ಮುಂಬೈ: ಇರಾನ್ ಇಂಧನ ಮೌಲಸೌಕರ್ಯಗಳ ಮೇಲಿನ ದಾಳಿಗೆ ಟ್ರಂಪ್ 5 ದಿನಗಳ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಷೇರು ಪೇಟೆ ಚೇತರಿಸಿಕೊಂಡಿದೆ. ಮಂಗಳವಾರ ಬಾಂಬೆ ಷೇರು ಪೇಟೆ ಸಂವೇದಿ ಸೂಚ್ಯಂಕ 1372 ಅಂಕ ಏರಿಕೆಯೊಂದಿಗೆ 74,0 68ರಲ್ಲಿ ಅಂತ್ಯವಾಗಿದೆ. ಇನ್ನು ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 399 ಅಂಕ ಹೆಚ್ಚಳದೊಂದಿಗೆ 22,912ರಲ್ಲಿ ಮುಕ್ತಾ ಯವಾಗಿದೆ. ಸೋಮವಾರ ಸೆನ್ಸೆಕ್ಸ್ 1936 ಅಂಕ ಇಳಿದು 72,696 ರಲ್ಲಿ ಮುಕ್ತಾಯವಾಗಿದ್ದರೆ, ನಿಫ್ಟಿ 601 ಅಂಕ ಕುಸಿದು 22,512 ರಲ್ಲಿ ಅಂತ್ಯವಾಗಿತ್ತು. ವಿದೇಶಿ ಪೇಟೆಗಳೂ ಚೇತರಿಕೆ: ಟ್ರಂಪ್ ಹೇಳಿಕೆಯಿಂದ ಮಂಗಳವಾರ ಫ್ರಾನ್ಸ್, ಜರ್ಮನಿ, ಅಮೆರಿಕ, ಜಪಾನ್ ಸೇರಿ ಜಾಗತಿಕ ಪೇಟೆಗಳೂ ಚೇತರಿಕೆ ಕಂಡವು. ದಿಲ್ಲಿಯಲ್ಲಿ ಚಿನ್ನ ₹1200 ಏರಿಕೆಯಾಗಿದ್ದರೆ, ಬೆಂಗಳೂರಲ್ಲಿ 380 ರು.ನಷ್ಟು ಇಳಿಕೆಯಾಗಿದ್ದವು

11:17 PM (IST) Mar 25
ಭಾರತೀಯ ನೌಕಾಪಡೆಯ ಎರಡು ಪ್ರಮುಖ ವಿಮಾನವಾಹಕ ನೌಕೆಗಳಾದ ಐಎನ್ಎಸ್ ವಿಕ್ರಮಾದಿತ್ಯ ಮತ್ತು ಐಎನ್ಎಸ್ ವಿಕ್ರಾಂತ್ನಿಂದ ಎರಡು ಮಿಗ್-29ಕೆ ಫೈಟರ್ ಜೆಟ್ಗಳು ಏಕಕಾಲಕ್ಕೆ ಟೇಕಾಫ್ ಆಗಿರುವ ದೃಶ್ಯ ವೈರಲ್ ಆಗಿದೆ.
10:22 PM (IST) Mar 25
Zombie drug in Punjab: ಪಂಜಾಬ್ನಲ್ಲಿ ಡೆಲಿವರಿ ಯುವಕನೋರ್ವ ಝೋಂಬಿಯಂತೆ ತೂಗಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು, ಅಮೆರಿಕಾದಲ್ಲಿ ಕಂಡುಬರುವ ಕ್ಸೈಲಾಜಿನ್ ಎಂಬ 'ಝೋಂಬಿ ಡ್ರಗ್' ಭಾರತಕ್ಕೂ ಕಾಲಿಟ್ಟಿದೆಯೇ ಎಂಬ ಆತಂಕವನ್ನು ಹುಟ್ಟುಹಾಕಿದೆ.
10:21 PM (IST) Mar 25
ಪ್ರಸಿದ್ಧ ಹೋಂಡಾ ಕಂಪನಿಯ ಹೊಸ ಎಲೆಕ್ಟ್ರಿಕ್ ಬೈಕ್ WN7, 'ಗೋಲ್ಡ್ iF ಡಿಸೈನ್' ಪ್ರಶಸ್ತಿಯನ್ನು ಗೆದ್ದಿದೆ. ಇದರ ವಿಶಿಷ್ಟ ವಿನ್ಯಾಸದಲ್ಲಿ ಬ್ಯಾಟರಿಯೇ ಫ್ರೇಮ್ನಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಇದು ಒಂದೇ ಚಾರ್ಜ್ನಲ್ಲಿ 140 ಕಿ.ಮೀ ರೇಂಜ್ ನೀಡುತ್ತದೆ.
10:01 PM (IST) Mar 25
ಭಾರತಿರಾಜ ಅವರು ಪರಿಚಯಿಸಿದ ನಟಿಯರು ಸೂಪರ್ಸ್ಟಾರ್ಗಳಾಗಲು ಅವರು ಇಟ್ಟ 'ರಾಶಿ' ಹೆಸರುಗಳೂ ಒಂದು ಕಾರಣ. ಈ ಹೆಸರು ಬದಲಾವಣೆಯ ಹಿಂದಿನ ರಹಸ್ಯ ಮತ್ತು ಅದರ ಹಿಂದಿರುವ ಸ್ವಾರಸ್ಯಕರ ಕಥೆಗಳನ್ನು ಇಲ್ಲಿ ನೋಡೋಣ.
08:56 PM (IST) Mar 25
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕದನ ವಿರಾಮ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಇರಾನ್, ಯುದ್ಧ ನಿಲ್ಲಿಸಲು ತನ್ನದೇ ಆದ ಕಠಿಣ ಷರತ್ತುಗಳನ್ನು ವಿಧಿಸಿದೆ. ಹೋರ್ಮುಜ್ ಜಲಸಂಧಿಯ ಮೇಲೆ ಸಾರ್ವಭೌಮತ್ವ ಮತ್ತು ಯುದ್ಧದ ನಷ್ಟಕ್ಕೆ ಪರಿಹಾರ ನೀಡುವುದು ಇರಾನ್ನ ಪ್ರಮುಖ ಬೇಡಿಕೆಗಳಾಗಿವೆ.
08:43 PM (IST) Mar 25
ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಕೊನಿದೆಲಾ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಮೊದಲ ಪೋಸ್ಟ್ನಲ್ಲಿ ಅವರು ಚಿರಂಜೀವಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
08:33 PM (IST) Mar 25
ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಕುರಿತು ನಡೆದ ಸರ್ವಪಕ್ಷ ಸಭೆಯಲ್ಲಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಭಾರತ ಎಂದಿಗೂ 'ದಲ್ಲಾಳಿ ರಾಷ್ಟ್ರ'ವಾಗಿ ವರ್ತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
06:51 PM (IST) Mar 25
ಅಪೋಲೋ ಕಾರ್ಯಕ್ರಮದ ಸುಮಾರು 50 ವರ್ಷಗಳ ನಂತರ, ನಾಸಾದ 'ಆರ್ಟೆಮಿಸ್ II' ಮಿಷನ್ ಮೂಲಕ ನಾಲ್ವರು ಗಗನಯಾತ್ರಿಗಳು ಚಂದ್ರನತ್ತ ಪ್ರಯಾಣ ಬೆಳೆಸಲಿದ್ದಾರೆ. ಈ ತಂಡವು ಚಂದ್ರನ ಮೇಲೆ ಇಳಿಯದೆ,
06:37 PM (IST) Mar 25
ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ತಾವು ಭಾಗವಹಿಸುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಒಂದು ನಿರ್ದಿಷ್ಟ ಹಾಡನ್ನು ತಪ್ಪದೇ ಹಾಡುತ್ತಾರೆ. ಆ ಹಾಡಿನ ಹಿಂದಿರುವ ಸೆಂಟಿಮೆಂಟ್ ಮತ್ತು ರಹಸ್ಯವೇನು ಗೊತ್ತಾ?
06:23 PM (IST) Mar 25
ಮೈನೆ ಪ್ಯಾರ್ ಕಿಯಾ ಸಿನಿಮಾ ನೋಡಿದಾಗಲೆಲ್ಲಾ ಜನ ಭಾಗ್ಯಶ್ರೀ ಮತ್ತು ಸಲ್ಮಾನ್ ಖಾನ್ರನ್ನು ಇಷ್ಟಪಡುತ್ತಾರೆ. ಮೊದಲ ಚಿತ್ರದಲ್ಲೇ ಭಾಗ್ಯಶ್ರೀ ಸೂಪರ್ಹಿಟ್ ಆದರು. ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದ ನೋವಿನ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.
06:17 PM (IST) Mar 25
05:48 PM (IST) Mar 25
ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಸಿನಿಮಾ ಎಲ್ಲೆಡೆ ಭರ್ಜರಿ ಮೆಚ್ಚುಗೆ ಗಳಿಸುತ್ತಿದೆ. ಈಗ ನಟಿ ಅಮೀಶಾ ಪಟೇಲ್ ಕೂಡ ಈ ಚಿತ್ರ ಮತ್ತು ಚಿತ್ರತಂಡವನ್ನು ಹೊಗಳಿದ್ದಾರೆ. ಈ ಸಿನಿಮಾ, ವಿಶ್ವಾದ್ಯಂತ ₹700 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
05:34 PM (IST) Mar 25
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ದೇಶದಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಸಿಲಿಂಡರ್ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಹಾರ್ಮುಜ್ ಜಲಸಂಧಿ ಮೂಲಕ ಪೂರೈಕೆಯಲ್ಲಿ ವ್ಯತ್ಯಯ ಆಗಬಹುದೆಂಬ ಆತಂಕದಲ್ಲಿ ಜನರು ಇಂಧನಕ್ಕಾಗಿ ಮುಗಿಬೀಳುತ್ತಿದ್ದಾರೆ.
05:28 PM (IST) Mar 25
ಧುರಂಧರ್ 2 ಯಶಸ್ಸಿನ ನಂತರ, ಕಾಸ್ಟಿಂಗ್ ಡೈರೆಕ್ಟರ್ ಮುಕೇಶ್ ಛಾಬ್ರಾ ತಮ್ಮ 20 ವರ್ಷಗಳ ಅನುಭವದ ಬಗ್ಗೆ ಮಾತನಾಡಿದ್ದಾರೆ. ಇನ್ಸ್ಟಾಗ್ರಾಂ ನೋಡಿ ಕಾಸ್ಟಿಂಗ್ ಮಾಡಲ್ಲ, ಆಡಿಷನ್ ಮೂಲಕವೇ ಆಯ್ಕೆ ಮಾಡ್ತೀನಿ ಎಂದಿರುವ ಅವರು, ಈ ಚಿತ್ರಕ್ಕಾಗಿ 300ಕ್ಕೂ ಹೆಚ್ಚು ಜನರನ್ನು ಆಯ್ಕೆ ಮಾಡಿದ್ದರಂತೆ.
05:24 PM (IST) Mar 25
05:19 PM (IST) Mar 25
05:08 PM (IST) Mar 25
ಬಿಹಾರದ ಬಾರ್ಹ್ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ನಡೆದ ಘಟನೆಯಲ್ಲಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಪಾಟ್ನಾ-ಹೌರಾ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದಿದ್ದೇ ಈ ದುರಂತಕ್ಕೆ ಕಾರಣ. ಈ ನಿಲ್ದಾಣವು ಪೂರ್ವ ಮಧ್ಯೆ ರೈಲ್ವೆಯ ದಾನಾಪುರ ವಿಭಾಗದ ವ್ಯಾಪ್ತಿಗೆ ಬರುತ್ತದೆ.
05:00 PM (IST) Mar 25
ಕೇಂದ್ರ ಗೃಹ ಸಚಿವಾಲಯವು ನಾಲ್ಕು ವರ್ಷಗಳ ಸೇವೆ ಪೂರ್ಣಗೊಳಿಸಿದ ಅಗ್ನಿವೀರರಿಗೆ ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಶೇ. 20ರಷ್ಟು ಮೀಸಲಾತಿ ನೀಡುವಂತೆ ರಾಜ್ಯಗಳಿಗೆ ಪತ್ರ ಬರೆದಿದೆ. ಈ ಕ್ರಮವು ಅಗ್ನಿವೀರರ ಪುನರ್ವಸತಿ ಗುರಿಯನ್ನು ಹೊಂದಿದೆ.
04:40 PM (IST) Mar 25
ಖ್ಯಾತ ನಟಿ ಮತ್ತು ಮಾಡೆಲ್ ಹರ್ಷಿಲ್ ಕಾಲಿಯಾ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಅವರ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ.
04:10 PM (IST) Mar 25
ಆರ್ಸಿಬಿ ಹೊಸ ಚೇರ್ಮನ್ ಆರ್ಯಮನ್ ಬಿರ್ಲಾ ಅವರ ಅಕ್ಕ ಅನನ್ಯ ಬಿರ್ಲಾ, ಕೇವಲ ಉದ್ಯಮಿಯ ಮಗಳಲ್ಲದೆ ಸ್ವಂತ ಪರಿಶ್ರಮದಿಂದ ಉದ್ಯಮಿ, ಗಾಯಕಿ ಮತ್ತು ಹೂಡಿಕೆದಾರರಾಗಿ ಬೆಳೆದಿದ್ದಾರೆ. 17ನೇ ವಯಸ್ಸಿಗೆ 'ಸ್ವತಂತ್ರ ಮೈಕ್ರೋಫಿನ್' ಸ್ಥಾಪಿಸಿ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ.
03:18 PM (IST) Mar 25
ಏಪ್ರಿಲ್ 1 ರಿಂದ, ಎಚ್ಡಿಎಫ್ಸಿ ಬ್ಯಾಂಕ್ ಯುಪಿಐ ಆಧಾರಿತ ನಗದು ಹಿಂಪಡೆಯುವಿಕೆಗೆ ಶುಲ್ಕ ವಿಧಿಸಲಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ದೈನಂದಿನ ನಗದು ಹಿಂಪಡೆಯುವ ಮಿತಿಯನ್ನು ಪರಿಷ್ಕರಿಸಿದೆ. ಇದರೊಂದಿಗೆ, ಜಿಯೋ ಪೇಮೆಂಟ್ಸ್ ಬ್ಯಾಂಕ್ ಕ್ಯೂಆರ್ ಕೋಡ್ ಆಧರಿತ ಹಿಂಪಡೆಯುವ ಸೌಲಭ್ಯವನ್ನು ಪರಿಚಯಿಸಿದೆ.
03:14 PM (IST) Mar 25
02:53 PM (IST) Mar 25
ಅಂಗಡಿಯಿಂದ ತಂದ ಹೊಸದಾದ ವಸ್ತುಗಳನ್ನು ಅಂದರೆ ಬಟ್ಟೆ ಬೆಡ್ಶಿಟ್ಗಳು ಮುಂತಾದವುಗಳನ್ನು ತೊಳೆದೇ ಬಳಸಬೇಕು ಇಲ್ಲದೇ ಹೋದರೆ ದೊಡ್ಡ ಅನಾಹುತವಾಗುವುದಂತು ಪಕ್ಕಾ ಇಲ್ಲೊಂದು ಕಡೆ ಬೆಡ್ಶಿಟ್ ತೊಳೆಯದೇ ಅದನ್ನೇ ಹೊದ್ದುಕೊಂಡು ಮಲಗಿದ್ದರಿಂದ ವ್ಯಕ್ತಿಯೊಬ್ಬನಿಗೆ ಏನಾಯ್ತು ನೋಡಿ..
01:36 PM (IST) Mar 25
30 ಬಾಲಕಿಯರ ಕಾಮತೃಷೆಗೆ ಬಳಸಿದ ವಿಡಿಯೋ ಲೀಕ್ ಬೆನ್ನಲ್ಲೇ ಬಿಜೆಪಿ ನಾಯಕನ ಪುತ್ರ ಅರೆಸ್ಟ್ ಆಗಿದ್ದಾನೆ. ಬೆದರಿಸಿ ಅಪ್ರಾಪ್ತರ ಮೇಲೆ ಅತ್ಯಾ**ರ ಎಸಗುತ್ತಿದ್ದ ಈತ ವಿಡಿಯೋ ಮಾಡಿ ಸೊಲ್ಲೆತ್ತದ್ದಂತೆ ಮಾಡಿದ್ದ. ಇದೀಗ ವಿಡಿಯೋ ಲೀಕ್ ಆಗಿ ಕೋಲಾಹಲ ನಡೆದಿದೆ.
01:29 PM (IST) Mar 25
ಎಲ್ಪಿಜಿ ಸಿಲಿಂಡರ್ ಬುಕಿಂಗ್ಗೆ ಹೊಸ ನಿಯಮ ಜಾರಿಯಾಗಿದೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟನೆ ನೀಡಿದೆ. ನಗರ ಪ್ರದೇಶಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಳೆಯ ನಿಯಮವೇ ಮುಂದುವರಿದಿದೆ ಎಂದು ತಿಳಿಸಿರುವ ಸರ್ಕಾರ ಅದರ ಡಿಟೇಲ್ಸ್ ಹಂಚಿಕೊಂಡಿದೆ. ದೇಶದಲ್ಲಿ ಸಾಕಷ್ಟು ಎಲ್ಪಿಜಿ ದಾಸ್ತಾನು ಲಭ್ಯವಿದೆ ಎಂದು ಸರ್ಕಾರ ಭರವಸೆ ನೀಡಿದೆ.
01:03 PM (IST) Mar 25
12:57 PM (IST) Mar 25
women ssc officers pension rights: ಸೇನೆಯ ಮೂರೂ ಪಡೆಗಳಲ್ಲಿ ಸೇವೆ ಸಲ್ಲಿಸುವ ಮಹಿಳಾ ಶಾರ್ಟ್ ಸರ್ವೀಸ್ (SSC) ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ನಿಂದ ಖುಷಿಯ ಸುದ್ದಿಯೊಂದು ಹೊರಬಿದ್ದಿದೆ.
12:35 PM (IST) Mar 25
ಇಂಜೆಕ್ಷನ್ ಎಂದರೆ ಭಯಪಡುವ ಅನೇಕರಿದ್ದಾರೆ. ಅನಾರೋಗ್ಯಕ್ಕೀಡಾದಾಗ ವೈದ್ಯರು ಇಂಜೆಕ್ಷನ್ ನೀಡುವುದಕ್ಕೆ ಮುಂದಾದರೆ ಇಂಜೆಕ್ಷನ್ ಬೇಡ ಡಾಕ್ಟ್ರೆ ಮಾತ್ರೆ ಕೊಡಿ ಎಂದು ಮಾತ್ರೆ ಕೇಳಿ ಪಡೆಯುವ ಅನೇಕರಿದ್ದಾರೆ. ಆದರೆ ಹೀಗೆ ಇಂಜೆಕ್ಷನ್ ಪಡೆಯದೇ ನಿರ್ಲಕ್ಷ್ಯ ವಹಿಸಿದ ಬಾಲಕಿಯೊಬ್ಬಳ ಪ್ರಾಣವೇ ಹೋಗಿದೆ.
12:17 PM (IST) Mar 25
11:14 AM (IST) Mar 25
10:59 AM (IST) Mar 25
ED raid on I-PAC Kolkata : ತೃಣಮೂಲ ಕಾಂಗ್ರೆಸ್ನ ಸಲಹಾ ಸಂಸ್ಥೆ ಐ-ಪ್ಯಾಕ್ ಮೇಲಿನ ಇ.ಡಿ. ದಾಳಿಗೆ ಅಡ್ಡಿಪಡಿಸಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
09:54 AM (IST) Mar 25
ಇರಾನ್ ವಿರುದ್ಧದ ಯುದ್ಧಕ್ಕೆ 5 ದಿನಗಳ ಕದನ ವಿರಾಮ ಘೋಷಿಸಿರುವುದಾಗಿ ಹೇಳಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಮತ್ತೊಂದು ಹೊಸ ಹೇಳಿಕೆ ನೀಡಿದ್ದಾರೆ. ಇರಾನ್ ತನಗೆ ಅಗಾಧ ಪ್ರಮಾಣದ ಹಣದಷ್ಟು ಬೆಲೆ ಬಾಳುವ ಉಡುಗೊರೆ ನೀಡಿದೆ ಎಂದು ಹೇಳಿದ್ದಾರೆ.
08:46 AM (IST) Mar 25
ಯುದ್ಧ ಸಂಕಷ್ಟದ ಬೆನ್ನಲ್ಲೇ ತುರ್ತು ಸರ್ವ ಪಕ್ಷ ಸಭೆ ಕರೆದ ಮೋದಿ, ಇಂದು ಮಹತ್ವದ ಘೋಷಣೆ, ಯುದ್ಧ ಬಿಕ್ಕಟ್ಟಿನಿಂದ ಭಾರತದಲ್ಲಿ ಸಮಸ್ಯೆಗಳು ತೀವ್ರಗೊಳ್ಳುತ್ತಿದೆ. ಈಗಾಗಲೇ ಕೋವಿಡ್ ರೀತಿಯ ಪರಿಸ್ಥಿತಿ ಎದುರಾಗುತ್ತಿದೆ ಎಂದಿರುವ ಮೋದಿ ಇಂದು ಸಂಜೆ ಕೆಲ ಘೋಷಣೆ ಮಾಡಲಿದ್ದಾರೆ.
08:22 AM (IST) Mar 25
ಅಮೆರಿಕಾ-ಇರಾನ್ ಯುದ್ಧ 26ನೇ ದಿನಕ್ಕೆ ಕಾಲಿಟ್ಟಿದ್ದು,ಇರಾನ್ ಸೇನಾ ಸಲಹೆಗಾರ ಮೊಹಿನ್ ರೆಜ್ಜೆ, 'ಅವರು (ಅಮೆರಿಕ) ಕಣ್ಣು ತೆಗೆದರೆ ನಾವು ತಲೆ ತೆಗೀತೀವಿ' ಎಂದಿದ್ದಾರೆ.ಯುದ್ಧ ಸ್ಥಗಿತಕ್ಕೆ ಅಮೆರಿಕದ ಕಡೆಯಿಂದ ಯತ್ನಗಳು ಆರಂಭವಾಗಿರುವ ನಡುವೆ ಇರಾನ್ ಕಡೆಯಿಂದ ಇಂತಹ ಹೇಳಿಕೆ ಬಂದಿದೆ.
07:32 AM (IST) Mar 25
ಲೇಖನ: ನವ್ಯ ಶ್ರೀ ಶೆಟ್ಟಿ
ಯುದ್ಧದಂತಹ ಸಂಕಷ್ಟದ ಸಮಯದಲ್ಲಿ ಚಿನ್ನದ ಬೆಲೆ ಏರುವುದು ಸಾಮಾನ್ಯ. ಆದರೆ, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇರಾನ್ ಸಂಘರ್ಷದ ವೇಳೆ ಚಿನ್ನದ ದರ ಗಣನೀಯವಾಗಿ ಕುಸಿದಿದೆ. ಇದಕ್ಕೇನು ಕಾರಣ ಇಲ್ಲಿದೆ ಡಿಟೇಲ್ ಸ್ಟೋರಿ