LIVE NOW
Published : Jan 25, 2026, 05:05 AM ISTUpdated : Jan 25, 2026, 08:28 AM IST

India Latest News Live: IPL 2026 ಟೂರ್ನಿಗೂ ಮುನ್ನ CSK ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್; 14 ಕೋಟಿಯ ಸ್ಟಾರ್ ಆಟಗಾರ ಔಟ್!

ಸಾರಾಂಶ

ಮುಂಬೈ: ಅಪಾರ್ಟ್‌ಮೆಂಟ್‌ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪದ ಪ್ರಕರಣದಲ್ಲಿ ಬಾಲಿವುಡ್‌ ನಟ ಕಮಾಲ್‌ ರಶೀದ್‌ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ‘ಜ.18ರಂದು ಅಂಧೇರಿ ಬಳಿಯ ಓಶಿವಾರಾದ ನಳಂದಾ ಸೊಸೈಟಿಯ 2ನೇ ಮತ್ತು ನಾಲ್ಕನೇ ಮಹಡಿಯ ಮನೆಗಳ ಗುಂಡಿನ ದಾಳಿ ನಡೆದಿತ್ತು. ಬರಹಗಾರರು ಮತ್ತು ಮಾಡೆಲ್‌ಗಳನು ವಾಸವಿದ್ದ ಮನೆಯ ಮೇಲೆ ನಡೆದ ಗುಂಡಿನ ದಾಳಿ ತನಿಖೆ ವೇಳೆ, ಅಲ್ಲಿ ಸಿಕ್ಕ ಗುಂಡು ಕಮಾಲ್‌ ಖಾನ್‌ ಗನ್‌ನಿಂದ ಹಾರಿದ್ದು ಎಂದು ಸಾಬೀತಾಗಿತ್ತು. ವಿಚಾರಣೆ ವೇಳೆ ದಾಳಿ ನಡೆಸಿದ್ದನ್ನು ಖಾನ್‌ ಒಪ್ಪಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಗುಂಡಿನ ದಾಳಿಗೆ ಕಾರಣ ತಿಳಿದುಬಂದಿಲ್ಲ

Chennai Super Kings

08:28 AM (IST) Jan 25

IPL 2026 ಟೂರ್ನಿಗೂ ಮುನ್ನ CSK ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್; 14 ಕೋಟಿಯ ಸ್ಟಾರ್ ಆಟಗಾರ ಔಟ್!

2026ನೇ ಸಾಲಿನ IPL ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಬಿಗ್ ಶಾಕ್ ಎದುರಾಗಿದೆ. ತಂಡದ ಸ್ಟಾರ್ ಆಟಗಾರ ರಣಜಿ ಟ್ರೋಫಿ ಆಡುವ ವೇಳೆ ಗಂಭೀರ ಗಾಯ ಮಾಡಿಕೊಂಡಿದ್ದು, ಅವರು ಐಪಿಎಲ್ ಆಡುವ ಬಗ್ಗೆ ಪ್ರಶ್ನೆಗಳು ಏಳಲಾರಂಭಿಸಿವೆ.

 

Read Full Story

07:49 AM (IST) Jan 25

ಇನ್ಸ್ಟಾಗ್ರಾಮ್‌ನಲ್ಲಿ ಸಿಂಗಲ್ ಪೆಂಗ್ವಿನ್‌ಗಾಗಿ ಮರುಗಿದ ನೆಟ್ಟಿಗರು - ವೈರಲ್ ಸ್ಟೋರಿಯ ಅಸಲಿಯತ್ತೇನು?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ, ತನ್ನ ಗುಂಪನ್ನು ತೊರೆದು ಪರ್ವತದತ್ತ ಸಾಗುತ್ತಿರುವ ಒಂಟಿ ಪೆಂಗ್ವಿನ್ ವಿಡಿಯೋದ ಅಸಲಿ ಕಥೆ ಬೇರೆಯೇ ಇದೆ. ಹಾಗಿದ್ದರೆ ಈ ಪೆಂಗ್ವಿನ್‌ನ ನಿಜವಾದ ಸ್ಟೋರಿ ಏನು?

Read Full Story

07:22 AM (IST) Jan 25

ಜಿಮ್‌ಗಳಲ್ಲಿ ಮತಾಂತರದ ಕರಾಳ ಜಾಲ - ಬಯಲಾಯ್ತು ಸತ್ಯ, ಶ್ರೀಮಂತ ಮಹಿಳೆಯರೇ ಇವರ ಟಾರ್ಗೆಟ್

ಶ್ರೀಮಂತ ಮಹಿಳೆಯರನ್ನು ಗುರಿಯಾಗಿಸಿ ಜಿಮ್ ಮೂಲಕ ಮತಾಂತರ ಮತ್ತು ಹಣ ಸುಲಿಗೆ ಮಾಡುತ್ತಿದ್ದ ವಿದೇಶಿ ನಂಟಿನ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ, ಸಹಪಾಠಿಯನ್ನು ಮತಾಂತರಗೊಳಿಸಲು ಯತ್ನಿಸಿದ ಆರೋಪದ ಮೇಲೆ ಐವರು ಅಪ್ರಾಪ್ತ ಮುಸ್ಲಿಂ ಬಾಲಕಿಯರ ವಿರುದ್ಧ ಪ್ರಕರಣ ದಾಖಲಾಗಿದೆ.

Read Full Story

06:01 AM (IST) Jan 25

ನಾವೂ ಟಿ20 ವಿಶ್ವಕಪ್‌ಗೆ ಹೋಗಲ್ಲ - ಐಸಿಸಿಗೆ ಕುತಂತ್ರಿ ಪಾಕಿಸ್ತಾನದಿಂದ ಪೊಳ್ಳು ಬೆದರಿಕೆ!

ಟಿ20 ವಿಶ್ವಕಪ್‌ನಲ್ಲಿ ಆಡಲು ಭಾರತಕ್ಕೆ ಹೋಗುವುದಿಲ್ಲವೆಂದು ಪಟ್ಟು ಹಿಡಿದ ಬಾಂಗ್ಲಾದೇಶವನ್ನು ಐಸಿಸಿ ಟೂರ್ನಿಯಿಂದ ಹೊರಹಾಕಿದೆ. ಬಾಂಗ್ಲಾ ಪರ ನಿಂತಿರುವ ಪಾಕಿಸ್ತಾನ, ತಾನೂ ಸಹ ವಿಶ್ವಕಪ್‌ನಿಂದ ಹಿಂದೆ ಸರಿಯುವ ಬೆದರಿಕೆ ಹಾಕಿದ್ದು, ಅಂತಿಮ ನಿರ್ಧಾರವನ್ನು ತಮ್ಮ ಸರ್ಕಾರ ತೆಗೆದುಕೊಳ್ಳಲಿದೆ ಎಂದು ಹೇಳಿದೆ.
Read Full Story

More Trending News