Published : Feb 09, 2026, 06:54 AM ISTUpdated : Feb 09, 2026, 11:16 PM IST

India Latest News Live: Chinnu Pappu - ಕಾಸರಗೋಡಿನಲ್ಲಿ ಶವವಾಗಿ ಪತ್ತೆಯಾದ ಯುವ ಇನ್ಫ್ಲುಯೆನ್ಸರ್ ಚಿನ್ನು ಪಾಪು ಹಿನ್ನಲೆಯೇನು?

ಸಾರಾಂಶ

ಗುವಾಹಟಿ: ಅಸ್ಸಾಂ ಕಾಂಗ್ರೆಸ್‌ ಅಧ್ಯಕ್ಷ, ಸಂಸದ ಗೌರವ್ ಗೊಗೋಯ್‌ಗೆ ಪಾಕಿಸ್ತಾನದ ನಂಟಿದೆ ಎಂದು ಆರೋಪಿಸಿರುವ ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮಾ,ಈ ಕುರಿತು ಕೇಂದ್ರೀಯ ಸಂಸ್ಥೆಯ ತನಿಖೆಗೆ ಶಿಫಾರಸು ಮಾಡಿದ್ದಾರೆ. ‘2013ರಲ್ಲಿ ಗೊಗೋಯ್‌ ರಹಸ್ಯವಾಗಿ ಪಾಕ್‌ಗೆ ಭೇಟಿ ನೀಡಿದ್ದರು. ಅಲ್ಲಿ ಯಾವುದೋ ತರಬೇತಿ ಪಡೆದು ಬಂದಿರಬಹುದು. ಅವರ ಬ್ರಿಟನ್‌ ಮೂಲದ ಪತ್ನಿ ಎಲಿಜಬೆತ್‌ ಭಾರತದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಇಲ್ಲಿನ ಮಾಹಿತಿ ಸಂಗ್ರಹಿಸಿ ಅದನ್ನು ಪಾಕ್‌ಗೆ ರವಾನಿಸುತ್ತಿದ್ದರು. ಅವರು ಸಹ 9 ಬಾರಿ ಪಾಕ್‌ಗೆ ಹೋಗಿ ಬಂದಿದ್ದಾರೆ’ ಎಂದು ಶರ್ಮಾ ಆರೋಪಿಸಿದರು.

11:16 PM (IST) Feb 09

Chinnu Pappu - ಕಾಸರಗೋಡಿನಲ್ಲಿ ಶವವಾಗಿ ಪತ್ತೆಯಾದ ಯುವ ಇನ್ಫ್ಲುಯೆನ್ಸರ್ ಚಿನ್ನು ಪಾಪು ಹಿನ್ನಲೆಯೇನು?

ಕೇರಳದ ಕಾಸರಗೋಡಿನಲ್ಲಿ 24 ವರ್ಷದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಚಿನ್ನು ಪಪ್ಪು ತನ್ನ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಾಸರಗೋಡು ಶೈಲಿಯ ಭಾಷೆ ಹಾಗೂ ಸ್ಥಳೀಯ ಆಹಾರದ ವಿಡಿಯೋಗಳಿಂದ ವೈರಲ್ ಆಗಿದ್ದ ಇವರು, ಇನ್‌ಸ್ಟಾಗ್ರಾಂನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದರು.

Read Full Story

10:58 PM (IST) Feb 09

ಚಿನ್ನ ಅಡವಿಟ್ಟವರಿಗೆ ಗುಡ್ ನ್ಯೂಸ್... ಸಾಲ ಮನ್ನಾ ಬಗ್ಗೆ ಶೀಘ್ರದಲ್ಲೇ ಮಹತ್ವದ ಘೋಷಣೆ?

ಚಿನ್ನದ ಬೆಲೆ ಗಗನಕ್ಕೇರಿರುವ ಹೊತ್ತಲ್ಲೇ, ತಮಿಳುನಾಡಿನಲ್ಲಿ ಮತ್ತೆ ಚಿನ್ನದ ಸಾಲ ಮನ್ನಾ ಮಾಡುವ ನಿರೀಕ್ಷೆ ಗರಿಗೆದರಿದೆ. ಡಿಎಂಕೆ ಸರ್ಕಾರದ ಹಿಂದಿನ 5 ಸವರನ್ ಚಿನ್ನದ ಸಾಲ ಮನ್ನಾ ಯೋಜನೆಯಂತೆ, ಈ ಬಾರಿಯೂ ಘೋಷಣೆ ಹೊರಬೀಳಬಹುದು ಎಂದು ಜನರು ಕಾಯುತ್ತಿದ್ದಾರೆ.
Read Full Story

10:14 PM (IST) Feb 09

ಹೋಳಿಗೂ ಮುನ್ನ ಸಿಗಲಿದೆ ಡಿಎ ಹೈಕ್‌ ಗುಡ್‌ನ್ಯೂಸ್‌? ಇಷ್ಟಾಗಲಿದೆ ಇವರ ಸ್ಯಾಲರಿ!

2% DA Hike for Central Govt Employees Expected Before Holi 2026 7ನೇ ವೇತನ ಆಯೋಗದ ಅವಧಿ 2025ರ ಡಿಸೆಂಬರ್ 31 ರಂದು ಕೊನೆಗೊಂಡಿದ್ದರೂ, ಮುಂದಿನ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ಬರುವವರೆಗೂ ಅಸ್ತಿತ್ವದಲ್ಲಿರುವ ಮೂಲ ವೇತನದ ಮೇಲೆ ಡಿಎ ಲೆಕ್ಕಹಾಕಲಾಗುತ್ತದೆ.

 

Read Full Story

09:44 PM (IST) Feb 09

ರಾಹುಲ್ ಗಾಂಧಿ ಹಾಗೂ ಸರ್ಕಾರದ ಮಧ್ಯೆ ಗಲಾಟೆಗೆ ಕಾರಣವಾದ ಸೇನಾ ಮುಖ್ಯಸ್ಥರ ಪ್ರಕಟವಾಗದ ಪುಸ್ತಕ - ದೆಹಲಿ ಪೊಲೀಸರಿಂದ FIR

ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಅವರ ಇನ್ನೂ ಪ್ರಕಟವಾಗದ ಆತ್ಮಚರಿತ್ರೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಸೋರಿಕೆಯಾದ ಆರೋಪದ ಮೇಲೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಪುಸ್ತಕದ ಆಯ್ದ ಭಾಗಗಳನ್ನು ಬಳಸಿ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

Read Full Story

08:47 PM (IST) Feb 09

ಮಗಳಿಗಾಗಿ ಆಟೋದಲ್ಲೇ 'ಅಮ್ಮನ ಮಡಿಲು' ಸೃಷ್ಟಿಸಿದ ಅಪ್ಪ; ಆಟೋ ಡ್ರೈವರ್ ನಗುಮುಖದ ಹಿಂದಿದೆ ಕಣ್ಣೀರ ಕಥೆ!

ಆಟೋ ಚಾಲಕನೊಬ್ಬ, ತನ್ನ ಪುಟ್ಟ ಮಗಳನ್ನು ಆಟೋದಲ್ಲೇ ಮಲಗಿಸಿಕೊಂಡು ಆಟೋ ಓಡಿಸುತ್ತಿದ್ದಾನೆ. ಪ್ರಯಾಣಿಕ ಇದನ್ನು ವಿಡಿಯೋ ಮಾಡಿದ್ದು,  ಆಗ ಡ್ರೈವರ್‌ನ ಕಣ್ಣೀರಿನ ಕಥೆಯೊಂದು ತೆರೆದುಕೊಂಡಿದೆ. ಈ ಮನಕಲಕುವ ದೃಶ್ಯದ ವಿಡಿಯೋ ವೈರಲ್ ಆಗಿದ್ದು, ಅಂತರ್ಜಾಲದಲ್ಲಿ ಚರ್ಚೆಗೆ ಕಾರಣವಾಗಿದೆ.

Read Full Story

08:44 PM (IST) Feb 09

ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ ಅಕ್ಕನನ್ನು ಬರೀ ಎರಡೇ ವೋಟ್‌ನಿಂದ ಸೋಲಿಸಿದ ತಂಗಿ!

Latur ZP Results 2026: ಜಿಲ್ಲಾ ಪರಿಷತ್ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಲಾತೂರ್‌ನ ಫಲಿತಾಂಶವು ಇಡೀ ರಾಜ್ಯದ ಗಮನ ಸೆಳೆದಿದೆ. ತಂಗಿ ತನ್ನ ಅಕ್ಕನನ್ನು ಕೇವಲ ಎರಡು ಮತಗಳಿಂದ ಸೋಲಿಸಿದ್ದಾರೆ.

 

Read Full Story

08:18 PM (IST) Feb 09

ಮನೆಯಲ್ಲೇ ಯಾರು ಕೇಳಲ್ಲ, ನೀವು ಯಾರು ಕೇಳೋಕೆ? ತಡವಾಗಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಶಿಕ್ಷಕಿ ಕೆನ್ನೆಗೆ ಬಾರಿಸಿದ ವಿದ್ಯಾರ್ಥಿ

ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಶಾಲೆಯೊಂದರಲ್ಲಿ, ಪರೀಕ್ಷೆಗೆ ತಡವಾಗಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ 12ನೇ ತರಗತಿ ವಿದ್ಯಾರ್ಥಿಯೊಬ್ಬ ಶಿಕ್ಷಕಿಯ ಮೇಲೆ ಹಲ್ಲೆ ಮಾಡಿದ್ದಾನೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದ್ದು, ನಂತರ ಆರೋಪಿ ವಿದ್ಯಾರ್ಥಿ ಶಿಕ್ಷಕಿಗೆ ಬೆದರಿಕೆ ಹಾಕಿದ್ದಾನೆ.

Read Full Story

08:17 PM (IST) Feb 09

ಸ್ಮೃತಿ ಮಂಧನಾ WPL ಗೆಲುವನ್ನು ಹಿಂದೂ ಧರ್ಮಕ್ಕೆ ಜೋಡಿಸಿದ ಪೋಸ್ಟ್‌ಗೆ ಕಿಡಿಕಿಡಿಯಾದ ಪ್ರಕಾಶ್‌ ರಾಜ್‌!

Prakash Raj Slams Viral Post Linking RCB's WPL Win to Religion ವುಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿ ಗೆಲುವನ್ನು ಧರ್ಮಕ್ಕೆ ಹೋಲಿಸಿ ಟ್ವೀಟ್‌ ಮಾಡಿದ ಪೇಜ್‌ ವಿರುದ್ಧ ನಟ ಪ್ರಕಾಶ್‌ ರಾಜ್‌ ಕಿಡಿಕಾರಿದ್ದಾರೆ.

 

Read Full Story

07:36 PM (IST) Feb 09

14 ವರ್ಷದ ಹಿಂದೆ ರಿಲೀಸ್‌ ಆಗಿದ್ದ 3 ನಿಮಿಷ 54 ಸೆಕೆಂಡ್‌ನ ವಿಡಿಯೋವನ್ನ ಕದ್ದುಮುಚ್ಚಿ ನೋಡಿದ್ರು ಜನ!

'ದಿ ಡರ್ಟಿ ಪಿಕ್ಚರ್' ಚಿತ್ರದ 'ಊ ಲಾ ಲಾ' ಹಾಡು ವಿದ್ಯಾ ಬಾಲನ್ ವೃತ್ತಿಜೀವನದಲ್ಲಿ ದೊಡ್ಡ ವಿವಾದ ಸೃಷ್ಟಿಸಿತ್ತು. ಆದರೆ, 14 ವರ್ಷಗಳ ಹಿಂದೆ ಬಿಡುಗಡೆಯಾದ ಈ ಹಾಡು, ಕಡಿಮೆ ಬಜೆಟ್‌ನ ಚಿತ್ರವನ್ನು 117 ಕೋಟಿ ಗಳಿಸುವಂತೆ ಮಾಡಿ ಅನೇಕ ದಾಖಲೆಗಳನ್ನು ಮುರಿದಿತ್ತು.
Read Full Story

07:06 PM (IST) Feb 09

ಪೂರ್ವಜರ ಊರಿಗೆ ಭೇಟಿ ನೀಡಿ ಪೂರ್ವಾಶ್ರಮದ ತಾಯಿಯ ಭೇಟಿ ಮಾಡಿದ ಉತ್ತರ ಪ್ರದೇಶ ಸಿಎಂ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಉತ್ತರಾಖಂಡ್‌ನಲ್ಲಿರುವ ತಮ್ಮ ಪೂರ್ವಜರ ಊರಾದ ಪಂಚೂರ್‌ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಪೂರ್ವಾಶ್ರಮದ ತಾಯಿಯನ್ನು ಭೇಟಿಯಾಗಿ, ಊರಿನ ಮಕ್ಕಳೊಂದಿಗೆ ಬೆರೆತು, ತಮ್ಮ ಸರಳತೆಯಿಂದ ಗ್ರಾಮಸ್ಥರ ಮನಗೆದ್ದರು.
Read Full Story

06:39 PM (IST) Feb 09

ಡೈವೋರ್ಸ್‌ ಪಡೆದ ಒಂದೇ ತಿಂಗಳಿಗೆ ಪ್ರಖ್ಯಾತ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ 24 ವರ್ಷದ ಚಿನ್ನು ಪಾಪು ಆತ್ಮ*ಹತ್ಯೆ!

ಕಾಸರಗೋಡಿನ ಖ್ಯಾತ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಚಿನ್ನು ಪಾಪು ಅಲಿಯಾಸ್ ಕೆ.ರೇಷ್ಮಾ (24) ತಮ್ಮ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇತ್ತೀಚೆಗಷ್ಟೇ ವಿಚ್ಛೇದನ ಪಡೆದಿದ್ದ ಅವರ ಸಾವಿನ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story

06:34 PM (IST) Feb 09

ಈ ದಿನಾಂಕದಂದು ಮೊದಲ ಮಗಳು ಹುಟ್ಟಿದ್ರೆ, ತಂದೆಗಿದೆ ಕೋಟ್ಯಾಧಿಪತಿಯಾಗುವ ಯೋಗ!

ಮನೆಯಲ್ಲಿ ಮೊದಲ ಮಗು ಹೆಣ್ಣಾಗಿ ಹುಟ್ಟಿದರೆ, ಸಾಕ್ಷಾತ್ ಮಹಾಲಕ್ಷ್ಮಿಯೇ ಮನೆಗೆ ಬಂದಂತೆ ಎಂದು ಭಾವಿಸಲಾಗುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ದಿನಾಂಕಗಳಂದು ಜನಿಸಿದ ಹೆಣ್ಣುಮಕ್ಕಳು ತಮ್ಮ ತಂದೆಗೆ ಅದೃಷ್ಟವನ್ನು ತರುತ್ತಾರೆ. ಹಾಗಾದ್ರೆ, ಆ ದಿನಾಂಕಗಳು ಯಾವುವು ಅಂತ ನೋಡೋಣ ಬನ್ನಿ.

Read Full Story

06:01 PM (IST) Feb 09

Zodiac Signs - ಈ 5 ರಾಶಿಯವರು ಸಖತ್ ಟ್ಯಾಲೆಂಟೆಡ್! ಅವಕಾಶಗಳು ಇವರನ್ನು ಹುಡುಕಿ ಬರುತ್ತೆ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ರಾಶಿಯು ವಿಭಿನ್ನ ಗುಣಲಕ್ಷಣ ಮತ್ತು ಪ್ರತಿಭೆಯನ್ನು ಹೊಂದಿರುತ್ತದೆ. ಕೆಲವು ರಾಶಿಯವರ ವಿಶೇಷ ಸ್ವಭಾವ, ಉತ್ಸಾಹ, ಸೃಜನಶೀಲತೆ ಮತ್ತು ಪರಿಶ್ರಮ ಅವರನ್ನು ಎಲ್ಲರಿಗಿಂತ ಭಿನ್ನವಾಗಿಸುತ್ತದೆ. ಆ ರಾಶಿಗಳು ಯಾವುವು? ನೋಡೋಣ ಬನ್ನಿ

Read Full Story

05:42 PM (IST) Feb 09

Bigg Boss ಸ್ಪರ್ಧಿಗಳಿಗೆ ಬಿಗ್​ ಸರ್​ಪ್ರೈಸ್​ ಕೊಟ್ಟ ರಾಖಿ ಸಾವಂತ್​! ಡ್ರೆಸ್​ ನೋಡಿ ಎಲ್ಲರೂ ಸುಸ್ತು

ವಿವಾದಗಳ ರಾಣಿ ರಾಖಿ ಸಾವಂತ್  ಬಿಗ್‌ಬಾಸ್ ಮನೆಗೆ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಆದಿಲ್ ಖಾನ್ ಜೊತೆಗಿನ ವಿವಾದ, ಮುಕೇಶ್ ಅಂಬಾನಿ ಬಗ್ಗೆ ಹೇಳಿಕೆಗಳ ನಂತರ, ಇದೀಗ ಬಿಗ್‌ಬಾಸ್ ಮನೆಯಲ್ಲಿ ಆಟವನ್ನೇ ಬದಲಾಯಿಸುವುದಾಗಿ ಹೇಳಿ ಪ್ರವೇಶಿಸಿದ್ದಾರೆ.

Read Full Story

05:39 PM (IST) Feb 09

ಏನಿದು ಬಜಾಜ್ ಚೇತಕ್ C25 ವಿಶೇಷತೆ? WPL ಗೆದ್ದ ಆರ್‌ಸಿಬಿ ಗರ್ಲ್ಸ್‌ಗೆ ಸೇರಿದ ಲೇಟೆಸ್ಟ್ ಎಲೆಕ್ಟ್ರಿಕ್ ರೈಡ್ ಸೆನ್ಸೇಷನ್‌!

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮಹಿಳಾ ತಂಡದ ಐತಿಹಾಸಿಕ ವಿಜಯವನ್ನು ಆಚರಿಸುತ್ತಿರುವ ಬಜಾಜ್ ಆಟೋ ತನ್ನ ಹೊಸ ಮಾದರಿಯ ಬಜಾಜ್ ಚೇತಕ್ C25 ಅನ್ನು ಇಡೀ ತಂಡಕ್ಕೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದೆ.

 

Read Full Story

05:08 PM (IST) Feb 09

ಪಿಎಫ್‌ ಹಣ ಪಡೆಯೋದು ಇನ್ನು Paytm, GPay ಮಾಡೋವಷ್ಟೇ ಸುಲಭ, ಹೊಸ ಅಪ್ಲಿಕೇಶನ್‌ ಮಾರ್ಚ್‌ ಅಂತ್ಯದಲ್ಲಿ ಲಾಂಚ್‌!

UMANG ಅಪ್ಲಿಕೇಶನ್‌ಗಿಂತ ಭಿನ್ನವಾಗಿರುವ ಹೊಸ EPFO ​​ಅಪ್ಲಿಕೇಶನ್ ಯೂಸರ್‌ಗಳ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಲಿದ್ದು. ಇದು BHIM ಅಪ್ಲಿಕೇಶನ್ ಮತ್ತು ಇತರ UPI ಅಪ್ಲಿಕೇಶನ್‌ಗಳಿಗೂ ಲಿಂಕ್ ಆಗುತ್ತದೆ.

 

Read Full Story

04:53 PM (IST) Feb 09

ತರಗತಿಯಲ್ಲೇ ಕ್ಲಾಸ್‌ಮೇಟ್‌ಗೆ ಗುಂಡಿಕ್ಕಿ ತಾನು ಸಾವಿಗೆ ಶರಣಾದ ಕಾನೂನು ವಿದ್ಯಾರ್ಥಿ

ಪಂಜಾಬ್‌ನ ಕಾಲೇಜೊಂದರಲ್ಲಿ, ಕಾನೂನು ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ವಿದ್ಯಾರ್ಥಿನಿಗೆ ತರಗತಿಯಲ್ಲೇ ಗುಂಡಿಕ್ಕಿ ತಾನು ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ. ಈ ಭಯಾನಕ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Read Full Story

04:51 PM (IST) Feb 09

Spirit ಚಿತ್ರದಿಂದ ಪ್ರಕಾಶ್​ ರಾಜ್​ ಕಿಕ್​ಔಟ್​! ನಿಜಕ್ಕೂ ಆಗಿದ್ದೇನು? ಮೌನ ಮುರಿದ ನಟ

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ, ಪ್ರಭಾಸ್ ನಟನೆಯ 'ಸ್ಪಿರಿಟ್' ಚಿತ್ರದಿಂದ ನಟ ಪ್ರಕಾಶ್ ರಾಜ್ ಅವರನ್ನು ತೆಗೆದುಹಾಕಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಚಿತ್ರೀಕರಣದ ವೇಳೆ ನಿರ್ದೇಶಕರೊಂದಿಗೆ ವಾಗ್ವಾದ ನಡೆದಿದ್ದೇ ಇದಕ್ಕೆ ಕಾರಣ ಎನ್ನಲಾಗಿತ್ತು.   ಸ್ವತಃ ಪ್ರಕಾಶ್ ರಾಜ್  ಈ ಬಗ್ಗೆ ಹೇಳಿದ್ದೇನು? 

Read Full Story

04:28 PM (IST) Feb 09

ಚಂದ್ರಯಾನ-4 ಲ್ಯಾಂಡಿಂಗ್‌ ಸೈಟ್‌ ಘೋಷಿಸಿದ ಇಸ್ರೋ, ಚಂದ್ರನ ದಕ್ಷಿಣ ಧ್ರುವದ ಮಾನ್ಸ್ ಮೌಟನ್‌ ಬೆಟ್ಟದಲ್ಲಿ ಇಳಿಯಲಿದೆ ನೌಕೆ!

ISRO Chandrayaan-4: Mons Mouton Identified as Lunar Landing Sitea ಚಂದ್ರಯಾನ-4 ಗಾಗಿ ಇಸ್ರೋ ಲ್ಯಾಂಡಿಂಗ್ ಸ್ಥಳವನ್ನು ಗುರುತಿಸಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿರುವ ಮಾನ್ಸ್ ಮೌಟನ್ ಪರ್ವತದ ಮೇಲೆ ಇಳಿಯಲಿದೆ. ಈ ವೇಳೆ ಚಂದ್ರನ ಮಣ್ಣು ಹಾಗೂ ಕಲ್ಲಿನ ತುಣುಕನ್ನು ಭೂಮಿಗೆ ತರಲಿದೆ.

 

Read Full Story

03:46 PM (IST) Feb 09

ಬೆಚ್ಚಗಾಗಲು ಇನ್ಕ್ಯುಬೇಟರ್‌ಲ್ಲಿಟ್ಟ ಮಗು ಸಜೀವ ದಹನ; ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಆಗಷ್ಟೇ ಜನಿಸಿದ ನವಜಾತ ಶಿಶು ಸಾವು

ಕಾನ್ಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ವಾರ್ಮರ್ ಯಂತ್ರಕ್ಕೆ ಬೆಂಕಿ ತಗುಲಿ ನವಜಾತ ಹೆಣ್ಣು ಶಿಶುವೊಂದು ಸಜೀವ ದಹನಗೊಂಡಿದೆ. ಜನಿಸಿದ ಕೆಲವೇ ಗಂಟೆಗಳಲ್ಲಿ ನಡೆದ ಈ ದುರಂತಕ್ಕೆ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ದೂರು ದಾಖಲಿಸಿದ್ದಾರೆ.
Read Full Story

03:15 PM (IST) Feb 09

CNG Vs Petrol - ಯಾವ ಕಾರು ಬೆಸ್ಟ್? ಯಾವುದು ನಿಮಗೆ ಲಾಭದಾಯಕ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ಹೊಸ ಕಾರು ಖರೀದಿಸುವಾಗ ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಗಳಲ್ಲಿ ಯಾವುದು ಉತ್ತಮ ಎಂಬ ಗೊಂದಲವಿದೆಯೇ? ಪೆಟ್ರೋಲ್ ಕಾರುಗಳು ಉತ್ತಮ ಪರ್ಫಾಮೆನ್ಸ್ ನೀಡಿದರೆ, ಸಿಎನ್‌ಜಿ ಕಾರುಗಳು ಕಡಿಮೆ ಖರ್ಚಿನಲ್ಲಿ ಹೆಚ್ಚು ಮೈಲೇಜ್ ನೀಡುತ್ತವೆ.
Read Full Story

02:12 PM (IST) Feb 09

ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕನ ಚಡ್ಡಿ ಕತ್ತರಿಸಿ 50 ಲಕ್ಷ ಮೌಲ್ಯದ ಚಿನ್ನ ಹೊರತೆಗೆದ ಕಸ್ಟಮ್ಸ್ ಅಧಿಕಾರಿಗಳು

ದುಬೈನಿಂದ ಬಂದ ಪ್ರಯಾಣಿಕನೊಬ್ಬ ಚಡ್ಡಿಯಲ್ಲಿ ಚಿನ್ನ ಅಡಗಿಸಿಟ್ಟು ಸಾಗಿಸುತ್ತಿದ್ದಾಗ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಆತನಿಂದ ಒಟ್ಟು 96 ಲಕ್ಷ ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದೆ ಇದರಲ್ಲಿ 45 ಲಕ್ಷ ಮೌಲ್ಯದ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಒಳಉಡುಪಿನಲ್ಲಿ ಬಚ್ಚಿಡಲಾಗಿತ್ತು. 

Read Full Story

01:28 PM (IST) Feb 09

Royal Enfield Price - ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಬೆಲೆಯಲ್ಲಿ ಇಳಿಕೆ ಇಲ್ಲಿದೆ ಪೂರ್ತಿ ಲಿಸ್ಟ್

ಹೊಸ ಜಿಎಸ್‌ಟಿ 2.0 ನಿಯಮಗಳಿಂದಾಗಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಬೆಲೆಗಳು ಬದಲಾಗಿವೆ. ಇದರಿಂದಾಗಿ, ಗ್ರಾಹಕರು ತಮ್ಮ ಬಜೆಟ್‌ಗೆ ತಕ್ಕಂತೆ ಬೈಕ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
Read Full Story

01:16 PM (IST) Feb 09

ಗ್ರಾಹಕರಿಗೆ ಕಡಿಮೆ ಬೆಲೆಯ ಬಂಪರ್ ಆಫರ್ ನೀಡಿದ ರಿಲಯನ್ಸ್ ಜಿಯೋ; ಎದುರಾಳಿಗಳು ಗಢ ಗಢ

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಅನ್‌ಲಿಮಿಟೆಡ್ ಕರೆಗಳು, ದಿನಕ್ಕೆ 100 ಎಸ್‌ಎಂಎಸ್‌ ಮತ್ತು ಪ್ರತಿದಿನ 2GB ಡೇಟಾ ಸಿಗಲಿದೆ.

Read Full Story

01:02 PM (IST) Feb 09

ಬೆಳಗ್ಗೆ ಸಾಫ್ಟ್‌ವೇರ್, ರಾತ್ರಿ ಹಾರ್ಡ್‌ವೇರ್ - BMW ಕಾರ್‌, ವಿದೇಶ ಪ್ರವಾಸಕ್ಕಾಗಿ ಕಳ್ಳನಾಗಿ ಬದಲಾದ ಟೆಕ್ಕಿ

ಐಷಾರಾಮಿ ಜೀವನ ನಡೆಸುವ ಸಲುವಾಗಿ 26ಕ್ಕೂ ಅಧಿಕ ಮನೆಗಳ್ಳತನ ಮಾಡಿದ್ದ ಐಟಿ ಉದ್ಯೋಗಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಾಫ್ಟ್‌ವೇರ್ ಇಂಜಿನೀಯರ್ ಆಗಿದ್ದ ಆರೋಪಿ, ಕದ್ದ ಹಣದಿಂದ ಬಿಎಂಡಬ್ಲ್ಯು ಕಾರ್ ಖರೀದಿಸಿ, ವಿದೇಶ ಪ್ರವಾಸ ಮಾಡುತ್ತಿದ್ದನು.

Read Full Story

01:01 PM (IST) Feb 09

ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್ - ಅಮ್ಮ ಹೊಸದಾಗಿ ಮದುವೆಯಾದ ಮಗ, ಗರ್ಭಿಣಿ ಸೊಸೆ ಸಾವು

ಮದುವೆಗೆಂದು ಒಂದೇ ಬೈಕ್‌ನಲ್ಲಿ ಹೊರಟಿದ್ದ ತಾಯಿ, ಮಗ ಹಾಗೂ ಗರ್ಭಿಣಿ ಸೊಸೆ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅತಿವೇಗದಿಂದ ಚಲಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.

Read Full Story

12:52 PM (IST) Feb 09

ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ದ ಆಡಬೇಕು ಅಂದ್ರೆ...? ಐಸಿಸಿ ಮುಂದೆ 3 ಪ್ರಮುಖ ಡಿಮ್ಯಾಂಡ್ ಇಟ್ಟ ಪಾಕಿಸ್ತಾನ!

ಕರಾಚಿ: ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರದಿಂದ ಹಿಂದೆ ಸರಿಯಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಐಸಿಸಿ ಮುಂದೆ ಹಲವು ಷರತ್ತುಗಳನ್ನು ಇಟ್ಟಿದೆ. ಪಿಸಿಬಿ ಇಟ್ಟಿರುವ ಮೂರಕ್ಕೂ ಹೆಚ್ಚು ಬೇಡಿಕೆಗಳಲ್ಲಿ ಪ್ರಮುಖವಾದವುಗಳು ಇಲ್ಲಿವೆ.

 

Read Full Story

12:04 PM (IST) Feb 09

ತಾಯಿಯಾದ ತೇಜ್‌ ಪ್ರತಾಪ್ ಯಾದವ್ ಪ್ರೇಯಸಿ ಅನುಷ್ಕಾ ಯಾದವ್ - ನನಗೂ ಮಗುವಿಗೂ ಸಂಬಂಧ ಇಲ್ಲ ಎಂದ ಲಾಲೂ ಪುತ್ರ

ಆರ್‌ಜೆಡಿ ಉಚ್ಚಾಟಿತ ನಾಯಕ ತೇಜ್ ಪ್ರತಾಪ್ ಯಾದವ್, ತಮ್ಮ ಪ್ರೇಯಸಿ ಎನ್ನಲಾದ ಅನುಷಾ ಯಾದವ್‌ಗೆ ಜನಿಸಿದ ಮಗುವಿಗೆ ತಾನು ತಂದೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದ್ದು, ವೈರಲ್ ಫೋಟೋ ಸುದ್ದಿ ಸುಳ್ಳು ಎಂದು ಅವರು ಹೇಳಿದ್ದಾರೆ.

Read Full Story

10:52 AM (IST) Feb 09

ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ದಿಢೀರ್ ₹2 ಸಾವಿರ ಏರಿಕೆ! ಬೆಂಗಳೂರಲ್ಲಿಂದು ಚಿನ್ನದ ರೇಟ್ ಎಷ್ಟು?

ಬೆಂಗಳೂರು: ಈ ತಿಂಗಳ ಆರಂಭದಲ್ಲಿ ನಿರಂತರ ಕುಸಿತ ಕಂಡಿದ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಾಣುತ್ತಿದೆ. ಇದು 'ಚಿನ್ನ' ಎನ್ನುವ ಗ್ರಾಹಕರ ನಿದ್ದೆಗೆಡಿಸಿದೆ. ಬೆಂಗಳೂರಿನಲ್ಲಿ ಇಂದಿನ ಚಿನ್ನ ಬೆಳ್ಳಿ ದರವೆಷ್ಟು? ನೋಡೋಣ ಬನ್ನಿ.

 

Read Full Story

07:33 AM (IST) Feb 09

Gold Mine - ವಿಶ್ವದ ನಂ.1 ಚಿನ್ನದ ಗಣಿ! ವರ್ಷಕ್ಕೆ 52 ಟನ್ ಉತ್ಪಾದನೆ; ಇದಕ್ಕಾಗಿ ಸ್ವಂತ ಏರ್‌ಪೋರ್ಟ್, ಬಂದರು

ವಿಶ್ವದ ನಂಬರ್ 1 ಚಿನ್ನದ ಗಣಿ ವರ್ಷಕ್ಕೆ 52 ಟನ್ ಚಿನ್ನ ಉತ್ಪಾದಿಸುತ್ತದೆ. ಈ ಗಣಿಗಾಗಿಯೇ ಪ್ರತ್ಯೇಕ ವಿಮಾನ ನಿಲ್ದಾಣವೂ ಇದೆ. ಈ ಅಚ್ಚರಿಯ ಗಣಿಯ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Read Full Story

More Trending News