Published : Nov 08, 2025, 07:54 AM ISTUpdated : Nov 08, 2025, 11:08 PM IST

India News Live: ಇವ್ರು ಭಾರತದ Gen Zಗಳು! ನಡುರಾತ್ರಿ ಕ್ಲಬ್​ನಲ್ಲಿ ಏನ್​ ಮಾಡ್ತಿದ್ದಾರೆ ಗೊತ್ತಾ? ವೈರಲ್​ ವಿಡಿಯೋ ನೋಡಿ ಅಬ್ಬಾ ಎಂದ ನೆಟ್ಟಿಗರು

ಸಾರಾಂಶ

ನವದೆಹಲಿ (ನ.8): ಬಿಹಾರದಲ್ಲಿ ದಾಖಲೆಯ ಮತದಾನ ನಡೆದಿರುವುದು ನಮಗೆ ವರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನರೇಂದ್ರ ಮೋದಿ-ನಿತೀಶ್‌ ಕುಮಾರ್‌ ಜೋಡಿಯ ಮೇಲೆ ದೇಶದ ಜನಕ್ಕೆ ವಿಶ್ವಾಸ ಬಂದಿದೆ ಎಂದಿದ್ದಾರೆ. ಇನ್ನೊಂದೆಡೆ ರಾಹುಲ್‌ ಗಾಂಧಿ ಬಿಜೆಪಿ ನಾಯಕರಿಂದ ದೆಹಲಿಯಲ್ಲೂ ಮತ, ಬಿಹಾರದಲ್ಲೂ ಮತ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಎಲ್‌ಜೆಪಿ ಸಂಸದೆಯ ಎರಡೂ ಕೈ ತೋರು ಬೆರಳಿಗೆ ಶಾಯಿ ಹಾಕಲಾಗಿದೆ ಎಂದು ಆರೋಪ ಮಾಡಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

11:08 PM (IST) Nov 08

ಇವ್ರು ಭಾರತದ Gen Zಗಳು! ನಡುರಾತ್ರಿ ಕ್ಲಬ್​ನಲ್ಲಿ ಏನ್​ ಮಾಡ್ತಿದ್ದಾರೆ ಗೊತ್ತಾ? ವೈರಲ್​ ವಿಡಿಯೋ ನೋಡಿ ಅಬ್ಬಾ ಎಂದ ನೆಟ್ಟಿಗರು

ಬಂಡಾಯಗಾರರು ಎಂದು ಜರೆಯಲ್ಪಡುವ ಜೆನ್​ ಝೀ ಯುವ ಸಮೂಹವು 'ಭಜನ್ ಕ್ಲಬ್ಬಿಂಗ್' ಎಂಬ ಹೊಸ ಟ್ರೆಂಡ್ ಸೃಷ್ಟಿಸಿದೆ. ಕ್ಲಬ್‌ಗಳಲ್ಲಿ ಮೋಜು-ಮಸ್ತಿಯ ಬದಲು, ಇವರು ಭಕ್ತಿಗೀತೆಗಳನ್ನು ಹಾಡುತ್ತಾ ಆಧ್ಯಾತ್ಮಿಕ ಹಾದಿಯಲ್ಲಿ ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳುತ್ತಿದ್ದಾರೆ.  

Read Full Story

10:19 PM (IST) Nov 08

ವೋಟ್ ಚೋರಿ ಹೈಡ್ರೋಜನ್ ಬಾಂಬ್ ಮುಖವಾಡ ಬಯಲು, ಪೇಚಿಗೆ ಸಿಲಕಿದ ರಾಹುಲ್ ಗಾಂಧಿ

ವೋಟ್ ಚೋರಿ ಹೈಡ್ರೋಜನ್ ಬಾಂಬ್ ಮುಖವಾಡ ಬಯಲು, ಪೇಚಿಗೆ ಸಿಲಕಿದ ರಾಹುಲ್ ಗಾಂಧಿ, ಭಾರತದಲ್ಲಿ ಬಿಜೆಪಿ ಮತ ಕಳ್ಳತನ ಮಾಡಿ ಚುನಾವಣೆ ಗೆಲ್ಲುತ್ತಿದೆ ಆರೋಪಗಳ ಅಸಲಿಯತ್ತೇನು? ಆರೋಪ ಮಾಡಿದ ರಾಹುಲ್ ಸಂಕಷ್ಟಕ್ಕೆ ಸಿಲುಕಿದ್ದು ಯಾಕೆ?

Read Full Story

06:28 PM (IST) Nov 08

ಆನ್‌ಲೈನ್ ಆರ್ಡರ್ ಲೇಟ್ ಮಾಡಿದ್ರು ಅಂತ ಮ್ಯಾಕ್‌ಡೋನಾಲ್ಡ್‌ ಕೆಲಸಗಾರನ ಮೇಲೆ ಬಿಸಿ ಟೀ ಎರಚಿದ ಮಹಿಳೆ

Woman attacks McDonald's employee: ಮ್ಯಾಕ್‌ಡೋನಲ್ಡ್ಸಲ್ಲಿ ಆರ್ಡರ್‌ ತಡವಾಗಿದ್ದಕ್ಕೆ ಕೋಪಗೊಂಡ ಮಹಿಳೆಯೊಬ್ಬಳು ಸಿಬ್ಬಂದಿಯ ಮೇಲೆ ಬಿಸಿ ಟೀ ಎರಚಿದ್ದಾಳೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶದ ನಂತರ ಪೊಲೀಸರು ಮಹಿಳೆ ವಿರುದ್ಧ ನೋಟಿಸ್ ಜಾರಿ ಮಾಡಿದ್ದಾರೆ.

Read Full Story

06:22 PM (IST) Nov 08

ಮನೆಯಲ್ಲಿ ರಹಸ್ಯ ಶಾಲೆ ತೆರೆದ ಫೇಸ್‌ಬುಕ್ ಸಿಇಒ, ಸ್ಥಳೀಯರಿಂದ ದೂರಿನಿಂದ ಸ್ಕೂಲ್ ಬಂದ್

ಮನೆಯಲ್ಲಿ ರಹಸ್ಯ ಶಾಲೆ ತೆರೆದ ಫೇಸ್‌ಬುಕ್ ಸಿಇಒ, ಸ್ಥಳೀಯರಿಂದ ದೂರಿನಿಂದ ಸ್ಕೂಲ್ ಬಂದ್, 30 ರಿಂದ 40 ವಿದ್ಯಾರ್ಥಿಗಳು ಈ ಶಾಲೆಗೆ ಸೇರಿಕೊಂಡಿದ್ದರು. ನಿಯಮ ಉಲ್ಲಂಘಿಸಿದ ಮಾರ್ಕ್ ಜುಕರ್‌ಬರ್ಗ್ ಹಾಗೂ ಮಾರ್ಕ್ ಪತ್ನಿ ವಿರುದ್ದ ದೂರು ದಾಖಲಾಗಿದೆ.

Read Full Story

05:52 PM (IST) Nov 08

ಬುಮ್ರಾ ಅಲ್ಲ, ಟಿ20 ವಿಶ್ವಕಪ್‌ನಲ್ಲಿ ಭಾರತದ ನಿಜವಾದ 'ವೆಪನ್ಸ್' ಇವರೇ ನೋಡಿ!

2026ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿಗೆ ಪ್ರಮುಖರಾಗಲಿರುವ ಇಬ್ಬರು ಆಟಗಾರರನ್ನು ರವಿಚಂದ್ರನ್ ಅಶ್ವಿನ್ ಗುರುತಿಸಿದ್ದಾರೆ. ಬುಮ್ರಾ ಅವರನ್ನು ಬದಿಗಿಟ್ಟು ಇವರನ್ನು ಯಾಕೆ ಆಯ್ಕೆ ಮಾಡಿದೆ ಎಂಬುದರ ವಿವರಗಳನ್ನು ಸಹ ಬಹಿರಂಗಪಡಿಸಿದ್ದಾರೆ. ಆ ವಿವರಗಳನ್ನು ಈಗ ತಿಳಿಯೋಣ.

Read Full Story

05:41 PM (IST) Nov 08

ಶೇ.50ರಷ್ಟು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್‌ಗೆ ಸಿಎಂ ಸೂಚನೆ, ಕಚೇರಿ ಸಮಯವೂ ಬದಲಾವಣೆ

ಶೇ.50ರಷ್ಟು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್‌ಗೆ ಸಿಎಂ ಸೂಚನೆ, ಕಚೇರಿ ಸಮಯವೂ ಬದಲಾವಣೆ ಮಾಡಲಾಗಿದೆ. ಖಾಸಗಿ ಕಂಪನಿಗಳ ಬಳಿ ಮುಖ್ಯಮಂತ್ರಿ ಮನವಿ ಮಾಡಿಕೊಂಡಿದ್ದಾರೆ. ಕಾರ್ ಪುಲ್ಲಿಂಗ್ ಸೇರಿದಂತೆ ವಿವಿಧ ಕ್ರಮಗಳಿಗೆ ಮನವಿ ಮಾಡಲಾಗಿದೆ.

Read Full Story

05:29 PM (IST) Nov 08

ಅವಲಕ್ಕಿ ನೀಡಿದಂತೆ ನ್ಯೂಸ್ ಪೇಪರ್‌ನಲ್ಲಿ ಬಿಸಿಯೂಟ ನೀಡಿದ ಶಾಲೆ - ವೀಡಿಯೋ ವೈರಲ್

Madhya Pradesh school midday meal: ಮಧ್ಯಪ್ರದೇಶದ ಶಾಲೆಯೊಂದರಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ರದ್ದಿ ಪೇಪರ್ ಮೇಲೆ ಬಡಿಸಿದ ಅಮಾನವೀಯ ಘಟನೆ ನಡೆದಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. 

Read Full Story

05:25 PM (IST) Nov 08

ಭಾರತ-ಆಸ್ಟ್ರೇಲಿಯಾ 5ನೇ ಟಿ20 ಪಂದ್ಯ ರದ್ದು; ಕಾಂಗರೂ ನಾಡಲ್ಲಿ ಸರಣಿ ಗೆದ್ದ ಟೀಂ ಇಂಡಿಯಾ!

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಹಾಗೂ ಅಂತಿಮ ಟಿ20 ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಇದರ ಪರಿಣಾಮವಾಗಿ, ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ 2-1 ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿತು. ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Read Full Story

04:17 PM (IST) Nov 08

ಈ ಬಿಗ್ ಸ್ಟಾರ್ ಕೊಟ್ಟು ಸಂಜು ಸ್ಯಾಮ್ಸನ್ ಕರೆತರಲು ರೆಡಿಯಾದ ಚೆನ್ನೈ ಸೂಪರ್ ಕಿಂಗ್ಸ್! ಘೋಷಣೆಯೊಂದೇ ಬಾಕಿ?

ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜಿಗೂ ಮುನ್ನ ಟ್ರೇಡ್‌ ವಿಂಡೋ ಓಪನ್ ಆಗಿದ್ದು, ಸಂಜು ಸ್ಯಾಮ್ಸನ್ ಅವರನ್ನು ಕರೆ ತರಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಶತಾಯಗತಾಯ ಪ್ರಯತ್ನದಲ್ಲಿದೆ. ಇದರ ಬೆನ್ನಲ್ಲೇ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ.

Read Full Story

04:14 PM (IST) Nov 08

ಒತ್ತಾಯ ಮಾಡಿ ಶಾಲೆಗೆ ಕಳುಹಿಸಿದ ಪೋಷಕರಿಗೆ ಉಸಿರಿರುವವರೆಗೂ ಕೊರಗುವಂತೆ ಮಾಡಿದ ಮಗಳು

ಜೈಪುರದ ಪ್ರತಿಷ್ಠಿತ ಶಾಲೆಯೊಂದರಲ್ಲಿ 4ನೇ ತರಗತಿ ಓದ್ತಿದ್ದ ಬಾಲಕಿ ಅಮೈರಾ ಈ ತಿಂಗಳ 1ರಂದು ಶಾಲಾ ಕಟ್ಟಡದಿಂದಲೇ ಕೆಳಗೆ ಹಾರಿ ಸಾವಿಗೆ ಶರಣಾಗಿದ್ದಳು. ಆದರೆ ವರ್ಷದ ಹಿಂದಿನ ಆಕೆಯ ವಾಯ್ಸ್ ರೆಕಾರ್ಡರ್ ಈಗ ಆಕೆಯ ಪೋಷಕರನ್ನು ಜೀವನ ಪೂರ್ತಿ ಕೊರಗುವಂತೆ ಮಾಡಿದೆ.

Read Full Story

04:01 PM (IST) Nov 08

ಆರೇ ವರ್ಷದಲ್ಲಿ 67 ಲಕ್ಷ ರೂ ಮನೆ ಸಾಲ ಅಂತ್ಯ, ಭಾರತೀಯ ಟೆಕ್ಕಿ ಮಾರ್ಗ ಪಾಲಿಸಿದರೆ ಟೆನ್ಶನ್ ಫ್ರಿ

ಆರೇ ವರ್ಷದಲ್ಲಿ 67 ಲಕ್ಷ ರೂ ಮನೆ ಸಾಲ ಅಂತ್ಯ, ಭಾರತೀಯ ಟೆಕ್ಕಿ ಮಾರ್ಗ ಪಾಲಿಸಿದರೆ ಟೆನ್ಶನ್ ಫ್ರಿ, ಸಾಲ ಅದರ ಜೊತೆಗೆ ಬಡ್ಡಿ ಎಲ್ಲವನ್ನೂ ತೀರಿಸಿದ್ದಾನೆ. ಮನೆ ಸಾಲ, ಇತರ ಅವಶ್ಯಕತೆಗಾಗಿ ಸಾಲ ಮಾಡುವವರು ಅತೀ ಕಡಿಮೆ ಸಮಯದಲ್ಲಿ ಸಾಲ ತೀರಿಸುವುದು ಹೇಗೆ ಎಂದು ಟೆಕ್ಕಿ ಹೇಳಿದ್ದಾರೆ.

Read Full Story

03:25 PM (IST) Nov 08

ಓಲಾ ಎಲೆಕ್ಟ್ರಿಕ್‌ ವಿರುದ್ಧ ಬೃಹತ್‌ ಆರೋಪ ಮಾಡಿದ ಎಲ್‌ಜಿ ಎನರ್ಜಿ ಸಲ್ಯೂಷನ್‌!

LG Energy Solution Accuses Ola Electric of Technology Theft by Former Researcher ದಕ್ಷಿಣ ಕೊರಿಯಾದ ಎಲ್‌ಜಿ ಎನರ್ಜಿ ಸೊಲ್ಯೂಷನ್, ಓಲಾ ಎಲೆಕ್ಟ್ರಿಕ್ ತನ್ನ ಬ್ಯಾಟರಿ ಉತ್ಪಾದನಾ ತಂತ್ರಜ್ಞಾನವನ್ನು ಅಕ್ರಮವಾಗಿ ಕದ್ದಿದೆ ಎಂದು ಆರೋಪಿಸಿದೆ. 

Read Full Story

03:12 PM (IST) Nov 08

ಬೌಲರ್‌ಗಳನ್ನು ಚೆಂಡಾಡಿ ಅತಿವೇಗದ ಸಾವಿರ ರನ್ ಪೂರೈಸಿ ಹೊಸ ವಿಶ್ವದಾಖಲೆ ಬರೆದ ಅಭಿಷೇಕ್ ಶರ್ಮಾ!

ಬ್ರಿಸ್ಬೇನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 5ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅಪರೂಪದ ದಾಖಲೆ ಬರೆದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

 

Read Full Story

03:08 PM (IST) Nov 08

ಕೋಲ್ಹಾಪುರಿ ಚಪ್ಪಲ್ ಬಳಿಕ ಪ್ರಾಡಾದ ಮತ್ತೊಂದು ಫ್ರಾಡ್ - ಹೊಸ ಸೇಫ್ಟಿಪಿನ್‌ಗೆ ಬೆಲೆ ಎಷ್ಟಿರಬಹುದು ಹೇಳಿ?

ಲಕ್ಸುರಿ ಫ್ಯಾಷನ್ ಬ್ರಾಂಡ್ ಪ್ರಾಡಾ ಈಗ ಹೊಸದೊಂದು ಸೇಫ್ಟಿ ಪಿನ್ ಬಿಡುಗಡೆ ಮಾಡಿದ್ದು, ಆದರ ಬೆಲೆ ಕೇಳಿದರೆ ತಲೆ ತಿರುಗೋದು ಗ್ಯಾರಂಟಿ. ಹೌದು ಇದೊಂದು ಸೇಫ್ಟಿ ಪಿನ್‌ಗೆ ಕೊಡುವ ಹಣದಲ್ಲಿ ನೀವು ಮನೆಗೆ ವಾಶಿಂಗ್ ಮಿಷನ್ ಟಿವಿ ಫ್ರಿಡ್ಜ್‌ನ್ನು ಕೊಳ್ಳಬಹುದು.

Read Full Story

02:33 PM (IST) Nov 08

ನಟಿ ಐಶ್ವರ್ಯ ರೈ ಮೇಲೆ 4 ಕೋಟಿ ತೆರಿಗೆ ವಂಚನೆ ಆರೋಪ - ಕೋರ್ಟ್​ನಲ್ಲಿ ಆಗಿದ್ದೇನು? ನೀಡಿದ ತೀರ್ಪೇನು?

ನಟಿ ಐಶ್ವರ್ಯಾ ರೈ ಬಚ್ಚನ್ ಅವರು 4 ಕೋಟಿ ರೂಪಾಯಿ ತೆರಿಗೆ ವಿವಾದದಲ್ಲಿ ಜಯ ಸಾಧಿಸಿದ್ದಾರೆ. 2022-23ರ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ, ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) ಆದಾಯ ತೆರಿಗೆ ಇಲಾಖೆ ವಿಧಿಸಿದ್ದ ಹೆಚ್ಚುವರಿ ತೆರಿಗೆಯನ್ನು ರದ್ದುಗೊಳಿಸಿ, ಅವರ ಪರವಾಗಿ ತೀರ್ಪು ನೀಡಿದೆ.  

Read Full Story

01:41 PM (IST) Nov 08

ಭಾರತ-ಆಸೀಸ್ ಕೊನೆಯ ಟಿ20 - ತಿಲಕ್ ಔಟ್, ಟೀಂ ಇಂಡಿಯಾದಲ್ಲಿ ಒಂದು ಮಹತ್ವದ ಬದಲಾವಣೆ!

ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈಗಾಗಲೇ 2-1 ಸರಣಿ ಮುನ್ನಡೆ ಸಾಧಿಸಿರುವ ಭಾರತ, ತಿಲಕ್ ವರ್ಮಾ ಬದಲಿಗೆ ರಿಂಕು ಸಿಂಗ್‌ಗೆ ಅವಕಾಶ ನೀಡಿ ಕಣಕ್ಕಿಳಿದಿದೆ.
Read Full Story

01:39 PM (IST) Nov 08

ಖಾರದ ಪುಡಿ ಹಿಡಿದು ದರೋಡೆಗೆ ಬಂದ ಸುಕುಮಾರಿ - ಜ್ಯುವೆಲ್ಲರಿ ಶಾಪ್ ಮಾಲೀಕನ ಕೈಗೆ ಸಿಕ್ಕಿ ಬೆನ್ನುಪುಡಿಪುಡಿ

ಗುಜರಾತ್‌ನ ಅಹಮದಾಬಾದ್‌ನಲ್ಲಿ ಹಾಡಹಗಲೇ  ಮಹಿಳೆಯೊಬ್ಬಳು ಖಾರದ ಪುಡಿ ಎರಚಿ ದರೋಡೆಗೆ ಯತ್ನಿಸಿ ಸಿಕ್ಕಿಬಿದ್ದಿದ್ದು, ಜ್ಯುವೆಲ್ಲರಿ ಶಾಪ್ ಮಾಲೀಕ ಆಕೆಗೆ ಸರಿಯಾಗಿ ಥಳಿಸಿದ್ದಾನೆ. ಈ ಘಟನೆಯ ವೀಡಿಯೋ ಈಗ ಭಾರಿ ವೈರಲ್ ಆಗಿದೆ.

Read Full Story

01:23 PM (IST) Nov 08

ವಿಶ್ವಕಪ್ ಫೈನಲ್‌ಗೂ ಮುನ್ನ ಹರ್ಮನ್‌ಪ್ರೀತ್‌‌ಗೆ ತೆಂಡೂಲ್ಕರ್ ಕಿವಿ ಮಾತು, ಸಚಿನ್ ಫೋನ್ ಕಾಲ್ ಗುಟ್ಟು ಬಿಚ್ಚಿಟ್ಟ ಕೌರ್!

ಬೆಂಗಳೂರು: 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಂ ಇಂಡಿಯಾ, ಚಾಂಪಿಯನ್ ಆಗಿ ಹೊರಹೊಮ್ಮಿದೆ. ದಕ್ಷಿಣ ಆಫ್ರಿಕಾ ಎದುರಿನ ಫೈನಲ್ ಪಂದ್ಯಕ್ಕೂ ಒಂದು ದಿನ ಮೊದಲು ಸಚಿನ್‌ ತೆಂಡೂಲ್ಕರ್, ಹರ್ಮನ್‌ಗೆ ಕಾಲ್ ಮಾಡಿ ಹೇಳಿದ್ದೇನು?

 

Read Full Story

12:59 PM (IST) Nov 08

ಆಧಾರ್​-ಪ್ಯಾನ್ ಲಿಂಕ್​ಗೆ ಕೊನೆಯ ದಿನ ಫಿಕ್ಸ್​ - ಮಾಡಿದಿದ್ರೆ ಈ ಎಲ್ಲಾ ಸೌಲಭ್ಯ ಕಟ್​- ಸರಳ ವಿಧಾನ ಇಲ್ಲಿದೆ

ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, 2025ರ ಡಿಸೆಂಬರ್ 31 ಕೊನೆಯ ದಿನವಾಗಿದೆ. ತಪ್ಪಿದಲ್ಲಿ, ₹1000 ದಂಡದೊಂದಿಗೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡು, ಐಟಿಆರ್ ಫೈಲಿಂಗ್ ಮತ್ತು ಹಣಕಾಸಿನ ವಹಿವಾಟುಗಳಿಗೆ ಅಡ್ಡಿಯಾಗುತ್ತದೆ.
Read Full Story

12:05 PM (IST) Nov 08

ವಿಶ್ವಕಪ್‌ನಿಂದ ಹೊರಬಿದ್ರೂ ಪ್ರತೀಕಾಗೆ ಸಿಗಲಿದೆ ಮೆಡಲ್! ಜಯ್ ಶಾ ಅವರಿಂದಾಗಿ ಐಸಿಸಿ ರೂಲ್ಸ್ ಚೇಂಜ್!

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ತಾರಾ ಆರಂಭಿಕ ಬ್ಯಾಟರ್ ಪ್ರತೀಕಾ ರಾವಲ್‌ ಪಾಲಿಗೆ ಗುಡ್ ನ್ಯೂಸ್ ಸಿಕ್ಕಿದೆ. ಪ್ರತೀಕಾಗಾಗಿ ಐಸಿಸಿ ತನ್ನ ರೂಲ್ಸ್ ಅನ್ನೇ ಬದಲಿಸಿದೆ. ಈ ಕುರಿತಾದ ಅಪ್‌ಡೇಟ್ ಇಲ್ಲಿದೆ ನೋಡಿ.

 

Read Full Story

09:52 AM (IST) Nov 08

ಭಾರತ vs ಆಸ್ಟ್ರೇಲಿಯಾ - ಟೀಂ ಇಂಡಿಯಾದಲ್ಲಿ ಒಂದು ಮೇಜರ್ ಚೇಂಜ್?

ಆಸ್ಟ್ರೇಲಿಯಾ ವಿರುದ್ಧದ ಐದನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಭಾರತ ಸಜ್ಜಾಗಿದೆ. ಈಗಾಗಲೇ 2-1 ಮುನ್ನಡೆ ಸಾಧಿಸಿರುವ ಭಾರತ, ಸರಣಿ ಗೆಲ್ಲುವ ತವಕದಲ್ಲಿದ್ದು, ಕಳಪೆ ಫಾರ್ಮ್‌ನಲ್ಲಿರುವ ತಿಲಕ್ ವರ್ಮಾ ಬದಲಿಗೆ ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗುವುದೇ ಎಂಬ ಕುತೂಹಲ ಎಲ್ಲರಲ್ಲಿದೆ.
Read Full Story

09:48 AM (IST) Nov 08

ಭೂ ನೋಂದಣಿ, ಮಾಲೀಕತ್ವ ಕಾನೂನುಗಳಲ್ಲಿ ಬದಲಾವಣೆ ಅನಿವಾರ್ಯ, ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ ಸುಪ್ರೀಂ ಕೋರ್ಟ್‌

SC Urges Central Govt to Reform Land Laws Replace British Era Registration System ಬ್ರಿಟಿಷ್ ಕಾಲದ ಭೂ ನೋಂದಣಿ ಕಾನೂನುಗಳು ಗೊಂದಲ ಮತ್ತು ವ್ಯಾಜ್ಯಗಳಿಗೆ ಕಾರಣವಾಗಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

Read Full Story

09:18 AM (IST) Nov 08

ಎರಡು ಟಿ20 ಪಂದ್ಯಗಳಿಂದ ಅರ್ಷ್‌ದೀಪ್ ಹೊರಗುಳಿದಿದ್ದೇಕೆ? ಬೌಲಿಂಗ್ ಕೋಚ್ ಹೇಳಿದ್ದೇನು?

ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟಿ20 ಪಂದ್ಯಗಳಿಗೆ ಅರ್ಷ್‌ದೀಪ್ ಸಿಂಗ್ ಅವರನ್ನು ಹೊರಗಿಟ್ಟಿದ್ದಕ್ಕೆ ಭಾರತದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಸ್ಪಷ್ಟನೆ ನೀಡಿದ್ದಾರೆ.  

Read Full Story

09:00 AM (IST) Nov 08

2026ರ ಟಿ20 ವಿಶ್ವಕಪ್‌ಗೆ 5 ಸ್ಟೇಡಿಯಂ ಆತಿಥ್ಯ! ಟೀಂ ಇಂಡಿಯಾ ಸೋತಲ್ಲೇ ಮತ್ತೆ ಫೈನಲ್ ಮ್ಯಾಚ್

2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಈ ಟೂರ್ನಿಯನ್ನು ಆಯೋಜಿಸುತ್ತಿವೆ. ಏಳು ಸ್ಥಳಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ.

 

Read Full Story

More Trending News