Published : Jan 13, 2026, 07:01 AM ISTUpdated : Jan 13, 2026, 10:55 PM IST

Karnataka News Live: ಸಂಕ್ರಾಂತಿ ದಿನ ನಮ್ಮ ಮೆಟ್ರೋಗೆ ಮತ್ತೊಂದು ರೈಲು ಸೇರ್ಪಡೆ, ಪ್ರಯಾಣಿಕರಿಗೆ ಗುಡ್ ನ್ಯೂಸ್

ಸಾರಾಂಶ

ಬೆಂಗಳೂರು: ಅಧಿಕಾರ ಹಸ್ತಾಂತರದ ಗೊಂದಲಗಳ ನಡುವೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸದಾಶಿವನಗರದ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸೋಮವಾರ ಬೆಳಗ್ಗೆ ಶಿವಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದರು. ಇಬ್ಬರೂ ನಾಯಕರ ನಡುವೆ ನಡೆದ ಗೌಪ್ಯ ಚರ್ಚೆ ಏನು ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಆದರೂ ಅಧಿಕಾರ ಹಸ್ತಾಂತರ ಸೇರಿದಂತೆ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ಮಾಡಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Namma Metro train

10:55 PM (IST) Jan 13

ಸಂಕ್ರಾಂತಿ ದಿನ ನಮ್ಮ ಮೆಟ್ರೋಗೆ ಮತ್ತೊಂದು ರೈಲು ಸೇರ್ಪಡೆ, ಪ್ರಯಾಣಿಕರಿಗೆ ಗುಡ್ ನ್ಯೂಸ್

ಸಂಕ್ರಾಂತಿ ದಿನ ನಮ್ಮ ಮೆಟ್ರೋಗೆ ಮತ್ತೊಂದು ರೈಲು ಸೇರ್ಪಡೆ, ಮೆಟ್ರೋ ಪ್ರಯಾಣಕ್ಕೆ ಕಾಯಬೇಕಿಲ್ಲ. ಒಂದರ ಹಿಂದೆ ಒಂದರಂತೆ ಮೆಟ್ರೋ ರೈಲುಗಳು ಪ್ರಯಾಣಕರಿಗೆ ಸೇವೆ ನೀಡಲಿದೆ. ಯಾವ ಮಾರ್ಗದಲ್ಲಿ ಹೊಸ ರೈಲು ಸೇರ್ಪಡೆ?

 

Read Full Story

07:09 PM (IST) Jan 13

ಗಡದ್ದಾಗಿ ನಲ್ಲಿಮೂಳೆ ತಿಂದು ಬಿಗ್‌ಬಾಸ್‌ ಮನೆಯಲ್ಲೇ ನಿದ್ರೆಗೆ ಜಾರಿ ಗಿಲ್ಲಿ ನಟ!

ಬಿಗ್‌ಬಾಸ್‌ ಫಿನಾಲೆ ವೀಕ್‌ನಲ್ಲಿ ಸ್ಪರ್ಧಿ ಗಿಲ್ಲಿ ನಟನ ಮೂರು ಆಸೆಗಳ ಪೈಕಿ ಒಂದನ್ನು ಈಡೇರಿಸಲಾಗಿದೆ. ಅವರ ಬೇಡಿಕೆಯಂತೆ 'ನಲ್ಲಿ ಮೂಳೆ' ಊಟವನ್ನು ನೀಡಲಾಗಿದ್ದು, ಊಟದ ನಂತರ ಒಂದು ಗಂಟೆ ನಿದ್ರಿಸಲು ಅವಕಾಶ ನೀಡಲಾಗಿದೆ. ಈ ಸಮಯದಲ್ಲಿ ಇಡೀ ಬಿಗ್‌ಬಾಸ್‌ ಮನೆ ಸಂಪೂರ್ಣ ಸೈಲೆಂಟ್ ಆಗಿತ್ತು.
Read Full Story

06:45 PM (IST) Jan 13

ಟೆಕ್ಕಿ ಕೆಲಸ ಹೋದ್ರೇನು 'ರೋಡ್ ಸೈಡಲ್ಲಿ ಟಿಕ್ಕಿಪೂರಿ' ಮಾರುವ ಸಾಫ್ಟ್‌ವೇರ್ ಇಂಜಿನಿಯರ್; ನಟ ಜಗ್ಗೇಶ್ ಮೆಚ್ಚುಗೆ!

ಸಾಫ್ಟ್‌ವೇರ್ ಉದ್ಯೋಗ ಕಳೆದುಕೊಂಡ ಯುವಕನೊಬ್ಬ, ಧೃತಿಗೆಡದೆ ಬೆಂಗಳೂರಿನಲ್ಲಿ ಸ್ನ್ಯಾಕ್ಸ್ ಗಾಡಿ ಇಟ್ಟುಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾನೆ. ಈತನ ಛಲವನ್ನು ಮೆಚ್ಚಿದ ನಟ ಜಗ್ಗೇಶ್, ಆತನನ್ನು ಪ್ರಶಂಸಿಸಿ, ಈ ಕಥೆ ನಿರುದ್ಯೋಗಿ ಯುವಕರಿಗೆ ಮಾದರಿ ಎಂದು ಹೇಳಿದ್ದಾರೆ.
Read Full Story

06:34 PM (IST) Jan 13

BBK 12 - ಸೂರಜ್​ ಜೊತೆಗೆ ನನ್ನದು 'ಪವಿತ್ರ ಬಂಧನ' ಎನ್ನುತ್ತಲೇ ಬಗ್ಗೆ ರಾಶಿಕಾ ಶೆಟ್ಟಿ ಓಪನ್ನಾಗಿ ಹೇಳಿದ್ದೇನು?

ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ರಾಶಿಕಾ ಶೆಟ್ಟಿ, ಸಹ ಸ್ಪರ್ಧಿ ಸೂರಜ್ ಸಿಂಗ್ ಜೊತೆಗಿನ ತಮ್ಮ ಆತ್ಮೀಯ ಒಡನಾಟದ ಬಗ್ಗೆ ಮಾತನಾಡಿದ್ದಾರೆ. ಮನೆಯಲ್ಲಿ ಸೂರಜ್ ತಮಗೆ ಹೇಗೆ ಆಪ್ತರಾಗಿದ್ದರು ಮತ್ತು ಅವರೊಂದಿಗಿನ ತಮ್ಮ ಸ್ನೇಹವನ್ನು 'ಪವಿತ್ರ ಬಂಧನ' ಎಂದು ರಾಶಿಕಾ ಬಣ್ಣಿಸಿದ್ದಾರೆ.
Read Full Story

05:54 PM (IST) Jan 13

ಮೂಳೆ ಸೇರಿ Bigg Boss ಎದುರು 3 ವಿಚಿತ್ರ ಬೇಡಿಕೆ ಇಟ್ಟ ಗಿಲ್ಲಿ ನಟ - ಇದ್ಯಾಕೆ ಹೀಗೆ ಮಾಡಿದೆ ಕೇಳ್ತಿರೋ ಫ್ಯಾನ್ಸ್​!

ಬಿಗ್‌ಬಾಸ್‌ ಮನೆಯಲ್ಲಿ 'ಗಿಲ್ಲಿ ನಟ'ನ ಹವಾ ಜೋರಾಗಿದ್ದು, ಅವರೇ ವಿನ್ನರ್ ಎನ್ನಲಾಗುತ್ತಿದೆ. ಈ ನಡುವೆ, ಬಿಗ್‌ಬಾಸ್‌ ನೀಡಿದ ಮೂರು ಕೋರಿಕೆಗಳ ಅವಕಾಶದಲ್ಲಿ, ಗಿಲ್ಲಿ ನಟ ಸಿನಿಮಾ ನೋಡುವ, ಆನೆಯ ಮೇಲೆ ಕೂರುವ ಮತ್ತು ನಲ್ಲಿ ಮೂಳೆ ತಿನ್ನುವಂತಹ ವಿಚಿತ್ರ ಆಸೆಗಳನ್ನು ವ್ಯಕ್ತಪಡಿಸಿದ್ದಾರೆ.
Read Full Story

05:05 PM (IST) Jan 13

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಂಪರ್ ಆಫರ್ - ಜ. 15 ರಿಂದ ಜಾರಿಗೆ ಬರಲಿದೆ 'QR Code' ಆಧಾರಿತ ಅನ್ಲಿಮಿಟೆಡ್ ಪಾಸ್!

ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಮೊಬೈಲ್ ಕ್ಯೂಆರ್ ಆಧಾರಿತ ಅನಿಯಮಿತ ಪ್ರಯಾಣದ ಪಾಸ್‌ಗಳನ್ನು ಪರಿಚಯಿಸಿದೆ.  ಮೆಟ್ರೋದಲ್ಲಿ ಜನವರಿ 15 ರಿಂದ 1, 3 ಮತ್ತು 5 ದಿನಗಳ ಮೊಬೈಲ್ ಕ್ಯೂಆರ್ ಅನಿಯಮಿತ ಪ್ರಯಾಣ ಪಾಸ್ ಲಭ್ಯ. ದರ ಮತ್ತು ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ.

Read Full Story

05:04 PM (IST) Jan 13

BBK 12 - ಫಿನಾಲೆಗೂ ಮುನ್ನವೇ ಗೆಲ್ಲುವವರ ಹಿಂಟ್​ ಕೊಟ್ಟೇ ಬಿಟ್ಟಿತಾ Bigg Boss? ಪ್ರೊಮೋದಲ್ಲಿ ರಿವೀಲ್​?

ಬಿಗ್​ಬಾಸ್ ಕನ್ನಡ ಫಿನಾಲೆ ಸಮೀಪಿಸುತ್ತಿದ್ದಂತೆ, ವಾಹಿನಿ ಬಿಡುಗಡೆ ಮಾಡಿರುವ ಹೊಸ ಪ್ರೊಮೋವೊಂದು ಚರ್ಚೆಗೆ ಕಾರಣವಾಗಿದೆ. ಕೆಲ ಸ್ಪರ್ಧಿಗಳು ಅಭಿಮಾನಿಗಳನ್ನು ಭೇಟಿಯಾಗಿದ್ದರೆ, ಕೆಲವರು ಮಿಸ್​ ಆಗಿದ್ದಾರೆ. ಇದು ಬಿಗ್​ಬಾಸ್​ ವಿನ್​ ಮತ್ತು ರನ್ನರ್ಸ್​ ಅಪ್​ ಆಗುವವರ ಹಿಂಟ್​ ಎಂದೇ ಬಣ್ಣಿಸಲಾಗುತ್ತಿದೆ!

Read Full Story

04:25 PM (IST) Jan 13

BBK 12 - ರಾಶಿಕಾಗೆ ಈ ಸ್ಪರ್ಧಿ ಮೇಲೆ ಏಕಿಷ್ಟು ಕೋಪ? ಟಾಪ್​ 5ನಲ್ಲೂ ಅವ್ರು ಬರಬಾರದು ಎಂದಿದ್ಯಾಕೆ?

ಬಿಗ್​ಬಾಸ್​​ 12ರ ಫಿನಾಲೆಗೂ ಮುನ್ನವೇ ಮನೆಯಿಂದ ಹೊರಬಂದಿರುವ ರಾಶಿಕಾ ಶೆಟ್ಟಿ, ತಮ್ಮ ಪಯಣದ ಬಗ್ಗೆ ಮಾತನಾಡಿದ್ದಾರೆ. ವಿನ್ನರ್ ಯಾರು ಆಗಬೇಕು ಮತ್ತು ಟಾಪ್ 5ನಲ್ಲಿ ಯಾರು ಇರಬಾರದು ಎನ್ನುವ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಮುಂದಿನ ಸಿನಿಮಾ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
Read Full Story

04:16 PM (IST) Jan 13

ಶಿವಮೊಗ್ಗ ಲವ್ ಮ್ಯಾರೇಜ್ - 2ನೇ ಮದುವೆಗೆ ಒಪ್ಪದ ಮೊದಲ ಹೆಂಡತಿಯನ್ನ ಯಮಲೋಕಕ್ಕೆ ಕಳಿಸಿದ ಗೋಪಿ!

ಶಿವಮೊಗ್ಗದ ಭದ್ರಾವತಿಯಲ್ಲಿ, ಪ್ರೀತಿಸಿ ಅಪಹರಿಸಿ ಮದುವೆಯಾಗಿದ್ದ ಪತಿಯೇ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಪರಸ್ತ್ರೀ ವ್ಯಾಮೋಹ ಮತ್ತು ಎರಡನೇ ಮದುವೆಯ ಆಸೆಗೆ ಬಿದ್ದ ಗಂಡ ಗೋಪಿ, ಪತ್ನಿ ಚಂದನಬಾಯಿ ಕೊಲೆಗೈದು ಮಕ್ಕಳು ಅನಾಥ ಮಾಡಿದ್ದಾರೆ.

Read Full Story

02:56 PM (IST) Jan 13

ಕೊನೆಗೂ ಕಿಚ್ಚನಿಗೆ ‘ಸರ್’ ಎಂದ ರಾಕಿಂಗ್ ಸ್ಟಾರ್ ಯಶ್ ! ತಗ್ಗಿ ಬಗ್ಗಿ ನಡಿ ಗುರು.. ರಾಕಿಗೆ ಕಿಚ್ಚನ ಫ್ಯಾನ್ಸ್ ಪಾಠ!

'ಟಾಕ್ಸಿಕ್' ಚಿತ್ರಕ್ಕೆ ಕಿಚ್ಚ ಸುದೀಪ್ ನೀಡಿದ ಶುಭಾಶಯಕ್ಕೆ ರಾಕಿಂಗ್ ಸ್ಟಾರ್ ಯಶ್ 'ಸರ್' ಎಂದು ಗೌರವಪೂರ್ವಕವಾಗಿ ಉತ್ತರಿಸಿದ್ದಾರೆ. ಏಳು ವರ್ಷಗಳ ಹಿಂದೆ ಏಕವಚನ ಬಳಕೆಯಿಂದ ಶುರುವಾಗಿದ್ದ ಅಭಿಮಾನಿಗಳ ನಡುವಿನ ಸ್ಟಾರ್ ವಾರ್‌ಗೆ ಯಶ್ ಅವರ ಈ ಉತ್ತರವು ಅಂತ್ಯ ಹಾಡಿದೆ.
Read Full Story

02:42 PM (IST) Jan 13

BBK 12 - ಅಶ್ವಿನಿ ಗೌಡಗೆ ಕಿಚ್ಚನ ಚಪ್ಪಾಳೆ ವಿವಾದ - ಬಿಗ್​ಬಾಸ್​ ವಿನಯ್​ ಗೌಡ ಹೇಳಿದ್ದೇನು?

ಬಿಗ್​ಬಾಸ್​​ 12ರಲ್ಲಿ ಗಿಲ್ಲಿ ನಟನ ಬದಲು ಅಶ್ವಿನಿ ಗೌಡ ಮತ್ತು ಧ್ರುವಂತ್​ಗೆ ಸೀಸನ್‌ ಚಪ್ಪಾಳೆ ನೀಡಿದ ಸುದೀಪ್​ ನಿರ್ಧಾರಕ್ಕೆ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇದು ಅಶ್ವಿನಿಯನ್ನು ಗೆಲ್ಲಿಸುವ ತಂತ್ರ ಎಂದು ಆರೋಪಿಸಲಾಗುತ್ತಿದ್ದು, ಈ ಬಗ್ಗೆ   ನಟ ವಿನಯ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.

Read Full Story

02:27 PM (IST) Jan 13

ಲಕ್ಕುಂಡಿ ನಿಧಿ ಸಿಕ್ಕ ಬೆನ್ನಲ್ಲೇ..., ಮುತ್ತು, ರತ್ನ, ಹವಳ, ನೀಲಮಣಿಗಳೂ ಪತ್ತೆ! ಬಡಿಗೇರ ಬಸಪ್ಪ ಫುಲ್ ಖುಷ್!

ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ, ಪ್ರಜ್ವಲ್ ರಿತ್ತಿ ನಿಧಿ ಹಸ್ತಾಂತರಿಸಿದ ಬೆನ್ನಲ್ಲೇ, ಬಸಪ್ಪ ಬಡಿಗೇರ ಎಂಬ ಹವ್ಯಾಸಿ ಪ್ರಾಚ್ಯವಸ್ತು ಸಂಗ್ರಹಕಾರರಿಗೆ ಮುತ್ತು, ಹವಳ, ನೀಲಮಣಿ ಹಾಗೂ ಅಪರೂಪದ ಕಪ್ಪು ಸ್ಪಟಿಕದಂತಹ ಪುರಾತನ ಮಣಿಗಳು ಸಿಕ್ಕಿವೆ.

Read Full Story

01:53 PM (IST) Jan 13

ಬಿಗ್ ಬಾಸ್​​ ಮನೆಯನ್ನೇ ಲಾಕ್ ಮಾಡಿದ್ದಾಯ್ತು! ಈಗ ಬಿಗ್ ಬಾಸ್ ಶೋ ಬಗ್ಗೆ ಮತ್ತೊಂದು ವಿವಾದ..!

ಬಿಗ್ ಬಾಸ್ ಕನ್ನಡ ಶೋನಲ್ಲಿ ರಣಹದ್ದಿನ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ನಟ ಕಿಚ್ಚ ಸುದೀಪ್ ಮತ್ತು ಕಾರ್ಯಕ್ರಮದ ವಿರುದ್ಧ ದೂರು ದಾಖಲಾಗಿದೆ. ರಣಹದ್ದುಗಳು ಬೇಟೆಯಾಡುವುದಿಲ್ಲ, ಸತ್ತ ಪ್ರಾಣಿಗಳನ್ನು ತಿನ್ನುತ್ತವೆ ಎಂದು ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ವಾದಿಸಿದೆ.

Read Full Story

01:43 PM (IST) Jan 13

Aditi Prabhudeva ಹುಟ್ಟುಹಬ್ಬ - ಅಮ್ಮನಂತೆಯೇ ಪುಟಾಣಿಯ ವರ್ಕ್​ಔಟ್​- ಕ್ಯೂಟ್​ ವಿಡಿಯೋ ವೈರಲ್​

ನಟಿ ಅದಿತಿ ಪ್ರಭುದೇವ ತಮ್ಮ 32ನೇ ಹುಟ್ಟುಹಬ್ಬದಂದು, ಮಗಳು ನೇಸರಾ ಜೊತೆ ವರ್ಕೌಟ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 'ನೂಲಿನಂತೆ ಸೀರೆ, ಅಮ್ಮನಂತೆ ಮಗಳು' ಎಂಬಂತೆ ನೇಸರಾ ಕೂಡ ಅಮ್ಮನನ್ನೇ ಅನುಕರಿಸುತ್ತಿರುವುದನ್ನು ನೋಡಬಹುದು.

Read Full Story

01:38 PM (IST) Jan 13

ಫೈನಲ್‌ಗೂ ಮುನ್ನ ಸೋಲೊಪ್ಪಿಕೊಂಡ್ರಾ ಗಿಲ್ಲಿ ನಟ? ಬಿಗ್ ಬಾಸ್ ಕ್ಲೈಮ್ಯಾಕ್ಸ್​ನಲ್ಲಿ ಅನಿರೀಕ್ಷಿತ ಟ್ವಿಸ್ಟ್..!

ಬಿಗ್ ಬಾಸ್ ಕನ್ನಡ ಸೀಸನ್ 12ರ ಪ್ರಬಲ ಸ್ಪರ್ಧಿ ಎನಿಸಿದ್ದ ಕಾಮಿಡಿ ಕಿಲಾಡಿ ಗಿಲ್ಲಿ, ಫಿನಾಲೆ ಹತ್ತಿರವಾಗುತ್ತಿದ್ದಂತೆ ಡಲ್ ಆಗಿದ್ದಾರೆ. ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರ ಮುಂದೆ ಗಿಲ್ಲಿ ನೀಡಿದ ಹೇಳಿಕೆಗಳು, ಅವರು ಗೆಲುವಿನ ಆಸೆಯನ್ನೇ ಬಿಟ್ಟುಬಿಟ್ಟರಾ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

Read Full Story

01:13 PM (IST) Jan 13

ಲಕ್ಕುಂಡಿ - ಚೊಂಬಿನಲ್ಲಿ ತುಂಬಿದ್ದ ನಿಧಿಯನ್ನ ಗುಳುಂ ಮಾಡಿದ್ರಾ ಗ್ರಾ.ಪಂ. ಮೆಂಬರ್ ರಜಿಯಾ ಬೇಗಂ! ಸ್ಪೋಟಕ ಬಹಿರಂತ!

ಗದಗ ಜಿಲ್ಲೆ ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವಾಗ ಬಾಲಕನಿಗೆ ಸಿಕ್ಕ ಚಿನ್ನದ ನಿಧಿ ಪ್ರಕರಣವು ಇದೀಗ ವಿವಾದಕ್ಕೆ ತಿರುಗಿದೆ. ನಿಧಿಯಲ್ಲಿದ್ದ ಅರ್ಧದಷ್ಟು ಚಿನ್ನವನ್ನು ಸ್ಥಳೀಯ ಪಂಚಾಯಿತಿ ಸದಸ್ಯೆಯೊಬ್ಬರು ಕದ್ದಿದ್ದಾರೆ ಎಂದು ಬಾಲಕನ ಚಿಕ್ಕಪ್ಪ ಗಂಭೀರ ಆರೋಪ ಮಾಡಿದ್ದು, ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.

Read Full Story

01:04 PM (IST) Jan 13

Bigg Boss 12 ಮನೆಯ ತ್ರಿಕೋನ ಲವ್​ಸ್ಟೋರಿ ಈಗ ಸಿನಿಮಾ! ನಾಯಕ- ನಾಯಕಿ, ನಿರ್ದೇಶಕ ಇವರೇ ನೋಡಿ

ಬಿಗ್ ಬಾಸ್ 12ರ ಫಿನಾಲೆ ಹತ್ತಿರವಾಗುತ್ತಿದ್ದಂತೆ, ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ಪ್ರೇಮಕಥೆಯು ರಕ್ಷಿತಾ ಶೆಟ್ಟಿಯ ಆಗಮನದಿಂದ ತ್ರಿಕೋನ ಪ್ರೇಮದ ತಿರುವು ಪಡೆದಿದೆ. ಇದೀಗ ಗಿಲ್ಲಿ ನಟನೇ ತಮ್ಮ ಈ ಲವ್ ಸ್ಟೋರಿಯನ್ನು ಸಿನಿಮಾ ಕಥೆಯಾಗಿ ಹೇಳುತ್ತಿರುವುದು ಮನೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
Read Full Story

12:49 PM (IST) Jan 13

ಧಾರವಾಡ ಮಕ್ಕಳ ಕಳ್ಳನ ಕಥೆ ಕೇಳಿ ಪೊಲೀಸರೇ ಸುಸ್ತು! ಈ ಅಬ್ದುಲ್ ಕರೀಂ ಸಾಮಾನ್ಯದವನಲ್ಲ!

ಧಾರವಾಡದ ಕಮಲಾಪೂರ ಶಾಲೆಯ ಇಬ್ಬರು ಮಕ್ಕಳ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ. ಪೋಕ್ಸೋ ಪ್ರಕರಣದ ಹಿನ್ನೆಲೆಯುಳ್ಳ ಅಪಹರಣಕಾರ ಅಬ್ದುಲ್ ಕರೀಂ, ಜೋಯಿಡಾ ಬಳಿ ಬೈಕ್ ಅಪಘಾತಕ್ಕೀಡಾದಾಗ ಸಿಕ್ಕಿಬಿದ್ದಿದ್ದಾನೆ. ಮಕ್ಕಳಿಬ್ಬರೂ ಸುರಕ್ಷಿತವಾಗಿದ್ದು, ಈ ಘಟನೆಯು ಅಪಘಾತದಿಂದಾಗಿ ಬಯಲಾಗಿದೆ.
Read Full Story

12:46 PM (IST) Jan 13

ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ರಿತ್ತಿ ಕುಟುಂಬಕ್ಕೆ ಶುಕ್ರದೆಸೆ ಆರಂಭ; ನಿಧಿ ಕಾಯುವ ಸರ್ಪದ ಭಯಪಟ್ಟಿದ್ದವರಿಗೆ ಲಕ್!

ಗದಗದ ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವಾಗ ನಿಧಿ ಸಿಕ್ಕಿದರೂ ಅದನ್ನ 8ನೇ ತರಗತಿ ಬಾಲಕ ಪ್ರಜ್ವಲ್ ರಿತ್ತಿ, ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದಾನೆ. ಆದರೆ, ಈ ನಿಧಿಯನ್ನು ಕಾಯುವ ಸರ್ಪ ನಮ್ಮ ಕುಟುಂಬಕ್ಕೆ ಕಚ್ಚುತ್ತದೆ ಎಂದು ಭಯಪಟ್ಟಿದ್ದ ಕುಟುಂಬಕ್ಕೆ ಇದೀಗ ಶುಕ್ರದೆಸೆ ಆರಂಭವಾಗಿದೆ.

Read Full Story

12:44 PM (IST) Jan 13

ಮಾಲೆ ಹಾಕೊಂಡು ಶಬರಿಮಲೆ ಭಕ್ತಾದಿಗಳನ್ನು ಅವಮಾನಿಸಿದ್ರಾ ಬಿಗ್‌ಬಾಸ್ ಮಾಜಿ ಸ್ಪರ್ಧಿ ಧನರಾಜ್ ?

ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಧನರಾಜ್ ಆಚಾರ್, ಶಬರಿಮಲೆ ಯಾತ್ರೆಯ ವೇಳೆ ಮಾಡಿದ ವಿಡಿಯೋವೊಂದು ವಿವಾದಕ್ಕೆ ಕಾರಣವಾಗಿದೆ. ಮಾಲೆ ಧರಿಸಿದ್ದ ಇನ್ನೊಬ್ಬ ಸ್ವಾಮಿಯ ದೊಡ್ಡ ಘಂಟೆಯ ಬಗ್ಗೆ ತಮಾಷೆಯಾಗಿ ಮಾತನಾಡಿದ್ದು ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read Full Story

12:37 PM (IST) Jan 13

ಹಳ್ಳಿ ಹಿನ್ನೆಲೆಯ ಯುವ ಜನಾಂಗಕ್ಕೆ 8 ಆರ್ಥಿಕ ಪಾಠಗಳು

ಹಳ್ಳಿಗೆ ಹೋಲಿಸಿದರೆ ಸಿಟಿಯಲ್ಲಿ ಸಿಗುವ ಸಂಬಳ ದೊಡ್ಡ ಮೊತ್ತದ್ದು ಅನಿಸಬಹುದು. ಆದರೆ ನಗರದಲ್ಲಿ ಕರಿಬೇವಿನ ಸೊಪ್ಪನ್ನೂ ದುಡ್ಡುಕೊಟ್ಟೇ ಖರೀದಿಸಬೇಕಾಗುತ್ತದೆ.. ಹಳ್ಳಿಗಳಿಂದ 20 ಅಥವಾ 30ರ ಹರೆಯದಲ್ಲಿ ಕೆಲಸಕ್ಕಾಗಿ ಮಹಾನಗರಕ್ಕೆ ಬಂದಿರುವವರಿಗೆ ಕೆಲವು ಪ್ರಮುಖ ಆರ್ಥಿಕ ಪಾಠಗಳು ಇಲ್ಲಿವೆ.

Read Full Story

12:37 PM (IST) Jan 13

'ಕರವೇ ಮಹಿಳಾ ಘಟಕದ ಅಧ್ಯಕ್ಷೆಗೆ ಕನ್ನಡ ಬರೆಯೋಕೆ ಬರಲ್ಲ..' ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಆದ ಅಶ್ವಿನಿ ಗೌಡ

ಬಿಗ್‌ಬಾಸ್ ಫಿನಾಲೆ ವೀಕ್ ಟಾಸ್ಕ್‌ನಲ್ಲಿ, ಸ್ಪರ್ಧಿ ಅಶ್ವಿನಿ ಗೌಡ ತಮಗಾಗಿ 'ಛಲಗಾರ್ತಿ' ಎಂಬ ಹ್ಯಾಶ್‌ಟ್ಯಾಗ್ ಬರೆಯಲು ಹೋಗಿ ತಪ್ಪು ಮಾಡಿದ್ದಾರೆ. ಕನ್ನಡ ಹೋರಾಟಗಾರ್ತಿ ಎಂದು ಹೇಳಿಕೊಳ್ಳುವ ಅಶ್ವಿನಿ, 'ಛಲಗಾರ್ತಿ' ಮತ್ತು 'ಹಠವಾದಿ' ಪದಗಳನ್ನು ತಪ್ಪಾಗಿ ಬರೆದಿದ್ದಕ್ಕೆ ಟ್ರೋಲ್‌ಗೆ ಒಳಗಾಗಿದ್ದಾರೆ.

Read Full Story

12:13 PM (IST) Jan 13

ಮೊದಲ ಬಾರಿ ಗಿಲ್ಲಿ ಬಾಯಲ್ಲಿ ರಕ್ಷಿತಾ ಹೆಸರು, ಭಾವುಕಳಾದ ವಂಶದ ಕುಡಿ

Bigg Boss Kannada : ಕೊನೆಗೂ ರಕ್ಷಿತಾ ಶೆಟ್ಟಿ ಆಸೆ ಈಡೇರಿದೆ. ಸದಾ ಕಾವು ಕಾವು ಎನ್ನುತ್ತಿದ್ದ ಗಿಲ್ಲಿ, ಇದೇ ಮೊದಲ ಬಾರಿ ರಕ್ಷಿತಾ ಹೆಸರನ್ನು ಹೇಳಿದ್ದಾರೆ. ರಕ್ಷಿತಾ ಕೆಲಸವನ್ನು ಶ್ಲಾಘಿಸಿದ್ದಾರೆ.

Read Full Story

12:09 PM (IST) Jan 13

ಪತ್ನಿ ಕೊಂದು ತಲೆಮರೆಸಿಕೊಂಡಿದ್ದ ಚಾಲಾಕಿ ಎಂಜಿನಿಯರ್ ಪಾಂಡಿಚೆರಿಯಲ್ಲಿ ಲಾಕ್! ಮೊಬೈಲ್ ಬಳಸದ ಈತ ಸಿಕ್ಕಿಬಿದ್ದಿದ್ದೇ ರೋಚಕ ಸ್ಟೋರಿ

ಶಿವಮೊಗ್ಗ: ಪತ್ನಿಯ ಸಾವಿಗೆ ಕಾರಣವಾಗಿ ಕೆಲವು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಪಾಂಡಿಚೆರಿಯಲ್ಲಿ ಬಂಧಿಸಿದ್ದಾರೆ. ಯಾವುದೇ ಮೊಬೈಲ್, ಡಿಜಿಟಲ್ ಉಪಕರಣ ಬಳಸದ ಎಂಜಿನಿಯರ್ ಅನ್ನು ಪೊಲೀಸರು ಪಾಂಡಿಚೆರಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

Read Full Story

12:07 PM (IST) Jan 13

ಟೆಕ್ಕಿ ಶರ್ಮಿಳಾ ಕೇಸಲ್ಲಿ ಟ್ವಿಸ್ಟ್; ಆರೋಪಿ ಕರ್ನಲ್ ಶೇ.97 ಅಂಕ ಗಳಿಸಿದ್ದ, ಕಾಲೇಜಿನಲ್ಲೇ ಕೊಲೆ ಪ್ರಾಕ್ಟೀಸ್..!

ರಾಮಮೂರ್ತಿ ನಗರದ ಟೆಕ್ಕಿ ಶರ್ಮಿಳಾ ಸಾವು ಬೆಂಕಿ ಅವಘಡವೆಂದು ಭಾವಿಸಲಾಗಿತ್ತು, ಆದರೆ ಇದು ವ್ಯವಸ್ಥಿತ ಕೊಲೆ ಎಂದು ತನಿಖೆಯಿಂದ ಬಯಲಾಗಿದೆ. ಆರೋಪಿ ಕರ್ನಲ್ ಕುರೈ, ಶರ್ಮಿಳಾಳನ್ನು ಎರಡು ತಿಂಗಳು ಗಮನಿಸಿ, ಕಿಟಕಿ ಮೂಲಕ ಒಳನುಗ್ಗಿ, ಗ್ಯಾಸ್ ಸೋರಿಕೆಯಂತೆ ಕಾಣುವಂತೆ ಮಾಡಿ ಕೊಲೆ ಮಾಡಿದ್ದನು.

Read Full Story

11:56 AM (IST) Jan 13

BBK 12 - ತಣ್ಣೀರು ಸ್ನಾನ, ಉರುಳು ಸೇವೆ; ಚಾಮುಂಡೇಶ್ವರಿ ತಾಯಿಗೆ ಹಸಿರು ಸೀರೆ ಅರ್ಪಿಸಿದ್ಯಾಕೆ ಮಲ್ಲಮ್ಮ?

ಬಿಗ್‌ಬಾಸ್ ಕನ್ನಡ ಸೀಸನ್ 12ರ ಮನೆಗೆ ಮರಳಿದ ಮಾತಿನ ಮಲ್ಲಮ್ಮ, ತಾಯಿ ಚಾಮುಂಡೇಶ್ವರಿಗೆ ಕಟ್ಟಿದ್ದ ಹರಕೆಯನ್ನು ತೀರಿಸಿದ್ದಾರೆ. ತಣ್ಣೀರಿನ ಸ್ನಾನ ಮಾಡಿ, ದೇವಿಗೆ ಸೀರೆ ಅರ್ಪಿಸಿದ ಮಲ್ಲಮ್ಮನ ಮೊಮ್ಮಗನಿಗೆ ಬಿಗ್‌ಬಾಸ್ 'ಗಣೇಶ್' ಎಂದು ಹೆಸರಿಟ್ಟು ಅವರ ಆಸೆಯನ್ನು ಪೂರೈಸಿದ್ದಾರೆ.

Read Full Story

11:54 AM (IST) Jan 13

17ಕ್ಕೆ ಮೊದಲ ವಂದೇಭಾರತ್‌ ಸ್ಲೀಪರ್‌ ರೈಲಿಗೆ ಚಾಲನೆ-ಒಳಗೆ ಏನೇನು ಸಿಗುತ್ತದೆ? ದರ ಏನು? -

ಹಲವು ತಿಂಗಳ ವಿಳಂಬದ ಬಳಿಕ ದೇಶದ ಮೊದಲ ವಂದೇ ಭಾರತ ಸ್ಲೀಪರ್‌ ರೈಲಿಗೆ ನ.17ರಂದು ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಲಿದ್ದಾರೆ. ಗುವಾಹಟಿ ಮತ್ತು ಕೋಲ್ಕತಾ ನಡುವೆ ಇದು ಸಂಚರಿಸಲಿದ್ದು, ಸಾಮಾನ್ಯ ಪ್ರಯಾಣಿಕರಿಗಷ್ಟೇ ಮೀಸಲಿರಲಿದೆ

Read Full Story

11:22 AM (IST) Jan 13

ಕಸ ಗುಡಿಸುವಾಗ 'ರಸ್ತೆಯಲ್ಲಿ ಸಿಕ್ಕ ಬಂಗಾರದ ಗಂಟ'ನ್ನು ಮಾಲೀಕನಿಗೆ ವಾಪಸ್ ಕೊಟ್ಟ ಪೌರ ಕಾರ್ಮಿಕ ಮಹಿಳೆ!

ಕಸ ಸ್ವಚ್ಛಗೊಳಿಸುವಾಗ ರಸ್ತೆ ಬದಿಯಲ್ಲಿ ಬಿದ್ದಿದ್ದ ಬರೋಬ್ಬರಿ 45 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಪೌರಕಾರ್ಮಿಕ ಮಹಿಳೆಯೊಬ್ಬರು ಪೊಲೀಸರಿಗೆ ಒಪ್ಪಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪೊಲೀಸರು ಬಂಗಾರದ ಗಂಟನ್ನು ಮಾಲೀಕರಿಗೆ ಒಪ್ಪಿಸಿದ್ದಾರೆ.

Read Full Story

11:17 AM (IST) Jan 13

BBK 12 - ಫಿನಾಲೆ ವಾರದಲ್ಲಿ ಗಿಲ್ಲಿಯ ಅಚ್ಚರಿ ನಡೆ; ಕಾವ್ಯಾಳನ್ನು ಬಿಟ್ಟುಕೊಟ್ಟು ಭಾವುಕನಾಗಿ ಮಾತಾಡಿದ ನಟ

ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ವಾರದಲ್ಲಿ, ಗಿಲ್ಲಿ ನಟ ಅಚ್ಚರಿಯ ಹೇಳಿಕೆ ನೀಡಿದ್ದಾರೆ. 'ಪವಿತ್ರ ಬಂಧನ' ತಂಡದ ಪ್ರಶ್ನೆಗೆ, ಕಾವ್ಯಾ ಬದಲು ತಾಯಿಯಂತೆ ಆರೈಕೆ ಮಾಡುವ ರಕ್ಷಿತಾ ಜೊತೆ ತನಗೆ ಪವಿತ್ರ ಬಂಧನವಿದೆ ಎಂದು ಗಿಲ್ಲಿ ಭಾವುಕರಾಗಿ ಹೇಳಿಕೊಂಡಿದ್ದಾರೆ.
Read Full Story

10:51 AM (IST) Jan 13

ಗಾಂಧಿ ಕ್ರೀಡಾಂಗಣ ಹೆಸರು ಬದಲಿಸಿ ಪರಮೇಶ್ವರ ಸ್ಟೇಡಿಯಂ ಎಂದು ನಾಮಕರಣ - ಬಿಜೆಪಿ ಪ್ರತಿಭಟನೆಗೆ ಪರಂ ತಿರುಗೇಟು!

ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದ ಆವರಣದಲ್ಲಿರುವ ಒಳಾಂಗಣ ಕ್ರೀಡಾ ಸಂಕೀರ್ಣಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೆಸರು ಇಡಲು ಮುಂದಾಗಿರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಗಾಂಧೀಜಿ ಹೆಸರು ತೆಗೆಯಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

Read Full Story

10:26 AM (IST) Jan 13

ಬೆಂಗಳೂರಲ್ಲಿ ಅಕ್ರಮ ವಲಸಿಗರ ತೆರವು ಕಾರ್ಯದ ವೇಳೆ 'ಜೈ ಬಾಂಗ್ಲಾ' ಎಂದು ಕೂಗಿದ ಮಹಿಳೆ; ಶರ್ಬಾನು ಅರೆಸ್ಟ್!

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶ ಮೂಲದ ಶರ್ಬಾನು ಖತನ್ ಎಂಬ ಮಹಿಳೆ ಪೊಲೀಸ್ ತಪಾಸಣೆ ವೇಳೆ 'ಜೈ ಬಾಂಗ್ಲಾ' ಎಂದು ಘೋಷಣೆ ಕೂಗಿ ಆತಂಕ ಸೃಷ್ಟಿಸಿದ್ದಳು. ಈಕೆ, ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ವಾಸಿಸುತ್ತಿದ್ದುದು ತನಿಖೆಯಿಂದ ತಿಳಿದುಬಂದಿದೆ.

Read Full Story

09:46 AM (IST) Jan 13

ರಾಹುಲ್‌ ಜೊತೆ ಮೈಸೂರಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಭೇಟಿ

ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸುತ್ತಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರನ್ನು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಒಟ್ಟಾಗಿ ಭೇಟಿ ಮಾಡಲಿದ್ದಾರೆ.

Read Full Story

09:35 AM (IST) Jan 13

Bengaluru - ತಬ್ಬಿಕೊ, ಕಿಸ್ ಮಾಡುವಂತೆ ಮೆಸೇಜ್; ಮನೆಗೆ ಬಂದು ಗಂಡ ಇದಾನಾ ಅಂತ ಕೇಳ್ತಾನೆ!

ಬೆಂಗಳೂರಿನಲ್ಲಿ ಬಾಡಿಗೆದಾರ ಗೃಹಿಣಿಗೆ ಲೈಂ*ಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮನೆ ಮಾಲೀಕ ಮಧು ಎಂಬಾತನನ್ನು ಬಂಡೇಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಮೆಸೇಜ್ ಮೂಲಕವೂ ಕಿರುಕುಳ ನೀಡುತ್ತಿದ್ದ ಎಂದು ಗೃಹಿಣಿ ದೂರಿನಲ್ಲಿ ತಿಳಿಸಿದ್ದಾರೆ.

Read Full Story

09:02 AM (IST) Jan 13

BBK 12 - ಬಿಡುಗಡೆಯಾದ ಬಿಗ್‌ಬಾಸ್ ಪ್ರೋಮೋಗೆ 'ಇದಲ್ಲ, ಅದು' ಬೇಕೆಂದ ಫ್ಯಾನ್ಸ್; ಅಂತಿಮ ಸುತ್ತಿನ ಟ್ವಿಸ್ಟ್

ಬಿಗ್‌ಬಾಸ್ ಸೀಸನ್ 12ರ ಫಿನಾಲೆ ವಾರದಲ್ಲಿ ಸ್ಪರ್ಧಿಗಳು ತಮ್ಮ ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ. ಈ ನಡುವೆ, ವೀಕ್ಷಕರು 'ಗಿಲ್ಲಿ' ನಟನ ಪರ ಧ್ವನಿ ಎತ್ತುತ್ತಿದ್ದರೆ, ಮತ್ತೊಂದೆಡೆ ಸಾಮಾನ್ಯ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರ ಜನಪರ ಕಾಳಜಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Read Full Story

08:54 AM (IST) Jan 13

ತೆರಿಗೆ ಹೊರೆಯಿಂದ ಸಂಕ್ರಾಂತಿ ಹಿಗ್ಗು ಮಾಯ - ರವಿಕುಮಾರ್

ರಾಜ್ಯ ಕಾಂಗ್ರೆಸ್ ಸರ್ಕಾರದ ತೆರಿಗೆ ಹೊರೆ‌ ಮತ್ತು ರಸ್ತೆ ಗುಂಡಿಗಳಿಂದಾಗಿ ಸಂಕ್ರಾಂತಿಯ ಹಿಗ್ಗಿನ ಸುಗ್ಗಿಯ ಕಾಲದಲ್ಲೂ ರಾಜ್ಯದ ಜನತೆ ಕುಗ್ಗಿ ನಡೆಯುವಂತಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ವ್ಯಂಗ್ಯವಾಡಿದ್ದಾರೆ.

Read Full Story

08:41 AM (IST) Jan 13

ನಾಳೆಯಿಂದ ಲಾಲ್‌ಬಾಗ್‌ನಲ್ಲಿ ತೇಜಸ್ವಿ- ವಿಸ್ಮಯ ಫ್ಲವರ್‌ಶೋ

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಜ.14 ರಿಂದ 26ರವರೆಗೆ ನಡೆಯುವ 219ನೇ ಫಲಪುಷ್ಪ ಪ್ರದರ್ಶನ ಹೊಸತನ ಮತ್ತು ಹಲವು ವೈಶಿಷ್ಟ್ಯಗಳೊಂದಿಗೆ ಕೂಡಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.

Read Full Story

08:27 AM (IST) Jan 13

BBK12 - ರಕ್ಷಿತಾ ಹೇಳಿದ ಮೂರು ಬೇಡಿಕೆಗೆ ಕರುನಾಡಿನ ಜನತೆ ಫಿದಾ; ಇದು ಪ್ರಬುದ್ಧತೆ ಅಂದ್ರು!

ಬಿಗ್‌ಬಾಸ್ ಸೀಸನ್ 12ರ ಫಿನಾಲೆ ವಾರದಲ್ಲಿ, ಸ್ಪರ್ಧಿ ರಕ್ಷಿತಾ ಶೆಟ್ಟಿ ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಮೀನುಗಾರರಿಗೆ ವೇದಿಕೆ, ಕರಾವಳಿಯ ಹುಲಿವೇಷ ನೃತ್ಯ ಮತ್ತು ಕನ್ನಡ ನಾಟಕ ನೋಡುವ ಆಕೆಯ ಆಸೆಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ.
Read Full Story

07:58 AM (IST) Jan 13

ಬಯಲಾಯ್ತು ಲಕ್ಕುಂಡಿ ನಿಧಿ ತೂಕದ ಸತ್ಯ! ಏಕಾಏಕಿ ಎಚ್ಚೆತ್ತ ಜಿಲ್ಲಾಡಳಿತ, ಒತ್ತಡಕ್ಕೆ ಬಿದ್ದರಾ ಅಧಿಕಾರಿ?

ಗದಗದ ಲಕ್ಕುಂಡಿಯಲ್ಲಿ ಮನೆಯ ಪಾಯ ತೆಗೆಯುವಾಗ ಎಷ್ಟು ತೂಕದ ಬಂಗಾರದ ಆಭರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಆದರೆ, ಪುರಾತತ್ವ ಇಲಾಖೆ ಅಧಿಕಾರಿಯ ಹೇಳಿಕೆ ಮತ್ತು ಸಿಎಂ ಸಿದ್ದರಾಮಯ್ಯ ಅವರ ವೈರಲ್ ವಿಡಿಯೋದಿಂದಾಗಿ ಆಭರಣಗಳ ತೂಕದ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.

Read Full Story

07:56 AM (IST) Jan 13

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ

ಇಲ್ಲಿನ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ಉಡಾವಣೆಯಾಗಿದ್ದ ಇಸ್ರೋದ ಈ ವರ್ಷದ ಮೊದಲ ಉಪಗ್ರಹವು ಪಿಎಸ್‌ಎಲ್‌ವಿ-ಸಿ62 ರಾಕೆಟ್‌ನಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ 3ನೇ ಹಂತದಲ್ಲಿ ವಿಫಲವಾಗಿದೆ.

Read Full Story

07:49 AM (IST) Jan 13

BMRCL - ಇನ್ಮುಂದೆ ಪ್ರತಿ ವರ್ಷ ನಮ್ಮ ಮೆಟ್ರೋ ದರ ಏರಿಕೆಗೆ ಪ್ರಸ್ತಾವನೆ? ಎಷ್ಟು ಹೆಚ್ಚಳ?

ದರ ಪರಿಷ್ಕರಣಾ ಸಮಿತಿಯ ವರದಿ ಅನ್ವಯ ಪ್ರತಿ ವರ್ಷ ಶೇ.5ರಷ್ಟು ಮೆಟ್ರೋ ದರ ಹೆಚ್ಚಳಕ್ಕೆ ಬಿಎಂಆರ್‌ಸಿಎಲ್‌ ಮುಂದಾಗುವ ಸಾಧ್ಯತೆಯಿದೆ. ಹೆಚ್ಚುತ್ತಿರುವ ನಿರ್ವಹಣಾ ವೆಚ್ಚ ಮತ್ತು ಸಾಲವನ್ನು ಇದಕ್ಕೆ ಕಾರಣವಾಗಿ ನೀಡಲಾಗುತ್ತಿದೆ.

Read Full Story

More Trending News