LIVE NOW
Published : Jul 05, 2026, 07:10 AM ISTUpdated : Jul 05, 2026, 12:18 PM IST

India Latest News Live: ಸ್ನ್ಯಾಪ್‌ಚಾಟ್‌ನಲ್ಲಿ ಪ್ರೀತಿ.. ಗಡಿದಾಟಿ ಭಾರತಕ್ಕೆ ಎಂಟ್ರಿಯಾಗಿದ್ದ ಪ್ರೇಮಿಗೆ ಇತ್ತು ಒಂದು ಆಸೆ

ಸಾರಾಂಶ

ನವದೆಹಲಿ: ಟೆಲಿಗ್ರಾಮ್‌ನಲ್ಲಿ ಸಿನಿಮಾ, ಒಟಿಟಿ, ಇತರ ವಿಡಿಯೋಗಳು ಸೇರಿದಂತೆ ಕಾಪಿರೈಟ್‌ ಹೊಂದಿರುವ ಕಂಟೆಂಟ್‌ಗಳನ್ನು ಅಕ್ರಮವಾಗಿ ಹಂಚುತ್ತಿರುವ ಘಟನೆಗಳು ವ್ಯಾಪಕವಾದ ಬೆನ್ನಲ್ಲೇ ಅದರ ತಡೆಗೆ ಅಗತ್ಯ ಕೈಗೊಳ್ಳುವಂತೆ ಮೆಸೇಜಿಂಗ್‌ ಆ್ಯಪ್‌ ಟೆಲಿಗ್ರಾಂಗೆ ಕೇಂದ್ರ ಸರ್ಕಾರ ನೋಟಿಸ್‌ ನೀಡಿದೆ. ಜತೆಗೆ 15 ದಿನಗಳಲ್ಲಿ ವರದಿ ಸಲ್ಲಿಸುವಂತೆಯೂ ತಾಕೀತು ಮಾಡಿದೆ. ‘ಪ್ರತಿ ಪೈರಸಿ ಚಾನೆಲ್‌ ಅನ್ನು ಗುರುತಿಸುವ ತನಕ ಸರ್ಕಾರ ಕಾಯಲು ಸಾಧ್ಯವಿಲ್ಲ. 

ಪ್ರತಿ ಪೈರಸಿ ಚಾನೆಲ್‌ ಅನ್ನು ಒಂದೊಂದಾಗಿ ಗುರುತಿಸಿ ತೆಗೆಯುವ ಬದಲು ಇಂತಹ ಅಕ್ರಮಗಳೇ ನಡೆಯದಂತೆ ಆ್ಯಪ್‌ ಗಮನ ಹರಿಸಬೇಕು, ಈ ಸಂಬಂಧ ತೆಗೆದುಕೊಂಡ ಕ್ರಮಗಳ ಬಗ್ಗೆ 15 ದಿನಗಳಲ್ಲಿ ವರದಿ ಸಲ್ಲಿಸಬೇಕು’ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನೋಟಿಸ್‌ ನೀಡಿದೆ. ಕಳೆದ ತಿಂಗಳು ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಜು.21ರಂದು ಮರು ಪರೀಕ್ಷೆ ನಡೆಯುವ ತನಕ ಟೆಲಿಗ್ರಾಂಗೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ನಿಷೇಧ ಹೇರಿತ್ತು.

12:18 PM (IST) Jul 05

ಸ್ನ್ಯಾಪ್‌ಚಾಟ್‌ನಲ್ಲಿ ಪ್ರೀತಿ.. ಗಡಿದಾಟಿ ಭಾರತಕ್ಕೆ ಎಂಟ್ರಿಯಾಗಿದ್ದ ಪ್ರೇಮಿಗೆ ಇತ್ತು ಒಂದು ಆಸೆ

ಸ್ನ್ಯಾಪ್‌ಚಾಟ್‌ನಲ್ಲಿ ಪರಿಚಯವಾದ ಯುವತಿ ಹಾಗೂ ಪೂರ್ವಜರ ಆಸ್ತಿಗಾಗಿ ಪಾಕ್ ಆಕ್ರಮಿತ ಕಾಶ್ಮೀರದ ಯುವಕನೊಬ್ಬ ಗಡಿ ದಾಟಿ ಭಾರತಕ್ಕೆ ಬಂದಿದ್ದ. ಯಾವುದೇ ದುರುದ್ದೇಶವಿಲ್ಲವೆಂದು ಖಚಿತವಾದ ಬಳಿಕ, ಭಾರತೀಯ ಸೇನೆಯು ಮಾನವೀಯ ನೆಲೆಯಲ್ಲಿ ಆತನನ್ನು ಮರಳಿ ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ

Read Full Story

12:15 PM (IST) Jul 05

ಜಮ್ಮು&ಕಾಶ್ಮೀರ ಶಾಲಾಪಠ್ಯದಲ್ಲಿ ವಿಷ ಬೀಜ - ಪ್ರತ್ಯೇಕತಾವಾದಿ, ಭಯೋತ್ಪಾದಕರ ವೈಭವೀಕರಣ, ಶಿಕ್ಷಣ ಇಲಾಖೆ 8 ಜನ ಸಿಬ್ಬಂದಿ ವಜಾ

Jammu Kashmir textbook controversy ಜಮ್ಮು ಮತ್ತು ಕಾಶ್ಮೀರದಲ್ಲಿ, ಶಾಲಾ ಪಠ್ಯಪುಸ್ತಕಗಳಲ್ಲಿ ಪ್ರತ್ಯೇಕತಾವಾದಿಗಳನ್ನು ಮತ್ತು ಭಯೋತ್ಪಾದಕರನ್ನು ವೈಭವೀಕರಿಸಿದ ಆರೋಪದ ಮೇಲೆ 8 ಹೊರಗುತ್ತಿಗೆ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. 

Read Full Story

11:32 AM (IST) Jul 05

HR ಮಾಡಿದ ಒಂದು ಕಾಲ್; ಹೋಯ್ತು ಐದೂವರೆ ವರ್ಷದ ವಿಪ್ರೋ ಕೆಲಸ; ಉದ್ಯೋಗಿಯ ಕಣ್ಣೀರು

ಐದೂವರೆ ವರ್ಷಗಳಿಂದ ವಿಪ್ರೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರು, ಕೇವಲ ಒಂದು HR ಕಾಲ್‌ನಿಂದ ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ. ಯಾವುದೇ ಮುನ್ಸೂಚನೆ ಇಲ್ಲದೆ ಲೇಆಫ್ ಆದ ಬಗ್ಗೆ ಅವರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಘಟನೆಯನ್ನು 'ದೇವರ ಸೂಚನೆ' ಎಂದು ಪರಿಗಣಿಸಿ ಹೊಸ ಆರಂಭಕ್ಕೆ ಸಿದ್ಧರಾಗಿದ್ದಾರೆ.
Read Full Story

11:14 AM (IST) Jul 05

ನಾಲ್ಕೇ ದಿನದಲ್ಲಿ ಡಾಂಬರ್ ಹಾಕಿದ ಹೊಸ ರಸ್ತೆ ಗುಂಡಿಮಯ! ಒಂದೇ ಮಳೆಗೆ ಬಯಲಾಯ್ತು ಕಾಮಗಾರಿ ಅಸಲಿ ಕಥೆ!

ಪುಣೆಯಲ್ಲಿ ಹೊಸದಾಗಿ ನಿರ್ಮಿಸಿದ ಹಡಪ್ಸರ್–ಮುಂಧ್ವಾ ರಸ್ತೆಯು, ಕೇವಲ ನಾಲ್ಕೇ ದಿನದಲ್ಲಿ ಸುರಿದ ಮಳೆಗೆ ಸಂಪೂರ್ಣ ಹಾಳಾಗಿದೆ. ಈ ಕಳಪೆ ಕಾಮಗಾರಿಯಿಂದ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದಿದ್ದು, ಪುಣೆ ಮಹಾನಗರ ಪಾಲಿಕೆ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ತನಿಖೆಗೆ ಆಗ್ರಹಿಸಿದ್ದಾರೆ.
Read Full Story

10:57 AM (IST) Jul 05

ರೈಲುಗಳಿಗೂ ನಿವೃತ್ತಿ ಇದೆಯಾ? ಹಳೆಯ ರೈಲುಗಳನ್ನು ಏನು ಮಾಡುತ್ತಾರೆ? ಇಲ್ಲಿದೆ ಮಾಹಿತಿ

ರೈಲುಗಳು ನಿರ್ದಿಷ್ಟ ಸೇವಾ ಅವಧಿಯನ್ನು ಹೊಂದಿದ್ದು, ಹಳೆಯ ಪ್ಯಾಸೆಂಜರ್ ಕೋಚ್‌ಗಳನ್ನು ಗೂಡ್ಸ್ ರೈಲುಗಳಾಗಿ ಪರಿವರ್ತಿಸಲಾಗುತ್ತದೆ. ಅಂತಿಮವಾಗಿ, ಬಳಕೆಗೆ ಬಾರದ ರೈಲುಗಳನ್ನು 'ಮಿಷನ್ ಜೀರೋ ಸ್ಕ್ರ್ಯಾಪ್' ನೀತಿಯಡಿ ತುಂಡರಿಸಿ, ಅದರಲ್ಲಿನ ಲೋಹ ಮತ್ತು ಇತರ ಭಾಗಗಳನ್ನು ಮರುಬಳಕೆ ಮಾಡಲಾಗುತ್ತದೆ.
Read Full Story

09:50 AM (IST) Jul 05

E-Jagriti - ಗ್ರಾಹಕರ ಹಕ್ಕುಗಳಿಗೆ ಡಿಜಿಟಲ್ ಬಲ! ದೂರು ದಾಖಲೆಯಿಂದ ಪರಿಹಾರದವರೆಗೆ ಎಲ್ಲವೂ ಈಗ ಬೆರಳ ತುದಿಯಲ್ಲಿ!

ಭಾರತದ ಗ್ರಾಹಕ ನ್ಯಾಯ ವ್ಯವಸ್ಥೆಯು ಎದುರಿಸುತ್ತಿದ್ದ ವಿಳಂಬ ಮತ್ತು ಸಂಕೀರ್ಣತೆಗಳಿಗೆ 'ಇ-ಜಾಗೃತಿ' ಪೋರ್ಟಲ್ ಡಿಜಿಟಲ್ ಪರಿಹಾರ ಒದಗಿಸಿದೆ.  ದೂರು ದಾಖಲಾತಿಯಿಂದ ಹಿಡಿದು ಪರಿಹಾರದವರೆಗೆ ಸಂಪೂರ್ಣ ಪ್ರಕ್ರಿಯೆ ಸರಳಗೊಳಿಸಿ, ನ್ಯಾಯವನ್ನು ಎಲ್ಲರಿಗೂ ವೇಗವಾಗಿ ಪರಿಹಾರ ತಲುಪುವಂತೆ ಮಾಡಿದೆ. 

Read Full Story

09:30 AM (IST) Jul 05

ಅಯ್ಯರ್, ಗಂಭೀರ್ ಗೆ ಮತ್ತೊಂದು ಮುಖಭಂಗ! ಟೀಂ ಇಂಡಿಯಾ ಸೋಲಿಗೆ ಇಲ್ಲಿದೆ 5 ಕಾರಣಗಳು

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 190 ರನ್ ಗಳಿಸಿಯೂ ಭಾರತ ಸೋಲು ಕಂಡಿದೆ. ರವಿ ಬಿಷ್ಣೋಯ್ ಅವರ ದುಬಾರಿ ಓವರ್, ಜೇಕಬ್ ಬೆಥೆಲ್ ಅವರ ಸ್ಫೋಟಕ ಬ್ಯಾಟಿಂಗ್, ಮತ್ತು ಅರ್ಶ್‌ದೀಪ್ ಸಿಂಗ್ ಅವರ ಗಾಯದಂತಹ ಪ್ರಮುಖ ಕಾರಣಗಳಿಂದ ತಂಡ ಗೆಲುವಿನ ಹೊಸ್ತಿಲಲ್ಲಿ ಎಡವಿತು.
Read Full Story

09:21 AM (IST) Jul 05

ಎಐ ಭರವಸೆಯಿಂದ ಸಂಕಷ್ಟಕ್ಕೆ ಸಿಲುಕಿದ ಬ್ಯಾಂಕ್ ; ಗುಣಮಟ್ಟದ ಸೇವೆ ನೀಡದ ಎಐ ಟೂಲ್ಸ್

ಕೃತಕ ಬುದ್ಧಿಮತ್ತೆ (ಎಐ)ಯನ್ನು ನಂಬಿ ಫೋರ್ಡ್ ಮೋಟಾರ್ ಮತ್ತು ಕಾಮನ್‌ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ ತಮ್ಮ ಅನುಭವಿ ಸಿಬ್ಬಂದಿಯನ್ನು ವಜಾಗೊಳಿಸಿದ್ದವು. ಆದರೆ, ಗ್ರಾಹಕ ಸೇವೆ ಮತ್ತು ಉತ್ಪನ್ನದ ಗುಣಮಟ್ಟದಲ್ಲಿ ಸಮಸ್ಯೆಗಳು ಎದುರಾಗಿದೆ .

Read Full Story

09:08 AM (IST) Jul 05

ಅತಿ ಹೆಚ್ಚು ವಾರ್ಷಿಕ ಕೌಟುಂಬಿಕ ಆದಾಯದಲ್ಲಿ ಬೆಂಗಳೂರು ನಂಬರ್ 1 - ಖರ್ಚಿನ ಕಥೆಯೇನು?

ವರದಿಯೊಂದರ ಪ್ರಕಾರ, ಅತಿ ಹೆಚ್ಚು ವಾರ್ಷಿಕ ಕೌಟುಂಬಿಕ ಆದಾಯ ಹೊಂದಿರುವ ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ದೇಶದ ಒಟ್ಟು ವೆಚ್ಚದಲ್ಲಿ ಪ್ರಮುಖ ಆರು ನಗರಗಳು ಶೇ.46ರಷ್ಟು ಪಾಲು ಹೊಂದಿವೆ.

Read Full Story

08:55 AM (IST) Jul 05

ಅಮೆರಿಕದ ಸ್ವಾತಂತ್ರ್ಯ ಹೋರಾಟಕ್ಕೆ ಹೈದರ್‌ ಅಲಿ, ಟಿಪ್ಪು ಪರೋಕ್ಷ ಕೊಡುಗೆ ನೀಡಿದ್ದು ಹೇಗೆ?

ಅಮೆರಿಕದ ಸ್ವಾತಂತ್ರ್ಯ ಹೋರಾಟದ ಮೇಲೆ ಮೈಸೂರಿನ ಹೈದರ್‌ ಅಲಿ ಮತ್ತು ಟಿಪ್ಪು ಸುಲ್ತಾನ್ ಪರೋಕ್ಷವಾಗಿ ಪ್ರಭಾವ ಬೀರಿದ್ದರು. ಭಾರತದಲ್ಲಿ ಬ್ರಿಟಿಷರನ್ನು ದುರ್ಬಲಗೊಳಿಸುವ ಮೂಲಕ, ಅವರು ಅಮೆರಿಕನ್ನರಿಗೆ ಪ್ರತಿರೋಧದ ಸಂಕೇತವಾದರು ಮತ್ತು ಅಲ್ಲಿನ ಪತ್ರಿಕೆ, ಪಠ್ಯಗಳಲ್ಲಿಯೂ ಸ್ಥಾನ ಪಡೆದಿದ್ದರು.
Read Full Story

More Trending News