jan 13
ಬಿಗ್ ಬಾಸ್ ಕನ್ನಡ ಶೋನಲ್ಲಿ ರಣಹದ್ದಿನ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ನಟ ಕಿಚ್ಚ ಸುದೀಪ್ ಮತ್ತು ಕಾರ್ಯಕ್ರಮದ ವಿರುದ್ಧ ದೂರು ದಾಖಲಾಗಿದೆ. ರಣಹದ್ದುಗಳು ಬೇಟೆಯಾಡುವುದಿಲ್ಲ, ಸತ್ತ ಪ್ರಾಣಿಗಳನ್ನು ತಿನ್ನುತ್ತವೆ ಎಂದು ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ವಾದಿಸಿದೆ.
01:43 PM (IST) Jan 13
ನಟಿ ಅದಿತಿ ಪ್ರಭುದೇವ ತಮ್ಮ 32ನೇ ಹುಟ್ಟುಹಬ್ಬದಂದು, ಮಗಳು ನೇಸರಾ ಜೊತೆ ವರ್ಕೌಟ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 'ನೂಲಿನಂತೆ ಸೀರೆ, ಅಮ್ಮನಂತೆ ಮಗಳು' ಎಂಬಂತೆ ನೇಸರಾ ಕೂಡ ಅಮ್ಮನನ್ನೇ ಅನುಕರಿಸುತ್ತಿರುವುದನ್ನು ನೋಡಬಹುದು.
01:38 PM (IST) Jan 13
ಬಿಗ್ ಬಾಸ್ ಕನ್ನಡ ಸೀಸನ್ 12ರ ಪ್ರಬಲ ಸ್ಪರ್ಧಿ ಎನಿಸಿದ್ದ ಕಾಮಿಡಿ ಕಿಲಾಡಿ ಗಿಲ್ಲಿ, ಫಿನಾಲೆ ಹತ್ತಿರವಾಗುತ್ತಿದ್ದಂತೆ ಡಲ್ ಆಗಿದ್ದಾರೆ. ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರ ಮುಂದೆ ಗಿಲ್ಲಿ ನೀಡಿದ ಹೇಳಿಕೆಗಳು, ಅವರು ಗೆಲುವಿನ ಆಸೆಯನ್ನೇ ಬಿಟ್ಟುಬಿಟ್ಟರಾ ಎಂಬ ಅನುಮಾನವನ್ನು ಹುಟ್ಟುಹಾಕಿದೆ.
01:13 PM (IST) Jan 13
ಗದಗ ಜಿಲ್ಲೆ ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವಾಗ ಬಾಲಕನಿಗೆ ಸಿಕ್ಕ ಚಿನ್ನದ ನಿಧಿ ಪ್ರಕರಣವು ಇದೀಗ ವಿವಾದಕ್ಕೆ ತಿರುಗಿದೆ. ನಿಧಿಯಲ್ಲಿದ್ದ ಅರ್ಧದಷ್ಟು ಚಿನ್ನವನ್ನು ಸ್ಥಳೀಯ ಪಂಚಾಯಿತಿ ಸದಸ್ಯೆಯೊಬ್ಬರು ಕದ್ದಿದ್ದಾರೆ ಎಂದು ಬಾಲಕನ ಚಿಕ್ಕಪ್ಪ ಗಂಭೀರ ಆರೋಪ ಮಾಡಿದ್ದು, ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.
01:04 PM (IST) Jan 13
12:49 PM (IST) Jan 13
12:46 PM (IST) Jan 13
ಗದಗದ ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವಾಗ ನಿಧಿ ಸಿಕ್ಕಿದರೂ ಅದನ್ನ 8ನೇ ತರಗತಿ ಬಾಲಕ ಪ್ರಜ್ವಲ್ ರಿತ್ತಿ, ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದಾನೆ. ಆದರೆ, ಈ ನಿಧಿಯನ್ನು ಕಾಯುವ ಸರ್ಪ ನಮ್ಮ ಕುಟುಂಬಕ್ಕೆ ಕಚ್ಚುತ್ತದೆ ಎಂದು ಭಯಪಟ್ಟಿದ್ದ ಕುಟುಂಬಕ್ಕೆ ಇದೀಗ ಶುಕ್ರದೆಸೆ ಆರಂಭವಾಗಿದೆ.
12:44 PM (IST) Jan 13
ಬಿಗ್ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಧನರಾಜ್ ಆಚಾರ್, ಶಬರಿಮಲೆ ಯಾತ್ರೆಯ ವೇಳೆ ಮಾಡಿದ ವಿಡಿಯೋವೊಂದು ವಿವಾದಕ್ಕೆ ಕಾರಣವಾಗಿದೆ. ಮಾಲೆ ಧರಿಸಿದ್ದ ಇನ್ನೊಬ್ಬ ಸ್ವಾಮಿಯ ದೊಡ್ಡ ಘಂಟೆಯ ಬಗ್ಗೆ ತಮಾಷೆಯಾಗಿ ಮಾತನಾಡಿದ್ದು ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
12:37 PM (IST) Jan 13
ಹಳ್ಳಿಗೆ ಹೋಲಿಸಿದರೆ ಸಿಟಿಯಲ್ಲಿ ಸಿಗುವ ಸಂಬಳ ದೊಡ್ಡ ಮೊತ್ತದ್ದು ಅನಿಸಬಹುದು. ಆದರೆ ನಗರದಲ್ಲಿ ಕರಿಬೇವಿನ ಸೊಪ್ಪನ್ನೂ ದುಡ್ಡುಕೊಟ್ಟೇ ಖರೀದಿಸಬೇಕಾಗುತ್ತದೆ.. ಹಳ್ಳಿಗಳಿಂದ 20 ಅಥವಾ 30ರ ಹರೆಯದಲ್ಲಿ ಕೆಲಸಕ್ಕಾಗಿ ಮಹಾನಗರಕ್ಕೆ ಬಂದಿರುವವರಿಗೆ ಕೆಲವು ಪ್ರಮುಖ ಆರ್ಥಿಕ ಪಾಠಗಳು ಇಲ್ಲಿವೆ.
12:37 PM (IST) Jan 13
ಬಿಗ್ಬಾಸ್ ಫಿನಾಲೆ ವೀಕ್ ಟಾಸ್ಕ್ನಲ್ಲಿ, ಸ್ಪರ್ಧಿ ಅಶ್ವಿನಿ ಗೌಡ ತಮಗಾಗಿ 'ಛಲಗಾರ್ತಿ' ಎಂಬ ಹ್ಯಾಶ್ಟ್ಯಾಗ್ ಬರೆಯಲು ಹೋಗಿ ತಪ್ಪು ಮಾಡಿದ್ದಾರೆ. ಕನ್ನಡ ಹೋರಾಟಗಾರ್ತಿ ಎಂದು ಹೇಳಿಕೊಳ್ಳುವ ಅಶ್ವಿನಿ, 'ಛಲಗಾರ್ತಿ' ಮತ್ತು 'ಹಠವಾದಿ' ಪದಗಳನ್ನು ತಪ್ಪಾಗಿ ಬರೆದಿದ್ದಕ್ಕೆ ಟ್ರೋಲ್ಗೆ ಒಳಗಾಗಿದ್ದಾರೆ.
12:13 PM (IST) Jan 13
Bigg Boss Kannada : ಕೊನೆಗೂ ರಕ್ಷಿತಾ ಶೆಟ್ಟಿ ಆಸೆ ಈಡೇರಿದೆ. ಸದಾ ಕಾವು ಕಾವು ಎನ್ನುತ್ತಿದ್ದ ಗಿಲ್ಲಿ, ಇದೇ ಮೊದಲ ಬಾರಿ ರಕ್ಷಿತಾ ಹೆಸರನ್ನು ಹೇಳಿದ್ದಾರೆ. ರಕ್ಷಿತಾ ಕೆಲಸವನ್ನು ಶ್ಲಾಘಿಸಿದ್ದಾರೆ.
12:09 PM (IST) Jan 13
ಶಿವಮೊಗ್ಗ: ಪತ್ನಿಯ ಸಾವಿಗೆ ಕಾರಣವಾಗಿ ಕೆಲವು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಪಾಂಡಿಚೆರಿಯಲ್ಲಿ ಬಂಧಿಸಿದ್ದಾರೆ. ಯಾವುದೇ ಮೊಬೈಲ್, ಡಿಜಿಟಲ್ ಉಪಕರಣ ಬಳಸದ ಎಂಜಿನಿಯರ್ ಅನ್ನು ಪೊಲೀಸರು ಪಾಂಡಿಚೆರಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
12:07 PM (IST) Jan 13
ರಾಮಮೂರ್ತಿ ನಗರದ ಟೆಕ್ಕಿ ಶರ್ಮಿಳಾ ಸಾವು ಬೆಂಕಿ ಅವಘಡವೆಂದು ಭಾವಿಸಲಾಗಿತ್ತು, ಆದರೆ ಇದು ವ್ಯವಸ್ಥಿತ ಕೊಲೆ ಎಂದು ತನಿಖೆಯಿಂದ ಬಯಲಾಗಿದೆ. ಆರೋಪಿ ಕರ್ನಲ್ ಕುರೈ, ಶರ್ಮಿಳಾಳನ್ನು ಎರಡು ತಿಂಗಳು ಗಮನಿಸಿ, ಕಿಟಕಿ ಮೂಲಕ ಒಳನುಗ್ಗಿ, ಗ್ಯಾಸ್ ಸೋರಿಕೆಯಂತೆ ಕಾಣುವಂತೆ ಮಾಡಿ ಕೊಲೆ ಮಾಡಿದ್ದನು.
11:56 AM (IST) Jan 13
ಬಿಗ್ಬಾಸ್ ಕನ್ನಡ ಸೀಸನ್ 12ರ ಮನೆಗೆ ಮರಳಿದ ಮಾತಿನ ಮಲ್ಲಮ್ಮ, ತಾಯಿ ಚಾಮುಂಡೇಶ್ವರಿಗೆ ಕಟ್ಟಿದ್ದ ಹರಕೆಯನ್ನು ತೀರಿಸಿದ್ದಾರೆ. ತಣ್ಣೀರಿನ ಸ್ನಾನ ಮಾಡಿ, ದೇವಿಗೆ ಸೀರೆ ಅರ್ಪಿಸಿದ ಮಲ್ಲಮ್ಮನ ಮೊಮ್ಮಗನಿಗೆ ಬಿಗ್ಬಾಸ್ 'ಗಣೇಶ್' ಎಂದು ಹೆಸರಿಟ್ಟು ಅವರ ಆಸೆಯನ್ನು ಪೂರೈಸಿದ್ದಾರೆ.
11:54 AM (IST) Jan 13
ಹಲವು ತಿಂಗಳ ವಿಳಂಬದ ಬಳಿಕ ದೇಶದ ಮೊದಲ ವಂದೇ ಭಾರತ ಸ್ಲೀಪರ್ ರೈಲಿಗೆ ನ.17ರಂದು ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಲಿದ್ದಾರೆ. ಗುವಾಹಟಿ ಮತ್ತು ಕೋಲ್ಕತಾ ನಡುವೆ ಇದು ಸಂಚರಿಸಲಿದ್ದು, ಸಾಮಾನ್ಯ ಪ್ರಯಾಣಿಕರಿಗಷ್ಟೇ ಮೀಸಲಿರಲಿದೆ
11:22 AM (IST) Jan 13
ಕಸ ಸ್ವಚ್ಛಗೊಳಿಸುವಾಗ ರಸ್ತೆ ಬದಿಯಲ್ಲಿ ಬಿದ್ದಿದ್ದ ಬರೋಬ್ಬರಿ 45 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಪೌರಕಾರ್ಮಿಕ ಮಹಿಳೆಯೊಬ್ಬರು ಪೊಲೀಸರಿಗೆ ಒಪ್ಪಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪೊಲೀಸರು ಬಂಗಾರದ ಗಂಟನ್ನು ಮಾಲೀಕರಿಗೆ ಒಪ್ಪಿಸಿದ್ದಾರೆ.
11:17 AM (IST) Jan 13
10:51 AM (IST) Jan 13
ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದ ಆವರಣದಲ್ಲಿರುವ ಒಳಾಂಗಣ ಕ್ರೀಡಾ ಸಂಕೀರ್ಣಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೆಸರು ಇಡಲು ಮುಂದಾಗಿರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಗಾಂಧೀಜಿ ಹೆಸರು ತೆಗೆಯಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
10:26 AM (IST) Jan 13
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶ ಮೂಲದ ಶರ್ಬಾನು ಖತನ್ ಎಂಬ ಮಹಿಳೆ ಪೊಲೀಸ್ ತಪಾಸಣೆ ವೇಳೆ 'ಜೈ ಬಾಂಗ್ಲಾ' ಎಂದು ಘೋಷಣೆ ಕೂಗಿ ಆತಂಕ ಸೃಷ್ಟಿಸಿದ್ದಳು. ಈಕೆ, ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ವಾಸಿಸುತ್ತಿದ್ದುದು ತನಿಖೆಯಿಂದ ತಿಳಿದುಬಂದಿದೆ.
09:46 AM (IST) Jan 13
ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸುತ್ತಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಟ್ಟಾಗಿ ಭೇಟಿ ಮಾಡಲಿದ್ದಾರೆ.
09:35 AM (IST) Jan 13
ಬೆಂಗಳೂರಿನಲ್ಲಿ ಬಾಡಿಗೆದಾರ ಗೃಹಿಣಿಗೆ ಲೈಂ*ಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮನೆ ಮಾಲೀಕ ಮಧು ಎಂಬಾತನನ್ನು ಬಂಡೇಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಮೆಸೇಜ್ ಮೂಲಕವೂ ಕಿರುಕುಳ ನೀಡುತ್ತಿದ್ದ ಎಂದು ಗೃಹಿಣಿ ದೂರಿನಲ್ಲಿ ತಿಳಿಸಿದ್ದಾರೆ.
09:02 AM (IST) Jan 13
08:54 AM (IST) Jan 13
ರಾಜ್ಯ ಕಾಂಗ್ರೆಸ್ ಸರ್ಕಾರದ ತೆರಿಗೆ ಹೊರೆ ಮತ್ತು ರಸ್ತೆ ಗುಂಡಿಗಳಿಂದಾಗಿ ಸಂಕ್ರಾಂತಿಯ ಹಿಗ್ಗಿನ ಸುಗ್ಗಿಯ ಕಾಲದಲ್ಲೂ ರಾಜ್ಯದ ಜನತೆ ಕುಗ್ಗಿ ನಡೆಯುವಂತಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ವ್ಯಂಗ್ಯವಾಡಿದ್ದಾರೆ.
08:41 AM (IST) Jan 13
ಸಸ್ಯಕಾಶಿ ಲಾಲ್ಬಾಗ್ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಜ.14 ರಿಂದ 26ರವರೆಗೆ ನಡೆಯುವ 219ನೇ ಫಲಪುಷ್ಪ ಪ್ರದರ್ಶನ ಹೊಸತನ ಮತ್ತು ಹಲವು ವೈಶಿಷ್ಟ್ಯಗಳೊಂದಿಗೆ ಕೂಡಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.
08:27 AM (IST) Jan 13
07:58 AM (IST) Jan 13
ಗದಗದ ಲಕ್ಕುಂಡಿಯಲ್ಲಿ ಮನೆಯ ಪಾಯ ತೆಗೆಯುವಾಗ ಎಷ್ಟು ತೂಕದ ಬಂಗಾರದ ಆಭರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಆದರೆ, ಪುರಾತತ್ವ ಇಲಾಖೆ ಅಧಿಕಾರಿಯ ಹೇಳಿಕೆ ಮತ್ತು ಸಿಎಂ ಸಿದ್ದರಾಮಯ್ಯ ಅವರ ವೈರಲ್ ವಿಡಿಯೋದಿಂದಾಗಿ ಆಭರಣಗಳ ತೂಕದ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.
07:56 AM (IST) Jan 13
ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ಉಡಾವಣೆಯಾಗಿದ್ದ ಇಸ್ರೋದ ಈ ವರ್ಷದ ಮೊದಲ ಉಪಗ್ರಹವು ಪಿಎಸ್ಎಲ್ವಿ-ಸಿ62 ರಾಕೆಟ್ನಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ 3ನೇ ಹಂತದಲ್ಲಿ ವಿಫಲವಾಗಿದೆ.
07:49 AM (IST) Jan 13
ದರ ಪರಿಷ್ಕರಣಾ ಸಮಿತಿಯ ವರದಿ ಅನ್ವಯ ಪ್ರತಿ ವರ್ಷ ಶೇ.5ರಷ್ಟು ಮೆಟ್ರೋ ದರ ಹೆಚ್ಚಳಕ್ಕೆ ಬಿಎಂಆರ್ಸಿಎಲ್ ಮುಂದಾಗುವ ಸಾಧ್ಯತೆಯಿದೆ. ಹೆಚ್ಚುತ್ತಿರುವ ನಿರ್ವಹಣಾ ವೆಚ್ಚ ಮತ್ತು ಸಾಲವನ್ನು ಇದಕ್ಕೆ ಕಾರಣವಾಗಿ ನೀಡಲಾಗುತ್ತಿದೆ.