LIVE NOW
Published : Jul 26, 2026, 07:10 AM ISTUpdated : Jul 26, 2026, 09:16 AM IST

India Latest News Live: Honda Activa - 20 ಸಾವಿರ ರೂ.ಯಲ್ಲಿ ಮನೆಗೆ ತನ್ನಿ ನಿಮಿಷ್ಟದ ಹೋಂಡಾ ಆಕ್ಟಿವಾ ಸ್ಕೂಟಿ

ಸಾರಾಂಶ

ನವದೆಹಲಿ: ‘ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸರ್ಕಾರವನ್ನು ತಮ್ಮ ವೈಯಕ್ತಿಕ ಆಸ್ತಿಯೆಂದು ಪರಿಗಣಿಸಿದರೆ ಅದಕ್ಕಿಂತ 10 ಪಟ್ಟು ಎದುರಿಸಬೇಕಾಗುತ್ತದೆ ಎನ್ನುವ ಸಂದೇಶ ವಿದ್ಯಾರ್ಥಿಗಳು ನೀಡಿದ್ದಾರೆ. ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೇಳಬೇಕು’ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಪ್ರಧಾನ್‌ ರಾಜೀನಾಮೆ ಬೆನ್ನಲ್ಲೇ ಮಾತನಾಡಿರುವ ರಾಹುಲ್ ಗಾಂಧಿ, ‘ಧರ್ಮೇಂದ್ರ ಪ್ರಧಾನ್‌ ಭ್ರಷ್ಟಾಚಾರದ ಸಂಕೇತವಿದ್ದಂತೆ, ಅವರು ಹೋಗಿದ್ದು ಒಳ್ಳೆಯದಾಯ್ತು. ವಿದ್ಯಾರ್ಥಿಗಳ ಪ್ರತಿಭಟನೆಯು ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್‌ ಪ್ರತಿನಿಧಿಸುವ ಭೂತಕಾಲ ಮತ್ತ ದೇಶದ ಭವಿಷ್ಯದ ನಡುವಿನ ಸಂಘರ್ಷ. ಭವಿಷ್ಯ ಭೂತಕಾಲವನ್ನು ಸೋಲಿಸುತ್ತದೆ’ ಎಂದಿದ್ದಾರೆ.

ಮುಂದುವರೆದಂತೆ, ‘ ಹೋರಾಟದ ಸಮಯದಲ್ಲಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ವಿದ್ಯಾರ್ಥಿಗಳ ಕ್ಷಮೆಯಾಚಿಸಬೇಕು. ವಿದ್ಯಾರ್ಥಿಗಳ ಮೇಲಿನ ಹಲ್ಲೆಗೆ ಕೇಂದ್ರ ಗೃಹ ಸಚಿವರೇ ನೇರ ಹೊಣೆ’ ಎಂದು ಕಿಡಿಕಾರಿದರು.

09:16 AM (IST) Jul 26

Honda Activa - 20 ಸಾವಿರ ರೂ.ಯಲ್ಲಿ ಮನೆಗೆ ತನ್ನಿ ನಿಮಿಷ್ಟದ ಹೋಂಡಾ ಆಕ್ಟಿವಾ ಸ್ಕೂಟಿ

ಭಾರತದ ಜನಪ್ರಿಯ ಸ್ಕೂಟರ್ ಹೋಂಡಾ ಆಕ್ಟಿವ್ ಅನ್ನು ಕೇವಲ 20,000 ರೂಪಾಯಿ ಡೌನ್‌ಪೇಮೆಂಟ್ ಪಾವತಿಸಿ ಖರೀದಿಸಬಹುದಾಗಿದೆ. ಉಳಿದ ಮೊತ್ತವನ್ನು ಸುಲಭ ಮಾಸಿಕ ಕಂತುಗಳಲ್ಲಿ (EMI) ಪಾವತಿಸುವ ಮೂಲಕ ಹೊಸ ಸ್ಕೂಟರ್ ಅನ್ನು ಮನೆಗೆ ತರಬಹುದು.

Read Full Story

09:13 AM (IST) Jul 26

ಪ್ರತಿಭಟನೆ ಮುಗೀತು, ಮಧ್ಯರಾತ್ರಿ ಶುರುವಾಯ್ತು ಕ್ಲೀನಿಂಗ್! ಜಂತರ್ ಮಂತರ್ ಫುಲ್ ಕ್ಲೀನ್

ನೀಟ್ ಪರೀಕ್ಷೆ ವಿವಾದಕ್ಕೆ ಸಂಬಂಧಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಾರ್ಟಿ (CJP) ತನ್ನ ಪ್ರತಿಭಟನೆ ಹಿಂಪಡೆದಿದೆ. ಇದರ ಬೆನ್ನಲ್ಲೇ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ಜಂತರ್ ಮಂತರ್‌ನಲ್ಲಿ ಮಧ್ಯರಾತ್ರಿ ಸ್ವಚ್ಛತಾ ಕಾರ್ಯ..

Read Full Story

08:39 AM (IST) Jul 26

SBI ಬ್ಯಾಂಕ್ ಮ್ಯಾನೇಜರ್‍‌ಗೆ ಕಪಾಳಮೋಕ್ಷ ಮಾಡಿದ ಮಾಜಿ ಕೇಂದ್ರ ಸಚಿವರ ಪುತ್ರಿ..! VIDEO

ಮಾಜಿ ಕೇಂದ್ರ ಸಚಿವ ಎಂ.ಕೆ. ಅಳಗಿರಿ ಅವರ ಪುತ್ರಿ ಕಯಲ್ವಿಜಿ, ಚೆನ್ನೈನ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್‌ಗೆ ಕಪಾಳಮೋಕ್ಷ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಲಿಫ್ಟ್ ದುರಸ್ತಿ ವಿಚಾರವಾಗಿ ನಡೆದ ವಾಗ್ವಾದದ ನಂತರ ಈ ಘಟನೆ ನಡೆದಿದ್ದು, ಇದರ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ. ಈ ಸಂಬಂಧ ಪೊಲೀಸರು ಕಯಲ್ವಿಜಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read Full Story

08:21 AM (IST) Jul 26

ಸಿಜೆಐಗೆ ಸಿಜೆಪಿ ಥ್ಯಾಂಕ್ಸ್! ನಮ್ಮನ್ನು ಜಿರಳೆ ಎಂದಿದ್ದಕ್ಕೆ ಭಾರತಕ್ಕೆ ಬರಬೇಕಾಯ್ತು ಎಂದ ದೀಪ್ಕೆ!

'ಕಾಕ್ರೋಚ್‌ ಜನತಾ ಪಾರ್ಟಿ' ಸ್ಥಾಪಕ ಅಭಿಜೀತ್‌ ದೀಪ್ಕೆ, ಸಿಜೆಐ ಸೂರ್ಯಕಾಂತ್ ಅವರ 'ಜಿರಳೆ' ಹೇಳಿಕೆಯೇ ನೀಟ್‌ ವಿರುದ್ಧದ ಹೋರಾಟಕ್ಕೆ ಸ್ಫೂರ್ತಿ ಎಂದಿದ್ದಾರೆ. ಈ ಹೋರಾಟದ ಫಲವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದು, ಇದು ಕೇವಲ ಆರಂಭ ಎಂದು ದೀಪ್ಕೆ ಘೋಷಿಸಿದ್ದಾರೆ.
Read Full Story

More Trending News