Published : Nov 14, 2025, 07:23 AM ISTUpdated : Nov 14, 2025, 10:59 PM IST

Karnataka Latest News Live: Breaking - ಕಲಬುರಗಿ ಅಷ್ಟಗಾ ಗ್ರಾಮದಲ್ಲಿ ಲಘು ಭೂಕಂಪ, 2.0 ತೀವ್ರತೆ ದಾಖಲು

ಸಾರಾಂಶ

ಬೆಂಗಳೂರು: ನ.16ರ ಭಾನುವಾರ ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ಗಣವೇಷಧಾರಿಗಳ ಪಥ ಸಂಚಲನಕ್ಕೆ ಹೈಕೋರ್ಟ್‌ ಷರತ್ತುಬದ್ಧವಾಗಿ ಅನುಮತಿಸಿದೆ. ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರಿದ್ದ ಏಕ ಸದಸ್ಯ ನ್ಯಾಯ ಪೀಠವು ಆರೆಸ್ಸೆಸ್‌ ಪಥ ಸಂಚಲನದಲ್ಲಿ 300 ಮಂದಿ ಗಣವೇಷಧಾರಿಗಳಿಗೆ ಹಾಗೂ 50 ಮಂದಿ ಘೋಷ್‌ ವೃಂದ (ಬ್ಯಾಂಡ್‌ ಪಡೆ)ಗೆ ಪಾಲ್ಗೊಳ್ಳಲು ಅವಕಾಶ ನೀಡಿತು.

Kalaburagi earthquake news

10:59 PM (IST) Nov 14

Breaking - ಕಲಬುರಗಿ ಅಷ್ಟಗಾ ಗ್ರಾಮದಲ್ಲಿ ಲಘು ಭೂಕಂಪ, 2.0 ತೀವ್ರತೆ ದಾಖಲು

ಕಲಬುರಗಿ ತಾಲೂಕಿನ ಅಷ್ಟಗಾ ಗ್ರಾಮದಲ್ಲಿ ರಿಕ್ಟರ್ ಮಾಪಕದಲ್ಲಿ 2 ರಷ್ಟು ತೀವ್ರತೆಯ ಭೂಕಂಪನ ದಾಖಲಾಗಿದೆ. ಈ ಕಂಪನದ ಪ್ರಮಾಣ ಕಡಿಮೆ ಇದ್ದು, ಜನರ ಗಮನಕ್ಕೆ ಬಂದಿಲ್ಲವಾದರೂ, ಕಳೆದ ತಿಂಗಳು ಚಿಂಚೋಳಿಯಲ್ಲಿ ನಡೆದ ಇದೇ ರೀತಿಯ ಘಟನೆಯ ನಂತರ ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
Read Full Story

10:26 PM (IST) Nov 14

ಬ್ಲ್ಯಾಕ್‌ಬಕ್‌ ಕಂಪನಿ ಬಳಿಕ ಬೆಳ್ಳಂದೂರಿಗೆ ಗುಡ್‌ಬೈ ಹೇಳಲಿರುವ ಫುಡ್‌ ಡೆಲಿವರಿ ಅಪ್ಲಿಕೇಶನ್‌ ಸ್ವಿಗ್ಗಿ!

ಬೆಳ್ಳಂದೂರಿನಲ್ಲಿ ಒಪ್ಪಂದ ಕೊನೆಗೊಳ್ಳುವುದರಿಂದ, ಸ್ವಿಗ್ಗಿ ವೈಟ್‌ಫೀಲ್ಡ್‌ನಲ್ಲಿ ಉತ್ತಮ ವಿಶಾಲವಾದ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಯೋಜಿಸಿದೆ ಮತ್ತು ಸಾಮಾಜಿಕ ಕಾರಣಗಳಿಗಾಗಿ ಉದ್ಯೋಗಿಗಳು ವೈಟ್‌ಫೀಲ್ಡ್ ಅನ್ನು ಬಯಸುತ್ತಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

 

Read Full Story

09:39 PM (IST) Nov 14

ಅರೆರೆ ಇದೇನಿದು Karna Serial ಟ್ವಿಸ್ಟ್​? ಫ್ಯಾನ್ಸ್​ ಆಸೆಯಂತೆ ನಿತ್ಯಾ-ನಿಧಿ ಇಬ್ರನ್ನೂ ಮದ್ವೆಯಾಗಿ ಬಿಟ್ನಾ?

'ಕರ್ಣ' ಧಾರಾವಾಹಿಯಲ್ಲಿ ನಿಧಿ ಮತ್ತು ನಿತ್ಯಾ ಇಬ್ಬರನ್ನೂ ನಿಭಾಯಿಸಲು ಕರ್ಣ ಹೆಣಗಾಡುತ್ತಿದ್ದಾನೆ. ಇದರ ನಡುವೆಯೇ ಇಬ್ಬರ ಜೊತೆಗೂ ರೊಮ್ಯಾಂಟಿಕ್ ಆಗಿ ಡಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಇದು ತುಮಕೂರಿನಲ್ಲಿ ನಡೆದ 'ಸೀರಿಯಲ್ ಸಂತೆ' ಕಾರ್ಯಕ್ರಮದ ಝಲಕ್ ಆಗಿದೆ.
Read Full Story

09:20 PM (IST) Nov 14

ಅಶ್ವಿನಿ ಗೌಡ ಪ್ಲಾನ್‌ಗಳನ್ನು ಫೇಲ್ ಮಾಡಿದ್ದೇಗೆ ರಕ್ಷಿತಾ ಶೆಟ್ಟಿ? ತುಳು ಬೆಡಗಿ ಆಟಕ್ಕೆ ಫ್ಯಾನ್ಸ್ ಫಿದಾ

Rakshitha Shetty Bigg Boss strategy: ಅಶ್ವಿನಿ ಗೌಡರ ಪ್ಲಾನ್‌ಗಳನ್ನು ವಿಫಲಗೊಳಿಸಿ, ರಘು ನಾಮಿನೇಷನ್‌ಗೆ ಕಾರಣ ವಿವರಿಸುವ ಮೂಲಕ ರಕ್ಷಿತಾ ತಮ್ಮ ಸ್ಮಾರ್ಟ್ ಆಟದಿಂದ ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದ್ದಾರೆ ಎಂದು ಚರ್ಚೆಯಾಗುತ್ತಿದೆ.

Read Full Story

08:38 PM (IST) Nov 14

'ಸಾಲುಮರದ ತಿಮ್ಮಕ್ಕ ನಿಧನ ಹಿನ್ನಲೆಯಲ್ಲಿ ಶಾಲೆ-ಕಾಲೇಜುಗಳಿಗೆ ರಜೆ..' ಸುದ್ದಿ ನಿಜವೋ? ಸುಳ್ಳೋ?

Salumarada Thimmakka Death Holiday Karnataka Govt Clarifies ಸಾಲುಮರದ ತಿಮ್ಮಕ್ಕನವರ ನಿಧನದ ಕುರಿತು ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 

Read Full Story

08:02 PM (IST) Nov 14

ವಿಮಾನದ ಫೋಟೋ ತೆಗೆಯಲು ಹೋಗಿ ದುರಂತ - ದುಬೈನ ಗಗನಚುಂಬಿ ಕಟ್ಟಡದಿಂದ ಬಿದ್ದು ಕೇರಳದ ಹುಡುಗ ಸಾವು

Kerala Teenage boy died in Dubai:  ದುಬೈನ ಗಗನಚುಂಬಿ ಕಟ್ಟಡದಿಂದ ಕೆಳಗೆ ಬಿದ್ದು, ಕೇರಳದ 19 ವರ್ಷದ ತರುಣನೋರ್ವ ದಾರುಣವಾಗಿ ಸಾವನ್ನಪ್ಪಿದ ಆಘಾತಕಾರಿ ಘಟನೆ ದುಬೈನಲ್ಲಿ ನಡೆದಿದೆ. ಯುಎಇಗೆ ಪ್ರವಾಸಕ್ಕೆಂದು ಭೇಟಿ ನೀಡಿದ ಈ ಬಾಲಕ ಕೇರಳದ ಕೋಯಿಕೋಡ್ ನಿವಾಸಿಯಾಗಿದ್ದಾನೆ.

Read Full Story

07:41 PM (IST) Nov 14

ಹುಲಿಕಲ್‌ನಲ್ಲೇ ಅಂತ್ಯಸಂಸ್ಕಾರ ಮಾಡಿ; ಸಾಲುಮರದ ತಿಮ್ಮಕ್ಕ ಪಾರ್ಥೀವ ಶರೀರ ತಡೆದು ಗ್ರಾಮಸ್ಥರು!

Saalumarada Thimmakka passes away: ಶತಾಯುಷಿ ಸಾಲುಮರದ ತಿಮ್ಮಕ್ಕ (114) ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಸ್ಥಳದ ಬಗ್ಗೆ ಗೊಂದಲ ಉಂಟಾಗಿದೆ. ತಿಮ್ಮಕ್ಕನ ಕೊನೆ ಆಸೆಯಂತೆ ಹುಲಿಕಲ್‌ನಲ್ಲೇ ಅಂತ್ಯಸಂಸ್ಕಾರ ನಡೆಸಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದು, ಪಾರ್ಥಿವ ಶರೀರವನ್ನು ತಡೆದಿದ್ದಾರೆ.

Read Full Story

07:11 PM (IST) Nov 14

Bigg Bossನಲ್ಲಿ ಸ್ಕ್ರಿಪ್ಟೆಡ್ಡಾ? Suvarna TVಗೆ ಬಹುದೊಡ್ಡ ಗುಟ್ಟು ರಿವೀಲ್​ ಮಾಡಿದ ಭಾವನಾ ಬೆಳಗೆರೆ

ಮಾಜಿ ಬಿಗ್​ಬಾಸ್​ ಸ್ಪರ್ಧಿ ಭಾವನಾ ಬೆಳಗೆರೆ ಅವರು, ಬಿಗ್​ಬಾಸ್​ ಸ್ಕ್ರಿಪ್ಟೆಡ್ ಎನ್ನುವ ಆರೋಪದ ಬಗ್ಗೆ ಸುವರ್ಣ ಟಿವಿಯ ಬೆಂಗಳೂರು ಬಜ್​ಗೆ ನೀಡಿರೋ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲಿ ನಡೆಯುವುದು ಏನು, ಸ್ಕ್ರಿಪ್ಟೆಡ್​ ಆಗುವುದು ಏನು ಎಲ್ಲವನ್ನೂ ಮುಚ್ಚುಮರೆಯಿಲ್ಲದೇ ವಿವರಿಸಿದ್ದಾರೆ. 

Read Full Story

07:00 PM (IST) Nov 14

ಎರಡನೇ ಬೆಳೆಗೆ ನೀರಿಲ್ಲ, ಟಿಬಿ ಡ್ಯಾಂ ಸಮಿತಿ ನಿರ್ಣಯ, ಮತ್ತೊಂದು ಹೋರಾಟಕ್ಕೆ ಅನ್ನದಾತ ಸಜ್ಜು, ನಾಳೆ ಬಿಜೆಪಿ ಮಹತ್ವದ ಸಭೆ

ತುಂಗಭದ್ರಾ ಡ್ಯಾಂ ಗೇಟ್ ದುರಸ್ತಿ ನೆಪದಲ್ಲಿ ಎರಡನೇ ಬೆಳೆಗೆ ನೀರು ಬಿಡದಿರಲು ನೀರಾವರಿ ಸಲಹಾ ಸಮಿತಿ ನಿರ್ಧರಿಸಿದೆ. ಈ ನಿರ್ಧಾರದಿಂದ ಕೊಪ್ಪಳ, ರಾಯಚೂರು, ವಿಜಯನಗರ ಭಾಗದ ಲಕ್ಷಾಂತರ ರೈತರು ಆತಂಕಕ್ಕೊಳಗಾಗಿದ್ದು, ರೈತ ಸಂಘಟನೆಗಳು ಮತ್ತು ಬಿಜೆಪಿ ತೀವ್ರ ಹೋರಾಟದ ಎಚ್ಚರಿಕೆ ನೀಡಿವೆ.
Read Full Story

06:58 PM (IST) Nov 14

ಡಿವೋರ್ಸ್‌ ಪ್ರಕರಣದಲ್ಲಿ ಪತ್ನಿಗೆ 664 ಕೋಟಿ ರೂ. ಪರಿಹಾರ ನೀಡುವಂತೆ ಉದ್ಯಮಿಗೆ ಕೋರ್ಟ್ ಆದೇಶ

15 ವರ್ಷಗಳ ಹಿಂದಿನ ವಿಚ್ಛೇದನ ಪ್ರಕರಣವೊಂದರಲ್ಲಿ ಪತ್ನಿಗೆ 664 ಕೋಟಿ ರೂಗಳ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಚೀನಾದ ವಾರೆನ್ ಬಫೆಟ್ ಎಂದೇ ಖ್ಯಾತಿ ಪಡೆದಿದ್ದ ಶ್ರೀಮಂತ ಉದ್ಯಮಿ ಝಾವೋ ಬಿಂಗ್ಕ್ಸಿಯಾನ್ ಹಾಗೂ ಅವರ ಪತ್ನಿ ನಡುವಿನ ಡಿವೋರ್ಸ್ ಕೇಸ್ ಇದಾಗಿದೆ.

Read Full Story

06:08 PM (IST) Nov 14

ಹಸಿರಲ್ಲಿ ಉಸಿರಾದ ಸಾಲುಮರದ ತಿಮ್ಮಕ್ಕನಿಗೆ ಹೀಗೊಂದು ಯಕ್ಷನಮನ- ಗೀತೆಯಲ್ಲೇ ಸಾಧನೆಯ ಸ್ಮರಣ

'ವೃಕ್ಷಮಾತೆ' ಖ್ಯಾತಿಯ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕನವರು 114ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಮಕ್ಕಳಿಲ್ಲದ ದುಃಖ ಮರೆಯಲು ರಸ್ತೆ ಬದಿ ಸಸಿಗಳನ್ನು ನೆಟ್ಟು ಬೆಳೆಸಿದ್ದ ಅವರಿಗೆ ಯಕ್ಷಗಾನದ ಮೂಲಕ ವಿಶಿಷ್ಟ ನಮನ ಸಲ್ಲಿಸಲಾಗಿದೆ.
Read Full Story

05:58 PM (IST) Nov 14

ಆನೇಕಲ್ - ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ರೋಡ್ ರೇಜ್; ಸೈಡ್ ಕೊಡದ್ದಕ್ಕೆ ನಡುರಸ್ತೆಯಲ್ಲೇ ಚಾಲಕನ ಮೇಲೆ ಹಲ್ಲೆ

Bengaluru road rage incident: ಬೆಂಗಳೂರಿನ ಬೊಮ್ಮಸಂದ್ರದ ಬಳಿ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬೈಕ್ ಸವಾರನೊಬ್ಬ ಬೊಲೆರೋ ಪಿಕಪ್ ಚಾಲಕನ ಮೇಲೆ ನಡುರಸ್ತೆಯಲ್ಲೇ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಘಟನೆಯ ದೃಶ್ಯಗಳು ವೈರಲ್ ಆಗಿವೆ.

Read Full Story

05:23 PM (IST) Nov 14

ಕಲಬುರಗಿ - ಕಾಂಗ್ರೆಸ್ ನಾಶಕ್ಕೆ ರಾಹುಲ್ ಗಾಂಧಿ ಒಬ್ಬರೇ ಸಾಕು

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಐತಿಹಾಸಿಕ ಗೆಲುವಿನ ಹಿನ್ನೆಲೆಯಲ್ಲಿ ಬಿಜೆಪಿ ವಿಜಯೋತ್ಸವ ಆಚರಿಸಿದೆ. ಮತಗಳ್ಳತನದ ಸುಳ್ಳು ಸುದ್ದಿ ಹರಡಿದ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿಗೆ ಬಿಹಾರದ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ ಹೇಳಿದ್ದಾರೆ.
Read Full Story

05:22 PM (IST) Nov 14

Brahmagantu - ದೀಪಾಗೆ ಅಗ್ನಿ ಪರೀಕ್ಷೆ! ಅವಳೇ ದಿಶಾ ಎನ್ನೋ ಗುಟ್ಟು ಸೌಂದರ್ಯಾಗೆ ತಿಳಿದುಹೋಯ್ತಾ?

ಬ್ರಹ್ಮಗಂಟು ಧಾರಾವಾಹಿಯಲ್ಲಿ, ದಿಶಾಳಾಗಿ ನಟಿಸುತ್ತಿರುವ ದೀಪಾಳನ್ನು ಸಂಕಷ್ಟಕ್ಕೆ ಸಿಲುಕಿಸಲು ಸೌಂದರ್ಯ ವಿಫಲಳಾಗುತ್ತಿದ್ದಾಳೆ. ಇದೀಗ, ಬ್ಲೌಸ್ ಹೊಲಿಸುವ ನೆಪದಲ್ಲಿ ದೀಪಾಳ ಅಂಗಡಿಗೆ ಭೇಟಿ ನೀಡಲು ಸೌಂದರ್ಯ ನಿರ್ಧರಿಸಿದ್ದಾಳೆ. ಸೌಂದರ್ಯಳ ಈ ನಿಗೂಢ ನಡೆಯು  ಕುತೂಹಲವನ್ನು ಸೃಷ್ಟಿಸಿದೆ.

Read Full Story

05:14 PM (IST) Nov 14

ವಿಂಡ್‌ಶೀಲ್ಡ್‌ನಲ್ಲಿ ಬಿರುಕು - ರನ್‌ವೇಯಾಗಿ ಬದಲಾದ ಹೈವೇ - ಹೆದ್ದಾರಿಯಲ್ಲೇ ವಿಮಾನ ತುರ್ತು ಲ್ಯಾಂಡಿಂಗ್

ತಾಂತ್ರಿಕ ಸಮಸ್ಯೆಯಿಂದಾಗಿ ತರಬೇತಿ ವಿಮಾನವೊಂದು ರಾಷ್ಟ್ರೀಯ ಹೆದ್ದಾರಿಯಲ್ಲೇ ತುರ್ತು ಲ್ಯಾಂಡಿಂಗ್ ಆದಂತಹ ಘಟನೆ ನಡೆದಿದೆ. ಆಕಾಶದಲ್ಲಿ ಹಾರಾಡುತ್ತಿದ್ದ ವೇಳೆ ಈ ತರಬೇತಿ ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ವಿಮಾನವೂ ಹೆದ್ದಾರಿಯಲ್ಲೇ ಇಳಿದಿದೆ.

Read Full Story

04:56 PM (IST) Nov 14

ಸೋಲಲ್ಲೂ ತಮ್ಮ ಗೆಲುವು ಕಂಡ ಸಿಎಂ ಸಿದ್ದು, ಅಹಿಂದ ನಾಯಕನ ಕುರ್ಚಿ ಗಟ್ಟಿ ಮಾಡಿದ ಬಿಹಾರ ರಿಸಲ್ಟ್‌!

ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಳಪೆ ಪ್ರದರ್ಶನವು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನವನ್ನು ಅನಿರೀಕ್ಷಿತವಾಗಿ ಬಲಪಡಿಸಿದೆ. ಅಹಿಂದ ಮತಬ್ಯಾಂಕ್ ಕಳೆದುಕೊಳ್ಳುವ ಭೀತಿಯಿಂದ ಹೈಕಮಾಂಡ್, ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡುವ ನಿರ್ಧಾರದಿಂದ ಹಿಂದೆ ಸರಿಯುವ ಸಾಧ್ಯತೆಯಿದೆ.

Read Full Story

04:38 PM (IST) Nov 14

Bigg Boss ಮನೆಯಿಂದ ಹೊರಹಾಕಲು ವೀಕ್ಷಕರ ಬದಲು ಅಲ್ಲಿಯೇ ಜನರ ಕರೆಸಿ ಮತ ಚಲಾವಣೆ - ಸ್ಪರ್ಧಿ ಶಾಕಿಂಗ್​ ಹೇಳಿಕೆ!

ಬಿಗ್ ಬಾಸ್‌ನಲ್ಲಿ ಫೈನಲಿಸ್ಟ್  ಆಗುವೆ ಎನ್ನುವ ಕಾರಣಕ್ಕೆ ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಹಾಕಲು ವೀಕ್ಷಕರ ಬದಲು ಅಲ್ಲಿಯೇ ಜನರನ್ನು ಕರೆಸಿ ಮತ ಚಲಾಯಿಸಲಾಗಿತ್ತು ಎಂಬ ಬಹು ದೊಡ್ಡ ಆರೋಪವನ್ನು ಸ್ಪರ್ಧಿಯೊಬ್ಬರು ಮಾಡಿದ್ದಾರೆ. ಅವರು ಹೇಳಿದ್ದೇನು? 

Read Full Story

03:37 PM (IST) Nov 14

'ಮೋದಿಯನ್ನು ವರ್ಷಪೂರ್ತಿ ವಿರೋಧಿಸ್ತೇವೆ ನಿಜ' ಎಂದ ಮುಸ್ಲಿಂ IT Cell ಬಾಂಬ್​ ಬ್ಲಾಸ್ಟ್​ ಕುರಿತು ಹೇಳಿದ್ದೇನು?

ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಬಾಂಬ್ ಸ್ಫೋಟವು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಈ ನಡುವೆ, ಮುಸ್ಲಿಂ ಐಟಿ ಸೆಟ್ ಒಂದು ಶಾಂತಿಯುತವಾಗಿರಲು ಮನವಿ ಮಾಡಿದ್ದು, ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

02:57 PM (IST) Nov 14

Bigg Boss Kannada 12 - ಬಿಗ್‌ ಬಾಸ್ ಮನೆಯಲ್ಲಿ ಮೊದಲ ಬಾರಿಗೆ ಗಿಲ್ಲಿ ನಟ ರೋಸ್ಟ್

ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ, ಈಜುಕೊಳದ ಟಾಸ್ಕ್ ವೇಳೆ ಸ್ವತಃ ಬಿಗ್‌ಬಾಸ್‌ನಿಂದಲೇ ರೋಸ್ಟ್ ಆಗಿದ್ದಾರೆ. ಇದರ ಜೊತೆಗೆ, ಸಹ ಸ್ಪರ್ಧಿಗಳಾದ ರಿಷಾ ಗೌಡ ಮತ್ತು ಕಾವ್ಯಾ ಶೈವ ಜೊತೆಗಿನ ಅವರ ಸಂಬಂಧದಲ್ಲಿನ ಬಿರುಕಿನ ಬಗ್ಗೆಯೂ ಈ ಲೇಖನ ಬೆಳಕು ಚೆಲ್ಲುತ್ತದೆ.
Read Full Story

02:51 PM (IST) Nov 14

ನಾಯಿ ಕಚ್ಚಿದ್ದಕ್ಕೆ ಚಿಕಿತ್ಸೆ ಪಡೆಯದೇ ನಿರ್ಲ್ಷಕ್ಯ - 3 ತಿಂಗಳ ಬಳಿಕ ರೇಬೀಸ್‌ಗೆ ಯುವಕ ಬಲಿ

Rebbis death: ನಾಯಿ ಕಚ್ಚಿದ 3 ತಿಂಗಳ ನಂತರ ಯುವಕನೋರ್ವ ರೇಬೀಸ್‌ಗೆ ಬಲಿಯಾದ ಘಟನೆ ನಡೆದಿದೆ. ಮೂರು ತಿಂಗಳ ಹಿಂದೆ ಅಯ್ಯಪ್ಪನ್ ಅವರಿಗೆ ನಾಯಿ ಕಚ್ಚಿತ್ತು. ಆದರೆ ಅವರು ನಾಯಿ ಕಚ್ಚಿದ್ದನ್ನು ನಿರ್ಲಕ್ಷಿಸಿ ಚಿಕಿತ್ಸೆ ಪಡೆಯಲೇ ಇಲ್ಲ, ಪರಿಣಾಮ ನಾಯಿ ಕಚ್ಚಿದ ಮೂರು ತಿಂಗಳ ನಂತರ ಅವರ ಸಾವು ಸಂಭವಿಸಿದೆ.

Read Full Story

02:06 PM (IST) Nov 14

Amruthadhaare - ಬೆಟ್ಟದಷ್ಟು ಪ್ರೀತಿ ಇದ್ರೂ ಭೂಮಿಕಾ, ಗೌತಮ್​ನಿಂದ ದೂರವಿರಲು ಕಾರಣವೇನು? ಏನು ಆ ಗುಟ್ಟು?

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಒಬ್ಬರನ್ನೊಬ್ಬರು ಪ್ರೀತಿಸಿದರೂ, ಒಂದು ಗುಟ್ಟಿನ ಕಾರಣದಿಂದ ದೂರವಾಗಿದ್ದಾರೆ. ಶಕುಂತಲಾಳ ಬೆದರಿಕೆಯೇ ಈ ವಿರಹಕ್ಕೆ ಕಾರಣವೇ ಅಥವಾ ಬೇರೆ ಸತ್ಯ ಅಡಗಿದೆಯೇ ಎನ್ನುವ ಕುತೂಹಲ ಹೆಚ್ಚಾಗಿದ್ದು, ಇಬ್ಬರ ಹಠದಿಂದಾಗಿ ಸತ್ಯ ಮಾತ್ರ ಹೊರಬರುತ್ತಿಲ್ಲ.
Read Full Story

01:37 PM (IST) Nov 14

ಬಾಲಿವುಡ್​ ನಟ ಧರ್ಮೇಂದ್ರ ಅಡ್ಮಿಟ್​ ಆಗಿದ್ದ ಆಸ್ಪತ್ರೆ ಸಿಬ್ಬಂದಿ ಅರೆಸ್ಟ್​? ಅಷ್ಟಕ್ಕೂ ಆಗಿದ್ದೇನು?

 ನಟ ಧರ್ಮೇಂದ್ರ  ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಐಸಿಯುನಿಂದ ಅವರ ಖಾಸಗಿ ಕ್ಷಣಗಳ ವಿಡಿಯೋವೊಂದು ವೈರಲ್ ಆಗಿದ್ದು, ಡಿಯೋಲ್ ಕುಟುಂಬವನ್ನು ನೋವಿನಲ್ಲಿ ತೋರಿಸಿದೆ. ಈ ವಿಡಿಯೋ ಚಿತ್ರೀಕರಿಸಿದ ಆಸ್ಪತ್ರೆ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಅಧಿಕೃತ ಮಾಹಿತಿ ತಿಳಿಯಬೇಕಿದೆ

Read Full Story

01:36 PM (IST) Nov 14

ಜಸ್ಟ್ ಹಾರ್ನ್ ಹಾಕಿದ್ರು ಅಂತ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಪರಾರಿ - 23ರ ಹರೆಯದ ಕಾರು ಚಾಲಕನ ಬಂಧನ

Car hits scooter for honking: 23 ರ ಹರೆಯದ ಕಾರು ಚಲಾಯಿಸುತ್ತಿದ್ದ ಯುವಕನೋರ್ವ ಸ್ಕೂಟರ್‌ನಲ್ಲಿ ಹೋಗುತ್ತಿದ್ದವರು ದಾರಿ ಬಿಡುವುದಕ್ಕೆ ಹಾರ್ನ್ ಮಾಡಿದರು ಎಂದು ಸ್ಕೂಟರ್‌ಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಂತಹ ಘಟನೆ ನಡೆದಿದೆ. 

Read Full Story

12:39 PM (IST) Nov 14

ರಾಂಗ್ ಸೈಡಲ್ಲಿ ಬಂದಿದ್ದಲ್ಲದೇ, ಆಟೋ ಚಾಲಕನ ಮೇಲೆ ಮಹಿಳೆಯ ದರ್ಪ - ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್

Bangalore traffic rage video: ಬೆಂಗಳೂರು ಟ್ರಾಫಿಕ್‌ನಲ್ಲಿ ಮಹಿಳೆಯೊಬ್ಬರು ರಾಂಗ್ ರೂಟ್‌ನಲ್ಲಿ ಬಂದು ಆಟೋಗೆ ಡಿಕ್ಕಿ ಹೊಡೆದಿದ್ದಲ್ಲದೇ ಆಟೋ ಚಾಲಕನೊಂದಿಗೆ ಜಗಳವಾಡಿದ್ದು, ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ.

Read Full Story

12:37 PM (IST) Nov 14

Amruthadhaare - ವಠಾರದವರ ವಿರುದ್ಧ ರಣಚಂಡಿ ಅವತಾರ ಎತ್ತಿದ ಭೂಮಿಕಾ! ಮುಂದಾದದ್ದೇ ರೋಚಕ

ಅಮೃತಧಾರೆ ಧಾರಾವಾಹಿಯಲ್ಲಿ, ಅನಾರೋಗ್ಯದಿಂದ ಬಳಲುತ್ತಿರುವ ಗೌತಮ್‌ನ ಆರೈಕೆ ಮಾಡಲು ಭೂಮಿಕಾ ಮುಂದಾಗುತ್ತಾಳೆ. ಆದರೆ, ಇವರಿಬ್ಬರ ಸಂಬಂಧ ತಿಳಿಯದ ವಠಾರದವರು ಗೌತಮ್ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ, ಭೂಮಿಕಾ ರಣಚಂಡಿಯ ಅವತಾರ ತಾಳಿ ಎಲ್ಲರಿಗೂ ತಕ್ಕ ಉತ್ತರ ನೀಡುತ್ತಾಳೆ.
Read Full Story

12:29 PM (IST) Nov 14

Saalumarada Thimmakka No More - ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಇನ್ನಿಲ್ಲ

ಕನ್ನಡ ನಾಡಿನ ಹೆಮ್ಮೆಯ ಸಾಧಕಿ ಪದ್ಮ ಪ್ರಶಸ್ತಿ ಪುರಸ್ಕೃತೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಿಧನರಾಗಿದ್ದಾರೆ. ನವೆಂಬರ್ 2ರಿಂದ ಜಯನಗರ ಅಪೊಲೋ‌ ಆಸ್ಪತ್ರೆಯಲ್ಲಿ ತಿಮ್ಮಕ್ಕ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು

Read Full Story

11:44 AM (IST) Nov 14

ಜಿಕೆವಿಕೆ ಕೃಷಿ ಮೇಳ-2025.. ಕೃಷಿಯತ್ತ ವಲಸಿತ ಯುವಕರ ಒಲವು - ಸಚಿವ ಎನ್‌.ಚಲುವರಾಯಸ್ವಾಮಿ

ಕಡಿಮೆ ವೇತನ ಇರುವವರಿಗೆ ಕೃಷಿ ಮುಖ್ಯ ಉದ್ಯೋಗವಾಗುತ್ತಿದ್ದು ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಪ್ರಗತಿಪರ ಕೃಷಿಕರಾಗಬೇಕು ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಸಲಹೆ ನೀಡಿದರು.

Read Full Story

10:56 AM (IST) Nov 14

ಕೃಷಿ ಮೇಳದಲ್ಲಿ ವಿವಿಧ ಕೀಟ ಖಾದ್ಯಗಳ ಹವಾ - ಜಿರಳೆ ಪಕೋಡಾ, ಮಿಡತೆ ಕಬಾಬ್

ಭಾರತೀಯ ಆಹಾರ ಸಂಸ್ಕೃತಿಗೆ ಒಗ್ಗಿಕೊಂಡ ನಮಗೆ ಊಟದಲ್ಲಿ ಹುಳ ಕಂಡರೂ ವಾಕರಿಕೆ ಬಂದು ಊಟವನ್ನು ಅರ್ಧಕ್ಕೆ ಬಿಡುವವರೇ ಹೆಚ್ಚು. ಹೀಗಿರುವಾಗ ಹುಳಗಳಲ್ಲೇ ತಯಾರಿಸಿರುವ ಖಾದ್ಯಗಳನ್ನು ಉಣ ಬಡಿಸಿದರೆ?

Read Full Story

10:35 AM (IST) Nov 14

ಹೆಚ್ಚುವರಿ ಟ್ಯಾಕ್ಸ್‌ ಮೂಲಕ ಜನರ ಜೇಬಿಗೆ ಮತ್ತೊಮ್ಮೆ ಕತ್ತರಿ - ಆರ್‌.ಅಶೋಕ್ ಆಕ್ರೋಶ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬಂದಾಗಿನಿಂದ ಡೀಸೆಲ್ ಬೆಲೆ 5.5 ರು. ಹಾಗೂ ಪೆಟ್ರೋಲ್ ಬೆಲೆ 3 ರು. ಹೆಚ್ಚಳ ಮಾಡಿ ಜನರ ಮೇಲೆ ಭಾರಿ ಹೊರೆ ಹೊರಿಸಿದ್ದೀರಿ ಎಂದು ಆರ್‌.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

10:24 AM (IST) Nov 14

ಚಾಮರಾಜನಗರದಲ್ಲಿ ‘ಎಐ ಹುಲಿ’ಗಳ ಕಾಟದಿಂದ ಜನ ತತ್ತರ - ಅರಣ್ಯ ಇಲಾಖೆ ಎಚ್ಚರಿಕೆ

ಎಐ ತಂತ್ರಜ್ಞಾನ ಬಳಸಿ ಹುಲಿಯ ಇರುವಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಗಳನ್ನು ಹರಿಬಿಡುತ್ತಿರುವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.

Read Full Story

09:30 AM (IST) Nov 14

ದೆಹಲಿ ಸ್ಫೋಟಕ್ಕೆ ರಾಜಕೀಯ ಬಣ್ಣ ಕೊಡುವುದು ತಪ್ಪು - ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ವಾಗ್ದಾಳಿ

ದೆಹಲಿ ಬಾಂಬ್ ಸ್ಫೋಟದಲ್ಲಿಯೂ ಕಾಂಗ್ರೆಸ್ ಮುಖಂಡ ಬಸವರಾಜ ರಾಯರಡ್ಡಿ ಸೇರಿದಂತೆ ಅನೇಕ ನಾಯಕರು ರಾಜಕೀಯ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ತೀವ್ರ ವಾಗ್ದಾಳಿ ಮಾಡಿದ್ದಾರೆ.

Read Full Story

More Trending News