ಬೆಂಗಳೂರು: ನ.16ರ ಭಾನುವಾರ ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ಗಣವೇಷಧಾರಿಗಳ ಪಥ ಸಂಚಲನಕ್ಕೆ ಹೈಕೋರ್ಟ್ ಷರತ್ತುಬದ್ಧವಾಗಿ ಅನುಮತಿಸಿದೆ. ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ಏಕ ಸದಸ್ಯ ನ್ಯಾಯ ಪೀಠವು ಆರೆಸ್ಸೆಸ್ ಪಥ ಸಂಚಲನದಲ್ಲಿ 300 ಮಂದಿ ಗಣವೇಷಧಾರಿಗಳಿಗೆ ಹಾಗೂ 50 ಮಂದಿ ಘೋಷ್ ವೃಂದ (ಬ್ಯಾಂಡ್ ಪಡೆ)ಗೆ ಪಾಲ್ಗೊಳ್ಳಲು ಅವಕಾಶ ನೀಡಿತು.

10:59 PM (IST) Nov 14
10:26 PM (IST) Nov 14
ಬೆಳ್ಳಂದೂರಿನಲ್ಲಿ ಒಪ್ಪಂದ ಕೊನೆಗೊಳ್ಳುವುದರಿಂದ, ಸ್ವಿಗ್ಗಿ ವೈಟ್ಫೀಲ್ಡ್ನಲ್ಲಿ ಉತ್ತಮ ವಿಶಾಲವಾದ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಯೋಜಿಸಿದೆ ಮತ್ತು ಸಾಮಾಜಿಕ ಕಾರಣಗಳಿಗಾಗಿ ಉದ್ಯೋಗಿಗಳು ವೈಟ್ಫೀಲ್ಡ್ ಅನ್ನು ಬಯಸುತ್ತಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
09:39 PM (IST) Nov 14
09:20 PM (IST) Nov 14
Rakshitha Shetty Bigg Boss strategy: ಅಶ್ವಿನಿ ಗೌಡರ ಪ್ಲಾನ್ಗಳನ್ನು ವಿಫಲಗೊಳಿಸಿ, ರಘು ನಾಮಿನೇಷನ್ಗೆ ಕಾರಣ ವಿವರಿಸುವ ಮೂಲಕ ರಕ್ಷಿತಾ ತಮ್ಮ ಸ್ಮಾರ್ಟ್ ಆಟದಿಂದ ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದ್ದಾರೆ ಎಂದು ಚರ್ಚೆಯಾಗುತ್ತಿದೆ.
08:38 PM (IST) Nov 14
Salumarada Thimmakka Death Holiday Karnataka Govt Clarifies ಸಾಲುಮರದ ತಿಮ್ಮಕ್ಕನವರ ನಿಧನದ ಕುರಿತು ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
08:02 PM (IST) Nov 14
Kerala Teenage boy died in Dubai: ದುಬೈನ ಗಗನಚುಂಬಿ ಕಟ್ಟಡದಿಂದ ಕೆಳಗೆ ಬಿದ್ದು, ಕೇರಳದ 19 ವರ್ಷದ ತರುಣನೋರ್ವ ದಾರುಣವಾಗಿ ಸಾವನ್ನಪ್ಪಿದ ಆಘಾತಕಾರಿ ಘಟನೆ ದುಬೈನಲ್ಲಿ ನಡೆದಿದೆ. ಯುಎಇಗೆ ಪ್ರವಾಸಕ್ಕೆಂದು ಭೇಟಿ ನೀಡಿದ ಈ ಬಾಲಕ ಕೇರಳದ ಕೋಯಿಕೋಡ್ ನಿವಾಸಿಯಾಗಿದ್ದಾನೆ.
07:41 PM (IST) Nov 14
Saalumarada Thimmakka passes away: ಶತಾಯುಷಿ ಸಾಲುಮರದ ತಿಮ್ಮಕ್ಕ (114) ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಸ್ಥಳದ ಬಗ್ಗೆ ಗೊಂದಲ ಉಂಟಾಗಿದೆ. ತಿಮ್ಮಕ್ಕನ ಕೊನೆ ಆಸೆಯಂತೆ ಹುಲಿಕಲ್ನಲ್ಲೇ ಅಂತ್ಯಸಂಸ್ಕಾರ ನಡೆಸಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದು, ಪಾರ್ಥಿವ ಶರೀರವನ್ನು ತಡೆದಿದ್ದಾರೆ.
07:11 PM (IST) Nov 14
ಮಾಜಿ ಬಿಗ್ಬಾಸ್ ಸ್ಪರ್ಧಿ ಭಾವನಾ ಬೆಳಗೆರೆ ಅವರು, ಬಿಗ್ಬಾಸ್ ಸ್ಕ್ರಿಪ್ಟೆಡ್ ಎನ್ನುವ ಆರೋಪದ ಬಗ್ಗೆ ಸುವರ್ಣ ಟಿವಿಯ ಬೆಂಗಳೂರು ಬಜ್ಗೆ ನೀಡಿರೋ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲಿ ನಡೆಯುವುದು ಏನು, ಸ್ಕ್ರಿಪ್ಟೆಡ್ ಆಗುವುದು ಏನು ಎಲ್ಲವನ್ನೂ ಮುಚ್ಚುಮರೆಯಿಲ್ಲದೇ ವಿವರಿಸಿದ್ದಾರೆ.
07:00 PM (IST) Nov 14
06:58 PM (IST) Nov 14
15 ವರ್ಷಗಳ ಹಿಂದಿನ ವಿಚ್ಛೇದನ ಪ್ರಕರಣವೊಂದರಲ್ಲಿ ಪತ್ನಿಗೆ 664 ಕೋಟಿ ರೂಗಳ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಚೀನಾದ ವಾರೆನ್ ಬಫೆಟ್ ಎಂದೇ ಖ್ಯಾತಿ ಪಡೆದಿದ್ದ ಶ್ರೀಮಂತ ಉದ್ಯಮಿ ಝಾವೋ ಬಿಂಗ್ಕ್ಸಿಯಾನ್ ಹಾಗೂ ಅವರ ಪತ್ನಿ ನಡುವಿನ ಡಿವೋರ್ಸ್ ಕೇಸ್ ಇದಾಗಿದೆ.
06:08 PM (IST) Nov 14
05:58 PM (IST) Nov 14
Bengaluru road rage incident: ಬೆಂಗಳೂರಿನ ಬೊಮ್ಮಸಂದ್ರದ ಬಳಿ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬೈಕ್ ಸವಾರನೊಬ್ಬ ಬೊಲೆರೋ ಪಿಕಪ್ ಚಾಲಕನ ಮೇಲೆ ನಡುರಸ್ತೆಯಲ್ಲೇ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಘಟನೆಯ ದೃಶ್ಯಗಳು ವೈರಲ್ ಆಗಿವೆ.
05:23 PM (IST) Nov 14
05:22 PM (IST) Nov 14
ಬ್ರಹ್ಮಗಂಟು ಧಾರಾವಾಹಿಯಲ್ಲಿ, ದಿಶಾಳಾಗಿ ನಟಿಸುತ್ತಿರುವ ದೀಪಾಳನ್ನು ಸಂಕಷ್ಟಕ್ಕೆ ಸಿಲುಕಿಸಲು ಸೌಂದರ್ಯ ವಿಫಲಳಾಗುತ್ತಿದ್ದಾಳೆ. ಇದೀಗ, ಬ್ಲೌಸ್ ಹೊಲಿಸುವ ನೆಪದಲ್ಲಿ ದೀಪಾಳ ಅಂಗಡಿಗೆ ಭೇಟಿ ನೀಡಲು ಸೌಂದರ್ಯ ನಿರ್ಧರಿಸಿದ್ದಾಳೆ. ಸೌಂದರ್ಯಳ ಈ ನಿಗೂಢ ನಡೆಯು ಕುತೂಹಲವನ್ನು ಸೃಷ್ಟಿಸಿದೆ.
05:14 PM (IST) Nov 14
ತಾಂತ್ರಿಕ ಸಮಸ್ಯೆಯಿಂದಾಗಿ ತರಬೇತಿ ವಿಮಾನವೊಂದು ರಾಷ್ಟ್ರೀಯ ಹೆದ್ದಾರಿಯಲ್ಲೇ ತುರ್ತು ಲ್ಯಾಂಡಿಂಗ್ ಆದಂತಹ ಘಟನೆ ನಡೆದಿದೆ. ಆಕಾಶದಲ್ಲಿ ಹಾರಾಡುತ್ತಿದ್ದ ವೇಳೆ ಈ ತರಬೇತಿ ವಿಮಾನದ ವಿಂಡ್ಶೀಲ್ಡ್ನಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ವಿಮಾನವೂ ಹೆದ್ದಾರಿಯಲ್ಲೇ ಇಳಿದಿದೆ.
04:56 PM (IST) Nov 14
ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ನ ಕಳಪೆ ಪ್ರದರ್ಶನವು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನವನ್ನು ಅನಿರೀಕ್ಷಿತವಾಗಿ ಬಲಪಡಿಸಿದೆ. ಅಹಿಂದ ಮತಬ್ಯಾಂಕ್ ಕಳೆದುಕೊಳ್ಳುವ ಭೀತಿಯಿಂದ ಹೈಕಮಾಂಡ್, ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡುವ ನಿರ್ಧಾರದಿಂದ ಹಿಂದೆ ಸರಿಯುವ ಸಾಧ್ಯತೆಯಿದೆ.
04:38 PM (IST) Nov 14
ಬಿಗ್ ಬಾಸ್ನಲ್ಲಿ ಫೈನಲಿಸ್ಟ್ ಆಗುವೆ ಎನ್ನುವ ಕಾರಣಕ್ಕೆ ಬಿಗ್ಬಾಸ್ ಮನೆಯಿಂದ ಹೊರಕ್ಕೆ ಹಾಕಲು ವೀಕ್ಷಕರ ಬದಲು ಅಲ್ಲಿಯೇ ಜನರನ್ನು ಕರೆಸಿ ಮತ ಚಲಾಯಿಸಲಾಗಿತ್ತು ಎಂಬ ಬಹು ದೊಡ್ಡ ಆರೋಪವನ್ನು ಸ್ಪರ್ಧಿಯೊಬ್ಬರು ಮಾಡಿದ್ದಾರೆ. ಅವರು ಹೇಳಿದ್ದೇನು?
03:37 PM (IST) Nov 14
02:57 PM (IST) Nov 14
02:51 PM (IST) Nov 14
Rebbis death: ನಾಯಿ ಕಚ್ಚಿದ 3 ತಿಂಗಳ ನಂತರ ಯುವಕನೋರ್ವ ರೇಬೀಸ್ಗೆ ಬಲಿಯಾದ ಘಟನೆ ನಡೆದಿದೆ. ಮೂರು ತಿಂಗಳ ಹಿಂದೆ ಅಯ್ಯಪ್ಪನ್ ಅವರಿಗೆ ನಾಯಿ ಕಚ್ಚಿತ್ತು. ಆದರೆ ಅವರು ನಾಯಿ ಕಚ್ಚಿದ್ದನ್ನು ನಿರ್ಲಕ್ಷಿಸಿ ಚಿಕಿತ್ಸೆ ಪಡೆಯಲೇ ಇಲ್ಲ, ಪರಿಣಾಮ ನಾಯಿ ಕಚ್ಚಿದ ಮೂರು ತಿಂಗಳ ನಂತರ ಅವರ ಸಾವು ಸಂಭವಿಸಿದೆ.
02:06 PM (IST) Nov 14
01:37 PM (IST) Nov 14
ನಟ ಧರ್ಮೇಂದ್ರ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಐಸಿಯುನಿಂದ ಅವರ ಖಾಸಗಿ ಕ್ಷಣಗಳ ವಿಡಿಯೋವೊಂದು ವೈರಲ್ ಆಗಿದ್ದು, ಡಿಯೋಲ್ ಕುಟುಂಬವನ್ನು ನೋವಿನಲ್ಲಿ ತೋರಿಸಿದೆ. ಈ ವಿಡಿಯೋ ಚಿತ್ರೀಕರಿಸಿದ ಆಸ್ಪತ್ರೆ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಅಧಿಕೃತ ಮಾಹಿತಿ ತಿಳಿಯಬೇಕಿದೆ
01:36 PM (IST) Nov 14
Car hits scooter for honking: 23 ರ ಹರೆಯದ ಕಾರು ಚಲಾಯಿಸುತ್ತಿದ್ದ ಯುವಕನೋರ್ವ ಸ್ಕೂಟರ್ನಲ್ಲಿ ಹೋಗುತ್ತಿದ್ದವರು ದಾರಿ ಬಿಡುವುದಕ್ಕೆ ಹಾರ್ನ್ ಮಾಡಿದರು ಎಂದು ಸ್ಕೂಟರ್ಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಂತಹ ಘಟನೆ ನಡೆದಿದೆ.
12:39 PM (IST) Nov 14
Bangalore traffic rage video: ಬೆಂಗಳೂರು ಟ್ರಾಫಿಕ್ನಲ್ಲಿ ಮಹಿಳೆಯೊಬ್ಬರು ರಾಂಗ್ ರೂಟ್ನಲ್ಲಿ ಬಂದು ಆಟೋಗೆ ಡಿಕ್ಕಿ ಹೊಡೆದಿದ್ದಲ್ಲದೇ ಆಟೋ ಚಾಲಕನೊಂದಿಗೆ ಜಗಳವಾಡಿದ್ದು, ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ.
12:37 PM (IST) Nov 14
12:29 PM (IST) Nov 14
ಕನ್ನಡ ನಾಡಿನ ಹೆಮ್ಮೆಯ ಸಾಧಕಿ ಪದ್ಮ ಪ್ರಶಸ್ತಿ ಪುರಸ್ಕೃತೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಿಧನರಾಗಿದ್ದಾರೆ. ನವೆಂಬರ್ 2ರಿಂದ ಜಯನಗರ ಅಪೊಲೋ ಆಸ್ಪತ್ರೆಯಲ್ಲಿ ತಿಮ್ಮಕ್ಕ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು
11:44 AM (IST) Nov 14
ಕಡಿಮೆ ವೇತನ ಇರುವವರಿಗೆ ಕೃಷಿ ಮುಖ್ಯ ಉದ್ಯೋಗವಾಗುತ್ತಿದ್ದು ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಪ್ರಗತಿಪರ ಕೃಷಿಕರಾಗಬೇಕು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸಲಹೆ ನೀಡಿದರು.
10:56 AM (IST) Nov 14
ಭಾರತೀಯ ಆಹಾರ ಸಂಸ್ಕೃತಿಗೆ ಒಗ್ಗಿಕೊಂಡ ನಮಗೆ ಊಟದಲ್ಲಿ ಹುಳ ಕಂಡರೂ ವಾಕರಿಕೆ ಬಂದು ಊಟವನ್ನು ಅರ್ಧಕ್ಕೆ ಬಿಡುವವರೇ ಹೆಚ್ಚು. ಹೀಗಿರುವಾಗ ಹುಳಗಳಲ್ಲೇ ತಯಾರಿಸಿರುವ ಖಾದ್ಯಗಳನ್ನು ಉಣ ಬಡಿಸಿದರೆ?
10:35 AM (IST) Nov 14
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬಂದಾಗಿನಿಂದ ಡೀಸೆಲ್ ಬೆಲೆ 5.5 ರು. ಹಾಗೂ ಪೆಟ್ರೋಲ್ ಬೆಲೆ 3 ರು. ಹೆಚ್ಚಳ ಮಾಡಿ ಜನರ ಮೇಲೆ ಭಾರಿ ಹೊರೆ ಹೊರಿಸಿದ್ದೀರಿ ಎಂದು ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
10:24 AM (IST) Nov 14
ಎಐ ತಂತ್ರಜ್ಞಾನ ಬಳಸಿ ಹುಲಿಯ ಇರುವಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಗಳನ್ನು ಹರಿಬಿಡುತ್ತಿರುವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ.
09:30 AM (IST) Nov 14
ದೆಹಲಿ ಬಾಂಬ್ ಸ್ಫೋಟದಲ್ಲಿಯೂ ಕಾಂಗ್ರೆಸ್ ಮುಖಂಡ ಬಸವರಾಜ ರಾಯರಡ್ಡಿ ಸೇರಿದಂತೆ ಅನೇಕ ನಾಯಕರು ರಾಜಕೀಯ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ತೀವ್ರ ವಾಗ್ದಾಳಿ ಮಾಡಿದ್ದಾರೆ.