Published : Feb 08, 2026, 06:11 AM ISTUpdated : Feb 08, 2026, 10:58 PM IST

India Latest News Live: ಗಂಡನಿಂದ ದೂರಾದ ನಟಿಗೆ ಡಿವೋರ್ಸ್‌ನಿಂದ ಸಿಕ್ಕಿದ್ದು ಮಾರಕ ಕ್ಯಾನ್ಸರ್; ಕಣ್ಣೀರಿನ ಕಥೆ ಬಿಚ್ಚಿಟ್ಟ ನಿರ್ಮಾಪಕ!

ಸಾರಾಂಶ

ವಾಷಿಂಗ್ಟನ್‌: ರಷ್ಯಾದಿಂದ ತೈಲ ಖರೀದಿಗಾಗಿ ಭಾರತದ ಮೇಲೆ ಹೆಚ್ಚುವರಿಯಾಗಿ ವಿಧಿಸಿದ್ದ ಶೇ.25ರಷ್ಟು ಪ್ರತಿ ತೆರಿಗೆಯನ್ನು ಅಮೆರಿಕ ರದ್ದು ಮಾಡಿ ಆದೇಶ ಹೊರಡಿಸಿದೆ. ಇದೇ ವೇಳೆ, ಮತ್ತೇನಾದರೂ ಭಾರತ ಸರ್ಕಾರ ರಷ್ಯಾದಿಂದ ಮತ್ತೆ ನೇರವಾಗಿ ಅಥವಾ ಪರೋಕ್ಷವಾಗಿ ತೈಲ ಖರೀದಿ ಮಾಡಿದ್ದು ಗಮನಕ್ಕೆ ಬಂದರೆ ಮತ್ತೆ ಹೆಚ್ಚುವರಿ ತೆರಿಗೆ ವಿಧಿಸಲು ಅವಕಾಶವಿದೆ ಎಂದು ಎಚ್ಚರಿಕೆಯನ್ನೂ ನೀಡಲಾಗಿದೆ. ಭಾರತವು ರಷ್ಯಾ ತೈಲ ಖರೀದಿ ಸ್ಥಗಿತಗೊಳಿಸುವ ಭರವಸೆ ನೀಡಿದೆ. ಒಂದು ವೇಳೆ ಭಾರತ ಮತ್ತೆ ರಷ್ಯಾದಿಂದ ತೈಲ ಖರೀದಿಸುತ್ತಿರುವುದು ಗಮನಕ್ಕೆ ಬಂದರೆ ಮತ್ತೆ ತೆರಿಗೆ ‍ವಿಧಿಸುವ ಅಥವಾ ಅನ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಟ್ರಂಪ್‌ ತಂಡ ನಿರ್ಧಾರ ಮಾಡಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Actress jewel mary

10:58 PM (IST) Feb 08

ಗಂಡನಿಂದ ದೂರಾದ ನಟಿಗೆ ಡಿವೋರ್ಸ್‌ನಿಂದ ಸಿಕ್ಕಿದ್ದು ಮಾರಕ ಕ್ಯಾನ್ಸರ್; ಕಣ್ಣೀರಿನ ಕಥೆ ಬಿಚ್ಚಿಟ್ಟ ನಿರ್ಮಾಪಕ!

ಚಿತ್ರರಂಗದಲ್ಲಿ ಖ್ಯಾತ ನಟಿ. ಕೌಟುಂಬಿಕ ಸಂಸಾರದ ದೋಣಿ ಸುಸೂತ್ರವಾಗಿ ಸಾಗುತ್ತಿದೆ ಎನ್ನುವಾಗ ಬಂದ ಬಿರುಕು, ಸರಿ ಮಾಡಲಿ 3 ವರ್ಷ ಹೆಣಗಾಡಿದರೂ ಹೊಂದಿಕೊಳ್ಳದೆ ಡಿವೋರ್ಸ್ ಅನಿವಾರ್ಯವಾಯಿತು. ಆಗಿದ್ದಾಗಲಿ ಎಂದು ಡಿವೋರ್ಸ್ ಕೊಟ್ಟು ನೋವಿನಲ್ಲಿ ಬದುಕ್ಕಿದ್ದವಳಿಗೆ ಜೀವಕ್ಕೆ ಎರವಾಯ್ತು ಮಹಾಮಾರಿ ಕ್ಯಾನ್ಸರ್!

Read Full Story

10:26 PM (IST) Feb 08

ಭಾರತ ಎದುರು ಮಿಂಚಿದ್ದ USA ಕ್ರಿಕೆಟರ್ ಹರ್ಮೀತ್ ಸಿಂಗ್‌ನನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದೇಕೆ? ಆತ ಮಾಡಿದ್ದೇನು?

ಒಂದು ಕಾಲದಲ್ಲಿ ಭಾರತದ ಭರವಸೆಯ ಆಟಗಾರನಾಗಿದ್ದ ಹರ್ಮೀತ್ ಸಿಂಗ್ ಈಗ ಅಮೆರಿಕ ತಂಡದ ಪರ ಆಡುತ್ತಿದ್ದಾರೆ. ಮುಂಬೈನ ರೈಲ್ವೇ ಪ್ಲಾಟ್‌ಫಾರ್ಮ್‌ಗೆ ಕಾರು ಚಲಾಯಿಸಿದ್ದು ಸೇರಿದಂತೆ ಹಿಂದಿನ ವಿವಾದಗಳ ನಡುವೆಯೂ, ಅವರು ಅಮೆರಿಕನ್ ಕ್ರಿಕೆಟ್‌ನಲ್ಲಿ ಯಶಸ್ಸು ಕಂಡಿದ್ದಾರೆ.
Read Full Story

10:02 PM (IST) Feb 08

ಬರೋಬ್ಬರಿ 27 ಕಿ.ಮೀ ಮೈಲೇಜ್, ಸೇಫ್ಟಿ ವಿಚಾರದಲ್ಲೂ ಬೆಸ್ಟ್ - ಬಜೆಟ್ ಫ್ರೆಂಡ್ಲಿ ಫ್ಯಾಮಿಲಿ ಕಾರ್ ಇದೇ ನೋಡಿ!

ಪ್ರತಿ ಕೆಜಿಗೆ 26.99 ಕಿ.ಮೀ ಮೈಲೇಜ್, 6 ಏರ್‌ಬ್ಯಾಗ್‌ಗಳಂತಹ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಆಧುನಿಕ ಫೀಚರ್‌ಗಳೊಂದಿಗೆ ಬರುವ ಟಾಟಾ ಪಂಚ್ ಸಿಎನ್‌ಜಿ ಕಾರು, ಮಧ್ಯಮ ವರ್ಗದ ಕುಟುಂಬಗಳಿಗೆ ಒಂದು ಭರವಸೆಯ ಆಯ್ಕೆಯಾಗಿದೆ. ಇದೇ ಕಾರಣಕ್ಕೆ ಹೆಚ್ಚಿನ ಸಂಖ್ಯೆಯ ಜನರು ಈ ಕಾರನ್ನು ಖರೀದಿಸುತ್ತಿದ್ದಾರೆ.

Read Full Story

09:35 PM (IST) Feb 08

ಅಬ್ಬಬ್ಬಾ, ಬರೋಬ್ಬರಿ 34 ಕಿ.ಮೀ ಮೈಲೇಜ್! ಕೇವಲ ₹4.7 ಲಕ್ಷಕ್ಕೆ ಸಿಗುವ ಬೆಸ್ಟ್ ಕಾರುಗಳಿವು!

ಭಾರತದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದೆ. ಹೀಗಾಗಿ, ಮಧ್ಯಮ ವರ್ಗದ ಜನರು ಈಗ ಕಾರು ಖರೀದಿಸುವಾಗ ಸ್ಟೈಲ್‌ಗಿಂತ ಹೆಚ್ಚಾಗಿ ಮೈಲೇಜ್ ಮತ್ತು ಕಡಿಮೆ ಬೆಲೆಗೆ ಆದ್ಯತೆ ನೀಡುತ್ತಿದ್ದಾರೆ. 2026ರ ಪ್ರಕಾರ, ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಮತ್ತು ಅಗ್ಗದ ಬೆಲೆಗೆ ಸಿಗುವ ಕಾರುಗಳು ಯಾವುವು ನೋಡೋಣ.

Read Full Story

09:12 PM (IST) Feb 08

ಬುರ್ಖಾ ಧರಿಸಿ ಲೇಡೀಸ್ ಕೋಚ್‌ನಲ್ಲಿ ಯುವಕನ ಪಯಣ - ಮಹಿಳೆಯರು ವಿರೋಧಿಸುತ್ತಿದ್ದಂತೆ ಚಲಿಸುವ ರೈಲಿನಿಂದಲೇ ಕೆಳಗೆ ಹಾರಿದ

ಮುಂಬೈ ಲೋಕಲ್ ರೈಲಿನ ಲೇಡೀಸ್ ಬೋಗಿಯಲ್ಲಿ ಬುರ್ಖಾ ಧರಿಸಿ ಪ್ರಯಾಣಿಸುತ್ತಿದ್ದ ಪುರುಷನೊಬ್ಬನನ್ನು ಮಹಿಳಾ ಪ್ರಯಾಣಿಕರು ಪತ್ತೆಹಚ್ಚಿದ್ದಾರೆ. ಮಹಿಳೆಯರು ಪ್ರಶ್ನಿಸಿ ಪೊಲೀಸರಿಗೆ ಒಪ್ಪಿಸುವ ಬೆದರಿಕೆ ಹಾಕಿದಾಗ, ಆತ ಚಲಿಸುವ ರೈಲಿನಿಂದ ಜಿಗಿದಿದ್ದಾನೆ. ಈತನ ವಿರುದ್ಧ ಪ್ರಕರಣ ದಾಖಲಾಗಿದೆ.

Read Full Story

08:26 PM (IST) Feb 08

ಸ್ವಪ್ನ ಶಾಸ್ತ್ರದ ಪ್ರಕಾರ ಈ ರೀತಿ ಕನಸು ಬಿದ್ರೆ ಸಾಕು, ರಾತ್ರೋರಾತ್ರಿ ನಿಮ್ಮ ಲೈಫೇ ಚೇಂಜ್ ಆಗುತ್ತೆ!

ಸ್ವಪ್ನ ಶಾಸ್ತ್ರದ ಪ್ರಕಾರ, ನಮಗೆ ಬೀಳುವ ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿರುತ್ತೆ. ಕೆಲವು ಕನಸುಗಳು ಕೆಟ್ಟದ್ದನ್ನು ಸೂಚಿಸಿದರೆ, ಇನ್ನು ಕೆಲವು ನಮ್ಮ ಜೀವನವನ್ನೇ ಬದಲಾಯಿಸುವ ಶುಭ ಸಂಕೇತಗಳಾಗಿರುತ್ತವೆ. ರಾತ್ರೋರಾತ್ರಿ ನಿಮ್ಮ ಬದುಕನ್ನೇ ಬದಲಿಸಬಲ್ಲ ಒಂದು ಅದ್ಭುತ ಕನಸಿನ ಬಗ್ಗೆ ಇಲ್ಲಿದೆ ಮಾಹಿತಿ.

Read Full Story

08:22 PM (IST) Feb 08

ಉಳಿದ ಆಹಾರವನ್ನು ತೊಳೆದು ಮರು ಬಳಸುತ್ತಿದ್ದ ಹೊಟೇಲ್ - ವೀಡಿಯೋ ವೈರಲ್

ರೆಸ್ಟೋರೆಂಟ್ ಒಂದರಲ್ಲಿ, ಮಾರಾಟವಾಗದೆ ಉಳಿದ ಆಹಾರವನ್ನು ನೀರಿನಲ್ಲಿ ತೊಳೆದು ಮರುದಿನ ಬಡಿಸಲು ಸಿದ್ಧತೆ ನಡೆಸುತ್ತಿದ್ದ ದೃಶ್ಯ ವೈರಲ್ ಆಗಿದೆ. ಈ ವೀಡಿಯೋದಿಂದಾಗಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆಯು ರೆಸ್ಟೋರೆಂಟ್‌ ಮುಚ್ಚಿ, ಮಾಲೀಕರಿಗೆ ದಂಡ ವಿಧಿಸಿದೆ.

Read Full Story

07:22 PM (IST) Feb 08

'ಬ್ಯಾಗ್ ಪ್ಯಾಕ್ ಮಾಡಿ ರೆಡಿಯಾಗು' - ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಹೀಗಂದಿದ್ದು ಯಾರಿಗೆ ಗೊತ್ತಾ?

ಮುಂಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಟೀಂ ಇಂಡಿಯಾ, ಯುಎಸ್‌ಎ ಎದುರು ಶುಭಾರಂಭ ಮಾಡಿದೆ. ಈ ಪಂದ್ಯಕ್ಕೂ ಮುನ್ನ ದಿನ ನಡೆದ ಘಟನೆಯೊಂದು ಇದೀಗ ವೈರಲ್ ಆಗಿದೆ. ಏನದು? ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಕಾಲ್ ಮಾಡಿದ್ದು ಯಾರಿಗೆ ನೋಡೋಣ ಬನ್ನಿ.

 

Read Full Story

06:38 PM (IST) Feb 08

ಕರ್ನಾಟಕದಲ್ಲಿ ಬೇಟೆ, ಕೇರಳದಲ್ಲಿ ಹುಲಿ ಚರ್ಮ ಉಗುರು ಮಾರಾಟಕ್ಕೆ ಯತ್ನಿಸಿದ ಖದೀಮರ ಬಂಧನ

ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಹುಲಿಯ ಚರ್ಮ, ಉಗುರು ಮತ್ತು ಹಲ್ಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಏಳು ಜನರ ಗ್ಯಾಂಗನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಗೆ ಕರ್ನಾಟಕದ ಬೇಟೆಗಾರರೊಂದಿಗೆ ಸಂಪರ್ಕವಿರುವ ಶಂಕೆ ವ್ಯಕ್ತವಾಗಿದೆ.

Read Full Story

05:47 PM (IST) Feb 08

50ನೇ ವಸಂತಕ್ಕೆ ಕಾಲಿರಿಸಿದ ಅಭಿಷೇಕ್ ಬಚ್ಚನ್ - ಪತಿಗೆ ಐಶ್ ಮಾಡಿದ ವಿಶ್‌ಗೆ ಅಭಿಮಾನಿಗಳು ಫಿದಾ

Abhishek Bachchan 50th birthday: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರ 50ನೇ ಹುಟ್ಟುಹಬ್ಬಕ್ಕೆ ಪತ್ನಿ ಐಶ್ವರ್ಯಾ ರೈ ಇನ್ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ.

Read Full Story

05:35 PM (IST) Feb 08

ಸಂಗಾತಿ ಹುಟ್ಟಿದ ದಿನ ಹೀಗಿದ್ದರೆ ಜೀವನಪೂರ್ತಿ ಆನಂದವೋ ಆನಂದ - ನಿಮ್ಮ ಮ್ಯಾಚ್​ ಹೀಗಿರಲಿ

ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಜನ್ಮ ದಿನಾಂಕದಿಂದ ಅದೃಷ್ಟ ಸಂಖ್ಯೆಯನ್ನು ಲೆಕ್ಕಾಚಾರ ಮಾಡಬಹುದು.   1 ರಿಂದ 9 ರವರೆಗಿನ  ಸಂಖ್ಯೆಯ ವ್ಯಕ್ತಿತ್ವ,  ಪ್ರೇಮ ಜೀವನ ಮತ್ತು ವೈವಾಹಿಕ ಹೊಂದಾಣಿಕೆ  ವಿವರಿಸುತ್ತದೆ. ಯಾವ ಸಂಖ್ಯೆ ಜೋಡಿಯಾಗುತ್ತವೆ ಮತ್ತು ಯಾವುದು ಸರಿಹೊಂದುವುದಿಲ್ಲ  ಮಾಹಿತಿ ನೀಡಲಾಗಿದೆ.

Read Full Story

04:46 PM (IST) Feb 08

ಹಿಂದು-ಮುಸ್ಲಿಂ ಧರ್ಮದ ಗೋಡೆ ದಾಟಿ ಒಂದಾದ ಮೊಹಮ್ಮದ್ ಕೈಫ್-ಪೂಜಾ ಯಾದವ್ ಜೋಡಿ; ಇದು ಬಾಲಿವುಡ್‌ಗಿಂತ ರೋಚಕ ಲವ್‌ಸ್ಟೋರಿ!

ಮೊಹಮ್ಮದ್ ಕೈಫ್ ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ಫೀಲ್ಡರ್‌ಗಳಲ್ಲಿಒಬ್ಬರು. 2002ರಲ್ಲಿ ಇಂಗ್ಲೆಂಡ್ ಎದುರು ನಾಟ್‌ವೆಸ್ಟ್ ಸೀರಿಸ್ ಫೈನಲ್‌ನಲ್ಲಿ ಕೈಫ್-ಯುವಿ ಜೋಡಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದನ್ನು ಯಾವ ಕ್ರಿಕೆಟ್ ಅಭಿಮಾನಿಯೂ ಮರೆಯಲು ಸಾಧ್ಯವಿಲ್ಲ. ಬನ್ನಿ ಕೈಫ್ ಲವ್‌ಸ್ಟೋರಿ ತಿಳಿಯೋಣ

 

Read Full Story

04:03 PM (IST) Feb 08

ಮದುವೆ ಸಾಮಾಜಿಕ ಕರ್ತವ್ಯ, ಕೇವಲ ದೈಹಿಕ ಒಪ್ಪಿಗೆಯ ವಿಚಾರವಲ್ಲ - ಮೋಹನ್ ಭಾಗವತ್

ಮುಂಬೈನಲ್ಲಿ ನಡೆದ ಆರ್‌ಎಸ್‌ಎಸ್‌ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಸ್ಥ ಮೋಹನ್ ಭಾಗವತ್, ದೇಶದ ಶಕ್ತಿ ಅದರ ಆಡಳಿತದಲ್ಲಿಲ್ಲ, ಬದಲಿಗೆ ಸಮಾಜದ ಜಾಗರೂಕತೆ ಮತ್ತು ಸಾಂಪ್ರದಾಯಿಕ ಮೌಲ್ಯಗಳಲ್ಲಿದೆ ಎಂದು ಪ್ರತಿಪಾದಿಸಿದರು. 

Read Full Story

03:39 PM (IST) Feb 08

14 ವರ್ಷದ ವೈಭವ್ ಸೂರ್ಯವಂಶಿ ಇನ್ಯಾವತ್ತೂ ಅಂಡರ್-19 ವಿಶ್ವಕಪ್ ಆಡೋಕೆ ಸಾಧ್ಯವಿಲ್ಲ! ಶಾಕ್ ಕೊಟ್ಟ ಬಿಸಿಸಿಐ ರೂಲ್ಸ್‌

ಬೆಂಗಳೂರು: 2026ರ ಐಸಿಸಿ ಅಂಡರ್‌-19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ. 14 ವರ್ಷದ ವೈಭವ್ ಸೂರ್ಯವಂಶಿ, ಭಾರತ ಯುವ ಪಡೆ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ವೈಭವ್ ಇನ್ನು ಮುಂದೆ ಅಂಡರ್-19 ವಿಶ್ವಕಪ್ ಆಡಲ್ಲ. ಯಾಕೆ ಹೀಗೆ?

 

Read Full Story

02:56 PM (IST) Feb 08

ತಮ್ಮ ನಾಗಬಾಬು ಕಾರಣಕ್ಕೆ ತಾಯಿಯಿಂದ ಬಾಯಿಗೆ ಬಂದಂತೆ ಬೈಗುಳ ತಿಂದಿದ್ದ ಮೆಗಾಸ್ಟಾರ್ ಚಿರಂಜೀವಿ!

ಮೆಗಾಸ್ಟಾರ್ ಚಿರಂಜೀವಿಗೆ ತಮ್ಮ ತಮ್ಮಂದಿರು ಅಂದ್ರೆ ಪಂಚಪ್ರಾಣ. ಅದರಲ್ಲೂ ನಾಗಬಾಬು, ಪವನ್ ಕಲ್ಯಾಣ್ ಅವರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಆದರೆ, ಒಂದ್ಸಲ ತಮ್ಮ ನಾಗಬಾಬು ಮಾಡಿದ ತಪ್ಪಿಗೆ ತಾಯಿ ಅಂಜನಾದೇವಿ ಕೈಲಿ ಚಿರು ಜೋರಾಗಿಯೇ ಬೈಸ್ಕೊಂಡಿದ್ರಂತೆ. ಅಷ್ಟಕ್ಕೂ ಅಂದು ನಡೆದಿದ್ದೇನು?
Read Full Story

02:43 PM (IST) Feb 08

3ನೇ ಬಾರಿ ಪಂಜಾಬ್ ಸಿಎಂ ವಿದೇಶ ಪ್ರವಾಸಕ್ಕೆ ತಡೆಯೊಡ್ಡಿದ ಕೇಂದ್ರ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ  ವಿದೇಶ  ಪ್ರವಾಸಕ್ಕೆ ಕೇಂದ್ರ ಸರ್ಕಾರ ಮತ್ತೊಮ್ಮೆ ಅನುಮತಿ ನಿರಾಕರಿಸಿದೆ. ಜೆಕ್ ಗಣರಾಜ್ಯ ಮತ್ತು ನೆದರ್ಲ್ಯಾಂಡ್ಸ್ ಪ್ರವಾಸಕ್ಕೆ ಕೇಂದ್ರ ಸರ್ಕಾರ  ಅನುಮತಿ ನಿರಾಕರಿಸಿದ್ದು, ಕೇಂದ್ರದ ನಿರ್ಧಾರಕ್ಕೆ ಎಎಪಿ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

Read Full Story

02:10 PM (IST) Feb 08

ಹೆಂಡತಿನಾ, ಗರ್ಲ್‌ಫ್ರೆಂಡಾ? ಸಂಬಂಧದಲ್ಲಿ ಯಾರನ್ನು ಹ್ಯಾಂಡಲ್ ಮಾಡೋದು ಹೆಚ್ಚು ಕಷ್ಟ?

ಯಾವುದೇ ಸಂಬಂಧವನ್ನು ಉಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅದರಲ್ಲೂ ಗರ್ಲ್‌ಫ್ರೆಂಡ್ ಮತ್ತು ಹೆಂಡತಿಯ ವಿಷಯದಲ್ಲಿ ಇದು ಇನ್ನೂ ಸವಾಲಿನದ್ದು. ಇಬ್ಬರಲ್ಲಿ ಯಾರನ್ನು ನಿಭಾಯಿಸುವುದು ಹೆಚ್ಚು ಕಷ್ಟ ಎಂಬ ಪ್ರಶ್ನೆ ಅನೇಕರನ್ನು ಕಾಡಿರಬಹುದು. ಅದಕ್ಕೆ ಉತ್ತರ ಇಲ್ಲಿದೆ.
Read Full Story

01:37 PM (IST) Feb 08

ರಾಹುಲ್ ದ್ರಾವಿಡ್‌ರಂಥಾ ಗುರುವಿನ ಕಣ್ಣಿಗೆ ಬಿದ್ದ ಕ್ಷಣವೇ ವೈಭವ್ ಸೂರ್ಯವಂಶಿ ಗೆದ್ದು ಬಿಟ್ಟಿದ್ದ..!

ಕೆ.ಎಲ್ ರಾಹುಲ್ ಅವರಂತೆ ರಾಹುಲ್ ದ್ರಾವಿಡ್ ಅವರಿಂದ ಗುರುತಿಸಲ್ಪಟ್ಟ ಬಿಹಾರದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ. ಐಪಿಎಲ್ ಮತ್ತು ಅಂಡರ್-19 ವಿಶ್ವಕಪ್‌ನಲ್ಲಿ ದಾಖಲೆಯ ಶತಕಗಳನ್ನು ಬಾರಿಸಿ ಭಾರತ ಕ್ರಿಕೆಟ್‌ನ ಭವಿಷ್ಯದ ತಾರೆಯಾಗಿ ಹೊರಹೊಮ್ಮುತ್ತಿದ್ದಾನೆ.

Read Full Story

01:11 PM (IST) Feb 08

Dalai Lama - ಜೆಫ್ರಿ ಎಪ್‌ಸ್ಟೀನ್‌ ಯಾರೆಂದೇ ಗೊತ್ತಿಲ್ಲ, ಎಲ್ಲಾ ವರದಿ ಸುಳ್ಳು ಎಂದ ಕಚೇರಿ

ಟಿಬೆಟಿಯನ್ ಧರ್ಮಗುರು ದಲೈಲಾಮಾ ಮತ್ತು ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ ನಡುವೆ ನಂಟಿದೆ ಎಂಬ ಸೋಷಿಯಲ್ ಮೀಡಿಯಾ ವರದಿಗಳನ್ನು ದಲೈಲಾಮಾ ಕಚೇರಿ ತಳ್ಳಿಹಾಕಿದೆ. ದಲೈಲಾಮಾ ಅವರು ಎಪ್‌ಸ್ಟೀನ್‌ರನ್ನು ಎಂದಿಗೂ ಭೇಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
Read Full Story

01:03 PM (IST) Feb 08

ರಾಜ್ ವರ್ಲ್ಡ್ ಶಾಪಿಂಗ್ ಸೆಂಟರ್‌ನ ಸ್ಪಾನಲ್ಲಿ ಗುಡ್ಡೆ ಗುಡ್ಡೆ ಕಾಂಡೋಮ್ ರಾಶಿ ನೋಡಿ ಪೊಲೀಸರೇ ಶಾಕ್

ಸ್ಪಾ ಹೆಸರಿನಲ್ಲಿ ನಡೆಯುತ್ತಿದ್ದ ಲೈಂಗಿಕ ಜಾಲದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮೂವರು ಗ್ರಾಹಕರು ಸೇರಿದಂತೆ ಐವರನ್ನು ಬಂಧಿಸಲಾಗಿದ್ದು, ನಾಲ್ವರು ಮಹಿಳೆಯರನ್ನು ರಕ್ಷಿಸಲಾಗಿದೆ. ಸ್ಪಾ ಮಾಲೀಕ ತಲೆಮರೆಸಿಕೊಂಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Read Full Story

12:15 PM (IST) Feb 08

Banarasi Jacket - ಭಾರತೀಯ ಫ್ಯಾಷನ್‌ಗೆ ಜಾಗತಿಕ ಮನ್ನಣೆ - ಯುರೋಪಿಯನ್ ಅಧ್ಯಕ್ಷೆ ಧರಿಸಿದ ಈ ಸ್ಪೆಷಲ್ ಜಾಕೆಟ್ ವಿನ್ಯಾಸಗೊಳಿಸಿದ್ದು ಯಾರು ಗೊತ್ತೇ?

ಭಾರತದ 77ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡರ್ ಲೇಯೆನ್ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ, ಖ್ಯಾತ ಭಾರತೀಯ ಡಿಸೈನರ್ ರಾಜೇಶ್ ಪ್ರತಾಪ್ ಸಿಂಗ್ ವಿನ್ಯಾಸಗೊಳಿಸಿದ ಬನಾರಸಿ ಬ್ರೊಕೇಡ್ ಬಂಧಗಲಾ ಜಾಕೆಟ್ ಧರಿಸಿ ಎಲ್ಲರ ಗಮನ ಸೆಳೆದರು.

Read Full Story

11:16 AM (IST) Feb 08

ಇಂದಿನ ಚಿನ್ನ, ಬೆಳ್ಳಿ ಬೆಲೆ ನೋಡಿ ನಿರಾಳರಾದ್ರು ಚಿನ್ನಾಭರಣ ಪ್ರಿಯರು, ಹೂಡಿಕೆದಾರರು

ಗಣನೀಯ ಇಳಿಕೆಯ ನಂತರ ಏರುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ಸ್ಥಿರವಾಗಿದೆ. ಇದು ಹೂಡಿಕೆದಾರರು ಮತ್ತು ಚಿನ್ನಾಭರಣ ಪ್ರಿಯರಿಗೆ ನೆಮ್ಮದಿ ನೀಡಿದ್ದು, ಇಂದಿನ 22 ಮತ್ತು 24 ಕ್ಯಾರಟ್ ಚಿನ್ನ ಹಾಗೂ ಬೆಳ್ಳಿಯ ನಿಖರ ದರಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
Read Full Story

10:54 AM (IST) Feb 08

ಏಷ್ಯಾದಲ್ಲಿ ಅತಿ ಹೆಚ್ಚು ಕಾಂಡೋಮ್ ಬಳಸುವ ಮತ್ತು ಮಾರಾಟ ಮಾಡುವ ದೇಶ ಯಾವುದು ಗೊತ್ತಾ? ಸಾವಿರಾರು ಕೋಟಿಯ ಉದ್ಯಮವಿದು!

ಜನಸಂಖ್ಯಾ ನಿಯಂತ್ರಣ ಅಂದಾಕ್ಷಣ ನಮಗೆ ಕಾನೂನು, ನಿಯಮಗಳು ನೆನಪಾಗುತ್ತವೆ. ಆದರೆ, ಕಾಂಡೋಮ್‌ಗಳು ಈ ನಿಟ್ಟಿನಲ್ಲಿ ಸದ್ದಿಲ್ಲದೆ ಬಹುಮುಖ್ಯ ಪಾತ್ರ ವಹಿಸುತ್ತಿವೆ. ಇದರ ವ್ಯಾಪಾರ ಸಾವಿರಾರು ಕೋಟಿ ತಲುಪಿದೆ. ಹಾಗಾದರೆ, ಏಷ್ಯಾ ಖಂಡದಲ್ಲಿ ಅತಿ ಹೆಚ್ಚು ಕಾಂಡೋಮ್ ಮಾರಾಟವಾಗುವ ದೇಶ ಯಾವುದು? ಇಲ್ಲಿದೆ ಮಾಹಿತಿ.

Read Full Story

09:31 AM (IST) Feb 08

ಇನ್ನೊಮ್ಮೆ ಅಂಡರ್-19 ವಿಶ್ವಕಪ್ ಆಡೋಕೆ ಆಗಲ್ಲ ಅಂತ ಫೈನಲ್ ಹಿಂದಿನ ರಾತ್ರಿ ನಿದ್ದೆ ಮಾಡಿರಲಿಲ್ಲ ವೈಭವ್ ಸೂರ್ಯವಂಶಿ! BCCI Rule ಏನು?

ಅಂಡರ್ 19 ವಿಶ್ವಕಪ್ ಫೈನಲ್‌ನ ಹಿಂದಿನ ರಾತ್ರಿ ತಮಗೆ ನಿದ್ದೆ ಬಂದಿರಲಿಲ್ಲ ಎಂದು ವೈಭವ್ ಸೂರ್ಯವಂಶಿ ಹೇಳಿಕೊಂಡಿದ್ದಾರೆ. ಬಿಸಿಸಿಐನ 'ಒಂದು-ಟೂರ್ನಮೆಂಟ್' ನಿಯಮದಿಂದಾಗಿ ಇದು ತಮ್ಮ ಕೊನೆಯ ವಿಶ್ವಕಪ್ ಎಂಬುದು ಅವರಿಗೆ ಒತ್ತಡ ತಂದಿತ್ತು. ಈ ಫೈನಲ್‌ನಲ್ಲಿ 175 ರನ್ ಸಿಡಿಸಿ ಹಲವು ದಾಖಲೆಗಳನ್ನು ಬರೆದರು.
Read Full Story

06:36 AM (IST) Feb 08

ಐಟಿ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಆ್ಯಂಥ್ರೋಪಿಕ್‌ ಸಿಟಿಒ ಕನ್ನಡಿಗ ರಾಹುಲ್ ಪಾಟೀಲ್

ಅಮೆರಿಕದ ಆ್ಯಂಥ್ರೋಪಿಕ್‌ ಕಂಪನಿಯು ತನ್ನ ಹೊಸ ಕೃತಕ ಬುದ್ಧಿಮತ್ತೆ (ಎಐ) ಟೂಲ್ ಮೂಲಕ ಜಾಗತಿಕ ಐಟಿ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಮುಖ್ಯ ತಾಂತ್ರಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕದ ಬಾಗಲಕೋಟೆಯ ರಾಹುಲ್‌ ಪಾಟೀಲ್‌ ಅವರೇ ಈ ಹೊಸ ಆವಿಷ್ಕಾರದ ಹಿಂದಿನ ಪ್ರಮುಖ ಶಕ್ತಿಯಾಗಿದ್ದಾರೆ.

Read Full Story

06:21 AM (IST) Feb 08

ಪಾಕಿಸ್ತಾನದಿಂದ ಯು-ಟರ್ನ್‌ - ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಕಣಕ್ಕೆ? ಲಂಕಾದಿಂದಲೂ ಜೋರಾಯ್ತು ಒತ್ತಡ

ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯ ಬಹಿಷ್ಕಾರ ನಿರ್ಧಾರದಿಂದ ಪಾಕಿಸ್ತಾನ ಹಿಂದೆ ಸರಿಯುವ ಸಾಧ್ಯತೆ ಇದೆ. ಐಸಿಸಿಯ ಆರ್ಥಿಕ ಎಚ್ಚರಿಕೆ ಮತ್ತು ಆತಿಥೇಯ ಶ್ರೀಲಂಕಾದ ಒತ್ತಡದಿಂದಾಗಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತನ್ನ ನಿಲುವನ್ನು ಮರುಪರಿಶೀಲಿಸಲು ಮಾತುಕತೆ ಆರಂಭಿಸಿದೆ.
Read Full Story

More Trending News