ಕಾಬೂಲ್ ಅಫ್ಘಾನಿಸ್ತಾನದ ಮಹಿಳೆಯರ ಸ್ಥಿತಿಯನ್ನು ಇನ್ನಷ್ಟು ಶೋಷನೀಯಗೊಳಿಸುವಂತಹ ಕ್ರಿಮಿನಲ್ ಕಾನೂನೊಂದನ್ನು ತಾಲಿಬಾನ್ ಸರ್ಕಾರ ಜಾರಿಗೆ ತಂದಿದೆ. ಇದರನ್ವಯ ಹೆಂಡತಿಯು ದಾಸಿಯಾಗಿದ್ದು, ಆಕೆಗೆ ಹೊಡೆಯುವ ಸಂಪೂರ್ಣ ಅಧಿಕಾರವನ್ನು ಪತಿಗೆ ನೀಡಲಾಗಿದೆ.
ಸರ್ವೋಚ್ಚ ನಾಯಕ ಅಖುಂಡ್ಜಾದಾ ಸಹಿ ಮಾಡಿರುವ ಈ ಕಾನೂನಿನಲ್ಲಿ, ಸಣ್ಣ ತಪ್ಪುಗಳನ್ನು ಮಾಡಿದಾಗ ಹೆಂಡತಿಗೆ ಹೊಡೆಯಲು ಗಂಡನಿಗೆ ಹಾಗೂ ಮಕ್ಕಳಿಗೆ ಬಾರಿಸಲು ತಂದೆಗೆ ಪೂರ್ಣ ಸ್ವಾತಂತ್ರ್ಯವಿದೆ. ಆದರೆ ಅದರಿಂದ ಸಂತ್ರಸ್ತರಿಗೆ ಯಾವುದೇ ದೊಡ್ಡ ಗಾಯ ಅಥವಾ ಮೂಳೆ ಮುರಿತ ಆಗಬಾರದು ಎನ್ನಲಾಗಿದೆ. ಅಂತೆಯೇ ಪತಿಯ ಆಣತಿಯಿಲ್ಲದೆ ಸಂಬಂಧಿಕರ ಮನೆಗೆ ಹೋಗುವ ಸ್ತ್ರೀಯರಿಗೆ 3 ತಿಂಗಳ ಸೆರೆವಾಸದ ಶಿಕ್ಷೆ ವಿಧಿಸಲಾಗುವುದು.
10:54 PM (IST) Feb 19
ಪ್ರಧಾನಿ ಮೋದಿ ಆಯೋಜಿಸಿದ್ದ ಔತಣಕೂಟಕ್ಕೆ ಆಹ್ವಾನಿತರಾಗಿದ್ದ ಅಮೆರಿಕದ ಉದ್ಯಮಿ ಸಾರಾ ಹೂಕರ್, ದೆಹಲಿಯ ಭೀಕರ ಟ್ರಾಫಿಕ್ನಿಂದಾಗಿ ಕಾರ್ಯಕ್ರಮವನ್ನು ತಪ್ಪಿಸಿಕೊಂಡರು. ನಾಲ್ಕು ಗಂಟೆಗಳ ಕಾಲ ಟ್ರಾಫಿಕ್ನಲ್ಲಿ ಸಿಲುಕಿ, ಅಂತಿಮವಾಗಿ ಹೋಟೆಲ್ನಲ್ಲಿ ರೂಮ್ ಸರ್ವಿಸ್ ಮೂಲಕ ಊಟ ಮಾಡಿದ್ದಾರೆ.
09:52 PM (IST) Feb 19
ಭಾರತದಲ್ಲಿ ನಕಲಿ ವಿಶ್ವವಿದ್ಯಾನಿಲಯಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಯುಜಿಸಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಎಚ್ಚರಿಕೆ ನೀಡಿದೆ. ದೇಶದ 12 ರಾಜ್ಯಗಳಲ್ಲಿ 32 ನಕಲಿ ವಿವಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರವೇಶ ಪಡೆಯುವ ಮುನ್ನ ಯುಜಿಸಿ ವೆಬ್ಸೈಟ್ನಲ್ಲಿ ಪಟ್ಟಿ ಪರಿಶೀಲಿಸುವಂತೆ ಸೂಚಿಸಲಾಗಿದೆ.
09:29 PM (IST) Feb 19
08:24 PM (IST) Feb 19
08:20 PM (IST) Feb 19
ಬೆಂಗಳೂರು: ಭಾರತದ ಪ್ರತಿಭಾನ್ವಿತ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಕೊನೆಯ ಕ್ಷಣದಲ್ಲಿ 10ನೇ ಕ್ಲಾಸ್ ಸಿಬಿಎಸ್ಇ ವಾರ್ಷಿಕ ಪರೀಕ್ಷೆಯಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಕೊನೆಗೂ ವೈಭವ್ ತಂದೆ ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ.
08:01 PM (IST) Feb 19
ಗುಜುರಿ ಜೊತೆ ಗೊತ್ತಿಲ್ಲದೆ ₹15 ಲಕ್ಷ ಚಿನ್ನವೂ ಹೋಯ್ತು, ಮನೆ ಕ್ಲೀನ್ ಮಾಡಿ ಬೇಡದ ವಸ್ತುಗಳನ್ನು ಗುಜುರಿಗೆ ಮಾರಾಟ ಮಾಡಲಾಗಿತ್ತು. ಇದರಲ್ಲಿ ಚಿನ್ನವೂ ಹೋಗಿತ್ತು. ದೇವರಿಗೆ ಹರಕೆ ಹೊತ್ತ ಬಳಿಕ ನಡೆಯಿತು ಪವಾಡ
07:21 PM (IST) Feb 19
Galgotias robodog controversy: ವಿಶ್ವ ಮಟ್ಟದ ಎಐ ಶೃಂಗಸಭೆಯಲ್ಲಿ ಚೀನಾದ ರೋಬೋಡಾಗ್ ಅನ್ನು ತಮ್ಮದೆಂದು ಹೇಳಿ ಗಾಲ್ಗೋಟಿಯಸ್ ವಿಶ್ವವಿದ್ಯಾನಿಲಯವು ಮುಜುಗರಕ್ಕೀಡಾಗಿತ್ತು. ಈ ಘಟನೆಯ ನಂತರಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ವಿಶ್ವವಿದ್ಯಾನಿಲಯವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
06:53 PM (IST) Feb 19
ಫೆ.21ರಿಂದ ಚಿನ್ನ, ಪೆಟ್ರೋಲ್ ದರ ಭಾರಿ ವ್ಯತ್ಯಾಸ ಸಾಧ್ಯತೆ, ಟ್ರಂಪ್ ನಿರ್ಧಾರ ಹಿಂದಿದೆ ಆತಂಕ, ಇರಾನ್ ಮೇಲೆ ಏರ್ಸ್ಟ್ರೈಕ್ ಮಾಡಲು ಅಮೆರಿಕ ಮಿಲಿಟರಿ ಪಡೆ ಸನ್ನದ್ಧವಾಗಿದೆ. ಟ್ರಂಪ್ ಅಂತಿಮ ಆದೇಶಕ್ಕಾಗಿ ಕಾಯುತ್ತಿದೆ. ಸ್ಟ್ರೈಕ್ ನಡೆದರೆ ಭಾರತದಲ್ಲಿ ಹಲು ವಸ್ತುಗಳ ಬೆಲೆ ಏರಿಕೆಯಾಗಲಿದೆ.
06:49 PM (IST) Feb 19
06:47 PM (IST) Feb 19
ಮಹಾ ನಗರಗಳಲ್ಲಿ ಒತ್ತಡದಿಂದ ನಾವು ಯಂತ್ರಗಳಂತೆ ಕಾರ್ಯ ನಿರ್ವಹಿಸುತ್ತಿದ್ದೇವೆ. ವಾಯು ಮಾಲಿನ್ಯವೂ ಹೆಚ್ಚುತ್ತಿದೆ. ಹಳ್ಳಿಗಳಿಗೆ ಓಡಿ ಹೋಗುವ ಕಾಲ ಬರುತ್ತದೆ ಎಂದು ಇತ್ತೀಚೆಗೆ ಬೆಂಗಳೂರು ಗ್ರಾಮೀಣ ಸಂಸದ ಡಾ.ಸಿ.ಎನ್.ಮಂಜುನಾಥ್ ಎಚ್ಚರಿಸಿದ್ದರು.
06:26 PM (IST) Feb 19
ಚೀನಾ ಜ್ಯೋತಿಷ್ಯ ಪದ್ಧತಿಯಲ್ಲಿ ಹೊಸ ವರ್ಷದ ಮೊದಲ ಕೆಲವು ದಿನಗಳು ಪೂರ್ತಿ ವರ್ಷದ ಭವಿಷ್ಯವನ್ನು ನಿರ್ಧರಿಸುತ್ತೆ ಎಂಬ ನಂಬಿಕೆ ಇದೆ. ಈ ಪದ್ಧತಿ ಪ್ರಕಾರ ವರ್ಷ ಪೂರ್ತಿ ಖುಷ್ ಖುಷಿಯಾಗಿ, ಕೈ ತುಂಬಾ ದುಡ್ಡಿರುವಂತೆ ಮಾಡಲು ಹೇಗಿರಬೇಕು?
06:05 PM (IST) Feb 19
ನಟಿ ಪ್ರತ್ಯುಷಾ ಅವರ ಸಾವು 'ಪುನ್ನಗೈ ಮನ್ನನ್' ಚಿತ್ರದ ಕಥೆಯನ್ನು ಹೋಲುತ್ತದೆ. ಪ್ರಿಯಕರ ಸಿದ್ಧಾರ್ಥ್ ರೆಡ್ಡಿ ಜೊತೆ ಆತ್ಮ*ಹತ್ಯೆಗೆ ಯತ್ನಿಸಿ ಪ್ರಾಣ ಕಳೆದುಕೊಂಡಿದ್ದ ಈ ಪ್ರಕರಣದಲ್ಲಿ, 24 ವರ್ಷಗಳ ಬಳಿಕ ತೀರ್ಪು ಪ್ರಕಟವಾಗಿದೆ. ಏನಿದೆ ತೀರ್ಪಿನಲ್ಲಿ?
05:55 PM (IST) Feb 19
ಮೊಬೈಲ್ ಡೇಟಾ ಕ್ರಾಂತಿ ರೀತಿ ಕಡಿಮೆ ಬೆಲೆಯಲ್ಲಿ ಎಐ, ಇದಕ್ಕಾಗಿ ಮುಕೇಶ್ ಅಂಬಾನಿ 10 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದಾರೆ. ದೆಹಲಿ ಎಐ ಇಂಪಾಕ್ಟ್ ಶೃಂಗಸಭೆಯಲ್ಲಿ ಅಂಬಾನಿ ಘೋಷಣೆ ಹಲವು ದೇಶಗಳನ್ನೇ ಚಕಿತಗೊಳಿಸಿದೆ.
05:52 PM (IST) Feb 19
05:25 PM (IST) Feb 19
ಹಲವರು ಭೇಟಿಯಾಗಲು ಹಾತೊರೆಯತ್ತಿರುವ ನೈನಾ ಅವತ್ರ್ ಯಾರು? ಈಕೆ ಪೋಸ್ಟ್ಗೆ ಮಿಲಿಯನ್ ಲೈಕ್ಸ್, ಅಪ್ಪಟ ಸುಂದರ ಈಕೆ. ಸೀರೆ, ಮಾಡರ್ನ್ ಡ್ರೆಸ್ ಸೇರಿದಂತೆ ಭಿನ್ನ ಶೈಲಿಯಲ್ಲಿ ಈಕೆ ಮಿಂಚುತ್ತಿದ್ದಾಳೆ. ಇನ್ನು ಕಮೆಂಟ್ಸ್ ಸುರಿಮಳೆಯಾಗುತ್ತಿದೆ. ಅಷ್ಟಕ್ಕೂ ಟ್ರೆಂಡ್ನಲ್ಲಿರುವ ಈ ನೈನಾ ಯಾರು?
05:00 PM (IST) Feb 19
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಅಸ್ಸಾಂನ ಪ್ರಸಿದ್ಧ ಕಾಮಾಕ್ಯ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಾಂತ್ರಿಕ ದೇವಿಯು ಇವರ ರಾಜಕೀಯ ಬಯಕೆಗಳನ್ನು ಈಡೇರಿಸುವಳೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.
04:34 PM (IST) Feb 19
ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಆರ್ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಸಾರ್ವಕಾಲಿಕ ಶ್ರೇಷ್ಠ ಟಾಪ್ 5 ಟಿ20 ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ.
04:30 PM (IST) Feb 19
ಹಾರಿ ಹೋಗಿ ಸೈನ್ ಬೋರ್ಡ್ಗೆ ಡಿಕ್ಕಿಯಾಯ್ತಾ ಥಾರ್? ವಿಡಿಯೋ ಹಿಂದಿನ ರಹಸ್ಯ ಬಹಿರಂಗ ವೈರಲ್ ವಿಡಿಯೋ ಹಿಂದಿನ ಅಸಲಿ ಕಹಾನಿ ಬಹಿರಂಗವಾಗಿದೆ. ಎಕ್ಸ್ಪ್ರೆಸ್ ಹೈವೇನಲ್ಲಿ ಕಾಣಿಸಿಕೊಂಡ ಈ ದೃಶ್ಯದ ಅಸಲಿ ಕತೆ ಇಲ್ಲಿದೆ.
04:25 PM (IST) Feb 19
ಪ್ರಾಮಾಣಿಕ ಐಇಎಸ್ ಅಧಿಕಾರಿ ಸತ್ಯೇಂದ್ರ ದುಬೆ, ದೇಶದ ಪ್ರತಿಷ್ಠಿತ 'ಸುವರ್ಣ ಚತುಷ್ಪಥ' ಹೆದ್ದಾರಿ ಯೋಜನೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಬಯಲಿಗೆಳೆದರು. ಆದರೆ, ಅವರ ಅಮಾನುಷ ಹತ್ಯೆ 'ಮಾಹಿತಿ ನೀಡುವವರ ಸಂರಕ್ಷಣಾ ಕಾಯ್ದೆ' ಜಾರಿಗೆ ಬರಲು ಪ್ರೇರಣೆಯಾಯಿತು.
04:16 PM (IST) Feb 19
03:56 PM (IST) Feb 19
03:33 PM (IST) Feb 19
ಕೊಡಗಿನ ಬ್ಯೂಟಿ, ಇದೀಗ ನ್ಯಾಷನಲ್ ಕ್ರಶ್ ಎಂದು ಕರೆಯಿಸಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ, ತೆಲುಗು ನಟ ವಿಜಯ್ ದೇವರಕೊಂಡ ಜೊತೆ ಸಪ್ತಪದಿ ತುಳಿಯುತ್ತಿದ್ದು, ಕರ್ನಾಟಕದ ಶೆಟ್ಟರ ಗ್ಯಾಂಗಿಗೆ ಆಹ್ವಾನವಿದ್ಯಾ?
03:21 PM (IST) Feb 19
ಜಂಕ್ಫುಡ್ ಎಂದು ಪರಿಗಣಿಸಲಾಗುವ ವಡೆಯು ಕೇವಲ ತಿಂಡಿಯಲ್ಲ, ಅದೊಂದು ಔಷಧ ಎನ್ನುತ್ತಾರೆ ಆಯುರ್ವೇದ ತಜ್ಞರು. ನಿರ್ದಿಷ್ಟ ವಿಧಾನದಲ್ಲಿ ತಯಾರಿಸಿದ ಉದ್ದಿನ ವಡೆಯನ್ನು ಬೆಣ್ಣೆಯೊಂದಿಗೆ ಸೇವಿಸುವುದರಿಂದ ನರ ದೌರ್ಬಲ್ಯ ಮತ್ತು ಪಾರ್ಶ್ವವಾಯುವಿನಂತಹ ಗಂಭೀರ ಸಮಸ್ಯೆಗಳನ್ನು ನಿವಾರಿಸಬಹುದು ಎಂದಿದ್ದಾರೆ.
03:19 PM (IST) Feb 19
ಪಾಕ್ ಕ್ರಿಕೆಟಿಗ ಇಮಾದ್ ಮಾಜಿ ಪತ್ನಿಯಿಂದ ವ್ಯಾಟ್ಸಾಪ್ ಚಾಟ್ ಲೀಕ್, ಕ್ರಿಕೆಟಿಗ ತನಗೆ ಮಾಡಿದ್ದ ಮೆಸೇಜ್ಗಳನ್ನು ಮಾಜಿ ಪತ್ನಿ ಸನ್ನಿಯಾ ಅಶ್ಫಾಕ್ ಬಹಿರಂಗಪಡಿಸಿದ್ದಾರೆ. ಇದೇ ವೇಳೆ ಪಿಸಿಬಿಗೆ ಭಾವನಾತ್ಮಕ ಮನವಿ ಕಳುಹಿಸಿದ್ದಾರೆ. ಏನಿದು ಪ್ರಕರಣ
02:05 PM (IST) Feb 19
ಹಿಂದೂ ಧರ್ಮವು ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದಾಗಿದೆ. ತನ್ನ ವಿಶಿಷ್ಠ ಆಚರಣೆ ಮೂಲಕ ಜಗತ್ತಿಗೆ ಹಲವು ವಿಚಾರಗಳಲ್ಲಿ ಹಿಂದೂ ಧರ್ಮವು ಸ್ಪೂರ್ತಿಯಾಗಿದೆ. ಅತಿಹೆಚ್ಚು ಹಿಂದೂ ಧರ್ಮವನ್ನು ಅನುಸರಿಸುವ ಜಗತ್ತಿನ ಟಾಪ್ 6 ದೇಶಗಳು ಯಾವುವು ನೋಡೋಣ ಬನ್ನಿ.
02:03 PM (IST) Feb 19
ಕಾನ್ಪುರ ಪಂದ್ಯದ ನಡುವೆ ಜೇನುನೊಣ ದಾಳಿಗೆ ಅಂಪೈರ್ ಸಾವು, ಏಕಾಏಕಿ ಜೇನುನೊಣ ದಾಳಿ ನಡೆಸಿದೆ. ಆಟಗಾರರು, ಅಂಪೈರ್ ಸೇರಿದಂತೆ ದಿಕ್ಕಾಪಾಲಾಗಿ ಓಡಿದ್ದಾರೆ. ಆದರೆ ತೀವ್ರ ದಾಳಿಯಿಂದ ಅಂಪೈರ್ ಮೃತಪಟ್ಟರೆ, ಕ್ರಿಕೆಟಿಗರು ಪರಿಸ್ಥಿತಿ ಗಂಭೀರವಾಗಿದೆ.
01:57 PM (IST) Feb 19
18 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ವ್ಯಕ್ತಿಯೊಬ್ಬ, ತನಗೆ ಆಶ್ರಯ ನೀಡಿದ್ದ ಮಹಿಳೆಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ತನ್ನ ಮೂವರು ಮಕ್ಕಳನ್ನು ಕೊಂದಿದ್ದ ಈತ, ಭೋಪಾಲ್ನಲ್ಲಿ ಈ ಕೃತ್ಯ ಎಸಗಿದ್ದು, ಬಳಿಕ ರೈಲಿಗೆ ತಲೆಕೊಟ್ಟು ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ.
01:47 PM (IST) Feb 19
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಭಾರತದ ಅತ್ಯಂತ ಶ್ರೀಮಂತ ರಾಜ್ಯ ಯಾವುದು? ಈ ಪಟ್ಟಿಯಲ್ಲಿ ತಮಿಳುನಾಡು, ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ಪ್ರಾಬಲ್ಯ ಸಾಧಿಸಿದ್ದು, ಅರುಣಾಚಲ ಪ್ರದೇಶವು ಅತಿ ಕಡಿಮೆ ಆರ್ಥಿಕ ಉತ್ಪಾದನೆ ಹೊಂದಿದೆ.
01:24 PM (IST) Feb 19
ಹೆಂಡತಿ ಖಾಸಗಿ ವಿಡಿಯೋ ಸೆರೆ ಹಿಡಿದು ಹರಿಬಿಟ್ಟ ಪತಿ, ಸೋಶಿಯಲ್ ಮೀಡಿಯಾಗಳಲ್ಲಿ ಈ ಕ್ಲಿಪ್ನಿಂದ ಕೋಲಾಹಲ ಸೃಷ್ಟಿಯಾಗಿದೆ. ಇತ್ತ ಮತ್ತಷ್ಟು ವಿಡಿಯೋ ಹರಿಬಿಡುವುದಾಗಿ ಬೆದರಿಸಿದ್ದಾನೆ. ಏನಿದು ಗಂಡ ಹೆಂಡತಿಯ ಖಾಸಗಿ ವಿಡಿಯೋ ಪ್ರಕರಣ
01:21 PM (IST) Feb 19
ಅಹಮದಾಬಾದ್ನಲ್ಲಿ ನೆದರ್ಲೆಂಡ್ಸ್ ವಿರುದ್ಧ ನಡೆದ ಟಿ20 ವಿಶ್ವಕಪ್ 2026 ಪಂದ್ಯದಲ್ಲಿ ಶಿವಂ ದುಬೆ ಕೇವಲ 31 ಎಸೆತಗಳಲ್ಲಿ 66 ರನ್ ಸಿಡಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಹಾರ್ದಿಕ್ ಪಾಂಡ್ಯ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಬ್ರೇಕ್ ಮಾಡಿದ್ದಾರೆ.
01:12 PM (IST) Feb 19
ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಮದುವೆ ಸುದ್ದಿ ಚರ್ಚೆಯಲ್ಲಿರುವಾಗಲೇ, ರಕ್ಷಿತ್ ಶೆಟ್ಟಿ ಜೊತೆಗಿನ ಅವರ ಹಿಂದಿನ ನಿಶ್ಚಿತಾರ್ಥದ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಮಾತನಾಡಿದ ನಟ ಪ್ರಮೋದ್ ಶೆಟ್ಟಿ ಹೇಳಿದ್ದೇನು?
01:03 PM (IST) Feb 19
ಗ್ರೌಂಡ್ನಲ್ಲಿ ತಮ್ಮ ಆಟದಿಂದ ಅದ್ಭುತಗಳನ್ನು ಸೃಷ್ಟಿಸುವ ಕ್ರಿಕೆಟಿಗರು, ನಿಜ ಜೀವನದಲ್ಲಿಯೂ ಅಷ್ಟೇ ಜಾಲಿಯಾಗಿರುತ್ತಾರೆ. ಮೇಲಿನ ಫೋಟೋದಲ್ಲಿರುವ ಈ ಸ್ಟಾರ್ ಆಟಗಾರ ಕೂಡಾ ಅಂಥವರಲ್ಲೇ ಒಬ್ಬರು. ಅಂದಹಾಗೆ, ಈ ಆಟಗಾರ ಯಾರೆಂದು ಗುರುತಿಸಿದ್ರಾ?
01:00 PM (IST) Feb 19
old man last cigarette viral video: 96 ವರ್ಷದ ವೃದ್ಧರೊಬ್ಬರು, ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲು ತಾನು ಬದುಕುಳಿಯುವುದಿಲ್ಲ ಎಂಬ ಭಯದಿಂದ ಕೊನೆಯ ಸಿಗರೇಟ್ ಸೇದಿದ್ದಾರೆ. ಆಸ್ಪತ್ರೆಯ ಹಾಸಿಗೆಯ ಮೇಲೆ ಅವರು ಧೂಮಪಾನ ಮಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
12:58 PM (IST) Feb 19
ಬ್ಯುಸಿನೆಸ್ ಮಾಡಬೇಕು ಅಂತಾ ಹಲವರಿಗೆ ಆಸೆ ಇರುತ್ತೆ. ಆದರೆ, ನಷ್ಟವಾದರೆ ಏನು ಮಾಡೋದು ಅಂತಾ ಹೆದರಿ ಹಿಂದೆ ಸರಿಯುತ್ತಾರೆ. ಆದರೆ ಈ ಯುವತಿಯ ಕಥೆ ಕೇಳಿದರೆ, ನಿಮಗೂ ವ್ಯಾಪಾರದಲ್ಲಿ ಲಕ್ಷ ಲಕ್ಷ ಗಳಿಸಬಹುದು ಅನ್ನೋ ಧೈರ್ಯ ಬರುತ್ತದೆ. ಹಾಗಾದ್ರೆ ಯಾವುದು ಈ ಬ್ಯುಸಿನೆಸ್ ಅಂತ ನೋಡೋಣ ಬನ್ನಿ
12:42 PM (IST) Feb 19
ಕ್ಯಾಬ್ ಡ್ರೈವರ್ ಡೇಟಿಂಗ್ ಪ್ರೊಫೈಲ್ಗೆ ಸಿಇಒ ಶಾಕ್, ಡ್ರೈವರ್ ಬಳಸುತ್ತಿದ್ದ ಡೇಟಿಂಗ್ ಆ್ಯಪ್ನಲ್ಲಿ ಆತನ ಪ್ರೊಫೈಲ್ಗೆ 23 ಯುವತಿಯರ ಪ್ರೊಫೈಲ್ ಮ್ಯಾಚ್ ಆಗಿದೆ. ಇದರಲ್ಲಿ ಹೈಲಿ ಎಜುಕೇಟೆಡ್ ಮಹಿಳೆಯರು ಇದ್ದರು.
11:56 AM (IST) Feb 19
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪಾಲಿನ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಇದೀಗ ಸೂಪರ್-8 ಹಂತದ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ಇದೀಗ ಭಾರತ ಸೂಪರ್-8 ಹಂತದಲ್ಲಿ ಯಾವಾಗ? ಯಾವ ತಂಡವನ್ನು ಎದುರಿಸಲಿದೆ ಎನ್ನುವುದನ್ನು ನೋಡೋಣ ಬನ್ನಿ
11:23 AM (IST) Feb 19
ಕಾಬೂಲ್: ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭವಾದಾಗಿನಿಂದ ಸ್ತ್ರೀ ಸ್ವಾತಂತ್ರ್ಯ ಅಂದರೇನು ಎಂದು ಕೇಳುವಂತಹ ಪರಿಸ್ಥಿತಿ ಉದ್ಭವಿಸಿದೆ. ಈ ಹುಚ್ಚು ಸರ್ಕಾರದಲ್ಲಿ ತಾಲಿಬಾನಿಗಳು ಇದೀಗ ಹೊಸದೊಂದು ಕಾನೂನು ಜಾರಿಗೆ ತಂದಿದ್ದಾರೆ.
11:18 AM (IST) Feb 19
ಹೈದರಾಬಾದ್ನಲ್ಲಿ, ವಿಚ್ಛೇದನದ ನಂತರ ಮರುಮದುವೆಯಾಗಿ ಗರ್ಭಿಣಿಯಾಗಿದ್ದ ಸಾಫ್ಟ್ವೇರ್ ಇಂಜಿನಿಯರ್ ರನ್ನು ಆಕೆಯ ಮಾಜಿ ಪತಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಮರುಮದುವೆಯಿಂದ ಅಸಮಾಧಾನಗೊಂಡಿದ್ದ ಮಾಜಿ ಪತಿ ಈ ಕೃತ್ಯವೆಸಗಿದ್ದಾನೆ.
11:00 AM (IST) Feb 19
ಬೆಂಗಳೂರು: ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯವಾಗಿ ಗುರುತಿಸಿಕೊಂಡಿರುವ ಮುಸ್ಲಿಂ ಸಮುದಾಯದವರು ದೇಶದ ಎಲ್ಲಾ ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ. ನಾವಿಂದು ಯಾವ ರಾಜ್ಯದಲ್ಲಿ ಅತಿಹೆಚ್ಚು ಸಂಖ್ಯೆಯ ಮುಸ್ಲಿಮರಿದ್ದಾರೆ. ನೆರೆಯ ಕೇರಳದಲ್ಲಿ ಅವರ ಸಂಖ್ಯೆ ಎಷ್ಟು ನೋಡೋಣ ಬನ್ನಿ.
10:44 AM (IST) Feb 19