LIVE NOW
Published : Dec 11, 2025, 06:53 AM ISTUpdated : Dec 11, 2025, 11:24 PM IST

Karnataka News Live: Washing Machine Guide - ಪೌಡರ್ vs ಲಿಕ್ವಿಡ್, ಟಾಪ್-ಲೋಡ್ vs ಫ್ರಂಟ್-ಲೋಡ್ ಯಾವುದು ಉತ್ತಮ?

ಸಾರಾಂಶ

ಬೆಂಗಳೂರು: ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಬಿಡದಿಯ ಜಾಲಿವುಡ್ ಸ್ಟುಡಿಯೋ ಮತ್ತೆ ಓಪನ್ ಆಗಿದೆ. ಸದ್ದಿಲ್ಲದೇ ಜಾಲಿವುಡ್ ಸ್ಟುಡಿಯೋ ಓಪನ್‌ಗೆ ಮಾಲಿನ್ಯ ನಿಯಂ ತ್ರಣ ಮಂಡಳಿ ಅನುಮತಿ ನೀಡಿದೆ. ಡಿ.5ರಂದೇ ಜಾಲಿವುಡ್ ಸ್ಟುಡಿಯೋ ಪುನಾರಂಭಕ್ಕೆ ಅನುಮತಿ ದೊರಕಿದ್ದು, ಬುಧವಾರದಿಂದ ಸ್ಟುಡಿಯೋ ಕಾರ್ಯಾಚರಣೆ ಆರಂಭಿಸಿದೆ. ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಕಳೆದ ಅ.7ರಂದು ಜಾಲಿ ವುಡ್ ವಾಟರ್‌ಅನ್ವೆಂಚರ್ ಆ್ಯಂಡ್ ಸ್ಟುಡಿ ಯೋಗೆ ಜಿಲ್ಲಾಡಳಿತ ಬೀಗ ಹಾಕಿತ್ತು.

Washing Machine Guide Powder vs Liquid Detergent

11:24 PM (IST) Dec 11

Washing Machine Guide - ಪೌಡರ್ vs ಲಿಕ್ವಿಡ್, ಟಾಪ್-ಲೋಡ್ vs ಫ್ರಂಟ್-ಲೋಡ್ ಯಾವುದು ಉತ್ತಮ?

ಈ ಲೇಖನವು ಟಾಪ್-ಲೋಡ್ ಮತ್ತು ಫ್ರಂಟ್-ಲೋಡ್ ವಾಷಿಂಗ್ ಮೆಷಿನ್‌ಗಳ ನಡುವಿನ ವ್ಯತ್ಯಾಸ ವಿವರಿಸುತ್ತದೆ, ಅವುಗಳ ದಕ್ಷತೆ, ವೆಚ್ಚ ಮತ್ತು ಬಳಕೆಯ ಅನುಕೂಲತೆ ಹೋಲಿಸುತ್ತದೆ. ಜೊತೆಗೆ, ನಿಮ್ಮ ಯಂತ್ರದ ಪ್ರಕಾರಕ್ಕೆ ಅನುಗುಣವಾಗಿ ಲಿಕ್ವಿಡ್ ಅಥವಾ ಪೌಡರ್ ಡಿಟರ್ಜೆಂಟ್‌ ಯಾವುದು ಉತ್ತಮ ಆಯ್ಕೆ ಎಂದು ತಿಳಿಸುತ್ತೆ.

Read Full Story

10:00 PM (IST) Dec 11

Karna Serial ನಿಧಿ ಅರೆಸ್ಟ್​ - ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?

'ಕರ್ಣ' ಸೀರಿಯಲ್‌ನಲ್ಲಿ ನಿಧಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ಕುರುಡಿಯೊಬ್ಬಳಿಗೆ ಸಹಾಯ ಮಾಡಲು ಹೋಗಿ, ಆಕೆಯ ಮೋಸದಿಂದ ರೆಡ್‌ಲೈಟ್ ಏರಿಯಾದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದಾಳೆ. ಈ ಸಂಚಿನ ಹಿಂದೆ ಸಂಜಯ್ ಕೈವಾಡವಿದೆ.
Read Full Story

09:37 PM (IST) Dec 11

ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ - ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?

ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯಲ್ಲಿ ಕಥೆ ಅನಿರೀಕ್ಷಿತ ತಿರುವು ಪಡೆದಿದೆ. ಸತ್ತುಹೋದ ಸಂಧ್ಯಾಗೆ ನ್ಯಾಯ ಕೊಡಿಸಲು ಹೋರಾಡುತ್ತಿದ್ದ ಭಾರ್ಗವಿಗೆ, ಸಂಧ್ಯಾಳೇ ಜೀವಂತವಾಗಿ ಕೋರ್ಟ್‌ನಲ್ಲಿ ಎದುರಾಗಿದ್ದಾಳೆ. ಅಷ್ಟೇ ಅಲ್ಲದೆ, ಭಾರ್ಗವಿಯ ವಿರುದ್ಧವೇ ಆರೋಪ ಮಾಡಿ ಎಲ್ಲರಿಗೂ ಆಘಾತ ನೀಡಿದ್ದಾಳೆ.
Read Full Story

09:20 PM (IST) Dec 11

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!

ಸರ್ಕಾರದ ಸಹಾಯಧನ ಮಂಜೂರು ಮಾಡಲು ಉದ್ಯಮಿಯೊಬ್ಬರಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ತುಮಕೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಜಂಟಿ ನಿರ್ದೇಶಕ ಲಿಂಗರಾಜು ಮತ್ತು ಸಹಾಯಕ ಪ್ರಸಾದ್, ಉದ್ಯಮಿಯಿಂದ ₹1.15 ಲಕ್ಷ ಲಂಚ ಸ್ವೀಕರಿಸುವಾಗ ವಶಕ್ಕೆ..

Read Full Story

09:18 PM (IST) Dec 11

ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯಕ್ಕೆ ಟ್ರಾಮಾ ಕೇರ್ ಸೆಂಟರ್ & ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ತರಲು ಸಿದ್ಧರಿದ್ದು, ಅದಕ್ಕೆ ಬೇಕಾದ ಜಾಗವನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಪ್ರಸ್ತಾವನೆಯು ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಪ್ರತ್ಯುತ್ತರವಾಗಿ ಮೂಡಿಬಂದಿದೆ.

Read Full Story

08:56 PM (IST) Dec 11

ಕುಮಾರ ಪರ್ವತ ಯಾತ್ರೆ, ಬೆಟ್ಟದ ತುದಿಯಲ್ಲಿರುವ ದೇವರ ಪಾದಕ್ಕೆ ಸಂಪ್ರದಾಯದಂತೆ ವಿಶೇಷ ಪೂಜೆ ಸಂಪನ್ನ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಕುಮಾರ ಪರ್ವತದ ತುದಿಯಲ್ಲಿರುವ ಕುಮಾರ ಪಾದಕ್ಕೆ ಬಹುಳ ಷಷ್ಠಿಯಂದು ವಿಶೇಷ ಪೂಜೆ ಸಲ್ಲಿಸಲಾಯಿತು.  ಪೌರಾಣಿಕ ಹಿನ್ನೆಲೆ ಹೊಂದಿರುವ ಈ ಪರ್ವತವು, ಚಾರಣಿಗರ ನೆಚ್ಚಿನ ತಾಣವೂ ಆಗಿದ್ದು, ಇದರ ಪಾವಿತ್ರ್ಯತೆ ಕಾಪಾಡುವುದು ಮುಖ್ಯವಾಗಿದೆ.

Read Full Story

08:20 PM (IST) Dec 11

ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!

ಉಬರ್ ಭಾರತದಲ್ಲಿ ತನ್ನ ಸೇವೆಯನ್ನು ವಿಸ್ತರಿಸಿದ್ದು, ONDC ಮೂಲಕ 'ಉಬರ್ ಡೈರೆಕ್ಟ್' ಎಂಬ B2B ಲಾಜಿಸ್ಟಿಕ್ಸ್ ಸೇವೆಯನ್ನು ಮತ್ತು ಬೆಂಗಳೂರಿಗೆ ಇನ್-ಆಪ್ ಮೆಟ್ರೋ ಟಿಕೆಟ್ ಸೌಲಭ್ಯವನ್ನು ಪರಿಚಯಿಸಿದೆ.   ಮೆಟ್ರೋ ಸೇವೆಯು ಪ್ರಯಾಣಿಕರಿಗೆ QR ಕೋಡ್ ಆಧಾರಿತ ಟಿಕೆಟ್‌ ಒದಗಿಸಲಿದೆ.

Read Full Story

07:48 PM (IST) Dec 11

KSRTC ಬಸ್ ಡ್ರೈವರ್ ಹಾರ್ನ್ ಮಾಡಿದ್ದೇ ತಪ್ಪಾಯ್ತಂತೆ; ಊರಿನ ಜನರೆಲ್ಲಾ ಸೇರಿಕೊಂಡು ಧರ್ಮದೇಟು ಕೊಟ್ಟರು!

ರಾಮನಗರದ ಲಕ್ಷ್ಮೀಪುರ ಗ್ರಾಮದಲ್ಲಿ, ರಸ್ತೆಗೆ ಅಡ್ಡ ಬಂದ ಕುರಿಗಳಿಗೆ ಹಾರ್ನ್ ಮಾಡಿದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಚಾಲಕ ಮಂಜುನಾಥ್ ಅವರು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Read Full Story

07:44 PM (IST) Dec 11

ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!

'ಕಾಟೇರ' ಖ್ಯಾತಿಯ ನಟಿ ಶ್ವೇತಾ ಆರ್ ಪ್ರಸಾದ್ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಭೀಕರ ಬಸ್ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಕೆಟ್ಟ ಫೋನ್ ಕರೆಯಿಂದ ಮಾನಸಿಕವಾಗಿ ವಿಚಲಿತರಾಗಿ ರಸ್ತೆ ದಾಟುತ್ತಿದ್ದಾಗ ಈ ಘಟನೆ ನಡೆದಿದ್ದು, ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. 

Read Full Story

07:38 PM (IST) Dec 11

ದೆಹಲಿ ಗಲಭೆ ಪ್ರಕರಣ - ಉಮರ್ ಖಾಲಿದ್‌ಗೆ ಮಧ್ಯಂತರ ಜಾಮೀನು ಮಂಜೂರು!

2020ರ ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಜೆಎನ್‌ಯು ವಿದ್ವಾಂಸ ಉಮರ್ ಖಾಲಿದ್‌ಗೆ, ಅವರ ಸಹೋದರಿಯ ಮದುವೆಯಲ್ಲಿ ಭಾಗವಹಿಸಲು ದೆಹಲಿ ನ್ಯಾಯಾಲಯವು ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಡಿಸೆಂಬರ್ 16 ರಿಂದ 29ರವರೆಗೆ ಜಾಮೀನು ನೀಡಲಾಗಿದ್ದು ಹಲವು ನಿರ್ಬಂಧ ವಿಧಿಸಿದೆ.

Read Full Story

07:22 PM (IST) Dec 11

BBK 12 Video - ಸ್ನಾನ ಮಾಡದೇ ತೆಪ್ಪಗೆ ಕುಳಿತ ಸೂರಜ್; ಫ್ಲೈಯಿಂಗ್ ಕಿಸ್ ಕೊಟ್ಟು ಸಂತಸಪಟ್ಟ ರಕ್ಷಿತಾ ಶೆಟ್ಟಿ!

ಬಿಗ್ ಬಾಸ್ ಮನೆಯಲ್ಲಿ ಸೂರಜ್ ಸ್ನಾನ ಮಾಡಿಲ್ಲವೆಂದು ರಕ್ಷಿತಾ ಮತ್ತು ಗಿಲ್ಲಿ ಕಾಲೆಳೆದಾಗ ಮನೆಯಲ್ಲಿ ಗೊಂದಲ ಸೃಷ್ಟಿಯಾಯಿತು. ತಾನು ಸ್ನಾನ ಮಾಡಿದ್ದೇನೆಂದು ಸೂರಜ್ ಪದೇ ಪದೇ ಸಮಜಾಯಿಷಿ ನೀಡಿದರೂ, ಒಪ್ಪದಿದ್ದಾಗ ದೇವರಾಣೆ ಮಾಡಿದರು. ಆಗ ರಕ್ಷಿತಾ ಶೆಟ್ಟಿ ಪ್ಲೈಯಿಂಗ್ ಕಿಸ್ ಕೊಟ್ಟು ಖುಷಿಪಟ್ಟರು.

Read Full Story

07:03 PM (IST) Dec 11

ಮಂಗಳೂರಿನ ವಿದ್ಯಾ ಸಂಪತ್ ಕರ್ಕೇರಗೆ ಮಿಸಸ್ ಅರ್ಥ್ ಇಂಟರ್‌ನ್ಯಾಷನಲ್ 2025 ಕಿರೀಟ!

Vidya Sampath Karkera Mrs Earth 2025: ಮಂಗಳೂರಿನ ವಿದ್ಯಾ ಸಂಪತ್ ಕರ್ಕೇರ ಅವರು ಫಿಲಿಫೈನ್ಸ್‌ನಲ್ಲಿ ನಡೆದ ಮಿಸಸ್ ಅರ್ಥ್‌ ಇಂಟರ್‌ನ್ಯಾಷನಲ್‌ 2025 ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಆಸ್ಟ್ರಲ್‌ ಪೇಜೆಂಟ್ಸ್‌ನ ಬೆಂಬಲದೊಂದಿಗೆ 22 ದೇಶಗಳ ಸ್ಪರ್ಧಿಗಳನ್ನು ಸೋಲಿಸಿ ಭಾರತಕ್ಕೆ ಕೀರ್ತಿ ತಂದಿದ್ದಾರೆ.

Read Full Story

06:45 PM (IST) Dec 11

ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ

ವಿಶ್ವವಿಖ್ಯಾತ ಮೈಸೂರು ಅರಮನೆಯ ವರಹ ಗೇಟ್‌ನ ಮೇಲ್ಛಾವಣಿ ಕುಸಿದು, ನಿರ್ವಹಣೆಯ ನಿರ್ಲಕ್ಷ್ಯವನ್ನು ಮತ್ತೊಮ್ಮೆ ಬಯಲು ಮಾಡಿದೆ.  ಈ ಹಿಂದೆ ದರ್ಬಾರ್ ಹಾಲ್ ಸೋರಿಕೆಯಂತಹ ಘಟನೆಗಳು ನಡೆದಿದ್ದು, ಐತಿಹಾಸಿಕ ಕಟ್ಟಡದ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದೆ.

Read Full Story

06:32 PM (IST) Dec 11

ಮುಸ್ಲಿಮರ ವಿರುದ್ಧ ದ್ವೇಷದ ಅಸ್ತ್ರವಾಗಿ ವಂದೇ ಮಾತರಂ ಬಳಸಲಾಗ್ತಿದೆ - ನಟ ಕಿಶೋರ್‌ ಆಕ್ರೋಶ!

ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ನಟ ಕಿಶೋರ್ ಅವರು ಹಾಲಿ ಸರ್ಕಾರವು ಈ ಗೀತೆಯನ್ನು ಮುಸ್ಲಿಮರ ವಿರುದ್ಧ ದ್ವೇಷದ ಅಸ್ತ್ರವಾಗಿ ಮತ್ತು ರಾಜಕೀಯ ಲಾಭಕ್ಕಾಗಿ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

Read Full Story

06:10 PM (IST) Dec 11

ಅಡಿಕೆ ತೋಟದ ದುರಂತ - ಗೊನೆ ಕೊಯ್ಯುವಾಗ ಆಯತಪ್ಪಿ ಬಿದ್ದ ಕಾರ್ಮಿಕ ಸಾವು

ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ, ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ 35 ವರ್ಷದ ಮಂಜು ಎಂಬ ಯುವಕ, ಮರದಿಂದ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಡಿಕೆ ಗೊನೆ ಕೊಯ್ಯುತ್ತಿದ್ದಾಗ ಈ ದುರಂತ ಸಂಭವಿಸಿದೆ.

Read Full Story

06:08 PM (IST) Dec 11

'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!

ಬೆಂಗಳೂರಿನ ಚಿಕ್ಕಪೇಟೆಯಲ್ಲಿ, ಕನ್ನಡದಲ್ಲಿ ಮಾತನಾಡಲು ಹೇಳಿದ ಗ್ರಾಹಕನಿಗೆ ರಾಜಸ್ಥಾನ ಮೂಲದ ಅಂಗಡಿ ಮಾಲೀಕ ಅವಾಚ್ಯ ಶಬ್ದಗಳಿಂದ ನಿಂದಿಸಿ, 'ನೀನೇ ಹಿಂದಿ ಮಾತಾಡು' ಎಂದು ದರ್ಪ ತೋರಿದ್ದಾನೆ.  ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿ, ಆರೋಪಿ ವಿರುದ್ಧ ಎಫ್‌ಐಆರ್ ದಾಖಲಾದ ನಂತರ ಕ್ಷಮೆಯಾಚಿಸಿದ್ದಾನೆ.

Read Full Story

06:06 PM (IST) Dec 11

ಕರ್ನಾಟಕ ಸಂಸದರ ಬಗ್ಗೆ ಪ್ರಧಾನಿ ಮೋದಿ ಅಸಮಾಧಾನ, ತೀವ್ರ ಕ್ಲಾಸ್, ಆ 45 ನಿಮಿಷ ಸಭೆಯಲ್ಲಿ ಹೇಳಿದ್ದೇನು?

ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಸಂಸದರೊಂದಿಗೆ ವಿಶೇಷ ಸಭೆ ನಡೆಸಿ, ಅವರ ಕಾರ್ಯವೈಖರಿಯ ಬಗ್ಗೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆ, ಸರ್ಕಾರದ ಯೋಜನೆಗಳ ಪ್ರಚಾರ ಮತ್ತು ಜನರೊಂದಿಗೆ ಸಂಪರ್ಕ ಸಾಧಿಸುವ ಕುರಿತು ಸಂಸದರಿಗೆ ಸ್ಪಷ್ಟ ಮಾರ್ಗದರ್ಶನ ನೀಡಿದ್ದಾರೆ.

Read Full Story

05:53 PM (IST) Dec 11

'ನಿಮ್ಮ ಪ್ರೀತಿಯ ಪ್ರತಿ ಹನಿ ಅವರಿಗೆ ತಲುಪಿಸುತ್ತೇನೆ..' ಡೆವಿಲ್‌ ವೀಕ್ಷಿಸಿ ಮನತುಂಬಿ ಬರೆದ ವಿಜಯಲಕ್ಷ್ಮೀ ದರ್ಶನ್‌

ದರ್ಶನ್ ಅನುಪಸ್ಥಿತಿಯಲ್ಲಿ 'ಡೆವಿಲ್' ಸಿನಿಮಾ ಬಿಡುಗಡೆಯಾಗಿದ್ದು, ಅವರ ಪತ್ನಿ ವಿಜಯಲಕ್ಷ್ಮೀ ಚಿತ್ರ ವೀಕ್ಷಿಸಿದ್ದಾರೆ. ಸಿನಿಮಾ ಹಾಗೂ ದರ್ಶನ್‌ರ ನಟನೆಯನ್ನು ಹೊಗಳಿದ ಅವರು, ಅಭಿಮಾನಿಗಳ ಪ್ರೀತಿಯನ್ನು ಕಂಡು ಭಾವುಕರಾಗಿದ್ದು, ಈ ಪ್ರೀತಿಯನ್ನು ದರ್ಶನ್‌ಗೆ ತಲುಪಿಸುವ ಭರವಸೆ ನೀಡಿದ್ದಾರೆ.
Read Full Story

05:33 PM (IST) Dec 11

ಸಿಎಂ ಪುತ್ರ ಯತೀಂದ್ರ ಹೇಳಿಕೆ ವಿವಾದ; ಬೆಳಗಾವಿಯಲ್ಲಿ ಡಿಕೆಶಿ ಅಲರ್ಟ್, ಆಪ್ತರ ಲಂಚ್ ಮೀಟಿಂಗ್!

ಯತೀಂದ್ರ ಸಿದ್ದರಾಮಯ್ಯ ಅವರ ಅಧಿಕಾರಾವಧಿ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಬೆಳಗಾವಿಯಲ್ಲಿ ಸರಣಿ ಸಭೆ ನಡೆಸಿದರೆ, ಸಿಎಂ ಸಿದ್ದರಾಮಯ್ಯ ಮಾಧ್ಯಮದವರ ಮೇಲೆ ಗರಂ ಆಗಿ, ನಂತರ ಪುತ್ರನೊಂದಿಗೆ ಚರ್ಚಿಸಿ ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದರು.

Read Full Story

05:03 PM (IST) Dec 11

ಪದೇಪದೆ 'ನಮ್ಮಪ್ಪನೇ ಸಿಎಂ..' ಯತೀಂದ್ರ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರ? ಸತೀಶ್ ಜಾರಕಿಹೊಳಿ ಹೇಳಿದ್ದೇನು?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರರ ಹೇಳಿಕೆಗಳಿಂದ ಸಿಎಂಗೆ ಮುಜುಗರವಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲು ಯತೀಂದ್ರರೊಂದಿಗೆ ಮಾತನಾಡುವುದಾಗಿ ತಿಳಿಸಿದ ಅವರು, ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು ಎಂದರು

Read Full Story

04:55 PM (IST) Dec 11

ಕರ್ನಾಟಕ ವಿಧಾನಸಭೆಯಲ್ಲಿ ಎರಡು ಮಹತ್ವದ ವಿಧೇಯಕ ಮಂಡನೆ, ಉದ್ದೇಶಗಳು ಮತ್ತು ಕಾರಣಗಳು ಯಾವುವು?

 ವಿಧಾನ ಸಭೆಯಲ್ಲಿ ಸರ್ಕಾರವು ಎರಡು ಮಹತ್ವದ ವಿಧೇಯಕಗಳನ್ನು ಮಂಡಿಸಿದೆ. ಗ್ರೇಟರ್ ಬೆಂಗಳೂರು ತಿದ್ದುಪಡಿ ವಿಧೇಯಕವು ನಗರ ಆಡಳಿತದಲ್ಲಿ ಬದಲಾವಣೆಗಳನ್ನು ತರಲು ಉದ್ದೇಶಿಸಿದ್ದರೆ, ಸಾಮಾಜಿಕ ಬಹಿಷ್ಕಾರ ಪ್ರತಿಬಂಧಕ ಮಸೂದೆಯು ಸಮಾಜದಲ್ಲಿ ಬಹಿಷ್ಕಾರ ಹಾಕುವವರಿಗೆ ಕಠಿಣ ಶಿಕ್ಷೆಯನ್ನು ಪ್ರಸ್ತಾಪಿಸುತ್ತದೆ.

Read Full Story

04:35 PM (IST) Dec 11

16 ಬಾರಿ ಬಜೆಟ್ ಮಂಡಿಸಿದ ವಿಶ್ವದ ಕುಖ್ಯಾತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ, ಸತ್ತ ಸರ್ಕಾರದ ಮುಖ್ಯಮಂತ್ರಿ - ಪ್ರತಾಪ್ ಸಿಂಹ ವಾಗ್ದಾಳಿ

ಕೆಜಿಎಫ್‌ನಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ರಾಜ್ಯ ಕಾಂಗ್ರೆಸ್ ಸರ್ಕಾರವನ್ನು 'ಸತ್ತ ಸರ್ಕಾರ' ಎಂದು ಜರೆದಿದ್ದಾರೆ. ಗ್ಯಾರಂಟಿ ಯೋಜನೆಗಳ ವೈಫಲ್ಯವನ್ನು ಟೀಕಿಸಿದ ಅವರು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಗ್ಗೆ ಸಿಎಂ ಸಿದ್ದರಾಮಯ್ಯ ಬಳಸಿದ ಏಕವಚನ ಪದ ಪ್ರಯೋಗ ತೀವ್ರವಾಗಿ ಖಂಡಿಸಿದರು.

Read Full Story

04:32 PM (IST) Dec 11

ನಮಗೆ ಭಿಕ್ಷುಕರಂತೆ ಭಿಕ್ಷೆ ಹಾಕ್ತಾರೆ; ₹10,000 ಕೋಟಿ ಅನುದಾನ ಕೊಡಿ, ಇಲ್ಲ ಪ್ರತ್ಯೇಕ ರಾಜ್ಯ ಮಾಡಿ-ರಾಜು ಕಾಗೆ

ಉತ್ತರ ಕರ್ನಾಟಕದ ಶಾಸಕರು ಭಿಕ್ಷುಕರಂತೆ ಅನುದಾನಕ್ಕೆ ಭಿಕ್ಷೆ ಬೇಡಬೇಕು. 100 ಬಾರಿ ಭಿಕ್ಷೆ ಬೇಡಿದರೆ 10 ಪೈಸೆ ಕೊಡ್ತಾರೆ. ಅನುದಾನ ಹಂಚಿಕೆ ತಾರತಮ್ಯದಿಂದಲೇ ಪ್ರತ್ಯೇಕ ರಾಜ್ಯ ಕೊಡಿ ಎಂದು ಕೇಳುತ್ತಿದ್ದೇನೆ ಶಾಸಕ ರಾಜು ಕಾಗೆ ಸದನದಲ್ಲಿ ಕಣ್ಣೀರಿಟ್ಟರು.

Read Full Story

04:21 PM (IST) Dec 11

BBK 12 - ಏನೂ ಮಾಡಲ್ಲ, ವೇಸ್ಟ್ ಎಂದಿದ್ದ ಗಿಲ್ಲಿ ನಟ; ಠಕ್ಕರ್‌ ಕೊಡೋ ಕೆಲಸ ಮಾಡಿದ ಕಾವ್ಯ ಶೈವ!

BBK 12 Episode Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಸ್ಪರ್ಧಿಗಳಿಗೆ ವಿಲನ್‌ ತಲೆನೋವಾಗಿದ್ದಾರೆ. ವ್ಯಕ್ತಿತ್ವ ಪರೀಕ್ಷೆ ಮಾಡೋದು, ಇಬ್ಬರ ನಡುವಿನ ಸ್ನೇಹ ಸಂಬಂಧ ಟೆಸ್ಟ್‌ ಮಾಡೋದು ಮಾಡುತ್ತಿದ್ದಾರೆ. ಈಗ ಕಾವ್ಯ ಶೈವ ಅಸಲಿ ಆಟಕ್ಕೆ ರೆಡಿಯಾಗಿದ್ದಾರೆ.

Read Full Story

04:13 PM (IST) Dec 11

ಸಿದ್ದರಾಮಯ್ಯ ಹೆಲಿಕಾಪ್ಟರ್‌ ಪ್ರಯಾಣಕ್ಕೆ ರಾಜ್ಯದ ಬೊಕ್ಕಸದಿಂದ ಕೋಟ್ಯಂತರ ಖರ್ಚು!

ಕಳೆದ ಎರಡು ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಮಾನ ಮತ್ತು ಹೆಲಿಕಾಪ್ಟರ್ ಪ್ರಯಾಣದ ವೆಚ್ಚ ₹47.38 ಕೋಟಿ ತಲುಪಿದೆ ಎಂದು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಮಾಹಿತಿ ನೀಡಿದೆ. ವೆಚ್ಚವನ್ನು ಕಡಿಮೆ ಮಾಡಲು ವಾರ್ಷಿಕ ಗುತ್ತಿಗೆ ಆಧಾರದ ಮೇಲೆ ಹೆಲಿಕಾಪ್ಟರ್‌ ಸೇವೆಗೆ ಸರ್ಕಾರ ಚಿಂತನೆ ನಡೆಸಿದೆ.

Read Full Story

03:49 PM (IST) Dec 11

ಅಂದು ಜ್ಯೋತಿಷಿ ಹೇಳಿದ್ದು 'The Devilʼ ಸಿನಿಮಾದಲ್ಲಿ ನಿಜವಾಯ್ತು, Darshan ರಿಯಲ್‌ ಲೈಫ್‌ನಲ್ಲಿ ಏನಾಗತ್ತೆ?

Actor Darshan Thoogudeepa: ನಟ ದರ್ಶನ್‌ ಜೈಲಿನಿಂದ ಬಂದ ಬಳಿಕ ರಾಜಕೀಯಕ್ಕೆ ಬಂದು, ಅಮೋಘ ಗೆಲುವು ಸಾಧಿಸುತ್ತಾರೆ ಎಂದು ಕೆಲ ಜ್ಯೋತಿಷಿಗಳು ಹೇಳಿದ್ದುಂಟು. ಈಗ ‘ದಿ ಡೆವಿಲ್‌ʼ ಸಿನಿಮಾದಲ್ಲಿ ಅವರು ರಾಜಕೀಯಕ್ಕೆ ಬಂದಿದ್ದಾರೆ. ನಿಜ ಜೀವನದಲ್ಲಿ ಏನಾಗುವುದು ಎಂದು ಅವರ ಸಹೋದರ ದಿನಕರ್‌ ಮಾತನಾಡಿದ್ದಾರೆ.

Read Full Story

03:44 PM (IST) Dec 11

ಬಸವತತ್ವ ಪ್ರಚಾರಕ, ವಚನ ಶಿಲಾ ಮಂಟಪದ ರೂವಾರಿ ಚನ್ನಬಸವ ಶ್ರೀಗಳು ಲಿಂಗೈಕ್ಯ

ವಿಜಯಪುರದ ಇಂಗಳೇಶ್ವರ ಮಠದ ಪರಮಪೂಜ್ಯ ಶ್ರೀ ಚನ್ನಬಸವ ಸ್ವಾಮೀಜಿ (97) ವಯೋಸಹಜ ಅನಾರೋಗ್ಯದಿಂದ ಲಿಂಗೈಕ್ಯರಾಗಿದ್ದಾರೆ. ಬಸವ ತತ್ವ ಪ್ರಚಾರಕರಾಗಿದ್ದ ಅವರು, ವಚನ ಶಿಲಾ ಮಂಟಪ ನಿರ್ಮಿಸಿ ಶರಣರ ವಚನಗಳನ್ನು ಶಾಶ್ವತಗೊಳಿಸಿದ್ದರು.

Read Full Story

03:29 PM (IST) Dec 11

ಕೋಲಾರ - ಅಪ್ಪ- ಅಮ್ಮನ ವಿಚ್ಚೇಧನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!

ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ, ಪೋಷಕರ ವಿಚ್ಛೇದನ (ತಲಾಖ್) ಮತ್ತು ನಿರಂತರ ಕುಟುಂಬ ಕಲಹದಿಂದ ಮನನೊಂದ 26 ವರ್ಷದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಂಬಂಧಿಕರೊಂದಿಗೆ ನಡೆದ ಜಗಳದ ನಂತರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

Read Full Story

03:22 PM (IST) Dec 11

ಪ್ರೀತಿಸಿದ ಹುಡುಗಿ ಮೋಸ ಮಾಡಿದ್ರೆ ತಿರುಗಿ ನೋಡದ ಹುಡುಗರು; ದ್ರೋಹ ಮಾಡಿದೋಳ ಹಿಂದೆ ಹೋದ Bigg Boss ಸ್ಪರ್ಧಿ

Bigg Boss Love Story: ಪ್ರಾಣಕ್ಕಿಂತ ಜಾಸ್ತಿ ಪ್ರೀತಿಸಿದ ಹುಡುಗಿ ಇನ್ನೊಂದು ಸಂಬಂಧ ಇಟ್ಟುಕೊಂಡರೆ, ಸುಳ್ಳು ಹೇಳಿದರೆ ಸಹಿಸೋಕೆ ಆಗದು. ಹೀಗಿರುವಾಗ ಬಿಗ್‌ ಬಾಸ್‌ ಸ್ಪರ್ಧಿಯೋರ್ವರು ತಾನು ಪ್ರೀತಿಸಿದ್ದ ಹುಡುಗಿ ಮೋಸ ಮಾಡಿದ್ದರೂ ಕೂಡ ಮತ್ತೆ ಮತ್ತೆ ಅವರ ಜೊತೆ ಕೆಲಸ ಮಾಡುತ್ತಿರೋದು ಯಾಕೆ?

 

Read Full Story

02:25 PM (IST) Dec 11

2025ರ IMDbಯ ಟಾಪ್ 10 ಜನಪ್ರಿಯ ಚಿತ್ರಗಳ ಪಟ್ಟಿಯಲ್ಲಿ ಸ್ಯಾಂಡಲ್‌ವುಡ್ ಪರಿಮಳ

ಚಲನಚಿತ್ರಗಳನ್ನು ರೇಟಿಂಗ್ ಮಾಡುವ ವೆಬ್‌ಸೈಟ್ ಐಎಂಡಿಬಿ, 2025 ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಜನಪ್ರಿಯ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಟಾಪ್ 10ರಲ್ಲಿ ಕನ್ನಡದ ಪರಿಮಳವಿದೆ.

Read Full Story

02:18 PM (IST) Dec 11

The Devil Movie - ಏನ್ರೀ ಹವಾ ಇದು... ಗಿಲ್ಲಿ ನಟ ಎಣ್ಣೆಯಲ್ಲಿ ಮುಖ ತೊಳ್ಕೊಂಡಿದ್ದಾರೆ ಎಂದ ವೀಕ್ಷಕರು

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಸ್ಪರ್ಧಿ ಗಿಲ್ಲಿ ನಟ ‘ದಿ ಡೆವಿಲ್’‌ ಸಿನಿಮಾದಲ್ಲಿ ನಟಿಸಿದ್ದಾರೆ. ಇಂದು ಈ ಸಿನಿಮಾ ರಾಜ್ಯದಾದ್ಯಂತ 1000 ಸ್ಕ್ರೀನ್‌ಗಳಲ್ಲಿ ರಿಲೀಸ್‌ ಆಗಿದೆ. ಬೆಳಗ್ಗೆ 6 ಗಂಟೆಯಿಂದ ಶೋ ಶುರುವಾಗಿದೆ. ದೊಡ್ಮನೆಯೊಳಗಡೆ ಇರುವ ಗಿಲ್ಲಿ ನಟನಿಗೆ ಇದ್ಯಾವುದರ ಅರಿವೇ ಇಲ್ಲದಂತಾಗಿದೆ.

 

Read Full Story

01:56 PM (IST) Dec 11

ರಾಮ್ ಚರಣ್ ಮೇಲೆ ದೇಶದಾಚೆಗಿನ ಪ್ರೀತಿ.. ಮೆಗಾ ಪವರ್ ಸ್ಟಾರ್‌ಗಾಗಿ ಭಾರತಕ್ಕೆ ಬಂದ ಆ ವಿದೇಶಿ ಫ್ಯಾನ್ಸ್!

ರಾಮ್ ಚರಣ್ ಮೇಲಿನ ಅಭಿಮಾನ ದೇಶಗಳನ್ನು ದಾಟಿದೆ. ಮೆಗಾ ಪವರ್ ಸ್ಟಾರ್ ನೋಡಲು ವಿದೇಶಿ ಅಭಿಮಾನಿಗಳು ಅವರ ಮನೆಗೆ ಬರ್ತಿದ್ದಾರೆ. ಇತ್ತೀಚೆಗೆ ಜಪಾನ್‌ನಿಂದ ಬಂದ ಅಭಿಮಾನಿಗಳಿಗಾಗಿ ಚರಣ್ ಏನು ಮಾಡಿದ್ರು ಗೊತ್ತಾ?

Read Full Story

01:43 PM (IST) Dec 11

ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು - ಬಿಹಾರ ಮೂಲದ ಚಾಂದಿನಿ ಬಂಧನ!

ಬೆಂಗಳೂರಿನಲ್ಲಿ, ವೃದ್ಧೆಯೊಬ್ಬರ ಆರೈಕೆಗೆ ನೇಮಕಗೊಂಡಿದ್ದ ಕೇರ್ ಟೇಕರ್ ಸುಮಾರು 31 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದಾಳೆ. ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಬಾಣಸವಾಡಿ ಪೊಲೀಸರು ಆರೋಪಿಯನ್ನು ಬಂಧಿಸಿ, ಕಳುವಾಗಿದ್ದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

Read Full Story

01:24 PM (IST) Dec 11

ಈ ವರ್ತನೆ ಸರಿಯಲ್ಲ, ಹೈಕೋರ್ಟ್ ಪರಿಗಣಿಸುವ ಮೊದಲು ಕ್ಷಮೆ ಮುಖ್ಯ, ಪ್ರಜ್ವಲ್ ರೇವಣ್ಣ ಅರ್ಜಿಗೆ ಸುಪ್ರೀಂ ಕೆಂಡ!

ಅತ್ಯಾ*ಚಾರ ಪ್ರಕರಣದಲ್ಲಿ ವಿಚಾರಣಾ ಪೀಠವನ್ನು ಬದಲಾಯಿಸಬೇಕೆಂದು ಕೋರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠವು, ಈ ಮನವಿಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

Read Full Story

01:12 PM (IST) Dec 11

ಡಿ.ಕೆ.ಶಿವಕುಮಾರ್ 30 ದಿನಗಳ ಮೌನ ತಪ್ಪಿಸ್ಸಿಗೆ ಒಲಿಯುತ್ತಾ ಪಟ್ಟಾಭಿಷೇಕ; ಜನವರಿ 9ಕ್ಕೆ ಮುಹೂರ್ತ!

ಮುಖ್ಯಮಂತ್ರಿ ಸ್ಥಾನದ ಆಂತರಿಕ ಸಂಘರ್ಷದ ನಡುವೆ, ಡಿಸಿಎಂ ಡಿ.ಕೆ. ಶಿವಕುಮಾರ್ 30 ದಿನಗಳ 'ಮೌನ ತಪಸ್ಸು' ಆರಂಭಿಸಿದ್ದಾರೆ. ಇದು ಹೈಕಮಾಂಡ್‌ಗೆ ತಮ್ಮ ನಿಷ್ಠೆ ಪ್ರದರ್ಶಿಸುವ ರಾಜಕೀಯ ತಂತ್ರವಾಗಿದ್ದು, ಜನವರಿ 9 ರಂದು ನಾಯಕತ್ವ ಬದಲಾವಣೆಯ ನಿರ್ಧಾರ ಹೊರಬೀಳಬಹುದೆಂಬ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
Read Full Story

12:55 PM (IST) Dec 11

400 ಸಿನಿಮಾಗಳಲ್ಲಿ ನಟಿಸಿದ ದಾಖಲೆ, 100 ಕೋಟಿಗೂ ಹೆಚ್ಚು ಆಸ್ತಿ, 3 ಮದುವೆಯಾದ ಸ್ಟಾರ್ ನಟ ಇವರೇನಾ?

ಭಾರತೀಯ ಚಿತ್ರರಂಗದ ಸ್ಟಾರ್ ಹಾಸ್ಯನಟ, 400 ಸಿನಿಮಾಗಳಲ್ಲಿ ನಟಿಸಿದ ದಾಖಲೆ, ಹಾವಭಾವಗಳಿಂದಲೇ ನಗಿಸಬಲ್ಲ ಪ್ರತಿಭೆ, ತೆರೆ ಮೇಲೆ ನಗುವಿನ ಹೊಳೆ ಹರಿಸಿದರೂ ತೆರೆಮರೆಯಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ ನಟ. ಸೊನ್ನೆಯಿಂದ ನೂರಾರು ಕೋಟಿ ಒಡೆಯನಾದ ಈ ಸ್ಟಾರ್ ಯಾರು ಗೊತ್ತಾ?

Read Full Story

12:21 PM (IST) Dec 11

ರಾಜ್ಯದಲ್ಲಿ 'ನಾಯಕತ್ವ ಬದಲಾವಣೆ ಇಲ್ಲ'- ಯತೀಂದ್ರ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಕೆಂಡಾಮಂಡಲ!

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂಬ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯನವರ ಹೇಳಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 'ಈ ಬಗ್ಗೆ ಸಿಎಂ ಅವರೇ ಉತ್ತರಿಸಲಿ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read Full Story

12:18 PM (IST) Dec 11

2025ರಲ್ಲಿ ಫ್ಲಾಪ್ ಸಿನಿಮಾಗಳಲ್ಲಿ ನಟಿಸಿದ ಸ್ಟಾರ್ ನಟಿಯರು ಯಾರು? ಇಬ್ಬರಿಗೆ ಮೂರು ಡಿಸಾಸ್ಟರ್!

2025ರ ಫ್ಲಾಪ್ ನಟಿಯರು: ಈ ವರ್ಷ ಕೆಲವು ನಟಿಯರಿಗೆ ಸೋಲು ತಪ್ಪಲಿಲ್ಲ. 2025ನೇ ವರ್ಷ ಕೆಲ ನಟಿಯರಿಗೆ ಒಳ್ಳೆಯದಾದ್ರೆ, ಇನ್ನು ಕೆಲವರಿಗೆ ನಿರಾಸೆ ತಂದಿದೆ. ಈ ವರ್ಷ ಸೋಲು ಕಂಡ ನಟಿಯರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

Read Full Story

12:00 PM (IST) Dec 11

Amruthadhaare Serial - ಕಲಿಯುಗದಲ್ಲಿ ಕೇಡಿಗಳಿಗೆ ಕಾಲ ಅಂತ ಮತ್ತೆ ಸಾಬೀತಾಯ್ತು; ಪಾಪ..ಗೌತಮ್‌, ಭೂಮಿ!

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಹಾಗೂ ಭೂಮಿಕಾ ಒಂದಾಗುತ್ತಾರಾ? ಇಲ್ಲವಾ ಎಂಬ ಪ್ರಶ್ನೆ ಇರುವಾಗಲೇ ಕಥೆ ಯಾವುದ್ಯಾವುದೋ ಮಜಲುಗಳನ್ನು ತೆಗೆದುಕೊಳ್ಳುತ್ತಿದೆ. ಭೂಮಿಕಾ ಮನಸ್ಸು ಒಪ್ಪಿಸಿ, ಅವಳ ಜೊತೆಗೆ ಜೀವನ ಮಾಡಬೇಕು ಎಂದು ಗೌತಮ್‌ ಅಂದುಕೊಂಡರೆ, ಇನ್ನೊಂದು ಕಡೆ ಜಯದೇವ್‌ ಆಟವೇ ನಡೆಯುತ್ತಿದೆ.

Read Full Story

11:48 AM (IST) Dec 11

ವಿಚ್ಚೇದನ ಪ್ರಕರಣದ ಕ್ಲೈಂಟ್ ಜೊತೆ ರೋಮ್ಯಾಂಟಿಕ್ ರಿಲೇಷನ್‌ ಶಿಪ್‌ - ಮಹಿಳಾ ವಕೀಲೆಗೆ ಸುಪ್ರೀಂಕೋರ್ಟ್ ತರಾಟೆ

ವಿಚ್ಚೇದನ ಪ್ರಕರಣದಲ್ಲಿ ಕಾನೂನು ಸಲಹೆಗಾಗಿ ಬಂದ ಕಕ್ಷಿದಾರನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಮಹಿಳಾ ವಕೀಲೆಯನ್ನು ಸುಪ್ರೀಂಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. 

Read Full Story

More Trending News