Published : Jun 15, 2026, 05:10 AM ISTUpdated : Jun 15, 2026, 09:20 PM IST

India Latest News Live ವಾಹನಗಳಲ್ಲಿ ಶೇ.100ರಷ್ಟು ಎಥೆನಾಲ್‌ ಬಳಸಲು ಅನುಮತಿ: ಚೆಂದದ ಪೆನ್​ ಸಿಕ್ಕಿತೆಂದು ಎತ್ತಿಕೊಂಡ್ರೆ ಹುಷಾರ್​; ಬ್ಲಾಸ್ಟ್​ ಆಗಿ ನಿಮ್ಮ ಕಥೆ ಫಿನಿಷ್- ಏನಿದು​ ವೈರಲ್​ ಸುದ್ದಿ

ಸಾರಾಂಶ

ನಾಗ್ಪುರ: ವಾಹನಗಳಲ್ಲಿ ಶೇ.100ರಷ್ಟು ಎಥೆನಾಲ್‌ ಬಳಸಲು ಅನುಮತಿ ನೀಡುವ ಕಡತಕ್ಕೆ ಸಹಿ ಹಾಕಿದ್ದಾಗಿ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಶನಿವಾರ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಹಿಂದೆ ನಾನು ಎಥೆನಾಲ್‌ ಬಗ್ಗೆ ಮಾತನಾಡುವಾಗ ಜನ ನಗುತ್ತಿದ್ದರು. ಕೆಲವು ಸ್ನೇಹಿತರು ಟೀಕಿಸಿದ್ದರು. ಆದರೆ ಈಗ ಎಥೆನಾಲ್ ಪೆಟ್ರೋಲ್‌ಗೆ ಪರ್ಯಾಯವಾಗಿ ಹೊರಹೊಮ್ಮಿದೆ. ನಿನ್ನೆ ರಾತ್ರಿ 8 ಗಂಟೆಗೆ, ನಾನು ಶೇ.100 ಎಥೆನಾಲ್ ಬಳಕೆಯನ್ನು ಕಾನೂನುಬದ್ಧವಾಗಿ ಅಧಿಕೃತಗೊಳಿಸುವ ಕಡತಕ್ಕೆ ಸಹಿ ಹಾಕಿದೆ’ ಎಂದರು. ಮುಂದಿನ 1.5 ತಿಂಗಳೊಳಗೆ ಆಟೋಮೊಬೈಲ್ ಕಂಪನಿಗಳು ಎಥೆನಾಲ್‌ ಚಾಲಿತ ವಾಹನಗಳನ್ನು ಬಿಡುಗಡೆ ಮಾಡಲಿವೆ ಎಂದೂ ಹೇಳಿದರು.

ಹೊಸ ನಿಯಮವು 1989ರ ಕೇಂದ್ರ ಮೋಟರ್‌ ವಾಹನಗಳ ನಿಯಮಕ್ಕೆ ತಿದ್ದುಪಡಿ ತಂದು, ವಾಹನಗಳಲ್ಲಿ ಇ85 (ಪೆಟ್ರೋಲ್ ಜತೆ ಶೇ.85 ಎಥೆನಾಲ್ ಮಿಶ್ರಣ), ಇ100 (ಶೇ.1000ರಷ್ಟು ಎಥೆನಾಲ್‌) ಹಾಗೂ ಬಿ100 ಬಯೋಡೀಸೆಲ್ ಮತ್ತು ಹೈಡ್ರೋಜನ್-ಸಿಎನ್‌ಜಿ ಮಿಶ್ರಿತ ಇಂಧನ ಬಳಸಲು ಅನುವು ಮಾಡಿಕೊಡುತ್ತದೆ.

09:20 PM (IST) Jun 15

ಚೆಂದದ ಪೆನ್​ ಸಿಕ್ಕಿತೆಂದು ಎತ್ತಿಕೊಂಡ್ರೆ ಹುಷಾರ್​; ಬ್ಲಾಸ್ಟ್​ ಆಗಿ ನಿಮ್ಮ ಕಥೆ ಫಿನಿಷ್- ಏನಿದು​ ವೈರಲ್​ ಸುದ್ದಿ

ಸೋಷಿಯಲ್ ಮೀಡಿಯಾದಲ್ಲಿ ಗ್ರೆನೇಡ್ ವಿನ್ಯಾಸದ ಪೆನ್ನುಗಳು ಗುಜರಾತ್‌ನಲ್ಲಿ ಸ್ಫೋಟಗೊಳ್ಳುತ್ತಿವೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಈ ವೈರಲ್ ಚಿತ್ರವು ಅಮೆರಿಕದ ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಮಾರಾಟವಾಗುವ ಸಾಮಾನ್ಯ ಪೆನ್ನಿನದ್ದಾಗಿದ್ದು, ಪೆನ್ ಬಾಂಬ್ ಸ್ಫೋಟದ ಸುದ್ದಿ ಸಂಪೂರ್ಣ ಸುಳ್ಳು ಎಂದು ತನಿಖೆಯಿಂದ ದೃಢಪಟ್ಟಿದೆ.
Read Full Story

08:05 PM (IST) Jun 15

Rashmika Mandanna - 'ನನ್ನ ಜೀವನದ ಬೆಸ್ಟ್ ನಿರ್ಧಾರ ಇದೇ' - ರಶ್ಮಿಕಾ ಬಹಿರಂಗಪಡಿಸಿದ ಸತ್ಯ ಕೇಳಿ ಫ್ಯಾನ್ಸ್ ಶಾಕ್!

Instagram Q&A ವೇಳೆ ವಿಜಯ್ ದೇವರಕೊಂಡ ಬಗ್ಗೆ ಮನದಾಳದ ಮಾತು ಹಂಚಿಕೊಂಡ ರಶ್ಮಿಕಾ ಮಂದಣ್ಣ, ತಮ್ಮ ಜೀವನದ ಅತ್ಯಂತ ಸಂತೋಷದ ನಿರ್ಧಾರ ಯಾವುದು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅವರ ಉತ್ತರ ಈಗ ವೈರಲ್ ಆಗಿದೆ.

Read Full Story

07:40 PM (IST) Jun 15

ಉಚಿತ ಪಾಸ್‌ ವಿತರಣೆ ವೇಳೆ ಅವಘಡ - ಸಚಿವೆ ಮೇಲೆ ಬಿಸಿಬಿಸಿ ಪಾಯಸ ಚೆಲ್ಲಿದ ಕಾರ್ಯಕರ್ತರು

ಕೇರಳದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ 'ಪ್ರಿಯದರ್ಶಿನಿ' ಯೋಜನೆ ಉದ್ಘಾಟನೆ ವೇಳೆ ಅವಘಡ ಸಂಭವಿಸಿದೆ. ಸಚಿವೆ ಬಿಂದು ಕೃಷ್ಣಾ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಂಚುತ್ತಿದ್ದ ಬಿಸಿ ಪಾಯಸ ಆಕಸ್ಮಿಕವಾಗಿ ಚೆಲ್ಲಿದೆ. ಈ ಘಟನೆ ಜನದಟ್ಟಣೆಯಿಂದ ಕೂಡಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿದೆ.
Read Full Story

07:36 PM (IST) Jun 15

Indore Tragedy - ಮಗನ ಶವ ನೋಡಿ ಅಲ್ಲೇ ಪ್ರಾಣಬಿಟ್ಟ ತಾಯಿ - ಒಂದೇ ಮನೆಯಿಂದ ಹೊರಟಿತು ಎರಡು ಹೆಣ!

Human Interest Story: ಮಧ್ಯಪ್ರದೇಶದ ಇಂದೋರ್‌ನಲ್ಲಿ 55 ವರ್ಷದ ಮಗ ಸಾವನ್ನಪ್ಪಿದ ಕೆಲವೇ ನಿಮಿಷಗಳಲ್ಲಿ 75 ವರ್ಷದ ತಾಯಿಯೂ ಆಘಾತದಿಂದ ಪ್ರಾಣಬಿಟ್ಟ ಮನಕಲಕುವ ಘಟನೆ ನಡೆದಿದೆ. ಒಂದೇ ಮನೆಯಿಂದ.. 

Read Full Story

07:20 PM (IST) Jun 15

Dishani Engagement - ಮಿಥುನ್ ಚಕ್ರವರ್ತಿ ಮಗಳಿಗೆ ಎಂಗೇಜ್‌ಮೆಂಟ್! ಯಾರು ಈ ಹುಡುಗ? ಮದುವೆ ಯಾವಾಗ?

Bollywood: ಹಿರಿಯ ನಟ ಮಿಥುನ್ ಚಕ್ರವರ್ತಿ ಅವರ ಪುತ್ರಿ ದಿಶಾನಿ ಚಕ್ರವರ್ತಿ ಅವರ ನಿಶ್ಚಿತಾರ್ಥ ನಡೆದಿದೆ. ತಮ್ಮ ಬಹುಕಾಲದ ಗೆಳೆಯನ ಜೊತೆ ಅವರು ಎಂಗೇಜ್ ಆಗಿದ್ದು, ಮದುವೆ ದಿನಾಂಕವನ್ನೂ ಘೋಷಿಸಿದ್ದಾರೆ. ಯಾರು ಈ ಹುಡುಗ? ಇಲ್ಲಿದೆ ವಿವರ.

Read Full Story

06:54 PM (IST) Jun 15

Sanchita Ugale - ಯಾರು ಈ ಸಂಚಿತಾ? 22ನೇ ವಯಸ್ಸಿಗೆ ನಿಧನರಾದ ನಟಿಯ ಬಗ್ಗೆ ಗೊತ್ತಿರದ 5 ಸಂಗತಿಗಳು!

Who Is Sanchita Ugale? ಟಿವಿ ಮತ್ತು ಸಿನಿಮಾಗಳಲ್ಲಿ ಹೇಗೆ ಗುರುತಿಸಿಕೊಂಡಿದ್ದರು? ಅವರ ಬದುಕಿನ ಬಗ್ಗೆ ಅಭಿಮಾನಿಗಳು ತಿಳಿಯಬಯಸುವ 5 ಪ್ರಮುಖ ಸಂಗತಿಗಳೇನು? ಅವರ ಕುಟುಂಬದ ಹಿನ್ನೆಲೆ ಏನು? ಇಲ್ಲಿದೆ ಪೂರ್ತಿ ವಿವರ.

Read Full Story

06:25 PM (IST) Jun 15

Lagaan ಸೆಟ್‌ನಲ್ಲೇ ವಿದೇಶಿ ಹುಡುಗಿ ಜೊತೆ ಲವ್ - ಆದ್ರೆ ಇದೇ ಸಿನಿಮಾ ನನ್ನ ಕೆರಿಯರ್ ಹಾಳು ಮಾಡ್ತು ಎಂದ ನಟ!

Lagaan ಸಿನಿಮಾದ ಬಾಘಾ ಪಾತ್ರಧಾರಿ ಅಮೀನ್ ಹಾಜಿ, ಈ ಸಿನಿಮಾ ತಮ್ಮ ವೃತ್ತಿಜೀವನವನ್ನು ಹಾಳುಮಾಡಿತು ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಅವರ ಕರಿಯರ್, ಪ್ರೇಮಕಥೆ ಹಾಗೂ ಕುಟುಂಬದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story

06:11 PM (IST) Jun 15

Magic Mushroom - ಮದ್ಯ-ಮ್ಯಾಜಿಕ್ ಮಶ್ರೂಮ್ ಸೇವಿಸಿ ಅಮರತ್ವ ಹುಡುಕಿದ ವ್ಯಕ್ತಿ, ನಂತರ ನಡೆದಿದ್ದು ಭಯಾನಕ!

China News: ಚೀನಾದಲ್ಲಿ ಮ್ಯಾಜಿಕ್ ಮಶ್ರೂಮ್ ಹಾಗೂ ಮದ್ಯ ಸೇವಿಸಿ ಅಮರನಾಗಲು ಹೊರಟ ವ್ಯಕ್ತಿಯೊಬ್ಬ 27ನೇ ಮಹಡಿಯ ಫ್ಲ್ಯಾಟ್‌ನಿಂದ ಹೊರಗೆ ಇಳಿದಿದ್ದಾನೆ. ಪೈಪ್ ಮೂಲಕ ಕೆಳಗೆ ಜಾರುತ್ತಿದ್ದಾಗ..

Read Full Story

06:10 PM (IST) Jun 15

ಸಾವಿಗೂ ಮುನ್ನ ಮಾಡಿರೋ ಆ ವಿಡಿಯೋ ಸಖತ್ ವೈರಲ್! ನಟಿ ಸಂಚಿತಾ ಉಗಾಳೆ ಸಾವಿನ ರಹಸ್ಯ ಬಯಲಾಗುತ್ತಾ?

ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಲಭ್ಯವಾಗಿಲ್ಲ. ಮೇಲ್ನೋಟಕ್ಕೆ ಇದು ಆತ್ಮಹ*ತ್ಯೆ ಎಂದು ಕಂಡುಬಂದರೂ, ಪೋಸ್ಟ್ ಮಾರ್ಟಮ್ ವರದಿ ಬಂದ ನಂತರವೇ ಸಾವಿನ ಹಿಂದಿನ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾವಿಗೂ ಮುನ್ನ ಮಾಡಿರುವ ವಿಡಿಯೋದಲ್ಲಿ ಏನಿದೆ ಗೊತ್ತಾ?

Read Full Story

06:08 PM (IST) Jun 15

ಆಘಾತಕಾರಿ ಬೆಳವಣಿಗೆ, ಪಂಜಾಬ್ ಸಿಎಂ ಮಾನ್ ಗುರು ದ್ರೋಹಿ, ಸಿಖ್ ವಿರೋಧಿ, ಧಾರ್ಮಿಕ ಪೀಠ ಘೋಷಣೆ

ಪಂಜಾಬ್ ಚುನಾವಣೆ ಸಮೀಪಿಸುತ್ತಿದ್ದಂತೆ ಆಮ್ ಆದ್ಮಿ ಪಾರ್ಟಿಗೆ ಭಾರಿ ಹಿನ್ನಡೆಯಾಗಿದೆ. ಭಗವಂತ್ ಮಾನ್ ಸಿಖ್ ಪಂತದ ವಿರೋಧಿ, ಗುರು ದ್ರೋಹಿ ಎಂದು ಸಿಖ್ ಶ್ರೇಷ್ಠ ಧಾರ್ಮಿಕ ಪೀಠ ಘೋಷಿಸಿದೆ. ಪಂಜಾಬ್‌ನಲ್ಲಿ ಅಲ್ಲೋಕಲ್ಲೋಲ ಶುರುವಾಗಿದೆ.

Read Full Story

05:49 PM (IST) Jun 15

Ranveer Singh - ಆ ವಿವಾದದ ಮಧ್ಯೆ ಕೋಟಿ ಕೋಟಿ ಬೆಲೆಯ ಹೊಸ ಫೆರಾರಿ ಖರೀದಿಸಿದ ರಣವೀರ್ - ಬೆಲೆ ಎಷ್ಟು?

Ranveer Singh Ferrari: 'ಡಾನ್ 3' ಚಿತ್ರದ ವಿವಾದದಿಂದಾಗಿ ಸುದ್ದಿಯಾಗಿದ್ದ ರಣವೀರ್ ಸಿಂಗ್, ಇದೀಗ ಹೊಚ್ಚ ಹೊಸ ಐಷಾರಾಮಿ ಕಾರು ಖರೀದಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಕಾರಿನ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ!

Read Full Story

05:14 PM (IST) Jun 15

First A-Rated Film - 16ರ ನಟಿಯ ಆ ಚಿತ್ರಕ್ಕೆ 'A' ಸರ್ಟಿಫಿಕೇಟ್ ಕೊಟ್ಟಿದ್ದೇಕೆ? ದೇಶಾದ್ಯಂತ ವಿವಾದ ಆಗಿದ್ದೇಕೆ?

Madhubala: ಭಾರತದ ಮೊದಲ A ರೇಟೆಡ್ ಸಿನಿಮಾ 'ಹಂಸತೇ ಆಂಸೂ' ಬಗ್ಗೆ ಸಂಪೂರ್ಣ ಮಾಹಿತಿ. ಕೇವಲ 16 ವರ್ಷದ ಮಧುಬಾಲಾ ನಟಿಸಿದ್ದ ಈ ಚಿತ್ರಕ್ಕೆ ಯಾಕೆ A ಸರ್ಟಿಫಿಕೇಟ್ ಸಿಕ್ಕಿತ್ತು, ಅದರ ಕಥೆ ಮತ್ತು ವಿವಾದಗಳ ವಿವರ ಇಲ್ಲಿದೆ.

Read Full Story

04:51 PM (IST) Jun 15

Ronaldo Marriage - ಕೊನೆಗೂ ಗೆಳತಿ ಜೊತೆ ದಾಂಪತ್ಯಕ್ಕೆ ಕಾಲಿಡ್ತಾರಾ ರೊನಾಲ್ಡೊ? ಏನಿದು ಹೊಸ ಸುದ್ದಿ?

Cristiano Ronaldo: ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಜಾರ್ಜಿನಾ ರೊಡ್ರಿಗಸ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಅವರ ಪ್ರೇಮಕಥೆ ಮತ್ತು ಐಷಾರಾಮಿ ಜೀವನದ ಮಾಹಿತಿ ಇಲ್ಲಿದೆ.

Read Full Story

04:47 PM (IST) Jun 15

CM Vijay-Sangeetha Divorce Case - ಸಿಎಂ ವಿಜಯ್ ಮೇಲೆ ಪತ್ನಿ ಸಂಗೀತಾ ಮಾಡಿರೋ ಗಂಭೀರ ಆರೋಪಗಳಿವು, ನಿಜವಾಗಿಯೂ ಶಾಕಿಂಗ್‌!

ತಮ್ಮ 27 ವರ್ಷಗಳ ಸುದೀರ್ಘ ವೈವಾಹಿಕ ಜೀವನವನ್ನು ಕೊನೆಗಾಣಿಸಲು ನಿರ್ಧರಿಸಿರುವ ಸಂಗೀತಾ ಸ್ವರ್ಣಲಿಂಗಂ, ಪತಿ ಸಿಎಂ ವಿಜಯ್ ವಿರುದ್ಧ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರು ವಿಜಯ್ ವಿರುದ್ಧ ಮಾಡಿರೋ ಗಂಭೀರ ಆರೋಪಗಳೇನು ಗೊತ್ತಾ? ಈ ಸ್ಟೋರಿ ನೋಡಿ..

Read Full Story

04:33 PM (IST) Jun 15

ಎಥೆನಾಲ್‌ನಲ್ಲಿ ಚಲಿಸುವ E85 ಮಾರುತಿ ಸುಜುಕಿ ವ್ಯಾಗನ್ಆರ್ ಕಾರು ಲಾಂಚ್, ಕಾರಿನ ಬೆಲೆ, ಮೈಲೇಜ್ ಎಷ್ಟು?

ಇ20 ಯಿಂದ ಇ100ರ ವರೆಗೆ ಎಥೆನಾಲ್ ಮೂಲಕ ಚಲಿಸುವ ಮಾರುತಿ ಸುಜುಕಿ ವ್ಯಾಗನ್ಆರ್ ಕಾರು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಕಾರಿನ ಬೆಲೆ, ಮೈಲೇಜ್ , ಎಂಜಿನ್ ಸೇರಿದಂತೆ ಇತರ ಮಾಹಿತಿಗಳು ಇಲ್ಲಿದೆ. ಪೆಟ್ರೋಲ್ ಕಾರಿಗಿಂತ ಕಡಿಮೆ ಇದೆಯಾ?

Read Full Story

03:37 PM (IST) Jun 15

ಸಿಎಂ ವಿಜಯ್-ಸಂಗೀತಾ ಡಿವೋರ್ಸ್ ಕೇಸ್ ವಿಚಾರಣೆ ಮುಂದೂಡಿಕೆ; ಇಂದು ಆಗಲಿಲ್ಲ ಏಕೆ?

ಇಂದು, ಅಂದರೆ ಜೂನ್ 15, ಸೋಮವಾರದಂದು ಚೆಂಗಲ್ಪಟ್ಟು ಮಹಿಳಾ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆದಿದ್ದು, ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿದೆ. ಏಕೆ ಇಂದು ಇತ್ಯರ್ಥ ಆಗಲಿಲ್ಲ? ನೋಡಿ ಈ ಸ್ಟೋರಿ..

Read Full Story

01:46 PM (IST) Jun 15

ಫೇಲ್ ಆದ್ರೂ ವಿಶ್ವದಾಖಲೆ ಬರೆದ ಶಫಾಲಿ ವರ್ಮಾ! ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟರ್

ಬರ್ಮಿಂಗ್‌ಹ್ಯಾಮ್: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡವು ಬದ್ದ ಎದುರಾಳಿ ಪಾಕಿಸ್ತಾನ ಎದುರು ಶುಭಾರಂಭ ಮಾಡಿದೆ. ಇನ್ನು ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರೂ, ಭಾರತದ ಶಫಾಲಿ ವರ್ಮಾ ವಿಶ್ವದಾಖಲೆ ನಿರ್ಮಿಸಿ ಗಮನ ಸೆಳೆದಿದ್ದಾರೆ.

 

Read Full Story

01:33 PM (IST) Jun 15

ಶಾಕಿಂಗ್ ಸ್ಟೋರಿ.. 500 ರೂ.ಗಾಗಿ ಮದುವೆ ಮನೆಗಳಲ್ಲಿ 8 ಗಂಟೆ ನಿಲ್ಲುತ್ತಿದ್ದ ಈ ನಟಿ ಸಿನಿಮಾಗೆ ಬಂದಿದ್ದು ಹೇಗೆ?

"ನಾನು ಉನ್ನತ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗಬೇಕೆಂದು ಪ್ಲ್ಯಾನ್ ಮಾಡಿದ್ದೆ. ಆದರೆ ನನ್ನ ಕುಟುಂಬದ ಆರ್ಥಿಕ ಪರಿಸ್ಥಿತಿ ಅದಕ್ಕೆ ಅವಕಾಶ ನೀಡಲಿಲ್ಲ. ಆ ಬಳಿಕ 500 ರೂ.ಗೆ ಮದುವೆಮನೆಗಳಲ್ಲಿ ಕೆಲಸ ಮಾಡಿದ್ದೇನೆ. 

Read Full Story

01:24 PM (IST) Jun 15

ಇರಾನ್-ಅಮೆರಿಕ ಒಪ್ಪಂದ - ಭಾರತಕ್ಕೆ ತೆರೆದ ಅದೃಷ್ಟದ ಬಾಗಿಲು, ಇದೇ ನೋಡಿ ಜಾಕ್‌ಪಾಟ್

ಇರಾನ್ ಮತ್ತು ಅಮೆರಿಕ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿದ್ದು, ಇದರಿಂದ ಹರ್ಮೋಜ್ ಜಲಸಂಧಿ ತೆರೆಯಲಿದೆ. ಈ ಬೆಳವಣಿಗೆಯು ಭಾರತಕ್ಕೆ ಅಗ್ಗದ ದರದಲ್ಲಿ ಇರಾನ್‌ನಿಂದ ತೈಲ ಖರೀದಿಸಲು ಮತ್ತು ಚಾಬಹಾರ್ ಬಂದರು ಯೋಜನೆಯನ್ನು ಪುನರಾರಂಭಿಸಲು ಸಹಾಯ ಮಾಡಲಿದೆ, ಇದು ದೇಶದ ಆರ್ಥಿಕತೆಗೆ ದೊಡ್ಡ ಲಾಭವನ್ನು ತರಲಿದೆ.
Read Full Story

01:02 PM (IST) Jun 15

ಐಶ್ವರ್ಯಾ ರೈಗೆ 'ಆಂಟಿ' ಎಂದು ಕರೆದಿದ್ದ ಸೋನಂ ಕಪೂರ್! ಬಿರುಗಾಳಿ ಎಬ್ಬಿಸಿದ್ದ ಆ ವಿವಾದ ಅಂತ್ಯವಾಗಿದ್ದು ಹೇಗೆ?

ಐಶ್ವರ್ಯಾ ಅವರನ್ನು 'ಆಂಟಿ' ಎಂದು ಕರೆದಿದ್ದಕ್ಕೆ ಸೋನಂ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಐಶ್ವರ್ಯಾ ಅಭಿಮಾನಿಗಳು ಸೋನಂ ಅವರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಇದಕ್ಕೆ ಸೋನಂ ಕೊಟ್ಟ ಕಾರಣ ಮಾತ್ರ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಏನದು ಈ ಬಿರುಗಾಳಿ ಸುದ್ದಿ?

Read Full Story

12:43 PM (IST) Jun 15

IPL 2026 ಬಳಿಕ 15 ವರ್ಷದ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಫೇಲ್; 3 ಪಂದ್ಯಗಳಿಂದ ಗಳಿಸಿದ್ದು ಎಷ್ಟು ರನ್?

ಶ್ರೀಲಂಕಾ 'ಎ' ವಿರುದ್ಧದ ತ್ರಿಕೋನ ಸರಣಿಯ ಪಂದ್ಯದಲ್ಲಿ ಭಾರತ 'ಎ' ತಂಡವು ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. 2026ರ ಐಪಿಎಲ್ ಹೀರೋ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದು, ಅವರ ಕಳಪೆ ಫಾರ್ಮ್ ತಂಡದ ತಲೆನೋವಿಗೆ ಕಾರಣವಾಗಿದೆ.
Read Full Story

12:22 PM (IST) Jun 15

ಮೊಬೈಲ್ ನಂಬರ್ 10 ಅಂಕಿಗಳಲ್ಲೇ ಯಾಕಿರುತ್ತೆ? 8 ಅಥವಾ 9 ಯಾಕಿಲ್ಲ? ಇಲ್ಲಿದೆ ನೋಡಿ ಸತ್ಯ

ನಾವು ದಿನನಿತ್ಯ ಬಳಸುವ ಫೋನ್‌ಗೆ ಒಂದು ನಂಬರ್ ಇರುತ್ತೆ ಅಲ್ವಾ? ಆ ಫೋನ್ ನಂಬರ್ ಯಾಕೆ ಬರೀ 10 ಅಂಕಿಗಳಲ್ಲೇ ಇರುತ್ತೆ? ಈ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದೆ ಏನಾದರೂ ಕಾರಣ ಇದೆಯಾ?
Read Full Story

12:05 PM (IST) Jun 15

ಇನ್ನೂ ಸಿಂಗಲ್ ಆಗಿರೋ ನಟ ಡಾರ್ಲಿಂಗ್ ಪ್ರಭಾಸ್ ಅದೆಷ್ಟು ಪ್ರಪೋಸಲ್‌ ಬಂದಿವೆ ಗೊತ್ತಾ? ಗೊತ್ತಾದ್ರೆ ಶಾಕ್ ಆಗ್ತೀರಾ!

ಟಾಲಿವುಡ್‌ನಿಂದ ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆದು ನಿಂತಿರುವ 'ರೆಬೆಲ್ ಸ್ಟಾರ್' ಪ್ರಭಾಸ್ (Prabhas) ವಿಷಯಕ್ಕೆ ಬಂದರೆ, ಅಭಿಮಾನಿಗಳಿಗೆ ಅವರ ಸಿನಿಮಾಗಿಂತ ಹೆಚ್ಚಾಗಿ 'ಮದುವೆ' ಬಗ್ಗೆಯೇ ಚಿಂತೆ. ನಟನಿಗೆ ಅದೆಷ್ಟು ಪ್ರಪೋಸಲ್ಸ್‌ ಬಂದಿವೆಯಂತೆ ಗೊತ್ತಾ?

Read Full Story

12:03 PM (IST) Jun 15

Monsoon Pause - ಮಾಯವಾದ ಮುಂಗಾರು ಮಾರುತ, ಉಪಗ್ರಹ ಚಿತ್ರದಲ್ಲಿ ದಾಖಲಾಯ್ತು ಬೆಚ್ಚಿಬೀಳಿಸುವ ದೃಶ್ಯ!

ದೇಶದಲ್ಲಿ ನೈಋತ್ಯ ಮುಂಗಾರು ದಿಢೀರ್ ದುರ್ಬಲಗೊಂಡಿದ್ದು, ಶೇ. 64ರಷ್ಟು ಮಳೆ ಕೊರತೆ ಉಂಟಾಗಿದೆ. ವಾತಾವರಣದಲ್ಲಿನ ಮಾರುತಗಳ ಜಿದ್ದಾಜಿದ್ದಿಯೇ ಇದಕ್ಕೆ ಕಾರಣವೆಂದು ತಜ್ಞರು ಹೇಳಿದ್ದು, ಶೀಘ್ರದಲ್ಲೇ ಮುಂಗಾರು ಮರುಸಂಘಟನೆಯಾಗುವ ನಿರೀಕ್ಷೆಯಿದೆ.
Read Full Story

11:25 AM (IST) Jun 15

ಯುದ್ಧಕ್ಕೆ ಬಿತ್ತು ಫುಲ್‌ಸ್ಟಾಪ್; ಇಂದಿನ ಚಿನ್ನ, ಬೆಳ್ಳಿ ಬೆಲೆಯಲ್ಲಿ ಆಗಿರೋ ವ್ಯತ್ಯಾಸ ಎಷ್ಟು?

108 ದಿನಗಳ ಇರಾನ್-ಅಮೆರಿಕ ಯುದ್ಧವು ಶಾಂತಿ ಒಪ್ಪಂದದೊಂದಿಗೆ ಕೊನೆಗೊಂಡಿದ್ದು, ಕಚ್ಚಾತೈಲದ ಬೆಲೆ ಇಳಿದಿದೆ. ಈ ಲೇಖನವು ಇಂದಿನ 22 ಮತ್ತು 24 ಕ್ಯಾರಟ್ ಚಿನ್ನದ ದರ ಹಾಗೂ ಪ್ರಮುಖ ನಗರಗಳಲ್ಲಿನ ಬೆಲೆ ವಿವರಗಳನ್ನು ಒದಗಿಸುತ್ತದೆ.

Read Full Story

09:10 AM (IST) Jun 15

FIFA World Cup 2026 - 1934ರ ಬಳಿಕ ಸೋಲಿಲ್ಲ, ಆದರೆ ಗೆಲುವೂ ಇಲ್ಲ; ಬ್ರೆಜಿಲ್‌ಗೆ ವಿಶ್ವಕಪ್‌ ಆರಂಭದಲ್ಲಿ ನಿರಾಸೆ

ಫಿಫಾ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ, 5 ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡವು ಮೊರಾಕ್ಕೊ ವಿರುದ್ಧ 1-1 ಗೋಲುಗಳಿಂದ ಡ್ರಾ ಸಾಧಿಸಿದೆ. ನೇಯ್ಮರ್ ಅನುಪಸ್ಥಿತಿಯಲ್ಲಿ ನಡೆದ ಈ ಪಂದ್ಯದಲ್ಲಿ, ವಿನಿಶಿಯಸ್‌ ಜೂನಿಯರ್‌ ಬ್ರೆಜಿಲ್‌ ಪರ ಗೋಲು ಗಳಿಸಿ ಸೋಲಿನಿಂದ ಪಾರುಮಾಡಿದರು.
Read Full Story

08:45 AM (IST) Jun 15

FIFA World Cup 2026 - ವಲಸಿಗ ಕ್ಯಾಂಪ್‌ನಲ್ಲಿ ಜನಿಸಿದ್ದ ನೆಸ್ಸೂರಿ ಈಗ ಆಸ್ಟ್ರೇಲಿಯಾ ಗೆಲುವಿನ ರೂವಾರಿ!

ಬುರುಂಡಿ ಅಂತರ್ಯುದ್ಧದಿಂದ ಪಲಾಯನಗೈದು ತಾಂಜಾನಿಯಾದ ವಲಸಿಗ ಕ್ಯಾಂಪ್‌ನಲ್ಲಿ ಜನಿಸಿದ ನೆಸ್ಟೊರಿ ಇರಾಕುಂಡ, ಇಂದು ಆಸ್ಟ್ರೇಲಿಯಾ ಫುಟ್ಬಾಲ್ ತಂಡದ ಪ್ರಮುಖ ಆಟಗಾರ. ಫಿಫಾ ವಿಶ್ವಕಪ್‌ನಲ್ಲಿ ಟರ್ಕಿ ವಿರುದ್ಧ ಗೋಲು ಗಳಿಸುವ ಮೂಲಕ, ಅವರು ಆಸ್ಟ್ರೇಲಿಯಾ ಪರ ಗೋಲು ಹೊಡೆದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Read Full Story

08:31 AM (IST) Jun 15

ಇರಾನ್-ಅಮೆರಿಕ ಶಾಂತಿ ಒಪ್ಪಂದದ ಬೆನ್ನಲ್ಲೇ ಗುಡ್‌ನ್ಯೂಸ್; ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಇಳಿಕೆ

ಇರಾನ್ ಮತ್ತು ಅಮೆರಿಕ ನಡುವೆ ಶಾಂತಿ ಒಪ್ಪಂದ ಏರ್ಪಡುತ್ತಿದ್ದು, ಇದರಿಂದ ಕಚ್ಚಾ ತೈಲ ಬೆಲೆಯಲ್ಲಿ ಶೇ.4ರಷ್ಟು ಕುಸಿತವಾಗಿದೆ. ಈ ಒಪ್ಪಂದದ ಪರಿಣಾಮವಾಗಿ, ಯುದ್ಧದ ಕಾರಣದಿಂದ ಮುಚ್ಚಲಾಗಿದ್ದ ಹರ್ಮೋಜ್ ಜಲಸಂಧಿ ಮತ್ತೆ ಮುಕ್ತವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
Read Full Story

07:58 AM (IST) Jun 15

ಇರಾನ್-ಅಮೆರಿಕ ನಡುವೆ ಶಾಂತಿ ಒಪ್ಪಂದ; ಹರ್ಮೋಜ್ ಜಲಸಂಧಿ ಓಪನ್‌, ಇಳಿಕೆಯತ್ತ ತೈಲ ದರ

ಕಳೆದ ಮೂರು ತಿಂಗಳ ಅಮೆರಿಕ-ಇರಾನ್ ಸಂಘರ್ಷವು ಅಂತ್ಯಗೊಳ್ಳುವ ಹಂತ ತಲುಪಿದೆ. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಉಭಯ ದೇಶಗಳು ಶಾಂತಿ ಒಪ್ಪಂದಕ್ಕೆ ಬಂದಿದ್ದು, ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಅಮೆರಿಕ ಒಪ್ಪಿಕೊಂಡಿದೆ. 

Read Full Story

05:53 AM (IST) Jun 15

ಟಿಎಂಸಿ ಇಬ್ಭಾಗ ಬಹುತೇಕ ಖಚಿತ - ಮಮತಾ ವಿರುದ್ಧ 20 ಸಂಸದರು, ಎನ್‌ಡಿಎಗೆ ಬೆಂಬಲ ಘೋಷಣೆ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ನಲ್ಲಿ ಭಾರಿ ಬಂಡಾಯ ಭುಗಿಲೆದ್ದಿದ್ದು, 20 ಸಂಸದರು ಪಕ್ಷದ ನಾಯಕತ್ವದ ವಿರುದ್ಧ ದಂಗೆ ಎದ್ದಿದ್ದಾರೆ. ಈ ಬಂಡಾಯ ಬಣವು ತ್ರಿಪುರಾದ ಎನ್‌ಸಿಪಿಐ ಪಕ್ಷದಲ್ಲಿ ವಿಲೀನಗೊಂಡು, ಕೇಂದ್ರದ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಿಸಿದೆ.
Read Full Story

05:18 AM (IST) Jun 15

ರಾಜಸ್ಥಾನದಲ್ಲಿ ಲಂಚ ಕೇಳಿ ಸಿಕ್ಕಿಬಿದ್ದ ಬೆಂಗ್ಳೂರು ಖಾಕಿ - ಲೇಡಿ SI, ಮುಖ್ಯಪೇದೆಗಳ ಬಂಧನ

ವರದಕ್ಷಿಣೆ ಕಿರುಕುಳ ಪ್ರಕರಣದ ಆರೋಪಿಯಿಂದ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಬೆಂಗಳೂರಿನ ಎಚ್‌ಎಎಲ್ ಠಾಣೆಯ ಮಹಿಳಾ ಪಿಎಸ್‌ಐ ಸೇರಿದಂತೆ ಮೂವರು ಪೊಲೀಸರನ್ನು ರಾಜಸ್ಥಾನದ ಎಸಿಬಿ ಅಧಿಕಾರಿಗಳು ಜೈಪುರದಲ್ಲಿ ಬಂಧಿಸಿದ್ದಾರೆ. ಪ್ರಕರಣದಿಂದ ಕೈಬಿಡಲು 2 ಲಕ್ಷ ರೂ. ಬೇಡಿಕೆಯಿಟ್ಟು, 40 ಸಾವಿರ ರೂ. ಪಡೆಯುವಾಗ ಪೊಲೀಸರು ಸಿಕ್ಕಿಬಿದ್ದಿದ್ದಾರೆ.
Read Full Story

More Trending News