Published : Nov 29, 2025, 07:01 AM ISTUpdated : Nov 29, 2025, 10:51 PM IST

India Latest News Live: ಶೀಘ್ರದಲ್ಲೇ, ಆಕ್ಟೀವ್‌ ಸಿಮ್‌ ಕಾರ್ಡ್‌ ಇಲ್ಲದೆ ವಾಟ್ಸಾಪ್‌ ಬಳಸೋಕೆ ಸಾಧ್ಯವಿಲ್ಲ!

ಸಾರಾಂಶ

ಚೆನ್ನೈ: ಡಿಎಂಕೆ ನಾಯಕ ಹಾಗೂ ಡಿಸಿಎಂ ಉದಯನಿಧಿ ಸ್ಟಾಲಿನ್ ಜನ್ಮದಿನ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಅರೆಬೆತ್ತಲೆ ನರ್ತಕಿಯರು ನರ್ತಿಸಿದ್ದು ಟೀಕೆಗೆ ಗುರಿಯಾಗಿದೆ. ಗುರುವಾರ ಉದಯ ನಿಧಿ ಜನ್ಮದಿನ ಸಂಭ್ರಮಕ್ಕಾಗಿ ಡಿಎಂಕೆ ಆಯೋಜಿಸಿದ್ದ ಸಮಾರಂಭದಲ್ಲಿ ಡಿಎಂಕೆ ಸಚಿವ ಪೆರಿಯಕರುಪ್ಪನ್, ಪಕ್ಷದ ಇತರ ಸದಸ್ಯರ ಮುಂದೆ ತುಂಡುಡುಗೆ ತೊಟ್ಟ ಲಲ ನೆಯರು ನೃತ್ಯ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಅರ್ಧ ಬಟ್ಟೆ ಧರಿಸಿದ ನಾರಿಯರು ಸಚಿ ವರ ಸನಿಹ ಬಂದು ನೃತ್ಯ ಮಾಡುತ್ತಿದ್ದರು. ಸಚಿವ, ಇತರ ಡಿಎಂಕೆ ಸದಸ್ಯರು ಇದನ್ನು ಸುಮ್ಮನೇ ನೋಡಿ ಆಸ್ವಾದಿಸುತ್ತಿರುವುದು ದೃಶ್ಯದಲ್ಲಿದೆ.

whatsapp Sim Card

10:51 PM (IST) Nov 29

ಶೀಘ್ರದಲ್ಲೇ, ಆಕ್ಟೀವ್‌ ಸಿಮ್‌ ಕಾರ್ಡ್‌ ಇಲ್ಲದೆ ವಾಟ್ಸಾಪ್‌ ಬಳಸೋಕೆ ಸಾಧ್ಯವಿಲ್ಲ!

ಭಾರತ ಸರ್ಕಾರವು ವಾಟ್ಸಾಪ್, ಟೆಲಿಗ್ರಾಮ್‌ನಂತಹ ಮೆಸೇಜಿಂಗ್ ಅಪ್ಲಿಕೇಶನ್‌ಗಳಿಗೆ ಪ್ರಮುಖ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಈ ನಿಯಮದ ಪ್ರಕಾರ, ಬಳಕೆದಾರರು ತಮ್ಮ ಸಾಧನದಲ್ಲಿ ಸಕ್ರಿಯ ಸಿಮ್ ಕಾರ್ಡ್ ಹೊಂದಿದ್ದರೆ ಮಾತ್ರ ಈ ಅಪ್ಲಿಕೇಶನ್‌ಗಳನ್ನು ಬಳಸಲು ಸಾಧ್ಯವಾಗುತ್ತದೆ.

Read Full Story

10:23 PM (IST) Nov 29

ಆಪರೇಷನ್‌ ಸಿಂದೂರ್‌ ಪರಿಣಾಮ, ಗಡಿಯಿಂದ 72 ಟೆರರ್‌ ಲಾಂಚ್‌ಪ್ಯಾಡ್‌ ಶಿಫ್ಟ್‌ ಮಾಡಿದ ಪಾಕಿಸ್ತಾನ!

ಜಮ್ಮುವಿನಲ್ಲಿ ನಡೆದ ಬಿಎಸ್‌ಎಫ್‌ನ 60ನೇ ವಾರ್ಷಿಕೋತ್ಸವದ ಪತ್ರಿಕಾಗೋಷ್ಠಿಯಲ್ಲಿ, 'ಆಪರೇಷನ್ ಸಿಂಧೂರ್ 2.0' ಗಾಗಿ ಸಿದ್ಧತೆ ಮತ್ತು ಶೂನ್ಯ ಒಳನುಸುಳುವಿಕೆ ಗುರಿಯನ್ನು ಘೋಷಿಸಲಾಯಿತು. ಈವರೆಗೆ 118 ಪಾಕಿಸ್ತಾನಿ ಪೋಸ್ಟ್‌ಗಳನ್ನು ನಾಶಪಡಿಸಲಾಗಿದೆ.

Read Full Story

08:59 PM (IST) Nov 29

ಬೆಂಗಳೂರು, ಮುಂಬೈನಲ್ಲಿ ಮನೆ ಬಾಡಿಗೆ ನಿಯಮಗಳಲ್ಲಿ ಭಾರೀ ಬದಲಾವಣೆ, ಇನ್ನು 11 ತಿಂಗಳ ಬಾಡಿಗೆ ಅಡ್ವಾನ್ಸ್‌ ಆಗಿ ನೀಡಬೇಕಿಲ್ಲ!

ಜಾರಿಗೆ ಬರಲಿರುವ ಹೊಸ ಮನೆ ಬಾಡಿಗೆ ನಿಯಮಗಳು 2025, ಬೆಂಗಳೂರು ಮತ್ತು ಮುಂಬೈನಂತಹ ನಗರಗಳಲ್ಲಿ ಬಾಡಿಗೆದಾರರಿಗೆ ದೊಡ್ಡ ಪರಿಹಾರವನ್ನು ತರಲಿವೆ. ಈ ನಿಯಮಗಳ ಅನ್ವಯ, ಗರಿಷ್ಠ ಎರಡು ತಿಂಗಳ ಬಾಡಿಗೆಯನ್ನು ಮಾತ್ರ ಅಡ್ವಾನ್ಸ್ ಆಗಿ ಪಡೆಯಬಹುದಾಗಿದ್ದು, ಎಲ್ಲಾ ಒಪ್ಪಂದಗಳ ನೋಂದಣಿ ಕಡ್ಡಾಯವಾಗಿದೆ.

Read Full Story

08:27 PM (IST) Nov 29

ಪಾಕಿಸ್ತಾನ ಸೂಪರ್‌ ಲೀಗ್‌ಗಾಗಿ ಐಪಿಎಲ್‌ಗೆ ಗುಡ್‌ಬೈ ಹೇಳಿದ ಆರ್‌ಸಿಬಿ ಮಾಜಿ ಪ್ಲೇಯರ್‌!

14 ವರ್ಷಗಳ ಕಾಲ ಐಪಿಎಲ್‌ನಲ್ಲಿ ಆಡಿದ ಆರ್‌ಸಿಬಿ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್, ಮುಂಬರುವ ಹರಾಜಿನಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ. ಐಪಿಎಲ್ ಬದಲಿಗೆ ಅವರು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ (ಪಿಎಸ್‌ಎಲ್) ಆಡುವ ಮೂಲಕ ಹೊಸ ಕ್ರಿಕೆಟ್ ಪಯಣ ಆರಂಭಿಸಲಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.
Read Full Story

06:54 PM (IST) Nov 29

Muddu Sose Serial ವೀರಭದ್ರನ ಪಾತ್ರ ಮುಗೀತಾ? Bigg Boss ಮನೆಯಲ್ಲಿ ವೈಲ್ಡ್‌ ಕಾರ್ಡ್‌ ಸ್ಪರ್ಧಿಯಾಗ್ತಾರಾ?

Muddu Sose Serial Episode: ಮುದ್ದುಸೊಸೆ ಧಾರಾವಾಹಿಯಲ್ಲಿ ವೀರಭದ್ರನಿಗೆ ಹಾವು ಕಚ್ಚಿದೆ. ಇನ್ನೊಂದು ಕಡೆ ವೀರಭದ್ರ ಪಾತ್ರಧಾರಿ ತ್ರಿವಿಕ್ರಮ್‌ ಅವರು ಬಿಗ್‌ ಬಾಸ್ ಮನೆ ಸೇರಿಕೊಂಡಿದ್ದಾರೆ. ಭದ್ರ ಪಾತ್ರ ಮುಗಿದರೆ, ಅವರು ದೊಡ್ಮನೆಯಲ್ಲಿ ವೈಲ್ಡ್‌ಕಾರ್ಡ್‌ ಎಂಟ್ರಿಯಾಗಿ ಸ್ಪರ್ಧೆ ಮಾಡಲಿದ್ದಾರೆ.

Read Full Story

06:33 PM (IST) Nov 29

ತನ್ನನ್ನೇ ತಾನು ತಿಂದ್ರೆ ಈ ತರಕಾರಿಗಳ ರಿಯಾಕ್ಷನ್​ ಹೇಗಿರತ್ತೆ ಗೊತ್ತಾ? ಫನ್ನಿ ಕ್ಯೂಟ್​​ ವಿಡಿಯೋ ವೈರಲ್​

ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಹಾಗಲಕಾಯಿ, ಈರುಳ್ಳಿ, ಕ್ಯಾರೆಟ್‌ನಂತಹ ತರಕಾರಿಗಳು ತಮ್ಮದೇ ತುಂಡನ್ನು ತಿಂದಾಗ ವಿಚಿತ್ರವಾಗಿ ಪ್ರತಿಕ್ರಿಯಿಸುತ್ತವೆ. ಕೆಲವು ಖುಷಿಪಟ್ಟರೆ, ಇನ್ನು ಕೆಲವು ಅಳುವ ದೃಶ್ಯಗಳು ನಗಿಸುತ್ತಿವೆ.

Read Full Story

06:30 PM (IST) Nov 29

BBK 12 - ಗಿಲ್ಲಿ ನಟನ ವಿರುದ್ಧ ತಿರುಗಿಬಿದ್ದ ಇಡೀ ಮನೆ; ಕಿಚ್ಚ ಸುದೀಪ್‌ ಪ್ರಶ್ನೆಗೆ ಕಾಮಿಡಿ ಕಿಲಾಡಿ ಸೈಲೆಂಟ್

BBK 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಅವರ ಕಾಮಿಡಿಯನ್ನು ವೀಕ್ಷಕರು ಹೊಗಳಿದರೆ, ಅಲ್ಲಿದ್ದವರು ಮನಸ್ಸಿಗೆ ಬೇಸರ ಆಗುತ್ತದೆ, ಅತಿರೇಕ ಆಯ್ತು ಎಂದು ಆರೋಪ ಮಾಡಿದ್ದರು. ಈಗ ಗಿಲ್ಲಿಗೆ ಕ್ಲಾಸ್‌ ತಗೊಳ್ತಾರಾ?

 

Read Full Story

06:07 PM (IST) Nov 29

ಬಾಕ್ಸ್‌ ಆಫೀಸ್‌ ಸುಲ್ತಾನ್‌ಗಳಾದ ಅಲ್ಲು ಅರ್ಜುನ್‌, ಪವನ್‌ ಕಲ್ಯಾಣ್‌ ಜೊತೆ ರಾಜಮೌಳಿ ಯಾಕೆ ಸಿನಿಮಾ ಮಾಡಲಿಲ್ಲ?

Director SS Rajamouli Movies: ತೆಲುಗಿನಲ್ಲಿ ಸಣ್ಣ, ದೊಡ್ಡ ಹೀರೋಗಳ ಜೊತೆ ಸಿನಿಮಾ ಮಾಡಿರೋ ರಾಜಮೌಳಿ, ಪವನ್ ಕಲ್ಯಾಣ್ ಮತ್ತು ಅಲ್ಲು ಅರ್ಜುನ್ ಜೊತೆ ಯಾಕೆ ಸಿನಿಮಾ ಮಾಡಿಲ್ಲ ಗೊತ್ತಾ? ಇನ್ಮುಂದೆ ಇವರ ಕಾಂಬೋದಲ್ಲಿ ಸಿನಿಮಾ ಬರೋದು ಕಷ್ಟನಾ?

Read Full Story

05:40 PM (IST) Nov 29

ನಮ್ಮ ಮೇಲೆ ದಬ್ಬಾಳಿಕೆ ಆದಾಗಲೆಲ್ಲಾ ಜಿಹಾದ್ ಇದ್ದೇ ಇರುತ್ತದೆ - ಮೌಲಾನಾ ಮಹಮೂದ್ ಮದನಿ

ಬಾಬರಿ ಮಸೀದಿ ಮತ್ತು ತ್ರಿವಳಿ ತಲಾಕ್‌ ಪ್ರಕರಣಗಳ ತೀರ್ಪು ನೀಡುವಲ್ಲಿ ನ್ಯಾಯಾಂಗವು ಸರ್ಕಾರದ ಒತ್ತಡಕ್ಕೆ ಮಣಿದು ವರ್ತಿಸುತ್ತಿದೆ ಎಂದು ಜಮಿಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಮದನಿ ಆರೋಪಿಸಿದರು.

 

Read Full Story

05:24 PM (IST) Nov 29

Puttakkana Makkalu ಶೂಟಿಂಗ್​ನಲ್ಲಿ 'ಕಟ್​ ಕಟ್'​ ಅಂದ್ರೂ ವೀರಾವೇಶದಲ್ಲಿ ಉಮಾಶ್ರೀ ಫೈಟ್ - ವಿಡಿಯೋ ವೈರಲ್​

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ನಟಿ ಉಮಾಶ್ರೀ ತಮ್ಮ ಅಮೋಘ ಅಭಿನಯದಿಂದ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ, ಫೈಟಿಂಗ್ ದೃಶ್ಯವೊಂದರ ಚಿತ್ರೀಕರಣದ ವೇಳೆ ನಿರ್ದೇಶಕರು 'ಕಟ್' ಹೇಳಿದರೂ ಪಾತ್ರದಲ್ಲಿ ಸಂಪೂರ್ಣವಾಗಿ ಲೀನವಾಗಿ ನಟನೆಯನ್ನು ಮುಂದುವರಿಸಿದ ಘಟನೆ ನಡೆದಿದೆ. 

Read Full Story

05:17 PM (IST) Nov 29

ತಂದೆಗಾಗಿ ಜೀವನವಿಡೀ ಹುಡುಕಾಟ ನಡೆಸಿದ್ದ ಆಸೀಸ್‌ ಪ್ರಧಾನಿಗೆ 62ರ ವಯಸ್ಸಲ್ಲಿ ಮದುವೆ, 16 ವರ್ಷದ ಕಿರಿಯ ಮಹಿಳೆಯ ಕೈಹಿಡಿದ ಅಲ್ಬನೀಸ್‌!

ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್‌ ತಮ್ಮ 62ನೇ ವಯಸ್ಸಿನಲ್ಲಿ ವಿವಾಹವಾಗಿದ್ದಾರೆ. ತನಗಿಂತ 16 ವರ್ಷ ಕಿರಿಯ ಮಹಿಳೆಯನ್ನು ಅವರು ವರಿಸಿದ್ದು, ಪ್ರಧಾನಿ ಆಗಿದ್ದ ವೇಳೆಯಲ್ಲೇ ಮದುವೆಯಾದ ವಿಶ್ವದ ಮೊದಲ ರಾಜಕಾರಣಿ ಎನಿಸಿದ್ದಾರೆ.

 

Read Full Story

04:09 PM (IST) Nov 29

ಅಶ್ವಿನಿಯವ್ರ ಜಗಳ ಇಷ್ಟ ಎನ್ನುತ್ತಲೇ Bigg Boss 12 ವಿನ್ನರ್​ ಘೋಷಿಸಿದ ಯಜಮಾನ ಸೀರಿಯಲ್​ ಝಾನ್ಸಿ-ರಘು!

ಬಿಗ್ ಬಾಸ್ 12ರ ವಿನ್ನರ್ ಯಾರು ಎಂಬ ಚರ್ಚೆ ಜೋರಾಗಿದ್ದು, ಬಹುತೇಕ ಮಂದಿ 'ಗಿಲ್ಲಿ ನಟ'ನ ಹೆಸರನ್ನೇ ಸೂಚಿಸುತ್ತಿದ್ದಾರೆ. ಎಲಿಮಿನೇಟ್ ಆದ ಸ್ಪರ್ಧಿಗಳಿಂದ ಹಿಡಿದು 'ಯಜಮಾನ' ಧಾರಾವಾಹಿ ಕಲಾವಿದರಾದ ಝಾನ್ಸಿ ಮತ್ತು ರಾಘು ಕೂಡ ಗಿಲ್ಲಿ ನಟನ ಮನರಂಜನೆಯನ್ನು ಮೆಚ್ಚಿದ್ದಾರೆ.

Read Full Story

03:36 PM (IST) Nov 29

Dhanush Hit Movies - ಒಂದೊಳ್ಳೆಯ ರಿವ್ಯೂ ಪಡೆದು, ಸೂಪರ್‌ ಹಿಟ್‌ ಕಲೆಕ್ಷನ್‌ ಮಾಡಿರುವ ಧನುಷ್‌ ಸಿನಿಮಾಗಳಿವು

Actor Dhanush Movies: ತಮಿಳು ನಟ ಧನುಷ್ ನಟನೆಯ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾಗಳು: ಸೂಪರ್‌ಸ್ಟಾರ್ ಧನುಷ್ ಅಭಿನಯದ 'ತೇರೆ ಇಷ್ಕ್ ಮೇ' ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ನೋಡುವ ಮುನ್ನ, OTTಯಲ್ಲಿ ಲಭ್ಯವಿರುವ ಧನುಷ್ ಅವರ ಅತಿ ಹೆಚ್ಚು ಗಳಿಕೆ ಕಂಡ ಈ 7 ಸಿನಿಮಾಗಳು ಇಲ್ಲಿವೆ.

Read Full Story

03:10 PM (IST) Nov 29

ಇನ್​ಸ್ಟಾಗೆ ಬಂತು ದೃಷ್ಟಿಬೊಟ್ಟು - ಸ್ಮೃತಿ ಮಂಧಾನ- ಪಲಾಶ್​ ಮದ್ವೆ ಬಗ್ಗೆ ಮಾತಾಡಿದವರೆಲ್ಲಾ ಸುಸ್ತೋ ಸುಸ್ತು!

ಕ್ರಿಕೆಟ್ ತಾರೆ ಸ್ಮೃತಿ ಮಂಧನಾ ಮತ್ತು ಪಲಾಶ್ ಮುಚ್ಚಲ್ ಅವರ ಮದುವೆ ಮುಂದೂಡಿಕೆಯ ನಡುವೆ, ಪಲಾಶ್‌ಗೆ ಬೇರೊಂದು ಸಂಬಂಧವಿದೆ ಎಂಬ ವದಂತಿಗಳು ಹಬ್ಬಿದ್ದವು. ಈ ಆರೋಪಗಳಿಗೆ ಉತ್ತರವಾಗಿ, ಜೋಡಿಯು ತಮ್ಮ ಇನ್‌ಸ್ಟಾಗ್ರಾಮ್ ಬಯೋದಲ್ಲಿ 'ನಜರ್' ಇಮೋಜಿ ಬಳಸುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
Read Full Story

03:09 PM (IST) Nov 29

BBK 12 - ಅಷ್ಟೆಲ್ಲ ಬಟ್ಟೆಯಿದ್ರೂ ಗಿಲ್ಲಿ ನಟ ಬನಿಯನ್‌ನಲ್ಲೇ ಓಡಾಡೋದು ಯಾಕೆ? ಸಾಕ್ಷಿ ಸಮೇತ ರಘು ಬಿಚ್ಚಿಟ್ರು ಕಾರಣ!

ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ಗಿಲ್ಲಿ ನಟ ಯಾವಾಗಲೂ ಟ್ರ್ಯಾಕ್‌ ಪ್ಯಾಂಟ್‌ ಹಾಗೂ ಬನಿಯನ್‌ ಹಾಕಿಕೊಂಡು ಇರುತ್ತಾರೆ. ಅಶ್ವಿನಿಯಿಂದ ಹಿಡಿದು, ಧ್ರುವಂತ್‌ವರೆಗೆ ಅನೇಕರು ಅವರಿಗೆ ಬಟ್ಟೆ ಕಳಿಸಿದ್ದರು. ಎರಡು ವಾರಗಳಿಂದ ಅವರಿಗೆ ಬಕೆಟ್‌ಗಟ್ಟಲೇ ಬಟ್ಟೆ ಬರುತ್ತಿದೆ, ಆದರೆ ಅವರು ಅದನ್ನು ಹಾಕಿಕೊಳ್ತಿಲ್ಲ.

Read Full Story

02:09 PM (IST) Nov 29

ದೆವ್ವಗಳಿಗಾಗಿ ಹುಣಸೆ ಮರದಲ್ಲಿ 3 BHK ಫ್ಲ್ಯಾಟ್​! Naa Ninna bidalaare ಕ್ಯೂಟ್​ ಭೂತದಿಂದ ರಿವೀಲ್​

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯ ಜನಪ್ರಿಯ ಪಾತ್ರಗಳಾದ ಅಂಬಿಕಾ ದೆವ್ವ ಮತ್ತು ದುರ್ಗಾ, ತೆರೆಹಿಂದೆ ಮಾಡಿದ ರೀಲ್ಸ್​ನಲ್ಲಿ ತಮ್ಮ ತಮಾಷೆಯ ಮಾತುಕತೆಯಿಂದ ಗಮನ ಸೆಳೆದಿದ್ದಾರೆ. ನಟಿಯರಾದ ನೀತಾ ಅಶೋಕ್ ಮತ್ತು ರಿಷಿಕಾ ಅವರ ಈ ರೀಲ್ಸ್ ವೈರಲ್ ಆಗಿದೆ.

 

Read Full Story

12:58 PM (IST) Nov 29

ದರ್ಶನ್​ ವಿಷ್ಯದಲ್ಲಿ ಹಲ್​ಚಲ್ ಸೃಷ್ಟಿಸಿದ್ದ ಸೋನು ಶೆಟ್ಟಿ ವಿರುದ್ಧ ದೂರು - ಲೈವ್​ಗೆ ಬಂದು ಸೋನು ಹೇಳಿದ್ದೇನು?

ದರ್ಶನ್ ಪ್ರಕರಣದಲ್ಲಿ ಸುದ್ದಿಯಾಗಿದ್ದ ಕಂಟೆಂಟ್ ಕ್ರಿಯೇಟರ್ ಸೋನು ಶೆಟ್ಟಿ ವಿರುದ್ಧ ಇದೀಗ ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಪವಿತ್ರಾ ಅವರು ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಸೋನು ಪರಾರಿಯಾಗಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ಲೈವ್​ ಮೂಲಕ ಸ್ಪಷ್ಟನೆ ನೀಡಿದ್ದಾರೆ.

Read Full Story

12:57 PM (IST) Nov 29

ಮುಳುಗೆದ್ದ ಹೆಣ್ಣ ಮೈಯ್ಲಿ, ಹಂಸಲೇಖ ಲೇಖನಿಯಿಂದ ಜಾರಿದ ಶೃಂಗಾರಮಯ ಸಾಲುಗಳು ವೈರಲ್

ನಾದಬ್ರಹ್ಮ ಹಂಸಲೇಖ ಅವರ ಹಾಡುಗಳಲ್ಲಿನ ತುಂಟತನ ಎಲ್ಲರಿಗೂ ತಿಳಿದಿದೆ. 1994ರ 'ರಸಿಕ' ಚಿತ್ರದ 'ಅಂಬರವೇರಿ ಅಂಬರವೇರಿ' ಹಾಡಿನಲ್ಲಿ ಪ್ರಕೃತಿಯನ್ನು ಹೆಣ್ಣಿನ ಸೌಂದರ್ಯಕ್ಕೆ ಹೋಲಿಸಿ ಬರೆದ ಶೃಂಗಾರಮಯ ಸಾಲುಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Read Full Story

12:01 PM (IST) Nov 29

Bhagyalakshmi ಯಾರೂ ಊಹಿಸದ ಟ್ವಿಸ್ಟ್​ - ಬಹು ದೊಡ್ಡ ತೀರ್ಮಾನ ತೆಗೆದುಕೊಂಡ ಆದಿ- ಏನದು?

ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ, ಭಾಗ್ಯಳಿಂದ ಸ್ಫೂರ್ತಿ ಪಡೆದ ಆದಿ ತನ್ನ ಸಾವಿರಾರು ಕೋಟಿ ರೂಪಾಯಿ ಕಂಪನಿಯನ್ನು ತಂಗಿ ಕನ್ನಿಕಾಗೆ ಬಿಟ್ಟುಕೊಟ್ಟು ಸ್ವಾವಲಂಬಿ ಬದುಕು ಆರಂಭಿಸಿದ್ದಾನೆ. ಭಾಗ್ಯಳಲ್ಲಿ ತನ್ನ ತಾಯಿಯನ್ನು ಕಾಣುವ ಆದಿ, ಆಕೆಯ ಜೊತೆ ಹೊಸ ಸ್ನೇಹದ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದಾರೆ. 

Read Full Story

11:44 AM (IST) Nov 29

Bigg Boss ಮನೆಯಲ್ಲಿ ರಕ್ಷಿತಾ ಶೆಟ್ಟಿ ಒಂಥರಾ ಲಕ್ಕಿ; ನಾಲ್ಕರಲ್ಲಿ ಮೂರು ಸತ್ಯ ಆಯ್ತು! ಇದು ಕಾಕತಾಳೀಯನಾ?

ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರನ್ನು ಅದೃಷ್ಟವಂತೆ ಎಂದು ಕರೆಯಲಾಗುತ್ತಿದೆ. ಅವರು ಅಂದುಕೊಂಡ ಹಲವು ವಿಷಯಗಳು ಮನೆಯಲ್ಲಿ ನಿಜವಾಗಿದ್ದು, ಈಗಾಗಲೇ ಮೂರು ಘಟನೆಗಳು ಸತ್ಯವಾಗಿವೆ ಮತ್ತು ನಾಲ್ಕನೆಯದು ಸತ್ಯವಾಗುವುದೇ ಎಂದು ಕಾದು ನೋಡಲಾಗುತ್ತಿದೆ.
Read Full Story

11:35 AM (IST) Nov 29

ಪ್ರೇಮವೋ, ದ್ವೇಷವೋ, ಥ್ರಿಲ್ಲರೋ? - ಇಲ್ಲಿದೆ ಅನೇಕ ತಿರುವುಗಳ 'ಫ್ಲರ್ಟ್' ಸಿನಿಮಾ ವಿಮರ್ಶೆ

ಫ್ಲರ್ಟ್ ಒಬ್ಬನ ಆತ್ಮಕತೆಯಂತೆ ಶುರುವಾಗುವ ಕತೆ ನಿಧಾನಕ್ಕೆ ಪಥ ಬದಲಿಸುತ್ತದೆ. ಅಂತಿಮ ಹಂತಕ್ಕೆ ಬರುವ ವೇಳೆಗೆ ಎಲ್ಲವೂ ಬದಲಾಗಿರುತ್ತದೆ. ಪ್ರಥಮಾರ್ಧದಲ್ಲಿ ಕತೆಯ ಯಾವೊಂದು ಅಂಶವನ್ನೂ ಬಿಟ್ಟುಕೊಡುವುದಿಲ್ಲ.

Read Full Story

11:26 AM (IST) Nov 29

‘ಪಾಠಶಾಲಾ’ ಸಿನಿಮಾ ವಿಮರ್ಶೆ - ಕಾಡು, ಶಾಲೆ, ಮಕ್ಕಳ ಕನಸುಗಳ ಸಂವೇದನಶೀಲ ಕಥೆ

ಕತೆ ಸಾಗುವುದು ಮಲೆನಾಡಿನ ಹಿನ್ನೆಲೆಯಲ್ಲಿ. ಅಲ್ಲಿನ ಸ್ಥಳೀಯ ಭಾಷೆಯ ಸೊಗಡಿಗೆ ಪಾತ್ರಧಾರಿಗಳ‍ ಸಂಭಾಷಣೆಗಳು ಜೀವ ತುಂಬಿವೆ. ಹೀಗಾಗಿ ಇದು ನೆಲದ ಬದುಕಿನ ಸಿನಿಮಾ ಕೂಡ ಹೌದು. ಪ್ರಕೃತಿ ಸೌಂದರ್ಯದ ನಡುವೆ ಇರುವ ಒಂದು ಹಳ್ಳಿ.

Read Full Story

11:18 AM (IST) Nov 29

ಬೆಟ್ಟ ಅಗೆದು ಇಲಿ ಹಿಡಿದ ಕಥೆ - ಇಲ್ಲಿದೆ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಸಿನಿಮಾ ವಿಮರ್ಶೆ

ಆರಂಭದಲ್ಲಿ ತೀರ ಪಡ್ಡೆ ಹೈಕಳ ಲೆವೆಲ್‌ನಲ್ಲಿರುವ ಕಳ್ಳರು ಇದ್ದಕ್ಕಿದ್ದ ಹಾಗೆ ಕಂಪ್ಲೀಟ್‌ ಪ್ರಬುದ್ಧರಾಗಿ ಬದಲಾಗುವ ಬಗೆ ಇನ್ನಷ್ಟು ಕನ್ವಿನ್ಸಿಂಗ್‌ ಆಗಿರಬಹುದಿತ್ತು. ಯದ್ವಾತದ್ವಾ ಅನಾವಶ್ಯಕ ಅಂಶಗಳಿವೆ. ಹಾಡು, ಡ್ಯಾನ್ಸ್‌ ಕಿಕ್‌ ಹೆಚ್ಚಿಸಲ್ಲ.

Read Full Story

08:42 AM (IST) Nov 29

ಅತಿಥಿಗಳ ಮುಂದೆ ಬಿಗ್‌ಬಾಸ್ ಮನೆಯಲ್ಲಿರೋ ರಹಸ್ಯ ಬಾಗಿಲು ಹೇಳಿದ ಗಿಲ್ಲಿ ನಟ

ಬಿಗ್‌ಬಾಸ್ ಮನೆಯ ರಹಸ್ಯ ಬಾಗಿಲಿನ ಬಗ್ಗೆ ಗಿಲ್ಲಿ ನಟ ಮಾಹಿತಿ ಬಹಿರಂಗಪಡಿಸಿದ್ದಾರೆ. ಇದನ್ನು 'ಹಿತ್ತಲಿನ ಬಾಗಿಲು' ಎಂದು ಕರೆದಿದ್ದು, ಈ ಹಿಂದೆ ಅಶ್ವಿನಿ ಗೌಡ ಕೂಡ ಇದರ ಬಗ್ಗೆ ಮಾತನಾಡಿದ್ದರು. ಈ ವಾರದ ಬಿಬಿ ಪ್ಯಾಲೇಸ್ ಟಾಸ್ಕ್ ಮತ್ತು ಅತಿಥಿಗಳ ವರ್ತನೆಯ ಬಗ್ಗೆಯೂ ಲೇಖನದಲ್ಲಿ ಚರ್ಚಿಸಲಾಗಿದೆ.

Read Full Story

08:07 AM (IST) Nov 29

BBK 12 - ಮಹಿಳಾ ಸ್ಪರ್ಧಿಗೂ ತಿ* ಗಾಂಚಲಿ ಪದ ಬಳಸಿದ ಧ್ರುವಂತ್? ಏನಾಗ್ತಿದೆ ಬಿಗ್‌ಬಾಸ್ ಮನೆಯಲ್ಲಿ?

ಬಿಗ್‌ಬಾಸ್ ಮನೆಯಲ್ಲಿ 'ತಿ* ಗಾಂಚಲಿ' ಪದದ ಬಳಕೆಯು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಧ್ರುವಂತ್ ಈ ಪದವನ್ನು ಬಳಸಿದ್ದು, ಇದು ಸ್ಪರ್ಧಿಗಳ ನಡುವೆ ತೀವ್ರ ಜಗಳಕ್ಕೆ ಕಾರಣವಾಗಿದೆ. ಈ ಹಿಂದೆ 'ಸಡೆ' ಪದದ ಬಳಕೆಯಂತೆ, ಈ ಹೊಸ ಪದವೂ ವೀಕ್ಷಕರಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story

More Trending News