ನವದೆಹಲಿ: ‘ ಬಿಜೆಪಿ ಮತ್ತು ಆರ್ಎಸ್ಎಸ್ಗೆ ಸರ್ಕಾರವನ್ನು ತಮ್ಮ ವೈಯಕ್ತಿಕ ಆಸ್ತಿಯೆಂದು ಪರಿಗಣಿಸಿದರೆ ಅದಕ್ಕಿಂತ 10 ಪಟ್ಟು ಎದುರಿಸಬೇಕಾಗುತ್ತದೆ ಎನ್ನುವ ಸಂದೇಶ ವಿದ್ಯಾರ್ಥಿಗಳು ನೀಡಿದ್ದಾರೆ. ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೇಳಬೇಕು’ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ಮಾತನಾಡಿರುವ ರಾಹುಲ್ ಗಾಂಧಿ, ‘ಧರ್ಮೇಂದ್ರ ಪ್ರಧಾನ್ ಭ್ರಷ್ಟಾಚಾರದ ಸಂಕೇತವಿದ್ದಂತೆ, ಅವರು ಹೋಗಿದ್ದು ಒಳ್ಳೆಯದಾಯ್ತು. ವಿದ್ಯಾರ್ಥಿಗಳ ಪ್ರತಿಭಟನೆಯು ಪ್ರಧಾನಿ ನರೇಂದ್ರ ಮೋದಿ, ಆರ್ಎಸ್ಎಸ್ ಪ್ರತಿನಿಧಿಸುವ ಭೂತಕಾಲ ಮತ್ತ ದೇಶದ ಭವಿಷ್ಯದ ನಡುವಿನ ಸಂಘರ್ಷ. ಭವಿಷ್ಯ ಭೂತಕಾಲವನ್ನು ಸೋಲಿಸುತ್ತದೆ’ ಎಂದಿದ್ದಾರೆ.
ಮುಂದುವರೆದಂತೆ, ‘ ಹೋರಾಟದ ಸಮಯದಲ್ಲಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ವಿದ್ಯಾರ್ಥಿಗಳ ಕ್ಷಮೆಯಾಚಿಸಬೇಕು. ವಿದ್ಯಾರ್ಥಿಗಳ ಮೇಲಿನ ಹಲ್ಲೆಗೆ ಕೇಂದ್ರ ಗೃಹ ಸಚಿವರೇ ನೇರ ಹೊಣೆ’ ಎಂದು ಕಿಡಿಕಾರಿದರು.
09:16 AM (IST) Jul 26
ಭಾರತದ ಜನಪ್ರಿಯ ಸ್ಕೂಟರ್ ಹೋಂಡಾ ಆಕ್ಟಿವ್ ಅನ್ನು ಕೇವಲ 20,000 ರೂಪಾಯಿ ಡೌನ್ಪೇಮೆಂಟ್ ಪಾವತಿಸಿ ಖರೀದಿಸಬಹುದಾಗಿದೆ. ಉಳಿದ ಮೊತ್ತವನ್ನು ಸುಲಭ ಮಾಸಿಕ ಕಂತುಗಳಲ್ಲಿ (EMI) ಪಾವತಿಸುವ ಮೂಲಕ ಹೊಸ ಸ್ಕೂಟರ್ ಅನ್ನು ಮನೆಗೆ ತರಬಹುದು.
09:13 AM (IST) Jul 26
ನೀಟ್ ಪರೀಕ್ಷೆ ವಿವಾದಕ್ಕೆ ಸಂಬಂಧಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಾರ್ಟಿ (CJP) ತನ್ನ ಪ್ರತಿಭಟನೆ ಹಿಂಪಡೆದಿದೆ. ಇದರ ಬೆನ್ನಲ್ಲೇ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ಜಂತರ್ ಮಂತರ್ನಲ್ಲಿ ಮಧ್ಯರಾತ್ರಿ ಸ್ವಚ್ಛತಾ ಕಾರ್ಯ..
08:39 AM (IST) Jul 26
08:21 AM (IST) Jul 26