ಬೆಂಗಳೂರು: ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಬಿಡದಿಯ ಜಾಲಿವುಡ್ ಸ್ಟುಡಿಯೋ ಮತ್ತೆ ಓಪನ್ ಆಗಿದೆ. ಸದ್ದಿಲ್ಲದೇ ಜಾಲಿವುಡ್ ಸ್ಟುಡಿಯೋ ಓಪನ್ಗೆ ಮಾಲಿನ್ಯ ನಿಯಂ ತ್ರಣ ಮಂಡಳಿ ಅನುಮತಿ ನೀಡಿದೆ. ಡಿ.5ರಂದೇ ಜಾಲಿವುಡ್ ಸ್ಟುಡಿಯೋ ಪುನಾರಂಭಕ್ಕೆ ಅನುಮತಿ ದೊರಕಿದ್ದು, ಬುಧವಾರದಿಂದ ಸ್ಟುಡಿಯೋ ಕಾರ್ಯಾಚರಣೆ ಆರಂಭಿಸಿದೆ. ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಕಳೆದ ಅ.7ರಂದು ಜಾಲಿ ವುಡ್ ವಾಟರ್ಅನ್ವೆಂಚರ್ ಆ್ಯಂಡ್ ಸ್ಟುಡಿ ಯೋಗೆ ಜಿಲ್ಲಾಡಳಿತ ಬೀಗ ಹಾಕಿತ್ತು.

11:24 PM (IST) Dec 11
ಈ ಲೇಖನವು ಟಾಪ್-ಲೋಡ್ ಮತ್ತು ಫ್ರಂಟ್-ಲೋಡ್ ವಾಷಿಂಗ್ ಮೆಷಿನ್ಗಳ ನಡುವಿನ ವ್ಯತ್ಯಾಸ ವಿವರಿಸುತ್ತದೆ, ಅವುಗಳ ದಕ್ಷತೆ, ವೆಚ್ಚ ಮತ್ತು ಬಳಕೆಯ ಅನುಕೂಲತೆ ಹೋಲಿಸುತ್ತದೆ. ಜೊತೆಗೆ, ನಿಮ್ಮ ಯಂತ್ರದ ಪ್ರಕಾರಕ್ಕೆ ಅನುಗುಣವಾಗಿ ಲಿಕ್ವಿಡ್ ಅಥವಾ ಪೌಡರ್ ಡಿಟರ್ಜೆಂಟ್ ಯಾವುದು ಉತ್ತಮ ಆಯ್ಕೆ ಎಂದು ತಿಳಿಸುತ್ತೆ.
10:00 PM (IST) Dec 11
09:37 PM (IST) Dec 11
09:20 PM (IST) Dec 11
ಸರ್ಕಾರದ ಸಹಾಯಧನ ಮಂಜೂರು ಮಾಡಲು ಉದ್ಯಮಿಯೊಬ್ಬರಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ತುಮಕೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಜಂಟಿ ನಿರ್ದೇಶಕ ಲಿಂಗರಾಜು ಮತ್ತು ಸಹಾಯಕ ಪ್ರಸಾದ್, ಉದ್ಯಮಿಯಿಂದ ₹1.15 ಲಕ್ಷ ಲಂಚ ಸ್ವೀಕರಿಸುವಾಗ ವಶಕ್ಕೆ..
09:18 PM (IST) Dec 11
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯಕ್ಕೆ ಟ್ರಾಮಾ ಕೇರ್ ಸೆಂಟರ್ & ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತರಲು ಸಿದ್ಧರಿದ್ದು, ಅದಕ್ಕೆ ಬೇಕಾದ ಜಾಗವನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಪ್ರಸ್ತಾವನೆಯು ಕಾಂಗ್ರೆಸ್ ನಾಯಕರ ಟೀಕೆಗಳಿಗೆ ಪ್ರತ್ಯುತ್ತರವಾಗಿ ಮೂಡಿಬಂದಿದೆ.
08:56 PM (IST) Dec 11
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಕುಮಾರ ಪರ್ವತದ ತುದಿಯಲ್ಲಿರುವ ಕುಮಾರ ಪಾದಕ್ಕೆ ಬಹುಳ ಷಷ್ಠಿಯಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಪೌರಾಣಿಕ ಹಿನ್ನೆಲೆ ಹೊಂದಿರುವ ಈ ಪರ್ವತವು, ಚಾರಣಿಗರ ನೆಚ್ಚಿನ ತಾಣವೂ ಆಗಿದ್ದು, ಇದರ ಪಾವಿತ್ರ್ಯತೆ ಕಾಪಾಡುವುದು ಮುಖ್ಯವಾಗಿದೆ.
08:20 PM (IST) Dec 11
ಉಬರ್ ಭಾರತದಲ್ಲಿ ತನ್ನ ಸೇವೆಯನ್ನು ವಿಸ್ತರಿಸಿದ್ದು, ONDC ಮೂಲಕ 'ಉಬರ್ ಡೈರೆಕ್ಟ್' ಎಂಬ B2B ಲಾಜಿಸ್ಟಿಕ್ಸ್ ಸೇವೆಯನ್ನು ಮತ್ತು ಬೆಂಗಳೂರಿಗೆ ಇನ್-ಆಪ್ ಮೆಟ್ರೋ ಟಿಕೆಟ್ ಸೌಲಭ್ಯವನ್ನು ಪರಿಚಯಿಸಿದೆ. ಮೆಟ್ರೋ ಸೇವೆಯು ಪ್ರಯಾಣಿಕರಿಗೆ QR ಕೋಡ್ ಆಧಾರಿತ ಟಿಕೆಟ್ ಒದಗಿಸಲಿದೆ.
07:48 PM (IST) Dec 11
07:44 PM (IST) Dec 11
'ಕಾಟೇರ' ಖ್ಯಾತಿಯ ನಟಿ ಶ್ವೇತಾ ಆರ್ ಪ್ರಸಾದ್ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಭೀಕರ ಬಸ್ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಕೆಟ್ಟ ಫೋನ್ ಕರೆಯಿಂದ ಮಾನಸಿಕವಾಗಿ ವಿಚಲಿತರಾಗಿ ರಸ್ತೆ ದಾಟುತ್ತಿದ್ದಾಗ ಈ ಘಟನೆ ನಡೆದಿದ್ದು, ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ.
07:38 PM (IST) Dec 11
2020ರ ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಜೆಎನ್ಯು ವಿದ್ವಾಂಸ ಉಮರ್ ಖಾಲಿದ್ಗೆ, ಅವರ ಸಹೋದರಿಯ ಮದುವೆಯಲ್ಲಿ ಭಾಗವಹಿಸಲು ದೆಹಲಿ ನ್ಯಾಯಾಲಯವು ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಡಿಸೆಂಬರ್ 16 ರಿಂದ 29ರವರೆಗೆ ಜಾಮೀನು ನೀಡಲಾಗಿದ್ದು ಹಲವು ನಿರ್ಬಂಧ ವಿಧಿಸಿದೆ.
07:22 PM (IST) Dec 11
ಬಿಗ್ ಬಾಸ್ ಮನೆಯಲ್ಲಿ ಸೂರಜ್ ಸ್ನಾನ ಮಾಡಿಲ್ಲವೆಂದು ರಕ್ಷಿತಾ ಮತ್ತು ಗಿಲ್ಲಿ ಕಾಲೆಳೆದಾಗ ಮನೆಯಲ್ಲಿ ಗೊಂದಲ ಸೃಷ್ಟಿಯಾಯಿತು. ತಾನು ಸ್ನಾನ ಮಾಡಿದ್ದೇನೆಂದು ಸೂರಜ್ ಪದೇ ಪದೇ ಸಮಜಾಯಿಷಿ ನೀಡಿದರೂ, ಒಪ್ಪದಿದ್ದಾಗ ದೇವರಾಣೆ ಮಾಡಿದರು. ಆಗ ರಕ್ಷಿತಾ ಶೆಟ್ಟಿ ಪ್ಲೈಯಿಂಗ್ ಕಿಸ್ ಕೊಟ್ಟು ಖುಷಿಪಟ್ಟರು.
07:03 PM (IST) Dec 11
Vidya Sampath Karkera Mrs Earth 2025: ಮಂಗಳೂರಿನ ವಿದ್ಯಾ ಸಂಪತ್ ಕರ್ಕೇರ ಅವರು ಫಿಲಿಫೈನ್ಸ್ನಲ್ಲಿ ನಡೆದ ಮಿಸಸ್ ಅರ್ಥ್ ಇಂಟರ್ನ್ಯಾಷನಲ್ 2025 ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಆಸ್ಟ್ರಲ್ ಪೇಜೆಂಟ್ಸ್ನ ಬೆಂಬಲದೊಂದಿಗೆ 22 ದೇಶಗಳ ಸ್ಪರ್ಧಿಗಳನ್ನು ಸೋಲಿಸಿ ಭಾರತಕ್ಕೆ ಕೀರ್ತಿ ತಂದಿದ್ದಾರೆ.
06:45 PM (IST) Dec 11
ವಿಶ್ವವಿಖ್ಯಾತ ಮೈಸೂರು ಅರಮನೆಯ ವರಹ ಗೇಟ್ನ ಮೇಲ್ಛಾವಣಿ ಕುಸಿದು, ನಿರ್ವಹಣೆಯ ನಿರ್ಲಕ್ಷ್ಯವನ್ನು ಮತ್ತೊಮ್ಮೆ ಬಯಲು ಮಾಡಿದೆ. ಈ ಹಿಂದೆ ದರ್ಬಾರ್ ಹಾಲ್ ಸೋರಿಕೆಯಂತಹ ಘಟನೆಗಳು ನಡೆದಿದ್ದು, ಐತಿಹಾಸಿಕ ಕಟ್ಟಡದ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದೆ.
06:32 PM (IST) Dec 11
ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ನಟ ಕಿಶೋರ್ ಅವರು ಹಾಲಿ ಸರ್ಕಾರವು ಈ ಗೀತೆಯನ್ನು ಮುಸ್ಲಿಮರ ವಿರುದ್ಧ ದ್ವೇಷದ ಅಸ್ತ್ರವಾಗಿ ಮತ್ತು ರಾಜಕೀಯ ಲಾಭಕ್ಕಾಗಿ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.
06:10 PM (IST) Dec 11
ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ, ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ 35 ವರ್ಷದ ಮಂಜು ಎಂಬ ಯುವಕ, ಮರದಿಂದ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಡಿಕೆ ಗೊನೆ ಕೊಯ್ಯುತ್ತಿದ್ದಾಗ ಈ ದುರಂತ ಸಂಭವಿಸಿದೆ.
06:08 PM (IST) Dec 11
ಬೆಂಗಳೂರಿನ ಚಿಕ್ಕಪೇಟೆಯಲ್ಲಿ, ಕನ್ನಡದಲ್ಲಿ ಮಾತನಾಡಲು ಹೇಳಿದ ಗ್ರಾಹಕನಿಗೆ ರಾಜಸ್ಥಾನ ಮೂಲದ ಅಂಗಡಿ ಮಾಲೀಕ ಅವಾಚ್ಯ ಶಬ್ದಗಳಿಂದ ನಿಂದಿಸಿ, 'ನೀನೇ ಹಿಂದಿ ಮಾತಾಡು' ಎಂದು ದರ್ಪ ತೋರಿದ್ದಾನೆ. ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿ, ಆರೋಪಿ ವಿರುದ್ಧ ಎಫ್ಐಆರ್ ದಾಖಲಾದ ನಂತರ ಕ್ಷಮೆಯಾಚಿಸಿದ್ದಾನೆ.
06:06 PM (IST) Dec 11
ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಸಂಸದರೊಂದಿಗೆ ವಿಶೇಷ ಸಭೆ ನಡೆಸಿ, ಅವರ ಕಾರ್ಯವೈಖರಿಯ ಬಗ್ಗೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆ, ಸರ್ಕಾರದ ಯೋಜನೆಗಳ ಪ್ರಚಾರ ಮತ್ತು ಜನರೊಂದಿಗೆ ಸಂಪರ್ಕ ಸಾಧಿಸುವ ಕುರಿತು ಸಂಸದರಿಗೆ ಸ್ಪಷ್ಟ ಮಾರ್ಗದರ್ಶನ ನೀಡಿದ್ದಾರೆ.
05:53 PM (IST) Dec 11
05:33 PM (IST) Dec 11
ಯತೀಂದ್ರ ಸಿದ್ದರಾಮಯ್ಯ ಅವರ ಅಧಿಕಾರಾವಧಿ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಬೆಳಗಾವಿಯಲ್ಲಿ ಸರಣಿ ಸಭೆ ನಡೆಸಿದರೆ, ಸಿಎಂ ಸಿದ್ದರಾಮಯ್ಯ ಮಾಧ್ಯಮದವರ ಮೇಲೆ ಗರಂ ಆಗಿ, ನಂತರ ಪುತ್ರನೊಂದಿಗೆ ಚರ್ಚಿಸಿ ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದರು.
05:03 PM (IST) Dec 11
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರರ ಹೇಳಿಕೆಗಳಿಂದ ಸಿಎಂಗೆ ಮುಜುಗರವಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲು ಯತೀಂದ್ರರೊಂದಿಗೆ ಮಾತನಾಡುವುದಾಗಿ ತಿಳಿಸಿದ ಅವರು, ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು ಎಂದರು
04:55 PM (IST) Dec 11
ವಿಧಾನ ಸಭೆಯಲ್ಲಿ ಸರ್ಕಾರವು ಎರಡು ಮಹತ್ವದ ವಿಧೇಯಕಗಳನ್ನು ಮಂಡಿಸಿದೆ. ಗ್ರೇಟರ್ ಬೆಂಗಳೂರು ತಿದ್ದುಪಡಿ ವಿಧೇಯಕವು ನಗರ ಆಡಳಿತದಲ್ಲಿ ಬದಲಾವಣೆಗಳನ್ನು ತರಲು ಉದ್ದೇಶಿಸಿದ್ದರೆ, ಸಾಮಾಜಿಕ ಬಹಿಷ್ಕಾರ ಪ್ರತಿಬಂಧಕ ಮಸೂದೆಯು ಸಮಾಜದಲ್ಲಿ ಬಹಿಷ್ಕಾರ ಹಾಕುವವರಿಗೆ ಕಠಿಣ ಶಿಕ್ಷೆಯನ್ನು ಪ್ರಸ್ತಾಪಿಸುತ್ತದೆ.
04:35 PM (IST) Dec 11
ಕೆಜಿಎಫ್ನಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ರಾಜ್ಯ ಕಾಂಗ್ರೆಸ್ ಸರ್ಕಾರವನ್ನು 'ಸತ್ತ ಸರ್ಕಾರ' ಎಂದು ಜರೆದಿದ್ದಾರೆ. ಗ್ಯಾರಂಟಿ ಯೋಜನೆಗಳ ವೈಫಲ್ಯವನ್ನು ಟೀಕಿಸಿದ ಅವರು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಗ್ಗೆ ಸಿಎಂ ಸಿದ್ದರಾಮಯ್ಯ ಬಳಸಿದ ಏಕವಚನ ಪದ ಪ್ರಯೋಗ ತೀವ್ರವಾಗಿ ಖಂಡಿಸಿದರು.
04:32 PM (IST) Dec 11
ಉತ್ತರ ಕರ್ನಾಟಕದ ಶಾಸಕರು ಭಿಕ್ಷುಕರಂತೆ ಅನುದಾನಕ್ಕೆ ಭಿಕ್ಷೆ ಬೇಡಬೇಕು. 100 ಬಾರಿ ಭಿಕ್ಷೆ ಬೇಡಿದರೆ 10 ಪೈಸೆ ಕೊಡ್ತಾರೆ. ಅನುದಾನ ಹಂಚಿಕೆ ತಾರತಮ್ಯದಿಂದಲೇ ಪ್ರತ್ಯೇಕ ರಾಜ್ಯ ಕೊಡಿ ಎಂದು ಕೇಳುತ್ತಿದ್ದೇನೆ ಶಾಸಕ ರಾಜು ಕಾಗೆ ಸದನದಲ್ಲಿ ಕಣ್ಣೀರಿಟ್ಟರು.
04:21 PM (IST) Dec 11
BBK 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಸ್ಪರ್ಧಿಗಳಿಗೆ ವಿಲನ್ ತಲೆನೋವಾಗಿದ್ದಾರೆ. ವ್ಯಕ್ತಿತ್ವ ಪರೀಕ್ಷೆ ಮಾಡೋದು, ಇಬ್ಬರ ನಡುವಿನ ಸ್ನೇಹ ಸಂಬಂಧ ಟೆಸ್ಟ್ ಮಾಡೋದು ಮಾಡುತ್ತಿದ್ದಾರೆ. ಈಗ ಕಾವ್ಯ ಶೈವ ಅಸಲಿ ಆಟಕ್ಕೆ ರೆಡಿಯಾಗಿದ್ದಾರೆ.
04:13 PM (IST) Dec 11
ಕಳೆದ ಎರಡು ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಮಾನ ಮತ್ತು ಹೆಲಿಕಾಪ್ಟರ್ ಪ್ರಯಾಣದ ವೆಚ್ಚ ₹47.38 ಕೋಟಿ ತಲುಪಿದೆ ಎಂದು ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಮಾಹಿತಿ ನೀಡಿದೆ. ವೆಚ್ಚವನ್ನು ಕಡಿಮೆ ಮಾಡಲು ವಾರ್ಷಿಕ ಗುತ್ತಿಗೆ ಆಧಾರದ ಮೇಲೆ ಹೆಲಿಕಾಪ್ಟರ್ ಸೇವೆಗೆ ಸರ್ಕಾರ ಚಿಂತನೆ ನಡೆಸಿದೆ.
03:49 PM (IST) Dec 11
Actor Darshan Thoogudeepa: ನಟ ದರ್ಶನ್ ಜೈಲಿನಿಂದ ಬಂದ ಬಳಿಕ ರಾಜಕೀಯಕ್ಕೆ ಬಂದು, ಅಮೋಘ ಗೆಲುವು ಸಾಧಿಸುತ್ತಾರೆ ಎಂದು ಕೆಲ ಜ್ಯೋತಿಷಿಗಳು ಹೇಳಿದ್ದುಂಟು. ಈಗ ‘ದಿ ಡೆವಿಲ್ʼ ಸಿನಿಮಾದಲ್ಲಿ ಅವರು ರಾಜಕೀಯಕ್ಕೆ ಬಂದಿದ್ದಾರೆ. ನಿಜ ಜೀವನದಲ್ಲಿ ಏನಾಗುವುದು ಎಂದು ಅವರ ಸಹೋದರ ದಿನಕರ್ ಮಾತನಾಡಿದ್ದಾರೆ.
03:44 PM (IST) Dec 11
ವಿಜಯಪುರದ ಇಂಗಳೇಶ್ವರ ಮಠದ ಪರಮಪೂಜ್ಯ ಶ್ರೀ ಚನ್ನಬಸವ ಸ್ವಾಮೀಜಿ (97) ವಯೋಸಹಜ ಅನಾರೋಗ್ಯದಿಂದ ಲಿಂಗೈಕ್ಯರಾಗಿದ್ದಾರೆ. ಬಸವ ತತ್ವ ಪ್ರಚಾರಕರಾಗಿದ್ದ ಅವರು, ವಚನ ಶಿಲಾ ಮಂಟಪ ನಿರ್ಮಿಸಿ ಶರಣರ ವಚನಗಳನ್ನು ಶಾಶ್ವತಗೊಳಿಸಿದ್ದರು.
03:29 PM (IST) Dec 11
ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ, ಪೋಷಕರ ವಿಚ್ಛೇದನ (ತಲಾಖ್) ಮತ್ತು ನಿರಂತರ ಕುಟುಂಬ ಕಲಹದಿಂದ ಮನನೊಂದ 26 ವರ್ಷದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಂಬಂಧಿಕರೊಂದಿಗೆ ನಡೆದ ಜಗಳದ ನಂತರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
03:22 PM (IST) Dec 11
Bigg Boss Love Story: ಪ್ರಾಣಕ್ಕಿಂತ ಜಾಸ್ತಿ ಪ್ರೀತಿಸಿದ ಹುಡುಗಿ ಇನ್ನೊಂದು ಸಂಬಂಧ ಇಟ್ಟುಕೊಂಡರೆ, ಸುಳ್ಳು ಹೇಳಿದರೆ ಸಹಿಸೋಕೆ ಆಗದು. ಹೀಗಿರುವಾಗ ಬಿಗ್ ಬಾಸ್ ಸ್ಪರ್ಧಿಯೋರ್ವರು ತಾನು ಪ್ರೀತಿಸಿದ್ದ ಹುಡುಗಿ ಮೋಸ ಮಾಡಿದ್ದರೂ ಕೂಡ ಮತ್ತೆ ಮತ್ತೆ ಅವರ ಜೊತೆ ಕೆಲಸ ಮಾಡುತ್ತಿರೋದು ಯಾಕೆ?
02:25 PM (IST) Dec 11
ಚಲನಚಿತ್ರಗಳನ್ನು ರೇಟಿಂಗ್ ಮಾಡುವ ವೆಬ್ಸೈಟ್ ಐಎಂಡಿಬಿ, 2025 ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಟಾಪ್ 10 ಜನಪ್ರಿಯ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಟಾಪ್ 10ರಲ್ಲಿ ಕನ್ನಡದ ಪರಿಮಳವಿದೆ.
02:18 PM (IST) Dec 11
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಸ್ಪರ್ಧಿ ಗಿಲ್ಲಿ ನಟ ‘ದಿ ಡೆವಿಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಇಂದು ಈ ಸಿನಿಮಾ ರಾಜ್ಯದಾದ್ಯಂತ 1000 ಸ್ಕ್ರೀನ್ಗಳಲ್ಲಿ ರಿಲೀಸ್ ಆಗಿದೆ. ಬೆಳಗ್ಗೆ 6 ಗಂಟೆಯಿಂದ ಶೋ ಶುರುವಾಗಿದೆ. ದೊಡ್ಮನೆಯೊಳಗಡೆ ಇರುವ ಗಿಲ್ಲಿ ನಟನಿಗೆ ಇದ್ಯಾವುದರ ಅರಿವೇ ಇಲ್ಲದಂತಾಗಿದೆ.
01:56 PM (IST) Dec 11
ರಾಮ್ ಚರಣ್ ಮೇಲಿನ ಅಭಿಮಾನ ದೇಶಗಳನ್ನು ದಾಟಿದೆ. ಮೆಗಾ ಪವರ್ ಸ್ಟಾರ್ ನೋಡಲು ವಿದೇಶಿ ಅಭಿಮಾನಿಗಳು ಅವರ ಮನೆಗೆ ಬರ್ತಿದ್ದಾರೆ. ಇತ್ತೀಚೆಗೆ ಜಪಾನ್ನಿಂದ ಬಂದ ಅಭಿಮಾನಿಗಳಿಗಾಗಿ ಚರಣ್ ಏನು ಮಾಡಿದ್ರು ಗೊತ್ತಾ?
01:43 PM (IST) Dec 11
ಬೆಂಗಳೂರಿನಲ್ಲಿ, ವೃದ್ಧೆಯೊಬ್ಬರ ಆರೈಕೆಗೆ ನೇಮಕಗೊಂಡಿದ್ದ ಕೇರ್ ಟೇಕರ್ ಸುಮಾರು 31 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದಾಳೆ. ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಬಾಣಸವಾಡಿ ಪೊಲೀಸರು ಆರೋಪಿಯನ್ನು ಬಂಧಿಸಿ, ಕಳುವಾಗಿದ್ದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
01:24 PM (IST) Dec 11
ಅತ್ಯಾ*ಚಾರ ಪ್ರಕರಣದಲ್ಲಿ ವಿಚಾರಣಾ ಪೀಠವನ್ನು ಬದಲಾಯಿಸಬೇಕೆಂದು ಕೋರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠವು, ಈ ಮನವಿಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
01:12 PM (IST) Dec 11
12:55 PM (IST) Dec 11
ಭಾರತೀಯ ಚಿತ್ರರಂಗದ ಸ್ಟಾರ್ ಹಾಸ್ಯನಟ, 400 ಸಿನಿಮಾಗಳಲ್ಲಿ ನಟಿಸಿದ ದಾಖಲೆ, ಹಾವಭಾವಗಳಿಂದಲೇ ನಗಿಸಬಲ್ಲ ಪ್ರತಿಭೆ, ತೆರೆ ಮೇಲೆ ನಗುವಿನ ಹೊಳೆ ಹರಿಸಿದರೂ ತೆರೆಮರೆಯಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ ನಟ. ಸೊನ್ನೆಯಿಂದ ನೂರಾರು ಕೋಟಿ ಒಡೆಯನಾದ ಈ ಸ್ಟಾರ್ ಯಾರು ಗೊತ್ತಾ?
12:21 PM (IST) Dec 11
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂಬ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯನವರ ಹೇಳಿಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 'ಈ ಬಗ್ಗೆ ಸಿಎಂ ಅವರೇ ಉತ್ತರಿಸಲಿ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
12:18 PM (IST) Dec 11
2025ರ ಫ್ಲಾಪ್ ನಟಿಯರು: ಈ ವರ್ಷ ಕೆಲವು ನಟಿಯರಿಗೆ ಸೋಲು ತಪ್ಪಲಿಲ್ಲ. 2025ನೇ ವರ್ಷ ಕೆಲ ನಟಿಯರಿಗೆ ಒಳ್ಳೆಯದಾದ್ರೆ, ಇನ್ನು ಕೆಲವರಿಗೆ ನಿರಾಸೆ ತಂದಿದೆ. ಈ ವರ್ಷ ಸೋಲು ಕಂಡ ನಟಿಯರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.
12:00 PM (IST) Dec 11
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾ ಒಂದಾಗುತ್ತಾರಾ? ಇಲ್ಲವಾ ಎಂಬ ಪ್ರಶ್ನೆ ಇರುವಾಗಲೇ ಕಥೆ ಯಾವುದ್ಯಾವುದೋ ಮಜಲುಗಳನ್ನು ತೆಗೆದುಕೊಳ್ಳುತ್ತಿದೆ. ಭೂಮಿಕಾ ಮನಸ್ಸು ಒಪ್ಪಿಸಿ, ಅವಳ ಜೊತೆಗೆ ಜೀವನ ಮಾಡಬೇಕು ಎಂದು ಗೌತಮ್ ಅಂದುಕೊಂಡರೆ, ಇನ್ನೊಂದು ಕಡೆ ಜಯದೇವ್ ಆಟವೇ ನಡೆಯುತ್ತಿದೆ.
11:48 AM (IST) Dec 11
ವಿಚ್ಚೇದನ ಪ್ರಕರಣದಲ್ಲಿ ಕಾನೂನು ಸಲಹೆಗಾಗಿ ಬಂದ ಕಕ್ಷಿದಾರನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಮಹಿಳಾ ವಕೀಲೆಯನ್ನು ಸುಪ್ರೀಂಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.