ಮೋದಿ ಸಂಪುಟಕ್ಕೆ 43 ಸಚಿವರು, KRS ಸಮರಕ್ಕೆ ಎಂಟ್ರಿ ಕೊಟ್ಟ ಗೌಡರು; ಜು.7ರ ಟಾಪ್ 10 ಸುದ್ದಿ!

By Suvarna NewsFirst Published Jul 7, 2021, 5:38 PM IST
Highlights

ಪ್ರಧಾನಿ ಮೋದಿ ಸಂಪುಟ ಸೇರುತ್ತಿರುವ 43 ಸಚಿವರ ಲಿಸ್ಟ್ ಹೊರಬಿದ್ದಿದೆ. ಕರ್ನಾಟಕದ ನಾಲ್ವರು ಮೋದಿ ಕ್ಯಾಬಿನೆಟ್ ಸೇರಿಕೊಳ್ಳುತ್ತಿದ್ದಾರೆ. ಇನ್ನು ಹೆಚ್‌ಡಿ ಕುಮಾರಸ್ವಾಮಿ ಹಾಗೂ ಸುಮಲತಾ ನಡುವಿನ ಕೆಆರ್‌ಎಸ್ ಡ್ಯಾಮ್ ಸಮರಕ್ಕೆ ಇದೀಗ ದೇವೇಗೌಡರು ಎಂಟ್ರಿಕೊಟ್ಟಿದ್ದಾರೆ.  ಹಾಟ್ ಆಗಿ ಬಂದ ಮಲೈಕಾರನ್ನು ಪೊಲೀಸರು ತಡೆದಿದ್ದಾರೆ. ಧೋನಿಗೆ ಹುಟ್ಟು ಹಬ್ಬದ ಸಂಭ್ರಮ, ನಟ ದಿಲೀಪ್ ಕುಮಾರ್ ನಿಧನ ಸೇರಿದಂತೆ ಜುಲೈ 7ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಸಂಪುಟ ಪುನಾರಚನೆ: ಮೋದಿ ಸಂಪುಟಕ್ಕೆ 43 ಸಚಿವರು, ಇಲ್ಲಿದೆ ಸಂಪೂರ್ಣ ಲಿಸ್ಟ್...

ಹಲವು ದಿನಗಳಿಂದ ತೆರ ಮೆರೆಯಲ್ಲಿ ನಡೆಯುತ್ತಿದ್ದ ಸಂಪುಟ ವಿಸ್ತರಣೆ ಹಾಗೂ ಪುನರ್ ರಚನೆ ಕಸರತ್ತಿಗೆ ತೆರೆ ಬಿದ್ದಿದೆ. ಸರ್ಬಾನಂದ ಸೊನೊವಾಲ್,  ಜ್ಯೋತಿರಾಧಿತ್ಯ ಸಿಂಧಿಯಾ 42 ನಾಯಕರು ಮೋದಿ ಸಂಪುಟ ಸೇರಿಕೊಂಡಿದ್ದಾರೆ. 

ಮೋದಿ ಹೊಸ ಟೀಂ ರೆಡಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಸಚಿವರಿವರು!...

ಏಷ್ಯಾನೆಟ್‌ ನ್ಯೂಸ್‌ಗೆ ಲಭ್ಯವಾದ ಮಾಹಿತಿ ಅನ್ವಯ ಮೋದಿ ಸಚಿವ ಸಂಪುಟದಲ್ಲಿ ಈಗಿರುವ 7 ರಾಜ್ಯ ಸಚಿವರು ಕ್ಯಾಬಿನೆಟ್ ಸಚಿವರಾಗಿ ಬಡ್ತಿ ಪಡೆಯಲಿದ್ದು, 25 ಹೊಸ ಸದಸ್ಯರು ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಹೀಗಿರುವಾಗ ಅನೇಕ ಹಾಲಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಇನ್ನಿಲ್ಲ!...

ನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್‌ ಹಿರಿಯ ನಟ ದಿಲೀಪ್ ಕುಮಾರ್ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

Happy Birthday MS Dhoni: ಟೀಂ ಇಂಡಿಯಾ ಮಾಜಿ ನಾಯಕ ಧೋನಿಗೆ 40ನೇ ಹುಟ್ಟುಹಬ್ಬದ ಸಂಭ್ರಮ!...

 ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಗಳಿಸಿದ್ದ, ಭಾರತೀಯ ಕ್ರಿಕೆಟ್‌ ಕಂಡ ಅತ್ಯಂತ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್‌ ಧೋನಿಗೆ ಇಂದು(ಜುಲೈ 07) 40ನೇ ಹುಟ್ಟುಹಬ್ಬದ ಸಂಭ್ರಮ. 

ಸ್ಪೋರ್ಟ್ಸ್ ಬ್ರಾ-ಶಾರ್ಟ್ಸ್‌ನಲ್ಲಿ ಹಾಟ್ ಆಗಿ ಬಂದ ಮಲೈಕಾರನ್ನು ತಡೆದ ಪೊಲೀಸ್...

ಶಾರ್ಟ್ಸ್ ಹಾಕ್ಕೊಂಡು ಹಾಟ್ ಆಗಿ ಬಂದ ಮಲೈಕಾ ಅರೋರಾಗೆ ಎದುರಾಗಿದ್ದು ಟ್ರಾಫಿಕ್ ಪೊಲೀಸ್. ಆಮೇಲೇನಾಯ್ತು ?ಮಲೈಕಾ ಅರೋರಾ ಏನ್ ಮಾಡ್ತಾರೆ ? ಇಲ್ನೋಡಿ ವಿಡಿಯೋ

ಸುಮಲತಾ ವಿರುದ್ಧ ರಾಜಕೀಯ ರಣಕಹಳೆ ಮೊಳಗಿಸಿದ ಕುಮಾರಸ್ವಾಮಿ...

 ಕುಮಾರಸ್ವಾಮಿ ಅವರು ಮುಂದಿನ ಚುನಾವಣೆಯಲ್ಲಿ ಸೋಲಿಸಿಯೇ ತೀರುತ್ತೇನೆ ಎಂದು ಶಪಥ ಮಾಡಿದ್ದಾರೆ. ಈ ಮೂಲಕ ಸುಮಲತಾ ವಿರುದ್ಧ ರಾಜಕೀಯ ಕಹಾಳೆ ಮೊಳಗಿಸಿದ್ದಾರೆ.

ಅಣ್ಣನ ಮೇಲಿನ ಸೇಡಿಗೆ ತಂದೆ-ತಾಯಿ ಮುಂದೆಯೇ ಬಾಲಕಿ ಮೇಲೆರಗಿದ 8 ಕಾಮುಕರು...

ಪೋಷಕರ ಮುಂದೆಯೇ ಎಂಟು ಜನ ಕಾಮಾಂಧರು 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ಘೋರ ಪ್ರಕರಣ ಉತ್ತರ ಪ್ರದೇಶದಿಂದ ವರದಿಯಾಗಿದೆ.

ಕುಮಾರಸ್ವಾಮಿ-ಸುಮಲತಾ ಮಾತಿನ ಸಮರಕ್ಕೆ ದೇವೇಗೌಡ್ರ ಮೊದಲ ಪ್ರತಿಕ್ರಿಯೆ...

ಕೆಆರ್‌ಎಸ್ ಬಿರುಕು ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಮಧ್ಯೆ ಮಾತಿನ ಸಮರ ತಾರಕಕ್ಕೇರಿದೆ.

ಅನಾದಿ ಕಾಲದಿಂದಲೂ ಭಾರತದಲ್ಲಿ ಲವ್ ಮ್ಯಾರೇಜ್, ಲಿವ್ ಇನ್ ರಿಲೇಷನ್‌ಶಿಪ್ ಇತ್ತಲ್ವಾ!...

ಲವ್‌ ಮ್ಯಾರೇಜ್ ಮತ್ತು ಲಿವ್ ಇನ್ ರಿಲೇಷನ್‌ಶಿಪ್‌ಗಳಿಗೆ ಭಾರತೀಯ ಪುರಾಣ ಕಾವ್ಯಗಳಿಂದ ಹಲವಾರು ಉದಾಹರಣೆಗಳನ್ನು ನೀಡಬಹುದು. 
 

click me!