LIVE NOW
Published : Jun 12, 2026, 07:42 AM ISTUpdated : Jun 12, 2026, 01:11 PM IST

Karnataka News Live: 'ನಾನು ಬದುಕಿದ್ದೀನಿ, ಸತ್ತಿಲ್ಲ'.. ನಿಧನದ ಸುಳ್ಳುಸುದ್ದಿ ಹಬ್ಬಿಸಿದವರ ವಿರುದ್ಧ ಬೆಳ್ಳಂಬೆಳಿಗ್ಗೆ ರೊಚ್ಚಿಗೆದ್ದ ನಟ ದೊಡ್ಡಣ್ಣ!

ಸಾರಾಂಶ

ಪೆಟ್ರೋಲ್, ಡೀಸೆಲ್‌ ಹಾಗೂ ತರಕಾರಿ ಬೆಲೆ ಏರಿಕೆ ನಡುವೆಯೇ ರಾಜ್ಯದಲ್ಲಿ ಇದೀಗ ವಿವಿಧ ತಳಿಯ ಅಕ್ಕಿ ಬೆಲೆಯೂ ಹೆಚ್ಚಳವಾಗಿದೆ. ಪ್ರತಿ ಕೆಜಿ ಅಕ್ಕಿಗೆ 6 ರಿಂದ 10 ರು.ನಷ್ಟು ಹಾಗೂ 25-26 ಕೆ.ಜಿ. ಚೀಲಕ್ಕೆ 150 ರು.ನಷ್ಟು ದರ ಏರಿಕೆಯಾಗುವ ಮೂಲಕ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬಿದ್ದಿದೆ.

ಮಾರುಕಟ್ಟೆಯಲ್ಲಿ ಅಕ್ಕಿ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆಯಾಗಿದೆ. ಕೇಂದ್ರ ಸರ್ಕಾರ ವಿವಿಧ ದೇಶಗಳಿಗೆ ಅಕ್ಕಿ ರಫ್ತು ಮಾಡಲು ಅವಕಾಶ ನೀಡಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿ ಲಭ್ಯತೆ ಕಡಿಮೆಯಾಗಿದೆ. ಇದೇ ಕಾರಣದಿಂದ ಬೆಲೆ ಏರಿಕೆಯಾಗುತ್ತಿದೆ. ಮುಂದಿನ ನವೆಂಬರ್‌ ವರೆಗೂ ಅಕ್ಕಿ ಕೊರತೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಸ್ಥಳೀಯ ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ.

ಸೋನಾ ಮಸೂರಿ, ಸ್ಟೀಮ್‌ ಅಕ್ಕಿ, ಕೋಲಂ ಮತ್ತು ರಾ ರೈಸ್‌ ಸೇರಿ ಎಲ್ಲ ಮಾದರಿಯ ಅಕ್ಕಿ ಬೆಲೆ ಕೆಜಿಗೆ 6ರಿಂದ 10 ರು.ಹೆಚ್ಚಳವಾಗಿದೆ. ಹತ್ತು ದಿನಗಳ ಹಿಂದೆಯೇ ಅಕ್ಕಿ ದರ ಏರಿಕೆಯಾಗಿದೆ. ಪ್ರತಿ 26 ಕೆಜಿ ಅಕ್ಕಿ ಮೂಟೆ ಬೆಲೆ ಕನಿಷ್ಠ 150 ರು.ಹೆಚ್ಚಳವಾಗಿದೆ. ಸೋನಾ ಸ್ಟೀಮ್‌ ರೈಸ್‌ 43 ರು.ನಿಂದ 49 ರು.ಗೆ ಹಾಗೂ ಸೋನಾ ರಾ ರೈಸ್‌ 52 ರೂ.ನಿಂದ 59 ರು.ಗೆ ಏರಿಕೆಯಾಗಿದೆ. ಅಕ್ಟೋಬರ್‌, ನವೆಂಬರ್‌ನಲ್ಲಿ ಹೊಸ ಅಕ್ಕಿ ಮಾರುಕಟ್ಟೆಗೆ ಬರುವವರೆಗೂ ಕಾಯಬೇಕಾಗಿರುವುದು ಅನಿವಾರ್ಯ ಎನ್ನುತ್ತಾರೆ ವ್ಯಾಪಾರಸ್ಥರು.

01:11 PM (IST) Jun 12

'ನಾನು ಬದುಕಿದ್ದೀನಿ, ಸತ್ತಿಲ್ಲ'.. ನಿಧನದ ಸುಳ್ಳುಸುದ್ದಿ ಹಬ್ಬಿಸಿದವರ ವಿರುದ್ಧ ಬೆಳ್ಳಂಬೆಳಿಗ್ಗೆ ರೊಚ್ಚಿಗೆದ್ದ ನಟ ದೊಡ್ಡಣ್ಣ!

ದೊಡ್ಡಣ್ಣ ಅವರು ಈ ವಿಡಿಯೋ ಬಿಡುಗಡೆ ಮಾಡುತ್ತಿದ್ದಂತೆಯೇ ಅವರ ಲಕ್ಷಾಂತರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ದೊಡ್ಡಣ್ಣ ಅವರು ಅರೋಗ್ಯವಾಗಿದ್ದು, ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಅವರ ಕುಟುಂಬ ವರ್ಗ ಕೂಡ ಮನವಿ ಮಾಡಿದೆ. 

Read Full Story

01:01 PM (IST) Jun 12

ಬಳ್ಳಾರಿಯಲ್ಲಿ ಸಿಕ್ಕ ಬಂಡೆಯಲ್ಲಿ ಬಯಲಾಯ್ತು 17ನೇ ಶತಮಾನದ ನಿಗೂಢ ರಹಸ್ಯ, 8 ಸಾಲಿನ ಅಪರೂಪದ ಶಾಸನ ಪತ್ತೆ!

ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದ ಕೃಷಿ ಜಮೀನೊಂದರಲ್ಲಿ 17ನೇ ಶತಮಾನಕ್ಕೆ ಸೇರಿದ ಅಪರೂಪದ ಶಿಲಾಶಾಸನವೊಂದು ಪತ್ತೆಯಾಗಿದೆ. ಪಾಳೆಗಾರರ ಕಾಲದ್ದೆಂದು ಅಂದಾಜಿಸಲಾದ ಈ ಶಾಸನವು, ಸ್ಥಳೀಯ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುವ ಮಹತ್ವದ ದಾಖಲೆಯಾಗಿದ್ದು, ಸಂಶೋಧಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.
Read Full Story

12:41 PM (IST) Jun 12

Ballari University Exam Scam - ಬಳ್ಳಾರಿ ವಿವಿಯಲ್ಲಿ ಹಣ ಕೊಟ್ಟರೆ ಪರೀಕ್ಷೆ ಪಾಸ್‌! ಆಡಿಯೊ ವೈರಲ್

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಹಣ ಪಡೆದು ಅನುತ್ತೀರ್ಣಗೊಂಡ ವಿದ್ಯಾರ್ಥಿಗಳನ್ನು ಪಾಸ್ ಮಾಡುವ ದಂಧೆ ಬಯಲಾಗಿದೆ. ವಿವಿ ಸಿಬ್ಬಂದಿ ಮತ್ತು ವಿದ್ಯಾರ್ಥಿ ನಡುವಿನ ಆಡಿಯೋ ಸಂಭಾಷಣೆ ವೈರಲ್ ಆಗಿದೆ.

Read Full Story

11:15 AM (IST) Jun 12

ಹಾಸನ ಲೈಂಗಿಕ ಹಗರಣಕ್ಕೆ ಭರ್ತಿ 2 ವರ್ಷ - ಪೆನ್‌ಡ್ರೈವ್ ಸ್ಫೋಟದಿಂದ ಜೀವಾವಧಿಯವರೆಗೆ ಪ್ರಜ್ವಲ್ ರೇವಣ್ಣ ಜೈಲು ಜೀವನ

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣವು ಪೆನ್‌ಡ್ರೈವ್ ಸ್ಫೋಟದಿಂದ ಆರಂಭವಾಗಿ, ಎಸ್‌ಐಟಿ ತನಿಖೆಯ ನಂತರ ಆರೋಪಿಗೆ ಜೀವಾವಧಿ ಶಿಕ್ಷೆಯಾಗುವುದರೊಂದಿಗೆ ಅಂತ್ಯಗೊಂಡಿದೆ. ಈ ಪ್ರಕರಣವು ರೇವಣ್ಣ ಕುಟುಂಬವನ್ನೂ ಕಾನೂನಿನ ಸುಳಿಯಲ್ಲಿ ಸಿಲುಕಿಸಿ, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.
Read Full Story

10:37 AM (IST) Jun 12

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ತನ್ನ ಹೆಸರು ಉಲ್ಲೇಖ, ನಟ ಪ್ರಕಾಶ್ ರಾಜ್ ಟ್ವೀಟ್‌ ಸ್ಪಷ್ಟನೆ

ಧರ್ಮಸ್ಥಳ ಪ್ರಕರಣದಲ್ಲಿ 'ಮಾಸ್ಕ್ ಮ್ಯಾನ್' ಚಿನ್ನಯ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಡಾ. ವೀರೇಂದ್ರ ಹೆಗ್ಗಡೆ ವಿರುದ್ಧ ₹200 ಕೋಟಿ ಮೊತ್ತದ ಬೃಹತ್ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್ ಅವರ ಹೆಸರೂ ಪ್ರಸ್ತಾಪವಾಗಿದ್ದು, ಅವರು ಶೀಘ್ರದಲ್ಲೇ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡುವುದಾಗಿ ತಿಳಿಸಿದ್ದಾರೆ.
Read Full Story

10:03 AM (IST) Jun 12

ಬೆಂಗಳೂರಿನಲ್ಲಿ ನಿಮ್ಮ ಮನೆ ಕಾಂಪೌಂಡ್ ಹೇಗಿದೆ? 1.5 ಮೀ.ಗಿಂತ ಎತ್ತರವಿದ್ರೆ ನೆಲಸಮ ಫಿಕ್ಸ್!

ರಾಷ್ಟ್ರೀಯ ಕಟ್ಟಡ ಸಂಹಿತೆ ಉಲ್ಲಂಘಿಸಿ ನಿರ್ಮಿಸಲಾದ 1.5 ಮೀಟರ್‌ಗಿಂತ ಎತ್ತರದ ಕಾಂಪೌಂಡ್‌ಗಳನ್ನು ಬೆಂಗಳೂರಿನಲ್ಲಿ ನೆಲಸಮಗೊಳಿಸಲು ಜಿಬಿಎ ಮುಂದಾಗಿದೆ. ಸಚಿವರ ನಿವಾಸಗಳು ಮತ್ತು ಸರ್ಕಾರಿ ಅತಿಥಿಗೃಹಗಳೂ ಸೇರಿದಂತೆ ನಿಯಮ ಮೀರಿದ ಎಲ್ಲಾ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಿ, ಕ್ರಮ ಕೈಗೊಳ್ಳಲಾಗುತ್ತಿದೆ.

Read Full Story

09:45 AM (IST) Jun 12

ಶಿವಮೊಗ್ಗದಲ್ಲಿ ವಿಚಿತ್ರ ಘಟನೆ - ಕೈದಿ ಮಾತು ಕೇಳಿ ಪತ್ನಿಗೆ ಬೆದರಿಸಲು ಬಂದು ಗೂಸಾ ತಿಂದ ಬುರ್ಖಾಧಾರಿಗಳು!

ಜೈಲಿನಲ್ಲಿರುವ ಪತಿ, ತನ್ನನ್ನು ನೋಡಲು ಬಾರದ ಪತ್ನಿಗೆ ಬೆದರಿಸಲು ನಾಲ್ವರು ಸಹಚರರನ್ನು ಬುರ್ಖಾ ಹಾಕಿ ಕಳುಹಿಸಿದ್ದಾನೆ. ಆದರೆ, ಸ್ಥಳೀಯರಿಗೆ ಅನುಮಾನ ಬಂದು ಬುರ್ಖಾಧಾರಿಗಳಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
Read Full Story

09:03 AM (IST) Jun 12

300 ಮಕ್ಕಳಿದ್ದಾರೆ ಶಿಕ್ಷಕರಿಲ್ಲ, ಒಂದೇ ಕೊಠಡಿ ಎರಡು ತರಗತಿಗಳಿಗೆ ಪಾಠ, ಇದು ಸರ್ಕಾರಿ ಶಾಲೆಯೋ, ಕುರಿದೊಡ್ಡಿಯೋ?

ಹೂವಿನಹಡಗಲಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 300 ವಿದ್ಯಾರ್ಥಿಗಳಿದ್ದರೂ, ಇರುವುದು ಕೇವಲ 6 ಶಿಥಿಲಗೊಂಡ ಕೊಠಡಿಗಳು. ಕೊಠಡಿಗಳ ತೀವ್ರ ಕೊರತೆಯಿಂದಾಗಿ ಮಕ್ಕಳು ಮರದ ನೆರಳಿನಲ್ಲಿ ಮತ್ತು ಶಾಲಾ ಕಟ್ಟೆಯ ಮೇಲೆ ಕುಳಿತು ಪಾಠ ಕಲಿಯುವ ದಯನೀಯ ಸ್ಥಿತಿ ನಿರ್ಮಾಣವಾಗಿದೆ.
Read Full Story

08:54 AM (IST) Jun 12

ಕೊಲೆ ನಡೆದು 2 ವರ್ಷ - ಜೈಲಿನಲ್ಲಿ ವಾರಕ್ಕೆ 3 ಪುಸ್ತಕ ಓದುತ್ತಿರುವ ದರ್ಶನ್, ಬರವಣಿಗೆಯಲ್ಲಿ ನಿರತಳಾದ ಪವಿತ್ರಾಗೌಡ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಪುಸ್ತಕ ಓದುತ್ತಾ ಕಾಲ ಕಳೆದರೆ, ಪವಿತ್ರಾ ಗೌಡ ತಮ್ಮ ಆತ್ಮಕಥೆ ಬರೆಯುತ್ತಿದ್ದಾರೆ ಎಂದು ವರದಿಯಾಗಿದೆ.  ದರ್ಶನ್‌ ಮತ್ತು ಸಹಚರರು ಮೊದಲ ಬಾರಿಗೆ ಬಂಧನವಾಗಿ ಎರಡು ವರ್ಷ ಕಳೆದಿದೆ.

Read Full Story

07:44 AM (IST) Jun 12

'ನೆಹರು ದಾಖಲೆ ಮುರಿದರೆ ಸಾಲದು..' ಪ್ರಧಾನಿ ಮೋದಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸವಾಲು!

https://kannada.asianetnews.com/politics/home-minister-priyank-kharge-slams-pm-modi-over-nehru-record-milestone-rav/articleshow-a6xyhew

07:43 AM (IST) Jun 12

ಬೆಂಗಳೂರಲ್ಲಿ ರಾತ್ರೋರಾತ್ರಿ ಪಿಜಿಯಲ್ಲಿ ಕಿರಿಕ್; ಮಾಲೀಕರ ವಿರುದ್ಧ ತಿರುಗಿಬಿದ್ದ ಯುವತಿಯರು!

https://kannada.asianetnews.com/state/bengaluru-anjanadri-pg-girls-midnight-protest-over-food-quality-safety-concerns-eviction-threats/articleshow-df2dpez


More Trending News