Published : Sep 20, 2025, 07:41 AM ISTUpdated : Sep 20, 2025, 10:36 PM IST

India Latest News Live: Navaratri ಹಬ್ಬ ಆಚರಿಸೋದು ಏಕೆ? ಮಕ್ಕಳಿಗೂ ಅರ್ಥವಾಗೋ ಅದ್ಭುತ ಪುಟ್ಟ AI ವಿಡಿಯೋ ಇಲ್ಲಿದೆ...

ಸಾರಾಂಶ

ಬೆಂಗಳೂರು (ಸೆ.20): ನವದೆಹಲಿ: ಶೇ.50 ಸುಂಕ ಹೇರಿಕೆ ಬಳಿಕ ಹದಗೆಟ್ಟಿರುವ ಭಾರತ-ಅಮೆರಿಕ ಸಂಬಂಧ ಸುಧಾರಣೆಗೆ ಮಲೇಷ್ಯಾದಲ್ಲಿ ಮುಂದಿನ ತಿಂಗಳು ನಡೆವ 45ನೇ ಆಸಿಯಾನ್ ಸಮ್ಮೇಳನ ವೇದಿಕೆಯಾಗುವ ನಿರೀಕ್ಷೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮೋದಿ ಮತ್ತು ಟ್ರಂಪ್ ಅ.26-28ರವರೆಗೆ ನಡೆವ ಈ ಶೃಂಗದಲ್ಲಿ ಭೇಟಿಯಾಗಿ ಕೆಲಕಾಲ ಚರ್ಚೆ ನಡೆಸುವ ನಿರೀಕ್ಷೆಯೂ ಇದೆ. ಒಂದು ವೇಳೆ ಇದು ಸಾಧ್ಯವಾದರೆ ಅಮೆರಿಕದ ಪ್ರತಿ ಸುಂಕ ವಿವಾದದ ಬಳಿಕ ಹಳೆಯ ದೋಸ್ತಿಗಳಾದ ಮೋದಿ ಮತ್ತು ಟ್ರಂಪ್ ಮೊದಲ ಮುಖಾಮುಖಿ ಭೇಟಿ ಇದಾಗಲಿದೆ. ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

10:36 PM (IST) Sep 20

Navaratri ಹಬ್ಬ ಆಚರಿಸೋದು ಏಕೆ? ಮಕ್ಕಳಿಗೂ ಅರ್ಥವಾಗೋ ಅದ್ಭುತ ಪುಟ್ಟ AI ವಿಡಿಯೋ ಇಲ್ಲಿದೆ...

ನವರಾತ್ರಿ ಹಬ್ಬವು ದೇವಿಯ ಒಂಬತ್ತು ರೂಪಗಳನ್ನು ಪೂಜಿಸುವ ಒಂಬತ್ತು ರಾತ್ರಿಗಳ ಆಚರಣೆಯಾಗಿದೆ. ಈ ಹಬ್ಬವು ಮಹಿಷಾಸುರನ ಮೇಲೆ ದುರ್ಗಾದೇವಿಯ ವಿಜಯವನ್ನು ಸ್ಮರಿಸುತ್ತದೆ, ಇದು ಕೆಟ್ಟದ್ದರ ಮೇಲೆ ಒಳ್ಳೆಯದರ ಜಯವನ್ನು ಸಂಕೇತಿಸುತ್ತದೆ.  

Read Full Story

10:35 PM (IST) Sep 20

ನಾಳೆಯೇ ವಾಪಸ್ ಬರಬೇಕಿಲ್ಲ, ವಿರೋಧದ ಬಳಿಕ H1B ವೀಸಾ ಕುರಿತು ಟ್ರಂಪ್ ಮಹತ್ವದ ಸ್ಪಷ್ಟನೆ

ನಾಳೆಯೇ ವಾಪಸ್ ಬರಬೇಕಿಲ್ಲ, ವಿರೋಧದ ಬಳಿಕ H1B ವೀಸಾ ಕುರಿತು ಮಹತ್ವದ ಸ್ಪಷ್ಟನೆ ಕೊಟ್ಟ ಟ್ರಂಪ್, ಹೊಸ ನೀತಿ ಯಾರಿಗೆ ಅನ್ವಯವಾಗಲಿದೆ, ಇದರ ಷರತ್ತುಗಳೇನು ಅನ್ನೋ ಕುರಿತು ಅಮೆರಿಕ ಸ್ಪಷ್ಟನೆ ಕೊಟ್ಟಿದೆ. ಭಾರತೀಯರಿಗೆ ಕೊಂಚ ರಿಲೀಫ್ ಸಿಕ್ಕಿದೆ.

 

Read Full Story

10:04 PM (IST) Sep 20

ನವರಾತ್ರಿಯ 9 ದಿನ ಈ ಕಲರ್​ ಬಟ್ಟೆ ತೆರೆಯಲಿದೆ ಅದೃಷ್ಟ - ಯಾವ ದಿನಕ್ಕೆ ಯಾವ ಬಣ್ಣ? ಮಹತ್ವವೇನು?

2025ರ ಶಾರದಿ ನವರಾತ್ರಿಯು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ಆಚರಿಸಲಾಗುವುದು. ಈ ಹಬ್ಬವು ದುರ್ಗಾ ದೇವಿಯ ಒಂಬತ್ತು ರೂಪಗಳ ಆರಾಧನೆಗೆ ಮೀಸಲಾಗಿದ್ದು, ಪ್ರತಿ ದಿನಕ್ಕೂ ನಿರ್ದಿಷ್ಟ ಬಣ್ಣವನ್ನು ಧರಿಸುವುದರ ಮಹತ್ವವನ್ನು ವಿವರಿಸುತ್ತದೆ.

Read Full Story

09:56 PM (IST) Sep 20

ನವರಾತ್ರಿ, ದೀಪಾವಳಿ ಹಬ್ಬದ ಪ್ರಯಾಣ ರದ್ದು, ಅಮೆರಿಕದಲ್ಲಿ H-1B ವೀಸಾ ಭಾರತೀಯರು ಕಂಗಾಲು

ನವರಾತ್ರಿ, ದೀಪಾವಳಿ ಹಬ್ಬಕ್ಕೆ ಪ್ರಯಾಣ ರದ್ದು, ಅಮೆರಿಕದಲ್ಲಿ H-1B ವೀಸಾ ಭಾರತೀಯರ ಪರದಾಟ, ಡೋನಾಲ್ಡ್ ಟ್ರಂಪ್ ಕೊಟ್ಟ ಮತ್ತೊಂದು ಶಾಕ್‌ಗೆ ಭಾರತೀಯರು ಕಂಗಾಲಾಗಿದ್ದಾರೆ. ಭಾರತ ಪ್ರವಾಸ ಮಾಡಲು ಸಾಧ್ಯವಾಗದೇ, ಅಮೆರಿಕದಲ್ಲಿ ಇರಲೂ ಸಾಧ್ಯವಾಗದೇ ಕಂಗೆಟ್ಟು ಕುಳಿತಿದ್ದಾರೆ.

Read Full Story

08:56 PM (IST) Sep 20

ಭಾರತ ವಿರುದ್ಧ ಸೋಲುಕಂಡರೂ ಸೂರ್ಯಕುಮಾರ್‌ಗೆ ಓಮನ್ ನಾಯಕ ಧನ್ಯವಾದ ಹೇಳಿದ್ದೇಕೆ?

ಭಾರತ ವಿರುದ್ಧ ಸೋಲುಕಂಡರೂ ಸೂರ್ಯಕುಮಾರ್‌ಗೆ ಓಮನ್ ನಾಯಕ ಧನ್ಯವಾದ ಹೇಳಿದ್ದೇಕೆ? ಟೀಂ ಇಂಡಿಯಾ ನಾಯಕನಿಗೆ ಥ್ಯಾಂಕ್ಸ್ ಹೇಳಿದ ಜತಿಂದರ್ ಸಿಂಗ್, ಬಿಸಿಸಿಐಗೂ ಮಾಡಿದ ವಿಶೇಷ ಮನವಿ ಏನು? 

Read Full Story

08:19 PM (IST) Sep 20

ಭಾರತ ಮೇಲೆ ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಸೌದಿ ನೆರವಾಗುತ್ತಾ? ಒಪ್ಪಂದ ಸೀಕ್ರೆಟ್ ಬಿಚ್ಚಿಟ್ಟ ಸಚಿವ

ಭಾರತ ಮೇಲೆ ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಸೌದಿ ನೆರವಾಗುತ್ತಾ?ಒಪ್ಪಂದ ಸೀಕ್ರೆಟ್ ಬಿಚ್ಚಿಟ್ಟ ಸಚಿವ, ಇತ್ತೀಚೆಗೆ ಸೌದಿ ಅರೇಬಿಯಾ ಹಾಗೂ ಪಾಕಿಸ್ತಾನ ನ್ಯಾಟೋ ರೀತಿಯ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಬೆನ್ನಲ್ಲೇ ಪಾಕ್ ರಕ್ಷಣಾ ಸಚಿವ ಸ್ಫೋಟಕ ಸೀಕ್ರೆಟ್ ಬಹಿರಂಗಪಡಿಸಿದ್ದಾರೆ.

Read Full Story

07:28 PM (IST) Sep 20

ನಟ ಮೋಹನ್‌ಲಾಲ್‌ಗೆ ಪ್ರತಿಷ್ಠಿತ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಘೋಷಿಸಿದ ಕೇಂದ್ರ ಸರ್ಕಾರ

ನಟ ಮೋಹನ್‌ಲಾಲ್‌ಗೆ ಪ್ರತಿಷ್ಠಿತ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಘೋಷಿಸಿದ ಕೇಂದ್ರ ಸರ್ಕಾರ, 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ ನಟನಿಗೆ ಶ್ರೇಷ್ಠ ಗೌರವ ಸಂದಿದೆ.ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಪ್ರತಿಷ್ಠಿತ ಪ್ರಶಸ್ತಿ ಘೋಷಿಸಲಾಗಿದೆ.

Read Full Story

05:43 PM (IST) Sep 20

ನವರಾತ್ರಿ ಹಬ್ಬಕ್ಕೆ ವಿಶ್ವ ಹಿಂದೂ ಪರಿಷತ್‌ ಮಾರ್ಗಸೂಚಿ, ತಿಲಕ, ಆಧಾರ್ ಕಾರ್ಡ್ ಕಡ್ಡಾಯ

ನವರಾತ್ರಿ ಹಬ್ಬಕ್ಕೆ ವಿಶ್ವ ಹಿಂದೂ ಪರಿಷತ್‌ ಮಾರ್ಗಸೂಚಿ, ತಿಲಕ, ಆಧಾರ್ ಕಾರ್ಡ್ ಕಡ್ಡಾಯ, ಹಿಂದೂಗಳಿಗೆ ಮಾತ್ರ ಪ್ರವೇಶ ನೀಡಲು ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಷ್ಟಕ್ಕೂ ವಿಹೆಚ್‌ಪಿ ಈ ಮಾರ್ಗಸೂಚಿ ಪ್ರಕಟಿಸಿದ್ದೇಕೆ?

Read Full Story

05:22 PM (IST) Sep 20

Asia Cup 2025 - ಧೋನಿ ಹಿಂದಿಕ್ಕಿ ಅಪರೂಪದ ದಾಖಲೆ ಬರೆದ ಸಂಜು ಸ್ಯಾಮ್ಸನ್!

ಏಷ್ಯಾಕಪ್‌ನ ಒಮಾನ್ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಈ ಪ್ರದರ್ಶನದೊಂದಿಗೆ, ಅವರು ಟಿ20ಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ಪಟ್ಟಿಯಲ್ಲಿ ಎಂ ಎಸ್ ಧೋನಿಯನ್ನು ಹಿಂದಿಕ್ಕಿ ಹೊಸ ದಾಖಲೆ ನಿರ್ಮಿಸಿದರು. 

Read Full Story

04:11 PM (IST) Sep 20

ಬಾಟಲ್‌ ವಾಟರ್ ಮಾರ್ಕೆಟ್‌ಗೆ 'ಜಿಯೋ' ರೀತಿಯಲ್ಲಿ ಸಮರ ಶುರು ಮಾಡಿದ ರಿಲಯನ್ಸ್, ಬಿಸ್ಲೆರಿ, ಕಿನ್ಲೆಗೆ ಶಾಕ್‌!

Campa Sure ರಿಲಯನ್ಸ್ ಕಂಪನಿಯು ತನ್ನ ಜಿಯೋ ಮಾದರಿಯ ತಂತ್ರದೊಂದಿಗೆ ಬಾಟಲ್ ನೀರಿನ ಉದ್ಯಮಕ್ಕೆ ಕಾಲಿಡುತ್ತಿದೆ. 'ಕ್ಯಾಂಪಾ ಶ್ಯೂರ್' ಬ್ರ್ಯಾಂಡ್ ಅಡಿಯಲ್ಲಿ, ಬಿಸ್ಲೆರಿ ಮತ್ತು ಕಿನ್ಲೆಯಂತಹ ಪ್ರಮುಖ ಬ್ರ್ಯಾಂಡ್‌ಗಳಿಗಿಂತ ಕಡಿಮೆ ಬೆಲೆಗೆ ನೀರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. 

Read Full Story

03:58 PM (IST) Sep 20

ಏಷ್ಯಾಕಪ್ ಆಡುತ್ತಿರುವವರ ಪೈಕಿ ಅತಿಹೆಚ್ಚು ಇನ್‌ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಹೊಂದಿರುವ ಟಾಪ್ 5 ಆಟಗಾರರಿವರು!

ದುಬೈ: 2025ರ ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಇಂದಿನಿಂದ ಸೂಪರ್ 4 ಪಂದ್ಯಗಳು ಆರಂಭವಾಗುತ್ತಿವೆ. ಭಾರತ 'ಎ' ಗುಂಪಿನಿಂದ ಅಗ್ರಸ್ಥಾನಿಯಾಗಿ ಸೂಪರ್ 4 ಪ್ರವೇಶಿಸಿದೆ. ಭಾರತೀಯ ಆಟಗಾರರ ಪೈಕಿ 5 ಅತಿಹೆಚ್ಚು ಫಾಲೋವರ್ಸ್‌ ಯಾರಿಗಿದೆ ನೋಡೋಣ ಬನ್ನಿ.

 

Read Full Story

03:02 PM (IST) Sep 20

Viral Video - ಯಾರಿಗೂ ಕಾಣಲ್ಲ ಅಂದ್ಕೊಂಡು ಬಸ್‌ಸ್ಟ್ಯಾಂಡ್‌ನಲ್ಲೇ ಶುರು ಹಚ್ಕೊಂಡ ಪ್ರೇಮಿಗಳು, ಆದ್ರೆ ಕ್ಯಾಮೆರಾ ಕಣ್ಣಿಗೆ ಬೀಳ್ದೆ ಇರುತ್ತಾ?

Couple Caught on Camera ಹಗಲು ಹೊತ್ತಿನಲ್ಲಿ ಬಸ್ ನಿಲ್ದಾಣದಲ್ಲಿ ಯುವ ಜೋಡಿಯೊಂದು ಪ್ರೇಮದಾಟದಲ್ಲಿ ತೊಡಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಸಾರ್ವಜನಿಕ ಸ್ಥಳಗಳಲ್ಲಿನ ನಡವಳಿಕೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story

01:45 PM (IST) Sep 20

Asia Cup 2025 - ಸೂಪರ್ 4 ಪಾಕಿಸ್ತಾನ ಎದುರಿನ ಪಂದ್ಯಕ್ಕೂ ಮುನ್ನ ಭಾರತಕ್ಕೆ ಬಿಗ್ ಶಾಕ್! ಸ್ಟಾರ್ ಕ್ರಿಕೆಟರ್ ಆಡೋದೇ ಡೌಟ್

ದುಬೈ: 2025ರ ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಇಂದಿನಿಂದ ಸೂಪರ್ 4 ಹಂತದ ಪಂದ್ಯಾಟಗಳು ಆರಂಭವಾಗಿವೆ. ಹೀಗಿರುವಾಗಲೇ ಟೀಂ ಇಂಡಿಯಾ ಪಾಳಯದಲ್ಲಿ ಹೊಸದೊಂದು ಆತಂಕ ಶುರುವಾಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

 

Read Full Story

01:15 PM (IST) Sep 20

ಆಪರೇಷನ್‌ ಸಿಂದೂರ್ ಎಫೆಕ್ಟ್‌, ಪಾಕ್‌ ಆಕ್ರಮಿತ ಕಾಶ್ಮೀರದಿಂದ ಪಲಾಯನ ಮಾಡಿದ ಹಿಜ್ಬುಲ್‌, ಜೈಶ್-ಎ-ಮುಹಮ್ಮದ್!

Terrorists Relocate from PoK to Khyber Pakhtunkhwa ಗುಪ್ತಚರ ಮಾಹಿತಿಯ ಪ್ರಕಾರ, ಭಾರತೀಯ ವೈಮಾನಿಕ ಮತ್ತು ಡ್ರೋನ್ ದಾಳಿಗಳ ವ್ಯಾಪ್ತಿಯಿಂದಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಇನ್ನು ಮುಂದೆ ಸುರಕ್ಷಿತವಲ್ಲ ಎಂದು ಈ ಉಗ್ರ ಸಂಘಟನೆಗಳಿಗೆ ಅನಿಸಿದೆ.

 

Read Full Story

12:38 PM (IST) Sep 20

'ಭಾನುವಾರದ ಒಳಗಾಗಿ ವಾಪಾಸ್‌ ಬನ್ನಿ..' ಟ್ರಂಪ್‌ H-1B ವೀಸಾ ಆದೇಶದ ಬೆನ್ನಲ್ಲೇ ಉದ್ಯೋಗಿಗಳಿಗೆ ಮೈಕ್ರೋಸಾಫ್ಟ್‌, ಜೆಪಿ ಮಾರ್ಗನ್‌ ಅಲರ್ಟ್‌!

Microsoft and JPMorgan advised their employees H-1B visa ಟ್ರಂಪ್ ಅವರ H-1B ವೀಸಾ ಪರಿಷ್ಕರಣೆಯ ನಂತರ, ಮೈಕ್ರೋಸಾಫ್ಟ್ ಮತ್ತು ಜೆಪಿ ಮಾರ್ಗನ್‌ನಂತಹ ಪ್ರಮುಖ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮಹತ್ವದ ಸೂಚನೆ ನೀಡಿವೆ. 

Read Full Story

12:11 PM (IST) Sep 20

Asia Cup 2025 - ಒಮಾನ್ ಎದುರು ಗೆದ್ದು ಅಪರೂಪದ ದಾಖಲೆ ಬರೆದ ಟೀಂ ಇಂಡಿಯಾ!

ಅಬುದಾಬಿ: ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಒಮಾನ್ ತಂಡವನ್ನು ಮಣಿಸುವ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Read Full Story

11:50 AM (IST) Sep 20

ದೀಪಾವಳಿಗೆ ಸಿಗಲಿದೆ ಬಂಪರ್‌ ಗಿಫ್ಟ್‌, ಇಪಿಎಫ್‌ ಕನಿಷ್ಠ ಪಿಂಚಣಿ 1500 ರೂಪಾಯಿಯಿಂದ 2500ಕ್ಕೆ ಏರಿಕೆ?

EPFO Pension Hike: A Diwali Gift for Employees ಅಕ್ಟೋಬರ್ 10-11 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಇಪಿಎಫ್‌ಒ ಕೇಂದ್ರ ಟ್ರಸ್ಟಿಗಳ ಮಂಡಳಿ ಸಭೆಯಲ್ಲಿ, ಇಪಿಎಸ್-1995 ಯೋಜನೆಯಡಿ ಕನಿಷ್ಠ ಪಿಂಚಣಿಯನ್ನು ಹೆಚ್ಚಿಸುವ ಮಹತ್ವದ ನಿರ್ಧಾರವನ್ನು ನಿರೀಕ್ಷಿಸಲಾಗಿದೆ. 

Read Full Story

09:58 AM (IST) Sep 20

ಡೊನಾಲ್ಡ್‌ ಟ್ರಂಪ್‌ H1B visa ಆರ್ಡರ್‌ ಬೆನ್ನಲ್ಲಿಯೇ ಅಮೆರಿಕ ಮಾರುಕಟ್ಟೆಯಲ್ಲಿ ಕುಸಿದ ಇನ್ಫೋಸಿಸ್‌, ವಿಪ್ರೋ ಷೇರು!

H-1B Visa Fee Hiked ಹೊಸ ನಿಯಮಗಳ ಪ್ರಕಾರ, ಹೊಸ ಅರ್ಜಿಗಳಿಗಾಗಿ H-1B ಅರ್ಜಿಗಳ ಜೊತೆಯಲ್ಲಿ 1 ಲಕ್ಷ ಡಾಲರ್‌ ಪಾವತಿ ಮಾಡಬೇಕಿದೆ. ಪಾವತಿಸದ ಕಾರಣಕ್ಕಾಗಿ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಅರ್ಜಿಯನ್ನು ನಿರಾಕರಿಸಬಹುದು.

 

Read Full Story

09:18 AM (IST) Sep 20

ಭಾರತದ ಟೆಕ್ಕಿಗಳ ಅಮೆರಿಕನ್‌ ಕನಸಿಗೆ ಕೊಳ್ಳಿ, H-1B ವೀಸಾ ವಾರ್ಷಿಕ ಶುಲ್ಕ ಭಾರೀ ಪ್ರಮಾಣದಲ್ಲಿ ಏರಿಸಿದ ಟ್ರಂಪ್!

Donald Trump massive annual fee for H-1B visas ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, H-1B ವೀಸಾಗಳ ಮೇಲೆ ವಾರ್ಷಿಕ $100,000 ಶುಲ್ಕ ವಿಧಿಸುವ ಘೋಷಣೆಗೆ ಸಹಿ ಹಾಕಿದ್ದಾರೆ. ಇದು ಭಾರತದ ಟೆಕ್ಕಿಗಳ ಅಮೆರಿಕನ್‌ ಕನಸಿಗೆ ಕೊಳ್ಳಿ ಇಟ್ಟಂತಾಗಿದೆ.

 

Read Full Story

08:36 AM (IST) Sep 20

ಜಮ್ಮು ಕಾಶ್ಮೀರದ ಉಧಂಪುರ, ಕಿಶ್ತ್ವಾರ್‌ನಲ್ಲಿ ಗುಂಡಿನ ಚಕಮಕಿ, ಸೈನಿಕನಿಗೆ ಗಾಯ, ಸಿಕ್ಕಿಬಿದ್ದ 7 ಭಯೋತ್ಪಾದಕರು!!

seven terrorists were trapped in two separate encounters in Jammu and Kashmir ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಸೈನಿಕನೊಬ್ಬ ಗಾಯಗೊಂಡಿದ್ದು, ಎನ್‌ಕೌಂಟರ್‌ನಲ್ಲಿ ಮೂರರಿಂದ ನಾಲ್ಕು ಭಯೋತ್ಪಾದಕರು ಸಿಕ್ಕಿಬಿದ್ದಿದ್ದಾರೆ.

 

Read Full Story

07:48 AM (IST) Sep 20

ಮುಂದಿನ ತಿಂಗಳು ಪ್ರಧಾನಿ ಮೋದಿ - ಡೊನಾಲ್ಡ್‌ ಟ್ರಂಪ್‌ ಭೇಟಿ ?

ಶೇ.50 ಸುಂಕ ಹೇರಿಕೆ ಬಳಿಕ ಹದಗೆಟ್ಟಿರುವ ಭಾರತ-ಅಮೆರಿಕ ನಡುವಿನ ಸಂಬಂಧ ಸುಧಾರಣೆಗೆ ಮಲೇಷ್ಯಾದಲ್ಲಿ ಮುಂದಿನ ತಿಂಗಳು ನಡೆಯಲಿರುವ 45ನೇ ಆಸಿಯಾನ್‌ ಸಮ್ಮೇಳನ ವೇದಿಕೆಯಾಗುವ ನಿರೀಕ್ಷೆ ಇದೀಗ ಗರಿಗೆದರಿದೆ.

 

Read Full Story

07:48 AM (IST) Sep 20

ಕನ್ನಡ ಸೇರಿ 40 ಭಾಷೆಗಳಲ್ಲಿ ಹಾಡಿದ್ದ ಜುಬೀನ್‌ ಸ್ಕೂಬಾ ಡೈವಿಂಗ್‌ ವೇಳೆ ಸಾವು

ಕಳೆದ 33 ವರ್ಷಗಳಲ್ಲಿ ಕನ್ನಡ ಸೇರಿದಂತೆ 40 ಭಾಷೆಗಳಲ್ಲಿ 38000ಕ್ಕೂ ಹೆಚ್ಚು ಹಾಡುಗಳನ್ನು ಹೇಳಿದ್ದ ಖ್ಯಾತ ಗಾಯಕ ಜುಬೀಗ್‌ ಗಾರ್ಗ್‌ (52) ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ

 

Read Full Story

07:47 AM (IST) Sep 20

ತಡರಾತ್ರಿ ಸಿಂದೂರ ದಾಳಿಗೆ ಎರಡು ವಿಶೇಷ ಕಾರಣಗಳು!

ಪಹಲ್ಗಾಂ ಉಗ್ರದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ವಿರುದ್ಧ ಭಾರತ ಕೈಗೊಂಡ ಆಪರೇಷನ್‌ ಸಿಂದೂರವನ್ನು ಮೇ 7ರ ಮಧ್ಯರಾತ್ರಿ 1 ಗಂಟೆಗೇ ಏಕೆ ಕೈಗೊಳ್ಳಲಾಯಿತು ಎಂಬ ಅಚ್ಚರಿಯ ವಿಷಯವನ್ನು ಸಶಸ್ತ್ರ ಪಡೆಗಳ ಮುಖ್ಯಸ್ಥ ಜ. ಅನಿಲ್‌ ಚೌಧರಿ ಬಹಿರಂಗಪಡಿಸಿದ್ದಾರೆ.

 

Read Full Story

07:47 AM (IST) Sep 20

ಚುನಾವಣಾ ಕಾವಲುಗಾರನೇ ಮತಗಳ್ಳರ ರಕ್ಷಿಸಿದ : ರಾಹುಲ್‌ ಗಾಂಧಿ

ಆಳಂದ ಚುನಾವಣೆಯಲ್ಲಿ ಮತಗಳವು ಆಗಿದೆ ಎಂದು ದಾಖಲೆಗಳನ್ನು ಮುಂದಿಟ್ಟು ಆರೋಪಿಸಿದ್ದ ರಾಹುಲ್‌ ಗಾಂಧಿ ಶುಕ್ರವಾರವೂ ತಮ್ಮ ಆರೋಪವನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಕಾವಲುಗಾರ, ಕಳ್ಳತನವನ್ನು ನೋಡಿಕೊಂಡು ಸುಮ್ಮನಿದ್ದು ಕಳ್ಳರನ್ನು ರಕ್ಷಿಸಿದ ಎಂದು ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ.

 

Read Full Story

07:46 AM (IST) Sep 20

ಅಮೆರಿಕ ಪೊಲೀಸರ ಗುಂಡೇಟಿಗೆ ತೆಲಂಗಾಣದ ಟೆಕ್ಕಿ ಬಲಿ

ತನ್ನ ರೂಂಮೇಟ್‌ಗಳಿಗೆ ಚೂರಿ ಇರಿಯುತ್ತಿದ್ದ ಎಂಬ ಆರೋಪದ ಮೇಲೆ ತೆಲಂಗಾಣದ ಮೆಹಬೂಬ್‌ ನಗರದ ಮೂಲದ ಟೆಕ್ಕಿಯೊಬ್ಬನನ್ನು ಅಮೆರಿಕದ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ನಡುವೆ ಪುತ್ರನ ಹತ್ಯೆಯ ಘಟನೆಗೆ ಕಾರಣವಾದ ಅಂಶಗಳ ಕುರಿತು ಆತನ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು ತನಿಖೆಗೆ ಆಗ್ರಹಿಸಿದ್ದಾರೆ.

 

Read Full Story

07:44 AM (IST) Sep 20

ಬೆಂಗ್ಳೂರು, ದಿಲ್ಲಿಯಲ್ಲಿ ಐಫೋನ್‌ ಖರೀದಿಗೆ ದುಂಬಾಲು : ಮುಂಬೈನಲ್ಲಿ ಹೊಡೆದಾಟ

ಐಫೋನ್‌ 17 ಸರಣಿಯ ಮೊಬೈಲ್‌ ಶುಕ್ರವಾರ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಬೆಂಗಳೂರು, ದೆಹಲಿ ಸೇರಿದಂತೆ ದೇಶದೆಲ್ಲೆಡೆ ಅದರ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಈ ನಡುವೆ ವಾಣಿಜ್ಯ ನಗರಿ ಮುಂಬೈನಲ್ಲಿ ಆ್ಯಪಲ್ ಸ್ಟೋರ್‌ ಹೊರಗಡೆ ದೊಡ್ಡ ಹೊಡೆದಾಟವೇ ನಡೆದಿದೆ.

 

Read Full Story

07:44 AM (IST) Sep 20

ಮಹಿಳೆಯರು ಬರೆದ ಪುಸ್ತಕ ಬೋಧನೆಗೆ ತಾಲಿಬಾನ್‌ ಬ್ಯಾನ್‌

ಮಹಿಳೆಯರ ಹಕ್ಕುಗಳನ್ನು ಒಂದೊಂದಾಗಿ ಮೊಟಕುಗೊಳಿಸುತ್ತಿರುವ ಅಫ್ಘಾನಿಸ್ತಾನದ ತಾಲಿಬಾನ್‌ ಸರ್ಕಾರ, ಇದೀಗ ದೇಶದ ವಿಶ್ವವಿದ್ಯಾಲಯಗಳಲ್ಲಿ ಸ್ತ್ರೀಯರು ರಚಿಸಿದ ಪುಸ್ತಕಗಳ ಬೋಧನೆ ನಿಷೇಧಿಸಿದೆ.

 

Read Full Story

07:43 AM (IST) Sep 20

ಅಪ್ರಾಪ್ತೆಯ ಖಾಸಗಿ ಅಂಗ ಸ್ಪರ್ಶ ರೇಪ್‌ ಆಗಲ್ಲ: ಸುಪ್ರೀಂಕೋರ್ಟ್‌

ಅಪ್ರಾಪ್ತೆಯ ಖಾಸಗಿ ಅಂಗವನ್ನು ಮುಟ್ಟುವುದು ಅತ್ಯಾ೧ಚಾರ ಎಂದು ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ, 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ದೋಷಿಗೆ ವಿಧಿಸಲಾಗಿದ್ದ 20 ವರ್ಷಗಳ ಶಿಕ್ಷೆಯನ್ನು 7 ವರ್ಷಕ್ಕೆ ಇಳಿಸಿ ಆದೇಶಿಸಿದೆ.

 

Read Full Story

07:43 AM (IST) Sep 20

ದೆಹಲಿ ಲವ್ ಕುಶ್ ರಾಮಲೀಲಾದಲ್ಲಿ ಪೂನಂ ಪಾಂಡೆ ಪ್ರವೇಶಕ್ಕೆ ವಿರೋಧ, ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವೇನು?

ದೆಹಲಿಯ ಲವ್ ಕುಶ್ ರಾಮಲೀಲಾದಲ್ಲಿ ನಟಿ ಪೂನಂ ಪಾಂಡೆ ಅವರು ಮಂಡೋದರಿಯ ಪಾತ್ರ ನಿರ್ವಹಿಸುತ್ತಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಹಿಂದೂ ಸಂಘಟನೆಗಳು ಈ ಆಯ್ಕೆಯನ್ನು ಸಂಪ್ರದಾಯಕ್ಕೆ ವಿರುದ್ಧ ಎಂದು ವಿರೋಧಿಸಿವೆ

 

Read Full Story

07:42 AM (IST) Sep 20

'ಪಾಕಿಸ್ತಾನ ಮನೆಯಂತೆ..' ಸ್ಯಾಮ್ ಪಿತ್ರೋಡಾ ಹೇಳಿಕೆ ದೇಶದ ಸೈನಿಕರಿಗೆ ಅವಮಾನ, ಬಿಜೆಪಿ ಆಕ್ರೋಶ

ಕಾಂಗ್ರೆಸ್‌ನ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ಅವರು 'ಪಾಕಿಸ್ತಾನ ಮನೆಯಂತೆ ಭಾಸವಾಗುತ್ತಿದೆ' ಎಂದು ಹೇಳಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು 'ರಾಷ್ಟ್ರವಿರೋಧಿ' ಎಂದು ಕರೆದಿರುವ ಬಿಜೆಪಿ, ಇದು ದೇಶದ ಸಶಸ್ತ್ರ ಪಡೆಗಳಿಗೆ ಮಾಡಿದ ಅವಮಾನ ಎಂದು ತೀವ್ರವಾಗಿ ಖಂಡಿಸಿದೆ.

 

Read Full Story

07:42 AM (IST) Sep 20

ಏಷ್ಯಾಕಪ್‌ನಲ್ಲಿ ಹೋರಾಡಿ ಸೋತ ಒಮಾನ್; ಅಜೇಯವಾಗಿ ಸೂಪರ್‌-4 ಪ್ರವೇಶಿಸಿದ ಭಾರತ!

ಸಂಜು ಸ್ಯಾಮ್ಸನ್ ಅವರ ಸಮಯೋಚಿತ ಅರ್ಧಶತಕದ ನೆರವಿನಿಂದ ಭಾರತ ತಂಡವು ಒಮಾನ್ ವಿರುದ್ಧ 188 ರನ್ ಗಳಿಸಿತು. ಸವಾಲಿನ ಗುರಿ ಬೆನ್ನಟ್ಟಿದ ಒಮಾನ್, ಅಮೀರ್ ಕಲೀಂ ಮತ್ತು ಹಮ್ಮದ್ ಮಿರ್ಜಾ ಅವರ ಅರ್ಧಶತಕಗಳ ಹೊರತಾಗಿಯೂ 21 ರನ್‌ಗಳಿಂದ ಸೋಲನುಭವಿಸಿತು.

 

Read Full Story

More Trending News