Published : Mar 02, 2026, 06:39 AM ISTUpdated : Mar 02, 2026, 11:17 PM IST

India News Live: ಹಾರ್ಮುಜ್ ಜಲಸಂಧಿ ದಾಟದ ತೈಲ ಹಡಗು - ಭಾರತ ಸೇರಿದಂತೆ ಜಗತ್ತಿಗೆ ಕಾದಿದೆಯೇ ಪೆಟ್ರೋಲ್, ಗ್ಯಾಸ್ ಸಂಕಷ್ಟ?

ಸಾರಾಂಶ

ದುಬೈ: ತನ್ನ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಹತ್ಯೆಯಿಂದ ಆಕ್ರೋಶಗೊಂಡಿರುವ ಇರಾನ್‌, ಶತ್ರು ದೇಶಗಳ ಮೇಲೆ ಭಾನುವಾರ ಪ್ರತೀಕಾರದ ದಾಳಿ ಆರಂಭಿಸಿದೆ. ಶನಿವಾರ ದಾಳಿ ನಡೆಸಿದ್ದ ಬಹುತೇಕ ಎಲ್ಲಾ ಕೊಲ್ಲಿ ದೇಶಗಳ ಮೇಲೆ ಭಾನುವಾರ ಕೂಡಾ ಕ್ಷಿಪಣಿ ಮತ್ತು ಡ್ರೋನ್‌ ಬಳಸಿ ದಾಳಿ ನಡೆಸಿದೆ. ಇದರಿಂದ ದುಬೈ ಸೇರಿದಂತೆ ಯುಎಇ, ಕುವೈತ್‌, ಬಹ್ರೈನ್‌, ಜೋರ್ಡನ್‌, ಸೌದಿ ಅರೇಬಿಯಾ ತತ್ತರಿಸಿವೆ.

 

11:17 PM (IST) Mar 02

ಹಾರ್ಮುಜ್ ಜಲಸಂಧಿ ದಾಟದ ತೈಲ ಹಡಗು - ಭಾರತ ಸೇರಿದಂತೆ ಜಗತ್ತಿಗೆ ಕಾದಿದೆಯೇ ಪೆಟ್ರೋಲ್, ಗ್ಯಾಸ್ ಸಂಕಷ್ಟ?

ವಿಶ್ವದ ಶೇ. 20-30ರಷ್ಟು ತೈಲ ಸಾಗಿಸುವ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಸುಳಿವನ್ನು ಇರಾನ್ ನೀಡಿದೆ. ಈ ಕಿರಿದಾದ ಸಮುದ್ರ ಮಾರ್ಗ ಬಂದ್ ಆದರೆ, ಕಚ್ಚಾ ತೈಲ ಬೆಲೆಗಳು ಗಗನಕ್ಕೇರಿ ಜಾಗತಿಕ ಆರ್ಥಿಕತೆ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ. 

Read Full Story

10:54 PM (IST) Mar 02

ಇರಾನ್‌ ಬಳಿಕ ಮತ್ತೊಂದು ದೇಶದ ಮೇಲೆ ದಾಳಿ ಮಾಡುವ ಸುಳಿವು ನೀಡಿದ ಅಮೆರಿಕ!

After Iran, Is Cuba Donald Trump's Next Target? US Senator Reveals ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸುತ್ತಿರುವ ಬೆನ್ನಲ್ಲೇ, ಟ್ರಂಪ್ ಆಡಳಿತವು ಈಗ ಕ್ಯೂಬಾವನ್ನು ಗುರಿಯಾಗಿಸಿಕೊಂಡಿದೆ ಎಂದು ಅಮೆರಿಕದ ಸಂಸದ ಲಿಂಡ್ಸೆ ಗ್ರಹಾಂ ಬಹಿರಂಗಪಡಿಸಿದ್ದಾರೆ. 

Read Full Story

10:35 PM (IST) Mar 02

ಇರಾನ್‌ಗೆ ಆಸರೆಯಾದ ರಷ್ಯಾದ ಗೇಮ್‌ಚೇಂಜರ್‌ ಅಸ್ತ್ರ; 18 ಲಕ್ಷದ ಡ್ರೋನ್‌ ಮೂಲಕ 818 ಕೋಟಿಯ ಯುದ್ಧವಿಮಾನ ಉಡೀಸ್‌!

ಮಧ್ಯಪ್ರಾಚ್ಯದಲ್ಲಿ ಇರಾನ್ ತನ್ನ ಅಪಾಯಕಾರಿ 'ಷಾಹೆದ್-136' ಡ್ರೋನ್‌ಗಳನ್ನು ಬಳಸಿ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿದೆ. ಕಡಿಮೆ ವೆಚ್ಚದಲ್ಲಿ ತಯಾರಾಗುವ ಈ ಡ್ರೋನ್‌ಗಳು ಭಾರಿ ಹಾನಿ ಉಂಟುಮಾಡುತ್ತಿದೆ.

Read Full Story

10:04 PM (IST) Mar 02

ಐಫೋನ್ 17e ರಿಲೀಸ್‌ - ಕೇವಲ ₹64,900ಕ್ಕೆ ಲಭ್ಯ! ಸ್ಯಾಟಲೈಟ್ ಫೀಚರ್ ಮತ್ತು ಸೂಪರ್ ಫಾಸ್ಟ್ A19 ಚಿಪ್!

ಆಪಲ್ ತನ್ನ ಬಹುನಿರೀಕ್ಷಿತ 'ಐಫೋನ್ 17' ಸರಣಿಯಲ್ಲಿ 'iPhone 17e' ಎಂಬ ಹೊಸ, ಕಡಿಮೆ ಬೆಲೆಯ ಮಾದರಿಯನ್ನು ಪರಿಚಯಿಸಿದೆ. ಈ ಫೋನ್ A19 ಚಿಪ್, 48MP ಕ್ಯಾಮೆರಾ, ಮತ್ತು ಸೆರಾಮಿಕ್ ಶೀಲ್ಡ್ 2 ನಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದ್ದು, ₹64,900 ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.
Read Full Story

09:24 PM (IST) Mar 02

ಇರಾನ್ ಅಧ್ಯಕ್ಷ ಅಯತೊಲ್ಲಾ ಖಮೇನಿ ಸಾವನ್ನು ಭಾರತ ಖಂಡಿಸಿಲ್ಲವೇಕೆ ? - ಇಲ್ಲಿದೆ ಹಲವು ಕಾರಣ

ಇರಾನ್ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸಾವಿಗೆ ಭಾರತ ಸರ್ಕಾರವು ಸಂತಾಪ ಸೂಚಿಸದೆ ರಾಜತಾಂತ್ರಿಕ ಮೌನವನ್ನು ಕಾಯ್ದುಕೊಂಡಿದೆ. ಭಾರತದ ಈ ವರ್ತನೆ ಹಿಂದೆ ಹಲವು ಕಾರಣಗಳಿದ್ದು, ಅದೇನು ಎಂಬ ಮಾಹಿತಿ ಇಲ್ಲಿದೆ.

Read Full Story

08:06 PM (IST) Mar 02

ಜೋಸೆಫ್‌ ವಿಜಯ್‌ ಜೊತೆಗಿನ ಸಂಬಂಧದ ನಡುವೆಯೇ ತಮಿಳುನಾಡಿನ ಜಯಲಲಿತಾ ಆಗ್ತಾರಾ ನಟಿ ತ್ರಿಶಾ, ಇದಕ್ಕೆ ಕಾರಣವೂ ಇದೆ!

ನಟ ವಿಜಯ್ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ನಟಿ ತ್ರಿಶಾ ಜೊತೆಗಿನ ಸಂಬಂಧವನ್ನು ಆರೋಪಿಸಿದ್ದಾರೆ. ಈ ಬೆಳವಣಿಗೆಯು ತ್ರಿಶಾ ಮತ್ತು ಮಾಜಿ ಸಿಎಂ ಜಯಲಲಿತಾ ನಡುವಿನ ಸಾಮ್ಯತೆಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

Read Full Story

07:58 PM (IST) Mar 02

ವಯಸ್ಸಿನ ಅಂತರ ಎಷ್ಟಿದ್ದರೆ ಚೆಂದ - ಗಂಡ ಹೆಂಡತಿ ಮಧ್ಯೆ ವಯಸ್ಸಿಗಿಂತ ಮನಸ್ಸಿನ ಅಂತರ ಕಡಿಮೆ ಮಾಡಿಕೊಳ್ಳೋದು ಹೇಗೆ

ಪ್ರೀತಿಗೆ ವಯಸ್ಸಿನ ಹಂಗಿಲ್ಲವಾದರೂ, ದಂಪತಿಗಳ ನಡುವಿನ ದೊಡ್ಡ ವಯಸ್ಸಿನ ಅಂತರವು ಸಂಬಂಧದಲ್ಲಿ ಹಲವು ಸವಾಲುಗಳನ್ನು ತರಬಹುದು. ಸಂಶೋಧನೆಗಳ ಪ್ರಕಾರ ಆದರ್ಶ ವಯಸ್ಸಿನ ಅಂತರ ಯಾವುದು ಮತ್ತು ವಯಸ್ಸಿನ ವ್ಯತ್ಯಾಸವಿದ್ದರೂ ಸಂಬಂಧವನ್ನು ಗಟ್ಟಿಗೊಳಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ

Read Full Story

07:24 PM (IST) Mar 02

ಇಸ್ರೇಲ್‌ ದಾಳಿಯಲ್ಲಿ ಗಾಯಗೊಂಡಿದ್ದ ಅಯತೊಲ್ಲಾ ಖಮೇನಿ ಪತ್ನಿ ಕೂಡ ಸಾವು!

ಇರಾನ್‌ನ ದಿವಂಗತ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಪತ್ನಿ ಮನ್ಸೌರೆ ಖೋಜಾಸ್ತೆ ಬಾಗರ್ಜಾಡೆ ನಿಧನರಾಗಿದ್ದಾರೆ. ಟೆಹ್ರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
Read Full Story

07:04 PM (IST) Mar 02

ನಟಿಯ ಮೇಲೆ ಲೈಂಗಿಕ ದೌರ್ಜನ್ಯ, Manjummel Boys ನಿರ್ದೇಶಕ ಅರೆಸ್ಟ್‌!

'ಮಂಜುಮ್ಮಲ್ ಬಾಯ್ಸ್' ಚಿತ್ರದ ನಿರ್ದೇಶಕ ಚಿದಂಬರಂ ವಿರುದ್ಧ ನಟಿಯೊಬ್ಬರು ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ. ಎರಡು ವರ್ಷಗಳ ಹಿಂದಿನ ಘಟನೆಗೆ ಸಂಬಂಧಿಸಿದಂತೆ ಕೇರಳ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯಡಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read Full Story

06:30 PM (IST) Mar 02

ಟಿ20 ವಿಶ್ವಕಪ್ ಸೋತ ಪಾಕ್ ಆಟಗಾರರಿಗೆ ಪಿಸಿಬಿ ಶಾಕ್; ಪ್ರತಿಯೊಬ್ಬ ಪ್ಲೇಯರ್‌ಗೂ ಕೋಟ್ಯಂತರ ದಂಡ!

ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಲು ವಿಫಲವಾದ ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರತಿಯೊಬ್ಬ ಆಟಗಾರನಿಗೆ ಪಿಸಿಬಿ 5 ಮಿಲಿಯನ್ ಪಿಕೆಆರ್ ದಂಡ ವಿಧಿಸಿದೆ. ತಂಡದ ಕಳಪೆ ಪ್ರದರ್ಶನಕ್ಕೆ ಜಾವೇದ್ ಮಿಯಂದಾದ್, ಮೊಹಮ್ಮದ್ ಯೂಸುಫ್ ಅವರಂತಹ ದಿಗ್ಗಜರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

06:27 PM (IST) Mar 02

Vijay Devarakonda ಮದುವೆ ಬಳಿಕ ತಮ್ಮನಿಗೆ ಭರ್ಜರಿ ಡಿಮಾಂಡ್​ - ಯಾರೀ ಆನಂದ್​? ಮಾಡ್ತಿರೋದು ಏನು?

ವಿಜಯ್ ದೇವರಕೊಂಡ ಅವರ ಸಹೋದರ ಆನಂದ್ ದೇವರಕೊಂಡ ಕೂಡ ಒಬ್ಬ ನಟ. ಅಮೆರಿಕದಲ್ಲಿನ ಉನ್ನತ ಉದ್ಯೋಗವನ್ನು ತ್ಯಜಿಸಿ ನಟನೆಗೆ ಬಂದರೂ, ಅಣ್ಣನಷ್ಟು ಖ್ಯಾತಿ ಗಳಿಸಲಿಲ್ಲ. ಇತ್ತೀಚೆಗೆ ಅತ್ತಿಗೆ ರಶ್ಮಿಕಾ ಮಂದಣ್ಣ ಕುರಿತ ಪೋಸ್ಟ್‌ನಿಂದಾಗಿ ಇವರು ಮತ್ತೆ ಸುದ್ದಿಯಲ್ಲಿದ್ದಾರೆ.
Read Full Story

04:50 PM (IST) Mar 02

ಇಸ್ರೇಲ್‌ ಪ್ರಧಾನಿ ನೆತನ್ಯಾಹು ಬದುಕಿರೋದೇ ಡೌಟ್‌? ಪಿಎಂ ಕಚೇರಿ ಮೇಲೆ Kheibar ಕ್ಷಿಪಣಿ ದಾಳಿ ನಡೆಸಿದ ಇರಾನ್‌!

ಇರಾನ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದೆ. ಈ ಸಂಘರ್ಷವು ಗಲ್ಫ್ ರಾಷ್ಟ್ರಗಳಿಗೂ ವ್ಯಾಪಿಸಿದ್ದು, ಕುವೈತ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಸೇರಿದಂತೆ ಹಲವು ಕಡೆ ದಾಳಿಗಳು ನಡೆದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.
Read Full Story

04:30 PM (IST) Mar 02

ಡೈವೋರ್ಸ್ ಹಂತದಲ್ಲಿ ದಳಪತಿ ವಿಜಯ್-ಸಂಗೀತಾ 27 ವರ್ಷಗಳ ದಾಂಪತ್ಯ; 600 ಕೋಟಿ ಆಸ್ತಿಯಲ್ಲಿ ಪತ್ನಿಗೆ ಸಿಗುವ ಪಾಲೆಷ್ಟು?

ನಟ ವಿಜಯ್ ಪತ್ನಿ ಸಂಗೀತಾ, ವಿವಾಹೇತರ ಸಂಬಂಧ ಆರೋಪದ ಮೇಲೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ, ವಿಜಯ್ ಅವರ 600 ಕೋಟಿ ರೂ. ಆಸ್ತಿಯಲ್ಲಿ ಸಂಗೀತಾ ಅವರಿಗೆ 50% ಪಾಲು ಸಿಗುವುದೇ ಮತ್ತು ಭಾರತೀಯ ಕಾನೂನು ಈ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಈ ಲೇಖನ ವಿಶ್ಲೇಷಿಸುತ್ತದೆ.

Read Full Story

04:02 PM (IST) Mar 02

ಸೌದಿ ಅರೇಬಿಯಾದ ತೈಲ ಸಂಸ್ಕರಣ ಘಟಕದ ಮೇಲೆ ಇರಾನ್ ಡ್ರೋನ್ ದಾಳಿ - ಬ್ರೆಂಟ್ ಕಚ್ಚಾ ತೈಲ ಬ್ಯಾರೆಲ್‌ಗೆ 80 ಡಾಲರ್‌ಗೆ ಏರಿಕೆ

ತನ್ನ ನಾಯಕನ ಹತ್ಯೆಯ ನಂತರ ಇರಾನ್, ಸೌದಿ ಅರೇಬಿಯಾದ ರಾಸ್ ತನುರಾ ತೈಲ ಘಟಕ ಸೇರಿದಂತೆ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿದೆ. ಈ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿ ಬಂದ್ ಆಗಿದ್ದು, ಕಚ್ಚಾ ತೈಲದ ಬೆಲೆ ಗಗನಕ್ಕೇರಿದೆ ಇದರಿಂದ ಜಾಗತಿಕವಾಗಿ ಆರ್ಥಿಕ ಸಂಕಷ್ಟದ ಭೀತಿ ಎದುರಾಗಿದೆ.

Read Full Story

04:00 PM (IST) Mar 02

ಅಣ್ವಸ್ತ್ರ ಸಮರದತ್ತ ಮಧ್ಯಪ್ರಾಚ್ಯ ಫೈಟ್‌, ಇರಾನ್‌ನ ನಟಾನ್ಜ್ ಪರಮಾಣು ಕೇಂದ್ರದ ಮೇಲೆ ಮಿಸೈಲ್‌ ದಾಳಿ?

ಇರಾನ್‌ನ ನಟಾನ್ಜ್ ಪರಮಾಣು ಸ್ಥಾವರದ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿರುವುದಾಗಿ ಇರಾನ್ ಆರೋಪಿಸಿದೆ. ಆದರೆ, ವಿಶ್ವಸಂಸ್ಥೆಯ ಪರಮಾಣು ಸಂಸ್ಥೆ ಇದನ್ನು ನಿರಾಕರಿಸಿದೆ. ಇದೇ ವೇಳೆ, ಇಬ್ಬರು ಹಿರಿಯ ಇರಾನಿನ ಗುಪ್ತಚರ ಅಧಿಕಾರಿಗಳನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಖಚಿತಪಡಿಸಿದೆ.

Read Full Story

03:51 PM (IST) Mar 02

ಮದುವೆಯ ಹಲ್ದೀ-ಸಂಗೀತಾ ಕಾರ್ಯಕ್ರಮ ಬಿಟ್ಟು ಲಖನೌ ಜೆರ್ಸಿ ಅನಾವರಣದಲ್ಲಿ ಪಾಲ್ಗೊಂಡ ಅರ್ಜುನ್ ತೆಂಡೂಲ್ಕರ್!

ಮುಂಬೈ: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್, ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಹೀಗಿರುವಾಗಲೇ ತಮ್ಮ ವೈಯುಕ್ತಿಕ ಜೀವನಕ್ಕಿಂತ ಮಿಗಿಲಾಗಿ ವೃತ್ತಿಜೀವನ ಮುಖ್ಯ ಎನ್ನುವ ಸಂದೇಶ ಸಾರಿದ್ದಾರೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.

Read Full Story

03:44 PM (IST) Mar 02

ತಮ್ಮದೇ ನಾಯಕನ ಸಾವಿಗೆ ಕಾರಣರಾದ ಟ್ರಂಪ್​ಗೆ ಹೃದಯಾಳದ ಧನ್ಯವಾದ - ಆಗಸದಲ್ಲಿ ಥ್ಯಾಂಕ್ಯೂ ಸಂದೇಶ!

ಇರಾನಿನ ಸರ್ವಾಧಿಕಾರಿ ಅಲಿ ಖಮೇನಿ ಅವರ ಸಾವಿಗೆ ಜಗತ್ತಿನಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಶೋಕವನ್ನು ಆಚರಿಸಿದರೆ, ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿರುವ ಇರಾನಿಗರು ಬೀದಿಗಳಲ್ಲಿ ನೃತ್ಯ ಮಾಡಿ, ಟ್ರಂಪ್‌ಗೆ ಧನ್ಯವಾದ ಸಲ್ಲಿಸುವ ಮೂಲಕ ಸಂಭ್ರಮಿಸಿದ್ದಾರೆ.

Read Full Story

02:54 PM (IST) Mar 02

ಅಪ್ಪ ಅಮ್ಮನ ಡಿವೋರ್ಸ್‌ ಗಲಾಟೆ ಮಧ್ಯೆ ಅಪ್ಪ ದಳಪತಿ ವಿಜಯ್ ಅನ್‌ಫಾಲೋ ಮಾಡಿದ ಮಗ

ನಟ ವಿಜಯ್ ಪತ್ನಿ ಸಂಗೀತಾ ಸೊರ್ನಲಿಂಗಮ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಈ ಬೆಳವಣಿಗೆಯ ಬೆನ್ನಲ್ಲೇ ಅವರ ಪುತ್ರ ಜೇಸನ್ ಸಂಜಯ್ ಕೂಡ ಸಾಮಾಜಿಕ ಜಾಲತಾಣದಲ್ಲಿ ತಂದೆಯನ್ನು ಅನ್‌ಫಾಲೋ ಮಾಡಿದ್ದಾರೆ ಎಂದು ವರದಿಯಾಗಿದೆ. ವಿಜಯ್ ಅವರ ವಿವಾಹೇತರ ಸಂಬಂಧವೇ ಈ ಬಿರುಕಿಗೆ ಕಾರಣ ಎಂದು ಸಂಗೀತಾ ಆರೋಪಿಸಿದ್ದಾರೆ.

Read Full Story

02:41 PM (IST) Mar 02

ಮಾಡು ಇಲ್ಲವೇ ಮಡಿ ಮ್ಯಾಚ್‌ನಲ್ಲಿ ಭಾರತವನ್ನು ಏಕಾಂಗಿಯಾಗಿ ಗೆಲ್ಲಿಸಿದ ಸಂಜು ಸ್ಯಾಮ್ಸನ್! ಉಲ್ಟಾ ಹೊಡೆದ ಕೋಚ್ ಗೌತಮ್ ಗಂಭೀರ್

ಟಿ20 ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 97 ರನ್ ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟ ಸಂಜು ಸ್ಯಾಮ್ಸನ್ ಆಟವನ್ನು ಕೋಚ್ ಗೌತಮ್ ಗಂಭೀರ್ ಶ್ಲಾಘಿಸಿದ್ದಾರೆ. ಸಂಜು ಅವರ ಪ್ರದರ್ಶನವನ್ನು 'ವಿಶ್ವದರ್ಜೆಯದ್ದು' ಎಂದು ಬಣ್ಣಿಸಿದ್ದಾರೆ.

Read Full Story

02:39 PM (IST) Mar 02

ಇರಾನ್-ಇಸ್ರೇಲ್ ಯುದ್ಧದ ಬಗ್ಗೆ ಕೊನೆಗೂ ಮೌನ ಮುರಿದ ಚೀನಾ; ಖಡಕ್ ಎಚ್ಚರಿಕೆ ಕೊಟ್ಟಿದ್ಯಾರಿಗೆ?

ಸೇನಾ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸಿ, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಚೀನಾ ಒತ್ತಾಯಿಸಿದೆ. ಟೆಹ್ರಾನ್ ಸ್ಫೋಟದಲ್ಲಿ ತನ್ನ ಪ್ರಜೆಯೊಬ್ಬರು ಸಾವನ್ನಪ್ಪಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದು, ಯುದ್ಧವು ಬೇರೆ ದೇಶಗಳಿಗೆ ಹರಡದಂತೆ ತಡೆಯುವುದೇ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದೆ.

Read Full Story

02:16 PM (IST) Mar 02

ಈತ ಔಟಾಗದೇ ಇದ್ದಿದ್ದರೇ ಭಾರತ ಸೆಮೀಸ್‌ಗೆ ಎಂಟ್ರಿ ಕೊಡ್ತಿರಲಿಲ್ಲ! ಟೀಂ ಇಂಡಿಯಾ ಸೆಮಿಫೈನಲ್‌ನಲ್ಲಿ ಸೋಲುತ್ತೆ ಎಂದ ಪಾಕ್ ಕ್ರಿಕೆಟಿಗ

ಟಿ20 ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್ ತಲುಪಿದ ನಂತರ, ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಆಮಿರ್, ಶಿಮ್ರಾನ್ ಹೆಟ್ಮೇಯರ್ ಅವರ ವಿಕೆಟ್ ಅನುಮಾನಾಸ್ಪದವಾಗಿದೆ ಎಂದು ವಿವಾದ ಸೃಷ್ಟಿಸಿದ್ದಾರೆ. ಹೆಟ್ಮೇಯರ್ ಔಟಾಗದಿದ್ದರೆ ಭಾರತ ವಿಶ್ವಕಪ್‌ನಿಂದ ಹೊರಬೀಳುತ್ತಿತ್ತು ಎಂದು ಅವರು ವಾದಿಸಿದ್ದಾರೆ.

Read Full Story

01:36 PM (IST) Mar 02

ಅಬುಧಾಬಿಯಲ್ಲಿ ಫ್ರಾನ್ಸ್‌ನ ನೌಕಾನೆಲೆ ಮೇಲೆ ಇರಾನ್ ಡ್ರೋನ್ ದಾಳಿ - ಇರಾನ್ ಆಕ್ರಮಣದ ವಿರುದ್ಧ ಒಟ್ಟಾದ ಗಲ್ಫ್‌ ರಾಷ್ಟ್ರಗಳು

ಇಸ್ರೇಲ್-ಯುಎಸ್ ದಾಳಿಗೆ ಪ್ರತೀಕಾರವಾಗಿ ಇರಾನ್, ಯುಎಇಯ ಅಬುಧಾಬಿಯಲ್ಲಿರುವ ಫ್ರೆಂಚ್ ನೌಕಾನೆಲೆ ಮತ್ತು ಅಮೆಜಾನ್ ಡೇಟಾ ಸೆಂಟರ್ ಮೇಲೆ ಡ್ರೋನ್ ದಾಳಿ ನಡೆಸಿದೆ. ಈ ಸರಣಿ ದಾಳಿಗಳ ಹಿನ್ನೆಲೆಯಲ್ಲಿ, ಗಲ್ಫ್ ಸಹಕಾರ ಮಂಡಳಿಯ (GCC) ರಾಷ್ಟ್ರಗಳು ತುರ್ತು ಸಭೆ ನಡೆಸಿ, ಇರಾನ್‌ನ ಆಕ್ರಮಣವನ್ನು ಖಂಡಿಸಿವೆ.

Read Full Story

12:48 PM (IST) Mar 02

ಅಂದು ಆಡಿಸ್ತೀರಾ ಅಂದಿದ್ದಕ್ಕೆ ವ್ಯಂಗ್ಯವಾಗಿ ನಕ್ಕಿದ್ದ ಸೂರ್ಯಕುಮಾರ್ ಯಾದವ್, ಇಂದು ಸಂಜುಗೆ ಸಲಾಂ ಹೊಡೆದ! ವಿಡಿಯೋ ವೈರಲ್

ಟಿ20 ವಿಶ್ವಕಪ್‌ನಲ್ಲಿ ಆರಂಭದಲ್ಲಿ ಕಡೆಗಣಿಸಲ್ಪಟ್ಟು, ನಾಯಕ ಸೂರ್ಯಕುಮಾರ್ ಯಾದವ್ ಅವರಿಂದ ವ್ಯಂಗ್ಯಕ್ಕೊಳಗಾಗಿದ್ದ ಸಂಜು ಸ್ಯಾಮ್ಸನ್, ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಅಜೇಯ 97 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.  

Read Full Story

11:59 AM (IST) Mar 02

ಅಮೆರಿಕಾದ ಎಫ್‌-15 ಫೈಟರ್ ಜೆಟ್ ಹೊಡೆದುರುಳಿಸಿದಾಗಿ ಹೇಳಿದ ಇರಾನ್ - ಪೈಲಟ್ ಹೊರಗೆ ಹಾರಿದ ದೃಶ್ಯ ವೀಡಿಯೋದಲ್ಲಿ ಸೆರೆ

ಇಸ್ರೇಲ್-ಅಮೆರಿಕಾದ ದಾಳಿಗೆ ಪ್ರತಿಯಾಗಿ ಇರಾನ್, ಗಲ್ಫ್ ರಾಷ್ಟ್ರಗಳು ಮತ್ತು ಅಮೆರಿಕನ್ ನೆಲೆಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಅಮೆರಿಕದ ಎಫ್-15 ಫೈಟರ್ ಜೆಟ್ ಅನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದ್ದು, ಅಲಿ ಖಮೇನಿ ಹತ್ಯೆಯ ನಂತರ ಈ ಪ್ರಾದೇಶಿಕ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.
Read Full Story

11:59 AM (IST) Mar 02

52 ವಯಸ್ಸಲ್ಲೂ ನಿಂತಿಲ್ಲ ಉತ್ಸಾಹ - ಪ್ರತಿ ಬೆಳಿಗ್ಗೆ ಈ ಡ್ರಿಂಕ್ಸ್​ ಕುಡಿದು ಫಿಟ್​ ಆಗಿರಿ ಎಂದ Maliaka Arora!

52ನೇ ವಯಸ್ಸಿನಲ್ಲೂ ಫಿಟ್ ಆಗಿರುವ ನಟಿ ಮಲೈಕಾ ಅರೋರಾ ತಮ್ಮ ಸೌಂದರ್ಯದ ರಹಸ್ಯವನ್ನು ಹಂಚಿಕೊಂಡಿದ್ದಾರೆ. ತಮ್ಮ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವರು ಪ್ರತಿದಿನ ಬೆಳಿಗ್ಗೆ ಸೇವಿಸುವ ಈ ಸರಳ ಪಾನೀಯವೇ ಅವರ ಫಿಟ್ನೆಸ್​ಗೆ ಪ್ರಮುಖ ಕಾರಣವೆಂದು ಅವರು ಬಹಿರಂಗಪಡಿಸಿದ್ದಾರೆ.

Read Full Story

11:45 AM (IST) Mar 02

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ; ಭಾರತದಲ್ಲಿ ಕೋಮುಗಲಭೆ ಸಾಧ್ಯತೆ, ರಾಜ್ಯಗಳಿಗೆ MHA ಹೈ ಅಲರ್ಟ್!

Communal violence risk in India: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಯ ನಂತರ, ಭಾರತದಲ್ಲಿ ಕೋಮುಗಲಭೆಗಳು ಸಂಭವಿಸುವ ಸಾಧ್ಯತೆಯ ಬಗ್ಗೆ ಕೇಂದ್ರ ಗೃಹ ಸಚಿವಾಲಯವು ರಾಜ್ಯಗಳಿಗೆ ಹೈ ಅಲರ್ಟ್ ಘೋಷಿಸಿದೆ. 

Read Full Story

11:41 AM (IST) Mar 02

Fighter Jet Crash - ಕುವೈತ್‌ನಲ್ಲಿ ಪತನಗೊಂಡ ಅಮೆರಿಕದ F-15 ಫೈಟರ್ ಜೆಟ್!

ಅಮೆರಿಕ ವಾಯುಪಡೆಗೆ ಸೇರಿದ F-15E ಸ್ಟ್ರೈಕ್ ಈಗಲ್ ಫೈಟರ್ ಜೆಟ್ ಕುವೈತ್‌ನಲ್ಲಿ ಪತನಗೊಂಡಿದೆ. ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷದ ನಡುವೆ ಈ ಘಟನೆ ನಡೆದಿದ್ದು, ವಿಮಾನ ಕೆಳಗೆ ಬೀಳುವ ಮುನ್ನ ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದಾರೆ. ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Read Full Story

11:15 AM (IST) Mar 02

ಖಮೇನಿ ಸಾವಿನ ಬಳಿಕ ಮತ್ತೆ ಸುದ್ದಿಯಾಗುತ್ತಿದೆ ಇರಾನ್‌ ನಾಯಕನಿಗೆ ಇದ್ದ ಭಾರತದ ಕನೆಕ್ಷನ್

ಇರಾನ್‌ನ ನಾಯಕ ಅಯತೊಲ್ಲಾ ಖಮೇನಿ ಅವರ ಪೂರ್ವಜರು ಉತ್ತರ ಪ್ರದೇಶದ ಬರಾಬಂಕಿ ಜಿಲ್ಲೆಯ ಕಿಂತೂರ್ ಗ್ರಾಮದವರು. ಅವರ ಅಜ್ಜ ಸೈಯದ್ ಅಹ್ಮದ್ ಮುಸಾವಿ ಭಾರತದಲ್ಲಿ ಜನಿಸಿ ನಂತರ ಇರಾನ್‌ಗೆ ತೆರಳಿದರು. ಖಮೇನಿ ಹತ್ಯೆಯ ನಂತರ ಭಾರತದಲ್ಲಿ ನಡೆದ ಪ್ರತಿಭಟನೆಗಳು ಈ ಭಾರತೀಯ ಸಂಪರ್ಕವನ್ನು ಮತ್ತೆ ಮುನ್ನೆಲೆಗೆ ತಂದಿವೆ.

Read Full Story

10:45 AM (IST) Mar 02

ನಾನಿದ್ದೀನಿ, ಧೈರ್ಯವಾಗಿರಿ - ದುಬೈ ಏರ್​ಪೋರ್ಟ್​ನಲ್ಲಿ ಕನ್ನಡಿಗರ ಜೊತೆ Bigg Boss Drone Pratap

ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್, ಆತಂಕದ ವಾತಾವರಣದ ನಡುವೆಯೂ ಧೈರ್ಯ ಕಳೆದುಕೊಂಡಿಲ್ಲ. ಅವರು ಅಲ್ಲಿರುವ ಇತರ ಕನ್ನಡಿಗರಿಗೆ ಧೈರ್ಯ ತುಂಬುತ್ತಾ, ಎಲ್ಲರೂ ಸುರಕ್ಷಿತವಾಗಿದ್ದಾರೆಂದು ವಿಡಿಯೋ ಮೂಲಕ ಭರವಸೆ ನೀಡುತ್ತಿದ್ದಾರೆ.

Read Full Story

10:30 AM (IST) Mar 02

ಇರಾನ್-ಇಸ್ರೇಲ್ ಯುದ್ಧದ ನಡುವೆಯೇ ಚಿನ್ನದ ಬೆಲೆಯಲ್ಲಿ 30 ಸಾವಿರ ರೂಪಾಯಿ ಇಳಿಕೆ

ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡದಿಂದಾಗಿ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ. ಇಂದು 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಕ್ರಮವಾಗಿ 30,000 ಮತ್ತು 32,900 ರೂ. ಇಳಿಕೆಯಾಗಿದ್ದು, ಬೆಳ್ಳಿ ದರವೂ ಕುಸಿದಿದೆ.
Read Full Story

10:28 AM (IST) Mar 02

ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ವೇದಿಕೆ ರೆಡಿ; ಸೆಮೀಸ್‌, ಫೈನಲ್‌ಗೆ ಭಾರತವೇ ಆತಿಥ್ಯ!

ಟಿ20 ವಿಶ್ವಕಪ್‌ನ ಸೂಪರ್‌-8 ಹಂತದ ನಂತರ ಭಾರತ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ. ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ-ನ್ಯೂಜಿಲೆಂಡ್‌ ಸೆಣಸಿದರೆ, ಎರಡನೇ ಸೆಮಿಫೈನಲ್‌ನಲ್ಲಿ ಭಾರತ-ಇಂಗ್ಲೆಂಡ್ ಮುಖಾಮುಖಿಯಾಗಲಿವೆ.
Read Full Story

10:01 AM (IST) Mar 02

ಕ್ರೀಡಾಲೋಕದ ಮೇಲೆ ಯುದ್ದದ ಕಾರ್ಮೊಡ; ನಾವಿದ್ದ ಸ್ಥಳದ ಸಮೀಪವೇ ಸ್ಪೋಟವಾಯಿತು ಎಂದ ಸಿಂಧು!

ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯು ಜಾಗತಿಕ ಕ್ರೀಡಾಲೋಕದ ಮೇಲೆ ಗಂಭೀರ ಪರಿಣಾಮ ಬೀರಿದೆ. ಫುಟ್ಬಾಲ್‌, ಕ್ರಿಕೆಟ್‌, ಐಪಿಎಲ್‌ ಸೇರಿದಂತೆ ಹಲವು ಕ್ರೀಡಾಕೂಟಗಳು ರದ್ದಾಗಿವೆ. ಪಿ.ವಿ. ಸಿಂಧು ಅವರಂತಹ ಕ್ರೀಡಾಪಟುಗಳು ವೈಯಕ್ತಿಕವಾಗಿ ಸಂಕಷ್ಟಕ್ಕೆ ಸಿಲುಕಿದ ಅನುಭವವನ್ನು ಹಂಚಿಕೊಂಡಿದ್ದಾರೆ.

Read Full Story

08:53 AM (IST) Mar 02

ಕನ್ನಡಿಗರ ನೆರವಿಗೆ 24*7 ಹೆಲ್ಪ್‌ಲೈನ್, ಕನ್ನಡಿಗರನ್ನು ಸುರಕ್ಷಿತವಾಗಿ ಕರೆತನ್ನಿ - ಕೇಂದ್ರಕ್ಕೆ ರಾಜ್ಯ ಪತ್ರ

ಇರಾನ್‌-ಇಸ್ರೇಲ್‌ ಯುದ್ಧದ ಕಾರಣ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗಾಗಿ ಕರ್ನಾಟಕ ಸರ್ಕಾರವು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ 24/7 ತುರ್ತು ಕಾರ್ಯಾಚರಣಾ ಕೇಂದ್ರಗಳನ್ನು ಸ್ಥಾಪಿಸಿದೆ. ಸಂಕಷ್ಟದಲ್ಲಿರುವವರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಸರ್ಕಾರ ಪ್ರಯತ್ನಿಸುತ್ತಿದೆ.

Read Full Story

08:08 AM (IST) Mar 02

ಕೊಲ್ಲಿ ಯುದ್ದ - ಸಂಕಷ್ಟದಲ್ಲಿ 150ಕ್ಕೂ ಹೆಚ್ಚು ಕನ್ನಡಿಗರು! ಯುದ್ದಾತಂಕದ ಬಗ್ಗೆ ಡ್ರೋನ್ ಪ್ರತಾಪ್ ಹೇಳಿದ್ದೇನು?

ಇರಾನ್-ಇಸ್ರೇಲ್ ಯುದ್ಧದ ಪರಿಣಾಮವಾಗಿ ವಿಮಾನ ಸಂಚಾರ ಸ್ಥಗಿತಗೊಂಡಿದ್ದು, ನೂರಾರು ಕನ್ನಡಿಗರು ವಿದೇಶದಲ್ಲಿ ಸಿಲುಕಿದ್ದಾರೆ. ಶಾಸಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ಸೇರಿದಂತೆ ಹಲವರು ತಾಯ್ನಾಡಿಗೆ ಮರಳಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದು, ತಮ್ಮನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರಕ್ಕೆ ಮನವಿ.

Read Full Story

07:08 AM (IST) Mar 02

ಟಿ20 ವಿಶ್ವಕಪ್ - ನಿನ್ನೆ ನಡೆದ ಭಾರತ-ವೆಸ್ಟ್ ಇಂಡೀಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ಟಿ20 ವಿಶ್ವಕಪ್‌ನ ನಿರ್ಣಾಯಕ ಸೂಪರ್‌-8 ಪಂದ್ಯದಲ್ಲಿ, ವೆಸ್ಟ್‌ಇಂಡೀಸ್‌ ವಿರುದ್ಧ ಭಾರತ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಸೆಮಿಫೈನಲ್‌ ಪ್ರವೇಶಿಸಿದೆ. ಸಂಜು ಸ್ಯಾಮ್ಸನ್‌ ಅವರ ಅಜೇಯ 97 ರನ್‌ಗಳ ಏಕಾಂಗಿ ಹೋರಾಟದಿಂದಾಗಿ ತಂಡ ಗೆಲುವಿನ ದಡ ಸೇರಿತು.  

Read Full Story

More Trending News