ಗುವಾಹಟಿ: ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ, ಸಂಸದ ಗೌರವ್ ಗೊಗೋಯ್ಗೆ ಪಾಕಿಸ್ತಾನದ ನಂಟಿದೆ ಎಂದು ಆರೋಪಿಸಿರುವ ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮಾ,ಈ ಕುರಿತು ಕೇಂದ್ರೀಯ ಸಂಸ್ಥೆಯ ತನಿಖೆಗೆ ಶಿಫಾರಸು ಮಾಡಿದ್ದಾರೆ. ‘2013ರಲ್ಲಿ ಗೊಗೋಯ್ ರಹಸ್ಯವಾಗಿ ಪಾಕ್ಗೆ ಭೇಟಿ ನೀಡಿದ್ದರು. ಅಲ್ಲಿ ಯಾವುದೋ ತರಬೇತಿ ಪಡೆದು ಬಂದಿರಬಹುದು. ಅವರ ಬ್ರಿಟನ್ ಮೂಲದ ಪತ್ನಿ ಎಲಿಜಬೆತ್ ಭಾರತದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಇಲ್ಲಿನ ಮಾಹಿತಿ ಸಂಗ್ರಹಿಸಿ ಅದನ್ನು ಪಾಕ್ಗೆ ರವಾನಿಸುತ್ತಿದ್ದರು. ಅವರು ಸಹ 9 ಬಾರಿ ಪಾಕ್ಗೆ ಹೋಗಿ ಬಂದಿದ್ದಾರೆ’ ಎಂದು ಶರ್ಮಾ ಆರೋಪಿಸಿದರು.

11:16 PM (IST) Feb 09
ಕೇರಳದ ಕಾಸರಗೋಡಿನಲ್ಲಿ 24 ವರ್ಷದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಚಿನ್ನು ಪಪ್ಪು ತನ್ನ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಾಸರಗೋಡು ಶೈಲಿಯ ಭಾಷೆ ಹಾಗೂ ಸ್ಥಳೀಯ ಆಹಾರದ ವಿಡಿಯೋಗಳಿಂದ ವೈರಲ್ ಆಗಿದ್ದ ಇವರು, ಇನ್ಸ್ಟಾಗ್ರಾಂನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದರು.
10:58 PM (IST) Feb 09
10:14 PM (IST) Feb 09
2% DA Hike for Central Govt Employees Expected Before Holi 2026 7ನೇ ವೇತನ ಆಯೋಗದ ಅವಧಿ 2025ರ ಡಿಸೆಂಬರ್ 31 ರಂದು ಕೊನೆಗೊಂಡಿದ್ದರೂ, ಮುಂದಿನ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ಬರುವವರೆಗೂ ಅಸ್ತಿತ್ವದಲ್ಲಿರುವ ಮೂಲ ವೇತನದ ಮೇಲೆ ಡಿಎ ಲೆಕ್ಕಹಾಕಲಾಗುತ್ತದೆ.
09:44 PM (IST) Feb 09
ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಅವರ ಇನ್ನೂ ಪ್ರಕಟವಾಗದ ಆತ್ಮಚರಿತ್ರೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಸೋರಿಕೆಯಾದ ಆರೋಪದ ಮೇಲೆ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈ ಪುಸ್ತಕದ ಆಯ್ದ ಭಾಗಗಳನ್ನು ಬಳಸಿ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
08:47 PM (IST) Feb 09
ಆಟೋ ಚಾಲಕನೊಬ್ಬ, ತನ್ನ ಪುಟ್ಟ ಮಗಳನ್ನು ಆಟೋದಲ್ಲೇ ಮಲಗಿಸಿಕೊಂಡು ಆಟೋ ಓಡಿಸುತ್ತಿದ್ದಾನೆ. ಪ್ರಯಾಣಿಕ ಇದನ್ನು ವಿಡಿಯೋ ಮಾಡಿದ್ದು, ಆಗ ಡ್ರೈವರ್ನ ಕಣ್ಣೀರಿನ ಕಥೆಯೊಂದು ತೆರೆದುಕೊಂಡಿದೆ. ಈ ಮನಕಲಕುವ ದೃಶ್ಯದ ವಿಡಿಯೋ ವೈರಲ್ ಆಗಿದ್ದು, ಅಂತರ್ಜಾಲದಲ್ಲಿ ಚರ್ಚೆಗೆ ಕಾರಣವಾಗಿದೆ.
08:44 PM (IST) Feb 09
Latur ZP Results 2026: ಜಿಲ್ಲಾ ಪರಿಷತ್ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಲಾತೂರ್ನ ಫಲಿತಾಂಶವು ಇಡೀ ರಾಜ್ಯದ ಗಮನ ಸೆಳೆದಿದೆ. ತಂಗಿ ತನ್ನ ಅಕ್ಕನನ್ನು ಕೇವಲ ಎರಡು ಮತಗಳಿಂದ ಸೋಲಿಸಿದ್ದಾರೆ.
08:18 PM (IST) Feb 09
ಗುಜರಾತ್ನ ಪಂಚಮಹಲ್ ಜಿಲ್ಲೆಯ ಶಾಲೆಯೊಂದರಲ್ಲಿ, ಪರೀಕ್ಷೆಗೆ ತಡವಾಗಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ 12ನೇ ತರಗತಿ ವಿದ್ಯಾರ್ಥಿಯೊಬ್ಬ ಶಿಕ್ಷಕಿಯ ಮೇಲೆ ಹಲ್ಲೆ ಮಾಡಿದ್ದಾನೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದ್ದು, ನಂತರ ಆರೋಪಿ ವಿದ್ಯಾರ್ಥಿ ಶಿಕ್ಷಕಿಗೆ ಬೆದರಿಕೆ ಹಾಕಿದ್ದಾನೆ.
08:17 PM (IST) Feb 09
Prakash Raj Slams Viral Post Linking RCB's WPL Win to Religion ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಗೆಲುವನ್ನು ಧರ್ಮಕ್ಕೆ ಹೋಲಿಸಿ ಟ್ವೀಟ್ ಮಾಡಿದ ಪೇಜ್ ವಿರುದ್ಧ ನಟ ಪ್ರಕಾಶ್ ರಾಜ್ ಕಿಡಿಕಾರಿದ್ದಾರೆ.
07:36 PM (IST) Feb 09
07:06 PM (IST) Feb 09
06:39 PM (IST) Feb 09
06:34 PM (IST) Feb 09
ಮನೆಯಲ್ಲಿ ಮೊದಲ ಮಗು ಹೆಣ್ಣಾಗಿ ಹುಟ್ಟಿದರೆ, ಸಾಕ್ಷಾತ್ ಮಹಾಲಕ್ಷ್ಮಿಯೇ ಮನೆಗೆ ಬಂದಂತೆ ಎಂದು ಭಾವಿಸಲಾಗುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ದಿನಾಂಕಗಳಂದು ಜನಿಸಿದ ಹೆಣ್ಣುಮಕ್ಕಳು ತಮ್ಮ ತಂದೆಗೆ ಅದೃಷ್ಟವನ್ನು ತರುತ್ತಾರೆ. ಹಾಗಾದ್ರೆ, ಆ ದಿನಾಂಕಗಳು ಯಾವುವು ಅಂತ ನೋಡೋಣ ಬನ್ನಿ.
06:01 PM (IST) Feb 09
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿಯು ವಿಭಿನ್ನ ಗುಣಲಕ್ಷಣ ಮತ್ತು ಪ್ರತಿಭೆಯನ್ನು ಹೊಂದಿರುತ್ತದೆ. ಕೆಲವು ರಾಶಿಯವರ ವಿಶೇಷ ಸ್ವಭಾವ, ಉತ್ಸಾಹ, ಸೃಜನಶೀಲತೆ ಮತ್ತು ಪರಿಶ್ರಮ ಅವರನ್ನು ಎಲ್ಲರಿಗಿಂತ ಭಿನ್ನವಾಗಿಸುತ್ತದೆ. ಆ ರಾಶಿಗಳು ಯಾವುವು? ನೋಡೋಣ ಬನ್ನಿ
05:42 PM (IST) Feb 09
ವಿವಾದಗಳ ರಾಣಿ ರಾಖಿ ಸಾವಂತ್ ಬಿಗ್ಬಾಸ್ ಮನೆಗೆ ವೈಲ್ಡ್ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಆದಿಲ್ ಖಾನ್ ಜೊತೆಗಿನ ವಿವಾದ, ಮುಕೇಶ್ ಅಂಬಾನಿ ಬಗ್ಗೆ ಹೇಳಿಕೆಗಳ ನಂತರ, ಇದೀಗ ಬಿಗ್ಬಾಸ್ ಮನೆಯಲ್ಲಿ ಆಟವನ್ನೇ ಬದಲಾಯಿಸುವುದಾಗಿ ಹೇಳಿ ಪ್ರವೇಶಿಸಿದ್ದಾರೆ.
05:39 PM (IST) Feb 09
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡದ ಐತಿಹಾಸಿಕ ವಿಜಯವನ್ನು ಆಚರಿಸುತ್ತಿರುವ ಬಜಾಜ್ ಆಟೋ ತನ್ನ ಹೊಸ ಮಾದರಿಯ ಬಜಾಜ್ ಚೇತಕ್ C25 ಅನ್ನು ಇಡೀ ತಂಡಕ್ಕೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದೆ.
05:08 PM (IST) Feb 09
UMANG ಅಪ್ಲಿಕೇಶನ್ಗಿಂತ ಭಿನ್ನವಾಗಿರುವ ಹೊಸ EPFO ಅಪ್ಲಿಕೇಶನ್ ಯೂಸರ್ಗಳ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಲಿದ್ದು. ಇದು BHIM ಅಪ್ಲಿಕೇಶನ್ ಮತ್ತು ಇತರ UPI ಅಪ್ಲಿಕೇಶನ್ಗಳಿಗೂ ಲಿಂಕ್ ಆಗುತ್ತದೆ.
04:53 PM (IST) Feb 09
ಪಂಜಾಬ್ನ ಕಾಲೇಜೊಂದರಲ್ಲಿ, ಕಾನೂನು ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ವಿದ್ಯಾರ್ಥಿನಿಗೆ ತರಗತಿಯಲ್ಲೇ ಗುಂಡಿಕ್ಕಿ ತಾನು ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ. ಈ ಭಯಾನಕ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
04:51 PM (IST) Feb 09
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ, ಪ್ರಭಾಸ್ ನಟನೆಯ 'ಸ್ಪಿರಿಟ್' ಚಿತ್ರದಿಂದ ನಟ ಪ್ರಕಾಶ್ ರಾಜ್ ಅವರನ್ನು ತೆಗೆದುಹಾಕಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಚಿತ್ರೀಕರಣದ ವೇಳೆ ನಿರ್ದೇಶಕರೊಂದಿಗೆ ವಾಗ್ವಾದ ನಡೆದಿದ್ದೇ ಇದಕ್ಕೆ ಕಾರಣ ಎನ್ನಲಾಗಿತ್ತು. ಸ್ವತಃ ಪ್ರಕಾಶ್ ರಾಜ್ ಈ ಬಗ್ಗೆ ಹೇಳಿದ್ದೇನು?
04:28 PM (IST) Feb 09
ISRO Chandrayaan-4: Mons Mouton Identified as Lunar Landing Sitea ಚಂದ್ರಯಾನ-4 ಗಾಗಿ ಇಸ್ರೋ ಲ್ಯಾಂಡಿಂಗ್ ಸ್ಥಳವನ್ನು ಗುರುತಿಸಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿರುವ ಮಾನ್ಸ್ ಮೌಟನ್ ಪರ್ವತದ ಮೇಲೆ ಇಳಿಯಲಿದೆ. ಈ ವೇಳೆ ಚಂದ್ರನ ಮಣ್ಣು ಹಾಗೂ ಕಲ್ಲಿನ ತುಣುಕನ್ನು ಭೂಮಿಗೆ ತರಲಿದೆ.
03:46 PM (IST) Feb 09
03:15 PM (IST) Feb 09
02:12 PM (IST) Feb 09
ದುಬೈನಿಂದ ಬಂದ ಪ್ರಯಾಣಿಕನೊಬ್ಬ ಚಡ್ಡಿಯಲ್ಲಿ ಚಿನ್ನ ಅಡಗಿಸಿಟ್ಟು ಸಾಗಿಸುತ್ತಿದ್ದಾಗ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಆತನಿಂದ ಒಟ್ಟು 96 ಲಕ್ಷ ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದೆ ಇದರಲ್ಲಿ 45 ಲಕ್ಷ ಮೌಲ್ಯದ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಒಳಉಡುಪಿನಲ್ಲಿ ಬಚ್ಚಿಡಲಾಗಿತ್ತು.
01:28 PM (IST) Feb 09
01:16 PM (IST) Feb 09
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಅನ್ಲಿಮಿಟೆಡ್ ಕರೆಗಳು, ದಿನಕ್ಕೆ 100 ಎಸ್ಎಂಎಸ್ ಮತ್ತು ಪ್ರತಿದಿನ 2GB ಡೇಟಾ ಸಿಗಲಿದೆ.
01:02 PM (IST) Feb 09
ಐಷಾರಾಮಿ ಜೀವನ ನಡೆಸುವ ಸಲುವಾಗಿ 26ಕ್ಕೂ ಅಧಿಕ ಮನೆಗಳ್ಳತನ ಮಾಡಿದ್ದ ಐಟಿ ಉದ್ಯೋಗಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಾಫ್ಟ್ವೇರ್ ಇಂಜಿನೀಯರ್ ಆಗಿದ್ದ ಆರೋಪಿ, ಕದ್ದ ಹಣದಿಂದ ಬಿಎಂಡಬ್ಲ್ಯು ಕಾರ್ ಖರೀದಿಸಿ, ವಿದೇಶ ಪ್ರವಾಸ ಮಾಡುತ್ತಿದ್ದನು.
01:01 PM (IST) Feb 09
ಮದುವೆಗೆಂದು ಒಂದೇ ಬೈಕ್ನಲ್ಲಿ ಹೊರಟಿದ್ದ ತಾಯಿ, ಮಗ ಹಾಗೂ ಗರ್ಭಿಣಿ ಸೊಸೆ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅತಿವೇಗದಿಂದ ಚಲಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
12:52 PM (IST) Feb 09
ಕರಾಚಿ: ಟಿ20 ವಿಶ್ವಕಪ್ನಲ್ಲಿ ಭಾರತ-ಪಾಕಿಸ್ತಾನ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರದಿಂದ ಹಿಂದೆ ಸರಿಯಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಐಸಿಸಿ ಮುಂದೆ ಹಲವು ಷರತ್ತುಗಳನ್ನು ಇಟ್ಟಿದೆ. ಪಿಸಿಬಿ ಇಟ್ಟಿರುವ ಮೂರಕ್ಕೂ ಹೆಚ್ಚು ಬೇಡಿಕೆಗಳಲ್ಲಿ ಪ್ರಮುಖವಾದವುಗಳು ಇಲ್ಲಿವೆ.
12:04 PM (IST) Feb 09
ಆರ್ಜೆಡಿ ಉಚ್ಚಾಟಿತ ನಾಯಕ ತೇಜ್ ಪ್ರತಾಪ್ ಯಾದವ್, ತಮ್ಮ ಪ್ರೇಯಸಿ ಎನ್ನಲಾದ ಅನುಷಾ ಯಾದವ್ಗೆ ಜನಿಸಿದ ಮಗುವಿಗೆ ತಾನು ತಂದೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದ್ದು, ವೈರಲ್ ಫೋಟೋ ಸುದ್ದಿ ಸುಳ್ಳು ಎಂದು ಅವರು ಹೇಳಿದ್ದಾರೆ.
10:52 AM (IST) Feb 09
ಬೆಂಗಳೂರು: ಈ ತಿಂಗಳ ಆರಂಭದಲ್ಲಿ ನಿರಂತರ ಕುಸಿತ ಕಂಡಿದ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಾಣುತ್ತಿದೆ. ಇದು 'ಚಿನ್ನ' ಎನ್ನುವ ಗ್ರಾಹಕರ ನಿದ್ದೆಗೆಡಿಸಿದೆ. ಬೆಂಗಳೂರಿನಲ್ಲಿ ಇಂದಿನ ಚಿನ್ನ ಬೆಳ್ಳಿ ದರವೆಷ್ಟು? ನೋಡೋಣ ಬನ್ನಿ.
07:33 AM (IST) Feb 09