Published : Aug 11, 2026, 07:49 AM ISTUpdated : Aug 11, 2026, 10:55 PM IST

India News Live Updates: Jana Gana Mana - ನಮ್ಮ ರಾಷ್ಟ್ರಗೀತೆ ಬಗ್ಗೆ ನೀವು ತಿಳಿಯಲೇಬೇಕಾದ 10 ಸ್ವಾರಸ್ಯಕರ ಸಂಗತಿಗಳು

ಸಾರಾಂಶ

ನವದೆಹಲಿ: ಜು.20ರಂದು ನಡೆದ ವಿದ್ಯಾರ್ಥಿಗಳ ಮೇಲಿನ ಹಿಂಸೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉತ್ತರಕ್ಕೆ ವಿಪಕ್ಷಗಳು ಪಟ್ಟು ಹಿಡಿದಿರುವ ನಡುವೆಯೇ, ಈ ವಿಚಾರವಾಗಿ ಲೋಕಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ ಹಾಗೂ ಶಾ ಅವರು ಉತ್ತರ ನೀಡಲಿದ್ದಾರೆ ಎಂದು ಸರ್ಕಾರ ಘೋಷಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕಿರಣ್ ರಿಜಿಜು, ‘ವಿದ್ಯಾರ್ಥಿ ಆಂದೋಲನ ಹಾಗೂ ಪೊಲೀಸರ ಕ್ರಮದ ಕುರಿತು ಚರ್ಚಿಸಲು ಸರ್ಕಾರ ಸಿದ್ಧವಿದೆ. ಅಮಿತ್ ಶಾ ಅವರು ಸರ್ಕಾರದ ಪರವಾಗಿ ಉತ್ತರ ನೀಡಲಿದ್ದಾರೆ. ಆದರೆ, ವಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸುವುದಿಲ್ಲ ಹಾಗೂ ಗದ್ದಲ ನಡೆಸಿ ಸದನದಿಂದ ಹೊರನಡೆಯುವುದಿಲ್ಲ ಎಂಬ ಭರವಸೆ ನೀಡಬೇಕು’ ಎಂದರು

10:55 PM (IST) Aug 11

Jana Gana Mana - ನಮ್ಮ ರಾಷ್ಟ್ರಗೀತೆ ಬಗ್ಗೆ ನೀವು ತಿಳಿಯಲೇಬೇಕಾದ 10 ಸ್ವಾರಸ್ಯಕರ ಸಂಗತಿಗಳು

Ten Fascinating Facts About Indias National Anthem Jana Gana Mana ರವೀಂದ್ರನಾಥ ಟ್ಯಾಗೋರ್ ಅವರ ಮೂಲ ಬಂಗಾಳಿ ರಚನೆಯಿಂದ ಭಾರತದ ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡ 'ಜನ ಗಣ ಮನ'ಕ್ಕೆ ಒಂದು ರೋಚಕ ಇತಿಹಾಸವಿದೆ. ಇದರ ಬಗ್ಗೆ ತಿಳಿದುಕೊಳ್ಳಲೇಬೇಕಾದ 10 ಸಂಗತಿಗಳು ಇಲ್ಲಿವೆ.

Read Full Story

10:39 PM (IST) Aug 11

Viral Video - ಟಿವಿ ಸ್ಕ್ರೀನ್‌ನಲ್ಲೇ ಗಾಡಿ ನಂಬರ್ ಸ್ಕ್ಯಾನ್ ಮಾಡಿ ಫೈನ್! ಪೊಲೀಸಪ್ಪನ ಅನಾಹುತ ಐಡಿಯಾ ನೋಡಿ!

ಸಿಸಿಟಿವಿ ಫುಟೇಜ್ ತೋರಿಸುತ್ತಿದ್ದ ಟಿವಿ ಸ್ಕ್ರೀನ್ ಮೇಲೆಯೇ ವಾಹನದ ನಂಬರ್ ಪ್ಲೇಟ್ ಸ್ಕ್ಯಾನ್ ಮಾಡಿ ಪೊಲೀಸ್ ಅಧಿಕಾರಿಯೊಬ್ಬರು ದಂಡ ವಿಧಿಸಿದ ಘಟನೆ ನಡೆದಿದ್ದು, ಈ ವಿಚಿತ್ರ ವಿಧಾನದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಗುತ್ತಿದ್ದಾರೆ.

Read Full Story

10:24 PM (IST) Aug 11

Arunachal Pradesh - ಚೀನಾ ಅತಿಕ್ರಮಣದ ಸುದ್ದಿ ಸುಳ್ಳು, ಗಡಿಯಲ್ಲಿ ಸೇನೆ-ಐಟಿಬಿಪಿ ಹೈ ಅಲರ್ಟ್!

ಅರುಣಾಚಲ ಪ್ರದೇಶದಲ್ಲಿ ಚೀನಾ ನಿಧಾನವಾಗಿ ಅತಿಕ್ರಮಣ ಮಾಡುತ್ತಿದೆ ಎಂಬ ಸಾಮಾಜಿಕ ಮಾಧ್ಯಮಗಳ ವರದಿಗಳನ್ನು ಮೂಲಗಳು ತಳ್ಳಿಹಾಕಿವೆ. ಗಡಿಯಲ್ಲಿ ಭಾರತೀಯ ಸೇನೆ ಮತ್ತು ಐಟಿಬಿಪಿ ಸಂಪೂರ್ಣ ಹಿಡಿತ ಸಾಧಿಸಿದ್ದು, ಚೀನಾದ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿವೆ ಎಂದು ಸ್ಪಷ್ಟಪಡಿಸಿವೆ.

Read Full Story

10:05 PM (IST) Aug 11

Shirdi Trust - ಸಾಯಿಬಾಬಾ ಕುರಿತು ಯುಟ್ಯೂಬ್‌ನಲ್ಲಿ ಅವಹೇಳನಕಾರಿ ವಿಡಿಯೋ ಕೇಸ್; 7 ದಿನದಲ್ಲಿ ನಿರ್ಧಾರ, GACಗೆ ಹೈಕೋರ್ಟ್ ಖಡಕ್ ಸೂಚನೆ

ಶಿರಡಿ ಸಾಯಿಬಾಬಾ ಕುರಿತು ಯೂಟ್ಯೂಬ್‌ನಲ್ಲಿ ಅವಹೇಳನಕಾರಿ ವಿಡಿಯೋಗಳಿವೆ ಎಂದು ಆರೋಪಿಸಿ, ಅವುಗಳನ್ನು ತೆಗೆದುಹಾಕುವಂತೆ ಶಿರಡಿ ಸಾಯಿಬಾಬಾ ಟ್ರಸ್ಟ್ ಸಲ್ಲಿಸಿದ್ದ ಮೇಲ್ಮನವಿಯನ್ನು 7 ದಿನಗಳೊಳಗೆ ಇತ್ಯರ್ಥಪಡಿಸುವಂತೆ ದೆಹಲಿ ಹೈಕೋರ್ಟ್, ಕುಂದುಕೊರತೆ ಮೇಲ್ಮನವಿ ಸಮಿತಿಗೆ (GAC) ನಿರ್ದೇಶನ ನೀಡಿದೆ.
Read Full Story

09:47 PM (IST) Aug 11

Pan Masala - ಪಾನ್ ಮಸಾಲಾ ಪ್ಯಾಕೆಟ್‌ಗಳಿಗೆ ಪ್ಲಾಸ್ಟಿಕ್ ಬ್ಯಾನ್! FSSAI ನಿಂದ ಕಠಿಣ ನಿಯಮ ಜಾರಿ

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಪಾನ್ ಮಸಾಲಾ ಪ್ಯಾಕೇಜಿಂಗ್‌ಗೆ ಸಂಬಂಧ ಹೊಸ ನಿಯಮ ಜಾರಿಗೆ ತಂದಿದೆ. ಇನ್ಮುಂದೆ ಪಾನ್ ಮಸಾಲಾ ಪ್ಯಾಕೆಟ್‌ಗಳಿಗೆ ಪ್ಲಾಸ್ಟಿಕ್ ಲ್ಯಾಮಿನೇಟೆಡ್ ಹೊದಿಕೆ ಬಳಸುವಂತಿಲ್ಲ. ಕಾಗದ, ರಟ್ಟು, ಸೆಲ್ಯುಲೋಸ್ನಂಥ ವಸ್ತು ಮಾತ್ರ ಬಳಸಲು ಅನುಮತಿಸಿದೆ.

Read Full Story

08:47 PM (IST) Aug 11

ಲವ್ ಮ್ಯಾರೇಜ್ ಆದ ಮೇಲೆ.. ಪ್ರೇಮ ವಿವಾಹದಲ್ಲಿ ಕಾಡುವ ಕಹಿ ಸತ್ಯಗಳು ಇವು..

ಪ್ರೀತಿಸಿದವರನ್ನೇ ಮದುವೆಯಾಗುವುದು ಜೀವನದ ದೊಡ್ಡ ಖುಷಿ ಎಂದು ಅನೇಕರು ಭಾವಿಸುತ್ತಾರೆ. ಆದರೆ, ಮದುವೆಗೆ ಮುನ್ನ ಸಿನಿಮೀಯವಾಗಿ ಸುಂದರವಾಗಿ ಕಾಣುವ ಈ ಜೀವನ, ಮದುವೆಯ ನಂತರ ಹೂವಿನ ಹಾಸಿಗೆಯಾಗಿರುವುದಿಲ್ಲ. ಏನೆಲ್ಲ ಸಮಸ್ಯೆ ಎದುರಿಸುತ್ತಾರೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story

07:24 PM (IST) Aug 11

ಚುನಾವಣೆ ಗೆಲುವು ಬೆನ್ನಲ್ಲೇ ಪ್ರಶಾಂತ್ ಕಿಶೋರ್ ಅತೀ ದೊಡ್ಡ ಘೋಷಣೆ.. ಯುವಕರಿಗೆ ಗುಡ್‌ನ್ಯೂಸ್..!

ಜನ ಸುರಾಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್, ಬಿಹಾರದ 10 ಸಾವಿರ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸುವ ಮಹತ್ವದ ಭರವಸೆ ನೀಡಿದ್ದಾರೆ. ಇದರೊಂದಿಗೆ, ಒಂದು ವರ್ಷದೊಳಗೆ ಸರ್ಕಾರಿ ಶಾಲೆಗಳನ್ನು ಸುಧಾರಿಸುವುದಾಗಿ ಮತ್ತು ವಿಫಲವಾದರೆ ಖಾಸಗಿ ಶಾಲಾ ವೆಚ್ಚವನ್ನು ತಮ್ಮ ಕಚೇರಿಯೇ ಭರಿಸುವುದಾಗಿ ಘೋಷಿಸಿದ್ದಾರೆ.
Read Full Story

07:01 PM (IST) Aug 11

ಭಾರೀ ಸಂಕಷ್ಟಕ್ಕೆ ಸಿಲುಕಿದ ಚಿಯಾನ್ ವಿಕ್ರಮ್‌; ಇನ್‌ಸ್ಟಾಗ್ರಾಮ್‌ ರೀಲ್ ತಂದ ಆಪತ್ತು ಎಂಥದ್ದು ಗೊತ್ತಾ?!

ವಿಕ್ರಮ್ ಅವರು ಸದ್ಯಕ್ಕೆ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವೃತ್ತಿಜೀವನದಲ್ಲಿ 'ವೀರ ಧೀರ ಸೂರನ್' ಮತ್ತು ಇನ್ನೂ ಅನೇಕ ದೊಡ್ಡ ಸಿನಿಮಾಗಳ ಘೋಷಣೆ ಮಾಡಿರುವ ಅವರು, ಈ ವಿವಾದದಿಂದ ಹೇಗೆ ಹೊರಬರುತ್ತಾರೆ ಎಂಬುದು ಅವರ ಅಭಿಮಾನಿಗಳ ಕುತೂಹಲವಾಗಿದೆ.

Read Full Story

06:36 PM (IST) Aug 11

ದಕ್ಷಿಣ ಆಫ್ರಿಕಾ ತಂಡಕ್ಕೆ ಹೊಸ ನಾಯಕ.. ಮಾರ್ಕ್ರಮ್, ಬವುಮಾಗೆ ಗೇಟ್‌ಪಾಸ್..!

ನಮೀಬಿಯಾ ಪ್ರವಾಸಕ್ಕಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಮಂಗಳವಾರ (ಆಗಸ್ಟ್ 11) ತನ್ನ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಈ ಪ್ರವಾಸದಲ್ಲಿ ತಂಡವನ್ನು ಮುನ್ನಡೆಸಲು ಹೊಸ ನಾಯಕನ ಆಯ್ಕೆ ಮಾಡಲಾಗಿದ್ದು 31 ವರ್ಷದ ಅನುಭವಿ ಸ್ಪಿನ್ನರ್ ಬ್ಯೋರ್ನ್ ಫೋರ್ಚುಯಿನ್ (Bjorn Fortuin) ಅವರಿಗೆ ಮೊದಲ ಬಾರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.

Read Full Story

05:46 PM (IST) Aug 11

ಮಾನಸಿಕ ಅಸ್ವಸ್ಥನ ಬದುಕನ್ನೇ ಬದಲಿಸಿತು ಆ ಒಂದು ಪೆನ್​ - ದಶಕದ ಬಳಿಕ ಮನೆ ಸೇರಿದ ಮೈನವಿರೇಳೋ ಸ್ಟೋರಿ

10 ವರ್ಷಗಳಿಂದ ಕಾಣೆಯಾಗಿದ್ದ ಮಾನಸಿಕ ಅಸ್ವಸ್ಥ ವೃದ್ಧರೊಬ್ಬರು ಉತ್ತರಾಖಂಡದ ಅಲ್ಮೋರಾದಲ್ಲಿ ಅಲೆದಾಡುತ್ತಿದ್ದರು. ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಒಬ್ಬರ ಜಾಣ್ಮೆಯಿಂದ, ಡೈರಿಯಲ್ಲಿ ಬರೆದ 'ರಾಜೇಪುರ' ಎಂಬ ಒಂದೇ ಪದದ ಸುಳಿವಿನಿಂದಾಗಿ, ಅವರು ಉತ್ತರ ಪ್ರದೇಶದಲ್ಲಿದ್ದ ತಮ್ಮ ಕುಟುಂಬದೊಂದಿಗೆ ಮತ್ತೆ ಒಂದಾದರು.
Read Full Story

05:45 PM (IST) Aug 11

ಬಸ್ ಕಂಡಕ್ಟರ್​ ಜೊತೆ ಮಧ್ಯರಾತ್ರಿ ಓಡಿಹೋಗಿದ್ದೇಕೆ ಫೇಮಸ್ ಕಂಟೆಂಟ್ ಕ್ರಿಯೇಟರ್ ಪತ್ನಿ?!

ಜೀವನದಲ್ಲಿ ನಾವು ಕಾಣುವ ಎಲ್ಲವೂ ಸತ್ಯವಲ್ಲ ಎಂಬುವುದಕ್ಕೆ ಈ ಘಟನೆ ಒಂದು ದೊಡ್ಡ ಪಾಠ. ಪ್ರೀತಿ, ವಿಶ್ವಾಸ ಮತ್ತು ಸಂವಹನ ಇಲ್ಲದ ಸಂಸಾರ ಎಷ್ಟು ಶ್ರೀಮಂತವಾಗಿದ್ದರೂ, ಎಷ್ಟು ವೈರಲ್ ಆಗಿದ್ದರೂ ಅದು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದಕ್ಕೆ ಈ ಕಂಟೆಂಟ್ ಕ್ರಿಯೇಟರ್ ಜೋಡಿಯ ಕಥೆಯೇ ಸಾಕ್ಷಿ ಆಯ್ತಾ? ಕಾರಣ ಏನು ನೋಡಿ..

Read Full Story

04:49 PM (IST) Aug 11

ಬ್ಲಿಂಕಿಟ್ ಕಂಪನಿಗೆ FDA ಬಿಗ್ ಶಾಕ್.. ಕಾಕ್ರೋಚ್ ಕಾಟಕ್ಕೆ ಲೈಸೆನ್ಸ್ ರದ್ದು ಮಾಡಿ ಆದೇಶ..!

ಖ್ಯಾತ ಕ್ವಿಕ್ ಕಾಮರ್ಸ್ ಕಂಪನಿ 'ಬ್ಲಿಂಕಿಟ್' (Blinkit) ಮೇಲೆ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆ ದಾಳಿ ನಡೆಸಿದ್ದು ಗಂಭೀರ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಮಳಿಗೆಯ ಪರವಾನಗಿಯನ್ನು (License) ಅಮಾನತುಗೊಳಿಸಿದೆ. ಅಷ್ಟಕ್ಕೂ ಆಗಿದ್ದೇನು? ಈ ಸ್ಟೋರಿ ಓದಿ..

Read Full Story

04:34 PM (IST) Aug 11

Redmi 17 - ₹18,000ಕ್ಕೆ 7,500mAh ಬ್ಯಾಟರಿ! ರೆಡ್ಮಿ 17 ಸೀರೀಸ್ ಫೋನ್‌ಗಳ ಫೀಚರ್ಸ್ ಇಲ್ಲಿದೆ

ರೆಡ್ಮಿ ಕಂಪನಿಯು ತನ್ನ ಹೊಸ ರೆಡ್ಮಿ 17 5G ಮತ್ತು 4G ಸ್ಮಾರ್ಟ್‌ಫೋನ್‌ಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಎರಡೂ ಫೋನ್‌ಗಳ ಪ್ರಮುಖ ಆಕರ್ಷಣೆ 7,500mAh ಸಾಮರ್ಥ್ಯದ ದೈತ್ಯ ಬ್ಯಾಟರಿಯಾಗಿದ್ದು, 120Hz ಡಿಸ್‌ಪ್ಲೇ ಮತ್ತು 50MP ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಹೊಂದಿವೆ.
Read Full Story

04:08 PM (IST) Aug 11

ದಕ್ಷಿಣದ 5 ರಾಜ್ಯಗಳಲ್ಲೇ ದೇಶದ ಶೇ. 80ರಷ್ಟು ಗೋಲ್ಡ್ ಲೋನ್ - ತಮಿಳುನಾಡು ಟಾಪ್‌, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

ದೇಶದ ಸಾರ್ವಜನಿಕ ಬ್ಯಾಂಕ್‌ಗಳ ಒಟ್ಟು ಚಿನ್ನದ ಸಾಲದಲ್ಲಿ ಶೇಕಡಾ 80ಕ್ಕೂ ಹೆಚ್ಚು ಪಾಲು ದಕ್ಷಿಣ ಭಾರತದ ರಾಜ್ಯಗಳದ್ದಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಲೋಕಸಭೆಗೆ ತಿಳಿಸಿದೆ. ತಮಿಳುನಾಡು ಅಗ್ರಸ್ಥಾನದಲ್ಲಿದ್ದು, ಕರ್ನಾಟಕ ಮೂರನೇ ಸ್ಥಾನದಲ್ಲಿದೆ.

Read Full Story

04:05 PM (IST) Aug 11

ಭಾವಿ ವೈದ್ಯೆಗೆ ಚೀಟಿಂಗ್.. IPL ಸ್ಟಾರ್, ಡೆಲ್ಲಿ ಕ್ಯಾಪಿಟಲ್ಸ್‌ನ ಹೀರೋ ಅರೆಸ್ಟ್‌..!

ಐಪಿಎಲ್ ಸ್ಟಾರ್ ಬ್ಯಾಟರ್ ಅಭಿಷೇಕ್ ಪೊರೇಲ್‌ನ ಬಂಧನ ಆಗಿದೆ. ವೈದ್ಯಕೀಯ ವಿದ್ಯಾರ್ಥಿನಿಗೆ ಮದುವೆ ಆಗೋದಾಗಿ ನಂಬಿಸಿ ಮೋಸ ಮಾಡಿದ ಆರೋಪ ಇವರ ಮೇಲಿದೆ. ಏನಿದು ಪ್ರಕರಣ ಅನ್ನೋದು ಈ ಸ್ಟೋರಿಯಲ್ಲಿದೆ.

Read Full Story

02:49 PM (IST) Aug 11

ಗಣೇಶ ಹಬ್ಬಕ್ಕೆ ಮಂಗಳೂರು ಸೇರಿ ವಿವಿದೆಡೆ ಕೊಂಕಣ ರೈಲ್ವೇಯಿಂದ 254 ವಿಶೇಷ ರೈಲು ಘೋಷಣೆ

ಗಣೇಶ ಹಬ್ಬಕ್ಕೆ ಕೊಂಕಣ ರೈಲ್ವೇ 254 ವಿಶೇಷ ರೈಲು ಘೋಷಣೆ ಮಾಡಿದೆ. ಸ್ಪೆಷಲ್ ರೈಲು ವೇಳಾಪಟ್ಟಿ,ಬುಕಿಂಗ್ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ರೈಲ್ವೇ ಇಲಾಖೆ ನೀಡಿದೆ. ಪ್ರಯಾಣ ದಟ್ಟಣೆ ಕಡಿಮೆ ಮಾಡಲು ವಿಶೇಷ ರೈಲು ಘೋಷಿಸಲಾಗಿದೆ.

Read Full Story

02:39 PM (IST) Aug 11

ಲಂಕಾ ಎದುರಿನ ಮೊದಲ ಟೆಸ್ಟ್‌ನಲ್ಲಿ ಜುರೆಲ್ ಬದಲಿಗೆ ಈತನಿಗೆ ಅವಕಾಶ ಕೊಡಿ - ಮೊಹಮ್ಮದ್ ಕೈಫ್ ಕಿವಿಮಾತು

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ಗೆ ಧ್ರುವ್ ಜುರೆಲ್ ಬದಲು ಸರ್ಫರಾಜ್ ಖಾನ್‌ರನ್ನು ಆಡಿಸಬೇಕೆಂದು ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ. ಗಾಲೆ ಪಿಚ್ ಸ್ಪಿನ್ನರ್‌ಗಳಿಗೆ ಸಹಕಾರಿಯಾಗಿರುವುದರಿಂದ, ಸ್ಪಿನ್ ಬೌಲಿಂಗ್‌ ಅನ್ನು ಉತ್ತಮವಾಗಿ ಎದುರಿಸುವ ಸರ್ಫರಾಜ್ ತಂಡಕ್ಕೆ ಹೆಚ್ಚು ಉಪಯುಕ್ತ ಎಂದು ಕೈಫ್ ಹೇಳಿದ್ದಾರೆ. ಜುರೆಲ್ ಅವರ ಕಳಪೆ ಫಾರ್ಮ್ ಕೂಡ ಈ ಚರ್ಚೆಗೆ ಕಾರಣವಾಗಿದೆ.
Read Full Story

01:34 PM (IST) Aug 11

ಇತಿಹಾಸ ಸೃಷ್ಟಿಸಿದ ODI ಕ್ರಿಕೆಟ್! 5000 ಪಂದ್ಯ ಮುಕ್ತಾಯದ ಬೆನ್ನಲ್ಲೇ ಹೊರಬಿತ್ತು ಟಾಪ್ 10 ಬಲಿಷ್ಠ ತಂಡಗಳ ಮಾಹಿತಿ, ಭಾರತಕ್ಕೆ ಎಷ್ಟನೇ ಸ್ಥಾನ?

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 5000 ಏಕದಿನ ಪಂದ್ಯಗಳು ಪೂರ್ಣಗೊಂಡಿವೆ. ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆ ಭಾರತದ ಹೆಸರಿನಲ್ಲಿದ್ದರೆ, ಅತಿ ಹೆಚ್ಚು ಗೆಲುವುಗಳನ್ನು ದಾಖಲಿಸಿದ ಕೀರ್ತಿ ಆಸ್ಟ್ರೇಲಿಯಾ ತಂಡಕ್ಕೆ ಸಲ್ಲುತ್ತದೆ. ಈ ಲೇಖನವು ಏಕದಿನ ಕ್ರಿಕೆಟ್‌ನ ಪ್ರಮುಖ ದಾಖಲೆಗಳು ಮತ್ತು ತಂಡಗಳ ಪ್ರದರ್ಶನದ ಸಂಪೂರ್ಣ ವಿವರಗಳನ್ನು ನೀಡುತ್ತದೆ.
Read Full Story

01:30 PM (IST) Aug 11

ಮದುವೆಯ ಸವಿ ನೆನಪಿಗೆ ಇಡೀ ಗ್ರಾಮಸ್ಥರಿಗೆ 34 ಕೋಟಿಯ ವಿಮೆ - ಗಮನ ಸೆಳೆದ ಅಪರೂಪದ ಜೋಡಿ

ಮಹಾರಾಷ್ಟ್ರದ ಬಹದ್ದರ್‌ಪುರದಲ್ಲಿ, ವರ ಸಿದ್ಧೇಶ್ವರ ಪೇಠ್ಕರ್ ಅವರು ತಮ್ಮ ವಿವಾಹದ ಸಂದರ್ಭದಲ್ಲಿ ಇಡೀ ಗ್ರಾಮದ 3,465 ನಿವಾಸಿಗಳಿಗೆ ಅಪಘಾತ ವಿಮಾ ರಕ್ಷಣೆಯನ್ನು ಉಡುಗೊರೆಯಾಗಿ ನೀಡಿದರು. ಈ ಚಿಂತನಶೀಲ ಕಾರ್ಯವು ಸಾಂಪ್ರದಾಯಿಕ ಉಡುಗೊರೆಗಳ ಬದಲಿಗೆ, ಗ್ರಾಮಸ್ಥರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿ ಹೊಂದಿದೆ.
Read Full Story

12:12 PM (IST) Aug 11

ರಾಹುಲ್​ ಗಾಂಧಿ ಬೋಟ್​ ವಿಹಾರ- ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ - ಈ ಮಹಿಳೆ, ಮಗು ಯಾರು ಗೊತ್ತಾ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ರಾಹುಲ್ ಗಾಂಧಿಯವರ ಬೋಟ್ ವಿಹಾರದ ಫೋಟೋ ಭಾರೀ ಚರ್ಚೆಗೆ ಕಾರಣವಾಗಿದೆ. ಫೋಟೋದಲ್ಲಿರುವ ಮಹಿಳೆ ಮತ್ತು ಮಗು ಯಾರೆಂಬ ಪ್ರಶ್ನೆಗೆ ಸ್ಪಷ್ಟನೆಗಳು ಬಂದಿದ್ದರೂ, ಈ ಕುರಿತಾದ ಚರ್ಚೆಗಳು ಮತ್ತು ರಾಜಕೀಯ ಕೆಸರೆರಚಾಟ ಮುಂದುವರೆದಿದೆ.
Read Full Story

12:10 PM (IST) Aug 11

ಭಾರತೀಯ ರೈಲ್ವೇ ಟಿಕೆಟ್ ಬುಕಿಂಗ್‌ನಲ್ಲಿ ಬದಲಾವಣೆ, ಪಿಆರ್‌ಎಸ್ ಪರಿಚಯಿಸಿದ ಐಆರ್‌ಸಿಟಿಸಿ

ರೈಲು ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಇದೀಗ ಭಾರತೀಯ ರೈಲ್ವೇ ಟಿಕೆಟ್ ಬುಕಿಂಗ್‌ಗೆ PRS ತಂತ್ರಜ್ಞಾನ ಪರಿಚಯಿಸಿದೆ. ಏನಿದು ಹೊಸ PRS ತಂತ್ರಜ್ಞಾನ? ಇದರಿಂದ ಟಿಕೆಟ್ ಬುಕ್ ಮಾಡೋ ಪ್ರಯಾಣಿಕರಿಗೆ ಆಗೋ ಲಾಭವೇನು?

Read Full Story

10:32 AM (IST) Aug 11

ಲೈವ್‌ ನ್ಯೂಸ್ ಕಾರ್ಯಕ್ರಮದಲ್ಲೇ ನಿದ್ದೆಗೆ ಜಾರಿದ ಆ್ಯಂಕರ್‌, ವಿಡಿಯೋ ಹಿಂದಿನ ಕಥೆ ಕೇಳಿ ಭಾವುಕರಾದ ವೀಕ್ಷಕರು!

ಅಮೆರಿಕದ ಸುದ್ದಿ ನಿರೂಪಕಿಯೊಬ್ಬರು ನೇರಪ್ರಸಾರದಲ್ಲಿ ನಿದ್ದೆಗೆ ಜಾರಿದ ಘಟನೆ ವೈರಲ್ ಆಗಿದೆ. ತನ್ನ 8 ತಿಂಗಳ ಮಗುವಿನ ಆರೈಕೆಯಿಂದಾಗಿ ರಾತ್ರಿಯಿಡೀ ನಿದ್ದೆಗೆಟ್ಟಿದ್ದೇ ಇದಕ್ಕೆ ಕಾರಣ ಎಂದು ತಿಳಿದಾಗ, ನೆಟ್ಟಿಗರು ಟೀಕೆಯ ಬದಲು ಅಪಾರ ಬೆಂಬಲ ಮತ್ತು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.
Read Full Story

09:37 AM (IST) Aug 11

Mileage Bikes - ಕಡಿಮೆ ಬೆಲೆ, ಭರ್ಜರಿ ಮೈಲೇಜ್! 80,000 ರೂ.ಗಿಂತ ಕಡಿಮೆ ಬೆಲೆಯ ಬೈಕ್‌ಗಳಿವು

₹80,000ಕ್ಕಿಂತ ಕಡಿಮೆ ಬಜೆಟ್‌ನಲ್ಲಿ ಉತ್ತಮ ಮೈಲೇಜ್ ನೀಡುವ ಬೈಕ್ ಹುಡುಕುತ್ತಿದ್ದೀರಾ? ಈ ಲೇಖನದಲ್ಲಿ ಟಿವಿಎಸ್ ರೇಡಿಯಾನ್, ಟಿವಿಎಸ್ ಸ್ಪೋರ್ಟ್ ಮತ್ತು ಹೀರೋ ಎಚ್‌ಎಫ್ ಡಿಲಕ್ಸ್ ಬೈಕ್‌ಗಳ ಬೆಲೆ, ವೈಶಿಷ್ಟ್ಯಗಳು ಮತ್ತು ಮೈಲೇಜ್ ಅನ್ನು ಹೋಲಿಕೆ ಮಾಡಲಾಗಿದೆ. ನಿಮ್ಮ ದೈನಂದಿನ ಬಳಕೆಗೆ ಯಾವ ಬೈಕ್ ಉತ್ತಮ ಎಂಬುದನ್ನು ತಿಳಿಯಲು ಮುಂದೆ ಓದಿ.
Read Full Story

09:14 AM (IST) Aug 11

ಕೊಲಂಬಿಯಾದಲ್ಲಿ 21ನೇ ಶತಮಾನದ ಅತ್ಯಂತ ಪ್ರಬಲ ಭೂಕಂಪ - 130 ಬಲಿ, 2000 ಕ್ಕೂ ಅಧಿಕ ಮಂದಿ ಕಾಣೆ! ಸಾವು ಹೆಚ್ಚಳ ಸಾಧ್ಯತೆ

ಪಶ್ಚಿಮ ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೀಕರ ಭೂಕಂಪ ಸಂಭವಿಸಿದ್ದು, ಕನಿಷ್ಠ 130 ಜನರು ಮೃತಪಟ್ಟಿದ್ದಾರೆ. ನೂರಾರು ಕಟ್ಟಡಗಳು ಧರಾಶಾಹಿಯಾಗಿದ್ದು, ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಮತ್ತು ದೇಶದಲ್ಲಿ 'ರಾಷ್ಟ್ರೀಯ ವಿಪತ್ತು' ಘೋಷಿಸಲಾಗಿದೆ.
Read Full Story

08:45 AM (IST) Aug 11

ಲಂಕಾದಲ್ಲಿ 18 ವರ್ಷ ಸೋಲದ ಭಾರತಕ್ಕೆ ಈ ಬಾರಿ ಅಗ್ನಿಪರೀಕ್ಷೆ!

9 ವರ್ಷಗಳ ಬಳಿಕ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಆಡಲಿರುವ ಭಾರತ, ಅಲ್ಲಿ ಉತ್ತಮ ದಾಖಲೆ ಹೊಂದಿದೆ. ಆದರೆ, ಇತ್ತೀಚೆಗೆ ಗೌತಮ್ ಗಂಭೀರ್ ಕೋಚಿಂಗ್ ಅವಧಿಯಲ್ಲಿ ಎದುರಾದ ಐತಿಹಾಸಿಕ ಸರಣಿ ಸೋಲುಗಳಿಂದಾಗಿ, ಈ ಪ್ರವಾಸವು ತಂಡಕ್ಕೆ ಕಠಿಣ ಅಗ್ನಿಪರೀಕ್ಷೆಯಾಗಿದೆ.
Read Full Story

08:45 AM (IST) Aug 11

ಮತ್ತೆ ಸಂಪತ್ತು ಹೆಚ್ಚಿಸಿಕೊಂಡ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್, ಒಂದು ದಿನದ ಸಂಪಾದನೆ ₹8,347 ಕೋಟಿ!

ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್, ಜುಲೈ 2025 ರಿಂದ ಜುಲೈ 2026ರ ನಡುವೆ ಪ್ರತಿದಿನ ಸರಾಸರಿ 8,347 ಕೋಟಿ ರು. ಗಳಿಸುವ ಮೂಲಕ 30.5 ಲಕ್ಷ ಕೋಟಿ ರು. ಸಂಪತ್ತು ಹೆಚ್ಚಿಸಿಕೊಂಡಿದ್ದಾರೆ. ಇದೇ ಅವಧಿಯಲ್ಲಿ, ಡೆಲ್ ಸಿಇಒ ಮೈಕಲ್ ಡೆಲ್ ಮತ್ತು ಡೀಪ್‌ ಸೀಕ್ ಸಂಸ್ಥಾಪಕ ಲಿಯಾಂಗ್ ವೆನ್‌ಫೆಂಗ್ ಅವರ ಸಂಪತ್ತಿನಲ್ಲೂ ಭಾರೀ ಏರಿಕೆ ಕಂಡುಬಂದಿದೆ ಎಂದು ಬೆಸ್ಟ್‌ಬ್ರೋಕರ್ಸ್‌ ಸಂಸ್ಥೆ ವರದಿ ಮಾಡಿದೆ.
Read Full Story

08:11 AM (IST) Aug 11

ವಿದ್ಯಾರ್ಥಿಗಳ ಮೇಲೆ ಹಿಂಸೆ ಬಳಿಕ ಮೋದಿ ಇಮೇಜ್ ನಾಶ, ಮರುನಿರ್ಮಾಣ ಮಾಡಲು ಸಾಧ್ಯವಿಲ್ಲ - ರಾಹುಲ್‌

ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲಿನ ಹಿಂಸಾಚಾರದಿಂದ ಪ್ರಧಾನಿ ಮೋದಿಯವರ ಇಮೇಜ್ ಸಂಪೂರ್ಣ ನಾಶವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಕುರಿತು ಸದನದಲ್ಲಿ ಉತ್ತರಿಸಲು ಗೃಹ ಸಚಿವ ಅಮಿತ್ ಶಾ ಸಿದ್ಧರಿದ್ದಾರೆ ಎಂದು ಸರ್ಕಾರ ತಿಳಿಸಿದ್ದು, ವಿಪಕ್ಷಗಳ ಗದ್ದಲದ ನಡುವೆಯೇ ಲೋಕಸಭೆಯಲ್ಲಿ ಟ್ರಿಬ್ಯೂನಲ್ ಸುಧಾರಣೆಗಳ ವಿಧೇಯಕವನ್ನು ಅಂಗೀಕರಿಸಲಾಯಿತು.
Read Full Story

More Trending News