LIVE NOW
Published : Jan 25, 2026, 05:05 AM ISTUpdated : Jan 26, 2026, 12:04 AM IST

India Latest News Live: ಧಾರಾವಾಹಿಗಳಲ್ಲಿ ಚಾನ್ಸ್ ಕೊಡಿಸೋದಾಗಿ ನಂಬಿಸಿ ಲೈಂಗಿಕ ಕಿರುಕುಳ! ನಟಿಗೆ ಡ್ರಗ್ಸ್ ನೀಡಿ ಅಶ್ಲೀಲ ವಿಡಿಯೋ ಚಿತ್ರೀಕರಣ!

ಸಾರಾಂಶ

ಮುಂಬೈ: ಅಪಾರ್ಟ್‌ಮೆಂಟ್‌ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪದ ಪ್ರಕರಣದಲ್ಲಿ ಬಾಲಿವುಡ್‌ ನಟ ಕಮಾಲ್‌ ರಶೀದ್‌ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ‘ಜ.18ರಂದು ಅಂಧೇರಿ ಬಳಿಯ ಓಶಿವಾರಾದ ನಳಂದಾ ಸೊಸೈಟಿಯ 2ನೇ ಮತ್ತು ನಾಲ್ಕನೇ ಮಹಡಿಯ ಮನೆಗಳ ಗುಂಡಿನ ದಾಳಿ ನಡೆದಿತ್ತು. ಬರಹಗಾರರು ಮತ್ತು ಮಾಡೆಲ್‌ಗಳನು ವಾಸವಿದ್ದ ಮನೆಯ ಮೇಲೆ ನಡೆದ ಗುಂಡಿನ ದಾಳಿ ತನಿಖೆ ವೇಳೆ, ಅಲ್ಲಿ ಸಿಕ್ಕ ಗುಂಡು ಕಮಾಲ್‌ ಖಾನ್‌ ಗನ್‌ನಿಂದ ಹಾರಿದ್ದು ಎಂದು ಸಾಬೀತಾಗಿತ್ತು. ವಿಚಾರಣೆ ವೇಳೆ ದಾಳಿ ನಡೆಸಿದ್ದನ್ನು ಖಾನ್‌ ಒಪ್ಪಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಗುಂಡಿನ ದಾಳಿಗೆ ಕಾರಣ ತಿಳಿದುಬಂದಿಲ್ಲ

mumbai actress harassment on the pretext of giving her a chance in serials by criminials

12:04 AM (IST) Jan 26

ಧಾರಾವಾಹಿಗಳಲ್ಲಿ ಚಾನ್ಸ್ ಕೊಡಿಸೋದಾಗಿ ನಂಬಿಸಿ ಲೈಂಗಿಕ ಕಿರುಕುಳ! ನಟಿಗೆ ಡ್ರಗ್ಸ್ ನೀಡಿ ಅಶ್ಲೀಲ ವಿಡಿಯೋ ಚಿತ್ರೀಕರಣ!

ಧಾರಾವಾಹಿಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಮುಂಬೈನ ಮಹಿಳಾ ಕಲಾವಿದೆಯೊಬ್ಬರನ್ನು ಲೈಂಗಿಕ ಶೋಷಣೆ. ಆರೋಪಿಗಳು ಸಂತ್ರಸ್ತೆಗೆ ಡ್ರಗ್ಸ್ ನೀಡಿ, ಆಕೆಯ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಇಂಟರ್ನೆಟ್‌ಗೆ ಹರಿಬಿಟ್ಟಿದ್ದಾರೆ. ಕೊಲೆ ಬೆದರಿಕೆ ನಡುವೆಯೂ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ.

Read Full Story

11:17 PM (IST) Jan 25

ಬಿಜೆಪಿ ಅಲ್ಲ, ಈ ಬಾರಿ ಸಿಪಿಎಂ? ಶಶಿ ತರೂರ್ 'ಕಮ್ಯುನಿಸ್ಟ್' ಆಗ್ತಾರಾ? ಏನಿದು 'ದುಬೈ' ಕನೆಕ್ಷನ್?

ರಾಜಕೀಯ ವಿಷಯಗಳ ಬಗ್ಗೆ ವಿದೇಶದಲ್ಲಿ ಪ್ರತಿಕ್ರಿಯಿಸುವುದು ಸರಿಯಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ. ಮಾಧ್ಯಮಗಳ ಮೂಲಕ ಸುದ್ದಿ ತಿಳಿದಿದ್ದೇನೆ, ಬೇರೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. 

Read Full Story

10:46 PM (IST) Jan 25

ಕೇವಲ 14 ಎಸೆತದಲ್ಲಿ ಹಾಫ್ ಸೆಂಚುರಿ, ಹಲವು ದಾಖಲೆ ಮುರಿದು ಯುವಿ ಸನಿಹಕ್ಕೆ ಬಂದ ಅಭಿಷೇಕ್

ಕೇವಲ 14 ಎಸೆತದಲ್ಲಿ ಹಾಫ್ ಸೆಂಚುರಿ, ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20ಯಲ್ಲಿ ಅಭಿಷೇಕ್ ಶರ್ಮಾ ಹಲವು ದಾಖಲೆ ಬರೆದಿದ್ದಾರೆ. ಸೂರ್ಯಕುಮಾರ್ ದಾಖಲೆ ಮುರಿದರೆ, ಯುವಿ ವಿಶ್ವ ದಾಖಲೆ ಸಮೀಪ ತಲುಪಿದ್ದಾರೆ. 

Read Full Story

10:00 PM (IST) Jan 25

ಪ್ರಮುಖ ನಾಯಕ ಕಾಂಗ್ರೆಸ್‌ನಿಂದ ಹೊರಬಂದು ಸಿಎಂ ಆಗಲಿದ್ದಾರೆ, ಕರ್ನಾಟಕ ಖ್ಯಾತ ಜ್ಯೋತಿಷಿ ಭವಿಷ್ಯ

ಪ್ರಮುಖ ನಾಯಕ ಕಾಂಗ್ರೆಸ್‌ನಿಂದ ಹೊರಬಂದು ಸಿಎಂ ಆಗಲಿದ್ದಾರೆ, ಜ್ಯೋತಿಷಿ ನುಡಿದ ಭವಿಷ್ಯದಿಂದ ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ಭವಿಷ್ಯ ಹೊರಬೀಳುತ್ತಿದ್ದಂತೆ ಕೆಲ ಮಹತ್ತರ ಬದಲಾವಣೆಗಳು ಕಾಣುತ್ತಿದೆ.

 

Read Full Story

09:07 PM (IST) Jan 25

ಕುತ್ತಿಗೆಗೆ ಬಾಯಿ ಹಾಕಿದ ಚಿರತೆಗೆ ಸರಿಯಾಗಿ ತುಳಿದು ತನ್ನನ್ನು ತಾನು ರಕ್ಷಿಸಿಕೊಂಡ ಹೋರಿ - ವೀಡಿಯೋ ವೈರಲ್

ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಚಿರತೆಯೊಂದು ಹೋರಿಯ ಮೇಲೆ ದಾಳಿ ಮಾಡಿದೆ. ಆದರೆ, ತನ್ನ ಪ್ರಾಣ ಉಳಿಸಿಕೊಳ್ಳಲು ಹೋರಿ ತೋರಿದ ಅದ್ಭುತ ಹೋರಾಟದಿಂದಾಗಿ ಚಿರತೆಯು ಸೋತು ಹಿಮ್ಮೆಟ್ಟಿದೆ. ಈ ಸಾವು-ಬದುಕಿನ ಹೋರಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

09:00 PM (IST) Jan 25

ಮಾಜಿ ಲವರ್ ಪತ್ನಿಗೆ ಅಪಘಾತ ಮಾಡಿಸಿ ಏಡ್ಸ್ ರಕ್ತ ಇಂಜೆಕ್ಟ್ ಮಾಡಿದ ಮಹಿಳಾ ನರ್ಸ್

ಮಾಜಿ ಲವರ್ ಪತ್ನಿಗೆ ಅಪಘಾತ ಮಾಡಿಸಿ ಏಡ್ಸ್ ರಕ್ತ ಇಂಜೆಕ್ಟ್ ಮಾಡಿದ ಮಹಿಳಾ ನರ್ಸ್, ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ತನ್ನ ಮಾಜಿ ಗೆಳೆಯ ಬೇರೆ ಮದುವೆಯಾಗಿರುವುದು ಸಹಿಸಲು ಸಾಧ್ಯವಾಗದೆ ಮೂವರ ನೆರವು ಪಡೆದು ಈ ಕೃತ್ಯ ಎಸಗಲಾಗಿದೆ.

 

Read Full Story

07:57 PM (IST) Jan 25

3 ನಿಮಿಷ 24 ಸೆಕೆಂಡ್ ವಿಡಿಯೋ ಲೀಕ್, ಖ್ಯಾತ ನಟಿ ವೈರಲ್ ಕ್ಲಿಪ್‌ಗಾಗಿ ಮಿಲಿಯನ್ ಸರ್ಚ್

3 ನಿಮಿಷ 24 ಸೆಕೆಂಡ್ ವಿಡಿಯೋ ಲೀಕ್, ಈ ವೈರಲ್ ಕ್ಲಿಪ್‌ಗಾಗಿ ಜನ ಗೂಗಲ್, ಸೋಶಿಯಲ್ ಮೀಡಿಯಾ ಸೇರಿದಂತ ಎಲ್ಲೆಡೆ ಜಾಲಾಡುತ್ತಿದ್ದಾರೆ. ಯಾರು ಈ ಜನಪ್ರಿಯ ನಟಿ, ಏನಿದು ವಿಡಿಯೋ ಲೀಕ್ ಪ್ರಕರಣ?

Read Full Story

07:24 PM (IST) Jan 25

ಮಹಿಳಾ ಕ್ರಿಕೆಟರ್‌ಗಳೇ ಪಲಾಶ್‌ಗೆ ಸರಿಯಾಗಿ ಥಳಿಸಿದ್ದರು ಎಂದ ಮಂಧಾನ ಬಾಲ್ಯ ಸ್ನೇಹಿತನ ವಿರುದ್ಧ10 ಕೋಟಿ ಮಾನನಷ್ಟ ಕೇಸ್

ಗಾಯಕ ಪಲಾಶ್ ಮುಚ್ಚಲ್, ಸ್ಮೃತಿ ಮಂಧಾನ ಜೊತೆಗಿನ ತನ್ನ ಮದುವೆ ರದ್ದಾಗಲು ಕಾರಣವಾದ ರಹಸ್ಯವನ್ನು ಬಹಿರಂಗಪಡಿಸಿದ ಸ್ಮೃತಿಯ ಬಾಲ್ಯದ ಗೆಳೆಯ ವಿದ್ನ್ಯಾನ್ ಮಾನೆ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಘೋಷಿಸಿದ್ದಾರೆ.

Read Full Story

06:42 PM (IST) Jan 25

ಶತವಧಾನಿ ಆರ್ ಗಣೇಶ್ ಸೇರಿ ಕರ್ನಾಟಕ 9 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರಕಟ, ಇಲ್ಲಿದೆ ಫುಲ್ ಲಿಸ್ಟ್

ಶತವಧಾನಿ ಆರ್ ಗಣೇಶ್ ಸೇರಿ ಕರ್ನಾಟಕ 9 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರಕಟ, ಇತ್ತೀಚೆಗೆ ನಿಧನರಾದ ಬಾಲಿವುಡ್ ನಟ ಧಮೇಂದ್ರ ಅವರಿಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Read Full Story

05:14 PM (IST) Jan 25

ಫ್ಯಾನ್ಸ್‌ ನಡುವೆ ಸ್ಟಾರ್ ವಾರ್ - ದಳಪತಿ ವಿಜಯ್ ಅಭಿಮಾನಿಗೆ ಶರ್ಟ್ ಹರಿದು ಹೋಗುವಂತೆ ಥಳಿಸಿದ ಥಲಾ ಫ್ಯಾನ್ಸ್

ನಟ ಅಜಿತ್ ಅವರ 'ಮಂಕಥಾ' ಚಿತ್ರದ ಮರು-ಬಿಡುಗಡೆ ಪ್ರದರ್ಶನದ ವೇಳೆ, ದಳಪತಿ ವಿಜಯ್ ಅವರ ಅಭಿಮಾನಿಯೊಬ್ಬರು ಅವರ ಹೊಸ ಪಕ್ಷದ ಧ್ವಜವನ್ನು ಪ್ರದರ್ಶಿಸಿದ್ದಾರೆ. ಇದರಿಂದ ಕೆರಳಿದ ಅಜಿತ್ ಅಭಿಮಾನಿಗಳು ಥಿಯೇಟರ್‌ನಲ್ಲೇ ವಿಜಯ್ ಅಭಿಮಾನಿಗೆ ಹಿಗ್ಗಾಮುಗ್ಗಾ ಥಳಿಸಿ, ಶರ್ಟ್ ಹರಿದು ಹಾಕಿದ್ದಾರೆ. 

Read Full Story

04:57 PM (IST) Jan 25

ಬಿಗ್ ಬಾಸ್ ಮಾಜಿ ಸ್ಪರ್ಧಿ ಜೊತೆ ಟೀಂ ಇಂಡಿಯಾ ಕ್ರಿಕೆಟಿಗನ ಡೇಟಿಂಗ್? ಜೊತೆಯಾಗಿ ಕಾಣಿಸಿಕೊಂಡ ಜೋಡಿ

ಬಿಗ್ ಬಾಸ್ ಮಾಜಿ ಸ್ಪರ್ಧಿ ಜೊತೆ ಟೀಂ ಇಂಡಿಯಾ ಕ್ರಿಕೆಟಿಗನ ಡೇಟಿಂಗ್? ಜೊತೆಯಾಗಿ ಕಾಣಿಸಿಕೊಂಡ ಜೋಡಿ, ಇಬ್ಬರು ಜೊತೆಯಾಗಿ ರೆಸ್ಟೋರೆಂಟ್‌ ಹೊರಗೆ ಕಾಣಿಸಿಕೊಂಡಿದ್ದಾರೆ. ಆರ್‌ಜೆ ಮಹ್ವಾಶ್ ಅನ್‌ಫಾಲೋ ಮಾಡಿದ ಬೆನ್ನಲ್ಲೇ ಬಿಗ್ ಬಾಸ್ ಮಾಜಿ ಸ್ಪರ್ಧಿ ಜೊತೆ ಚಹಲ್ ಕಾಣಿಸಿಕೊಂಡಿದ್ದಾರೆ.

Read Full Story

04:31 PM (IST) Jan 25

ಬಾಂಗ್ಲಾದೇಶವನ್ನು ನಡುನೀರಲ್ಲಿ ಕೈಬಿಟ್ಟು, ಟಿ20 ವಿಶ್ವಕಪ್ ಟೂರ್ನಿಗೆ ತಂಡ ಪ್ರಕಟಿಸಿದ ಪಾಕಿಸ್ತಾನ!

ಬಹಿಷ್ಕಾರದ ಬೆದರಿಕೆಗಳ ನಡುವೆಯೂ, 2026ರ ಟಿ20 ವಿಶ್ವಕಪ್‌ಗೆ ಪಾಕಿಸ್ತಾನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಸಲ್ಮಾನ್ ಅಲಿ ಆಘಾ ನಾಯಕತ್ವದ ತಂಡಕ್ಕೆ ಬಾಬರ್ ಅಜಂ ಮರಳಿದ್ದು, ಮೊಹಮ್ಮದ್ ರಿಜ್ವಾನ್ ಮತ್ತು ಹ್ಯಾರಿಸ್ ರೌಫ್ ಅವರಂತಹ ಪ್ರಮುಖ ಆಟಗಾರರನ್ನು ಕೈಬಿಡಲಾಗಿದೆ. 

Read Full Story

04:02 PM (IST) Jan 25

ಬಿಸಿಲಿಗಿಟ್ಟ ಸೋಪಾ ಒಳಗೆ ಹೋಗಿ ಹೊರಗೆ ಬರುವಷ್ಟರಲ್ಲಿ ಮಾಯ - ಸಿಸಿಟಿವಿ ನೋಡಿ ಆಘಾತ

ಮನೆಯ ಗೃಹಿಣಿಯೊಬ್ಬರು ಸೋಫಾಗೆ ಸ್ವಲ್ಪ ಬಿಸಿಲು ತಾಗಲಿ ಎಂದು ಸೋಫಾವನ್ನು ಮನೆಯ ಹೊರಗೆ ಇಟ್ಟಿದ್ದರು. ಆದರೆ ಅವರ ಹೊರಗೆ ಹೋಗಿ ಒಳಗೆ ಬರುವಷ್ಟರಲ್ಲಿ ಅವರ ಸೊಗಸಾದ ಸೋಫಾ ಮಾಯವಾಗಿದೆ. ಹಾಗಿದ್ರೆ ಮನೆಯ ಮುಂಭಾಗ ಇದ್ದ ಸೋಫಾ ಏನಾಯ್ತು? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಸ್ಟೋರಿ..

Read Full Story

03:57 PM (IST) Jan 25

ಅಂಕೇಗೌಡ ಸೇರಿ ಮೂವರು ಕನ್ನಡಿಗರಿಗೆ ಪದ್ಮಶ್ರೀ ಪ್ರಶಸ್ತಿ, ಇಲ್ಲಿದೆ 45 ಸಾಧಕರ ಸಂಪೂರ್ಣ ಪಟ್ಟಿ

ಅಂಕೇಗೌಡ ಸೇರಿ ಮೂವರು ಕನ್ನಡಿಗರಿಗೆ ಪದ್ಮಶ್ರೀ ಪ್ರಶಸ್ತಿ, ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಪುರಸ್ಕಾರ ಪ್ರಕಟಗೊಂಡಿದೆ. ಕರ್ನಾಟಕದ ಯಾರೆಲ್ಲೂ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ?

Read Full Story

03:35 PM (IST) Jan 25

'ಕೆಲಸ ಮಾಡಿದ್ರೆ ತಾನೇ ಕೆಲಸದ ಹೊರೆ?' - ಈ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನ ಮೇಲೆ ಕಿಡಿಕಾರಿದ ಮೊಹಮ್ಮದ್ ಕೈಫ್!

ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಬುಮ್ರಾಗೆ ವಿಶ್ರಾಂತಿ ನೀಡಿದ ಟೀಮ್ ಮ್ಯಾನೇಜ್‌ಮೆಂಟ್ ನಿರ್ಧಾರವನ್ನು ಮೊಹಮ್ಮದ್ ಕೈಫ್ ತೀವ್ರವಾಗಿ ಟೀಕಿಸಿದ್ದಾರೆ. ಹೆಚ್ಚು ಪಂದ್ಯಗಳನ್ನು ಆಡದ ಬುಮ್ರಾಗೆ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಹೆಸರಿನಲ್ಲಿ ವಿಶ್ರಾಂತಿ ನೀಡುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ

Read Full Story

03:02 PM (IST) Jan 25

ಸುಲಭವಾಗಿ ಕೇವಲ 72 ಗಂಟೆಗಳಲ್ಲಿ ಇಲ್ಲಿ ಸಿಗುತ್ತೆ ₹5 ಲಕ್ಷ ಸಾಲ..! ಬ್ಯಾಂಕ್‌ಗೆ ಹೋಗುವ ಕೆಲಸವೂ ಇಲ್ಲ!

ಸಾಲ ಬೇಕಂದ್ರೆ ಒಳ್ಳೆ ಸಿಬಿಲ್ ಸ್ಕೋರ್ ಇರಬೇಕು ಅನ್ನೋದು ಗೊತ್ತೇ ಇದೆ. ಆಮೇಲೆ ಬ್ಯಾಂಕ್‌ಗಳ ಸುತ್ತ ಅಲೆಯಬೇಕು. ಆದರೆ, ಹಾಗಿಲ್ಲದೆ ಫೋನ್‌ನಲ್ಲಿ ಒಂದೇ ಕ್ಲಿಕ್‌ನಲ್ಲಿ ಹಣ ನಿಮ್ಮ ಖಾತೆಗೆ ಬಂದರೆ ಚೆನ್ನಾಗಿರುತ್ತೆ ಅಲ್ವಾ! ಫೋನ್‌ಪೇ ಈಗ ಅಂತಹದ್ದೇ ಒಂದು ಫೀಚರ್ ತಂದಿದೆ.

 

Read Full Story

02:53 PM (IST) Jan 25

ಯೋಧನ ಚಿತೆಗೆ ಬೆಂಕಿ ಇಟ್ಟ 1 ವರ್ಷದ ಪುತ್ರ - ಜಿಲ್ಲಾಧಿಕಾರಿ ಕಣ್ಣಲ್ಲೂ ನೀರು ತರಿಸಿತು ಭಾವುಕ ಕ್ಷಣ

ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಡೆದ ಸೇನಾ ಟ್ರಕ್ ಅಪಘಾತದಲ್ಲಿ ಉತ್ತರ ಪ್ರದೇಶದ ಹಾಪುರ್‌ನ ಯೋಧ ರಿಂಕೆಲ್ ಬಲ್ಯಾನ್ ಹುತಾತ್ಮರಾಗಿದ್ದಾರೆ. ಅವರ ಸ್ವಗ್ರಾಮದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ, ಅವರ ಒಂದು ವರ್ಷದ ಪುತ್ರನೇ ಚಿತೆಗೆ ಅಗ್ನಿಸ್ಪರ್ಶ ಮಾಡಿದ ದೃಶ್ಯ ಎಲ್ಲರನ್ನೂ ಕಣ್ಣೀರಲ್ಲಿ ಮುಳುಗಿಸಿತು.
Read Full Story

01:20 PM (IST) Jan 25

ರೂ.25,000ಕ್ಕಿಂತ ಹೆಚ್ಚು, ಎಸ್‌ಬಿಐ ಹೊಸ ಶುಲ್ಕ ಪ್ರಕಟ - ಗ್ರಾಹಕರೇ ಈಗಲೇ ನೋಟ್ ಮಾಡ್ಕೊಳ್ಳಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಇದು ಫೆಬ್ರವರಿ 15, 2026 ರಿಂದ ಜಾರಿಗೆ ಬರಲಿದೆ. ಬ್ಯಾಂಕ್ ಗ್ರಾಹಕರು ಈ ಬಗ್ಗೆ ವಿವರಗಳನ್ನು ತಿಳಿದುಕೊಳ್ಳುವುದು ಅವಶ್ಯಕ. 

Read Full Story

12:30 PM (IST) Jan 25

ಕೇರಳ ಗಡಿಯಲ್ಲಿ ಸಿಕ್ಕಿಬಿದ್ದ ಬೆಂಗಳೂರಿನಿಂದ ಬರ್ತಿದ್ದ ಯುವಕ - ಬ್ಯಾಗ್‌ನಲ್ಲಿತ್ತು 30 ಲಕ್ಷ ನಗದು

ಕೇರಳ-ಕರ್ನಾಟಕ ಗಡಿಯ ತೋಲ್ಪೆಟ್ಟಿಯಲ್ಲಿ, ದಾಖಲೆಗಳಿಲ್ಲದೆ ಬಸ್‌ನಲ್ಲಿ ಸಾಗಿಸುತ್ತಿದ್ದ ₹30.93 ಲಕ್ಷ ಸಮೇತ ಕೋಯಿಕ್ಕೋಡ್‌ನ ಯುವಕನನ್ನು ಅಬಕಾರಿ ಇಲಾಖೆ ಬಂಧಿಸಿದೆ. ಬೆಂಗಳೂರಿನಿಂದ ಕೋಯಿಕ್ಕೋಡ್‌ಗೆ ತೆರಳುತ್ತಿದ್ದ ಈತನನ್ನು ತಪಾಸಣೆ ವೇಳೆ ಹಿಡಿಯಲಾಗಿದೆ.

Read Full Story

11:57 AM (IST) Jan 25

ಸರಣಿ ಗೆಲುವಿನ ಮೇಲೆ ಕಣ್ಣಿಟ್ಟ ಟೀಂ ಇಂಡಿಯಾ; ಕಿವೀಸ್ ಎದುರಿನ ಪಂದ್ಯದಲ್ಲಿ ಒಂದು ಮಹತ್ವದ ಬದಲಾವಣೆ?

ಗುವಾಹಟಿ: ಭಾರತ-ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯವು ಇಂದು ಗುವಾಹಟಿಯಲ್ಲಿ ಆರಂಭವಾಗಲಿದ್ದು, ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಸರಣಿ ಗೆಲ್ಲುವ ಲೆಕ್ಕಾಚಾರದಲ್ಲಿದೆ. ಟೀಂ ಇಂಡಿಯಾದಲ್ಲಿ ಒಂದು ಮೇಜರ್ ಚೇಂಜ್ ಆಗುವ ಸಾಧ್ಯತೆಯಿದೆ.

 

Read Full Story

11:34 AM (IST) Jan 25

ನನ್ನ ಜೀವನದಲ್ಲಿ ಇಷ್ಟವಿಲ್ಲದೆ ಮಾಡಿದ ಸಿನಿಮಾ ಇದು.. ಓಪನ್ ಆಗಿ ಹೇಳಿದ ಭಾನುಪ್ರಿಯಾ

ಹಿರಿಯ ನಟಿ ಭಾನುಪ್ರಿಯಾ ಅವರು ಸ್ಟಾರ್ ನಟ ಜೊತೆಗಿನ ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಹೇಳಿದಂತೆ ಪಾತ್ರಕ್ಕೆ ಪ್ರಾಮುಖ್ಯತೆ ಇರಲಿಲ್ಲವೆಂದು ಬೇಸರದಿಂದ ಹೇಳಿಕೊಂಡಿದ್ದಾರೆ.

Read Full Story

10:39 AM (IST) Jan 25

ಟಿ20 ವಿಶ್ವಕಪ್ 2026ರಲ್ಲಿ ಬಿಗ್ ಟ್ವಿಸ್ಟ್ - ಪಾಕ್ ಬಾಯ್ಕಾಟ್ ಮಾಡಿದ್ರೆ ಈ ತಂಡಕ್ಕೆ ಚಾನ್ಸ್!

ಟಿ20 ವಿಶ್ವಕಪ್ 2026: ಬಾಂಗ್ಲಾದೇಶದ ದಾರಿಯಲ್ಲೇ ಪಾಕಿಸ್ತಾನ ಕೂಡ 2026ರ ಟಿ20 ವಿಶ್ವಕಪ್‌ನಿಂದ ಹಿಂದೆ ಸರಿಯುತ್ತಾ ಎಂಬ ಚರ್ಚೆ ಶುರುವಾಗಿದೆ. ಒಂದು ವೇಳೆ ಪಾಕ್ ಹಿಂದೆ ಸರಿದರೆ, ಆ ಜಾಗಕ್ಕೆ ಬರುವ ತಂಡ ಯಾವುದು? ಐಸಿಸಿ ಶ್ರೇಯಾಂಕದ ಆಧಾರದ ಮೇಲೆ ತೆಗೆದುಕೊಳ್ಳುವ ಈ ನಿರ್ಧಾರ ಏನು?

Read Full Story

10:27 AM (IST) Jan 25

ಬ್ಯಾಂಕ್ ಉದ್ಯೋಗ ಹುಡುಕುತ್ತಿರುವವರಿಗೆ ನಬಾರ್ಡ್ ಭರ್ಜರಿ ನೇಮಕಾತಿ - ಪದವೀಧರರ ಭವಿಷ್ಯದ ಬಾಗಿಲು ತೆರೆಯಲಿದೆ!

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) 162 ಅಭಿವೃದ್ಧಿ ಸಹಾಯಕ (ಗುಂಪು-ಬಿ) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಯಾವುದೇ ವಿಷಯದಲ್ಲಿ ಪದವಿ ಪಡೆದ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Read Full Story

10:24 AM (IST) Jan 25

ಅಸಲಿಗೆ ಬಂಗಾರ ಹುಟ್ಟಿದ್ದು ಹೇಗೆ? ಯಾಕೆ ಅಷ್ಟೊಂದು ಬೆಲೆಬಾಳುವಂತಾಯಿತು?

ಭಾರತೀಯರು ಮತ್ತು ಬಂಗಾರವನ್ನು ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಚಿನ್ನವನ್ನು ಕೇವಲ ಹೂಡಿಕೆಯಾಗಿ ಮಾತ್ರವಲ್ಲದೆ, ಭಾವನಾತ್ಮಕವಾಗಿ ಕಾಣುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಈ ಬಂಗಾರ ಅಸಲಿಗೆ ಹೇಗೆ ಹುಟ್ಟಿತು? ಇಷ್ಟು ಬೆಲೆಬಾಳುವ ವಸ್ತುವಾಗಿದ್ದು ಹೇಗೆಂದು ಈಗ ತಿಳಿಯೋಣ.

 

Read Full Story

10:00 AM (IST) Jan 25

10 ವರ್ಷ ಹಳೆಯದಾದ 30 ಟನ್‌ ತೂಕವಿರುವ ಕಬ್ಬಿಣದ ಸೇತುವೆಯೇ ರಾತ್ರೋರಾತ್ರಿ ಕಳ್ಳತನ

Korba Iron bridge, water pipeline theft ಸ್ಥಳೀಯಾಡಳಿತವು 20-30 ಟನ್‌ ತೂಗುವ ಗಟ್ಟಿಮುಟ್ಟಾದ ಕಬ್ಬಿಣದ ಸೇತುವೆಯನ್ನು ಕಟ್ಟಿಸಿತ್ತು. ಶುಕ್ರವಾರ ರಾತ್ರಿವರೆಗೂ ಜನರು ಇದರ ಮೇಲೆ ಓಡಾಡಿದ್ದಾರೆ.

Read Full Story

09:41 AM (IST) Jan 25

VHP ಮುಖಂಡನ ಮೇಲೆ ಹಲ್ಲೆ - ಹಿಂಸೆ, ಉದ್ವಿಗ್ನ ಪರಿಸ್ಥಿತಿ; ಹೊತ್ತಿ ಉರಿದ ತರಾನಾ ಪಟ್ಟಣ!

ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ತರಾನಾ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್‌ನ ಯುವ ಮುಖಂಡನ ಮೇಲೆ ಹಲ್ಲೆ ನಡೆದ ನಂತರ ಕೋಮು ಹಿಂಸಾಚಾರ ಭುಗಿಲೆದ್ದಿದೆ. ಎರಡು ಗುಂಪುಗಳ ನಡುವಿನ ಈ ಸಂಘರ್ಷದಲ್ಲಿ ವಾಹನಗಳು ಮತ್ತು ಮನೆಗಳ ಮೇಲೆ ಕಲ್ಲುತೂರಾಟ ನಡೆದು, ವ್ಯಾಪಕ ವಿಧ್ವಂಸಕ ಕೃತ್ಯಗಳು ವರದಿಯಾಗಿವೆ. 

Read Full Story

09:21 AM (IST) Jan 25

ಚಿರಂಜೀವಿ ಮನೆಯ ಒಂದು ದಿನದ ಖರ್ಚು ಎಷ್ಟು ಲಕ್ಷ ಗೊತ್ತಾ? ಮೆಗಾಸ್ಟಾರ್ ಬಗ್ಗೆ ಆ ಸತ್ಯ ಬಿಚ್ಚಿಟ್ಟಿದ್ಯಾರು?

ಚಿರಂಜೀವಿ ಮಧ್ಯಮ ವರ್ಗದ ಕುಟುಂಬದಿಂದ ಬಂದು ಮೆಗಾಸ್ಟಾರ್ ಆದ ನಟ. ಟಾಲಿವುಡ್‌ನಲ್ಲಿ ಮೆಗಾ ಸಾಮ್ರಾಜ್ಯವನ್ನೇ ಕಟ್ಟಿದ ಈ ಹೀರೋ, ಯಾರಿಗೂ ತಿಳಿಯದಂತೆ ಸಾಕಷ್ಟು  ದಾನಗಳನ್ನೂ ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ. ಸಾವಿರಾರು ಕೋಟಿಗೆ ಒಡೆಯನಾಗಿರುವ ಚಿರಂಜೀವಿಯ ಒಂದು ದಿನದ ಖರ್ಚು ಎಷ್ಟು ಗೊತ್ತಾ?

Read Full Story

09:15 AM (IST) Jan 25

ಅಮೆರಿಕದಲ್ಲಿ ಭಾರತೀಯನಿಂದ ಗುಂಡಿಕ್ಕಿ ಪತ್ನಿ, 3 ನೆಂಟರ ಹತ್ಯೆ, ಬಚ್ಚಲಮನೆ ಸೇರಿ ಜೀವ ಉಳಿಸಿಕೊಂಡ ಮಕ್ಕಳು

ಅಮೆರಿಕದ ಜಾರ್ಜಿಯಾದಲ್ಲಿ ಭಾರತೀಯನೊಬ್ಬ ಪತ್ನಿ ಸೇರಿ ನಾಲ್ವರನ್ನು ಹತ್ಯೆ ಮಾಡಿದ್ದಾನೆ. ಮತ್ತೊಂದೆಡೆ, ಅಮೆರಿಕದಲ್ಲಿ ಟಿಕ್‌ಟಾಕ್‌ ಮೇಲಿನ ನಿಷೇಧವನ್ನು ರದ್ದುಗೊಳಿಸಲಾಗಿದೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ವಿಎಚ್‌ಪಿ ಮುಖಂಡನ ಮೇಲಿನ ಹಲ್ಲೆ ಬಳಿಕ ಕೋಮು ಹಿಂಸಾಚಾರ ಭುಗಿಲೆದ್ದಿದೆ.
Read Full Story

09:05 AM (IST) Jan 25

ತೆಲಂಗಾಣದಲ್ಲಿ ಮತ್ತೆ 300 ಬೀದಿ ನಾಯಿಗಳ ಹತ್ಯೆ, ಒಂದೇ ತಿಂಗಳಲ್ಲಿ 900ಕ್ಕೇ ಏರಿಕೆ

ತೆಲಂಗಾಣದಲ್ಲಿ ಚುನಾವಣಾ ಭರವಸೆ ಈಡೇರಿಸಲು 900ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಮತ್ತೊಂದೆಡೆ, ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಸಮಸ್ಯೆಗಳನ್ನು ಪರಿಹರಿಸಲು ಸಿಬಿಎಸ್‌ಇ ತನ್ನೆಲ್ಲಾ ಶಾಲೆಗಳಲ್ಲಿ ಆಪ್ತ ಸಮಾಲೋಚಕರ ನೇಮಕವನ್ನು ಕಡ್ಡಾಯಗೊಳಿಸಿದೆ.
Read Full Story

08:57 AM (IST) Jan 25

ಭಾರತದ ಮೇಲೆ ಅಮೆರಿಕ ಹೇರಿದ 25% ತೆರಿಗೆ ರದ್ದು? ದಾಳಿ ನಡೆಸಿದ್ರೆ ಯುದ್ದ ಎಂದು ಪರಿಗಣನೆ - ಇರಾನ್‌ ಗುಡಗು

ರಷ್ಯಾದಿಂದ ತೈಲ ಆಮದು ಕಡಿಮೆ ಮಾಡಿದರೆ ಭಾರತದ ಮೇಲಿನ ತೆರಿಗೆ ರದ್ದು ಮಾಡುವುದಾಗಿ ಅಮೆರಿಕ ಸುಳಿವು ನೀಡಿದೆ. ಮತ್ತೊಂದೆಡೆ, ಚೀನಾದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡರೆ ಕೆನಡಾದ ಮೇಲೆ ಶೇ.100ರಷ್ಟು ತೆರಿಗೆ ವಿಧಿಸುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ,

Read Full Story

08:49 AM (IST) Jan 25

ತಿರುಪತಿ ಲಡ್ಡು ತಯಾರಿಗೆ 68 ಲಕ್ಷ ಕೆಜಿ ನಕಲಿ ತುಪ್ಪ; 250 ಕೋಟಿ ಗೋಲ್ಮಾಲ್ - CBI ತನಿಖೆಯ ಸತ್ಯ

ತಿರುಮಲ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿದ ನಕಲಿ ತುಪ್ಪ ಬಳಸಿದ ಪ್ರಕರಣದಲ್ಲಿ ಸಿಬಿಐ ಅಂತಿಮ ಆರೋಪಪಟ್ಟಿ ಸಲ್ಲಿಸಿದೆ. ಈ 250 ಕೋಟಿ ರೂ. ಹಗರಣದಲ್ಲಿ ಟಿಟಿಡಿ ಸಿಬ್ಬಂದಿ ಸೇರಿದಂತೆ 36 ಮಂದಿ ಭಾಗಿಯಾಗಿದ್ದು, 5 ವರ್ಷಗಳಲ್ಲಿ 68 ಲಕ್ಷ ಕೆ.ಜಿ ನಕಲಿ ತುಪ್ಪ ಪೂರೈಕೆಯಾಗಿದೆ.

Read Full Story

08:28 AM (IST) Jan 25

IPL 2026 ಟೂರ್ನಿಗೂ ಮುನ್ನ CSK ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್; 14 ಕೋಟಿಯ ಸ್ಟಾರ್ ಆಟಗಾರ ಔಟ್!

2026ನೇ ಸಾಲಿನ IPL ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಬಿಗ್ ಶಾಕ್ ಎದುರಾಗಿದೆ. ತಂಡದ ಸ್ಟಾರ್ ಆಟಗಾರ ರಣಜಿ ಟ್ರೋಫಿ ಆಡುವ ವೇಳೆ ಗಂಭೀರ ಗಾಯ ಮಾಡಿಕೊಂಡಿದ್ದು, ಅವರು ಐಪಿಎಲ್ ಆಡುವ ಬಗ್ಗೆ ಪ್ರಶ್ನೆಗಳು ಏಳಲಾರಂಭಿಸಿವೆ.

 

Read Full Story

07:49 AM (IST) Jan 25

ಇನ್ಸ್ಟಾಗ್ರಾಮ್‌ನಲ್ಲಿ ಸಿಂಗಲ್ ಪೆಂಗ್ವಿನ್‌ಗಾಗಿ ಮರುಗಿದ ನೆಟ್ಟಿಗರು - ವೈರಲ್ ಸ್ಟೋರಿಯ ಅಸಲಿಯತ್ತೇನು?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ, ತನ್ನ ಗುಂಪನ್ನು ತೊರೆದು ಪರ್ವತದತ್ತ ಸಾಗುತ್ತಿರುವ ಒಂಟಿ ಪೆಂಗ್ವಿನ್ ವಿಡಿಯೋದ ಅಸಲಿ ಕಥೆ ಬೇರೆಯೇ ಇದೆ. ಹಾಗಿದ್ದರೆ ಈ ಪೆಂಗ್ವಿನ್‌ನ ನಿಜವಾದ ಸ್ಟೋರಿ ಏನು?

Read Full Story

07:22 AM (IST) Jan 25

ಜಿಮ್‌ಗಳಲ್ಲಿ ಮತಾಂತರದ ಕರಾಳ ಜಾಲ - ಬಯಲಾಯ್ತು ಸತ್ಯ, ಶ್ರೀಮಂತ ಮಹಿಳೆಯರೇ ಇವರ ಟಾರ್ಗೆಟ್

ಶ್ರೀಮಂತ ಮಹಿಳೆಯರನ್ನು ಗುರಿಯಾಗಿಸಿ ಜಿಮ್ ಮೂಲಕ ಮತಾಂತರ ಮತ್ತು ಹಣ ಸುಲಿಗೆ ಮಾಡುತ್ತಿದ್ದ ವಿದೇಶಿ ನಂಟಿನ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ, ಸಹಪಾಠಿಯನ್ನು ಮತಾಂತರಗೊಳಿಸಲು ಯತ್ನಿಸಿದ ಆರೋಪದ ಮೇಲೆ ಐವರು ಅಪ್ರಾಪ್ತ ಮುಸ್ಲಿಂ ಬಾಲಕಿಯರ ವಿರುದ್ಧ ಪ್ರಕರಣ ದಾಖಲಾಗಿದೆ.

Read Full Story

06:01 AM (IST) Jan 25

ನಾವೂ ಟಿ20 ವಿಶ್ವಕಪ್‌ಗೆ ಹೋಗಲ್ಲ - ಐಸಿಸಿಗೆ ಕುತಂತ್ರಿ ಪಾಕಿಸ್ತಾನದಿಂದ ಪೊಳ್ಳು ಬೆದರಿಕೆ!

ಟಿ20 ವಿಶ್ವಕಪ್‌ನಲ್ಲಿ ಆಡಲು ಭಾರತಕ್ಕೆ ಹೋಗುವುದಿಲ್ಲವೆಂದು ಪಟ್ಟು ಹಿಡಿದ ಬಾಂಗ್ಲಾದೇಶವನ್ನು ಐಸಿಸಿ ಟೂರ್ನಿಯಿಂದ ಹೊರಹಾಕಿದೆ. ಬಾಂಗ್ಲಾ ಪರ ನಿಂತಿರುವ ಪಾಕಿಸ್ತಾನ, ತಾನೂ ಸಹ ವಿಶ್ವಕಪ್‌ನಿಂದ ಹಿಂದೆ ಸರಿಯುವ ಬೆದರಿಕೆ ಹಾಕಿದ್ದು, ಅಂತಿಮ ನಿರ್ಧಾರವನ್ನು ತಮ್ಮ ಸರ್ಕಾರ ತೆಗೆದುಕೊಳ್ಳಲಿದೆ ಎಂದು ಹೇಳಿದೆ.
Read Full Story

More Trending News