ಚೆನ್ನೈ: ಡಿಎಂಕೆ ನಾಯಕ ಹಾಗೂ ಡಿಸಿಎಂ ಉದಯನಿಧಿ ಸ್ಟಾಲಿನ್ ಜನ್ಮದಿನ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಅರೆಬೆತ್ತಲೆ ನರ್ತಕಿಯರು ನರ್ತಿಸಿದ್ದು ಟೀಕೆಗೆ ಗುರಿಯಾಗಿದೆ. ಗುರುವಾರ ಉದಯ ನಿಧಿ ಜನ್ಮದಿನ ಸಂಭ್ರಮಕ್ಕಾಗಿ ಡಿಎಂಕೆ ಆಯೋಜಿಸಿದ್ದ ಸಮಾರಂಭದಲ್ಲಿ ಡಿಎಂಕೆ ಸಚಿವ ಪೆರಿಯಕರುಪ್ಪನ್, ಪಕ್ಷದ ಇತರ ಸದಸ್ಯರ ಮುಂದೆ ತುಂಡುಡುಗೆ ತೊಟ್ಟ ಲಲ ನೆಯರು ನೃತ್ಯ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಅರ್ಧ ಬಟ್ಟೆ ಧರಿಸಿದ ನಾರಿಯರು ಸಚಿ ವರ ಸನಿಹ ಬಂದು ನೃತ್ಯ ಮಾಡುತ್ತಿದ್ದರು. ಸಚಿವ, ಇತರ ಡಿಎಂಕೆ ಸದಸ್ಯರು ಇದನ್ನು ಸುಮ್ಮನೇ ನೋಡಿ ಆಸ್ವಾದಿಸುತ್ತಿರುವುದು ದೃಶ್ಯದಲ್ಲಿದೆ.

10:51 PM (IST) Nov 29
ಭಾರತ ಸರ್ಕಾರವು ವಾಟ್ಸಾಪ್, ಟೆಲಿಗ್ರಾಮ್ನಂತಹ ಮೆಸೇಜಿಂಗ್ ಅಪ್ಲಿಕೇಶನ್ಗಳಿಗೆ ಪ್ರಮುಖ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಈ ನಿಯಮದ ಪ್ರಕಾರ, ಬಳಕೆದಾರರು ತಮ್ಮ ಸಾಧನದಲ್ಲಿ ಸಕ್ರಿಯ ಸಿಮ್ ಕಾರ್ಡ್ ಹೊಂದಿದ್ದರೆ ಮಾತ್ರ ಈ ಅಪ್ಲಿಕೇಶನ್ಗಳನ್ನು ಬಳಸಲು ಸಾಧ್ಯವಾಗುತ್ತದೆ.
10:23 PM (IST) Nov 29
ಜಮ್ಮುವಿನಲ್ಲಿ ನಡೆದ ಬಿಎಸ್ಎಫ್ನ 60ನೇ ವಾರ್ಷಿಕೋತ್ಸವದ ಪತ್ರಿಕಾಗೋಷ್ಠಿಯಲ್ಲಿ, 'ಆಪರೇಷನ್ ಸಿಂಧೂರ್ 2.0' ಗಾಗಿ ಸಿದ್ಧತೆ ಮತ್ತು ಶೂನ್ಯ ಒಳನುಸುಳುವಿಕೆ ಗುರಿಯನ್ನು ಘೋಷಿಸಲಾಯಿತು. ಈವರೆಗೆ 118 ಪಾಕಿಸ್ತಾನಿ ಪೋಸ್ಟ್ಗಳನ್ನು ನಾಶಪಡಿಸಲಾಗಿದೆ.
08:59 PM (IST) Nov 29
ಜಾರಿಗೆ ಬರಲಿರುವ ಹೊಸ ಮನೆ ಬಾಡಿಗೆ ನಿಯಮಗಳು 2025, ಬೆಂಗಳೂರು ಮತ್ತು ಮುಂಬೈನಂತಹ ನಗರಗಳಲ್ಲಿ ಬಾಡಿಗೆದಾರರಿಗೆ ದೊಡ್ಡ ಪರಿಹಾರವನ್ನು ತರಲಿವೆ. ಈ ನಿಯಮಗಳ ಅನ್ವಯ, ಗರಿಷ್ಠ ಎರಡು ತಿಂಗಳ ಬಾಡಿಗೆಯನ್ನು ಮಾತ್ರ ಅಡ್ವಾನ್ಸ್ ಆಗಿ ಪಡೆಯಬಹುದಾಗಿದ್ದು, ಎಲ್ಲಾ ಒಪ್ಪಂದಗಳ ನೋಂದಣಿ ಕಡ್ಡಾಯವಾಗಿದೆ.
08:27 PM (IST) Nov 29
06:54 PM (IST) Nov 29
Muddu Sose Serial Episode: ಮುದ್ದುಸೊಸೆ ಧಾರಾವಾಹಿಯಲ್ಲಿ ವೀರಭದ್ರನಿಗೆ ಹಾವು ಕಚ್ಚಿದೆ. ಇನ್ನೊಂದು ಕಡೆ ವೀರಭದ್ರ ಪಾತ್ರಧಾರಿ ತ್ರಿವಿಕ್ರಮ್ ಅವರು ಬಿಗ್ ಬಾಸ್ ಮನೆ ಸೇರಿಕೊಂಡಿದ್ದಾರೆ. ಭದ್ರ ಪಾತ್ರ ಮುಗಿದರೆ, ಅವರು ದೊಡ್ಮನೆಯಲ್ಲಿ ವೈಲ್ಡ್ಕಾರ್ಡ್ ಎಂಟ್ರಿಯಾಗಿ ಸ್ಪರ್ಧೆ ಮಾಡಲಿದ್ದಾರೆ.
06:33 PM (IST) Nov 29
ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಹಾಗಲಕಾಯಿ, ಈರುಳ್ಳಿ, ಕ್ಯಾರೆಟ್ನಂತಹ ತರಕಾರಿಗಳು ತಮ್ಮದೇ ತುಂಡನ್ನು ತಿಂದಾಗ ವಿಚಿತ್ರವಾಗಿ ಪ್ರತಿಕ್ರಿಯಿಸುತ್ತವೆ. ಕೆಲವು ಖುಷಿಪಟ್ಟರೆ, ಇನ್ನು ಕೆಲವು ಅಳುವ ದೃಶ್ಯಗಳು ನಗಿಸುತ್ತಿವೆ.
06:30 PM (IST) Nov 29
BBK 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಅವರ ಕಾಮಿಡಿಯನ್ನು ವೀಕ್ಷಕರು ಹೊಗಳಿದರೆ, ಅಲ್ಲಿದ್ದವರು ಮನಸ್ಸಿಗೆ ಬೇಸರ ಆಗುತ್ತದೆ, ಅತಿರೇಕ ಆಯ್ತು ಎಂದು ಆರೋಪ ಮಾಡಿದ್ದರು. ಈಗ ಗಿಲ್ಲಿಗೆ ಕ್ಲಾಸ್ ತಗೊಳ್ತಾರಾ?
06:07 PM (IST) Nov 29
Director SS Rajamouli Movies: ತೆಲುಗಿನಲ್ಲಿ ಸಣ್ಣ, ದೊಡ್ಡ ಹೀರೋಗಳ ಜೊತೆ ಸಿನಿಮಾ ಮಾಡಿರೋ ರಾಜಮೌಳಿ, ಪವನ್ ಕಲ್ಯಾಣ್ ಮತ್ತು ಅಲ್ಲು ಅರ್ಜುನ್ ಜೊತೆ ಯಾಕೆ ಸಿನಿಮಾ ಮಾಡಿಲ್ಲ ಗೊತ್ತಾ? ಇನ್ಮುಂದೆ ಇವರ ಕಾಂಬೋದಲ್ಲಿ ಸಿನಿಮಾ ಬರೋದು ಕಷ್ಟನಾ?
05:40 PM (IST) Nov 29
ಬಾಬರಿ ಮಸೀದಿ ಮತ್ತು ತ್ರಿವಳಿ ತಲಾಕ್ ಪ್ರಕರಣಗಳ ತೀರ್ಪು ನೀಡುವಲ್ಲಿ ನ್ಯಾಯಾಂಗವು ಸರ್ಕಾರದ ಒತ್ತಡಕ್ಕೆ ಮಣಿದು ವರ್ತಿಸುತ್ತಿದೆ ಎಂದು ಜಮಿಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಮದನಿ ಆರೋಪಿಸಿದರು.
05:24 PM (IST) Nov 29
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ನಟಿ ಉಮಾಶ್ರೀ ತಮ್ಮ ಅಮೋಘ ಅಭಿನಯದಿಂದ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ, ಫೈಟಿಂಗ್ ದೃಶ್ಯವೊಂದರ ಚಿತ್ರೀಕರಣದ ವೇಳೆ ನಿರ್ದೇಶಕರು 'ಕಟ್' ಹೇಳಿದರೂ ಪಾತ್ರದಲ್ಲಿ ಸಂಪೂರ್ಣವಾಗಿ ಲೀನವಾಗಿ ನಟನೆಯನ್ನು ಮುಂದುವರಿಸಿದ ಘಟನೆ ನಡೆದಿದೆ.
05:17 PM (IST) Nov 29
ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ತಮ್ಮ 62ನೇ ವಯಸ್ಸಿನಲ್ಲಿ ವಿವಾಹವಾಗಿದ್ದಾರೆ. ತನಗಿಂತ 16 ವರ್ಷ ಕಿರಿಯ ಮಹಿಳೆಯನ್ನು ಅವರು ವರಿಸಿದ್ದು, ಪ್ರಧಾನಿ ಆಗಿದ್ದ ವೇಳೆಯಲ್ಲೇ ಮದುವೆಯಾದ ವಿಶ್ವದ ಮೊದಲ ರಾಜಕಾರಣಿ ಎನಿಸಿದ್ದಾರೆ.
04:09 PM (IST) Nov 29
ಬಿಗ್ ಬಾಸ್ 12ರ ವಿನ್ನರ್ ಯಾರು ಎಂಬ ಚರ್ಚೆ ಜೋರಾಗಿದ್ದು, ಬಹುತೇಕ ಮಂದಿ 'ಗಿಲ್ಲಿ ನಟ'ನ ಹೆಸರನ್ನೇ ಸೂಚಿಸುತ್ತಿದ್ದಾರೆ. ಎಲಿಮಿನೇಟ್ ಆದ ಸ್ಪರ್ಧಿಗಳಿಂದ ಹಿಡಿದು 'ಯಜಮಾನ' ಧಾರಾವಾಹಿ ಕಲಾವಿದರಾದ ಝಾನ್ಸಿ ಮತ್ತು ರಾಘು ಕೂಡ ಗಿಲ್ಲಿ ನಟನ ಮನರಂಜನೆಯನ್ನು ಮೆಚ್ಚಿದ್ದಾರೆ.
03:36 PM (IST) Nov 29
Actor Dhanush Movies: ತಮಿಳು ನಟ ಧನುಷ್ ನಟನೆಯ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾಗಳು: ಸೂಪರ್ಸ್ಟಾರ್ ಧನುಷ್ ಅಭಿನಯದ 'ತೇರೆ ಇಷ್ಕ್ ಮೇ' ಸಿನಿಮಾ ಥಿಯೇಟರ್ನಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ನೋಡುವ ಮುನ್ನ, OTTಯಲ್ಲಿ ಲಭ್ಯವಿರುವ ಧನುಷ್ ಅವರ ಅತಿ ಹೆಚ್ಚು ಗಳಿಕೆ ಕಂಡ ಈ 7 ಸಿನಿಮಾಗಳು ಇಲ್ಲಿವೆ.
03:10 PM (IST) Nov 29
03:09 PM (IST) Nov 29
ಬಿಗ್ ಬಾಸ್ ಕನ್ನಡ 12 ಶೋನಲ್ಲಿ ಗಿಲ್ಲಿ ನಟ ಯಾವಾಗಲೂ ಟ್ರ್ಯಾಕ್ ಪ್ಯಾಂಟ್ ಹಾಗೂ ಬನಿಯನ್ ಹಾಕಿಕೊಂಡು ಇರುತ್ತಾರೆ. ಅಶ್ವಿನಿಯಿಂದ ಹಿಡಿದು, ಧ್ರುವಂತ್ವರೆಗೆ ಅನೇಕರು ಅವರಿಗೆ ಬಟ್ಟೆ ಕಳಿಸಿದ್ದರು. ಎರಡು ವಾರಗಳಿಂದ ಅವರಿಗೆ ಬಕೆಟ್ಗಟ್ಟಲೇ ಬಟ್ಟೆ ಬರುತ್ತಿದೆ, ಆದರೆ ಅವರು ಅದನ್ನು ಹಾಕಿಕೊಳ್ತಿಲ್ಲ.
02:09 PM (IST) Nov 29
‘ನಾ ನಿನ್ನ ಬಿಡಲಾರೆ’ ಧಾರಾವಾಹಿಯ ಜನಪ್ರಿಯ ಪಾತ್ರಗಳಾದ ಅಂಬಿಕಾ ದೆವ್ವ ಮತ್ತು ದುರ್ಗಾ, ತೆರೆಹಿಂದೆ ಮಾಡಿದ ರೀಲ್ಸ್ನಲ್ಲಿ ತಮ್ಮ ತಮಾಷೆಯ ಮಾತುಕತೆಯಿಂದ ಗಮನ ಸೆಳೆದಿದ್ದಾರೆ. ನಟಿಯರಾದ ನೀತಾ ಅಶೋಕ್ ಮತ್ತು ರಿಷಿಕಾ ಅವರ ಈ ರೀಲ್ಸ್ ವೈರಲ್ ಆಗಿದೆ.
12:58 PM (IST) Nov 29
ದರ್ಶನ್ ಪ್ರಕರಣದಲ್ಲಿ ಸುದ್ದಿಯಾಗಿದ್ದ ಕಂಟೆಂಟ್ ಕ್ರಿಯೇಟರ್ ಸೋನು ಶೆಟ್ಟಿ ವಿರುದ್ಧ ಇದೀಗ ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಪವಿತ್ರಾ ಅವರು ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಸೋನು ಪರಾರಿಯಾಗಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ಲೈವ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
12:57 PM (IST) Nov 29
12:01 PM (IST) Nov 29
ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ, ಭಾಗ್ಯಳಿಂದ ಸ್ಫೂರ್ತಿ ಪಡೆದ ಆದಿ ತನ್ನ ಸಾವಿರಾರು ಕೋಟಿ ರೂಪಾಯಿ ಕಂಪನಿಯನ್ನು ತಂಗಿ ಕನ್ನಿಕಾಗೆ ಬಿಟ್ಟುಕೊಟ್ಟು ಸ್ವಾವಲಂಬಿ ಬದುಕು ಆರಂಭಿಸಿದ್ದಾನೆ. ಭಾಗ್ಯಳಲ್ಲಿ ತನ್ನ ತಾಯಿಯನ್ನು ಕಾಣುವ ಆದಿ, ಆಕೆಯ ಜೊತೆ ಹೊಸ ಸ್ನೇಹದ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದಾರೆ.
11:44 AM (IST) Nov 29
11:35 AM (IST) Nov 29
ಫ್ಲರ್ಟ್ ಒಬ್ಬನ ಆತ್ಮಕತೆಯಂತೆ ಶುರುವಾಗುವ ಕತೆ ನಿಧಾನಕ್ಕೆ ಪಥ ಬದಲಿಸುತ್ತದೆ. ಅಂತಿಮ ಹಂತಕ್ಕೆ ಬರುವ ವೇಳೆಗೆ ಎಲ್ಲವೂ ಬದಲಾಗಿರುತ್ತದೆ. ಪ್ರಥಮಾರ್ಧದಲ್ಲಿ ಕತೆಯ ಯಾವೊಂದು ಅಂಶವನ್ನೂ ಬಿಟ್ಟುಕೊಡುವುದಿಲ್ಲ.
11:26 AM (IST) Nov 29
ಕತೆ ಸಾಗುವುದು ಮಲೆನಾಡಿನ ಹಿನ್ನೆಲೆಯಲ್ಲಿ. ಅಲ್ಲಿನ ಸ್ಥಳೀಯ ಭಾಷೆಯ ಸೊಗಡಿಗೆ ಪಾತ್ರಧಾರಿಗಳ ಸಂಭಾಷಣೆಗಳು ಜೀವ ತುಂಬಿವೆ. ಹೀಗಾಗಿ ಇದು ನೆಲದ ಬದುಕಿನ ಸಿನಿಮಾ ಕೂಡ ಹೌದು. ಪ್ರಕೃತಿ ಸೌಂದರ್ಯದ ನಡುವೆ ಇರುವ ಒಂದು ಹಳ್ಳಿ.
11:18 AM (IST) Nov 29
ಆರಂಭದಲ್ಲಿ ತೀರ ಪಡ್ಡೆ ಹೈಕಳ ಲೆವೆಲ್ನಲ್ಲಿರುವ ಕಳ್ಳರು ಇದ್ದಕ್ಕಿದ್ದ ಹಾಗೆ ಕಂಪ್ಲೀಟ್ ಪ್ರಬುದ್ಧರಾಗಿ ಬದಲಾಗುವ ಬಗೆ ಇನ್ನಷ್ಟು ಕನ್ವಿನ್ಸಿಂಗ್ ಆಗಿರಬಹುದಿತ್ತು. ಯದ್ವಾತದ್ವಾ ಅನಾವಶ್ಯಕ ಅಂಶಗಳಿವೆ. ಹಾಡು, ಡ್ಯಾನ್ಸ್ ಕಿಕ್ ಹೆಚ್ಚಿಸಲ್ಲ.
08:42 AM (IST) Nov 29
ಬಿಗ್ಬಾಸ್ ಮನೆಯ ರಹಸ್ಯ ಬಾಗಿಲಿನ ಬಗ್ಗೆ ಗಿಲ್ಲಿ ನಟ ಮಾಹಿತಿ ಬಹಿರಂಗಪಡಿಸಿದ್ದಾರೆ. ಇದನ್ನು 'ಹಿತ್ತಲಿನ ಬಾಗಿಲು' ಎಂದು ಕರೆದಿದ್ದು, ಈ ಹಿಂದೆ ಅಶ್ವಿನಿ ಗೌಡ ಕೂಡ ಇದರ ಬಗ್ಗೆ ಮಾತನಾಡಿದ್ದರು. ಈ ವಾರದ ಬಿಬಿ ಪ್ಯಾಲೇಸ್ ಟಾಸ್ಕ್ ಮತ್ತು ಅತಿಥಿಗಳ ವರ್ತನೆಯ ಬಗ್ಗೆಯೂ ಲೇಖನದಲ್ಲಿ ಚರ್ಚಿಸಲಾಗಿದೆ.
08:07 AM (IST) Nov 29
ಬಿಗ್ಬಾಸ್ ಮನೆಯಲ್ಲಿ 'ತಿ* ಗಾಂಚಲಿ' ಪದದ ಬಳಕೆಯು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಧ್ರುವಂತ್ ಈ ಪದವನ್ನು ಬಳಸಿದ್ದು, ಇದು ಸ್ಪರ್ಧಿಗಳ ನಡುವೆ ತೀವ್ರ ಜಗಳಕ್ಕೆ ಕಾರಣವಾಗಿದೆ. ಈ ಹಿಂದೆ 'ಸಡೆ' ಪದದ ಬಳಕೆಯಂತೆ, ಈ ಹೊಸ ಪದವೂ ವೀಕ್ಷಕರಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.