Published : Aug 31, 2026, 05:14 AM ISTUpdated : Aug 31, 2026, 10:49 PM IST

India Latest News Live: ಅಣ್ಣಾ ಹಜಾರೆ ಆರೋಗ್ಯ ದಿಢೀರ್ ಏರುಪೇರು - ಐಸಿಯುಗೆ ದಾಖಲು

ಸಾರಾಂಶ

ನ್ಯೂಯಾರ್ಕ್‌: ನ್ಯೂಯಾರ್ಕ್‌ನ ಐಕಾನಿಕ್ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಆರ್‌ಎಸ್‌ಎಸ್‌ ಮೋಹನ್‌ ಭಾಗವತ್‌ ಅವರು ಭಾಗಹಿಸಿದ್ದ ಕಾರ್ಯಕ್ರಮದಲ್ಲಿ ಭಾಗವತ್‌ ವಿರುದ್ಧ ಖಲಿಸ್ತಾನಿ ಉಗ್ರರು ಪ್ರತಿಭಟನೆ ನಡೆಸಿದ್ದಾರೆ, ‘ಒಂದು ಜಗತ್ತು: ಒಂದು ಮಾನವೀಯತೆ’ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶನಿವಾರ ಭಾಗವತ್‌ ಮಾತನಾಡಿದ್ದರು. ಈ ಸಂದರ್ಭದಲ್ಲಿ ಹೊರಗಡೆ ಖಲಿಸ್ತಾನಿ ಪರ ಹೋರಾಟಗಾರರು ‘ಆರ್‌ಎಸ್‌ಎಸ್‌ ಹಿಂದೂ ಪ್ರಾಬಲ್ಯ ಮತ್ತು ಅಲ್ಪಸಂಖ್ಯಾತರನ್ನು ಹೊರಗಿಡುವಲ್ಲಿ ಉತ್ತೇಜಿಸುತ್ತಿದೆ’ ಎಂದು ಆರೋಪಿಸಿ ಪ್ರತಿಭಟಿಸಿದರು. ಈ ವೇಳೆ ಖಲಿಸ್ತಾನಿ ಧ್ವಜಗಳನ್ನು ಪ್ರದರ್ಶಿಸಿ, ಅವರ ಪರ ಘೋಷಣೆಗಳನ್ನು ಕೂಗಿದರು. ಭಾರತದ ರಾಷ್ಟ್ರಧ್ವಜ, ಭಾಗವತ್‌ ಫೋಟೋಗಳನ್ನು ನೆಲಕ್ಕೆ ಹಾಕಿ ಕಾಲಿನಿಂದ ತುಳಿದು ದೇಶವಿರೋಧಿ ಕೃತ್ಯ ಎಸಗಿದರು.

Anna hazare on arvind kejriwal

10:49 PM (IST) Aug 31

ಅಣ್ಣಾ ಹಜಾರೆ ಆರೋಗ್ಯ ದಿಢೀರ್ ಏರುಪೇರು - ಐಸಿಯುಗೆ ದಾಖಲು

ಹಿರಿಯ ಸಮಾಜ ಸೇವಕ ಅಣ್ಣಾ ಹಜಾರೆ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಬಾಂಬೆ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ. ತೀವ್ರ ವೈರಲ್ ಸೋಂಕಿನಿಂದ ಬಳಲುತ್ತಿರುವ 87 ವರ್ಷದ ಅಣ್ಣಾ ಅವರ ಆರೋಗ್ಯ ಸ್ಥಿತಿಯನ್ನು ವೈದ್ಯರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

Read Full Story

09:50 PM (IST) Aug 31

'ಮಹಿಳೆಯರು ಮನೆಯ ಅಲಂಕಾರ' ಕೇರಳ ಗ್ರಾಂಡ್ ಮುಫ್ತಿ ವಿವಾದಾತ್ಮಕ ಹೇಳಿಕೆಗೆ ಮುಸ್ಲಿಂ ಜಮಾತ್ ಮುಖ್ಯಸ್ಥ ಬೆಂಬಲ

ಕೇರಳದ ಗ್ರಾಂಡ್ ಮುಫ್ತಿ ಶೇಖ್ ಅಬೂಬಕರ್ ಅಹಮದ್ ಅವರು ಮಹಿಳೆಯರು ಸಾರ್ವಜನಿಕ ಜೀವನಕ್ಕೆ ಬರಬಾರದು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಸಮರ್ಥಿಸಿಕೊಂಡಿದ್ದಾರೆ.

Read Full Story

09:29 PM (IST) Aug 31

ರಾಹುಲ್ ಗಾಂಧಿ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲು - ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಈ ಆರೋಪ ಸಾಬೀತಾದರೆ ಏನು ಶಿಕ್ಷೆ?

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಉತ್ತರಾಖಂಡದಲ್ಲಿ ಜಾತಿನಿಂದನೆ ಆರೋಪದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಈ ಆರೋಪ ಸಾಬೀತಾದರೆ, ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಅವರಿಗೆ ಎದುರಾಗಬಹುದಾದ ಸಂಭಾವ್ಯ ಜೈಲು ಶಿಕ್ಷೆ ಮತ್ತು ದಂಡದ ಕುರಿತು ಈ ಲೇಖನ ವಿವರಿಸುತ್ತದೆ.
Read Full Story

08:47 PM (IST) Aug 31

GDP Growth - ಭಾರತದ ಜಿಡಿಪಿ 7.8% ಹೆಚ್ಚಳದಿಂದ ಭಾರತದ ಯುವಕರಿಗೇನು ಬಂತು? ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಭಾರತದ 7.8% ಜಿಡಿಪಿ ಬೆಳವಣಿಗೆಯ ಬಗ್ಗೆ ಪ್ರಧಾನಿ ಮೋದಿ ಹೇಳಿಕೆಗೆ ಕಾಂಗ್ರೆಸ್‌ನ ಪವನ್ ಖೇರಾ ತಿರುಗೇಟು ನೀಡಿದ್ದಾರೆ. ಈ ಬೆಳವಣಿಗೆಯಿಂದ ಯುವಕರಿಗೆ ಉದ್ಯೋಗ ಸೃಷ್ಟಿಯಾಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಕೇವಲ ಒಂದು ತ್ರೈಮಾಸಿಕದ ಬೆಳವಣಿಗೆಯನ್ನು 'ಆರ್ಥಿಕ ವಸಂತ' ಎನ್ನಲಾಗದು

Read Full Story

08:28 PM (IST) Aug 31

ಈ ಮನೆಯ ಬೆಡ್‌ರೂಮ್‌ ಒಂದು ರಾಜ್ಯದಲ್ಲಿ, ಟಾಯ್ಲೆಟ್‌ ಇನ್ನೊಂದು ರಾಜ್ಯದಲ್ಲಿ! ವಿಚಿತ್ರ ಸ್ಟೋರಿ ಕೇಳಿ

ಮಹಾರಾಷ್ಟ್ರ-ತೆಲಂಗಾಣ ಗಡಿಯಲ್ಲಿರುವ ಪವಾರ್ ಕುಟುಂಬದ ಮನೆಯು ಎರಡು ರಾಜ್ಯಗಳ ನಡುವೆ ಹಂಚಿಹೋಗಿದೆ. ಈ ವಿಶಿಷ್ಟ ಮನೆಯ ಅಡುಗೆಮನೆಯು ತೆಲಂಗಾಣದಲ್ಲಿದ್ದರೆ, ಮಲಗುವ ಕೋಣೆ ಮಹಾರಾಷ್ಟ್ರದಲ್ಲಿದೆ. ಈ ಕುಟುಂಬವು ಎರಡೂ ರಾಜ್ಯಗಳಿಗೆ ತೆರಿಗೆ ಪಾವತಿಸಿ, ಸರಕಾರಿ ಯೋಜನೆಗಳ ಲಾಭ ಪಡೆಯುತ್ತಿದೆ.
Read Full Story

07:53 PM (IST) Aug 31

ಶ್ರೀಮಂತ ಮಹಿಳಾ ಕ್ರಿಕೆಟಿಗರು ಯಾರು ಯಾರು? RCB ಕ್ವೀನ್ ಸ್ಮೃತಿ ಮಂಧಾನಗೆ ಎಷ್ಟನೇ ಸ್ಥಾನ?

ವಿಶ್ವದ ಅತ್ಯಂತ ಶ್ರೀಮಂತ ಮಹಿಳಾ ಕ್ರಿಕೆಟರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಎಲಿಸ್ ಪೆರಿ 120 ಕೋಟಿ ರೂ. ಆಸ್ತಿಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಮಿಥಾಲಿ ರಾಜ್, ಸ್ಮೃತಿ ಮಂಧಾನ ಮತ್ತು ಹರ್ಮನ್‌ಪ್ರೀತ್ ಕೌರ್ ಕೂಡ ಟಾಪ್ 5ನಲ್ಲಿ ಸ್ಥಾನ ಪಡೆದಿದ್ದು, ಮಹಿಳಾ ಕ್ರಿಕೆಟ್‌ನ ಬೆಳೆಯುತ್ತಿರುವ ಆರ್ಥಿಕ ಶಕ್ತಿಯನ್ನು ಸಾರಿದ್ದಾರೆ.

Read Full Story

07:13 PM (IST) Aug 31

ಪಾಕಿಸ್ತಾನಕ್ಕೆ ಮತ್ತೊಂದು ಆಘಾತ.. ಸಿಂಧೂ ನದಿ ನೀರು ವಿಚಾರದಲ್ಲಿ ಭಾರತ ದಿಟ್ಟ ನಿರ್ಧಾರ..!

ಸಿಂಧೂ ನದಿ ನೀರು ಒಪ್ಪಂದಕ್ಕೆ ಸಂಬಂಧಿಸಿದಂತೆ 'ಕಾನೂನುಬಾಹಿರವಾಗಿ' ರಚನೆಯಾದ ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪನ್ನು ಭಾರತ ತಿರಸ್ಕರಿಸಿದ್ದು, ತನ್ನ ಸಾರ್ವಭೌಮ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡಲು ಅದಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದೆ.

Read Full Story

06:51 PM (IST) Aug 31

Gold Investment - ನಿಮ್ಮನ್ನು ಉಳಿಸೋದು ಬಂಗಾರ, ಬೆಳ್ಳಿ ಮಾತ್ರ! ಅಸಲಿ ಕಥೆ ಬಿಚ್ಚಿಟ್ಟ 'ರಿಚ್ ಡ್ಯಾಡ್ ಪೂರ್ ಡ್ಯಾಡ್' ಲೇಖಕ

'ರಿಚ್ ಡ್ಯಾಡ್ ಪೂರ್ ಡ್ಯಾಡ್' ಲೇಖಕ ರಾಬರ್ಟ್ ಕಿಯೋಸಾಕಿ ಮುಂಬರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಎಚ್ಚರಿಸಿದ್ದಾರೆ. ಹಣದ ಮೌಲ್ಯ ಕುಸಿಯುತ್ತಿರುವುದರಿಂದ, ಬ್ಯಾಂಕ್‌ನಲ್ಲಿ ಹಣ ಇಡುವುದಕ್ಕಿಂತ ಬಂಗಾರ ಮತ್ತು ಬೆಳ್ಳಿಯಂತಹ ನೈಜ ಆಸ್ತಿಗಳಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಎಂದು ಅವರು ಸಲಹೆ ನೀಡಿದ್ದಾರೆ.
Read Full Story

05:54 PM (IST) Aug 31

CSK ತಂಡದಲ್ಲಿ ಧೋನಿ 25% ಪಾಲು ಕೇಳಿದ್ದರ ಬಗ್ಗೆ ಕೊನೆಗೂ ಮೌನ ಮುರಿದ ಚೆನ್ನೈ ಫ್ರಾಂಚೈಸಿ..! ಮಹಿ ಮುಂದಿನ ಸೀಸನ್ ಐಪಿಎಲ್ ಆಡ್ತಾರಾ?

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಎಂ.ಎಸ್. ಧೋನಿ ಶೇ.25ರಷ್ಟು ಪಾಲು ಕೇಳಿದ್ದಾರೆ ಎಂಬ ವದಂತಿಯನ್ನು ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ತಳ್ಳಿಹಾಕಿದ್ದಾರೆ. ಇದು ಶುದ್ಧ ಸುಳ್ಳು ಎಂದಿರುವ ಅವರು, ಧೋನಿ ಮತ್ತು ಮ್ಯಾನೇಜ್‌ಮೆಂಟ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಧೋನಿ ತಮ್ಮ ಐಪಿಎಲ್ ಭವಿಷ್ಯದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.
Read Full Story

05:28 PM (IST) Aug 31

19 ತಿಂಗಳ ಮಗುವನ್ನು ಅಂಗಾಂಗದಾನಕ್ಕೆ ಕೊಟ್ಟು ಹಿಂತಿರುಗಿ ನೋಡಿದೆ ಹೋದ ಅಮ್ಮ!

ಬ್ರೈನ್ ಡೇಡ್ ಆದ ತನ್ನ 19 ತಿಂಗಳ ಮಗುವಿನ ಅಂಗಾಂಗಗಳನ್ನು ದಾನ ಮಾಡಲು ಪೋಷಕರು ಒಪ್ಪಿಗೆ ನೀಡಿದರು. ಈ ಮೂಲಕ ಆ ಮಗು ತಮಿಳುನಾಡಿನಲ್ಲೇ ಅತೀ ಕಿರಿಯ ವಯಸ್ಸಿನ ಅಂಗಾಂಗ ದಾನಿ ಎಂಬ ಇತಿಹಾಸ ಸೃಷ್ಟಿಸಿತು. ಮಗನನ್ನು ಶಸ್ತ್ರಚಿಕಿತ್ಸೆಗೆ ಕರೆದೊಯ್ದ ನಂತರ, ತಾಯಿ ಮತ್ತೆ ಹಿಂತಿರುಗಿ ನೋಡದೆ ಆಸ್ಪತ್ರೆಯಿಂದ ಹೊರನಡೆದರು.
Read Full Story

05:14 PM (IST) Aug 31

'ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸು' ಎಂಬಂತೆ ಮಗುವಿನ ಹೆಸರಿನ ಬಗ್ಗೆ ಚರ್ಚೆ - ಸಮಂತಾ ಹೇಳಿದ್ದೇನು?

ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು ಅವರ ಮೊದಲ ಮಗುವಿನ ಹೆಸರಿನ ಬಗ್ಗೆ ಅಭಿಮಾನಿಯೊಬ್ಬರು ವಿಶೇಷ ಸಲಹೆ ನೀಡಿದ್ದಾರೆ. ‘ಸಮ್ರಾಜ್’ ಎಂಬ ಹೆಸರು ಸೂಚಿಸಿದ ಫ್ಯಾನ್‌ಗೆ ಸಮಂತಾ ತಮಾಷೆಯಾಗಿ ನೀಡಿದ ಪ್ರತಿಕ್ರಿಯೆ ವೈರಲ್ ಆಗಿದೆ.

Read Full Story

05:12 PM (IST) Aug 31

ದೆಹಲಿಯಲ್ಲಿ ಮತ್ತೊಮ್ಮೆ ನಿರ್ಭಯಾ ಕೇಸ್‌ - 47 ಕಿ.ಮೀ ನಾನ್‌ ಸ್ಟಾಪ್‌ ಪ್ರಯಾಣಿಸಿದ ಸ್ಲೀಪರ್‌ ಬಸ್‌ನಲ್ಲಿ 16ರ ಬಾಲಕಿಯ ಗ್ಯಾಂಗ್‌ರೇ*

ದೆಹಲಿಯಲ್ಲಿ ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ನಲ್ಲಿ 16 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಚಾಲಕ ಮತ್ತು ನಿರ್ವಾಹಕ ಸಾಮೂಹಿಕ ಅ*ಚಾರ ಎಸಗಿದ್ದಾರೆ. ಸುಮಾರು 47 ಕಿಲೋಮೀಟರ್ ದೂರದ ಪ್ರಯಾಣದಲ್ಲಿ ಈ ಘೋರ ಕೃತ್ಯ ನಡೆದಿದ್ದು, ದೆಹಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Read Full Story

04:56 PM (IST) Aug 31

ವಿರೇಂದ್ರ ಸೆಹ್ವಾಗ್ ಕಾಲರ್ ಹಿಡಿದು ಮುಖಕ್ಕೆ ಗುದ್ದಿದ್ದರು, ಟೀಂ ಇಂಡಿಯಾ ಕೋಚ್ ಆಗಿದ್ದ ಜಾನ್ ರೈಟ್!

ನಝಾಫ್’ಗಢದ ನವಾಬ ವಿರೇಂದ್ರ ಸೆಹ್ವಾಗ್ ತನ್ನ ನಿರ್ಭೀತ ಬ್ಯಾಟಿಂಗ್​ನಿಂದಲೇ ಹೆಸರುವಾಸಿ. ಆದರೆ 2002ರ ನಾಟ್ ವೆಸ್ಟ್ ಸರಣಿಯಲ್ಲಿ ಬೇಜವಾಬ್ದಾರಿ ಹೊಡೆತಕ್ಕೆ ಔಟಾದಾಗ, ಕೋಚ್ ಜಾನ್ ರೈಟ್ ಡ್ರೆಸ್ಸಿಂಗ್ ರೂಮ್​ನಲ್ಲಿ ಸೆಹ್ವಾಗ್​ರ ಕಾಲರ್ ಹಿಡಿದು ಕೆನ್ನೆಗೆ ಬಾರಿಸಿದ್ದರು. ಈ ಘಟನೆಯಿಂದ ನೊಂದ ಸೆಹ್ವಾಗ್ ಭಾರತಕ್ಕೆ ಮರಳಲು ನಿರ್ಧರಿಸಿದ್ದರಂತೆ.

Read Full Story

04:48 PM (IST) Aug 31

ದಳಪತಿ ವಿಜಯ್ ಜೊತೆಗಿನ ವದಂತಿ ನಡುವೆ ತ್ರಿಶಾ ವಿಡಿಯೋ ವೈರಲ್ - ಪ್ರೈವಸಿ ಬಗ್ಗೆ ನೆಟ್ಟಿಗರ ಕಳವಳ

ನಟಿ ತ್ರಿಶಾ ಕೃಷ್ಣನ್ ಲಂಡನ್‌ನಲ್ಲಿ ಕಾಣಿಸಿಕೊಂಡ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಜಯ್ ಜೊತೆಗಿನ ಪ್ರೇಮ ವದಂತಿ ನಡುವೆ ವಿಡಿಯೋ ವೈರಲ್ ಆಗಿದ್ದು, ಸೆಲೆಬ್ರಿಟಿ ಪ್ರೈವಸಿಗೆ ಗೌರವ ನೀಡುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ.

Read Full Story

04:46 PM (IST) Aug 31

ಮಗಳ ಸ್ಕೂಲ್ ಫೀಸ್‌ಗಾಗಿ ತಾಯಿ ಸಾಹಸ.. ಸೀರೆಯುಟ್ಟು ಬರಿಗಾಲಲ್ಲಿ ಓಡಿ ಮ್ಯಾರಥಾನ್ ಗೆದ್ದ ಅಮ್ಮ..!

ಮಹಾರಾಷ್ಟ್ರದ 47 ವರ್ಷದ ರಮಾಬಾಯಿ ರಣವೀರ್ ತಮ್ಮ ಮಗಳ ಶಿಕ್ಷಣದ ವೆಚ್ಚಕ್ಕಾಗಿ ಸೀರೆಯುಟ್ಟು ಬರಿಗಾಲಿನಲ್ಲಿ ಓಡಿ ಮ್ಯಾರಾಥಾನ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಯುವ ಸ್ಪರ್ಧಿಗಳನ್ನು ಹಿಂದಿಕ್ಕಿ ಗೆದ್ದ ಇವರು, ಆ ಬಹುಮಾನದ ಮೊತ್ತವನ್ನು ಮಗಳ ಓದಿಗಾಗಿ ಮೀಸಲಿಡುವ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

Read Full Story

04:17 PM (IST) Aug 31

​ಸೆಲೆಕ್ಟ್ ಆದ್ರೂ ಒಂದೇ ಒಂದು ಪಂದ್ಯವೂ ಆಡದೆ ನಿವೃತ್ತಿಯಾದ ಭಾರತದ ಅಪರೂಪದ ಕ್ರಿಕೆಟ್ ಹೀರೋ - ಧೋನಿ-ಗಂಭೀರ್ ಕಾಲದ ಈ ಆಟಗಾರ ಯಾರು ಗೊತ್ತಾ?

2003-04ರ ದೇಶಿ ಕ್ರಿಕೆಟ್‌ನಲ್ಲಿ 100ಕ್ಕೂ ಹೆಚ್ಚು ಸರಾಸರಿಯಲ್ಲಿ ರನ್ ಗಳಿಸಿದ್ದ ಧೀರಜ್ ಜಾಧವ್, ಭಾರತ 'ಎ' ತಂಡದಲ್ಲೂ ಮಿಂಚಿದ್ದರು. ಗೌತಮ್ ಗಂಭೀರ್, ಎಂ ಎಸ್ ಧೋನಿ ಅವರಂತಹ ಆಟಗಾರರ ಜೊತೆಗಾರನಾಗಿದ್ದರೂ, ಟೀಂ ಇಂಡಿಯಾಗೆ ಆಯ್ಕೆಯಾದ ಬಳಿಕವೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು.
Read Full Story

04:09 PM (IST) Aug 31

ಇಸ್ರೋ ಬಾಹುಬಲಿ ಟೆಕ್ನಾಲಜಿ ಟ್ರಾನ್ಸ್‌ಫರ್‌ - ರೇಸ್‌ನಲ್ಲಿ L&T, JSW, ಅದಾನಿ, ಮಹೀಂದ್ರಾ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಅತ್ಯಂತ ಶಕ್ತಿಶಾಲಿ 'ಎಲ್‌ವಿಎಂ-3' ರಾಕೆಟ್ ತಂತ್ರಜ್ಞಾನವನ್ನು ಖಾಸಗಿ ವಲಯಕ್ಕೆ ವರ್ಗಾಯಿಸಲು ಮುಂದಾಗಿದೆ. ಈ ಒಪ್ಪಂದಕ್ಕಾಗಿ ಅದಾನಿ, ಎಲ್&ಟಿ, ಜೆಎಸ್‌ಡಬ್ಲ್ಯೂ ಸೇರಿದಂತೆ ಹಲವು ದೈತ್ಯ ಸಂಸ್ಥೆಗಳು ತೀವ್ರ ಸ್ಪರ್ಧೆ ನಡೆಸುತ್ತಿವೆ.

Read Full Story

03:28 PM (IST) Aug 31

ಅದು ಸರಳತೆಯಲ್ಲ, ಅವರಿರುವುದೇ ಹಾಗೆ.. ಅವರು ಗಂಡ ಭೇರುಂಡ ಲಾಂಛನದ ಗರ್ವ..! ಜಾವಗಲ್ ಶ್ರೀನಾಥ್ ಕನ್ನಡಿಗರ ಹೆಮ್ಮೆ

ಭಾರತದ ಖ್ಯಾತ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಇತ್ತೀಚೆಗೆ ಮೆಟ್ರೋದಲ್ಲಿ ಪ್ರಯಾಣಿಸಿದ ಫೋಟೋ ವೈರಲ್ ಆಗಿದೆ. ಈ ಲೇಖನವು ಅವರ ಸರಳ ಜೀವನಶೈಲಿ, 'ಮೈಸೂರು ಎಕ್ಸ್‌ಪ್ರೆಸ್' ಆಗಿ ಅವರ ಅಪ್ರತಿಮ ಕ್ರಿಕೆಟ್ ಸಾಧನೆಗಳು ಮತ್ತು ಕನ್ನಡದ ಮೇಲಿನ ಅವರ ಅಪಾರ ಪ್ರೀತಿಯನ್ನು ವಿವರಿಸುತ್ತದೆ.
Read Full Story

01:51 PM (IST) Aug 31

'ಮಹಿಳೆಯರು ಚಿನ್ನದ ಒಡವೆಯಂತೆ ಮನೆಯಲ್ಲೇ ಇರಬೇಕು' - ಇಸ್ಲಾಮಿಕ್ ಧರ್ಮಗುರು ಶೇಕ್ ಅಬೂಬಕರ್

ಕೇರಳದ ಗ್ರ್ಯಾಂಡ್ ಮುಫ್ತಿ ಶೇಕ್ ಅಬೂಬಕರ್ ಅಹ್ಮದ್ ಅವರು, ಮಹಿಳೆಯರು ಸಾರ್ವಜನಿಕ ವೇದಿಕೆಗಳಿಗೆ ಬಂದರೆ ಮಹಾ ವಿನಾಶಕ್ಕೆ ಕಾರಣವಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಹಿಳೆಯರನ್ನು ಚಿನ್ನದ ಆಭರಣಕ್ಕೆ ಹೋಲಿಸಿದ ಅವರು, ಇಸ್ಲಾಂ ಅವರಿಗೆ ಮನೆಯಲ್ಲೇ ಇರಲು ಮತ್ತು ಪರ್ದಾ ಪಾಲಿಸಲು ಸೂಚಿಸಿದೆ ಎಂದು ಪ್ರತಿಪಾದಿಸಿದ್ದಾರೆ.
Read Full Story

01:43 PM (IST) Aug 31

ನಟನೆಯಿಂದ ಬಿಸಿನೆಸ್ - ಕೇವಲ 5 ತಿಂಗಳಲ್ಲಿ ಬದಲಾದ ಕಂಟೆಂಟ್ ಕ್ರಿಯೇಟರ್ ಬದುಕು, ತಿಂಗಳಿಗೆ ₹8.8 ಲಕ್ಷ ಆದಾಯ!

ನಟನಾ ಕೌಶಲ್ಯವನ್ನು ಸೈಡ್ ಬಿಸಿನೆಸ್ ಆಗಿ ಪರಿವರ್ತಿಸಿಕೊಂಡ ಮಹಿಳೆಯೊಬ್ಬರು, ಬಳಕೆದಾರ ರಚಿಸಿದ ವಿಷಯ (UGC) ಮೂಲಕ ತಿಂಗಳಿಗೆ ಸುಮಾರು ₹8.8 ಲಕ್ಷ ಗಳಿಸುತ್ತಿದ್ದಾರೆ. ತಮ್ಮ ರಂಗಭೂಮಿ ಹಿನ್ನೆಲೆಯನ್ನು ಬಳಸಿಕೊಂಡು, ಬ್ರ್ಯಾಂಡ್‌ಗಳಿಗೆ ಆಕರ್ಷಕ ವೀಡಿಯೊಗಳನ್ನು ರಚಿಸುವ ಮೂಲಕ ಇವರು ಆರ್ಥಿಕ ಸ್ವಾತಂತ್ರ್ಯವನ್ನು ಪಡೆದಿದ್ದಾರೆ.
Read Full Story

01:32 PM (IST) Aug 31

6,6,6,6,6,6. ಮತ್ತೊಂದು ಶತಕ ಜಸ್ಟ್ ಮಿಸ್ - ದುಲೀಪ್ ಟ್ರೋಫಿಯಲ್ಲೂ ವೈಭವ್ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್, 57 ವರ್ಷದ ದಾಖಲೆ ನುಚ್ಚುನೂರು

ದುಲೀಪ್ ಟ್ರೋಫಿಯಲ್ಲಿ ಪೂರ್ವ ವಲಯದ ಪರ ಆಡುತ್ತಿರುವ 15 ವರ್ಷದ ವೈಭವ್ ಸೂರ್ಯವಂಶಿ, ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ 92 ರನ್ ಗಳಿಸಿದ್ದಾರೆ. ಈ ಮೂಲಕ, ಅವರು 57 ವರ್ಷಗಳ ಹಳೆಯ ದಾಖಲೆಯನ್ನು ಮುರಿದು, ದುಲೀಪ್ ಟ್ರೋಫಿ ಇತಿಹಾಸದಲ್ಲಿ ಅರ್ಧಶತಕ ಸಿಡಿಸಿದ ಅತಿಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Read Full Story

12:30 PM (IST) Aug 31

Toxic 5ನೇ ದಿನದ ಬಾಕ್ಸ್‌ ಆಫೀಸ್ ಕಲೆಕ್ಷನ್ - ದಳಪತಿ ವಿಜಯ್ ಅವರ 'ಜನ ನಾಯಗನ್' ಚಿತ್ರದ ಜೀವಿತಾವಧಿ ಗಳಿಕೆಯನ್ನು ಧೂಳೀಪಟ ಮಾಡಿದ ಯಶ್ ಸಿನಿಮಾ

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಕೇವಲ ಐದು ದಿನಗಳಲ್ಲಿ ದಳಪತಿ ವಿಜಯ್ ಅವರ 'ಜನ ನಾಯಗನ್' ಚಿತ್ರದ ಒಟ್ಟು ಕಲೆಕ್ಷನ್ ಅನ್ನು ಮೀರಿಸಿದೆ. ಸದ್ಯ ವಿಶ್ವಾದ್ಯಂತ 300 ಕೋಟಿ ಕ್ಲಬ್ ಸೇರುವತ್ತ 'ಟಾಕ್ಸಿಕ್' ಮುನ್ನುಗ್ಗುತ್ತಿದೆ.
Read Full Story

11:55 AM (IST) Aug 31

ಒಂದೇ ಒಂದು ರನ್ ನೀಡಿದೇ 3 ವಿಕೆಟ್; ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಮತ್ತೊಂದು ಅಪರೂಪದ ವಿಶ್ವದಾಖಲೆ ಬರೆದ ದೀಪ್ತಿ ಶರ್ಮಾ..!

ಭಾರತದ ಆಲ್ರೌಂಡರ್ ದೀಪ್ತಿ ಶರ್ಮಾ, ಮಹಿಳಾ T20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಮಹಿಳಾ ಏಷ್ಯಾ ಕಪ್‌ನಲ್ಲಿ ಥಾಯ್ಲೆಂಡ್ ವಿರುದ್ಧ 3 ವಿಕೆಟ್ ಪಡೆಯುವ ಮೂಲಕ, ಅವರು ಥಾಯ್ಲೆಂಡ್‌ನ ಥಿಪಾಚಾ ಪುತಾವೋಂಗ್ ಅವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ.
Read Full Story

11:54 AM (IST) Aug 31

ಅಮೆಜಾನ್‌ನಿಂದ ವಜಾ ಧೃತಿಗೆಡದ ಮಹಿಳೆ - ಐಟಿ ಕೆಲಸ ಬಿಟ್ಟು ಕೋಳಿ ಸಾಕಣೆಯಲ್ಲಿ ಹಿಟ್, ಮೊಟ್ಟೆ ಉದ್ಯಮದತ್ತ ಯಶಸ್ವಿ ಪಯಣ!

ಅಮೆಜಾನ್ ಕಂಪನಿಯಿಂದ ವಜಾಗೊಂಡ ಮಾರಿಯಾ ಹರ್ಷಿತಾ ಎಂಬ ಮಹಿಳೆ, ಬೇರೆ ಉದ್ಯೋಗ ಸಿಗದಿದ್ದಾಗ ಧೃತಿಗೆಡದೆ ಕೋಳಿ ಸಾಕಣೆ ಉದ್ಯಮವನ್ನು ಆರಂಭಿಸಿದರು. ತಮ್ಮ ಪತಿಯ ಪ್ರೋತ್ಸಾಹದಿಂದ ಮೊಟ್ಟೆ ಮಾರಾಟವನ್ನು ಪ್ರಾರಂಭಿಸಿ, ಐಟಿ ಕೌಶಲ್ಯಗಳನ್ನೇ ಬಳಸಿ ಇಂದು ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.
Read Full Story

11:25 AM (IST) Aug 31

'ನಾನು ಇವುಗಳನ್ನೆಲ್ಲಾ ಕಳೆದುಕೊಳ್ತಿದೀನಿ'.. ರಶ್ಮಿಕಾ ಮಂದಣ್ಣ ಕಣ್ಣೀರು; ಆದ್ರೆ ಹೋಗ್ತಾ ಇರೋದು ಎಲ್ಲಿಗೆ ಗೊತ್ತಾ?

ತಮ್ಮ ನಗು, ನಟನೆ ಹಾಗೂ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ರಶ್ಮಿಕಾ, ಇದೀಗ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಅದಕ್ಕೆ ಕಾರಣ ಅವರು ಇತ್ತೀಚೆಗೆ ಹಂಚಿಕೊಂಡಿರುವ ಒಂದು ಎಮೋಷನಲ್ ಮತ್ತು ಕುತೂಹಲಕಾರಿ ಪೋಸ್ಟ್!

Read Full Story

11:07 AM (IST) Aug 31

ಸಿಎಂ ವಿಜಯ್ ಜೊಸೆಫ್‌ಗೆ ಮೊದಲ ಶಾಕ್ ಕೊಟ್ಟ ಕಾಂಗ್ರೆಸ್, ಪತನಗೊಳ್ಳುತ್ತಾ ಟಿವಿಕೆ ಸರ್ಕಾರ?

ಸಿಎಂ ಜೊಸೆಫ್ ವಿಜಯ್ ಹಲವು ಸವಾಲು ಎದುರಿಸಿ ತಮಿಳಿನಾಡಿನಲ್ಲಿ ಆಡಳಿತ ನಡೆಸುತ್ತಿದ್ದಾರೆ. ಇದೀಗ ಮೈತ್ರಿ ಪಕ್ಷ ಕಾಂಗ್ರೆಸ್ ಮೊದಲ ಶಾಕ್ ಕೊಟ್ಟಿದೆ. ವಿಜಯ್ ಸರ್ಕಾರದ ಕಾಂಗ್ರೆಸ್ ಸಚಿವರು ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ.

Read Full Story

10:22 AM (IST) Aug 31

ಅಜ್ಜನಿಂದ ಬಂತು 1.2 ಕೋಟಿ ಆಸ್ತಿ; ಪ್ರೇಯಸಿ ತಂದೆ ಚಿಕಿತ್ಸೆಗೆ ನಾನೇಗೆ ಹಣ ಕೊಡಲಿ? ಯುವಕನ ಪ್ರಶ್ನೆ

ತನ್ನ ಅಜ್ಜನಿಂದ ಬಂದ 1.2 ಕೋಟಿ ರೂ. ಆಸ್ತಿಯನ್ನು, ಪ್ರೇಯಸಿಯ ತಂದೆಯ ಹೃದಯ ಶಸ್ತ್ರಚಿಕಿತ್ಸೆಗೆ ನೀಡಲು ಯುವಕನೊಬ್ಬ ನಿರಾಕರಿಸಿದ್ದಾನೆ. ತನ್ನ ಭವಿಷ್ಯದ ಕುಟುಂಬದ ಭದ್ರತೆಗಾಗಿ ಈ ಹಣವನ್ನು ಮೀಸಲಿಟ್ಟಿರುವುದಾಗಿ ಹೇಳಿದ್ದು, ಈ ನಿರ್ಧಾರವು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
Read Full Story

10:06 AM (IST) Aug 31

ಒಂದು ರಾಷ್ಟ್ರ, ಒಂದು ಕಾಲ - ಮಾರ್ಚ್ 2027 ರಿಂದ ದೇಶಾದ್ಯಂತ 'ಭಾರತೀಯ ಪ್ರಮಾಣಿತ ಸಮಯ' ಕಡ್ಡಾಯ!

ಭಾರತ ಸರ್ಕಾರವು 'ಕಾನೂನು ಮಾಪನಶಾಸ್ತ್ರ (ಭಾರತೀಯ ಪ್ರಮಾಣಿತ ಸಮಯ) ನಿಯಮಗಳು, 2026' ಅನ್ನು ಅಧಿಸೂಚಿಸಿದೆ. ಈ ನಿಯಮದ ಅಡಿಯಲ್ಲಿ, ದೇಶದಾದ್ಯಂತ ಎಲ್ಲಾ ಅಧಿಕೃತ ಸೇವೆಗಳಿಗೆ ಭಾರತೀಯ ಪ್ರಮಾಣಿತ ಸಮಯವನ್ನು (IST) ಏಕೈಕ ಸಮಯದ ಉಲ್ಲೇಖವಾಗಿ ಕಡ್ಡಾಯಗೊಳಿಸಲಾಗಿದೆ. ಈ ಬದಲಾವಣೆಯು ಡಿಜಿಟಲ್ ವಹಿವಾಟುಗಳಲ್ಲಿನ ವ್ಯತ್ಯಾಸಗಳನ್ನು ಸರಿಪಡಿಸಿ, ವಿದೇಶಿ ಸಮಯ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ.
Read Full Story

09:40 AM (IST) Aug 31

ಶ್ರೀಲಂಕಾದ ಬದಲು ಭಾರತದಲ್ಲಿ ಚೊಚ್ಚಲ ಮಹಿಳಾ ಚಾಂಪಿಯನ್ಸ್‌ ಟ್ರೋಫಿ! ಕೊನೆ ಕ್ಷಣದಲ್ಲಿ ಬದಲಾವಣೆ?

ಶ್ರೀಲಂಕಾ ಕ್ರಿಕೆಟ್‌ ಮಂಡಳಿಯಲ್ಲಿನ ಆಡಳಿತಾತ್ಮಕ ಬಿಕ್ಕಟ್ಟಿನಿಂದಾಗಿ, ಮುಂದಿನ ವರ್ಷ ನಡೆಯಲಿರುವ ಮಹಿಳಾ ಚಾಂಪಿಯನ್ಸ್‌ ಟ್ರೋಫಿಯನ್ನು ಬೇರೆ ದೇಶದಲ್ಲಿ ನಡೆಸಲು ಐಸಿಸಿ ಚಿಂತನೆ ನಡೆಸಿದೆ. ಈ ಟೂರ್ನಿಯ ಆತಿಥ್ಯ ವಹಿಸುವ ರೇಸ್‌ನಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಅಕ್ಟೋಬರ್‌ನಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ.
Read Full Story

09:12 AM (IST) Aug 31

ದುಲೀಪ್ ಟ್ರೋಫಿಯಲ್ಲಿ ಕನ್ನಡಿಗನ ಕಮಾಲ್; 4 ವಿಕೆಟ್ ಪಡೆದು ಉತ್ತರ ವಲಯಕ್ಕೆ ಶಾಕ್!

ದುಲೀಪ್‌ ಟ್ರೋಫಿ ಸೆಮಿಫೈನಲ್‌ನ ಮೊದಲ ದಿನ, ಉತ್ತರ ವಲಯ ವಿರುದ್ಧ ವಿದ್ವತ್‌ ಕಾವೇರಪ್ಪ ಅವರ ಮಾರಕ ಬೌಲಿಂಗ್ ನೆರವಿನಿಂದ ದಕ್ಷಿಣ ವಲಯ ಮೇಲುಗೈ ಸಾಧಿಸಿದೆ. ಮತ್ತೊಂದು ಪಂದ್ಯದಲ್ಲಿ, ರಿಂಕು ಸಿಂಗ್ ಅವರ ಅರ್ಧಶತಕದ ಹೊರತಾಗಿಯೂ ಕೇಂದ್ರ ವಲಯ ತಂಡವು ಪೂರ್ವ ವಲಯದ ವಿರುದ್ಧ 266 ರನ್‌ಗಳಿಗೆ ಆಲೌಟ್ ಆಗಿದೆ.
Read Full Story

More Trending News