ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿಗಾಗಿ ಭಾರತದ ಮೇಲೆ ಹೆಚ್ಚುವರಿಯಾಗಿ ವಿಧಿಸಿದ್ದ ಶೇ.25ರಷ್ಟು ಪ್ರತಿ ತೆರಿಗೆಯನ್ನು ಅಮೆರಿಕ ರದ್ದು ಮಾಡಿ ಆದೇಶ ಹೊರಡಿಸಿದೆ. ಇದೇ ವೇಳೆ, ಮತ್ತೇನಾದರೂ ಭಾರತ ಸರ್ಕಾರ ರಷ್ಯಾದಿಂದ ಮತ್ತೆ ನೇರವಾಗಿ ಅಥವಾ ಪರೋಕ್ಷವಾಗಿ ತೈಲ ಖರೀದಿ ಮಾಡಿದ್ದು ಗಮನಕ್ಕೆ ಬಂದರೆ ಮತ್ತೆ ಹೆಚ್ಚುವರಿ ತೆರಿಗೆ ವಿಧಿಸಲು ಅವಕಾಶವಿದೆ ಎಂದು ಎಚ್ಚರಿಕೆಯನ್ನೂ ನೀಡಲಾಗಿದೆ. ಭಾರತವು ರಷ್ಯಾ ತೈಲ ಖರೀದಿ ಸ್ಥಗಿತಗೊಳಿಸುವ ಭರವಸೆ ನೀಡಿದೆ. ಒಂದು ವೇಳೆ ಭಾರತ ಮತ್ತೆ ರಷ್ಯಾದಿಂದ ತೈಲ ಖರೀದಿಸುತ್ತಿರುವುದು ಗಮನಕ್ಕೆ ಬಂದರೆ ಮತ್ತೆ ತೆರಿಗೆ ವಿಧಿಸುವ ಅಥವಾ ಅನ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಟ್ರಂಪ್ ತಂಡ ನಿರ್ಧಾರ ಮಾಡಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

10:58 PM (IST) Feb 08
ಚಿತ್ರರಂಗದಲ್ಲಿ ಖ್ಯಾತ ನಟಿ. ಕೌಟುಂಬಿಕ ಸಂಸಾರದ ದೋಣಿ ಸುಸೂತ್ರವಾಗಿ ಸಾಗುತ್ತಿದೆ ಎನ್ನುವಾಗ ಬಂದ ಬಿರುಕು, ಸರಿ ಮಾಡಲಿ 3 ವರ್ಷ ಹೆಣಗಾಡಿದರೂ ಹೊಂದಿಕೊಳ್ಳದೆ ಡಿವೋರ್ಸ್ ಅನಿವಾರ್ಯವಾಯಿತು. ಆಗಿದ್ದಾಗಲಿ ಎಂದು ಡಿವೋರ್ಸ್ ಕೊಟ್ಟು ನೋವಿನಲ್ಲಿ ಬದುಕ್ಕಿದ್ದವಳಿಗೆ ಜೀವಕ್ಕೆ ಎರವಾಯ್ತು ಮಹಾಮಾರಿ ಕ್ಯಾನ್ಸರ್!
10:26 PM (IST) Feb 08
10:02 PM (IST) Feb 08
ಪ್ರತಿ ಕೆಜಿಗೆ 26.99 ಕಿ.ಮೀ ಮೈಲೇಜ್, 6 ಏರ್ಬ್ಯಾಗ್ಗಳಂತಹ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಆಧುನಿಕ ಫೀಚರ್ಗಳೊಂದಿಗೆ ಬರುವ ಟಾಟಾ ಪಂಚ್ ಸಿಎನ್ಜಿ ಕಾರು, ಮಧ್ಯಮ ವರ್ಗದ ಕುಟುಂಬಗಳಿಗೆ ಒಂದು ಭರವಸೆಯ ಆಯ್ಕೆಯಾಗಿದೆ. ಇದೇ ಕಾರಣಕ್ಕೆ ಹೆಚ್ಚಿನ ಸಂಖ್ಯೆಯ ಜನರು ಈ ಕಾರನ್ನು ಖರೀದಿಸುತ್ತಿದ್ದಾರೆ.
09:35 PM (IST) Feb 08
ಭಾರತದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದೆ. ಹೀಗಾಗಿ, ಮಧ್ಯಮ ವರ್ಗದ ಜನರು ಈಗ ಕಾರು ಖರೀದಿಸುವಾಗ ಸ್ಟೈಲ್ಗಿಂತ ಹೆಚ್ಚಾಗಿ ಮೈಲೇಜ್ ಮತ್ತು ಕಡಿಮೆ ಬೆಲೆಗೆ ಆದ್ಯತೆ ನೀಡುತ್ತಿದ್ದಾರೆ. 2026ರ ಪ್ರಕಾರ, ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಮತ್ತು ಅಗ್ಗದ ಬೆಲೆಗೆ ಸಿಗುವ ಕಾರುಗಳು ಯಾವುವು ನೋಡೋಣ.
09:12 PM (IST) Feb 08
ಮುಂಬೈ ಲೋಕಲ್ ರೈಲಿನ ಲೇಡೀಸ್ ಬೋಗಿಯಲ್ಲಿ ಬುರ್ಖಾ ಧರಿಸಿ ಪ್ರಯಾಣಿಸುತ್ತಿದ್ದ ಪುರುಷನೊಬ್ಬನನ್ನು ಮಹಿಳಾ ಪ್ರಯಾಣಿಕರು ಪತ್ತೆಹಚ್ಚಿದ್ದಾರೆ. ಮಹಿಳೆಯರು ಪ್ರಶ್ನಿಸಿ ಪೊಲೀಸರಿಗೆ ಒಪ್ಪಿಸುವ ಬೆದರಿಕೆ ಹಾಕಿದಾಗ, ಆತ ಚಲಿಸುವ ರೈಲಿನಿಂದ ಜಿಗಿದಿದ್ದಾನೆ. ಈತನ ವಿರುದ್ಧ ಪ್ರಕರಣ ದಾಖಲಾಗಿದೆ.
08:26 PM (IST) Feb 08
ಸ್ವಪ್ನ ಶಾಸ್ತ್ರದ ಪ್ರಕಾರ, ನಮಗೆ ಬೀಳುವ ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿರುತ್ತೆ. ಕೆಲವು ಕನಸುಗಳು ಕೆಟ್ಟದ್ದನ್ನು ಸೂಚಿಸಿದರೆ, ಇನ್ನು ಕೆಲವು ನಮ್ಮ ಜೀವನವನ್ನೇ ಬದಲಾಯಿಸುವ ಶುಭ ಸಂಕೇತಗಳಾಗಿರುತ್ತವೆ. ರಾತ್ರೋರಾತ್ರಿ ನಿಮ್ಮ ಬದುಕನ್ನೇ ಬದಲಿಸಬಲ್ಲ ಒಂದು ಅದ್ಭುತ ಕನಸಿನ ಬಗ್ಗೆ ಇಲ್ಲಿದೆ ಮಾಹಿತಿ.
08:22 PM (IST) Feb 08
ರೆಸ್ಟೋರೆಂಟ್ ಒಂದರಲ್ಲಿ, ಮಾರಾಟವಾಗದೆ ಉಳಿದ ಆಹಾರವನ್ನು ನೀರಿನಲ್ಲಿ ತೊಳೆದು ಮರುದಿನ ಬಡಿಸಲು ಸಿದ್ಧತೆ ನಡೆಸುತ್ತಿದ್ದ ದೃಶ್ಯ ವೈರಲ್ ಆಗಿದೆ. ಈ ವೀಡಿಯೋದಿಂದಾಗಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆಯು ರೆಸ್ಟೋರೆಂಟ್ ಮುಚ್ಚಿ, ಮಾಲೀಕರಿಗೆ ದಂಡ ವಿಧಿಸಿದೆ.
07:22 PM (IST) Feb 08
ಮುಂಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಟೀಂ ಇಂಡಿಯಾ, ಯುಎಸ್ಎ ಎದುರು ಶುಭಾರಂಭ ಮಾಡಿದೆ. ಈ ಪಂದ್ಯಕ್ಕೂ ಮುನ್ನ ದಿನ ನಡೆದ ಘಟನೆಯೊಂದು ಇದೀಗ ವೈರಲ್ ಆಗಿದೆ. ಏನದು? ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಕಾಲ್ ಮಾಡಿದ್ದು ಯಾರಿಗೆ ನೋಡೋಣ ಬನ್ನಿ.
06:38 PM (IST) Feb 08
ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಹುಲಿಯ ಚರ್ಮ, ಉಗುರು ಮತ್ತು ಹಲ್ಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಏಳು ಜನರ ಗ್ಯಾಂಗನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಗೆ ಕರ್ನಾಟಕದ ಬೇಟೆಗಾರರೊಂದಿಗೆ ಸಂಪರ್ಕವಿರುವ ಶಂಕೆ ವ್ಯಕ್ತವಾಗಿದೆ.
05:47 PM (IST) Feb 08
Abhishek Bachchan 50th birthday: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರ 50ನೇ ಹುಟ್ಟುಹಬ್ಬಕ್ಕೆ ಪತ್ನಿ ಐಶ್ವರ್ಯಾ ರೈ ಇನ್ಸ್ಟಾಗ್ರಾಮ್ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ.
05:35 PM (IST) Feb 08
ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಜನ್ಮ ದಿನಾಂಕದಿಂದ ಅದೃಷ್ಟ ಸಂಖ್ಯೆಯನ್ನು ಲೆಕ್ಕಾಚಾರ ಮಾಡಬಹುದು. 1 ರಿಂದ 9 ರವರೆಗಿನ ಸಂಖ್ಯೆಯ ವ್ಯಕ್ತಿತ್ವ, ಪ್ರೇಮ ಜೀವನ ಮತ್ತು ವೈವಾಹಿಕ ಹೊಂದಾಣಿಕೆ ವಿವರಿಸುತ್ತದೆ. ಯಾವ ಸಂಖ್ಯೆ ಜೋಡಿಯಾಗುತ್ತವೆ ಮತ್ತು ಯಾವುದು ಸರಿಹೊಂದುವುದಿಲ್ಲ ಮಾಹಿತಿ ನೀಡಲಾಗಿದೆ.
04:46 PM (IST) Feb 08
ಮೊಹಮ್ಮದ್ ಕೈಫ್ ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ಫೀಲ್ಡರ್ಗಳಲ್ಲಿಒಬ್ಬರು. 2002ರಲ್ಲಿ ಇಂಗ್ಲೆಂಡ್ ಎದುರು ನಾಟ್ವೆಸ್ಟ್ ಸೀರಿಸ್ ಫೈನಲ್ನಲ್ಲಿ ಕೈಫ್-ಯುವಿ ಜೋಡಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದನ್ನು ಯಾವ ಕ್ರಿಕೆಟ್ ಅಭಿಮಾನಿಯೂ ಮರೆಯಲು ಸಾಧ್ಯವಿಲ್ಲ. ಬನ್ನಿ ಕೈಫ್ ಲವ್ಸ್ಟೋರಿ ತಿಳಿಯೋಣ
04:03 PM (IST) Feb 08
ಮುಂಬೈನಲ್ಲಿ ನಡೆದ ಆರ್ಎಸ್ಎಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಸ್ಥ ಮೋಹನ್ ಭಾಗವತ್, ದೇಶದ ಶಕ್ತಿ ಅದರ ಆಡಳಿತದಲ್ಲಿಲ್ಲ, ಬದಲಿಗೆ ಸಮಾಜದ ಜಾಗರೂಕತೆ ಮತ್ತು ಸಾಂಪ್ರದಾಯಿಕ ಮೌಲ್ಯಗಳಲ್ಲಿದೆ ಎಂದು ಪ್ರತಿಪಾದಿಸಿದರು.
03:39 PM (IST) Feb 08
ಬೆಂಗಳೂರು: 2026ರ ಐಸಿಸಿ ಅಂಡರ್-19 ವಿಶ್ವಕಪ್ ಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ. 14 ವರ್ಷದ ವೈಭವ್ ಸೂರ್ಯವಂಶಿ, ಭಾರತ ಯುವ ಪಡೆ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ವೈಭವ್ ಇನ್ನು ಮುಂದೆ ಅಂಡರ್-19 ವಿಶ್ವಕಪ್ ಆಡಲ್ಲ. ಯಾಕೆ ಹೀಗೆ?
02:56 PM (IST) Feb 08
02:43 PM (IST) Feb 08
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ವಿದೇಶ ಪ್ರವಾಸಕ್ಕೆ ಕೇಂದ್ರ ಸರ್ಕಾರ ಮತ್ತೊಮ್ಮೆ ಅನುಮತಿ ನಿರಾಕರಿಸಿದೆ. ಜೆಕ್ ಗಣರಾಜ್ಯ ಮತ್ತು ನೆದರ್ಲ್ಯಾಂಡ್ಸ್ ಪ್ರವಾಸಕ್ಕೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದ್ದು, ಕೇಂದ್ರದ ನಿರ್ಧಾರಕ್ಕೆ ಎಎಪಿ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
02:10 PM (IST) Feb 08
01:37 PM (IST) Feb 08
ಕೆ.ಎಲ್ ರಾಹುಲ್ ಅವರಂತೆ ರಾಹುಲ್ ದ್ರಾವಿಡ್ ಅವರಿಂದ ಗುರುತಿಸಲ್ಪಟ್ಟ ಬಿಹಾರದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ. ಐಪಿಎಲ್ ಮತ್ತು ಅಂಡರ್-19 ವಿಶ್ವಕಪ್ನಲ್ಲಿ ದಾಖಲೆಯ ಶತಕಗಳನ್ನು ಬಾರಿಸಿ ಭಾರತ ಕ್ರಿಕೆಟ್ನ ಭವಿಷ್ಯದ ತಾರೆಯಾಗಿ ಹೊರಹೊಮ್ಮುತ್ತಿದ್ದಾನೆ.
01:11 PM (IST) Feb 08
01:03 PM (IST) Feb 08
ಸ್ಪಾ ಹೆಸರಿನಲ್ಲಿ ನಡೆಯುತ್ತಿದ್ದ ಲೈಂಗಿಕ ಜಾಲದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮೂವರು ಗ್ರಾಹಕರು ಸೇರಿದಂತೆ ಐವರನ್ನು ಬಂಧಿಸಲಾಗಿದ್ದು, ನಾಲ್ವರು ಮಹಿಳೆಯರನ್ನು ರಕ್ಷಿಸಲಾಗಿದೆ. ಸ್ಪಾ ಮಾಲೀಕ ತಲೆಮರೆಸಿಕೊಂಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
12:15 PM (IST) Feb 08
ಭಾರತದ 77ನೇ ಗಣರಾಜ್ಯೋತ್ಸವ ಪರೇಡ್ನಲ್ಲಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡರ್ ಲೇಯೆನ್ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ, ಖ್ಯಾತ ಭಾರತೀಯ ಡಿಸೈನರ್ ರಾಜೇಶ್ ಪ್ರತಾಪ್ ಸಿಂಗ್ ವಿನ್ಯಾಸಗೊಳಿಸಿದ ಬನಾರಸಿ ಬ್ರೊಕೇಡ್ ಬಂಧಗಲಾ ಜಾಕೆಟ್ ಧರಿಸಿ ಎಲ್ಲರ ಗಮನ ಸೆಳೆದರು.
11:16 AM (IST) Feb 08
10:54 AM (IST) Feb 08
ಜನಸಂಖ್ಯಾ ನಿಯಂತ್ರಣ ಅಂದಾಕ್ಷಣ ನಮಗೆ ಕಾನೂನು, ನಿಯಮಗಳು ನೆನಪಾಗುತ್ತವೆ. ಆದರೆ, ಕಾಂಡೋಮ್ಗಳು ಈ ನಿಟ್ಟಿನಲ್ಲಿ ಸದ್ದಿಲ್ಲದೆ ಬಹುಮುಖ್ಯ ಪಾತ್ರ ವಹಿಸುತ್ತಿವೆ. ಇದರ ವ್ಯಾಪಾರ ಸಾವಿರಾರು ಕೋಟಿ ತಲುಪಿದೆ. ಹಾಗಾದರೆ, ಏಷ್ಯಾ ಖಂಡದಲ್ಲಿ ಅತಿ ಹೆಚ್ಚು ಕಾಂಡೋಮ್ ಮಾರಾಟವಾಗುವ ದೇಶ ಯಾವುದು? ಇಲ್ಲಿದೆ ಮಾಹಿತಿ.
09:31 AM (IST) Feb 08
06:36 AM (IST) Feb 08
ಅಮೆರಿಕದ ಆ್ಯಂಥ್ರೋಪಿಕ್ ಕಂಪನಿಯು ತನ್ನ ಹೊಸ ಕೃತಕ ಬುದ್ಧಿಮತ್ತೆ (ಎಐ) ಟೂಲ್ ಮೂಲಕ ಜಾಗತಿಕ ಐಟಿ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಮುಖ್ಯ ತಾಂತ್ರಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕದ ಬಾಗಲಕೋಟೆಯ ರಾಹುಲ್ ಪಾಟೀಲ್ ಅವರೇ ಈ ಹೊಸ ಆವಿಷ್ಕಾರದ ಹಿಂದಿನ ಪ್ರಮುಖ ಶಕ್ತಿಯಾಗಿದ್ದಾರೆ.
06:21 AM (IST) Feb 08