LIVE NOW
Published : Jan 28, 2026, 07:39 AM ISTUpdated : Jan 28, 2026, 09:43 PM IST

India News Live: 2ನೇ ಮದ್ವೆ ಸುದ್ದಿಯ ನಡುವೆ ಇಬ್ಬರು ಮಕ್ಕಳ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಧನುಷ್

ಸಾರಾಂಶ

ನವದೆಹಲಿ (ಜ.28): ಭಾರತ ಮತ್ತು ಯುರೋಪ್‌ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ. ಅಮೆರಿಕದ ತೆರಿಗೆ ಕಿರಿಕ್‌ಗೆ ಜಗತ್ತಿನ ಅತಿದೊಡ್ಡ ಆರ್ಥಿಕತೆಗಳು ತಿರುಗೇಟು ನೀಡಿವೆ. ಪರ್ಯಾಯ ಮಾರುಕಟ್ಟೆ ಸ್ಥಾಪನೆ ಕಡೆ ಭಾರತ ಮುಖ ಮಾಡಿದ್ದು, ಎನ್‌ಡಿಎ ಸರ್ಕಾರದ 8ನೇ ಡೀಲ್‌ ಇದಾಗಿದೆ. ಇದು 200 ಕೋಟಿ ಜನರ ಮೇಲೆ ಪರಿಣಾಮ ಬೀರಲಿದೆ. ಡೀಲ್‌ನ ಮೊತ್ತ ವಿಶ್ವದ ಜಿಡಿಪಿಯ ಶೇ. 25ರಷ್ಟಿದ್ದು, ಭಾರತದ ಶೇ. 93 ಉತ್ಪನ್ನಕ್ಕೆ ಯುರೋಪ್‌ನಲ್ಲಿ ಶೂನ್ಯ ತೆರಿಗೆ ಇರಲಿದೆ. ಭಾರತಕ್ಕೆ ಅಮೆರಿಕದ ಹೊರತಾದ ಹೊಸ ಮಾರುಕಟ್ಟೆ ಸಿಕ್ಕಂತಾಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

09:43 PM (IST) Jan 28

2ನೇ ಮದ್ವೆ ಸುದ್ದಿಯ ನಡುವೆ ಇಬ್ಬರು ಮಕ್ಕಳ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಧನುಷ್

ತಮಿಳು ನಟ ಧನುಷ್ ತಮ್ಮ ಇಬ್ಬರು ಮಕ್ಕಳಾದ ಯಾತ್ರಾ ಮತ್ತು ಲಿಂಗಾ ಅವರೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ನಟಿ ಮೃಣಾಲ್ ಠಾಕೂರ್ ಅವರೊಂದಿಗಿನ ಮದುವೆಯ ವದಂತಿಗಳು ಹಬ್ಬಿರುವ ಬೆನ್ನಲ್ಲೇ, ಧನುಷ್ ಅವರ ಈ ದೇಗುಲ ಭೇಟಿ ಮತ್ತು ಸಾಂಪ್ರದಾಯಿಕ ಉಡುಗೆಯಲ್ಲಿನ ಫೋಟೋಗಳು ವೈರಲ್ ಆಗಿವೆ.

Read Full Story

08:58 PM (IST) Jan 28

ಟ್ರೋಲ್ ಆಗ್ತಿದೆ ಪಲಾಶ್ ಮುಚ್ಚಲ್ ನಡಿಗೆ - ಮಹಿಳಾ ಕ್ರಿಕೆಟರ್ಸ್ ನಡೆಯಕ್ಕೂ ಆಗದಂಗೆ ಥಳಿಸಿದ್ರಾ ಕೇಳಿದ ನೆಟ್ಟಿಗರು

ಪಲಾಶ್ ಮುಚ್ಚಲ್ ಹಾಗೂ ಸ್ಮೃತಿ ಮಂಧಾನ ನಡುವಿನ ವಿವಾಹ ಮುರಿದು ಬಿದ್ದ ನಂತರ ಗಾಯಕ ಪಲಾಶ್ ಮುಚ್ಚಲ್ ಗ್ರಹಚಾರ ಸಂಪೂರ್ಣ ಕೆಟ್ಟಂತೆ ಕಾಣುತ್ತಿದೆ. ಪಲಾಶ್ ಮುಚ್ಚಲ್ ವಾಕಿಂಗ್ ಸ್ಟೈಲ್ ಕೂಡ ಇತ್ತೀಚೆಗೆ ನೆಟ್ಟಿಗರಿಂದ ಸಖತ್ ಟ್ರೋಲ್ ಆಗ್ತಿದ್ದು, ಅವರು ಏನ್ ಕಾಮೆಂಟ್ ಮಾಡಿದ್ದಾರೆ ನೋಡಿ..

Read Full Story

08:49 PM (IST) Jan 28

ಬಾರಾಮತಿ ವಿಮಾನ ದುರಂತ - ಸಾವಿನ ಕ್ಷಣದ ಲೈವ್ ವಿಡಿಯೋ ಬಹಿರಂಗ! ಕಣ್ಣೆದುರೇ ಸ್ಫೋಟಗೊಂಡ ಅಜಿತ್ ಪವಾರ್ ವಿಮಾನ

Baramati Plane Crash Live video ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ಭೀಕರ ವಿಮಾನ ಅಪಘಾತದ ಸಿಸಿಟಿವಿ ದೃಶ್ಯಗಳು ಲಭ್ಯ., ವಿಮಾನ ನೆಲಕ್ಕೆ ಅಪ್ಪಳಿಸಿ ಸ್ಫೋಟಗೊಂಡು ಅಗ್ನಿ ಉಂಡೆಯಾಗಿ ಮಾರ್ಪಟ್ಟಿದೆ. ನಡೆದ ಘಟನೆ ಕಂಡ  ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

Read Full Story

08:26 PM (IST) Jan 28

ವಯಾಗ್ರ ತಿಂದು ಚಿತ್ರವಿಚಿತ್ರ ಲೈಂ*ಗಿಕ ಕಿರುಕುಳ ಕೊಡುತ್ತಿದ್ದ ಪತಿ; ಕಾಟ ತಾಳಲಾರದೇ ವಿಷ ಹಾಕಿ ಕೊಂ*ದ ಪತ್ನಿ!

ಪತಿಯ ಅತಿಯಾದ ಲೈಂ*ಗಿಕ ಕಿರುಕುಳದಿಂದ ಬೇಸತ್ತ ಪತ್ನಿಯೊಬ್ಬಳು, ಆತನಿಗೆ ವಿಷ ನೀಡಿ ನಂತರ ಉಸಿರುಗಟ್ಟಿಸಿ ಹ*ತ್ಯೆ ಮಾಡಿದ್ದಾಳೆ. ಸಹಜ ಸಾವು ಎಂದು ನಂಬಲಾಗಿದ್ದ ಈ ಪ್ರಕರಣ, ಅಂತ್ಯಕ್ರಿಯೆ ವಿಚಾರವಾಗಿ ನಡೆದ ಜಗಳದಿಂದಾಗಿ ಕೊ*ಲೆ ಎಂದು ಬಯಲಾಗಿದ್ದು, ಪೊಲೀಸರು ಆರೋಪಿ ಪತ್ನಿಯನ್ನು ಬಂಧಿಸಿದ್ದಾರೆ.

Read Full Story

08:15 PM (IST) Jan 28

ಅಪ್ಪಾ ಇವತ್ತು ಅಜಿತ್ ಪವಾರ್ ಜೊತೆ ಪ್ರಯಾಣ, ಕೊನೆ ಕರೆ ಮಾಡಿ ಗುರತೇ ಸಿಗದಂತೆ ಸುಟ್ಟು ಕರಕಲಾದ ಪಿಂಕಿ

ಅಪ್ಪಾ ಇವತ್ತು ಅಜಿತ್ ಪವಾರ್ ಜೊತೆ ಪ್ರಯಾಣ, ಬಾರಮತಿ ವಿಮಾನ ಅಪಘಾತದಲ್ಲಿ ಐವರು ಸುಟ್ಟುಕರಲಾದ ಪೈಕಿ ಪಿಂಕಿ ಮಾಲಿಕ್ ಕೂಡ ಒಬ್ಬಳು. ಪ್ರಯಾಣಕ್ಕೂ ಮೊದಲು ತಂದೆಗೆ ಕೊನೆಯ ಕರೆ ಮಾಡಿದ್ದರು. ಕೊನೆಯದಾಗಿ ತಂದೆಗೆ ಹೇಳಿದ್ದೇನು?

Read Full Story

06:56 PM (IST) Jan 28

ಮೃತ ಸೋದರನ ಮೂವರು ಸ್ನೇಹಿತರಿಂದಲೇ 6 ವರ್ಷದ ಬಾಲಕಿಯ ಗ್ಯಾಂಗ್‌*ರೇಪ್ - ಆರೋಪಿಗಳೆಲ್ಲರೂ 10ರಿಂದ 14 ವರ್ಷದೊಳಗಿನವರು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 6 ವರ್ಷದ ಬಾಲಕಿಯ ಮೇಲೆ ಆಕೆಯ ಮೃತ ಸಹೋದರನ ಅಪ್ರಾಪ್ತ ಸ್ನೇಹಿತರೇ ಸಾಮೂಹಿಕ ಅತ್ಯಾ*ಚಾರ ಎಸಗಿದ್ದಾರೆ. ಆಹಾರದ ಆಸೆ ತೋರಿಸಿ ಖಾಲಿ ಕಟ್ಟಡಕ್ಕೆ ಕರೆದೊಯ್ದು ಈ ಪೈಶಾಚಿಕ ಕೃತ್ಯ ಎಸಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Read Full Story

06:04 PM (IST) Jan 28

ಮದುವೆ ದಿನ ಬೆಸ್ಟ್ ಫ್ರೆಂಡ್ ಕೊಟ್ಟಿದ್ದ ಬೆಳ್ಳಿಯ ಗಿಫ್ಟ್ ಮಾರಲು ಹೋದವಳಿಗೆ ಆಘಾತ - ಭಯಾನಕ ವಿಚಾರ ಬೆಳಕಿಗೆ

ಮದುವೆಯಾಗಿ 20 ವರ್ಷಗಳ ನಂತರ, ಯೆಮನ್‌ನ ಮಹಿಳೆಯೊಬ್ಬಳು ತನ್ನ ಸ್ನೇಹಿತೆ ನೀಡಿದ್ದ ಬೆಳ್ಳಿಯ ಸೊಂಟದ ಪಟ್ಟಿಯನ್ನು ಮಾರಲು ಹೋದಾಗ ಆಘಾತಕಾರಿ ಸತ್ಯವೊಂದು ಬಯಲಾಗಿದೆ. ಆ ಸೊಂಟದ ಪಟ್ಟಿಯನ್ನು ಕತ್ತರಿಸಿ ಜ್ಯುವೆಲ್ಲರಿ ಶಾಪ್ ಮಾಲೀಕರೇ ಆಘಾತಗೊಂಡಿದ್ದರು ಹಾಗಿದ್ದರೆ ಒಳಗಿದ್ದಿದ್ದು ಏನು?

Read Full Story

05:35 PM (IST) Jan 28

ಟಿ20 ವಿಶ್ವಕಪ್ 2026 - ಬಾಂಗ್ಲಾದೇಶವನ್ನು ಬೆಂಬಲಿಸಲು ಹೋಗಿ ಹಳ್ಳಕ್ಕೆ ಬೀಳುತ್ತಾ ಪಾಕಿಸ್ತಾನ?

ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೇಜರ್ ಟ್ವಿಸ್ಟ್ ಸಿಗುವ ಸಾಧ್ಯತೆಯಿದೆ. ಬಾಂಗ್ಲಾದೇಶಕ್ಕೆ ಬೆಂಬಲಿಸಲು ಹೋಗಿ ಇದೀಗ ಪಾಕಿಸ್ತಾನವೇ ಹಳ್ಳಕ್ಕೆ ಬೀಳುವ ಪರಿಸ್ಥಿತಿಗೆ ಬಂದಂತೆ ಕಾಣುತ್ತಿದೆ. ಅಷ್ಟಕ್ಕೂ ಹೊಸ ಟ್ವಿಸ್ಟ್ ಏನು ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ

 

Read Full Story

05:05 PM (IST) Jan 28

ಅಜಿತ್ ಪವಾರ್, ಕ್ಯಾಪ್ಟನ್ ಶಾಂಭವಿ ಸೇರಿ ವಿಮಾನ ದುರಂತದಲ್ಲಿ ಅಂತ್ಯಕಂಡು ಐವರು ಯಾರು?

ಅಜಿತ್ ಪವಾರ್, ಕ್ಯಾಪ್ಟನ್ ಶಾಂಭವಿ ಸೇರಿ ವಿಮಾನ ದುರಂತದಲ್ಲಿ ಅಂತ್ಯಕಂಡು ಐವರು ಯಾರು? ನಂ.1 ಏರ್‌ಫೋರ್ಸ್ ಸ್ಕೂಲ್‌ನಿಂದ ಬಂದ ಶಾಂಭವಿ ಸೇರಿದಂತೆ ಬಾರಮತಿ ವಿಮಾನ ಅಪಘಾತದಲ್ಲಿ ಸಾವೀಗೀಡಾದ ಪ್ರಮುಖರು ಯಾರೆಲ್ಲಾ?

 

Read Full Story

04:06 PM (IST) Jan 28

ನ್ಯೂಜಿಲೆಂಡ್‌ ವಿರುದ್ಧ ಗೆಲುವಿನ ಓಟ ಮುಂದುವರಿಸುತ್ತಾ ಟೀಂ ಇಂಡಿಯಾ? ಸಂಜು ಮೇಲೆ ಎಲ್ಲರ ಕಣ್ಣು!

ಈಗಾಗಲೇ ಟಿ20 ಸರಣಿ ಗೆದ್ದಿರುವ ಭಾರತ, ವಿಶಾಖಪಟ್ಟಣದಲ್ಲಿ ನಡೆಯಲಿರುವ 4ನೇ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಕಳಪೆ ಫಾರ್ಮ್‌ನಲ್ಲಿರುವ ಸಂಜು ಸ್ಯಾಮ್ಸನ್‌ ಅವರ ವಿಶ್ವಕಪ್‌ ಸ್ಥಾನದ ದೃಷ್ಟಿಯಿಂದ ನಿರ್ಣಾಯಕ ಎನಿಸಲಿದೆ.

Read Full Story

03:46 PM (IST) Jan 28

ಲಾಟರಿಯಲ್ಲಿ 1 ಕೋಟಿ ಗೆದ್ರೆ ಕೈಗೆಷ್ಟು ಸಿಗುತ್ತೆ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಅದೃಷ್ಟ ಕೂಡ ಡಿಸ್ಕೌಂಟ್‌ನಲ್ಲಿ ಬರುತ್ತೆ, ಆದರೆ ದುರದೃಷ್ಟ ಬೋನಸ್ ಜೊತೆ ಬರುತ್ತೆ. ಇದು ಒಂದು ಸಿನಿಮಾದ ಡೈಲಾಗ್. ಅದೃಷ್ಟ ಡಿಸ್ಕೌಂಟ್‌ನಲ್ಲಿ ಬರುತ್ತೆ ಅನ್ನೋದಕ್ಕೆ ಲಾಟರಿಗಳೇ ಬೆಸ್ಟ್ ಉದಾಹರಣೆ. ಲಾಟರಿಯಲ್ಲಿ ಒಂದು ಕೋಟಿ ಗೆದ್ದರೆ ಕೈಗೆ ಎಷ್ಟು ಹಣ ಸಿಗುತ್ತೆ ಗೊತ್ತಾ?

 

Read Full Story

03:41 PM (IST) Jan 28

ಅಜಿತ್ ಪವಾರ್ ದುರಂತ ಅಂತ್ಯಕಂಡ ವಿಮಾನ ಪತನದ ಮೊದಲ ವಿಡಿಯೋ, ಭಯಾನಕ ಕೊನೇ ಕ್ಷಣ

ಅಜಿತ್ ಪವಾರ್ ದುರಂತ ಅಂತ್ಯಕಂಡ ವಿಮಾನ ಪತನದ ಮೊದಲ ವಿಡಿಯೋ, ಕಾರ್ಯಕ್ರಮ ನಿಮಿತ್ತ ಪ್ರಯಾಣಿಸುತ್ತಿದ್ದ ಅಜಿತ್ ಪವಾರ್ ವಿಮಾನ ಲ್ಯಾಂಡಿಂಗ್ ವೇಳೆ ಸಮಸ್ಯೆ ಎದುರಾಗಿದೆ. ಅಜಿತ್ ಪವಾರ್ ಅಂತಿಮ ಕ್ಷಣದ ವಿಡಿಯೋ ಬಹಿರಂಗವಾಗಿದೆ.

 

Read Full Story

03:36 PM (IST) Jan 28

ಡಿಸಿಎಂ ಅಜಿತ್‌ ಪವಾರ್‌ ನಿಧನ, ನಾಳೆ ಶಾಲೆ, ಬ್ಯಾಂಕ್‌ಗೆ ರಜೆ?

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬಾರಾಮತಿ ಬಳಿ ನಡೆದ ಚಾರ್ಟರ್ಡ್ ವಿಮಾನ ಅಪಘಾತದಲ್ಲಿ ನಿಧನರಾದರು. ಈ ದುರಂತದಲ್ಲಿ ಪವಾರ್ ಸೇರಿದಂತೆ ಐವರು ಸಾವನ್ನಪ್ಪಿದ್ದು, ರಾಜ್ಯ ಸರ್ಕಾರ ಮೂರು ದಿನಗಳ ಶೋಕಾಚರಣೆ ಘೋಷಿಸಿದೆ.

Read Full Story

03:14 PM (IST) Jan 28

Ajit Pawar Plane Crash - ಹಕ್ಕಿಯಂತೆ ಹಾರುವ ಕನಸು ಕಂಡಿದ್ದ ಹುಡುಗಿ, ಆಗಸದಲ್ಲೇ ಮರೆಯಾದ ಕ್ಯಾಪ್ಟನ್‌ ಶಾಂಭವಿ ಪಾಠಕ್‌!

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ಚಾರ್ಟರ್ಡ್ ವಿಮಾನವು ಬಾರಾಮತಿ ಬಳಿ ಪತನಗೊಂಡು, ಅವರೂ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ಅನುಭವಿ ಪೈಲಟ್‌ಗಳಾದ ಕ್ಯಾಪ್ಟನ್ ಶಾಂಭವಿ ಪಾಠಕ್ ಮತ್ತು ಕ್ಯಾಪ್ಟನ್ ಸುಮಿತ್ ಕಪೂರ್ ಕೂಡ ದುರಂತದಲ್ಲಿ ಸಾವನ್ನಪ್ಪಿದ್ದಾರೆ.

Read Full Story

02:21 PM (IST) Jan 28

ಏಷ್ಯಾದಲ್ಲೇ ಅತ್ಯುತ್ತಮ ಜೀವನ ಗುಣಮಟ್ಟ ಹೊಂದಿರುವ ಟಾಪ್ 10 ದೇಶಗಳಿವು! ಭಾರತ, ಪಾಕ್ ಸ್ಥಾನವೆಷ್ಟು?

ಜೀವನ ಗುಣಮಟ್ಟ ಸೂಚ್ಯಂಕ 2026: ಏಷ್ಯಾದಲ್ಲಿ ಅತ್ಯುತ್ತಮ ಜೀವನಮಟ್ಟವನ್ನು ಹೊಂದಿರುವ ಜನರು ಯಾವ ದೇಶದಲ್ಲಿದ್ದಾರೆ? ಭಾರತ, ಚೀನಾ, ಪಾಕಿಸ್ತಾನದ ಜನರ ಸ್ಥಿತಿ ಹೇಗಿದೆ. ಈ ದೇಶಗಳಲ್ಲಿ ಉತ್ತಮ ಸ್ಥಾನ ಯಾರದ್ದು? 

Read Full Story

02:17 PM (IST) Jan 28

ಆಸ್ಪತ್ರೆಗೆ ಕರದೊಯ್ದರು ಬದುಕಿಸಲಾಗಲಿಲ್ಲ - ಆಂಬುಲೆನ್ಸ್‌ ಡೋರ್ ಒಳಭಾಗದಿಂದ ಜಾಮ್ ಆಗಿ ರೋಗಿ ಸಾವು

ಆಂಬುಲೆನ್ಸ್‌ನ ಹಿಂಬಾಗಿಲು ಜ್ಯಾಮ್ ಆದ ಕಾರಣ 67 ವರ್ಷದ ರೋಗಿಯೊಬ್ಬರು ಒಳಗೆಯೇ ಸಿಲುಕಿ ಸಾವನ್ನಪ್ಪಿದ್ದಾರೆ. ಜಿಲ್ಲಾ ಆಸ್ಪತ್ರೆಯ ಗೇಟ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಬಾಗಿಲು ತೆರೆಯುವಷ್ಟರಲ್ಲಿಯೇ ರೋಗಿ ಪ್ರಾಣ ಬಿಟ್ಟಿದ್ದು, ಇದು ಆರೋಗ್ಯ ವ್ಯವಸ್ಥೆಯ ಲೋಪವನ್ನು ಬಹಿರಂಗಪಡಿಸಿದೆ.

Read Full Story

01:12 PM (IST) Jan 28

'ಮನ ಶಂಕರ ವರಪ್ರಸಾದ್ ಗಾರು' ಫ್ಲಾಪ್ ಆಗದಂತೆ ಕಾಪಾಡಿದ್ದು ಆ ಒಬ್ಬ ವ್ಯಕ್ತಿ! ಯಾರದು ಗೊತ್ತಾ?

ಚಿರಂಜೀವಿ ನಟನೆಯ 'ಮನ ಶಂಕರ ವರಪ್ರಸಾದ್ ಗಾರು' ಸಿನಿಮಾ ವಿಚಾರದಲ್ಲಿ ಒಂದು ಘಟನೆ ನಡೆದಿದೆ. ಆ ತಪ್ಪು ಆಗಿದ್ದರೆ ಸಿನಿಮಾ ಫ್ಲಾಪ್ ಆಗುವ ಸಾಧ್ಯತೆ ಹೆಚ್ಚಿತ್ತು. ಹಾಗಾಗದಂತೆ ಒಬ್ಬ ವ್ಯಕ್ತಿ ಕಾಪಾಡಿದ್ದಾರೆ. ಆ ವಿವರಗಳು ಇಲ್ಲಿವೆ ನೋಡಿ

Read Full Story

12:52 PM (IST) Jan 28

ನೀವೇ ಡಿಸಿಎಂ ಅಂತ ನಂಬೋದು ಹೇಗೆ? ಅಜಿತ್ ಪವಾರ್‌ಗೆ ಬೆವರು ಇಳಿಸಿದ್ರು ಈ ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣ!

ಅಕ್ರಮ ಗಣಿಗಾರಿಕೆ ತಡೆಯಲು ಹೋದಾಗ, ಫೋನ್‌ನಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನೇ 'ನೀವು ಯಾರು' ಎಂದು ಪ್ರಶ್ನಿಸಿದ್ದ ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣ ಅವರ ವಿಡಿಯೋ ವೈರಲ್ ಆಗಿದೆ. ಈ ಲೇಖನವು ಈ ಘಟನೆ, ಅಜಿತ್ ಪವಾರ್ ನೀಡಿದ ಸ್ಪಷ್ಟನೆ  ಸಂಪೂರ್ಣ ವಿವರವನ್ನು ನೀಡುತ್ತದೆ.

Read Full Story

11:52 AM (IST) Jan 28

ಅಜಿತ್ ಪವಾರ್ ವಿಮಾನ ದುರಂತ ಬೆನ್ನಲ್ಲೇ ಕಂಬನಿ ಮಿಡಿದ ಪ್ರಧಾನಿ ನರೇಂದ್ರ ಮೋದಿ!

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪುಣೆ ಬಳಿ ನಡೆದ ವಿಮಾನ ದುರಂತದಲ್ಲಿ ನಿಧನರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಬಾರಾಮತಿ ಬಳಿ ವಿಮಾನ ಇಳಿಯಲು ಯತ್ನಿಸಿದಾಗ ಈ ದುರಂತ ಸಂಭವಿಸಿದೆ.
Read Full Story

11:26 AM (IST) Jan 28

ಅಜಿತ್‌ ಪವಾರ್‌, ಸೌಂದರ್ಯ, ಜನರಲ್‌ ಬಿಪಿನ್‌ ರಾವತ್‌; ವಿಮಾನ ದುರಂತದಲ್ಲಿ ಸಾವು ಕಂಡ ಭಾರತದ ವಿಐಪಿಗಳು

Indian VIPs Lost in Aviation Tragedies: From Sanjay Gandhi to Ajit Pawar ಈ ಲೇಖನವು ಸಂಜಯ್ ಗಾಂಧಿ, ವೈ.ಎಸ್. ರಾಜಶೇಖರ ರೆಡ್ಡಿ, ಮತ್ತು ಜನರಲ್ ಬಿಪಿನ್ ರಾವತ್ ಸೇರಿದಂತೆ ವಿಮಾನ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡ ಭಾರತದ ಪ್ರಮುಖ ರಾಜಕಾರಣಿಗಳು ಮತ್ತು ಗಣ್ಯರ ಪಟ್ಟಿ.

Read Full Story

11:00 AM (IST) Jan 28

ಎನ್‌ಸಿಪಿಯ ಗಡಿಯಾರ ಗೆದ್ದು ರಾಜಕೀಯ ಜೀವನ ನಡೆಸಿದ್ದ ಅಜಿತ್‌ ಪವಾರ್‌ಗೆ ಕೈಕೊಟ್ಟ ಟೈಮ್‌!

ಸಹಕಾರಿ ಕ್ಷೇತ್ರದಿಂದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹುದ್ದೆಯವರೆಗೂ ಸಾಗಿಬಂದ ಅಜಿತ್ ಪವಾರ್, ತಮ್ಮ ರಾಜಕೀಯ ರಣತಂತ್ರಗಳಿಂದ 'ಪವರ್' ಎಂದೇ ಗುರುತಿಸಿಕೊಂಡಿದ್ದರು. ಚಿಕ್ಕಪ್ಪ ಶರದ್ ಪವಾರ್‌ರಿಂದ ಬೇರ್ಪಟ್ಟು ಎನ್‌ಸಿಪಿ ಇಬ್ಬಾಗ ಮಾಡಿದ ಅವರ ರಾಜಕೀಯ ಜೀವನ ಅನಿರೀಕ್ಷಿತ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದೆ.

Read Full Story

10:54 AM (IST) Jan 28

ಅತೀವ ಪ್ರೀತಿ ಇಟ್ಟಿದ್ದ ಬಾರಾಮತಿಯಲ್ಲೇ ದುರಂತ ಅಂತ್ಯ ಕಂಡ ಅಜಿತ್ ಪವಾರ್ ಯಾರು? ರಾಜಕೀಯ ಜೀವನ, ಸಾಧನೆಗಳಿವು

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ತಮ್ಮ ಸ್ವಕ್ಷೇತ್ರ ಬಾರಾಮತಿಗೆ ಪ್ರಯಾಣಿಸುತ್ತಿದ್ದಾಗ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಈ ಲೇಖನವು ಅವರ ರಾಜಕೀಯ ಜೀವನ, ಕುಟುಂಬದ ಹಿನ್ನೆಲೆ, ಸಾಧನೆಗಳು, ವಿವಾದಗಳು ಮತ್ತು ಅವರ ದುರಂತ ಅಂತ್ಯದ ಸಂಪೂರ್ಣ ವಿವರಗಳನ್ನು ಒದಗಿಸುತ್ತದೆ.
Read Full Story

10:36 AM (IST) Jan 28

ವಿಮಾನ ದುರಂತದಲ್ಲಿ ಕೊನೆಯುಸಿರೆಳೆದ ಅಜಿತ್ ಪವಾರ್ ಎಲ್ಲಿಗೆ ಪ್ರಯಾಣ ಮಾಡುತ್ತಿದ್ದರು?

ಭಾರಮತಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣ ಮಾಡುತ್ತಿದ್ದ ವಿಮಾನ ತುರ್ತು ಭೂ ಸ್ಪರ್ಶದ ವೇಳೆ ನಡೆದ ಸಮಯದಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಆರು ಮಂದಿಯೂ ಕೊನೆಯುಸಿರೆಳೆದಿದ್ದಾರೆ. ಅಷ್ಟಕ್ಕೂ ಅವರು ಎಲ್ಲಿಗೆ ಹೋಗುತ್ತಿದ್ದರು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

 

Read Full Story

10:31 AM (IST) Jan 28

ದುರಂತದಲ್ಲಿ ಚೂರುಚೂರಾದ Learjet 45 ವಿಮಾನ, ಅಜಿತ್‌ ಪವಾರ್‌ ದೇಹ ಸುಟ್ಟು ಭಸ್ಮ!

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬಾರಾಮತಿಯಲ್ಲಿ ಸಂಭವಿಸಿದ ಲಿಯರ್‌ಜೆಟ್ 45 ವಿಮಾನ ಅಪಘಾತದಲ್ಲಿ ದುರಂತವಾಗಿ ಸಾವನ್ನಪ್ಪಿದ್ದಾರೆ. ಅವರೊಂದಿಗೆ ವಿಮಾನದಲ್ಲಿದ್ದ ಇನ್ನೂ ನಾಲ್ವರು ಸಹ ಮೃತಪಟ್ಟಿದ್ದು, ಈ ಘಟನೆಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ದೃಢಪಡಿಸಿದೆ.
Read Full Story

09:56 AM (IST) Jan 28

Breaking - ವಿಮಾನ ದುರಂತದಲ್ಲಿ ಮಹಾ ಡಿಸಿಎಂ Ajit Pawar ಸೇರಿದಂತೆ 6 ಮಂದಿ ದುರ್ಮರಣ!

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಆರು ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಬಾರಾಮತಿಯಲ್ಲಿ ಪತನಗೊಂಡಿದೆ. ಮುಂಬೈನಿಂದ ಬಾರಾಮತಿಗೆ ತೆರಳುತ್ತಿದ್ದ ವೇಳೆ ಲ್ಯಾಂಡಿಂಗ್ ಸಮಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ.

Read Full Story

08:47 AM (IST) Jan 28

ಸೋನಾಮಾರ್ಗ್‌ನಲ್ಲಿ ಹಿಮದ ರೌದ್ರ ನರ್ತನ - ಕ್ಷಣಾರ್ಧದಲ್ಲಿ ಮನೆಗಳ ಸಮಾಧಿ ಮಾಡಿದ ಹಿಮಪಾತ - ವೀಡಿಯೋ

ಜಮ್ಮು ಕಾಶ್ಮೀರದ ಪ್ರವಾಸಿ ತಾಣ ಸೋನಾಮಾರ್ಗ್‌ನಲ್ಲಿ ಭಾರಿ ಹಿಮಪಾತ ಸಂಭವಿಸಿದ್ದು, ಹಿಮದ ಪ್ರವಾಹವು ಹಲವು ಮನೆಗಳು ಮತ್ತು ವಾಹನಗಳನ್ನು ಸಮಾಧಿ ಮಾಡಿದೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Read Full Story

07:59 AM (IST) Jan 28

ಪರೇಡ್‌ ವೇಳೆ 3ನೇ ಸಾಲಲ್ಲಿ ಕೂರಿಸಿ ರಾಹುಲ್‌ ಗಾಂಧಿ ಹಾಗೂ ನನಗೆ ಅವಮಾನ - ಮಲ್ಲಿಕಾರ್ಜುನ ಖರ್ಗೆ

ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ತಮಗೆ ಮತ್ತು ರಾಹುಲ್‌ ಗಾಂಧಿಗೆ 3ನೇ ಸಾಲಿನಲ್ಲಿ ಆಸನ ನೀಡಿ ಅವಮಾನಿಸಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಇದು ಶಿಷ್ಟಾಚಾರದ ಉಲ್ಲಂಘನೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

Read Full Story

07:41 AM (IST) Jan 28

ಯುರೋಪ್‌ನಲ್ಲಿ ಭಾರತದ ಶೇ.93ರಷ್ಟು ರಫ್ತು ಇನ್ನು ಡ್ಯೂಟಿ ಫ್ರೀ

ಭಾರತ ಮತ್ತು ಐರೋಪ್ಯ ಒಕ್ಕೂಟ ನಡುವಿನ ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ಯುರೋಪಿಗೆ ರಫ್ತಾಗುವ ಭಾರತದ ಶೇ.93ರಷ್ಟು ಉತ್ಪನ್ನಗಳು ಡ್ಯೂಟಿ ಫ್ರೀ ಆಗಲಿವೆ. ಅದೇ ರೀತಿ ಯುರೋಪ್‌ನಿಂದ ಆಮದಾಗುವ ದುಬಾರಿ ಐಷಾರಾಮಿ ಕಾರುಗಳು, ಔಷಧ, ವೈನ್‌, ಮದ್ಯ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ಗಣನೀಯವಾಗಿ ತಗ್ಗಲಿದೆ.

 

Read Full Story

07:41 AM (IST) Jan 28

ಟ್ರಂಪ್ ವಿರುದ್ಧವೇ ಟ್ರಂಪ್‌ ಕಾರ್ಡ್‌

ರಷ್ಯಾ ತೈಲ ಖರೀದಿ, ಗ್ರೀನ್‌ಲ್ಯಾಂಡ್ ವಶ ವಿಷಯದಲ್ಲಿ ಭಾರತ ಹಾಗೂ ಐರೋಪ್ಯ ದೇಶಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟ್ಯಾಕ್ಸ್‌ ವಾರ್‌ ನಡೆಸುತ್ತಿರುವ ಹೊತ್ತಿನಲ್ಲೇ, ಐತಿಹಾಸಿಕ ಮುಕ್ತ ತೆರಿಗೆ ವ್ಯಾಪಾರ ಒಪ್ಪಂದ ವನ್ನು ಭಾರತ ಮತ್ತು ಯುರೋಪಿಯನ್‌ ಒಕ್ಕೂಟಗಳು ಮಂಗಳವಾರ ಅಂತಿಮಗೊಳಿಸಿವೆ

 

Read Full Story

07:41 AM (IST) Jan 28

ಜಮ್ಮುಕಾಶ್ಮೀರದಲ್ಲಿ ತೀವ್ರ ಹಿಮಪಾತ: ತುರ್ತು ಚಿಕಿತ್ಸೆ ನೀಡಲು ಜೇಸಿಬಿ ಬಳಸಿ ಆಸ್ಪತ್ರೆ ತಲುಪಿದ ವೈದ್ಯರು

ಜಮ್ಮು ಕಾಶ್ಮೀರದಲ್ಲಿನ ತೀವ್ರ ಹಿಮಪಾತದಿಂದ ರಸ್ತೆಗಳು ಬಂದ್ ಆಗಿದ್ದವು. ಈ ಸಂದರ್ಭದಲ್ಲಿ, ಶೋಪಿಯಾನ್ ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಬಶರತ್ ಪಂಡಿತ್ ಅವರು, ತುರ್ತು ಶಸ್ತ್ರಚಿಕಿತ್ಸೆಗಾಗಿ 3 ಕಿಲೋ ಮೀಟ‌ರ್ ನಡೆದು, ನಂತರ ಜೆಸಿಬಿ ಮೂಲಕ ಆಸ್ಪತ್ರೆ ತಲುಪಿ ತಮ್ಮ ಕರ್ತವ್ಯ ಮೆರೆದಿದ್ದಾರೆ.

 

Read Full Story

07:40 AM (IST) Jan 28

ಯುಜಿಸಿಯ ತಾರತಮ್ಯ ತಡೆ ಸಮಿತಿ : ಜನರಲ್‌ ವರ್ಗ ಕಿಡಿ

ವಿಶ್ವವಿದ್ಯಾಲಯಗಳಲ್ಲಿ ಎಸ್ಸಿ-ಎಸ್ಟಿ, ಒಬಿಸಿಗಳ ಜಾತಿ ತಾರತಮ್ಯ ಹತ್ತಿಕ್ಕುವ ಸಲುವಾಗಿ ಸಮಿತಿ ರಚಿಸಲು ಯುಜಿಸಿ ಹೊರಡಿಸಿರುವ ಹೊಸ ಆದೇಶ ವಿವಾದಕ್ಕೀಡಾಗಿದೆ. ‘ಈ ಸಮಿತಿಯಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

 

Read Full Story

07:40 AM (IST) Jan 28

ಇಂದಿನಿಂದ ಬಜೆಟ್ ಅಧಿವೇಶನ

ಬಜೆಟ್‌ ಅಧಿವೇಶನ ಬುಧವಾರದಿಂದ ಆರಂಭವಾಗಲಿದೆ. ಏಪ್ರಿಲ್ 2ಕ್ಕೆ ಅಂತ್ಯಗೊಳ್ಳಲಿದೆ. ಬಜೆಟ್‌ ಮಂಡನೆಯ ಕುತೂಹಲ ಒಂದೆಡೆಯಾದರೆ. ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಕಾಯ್ದೆ ರದ್ದು ಮಾಡಿ ಜಾರಿಗೆ ತಂದಿರುವ ಜಿ ರಾಮ್‌ ಜಿ ಕಾಯ್ದೆಯ ವಿರುದ್ಧ ಪ್ರತಿಪಕ್ಷಗಳು ಕೋಲಾಹಲ ಎಬ್ಬಿಸುವುದು ನಿಶ್ಚಿತ

 

Read Full Story

07:39 AM (IST) Jan 28

ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ವಿರುದ್ಧ ಕ್ಷಿಪ್ರಕ್ರಾಂತಿ ಯತ್ನ?

ಅಮೆರಿಕ- ಚೀನಾ ನಡುವೆ ವ್ಯಾಪಾರ ಸಂಬಂಧ ಬಿಕ್ಕಟ್ಟು ತಾರಕಕ್ಕೆ ಏರಿರುವ ಹೊತ್ತಿನಲ್ಲೇ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ವಿರುದ್ಧ ಕ್ಷಿಪ್ರಕ್ರಾಂತಿಗೆ ಯತ್ನ ನಡೆಸಿದ್ದರು ಎನ್ನಲಾದ ಅವರ ಬಲಗೈ ಬಂಟ, ಜನರಲ್ ಜಾಂಗ್ ಯೂಕ್ಸಿಯಾ ಅವರನ್ನು ಬಂಧಿಸಲಾಗಿದೆ.

 

Read Full Story

More Trending News