ನಾಸಿಕ್ ಟಿಸಿಎಸ್ ಬಿಪಿಪೋ ಕಂಪನಿಯಲ್ಲಿ ನಡೆದಿರುವ ಕಾರ್ಪೋರೇಟ್ ಜಿಹಾದ್ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರೀತಿ ನಾಟಕ, ಔಟಿಂಗ್ ನೆಪದಲ್ಲಿ ಅತ್ಯಾ**ರ, ಲವ್ ಜಿಹಾದ್, ಮತಾಂತರ ಸೇರಿದಂತೆ ಹಲವು ಗಂಭೀರ ಆರೋಪಗಳು ಕೇಳಿಬಂದಿದೆ. ಈ ಸಂಬಂಧ ಹೆಚ್ಆರ್, ಟೀಂ ಲೀಡರ್ಸ್ ಸೇರಿದಂತೆ 7 ಮಂದಿ ಅರೆಸ್ಟ್ ಆಗಿದ್ದಾರೆ. ಪ್ರಕರಣದ ತನಿಖೆಯಲ್ಲಿ ಕೆಲ ಸ್ಫೋಟಕ ಮಾಹಿತಿಗಳು ಬಯಲಾಗಿದೆ. ಇದರ ಬೆನ್ನಲ್ಲೇ ಇದೀಗ ಟಿಸಿಎಸ್ ನಾಸಿಕ್, ಸುರಕ್ಷತಾ ದೃಷ್ಟಿಯಿಂದ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನೀಡಿದೆ. ಇತ್ತ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಹಾಗೂ ಡಿಲಿಮಿಟೇಶನ್ ಬಿಲ್ ರಾಜಕೀಯ ಮಾಡಬಾರದು. ಇದು ಐತಿಹಾಸಿಕ ಬಿಲ್ ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಇಂದಿನ ದೇಶ ವಿದೇಶಗಳ ಕ್ಷಣ ಕ್ಷಣದ ಅಪ್ಡೇಟ್ ಇಲ್ಲಿದೆ.
10:45 PM (IST) Apr 17
ಕಾಮಿ ಬಾಬಾ ಅಶೋಕ್ ಖರಾತ್ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ, ಆತನ ಆಪ್ತ ಜಿತೇಂದ್ರ ಶೆಲ್ಕೆ ರಸ್ತೆ ಅಪಘಾತದಲ್ಲಿ ಪತ್ನಿ ಸಮೇತ ಸಾವನ್ನಪ್ಪಿದ್ದಾರೆ. ಛತ್ರಪತಿ ಸಂಭಾಜಿನಗರ-ಶಿರಡಿ ರಸ್ತೆಯಲ್ಲಿ ನಿಂತಿದ್ದ ಕಂಟೇನರ್ಗೆ ಇವರ ಕಾರು ಡಿಕ್ಕಿ ಹೊಡೆದಿದೆ.
10:16 PM (IST) Apr 17
ಹೊಸ ಬೈಕ್ ಖರೀದಿಸುವುದು ಒಂದು ದೊಡ್ಡ ಹೂಡಿಕೆಯಾಗಿದ್ದು, ಕೇವಲ ವಿನ್ಯಾಸ ನೋಡಿ ನಿರ್ಧರಿಸುವುದು ತಪ್ಪು. ಖರೀದಿಯ ಮೊದಲು ಬಜೆಟ್, ಮೈಲೇಜ್, ನಿರ್ವಹಣಾ ವೆಚ್ಚ, ಮತ್ತು ಅಗತ್ಯ ಫೀಚರ್ಗಳನ್ನು ಪರಿಗಣಿಸುವುದು ಬಹಳ ಮುಖ್ಯ.
09:43 PM (IST) Apr 17
ನಟ ವಿಕ್ರಮ್ ಇಂದು ತಮ್ಮ 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರು ಸಿನಿಮಾದಲ್ಲಿ ಪಟ್ಟ ಕಷ್ಟಗಳು, ಅದರಿಂದ ಫೀನಿಕ್ಸ್ ಹಕ್ಕಿಯಂತೆ ಮತ್ತೆ ಮೇಲೆದ್ದು ಬಂದ ಕಥೆಯನ್ನು ಈ ಗ್ಯಾಲರಿಯಲ್ಲಿ ನೋಡೋಣ.
09:27 PM (IST) Apr 17
ಇಂಡಿಗೋ ಸಂಸ್ಥೆಯು ಬೆಂಗಳೂರು ಮೂಲದ ಏರ್-ಟ್ಯಾಕ್ಸಿ ಸ್ಟಾರ್ಟ್ಅಪ್ 'ಸರಳಾ ಏವಿಯೇಷನ್' ನಲ್ಲಿ 10 ಕೋಟಿ ರೂಪಾಯಿ ಹೂಡಿಕೆ ಮಾಡುವ ಮೂಲಕ ಏರ್-ಟ್ಯಾಕ್ಸಿ ಮಾರುಕಟ್ಟೆಗೆ ಪ್ರವೇಶಿಸಿದೆ. 'ಶೂನ್ಯ' ಹೆಸರಿನ eVTOL ವಿಮಾನಗಳನ್ನು ಅಭಿವೃದ್ಧಿ ಮಾಡುತ್ತಿದೆ.
07:42 PM (IST) Apr 17
ನಟಿ ಹನ್ಸಿಕಾ ಮೋಟ್ವಾನಿ, ಪತಿ ಸೊಹೈಲ್ ಖತೂರಿಯಾ ಜೊತೆಗಿನ ವಿಚ್ಛೇದನದ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ಈ ಕಷ್ಟದ ಸಮಯದಲ್ಲಿ ತಮ್ಮ ಕುಟುಂಬ ನೀಡಿದ ಬೆಂಬಲವನ್ನು ನೆನೆದಿದ್ದು, ತಾವೀಗ ಭಾವನಾತ್ಮಕವಾಗಿ ಉತ್ತಮ ಸ್ಥಿತಿಯಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
07:42 PM (IST) Apr 17
07:28 PM (IST) Apr 17
07:02 PM (IST) Apr 17
ಕೇರಳದಲ್ಲಿ ವಿಷು ಹಬ್ಬದ ಶುಭಾಶಯ ಪೋಸ್ಟರ್ನಲ್ಲಿ ಶ್ರೀಕೃಷ್ಣನ ಮುಂದೆ ಚಿಕನ್ ಮಂದಿ ಇರಿಸಿದ ಚಿತ್ರವು ತೀವ್ರ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ರೆಸ್ಟೋರೆಂಟ್ ಮಾಲೀಕನನ್ನು ಬಂಧಿಸಲಾಗಿದೆ.
06:21 PM (IST) Apr 17
'ಅವೆಂಜರ್ಸ್: ಡೂಮ್ಸ್ಡೇ' ಸಿನಿಮಾದ ಮೊದಲ ಟ್ರೇಲರ್ ಅನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ. ವೆರೈಟಿ ವರದಿ ಪ್ರಕಾರ, ಈ ಕಾರ್ಯಕ್ರಮದಲ್ಲಿ ರಾಬರ್ಟ್ ಡೌನಿ ಜೂನಿಯರ್ ಮತ್ತು ಕ್ರಿಸ್ ಇವಾನ್ಸ್ ಕೂಡ ಭಾಗವಹಿಸಿದ್ದರು.
06:03 PM (IST) Apr 17
ಎಲ್ಲರೂ ಕಾತುರದಿಂದ ಕಾಯುತ್ತಿದ್ದ 'ಸ್ಟ್ರೀಟ್ ಫೈಟರ್' ಸಿನಿಮಾದ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಬಾಲಿವುಡ್ ನಟ ವಿದ್ಯುತ್ ಜಮ್ವಾಲ್ ಜೊತೆಗೆ ಹಾಲಿವುಡ್ನ ದೊಡ್ಡ ತಾರೆಯರು ನಟಿಸಿದ್ದಾರೆ.
05:37 PM (IST) Apr 17
ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ನಟ ರಣಬೀರ್ ಕಪೂರ್ ಜೊತೆಗಿನ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಬಾಂಧವ್ಯವನ್ನು ನೆನಪಿಸಿಕೊಂಡಿದ್ದಾರೆ. 2026ರ TIME ಪಟ್ಟಿಯಲ್ಲಿ ರಣಬೀರ್ ಹೆಸರು ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
05:25 PM (IST) Apr 17
05:21 PM (IST) Apr 17
ನಟ ಅಲ್ಲು ಅರ್ಜುನ್ ತಮ್ಮ ವ್ಯಕ್ತಿತ್ವದ ಹಕ್ಕುಗಳನ್ನು (personality rights) ರಕ್ಷಣೆ ಕೋರಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲೂ ವಿಶೇಷವಾಗಿ AI ಬಳಸಿ ದುರ್ಬಳಕೆ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ದೂರಿದ್ದಾರೆ.
05:05 PM (IST) Apr 17
ನಟಿ ಆಲಿಯಾ ಭಟ್ ಅವರ ಹಿರಿಯ ಸೋದರಿ ಶಾಹೀನ್ ಭಟ್, ತಮ್ಮ 37ನೇ ವಯಸ್ಸಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಾಜಿ ಅಂತಾರಾಷ್ಟ್ರೀಯ ಈಜುಪಟು ಹಾಗೂ ಫಿಟ್ನೆಸ್ ಟ್ರೈನರ್ ಆಗಿರುವ ಇಶಾನ್ ಮೆಹ್ರಾ ಅವರೊಂದಿಗೆ ಶಾಹೀನ್ ಎಂಗೇಜ್ ಆಗಿದ್ದಾರೆ.
05:05 PM (IST) Apr 17
ದರ್ಶನ್ ಗಜ ಸಿನಿಮಾದ ನಟಿ ನವ್ಯಾ ನಾಯರ್. 2002ರಲ್ಲಿ ರಂಜಿತ್ ನಿರ್ದೇಶನದ 'ನಂದನಂ' ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ನವ್ಯಾ, ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. 'ಪಾತಿರಾತ್ರಿ' ಅವರ ನಟನೆಯ ಕೊನೆಯ ಚಿತ್ರ.
05:01 PM (IST) Apr 17
ಸದ್ಯಕ್ಕೆ ಚಿತ್ರತಂಡ ಈ 9 ನಿಮಿಷದ ಪ್ರಿವ್ಯೂ ಅನ್ನು ಗೌಪ್ಯವಾಗಿಟ್ಟಿದ್ದರೂ, ಮುಂದಿನ ದಿನಗಳಲ್ಲಿ ಇದರ ಸಣ್ಣ ತುಣುಕನ್ನಾದರೂ ಅಭಿಮಾನಿಗಳಿಗಾಗಿ ರಿಲೀಸ್ ಮಾಡಬಹುದು ಎಂಬ ನಿರೀಕ್ಷೆ ಇದೆ. ಒಟ್ಟಿನಲ್ಲಿ, ಬರುವ ಜೂನ್ 4 ರಂದು 'ಟಾಕ್ಸಿಕ್' ಸಿನಿಮಾ ವಿಶ್ವಾದ್ಯಂತ ಧೂಳೆಬ್ಬಿಸಲು ಸಜ್ಜಾಗಿದೆ. ರಾಕಿಂಗ್ ಸ್ಟಾರ್ ಅಭಿಮಾನಿಗಳೇ, ನೀವು ಈ "ದೊಡ್ಡವರ ಕಾಲ್ಪನಿಕ ಕಥೆ" ನೋಡಲು ರೆಡಿಯಿದ್ದೀರಾ?
04:47 PM (IST) Apr 17
04:38 PM (IST) Apr 17
04:27 PM (IST) Apr 17
'ಸನ್ ಆಫ್ ಸರ್ದಾರ್ 2' ಪ್ರೀಮಿಯರ್ನಲ್ಲಿ ಧನುಷ್ ಮತ್ತು ಮೃಣಾಲ್ ಭೇಟಿಯಾದ ವಿಡಿಯೋ ವೈರಲ್ ಆಗಿತ್ತು. ಅಷ್ಟೇ ಅಲ್ಲ, ಧನುಷ್ ಅವರ 'ತೇರೆ ಇಷ್ಕ್ ಮೇ' ಚಿತ್ರದ ಪಾರ್ಟಿಯಲ್ಲೂ ಮೃಣಾಲ್ ಮಿಂಚಿದ್ದರು. ಇದರಿಂದ 'ಅವರಿಬ್ಬರ ನಡುವೆ ಏನೋ ನಡೆಯುತ್ತಿದೆ" ಎಂದು ಸುದ್ದಿ ಹಬ್ಬಿತ್ತು.
04:08 PM (IST) Apr 17
ರಾಜಸ್ಥಾನ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ಐಪಿಎಲ್ ಪಂದ್ಯದ ವೇಳೆ ಡಗ್ಔಟ್ನಲ್ಲಿ ನಿಯಮಬಾಹಿರವಾಗಿ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ಬಿಸಿಸಿಐ ದಂಡ ವಿಧಿಸಿದೆ. ಅವರ ಗಂಭೀರ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ ನಿಷೇಧದಂತಹ ಕಠಿಣ ಶಿಕ್ಷೆಯ ಬದಲು ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.
03:53 PM (IST) Apr 17
ಸಾರ್ವಜನಿಕ ಉದ್ಯಾನವನದಲ್ಲಿರುವ ದಶಕಗಳ ಹಳೆಯ ದೇವಾಲಯವನ್ನು ಒತ್ತುವರಿ ಎಂದು ಪರಿಗಣಿಸಲಾಗದು ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ದುರುದ್ದೇಶಪೂರಿತ ಅರ್ಜಿ ಸಲ್ಲಿಸಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ಅರ್ಜಿದಾರನಿಗೆ 1 ಲಕ್ಷ ರೂ. ದಂಡ ವಿಧಿಸಿದೆ.
03:20 PM (IST) Apr 17
ಬಾಲಿವುಡ್ ಮತ್ತು ಸ್ಯಾಂಡಲ್ವುಡ್ನಲ್ಲಿ ಹೆಸರು ಮಾಡಿರುವ ಡೈಸಿ ಶಾ ಅವರ ಈ ಹೇಳಿಕೆ ಈಗ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ. "ಬಣ್ಣದ ಲೋಕದ ಮಿನುಗುವಿಕೆಯ ಹಿಂದೆ ಇಂತಹ ಕರಾಳ ಮುಖಗಳೂ ಇರುತ್ತವೆ, ಹುಡುಗಿಯರು ಎಚ್ಚರಿಕೆಯಿಂದ ಇರಬೇಕು" ಎಂಬ ಸಂದೇಶವನ್ನು ಅವರು ತಮ್ಮ ಮಾತಿನ ಮೂಲಕ ರವಾನಿಸಿದ್ದಾರೆ.
03:13 PM (IST) Apr 17
02:04 PM (IST) Apr 17
01:22 PM (IST) Apr 17
01:21 PM (IST) Apr 17
ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನದ ಬಗ್ಗೆ ದೀಪಿಕಾ ಹಾಕಿಕೊಟ್ಟ ಈ ಮಾದರಿಗೆ ಈಗ ಕಂಗನಾ ಅವರ ಸಾಥ್ ಸಿಕ್ಕಿರುವುದು ಸಿನಿಮಾ ಲೋಕದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದಂತಿದೆ! ಬಾಲಿವುಡ್ ಲೋಕದಲ್ಲಿ ನಟಿಯರ ನಡುವೆ ಜಗಳ ಇದೆ ಎಂಬುದನ್ನು ಇದು ಸುಳ್ಳು ಮಾಡಿದ್ಯಾ?
01:15 PM (IST) Apr 17
ಬಂಧನ ವಿರುದ್ಧ ರಕ್ಷಣೆ ಬಯಸಿದ ಕಾಂಗ್ರೆಸ್ ನಾಯಕನ ಪವರ್ ಖೆರಾಗೆ ಸುಪ್ರೀಂ ಕೋರ್ಟ್ನಲ್ಲಿ ಹಿನ್ನಡೆ, ನಿರೀಕ್ಷಾ ಜಾಮೀನು ಕೋರಿದ್ದ ಪವನ್ ಖೆರಾಗೆ ಖಡಕ್ ಸೂಚನೆ ನೀಡಿದೆ. ಇದೀಗ ಖೆರಾ ಸಂಕಷ್ಟ ತೀವ್ರಗೊಂಡಿದೆ.
01:04 PM (IST) Apr 17
ಗೌತಮ್ ಅದಾನಿ ಈಗ ಏಷ್ಯಾದ ನಂಬರ್ 1 ಶ್ರೀಮಂತ. ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ನ ಹೊಸ ಪಟ್ಟಿ ಪ್ರಕಾರ, ಅದಾನಿ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿದ್ದಾರೆ. ಅದಾನಿ ಗ್ರೂಪ್ ಅಧ್ಯಕ್ಷರ ನಿವ್ವಳ ಆಸ್ತಿ 92.6 ಬಿಲಿಯನ್ ಡಾಲರ್ . ಜಾಗತಿಕವಾಗಿ 19ನೇ ಸ್ಥಾನದಲ್ಲಿದ್ದಾರೆ. ಅಂಬಾನಿ 20ನೇ ಸ್ಥಾನ..
01:02 PM (IST) Apr 17
12:51 PM (IST) Apr 17
ಕೇರಳದ ಸಾಹಿತ್ಯ ಉತ್ಸವದಲ್ಲಿ ನಟ ಪ್ರಕಾಶ್ ರಾಜ್, ರಾಮಾಯಣದ ಕಥೆಯನ್ನು ತಿರುಚಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶ್ರೀರಾಮ ಮತ್ತು ರಾವಣರ ಕುರಿತು ತಮ್ಮದೇ ಆದ ಕಥೆ ಕಟ್ಟಿ, ಅದನ್ನು ಹಿಂದಿ ಹೇರಿಕೆ ಮತ್ತು ಜಿಎಸ್ಟಿಗೆ ಹೋಲಿಸಿದ್ದು, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
12:30 PM (IST) Apr 17
ಫೋನ್ ಸ್ವಿಚ್ ಆಫ್ ಆಗಿ ನೆರವೂ ಸಿಗಲಿಲ್ಲ, ಇಬ್ಬರು ಕಾನೂನು ವಿದ್ಯಾರ್ಥಿಗಳ ದುರಂತ ಸಾವು, ಒಬ್ಬನ ಬಳಿ ಫೋನ್ ಇರಲಿಲ್ಲ, ಮತ್ತೊಬ್ಬನ ಫೋನ್ ಸ್ವಿಚ್ ಆಫ್. ಇಷ್ಟೇ ನೆರವಿಗೆ ಕರೆ ಮಾಡಲು ಸಾಧ್ಯವಾಗದೆ ಸಾವು ಕಂಡಿದ್ದಾರೆ.
12:25 PM (IST) Apr 17
12:22 PM (IST) Apr 17
"ನಾನು ಬೇರೊಂದು ಕಥೆಯ ಕೆಲಸದಲ್ಲಿ ಬ್ಯುಸಿಯಾಗಿದ್ದಾಗ ಈ ಚಿತ್ರದ ತಯಾರಕರಿಂದ ಕರೆ ಬಂತು. ಆ ಎರಡನೇ ಕರೆ ನನಗೆ ಬಹಳ ವಿಶೇಷವಾಗಿ ಕಂಡಿತು. ಯಾವುದೋ ಒಂದು ಹಠಾತ್ ಅಂತಃಪ್ರೇರಣೆ ಈ ಚಿತ್ರವನ್ನು ಮಾಡಲು ನನ್ನನ್ನು ಪ್ರೇರೇಪಿಸಿತು" ಎಂದಿದ್ದಾರೆ. ಆದರೆ, ಎಆರ್ ರೆಹಮಾನ್ ಹೊರಬಂದಿದ್ದು ಯಾಕೆ?
11:55 AM (IST) Apr 17
ಮುಂಬೈನ ಜುಹುವಿನಲ್ಲಿರುವ ರೋಹಿತ್ ಶೆಟ್ಟಿ ನಿವಾಸದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಇಡೀ ಚಿತ್ರರಂಗ ಬೆಚ್ಚಿಬೀಳುವಂತೆ ಮಾಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 'ಬ್ಲಾಕ್ ಬಸ್ಟರ್' ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಯನ್ನು ಸೆರೆಹಿಡಿದಿದ್ದಾರೆ!
11:33 AM (IST) Apr 17
ಟಿಸಿಎಸ್ನ ನಾಸಿಕ್ ಶಾಖೆಯಲ್ಲಿ ನಡೆದಿದೆ ಎನ್ನಲಾದ ಒತ್ತಾಯಪೂರ್ವಕ ಮತಾಂತರ ಮತ್ತು ಕಿರುಕುಳ ಪ್ರಕರಣದ ಪ್ರಮುಖ ಆರೋಪಿ, ಹೆಚ್ಆರ್ ನಿದಾ ಖಾನ್ ತಾನು ಗರ್ಭಿಣಿ ಎಂದು ಹೇಳಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾೆಳೆ. ಈ ಪ್ರಕರಣದಲ್ಲಿ ಈಗಾಗಲೇ 7 ಮಂದಿ ಬಂಧಿತರಾಗಿದ್ದಾರೆ.
11:19 AM (IST) Apr 17
ಬೆಂಗಳೂರು: ಅಕ್ಷಯ ತೃತೀಯಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಚಿನ್ನ ಖರೀದಿಸುವವರ ಪಾಲಿಗೆ ಶುಭ ಶುಕ್ರವಾರವಾಗಿ ಪರಿಣಮಿಸಿದೆ. ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಯಾಗಿದೆ. ಏಪ್ರಿಲ್ 17ರಂದು ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ.
10:32 AM (IST) Apr 17
ಮೇ.1ರಿಂದ ಯುಪಿಐ ಹೊಸ ರೂಲ್ಸ್, 10000 ಹಣ ವರ್ಗಾವಣೆಗೆ 1 ಗಂಟೆ ಕಾಯಬೇಕು, ಹಣ ವರ್ಗಾವಣೆಯಲ್ಲಿನ ವಂಚನೆ ತಡೆಯಲು ಆರ್ಬಿಐ ಹೊಸ ನಿಯಮ ಜಾರಿಗೆ ತರುತ್ತಿದೆ. ಈ ನಿಯಮದ ಪ್ರಕಾರ ಹಣ ವರ್ಗಾವಣೆ ನಿಯದಲ್ಲಿನ ಬದಲಾವಣೆ ಏನು?
10:20 AM (IST) Apr 17
boy sues parents over name: ಅಮೆರಿಕಾದ ಯುವಕನೊಬ್ಬ, ತನಗೆ ಪೋಷಕರು 'ಗೇಲಾರ್ಡ್' ಎಂದು ಇಟ್ಟ ಕೆಟ್ಟ ಹೆಸರಿಟ್ಟಿದ್ದರಿಂದ ತೀವ್ರ ಅವಮಾನ ಹಾಗೂ ಭಾವನಾತ್ಮಕ ಯಾತನೆಯಾಗಿದೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದು, 150 ಸಾವಿರ ಡಾಲರ್ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾನೆ.
09:12 AM (IST) Apr 17
08:37 AM (IST) Apr 17
ನಿನ್ನ ಹೆಂಡತಿಯನ್ನು ನಮ್ಮ ಬಳಿ ಕಳಿಸು, ಟಿಸಿಎಸ್ ಜಿಹಾದ್ ಸ್ಫೋಟಕ ಮಾಹಿತಿ ಬಯಲು, ಟಿಸಿಎಸ್ ಕಂಪನಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಮಾತ್ರವಲ್ಲ, ಪುರುಷರ ಮೇಲೂ ಕಾರ್ಪೋರೇಟ್ ಜಿಹಾದ್ ನಡೆಸಿರುವುದು ಬಯಲಾಗಿದೆ.