ಮುಂಬೈ: ಮಹಾರಾಷ್ಟ್ರದಲ್ಲಿ ಜ.15ರಂದು ನಗರಾಡಳಿತ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಮಹಿಳೆಯರಿಗೆ ಪ್ರತಿ ತಿಂಗಳು 1,500 ರು. ನೀಡುವ ‘ಲಡ್ಕಿ ಬಹಿನ್’ ಯೋಜನೆಯ ಜನವರಿಯ ಕಂತನ್ನು ತಡೆಹಿಡಿಯುವಂತೆ ರಾಜ್ಯ ಚುನಾವಣಾ ಆಯೋಗವು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಕಳೆದ ಡಿಸೆಂಬರ್ನ ಹಣ ಈವರೆಗೆ ಫಲಾನುಭವಿಗಳ ಖಾತೆ ತಲುಪಿಲ್ಲ. ಹೀಗಿರುವಾಗ, ಇದನ್ನು ಮತ ಸೆಳೆಯುವ ತಂತ್ರವಾಗಿ ಸರ್ಕಾರ ಬಳಸಬಹುದು ಹಾಗೂ 2 ತಿಂಗಳ (ಡಿಸೆಂಬರ್, ಜನವರಿ) ಹಣ ಸೇರಿ ಒಟ್ಟು 3000 ರು.ಅನ್ನು ಮಕರಸಂಕ್ರಾಂತಿಯ ಉಡುಗೊರೆಯೆಂದು ಘೋಷಿಸಿ ಖಾತೆಗಳಿಗೆ ಜಮೆ ಮಾಡುವ ಸಾಧ್ಯತೆಯಿದೆ ಎಂದು ಹಲವು ದೂರುಗಳು ದಾಖಲಾಗಿದ್ದವು. ಹೀಗಾಗಿ ಆಯೋಗ ಈ ಆದೇಶ ಹೊರಡಿಸಿದೆ. ಇತ್ತೀಚಗೆ ಬಿಹಾರ ವಿಧಾನಸಭೆ ಚುನಾವಣೆ ವೇಳೆ ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆಯಡಿ 10,000 ರು. ಹಂಚಿದ್ದು ವಿವಾದವಾಗಿತ್ತು.

10:27 PM (IST) Jan 13
ತಡರಾತ್ರಿ ಗೋವಾ ಬೀಚ್ ಬಳಿ ದಾರಿ ತಪ್ಪಿ ಕಂಗಾಲಾದ ವಿದೇಶಿ ಮಹಿಳೆಯನ್ನು ಮಹಿಳಾ ರ್ಯಾಪಿಕ್ ಬೈಕ್ ರೈಡರ್ ಮರಳಿ ಹೊಟೆಲ್ ತಲುಪಿಸಿದ್ದಾರೆ. ಮಹಿಳಾ ಬೈಕ್ ರೈಡರ್ಗೆ ಮೆಚ್ಚುಗೆಯ ಸುರಿಮಳೆ ವ್ಯಕ್ತವಾಗುತ್ತಿದೆ.
09:29 PM (IST) Jan 13
2ನೇ ಮಹಡಿಗೆ ಏಣಿ ಮೂಲಕ ಹತ್ತಿ ಮಲಗಿದ್ದ ಯುವತಿಯ ಚಿನ್ನದ ಸರ ಕದ್ದ ಕಳ್ಳ, ಒಂದು ಸ್ವಲ್ಪವೂ ಶಬ್ದ ಬರದಂತೆ ಕೋಣೆಯೊಳಗೆ ನುಗ್ಗಿ ಮಲಗಿದ್ದ ಯುವತಿಗೆ ಗೊತ್ತೇ ಆಗದಂತೆ ಚಿನ್ನದ ಸರ ಕದ್ದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
09:03 PM (IST) Jan 13
ಅಣ್ಣಾಮಲೈಯಲ್ಲಿ ಏನಿದೆ? ಆತ ಝಿರೋ ಎಂದು ಆದಿತ್ಯ ಠಾಕ್ರೆ ಗುಡುಗಿದ್ದಾರೆ. ಆದರೆ ಅಣ್ಣಾಮಲೈ ಅರ್ಹತೆ, ಐಪಿಎಸ್ ಅಧಿಕಾರಿ ಸೇರಿದಂತೆ ಹಲವು ಅಂಕಿ ಅಂಶಗಳ ಮುಂದಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಠಾಕ್ರೆಗೆ ಸರಿಯಾಗಿ ಝಾಡಿಸಲಾಗಿದೆ.
08:53 PM (IST) Jan 13
ಬಾಲಿವುಡ್ ನಟಿ ಸೆಲೀನಾ ಜೇಟ್ಲಿ ತಮ್ಮ ದಾಂಪತ್ಯ ಜೀವನದ ಕರಾಳ ಮುಖವನ್ನು ಬಹಿರಂಗಪಡಿಸಿದ್ದಾರೆ. ವಿವಾಹ ವಾರ್ಷಿಕೋತ್ಸವದ ಉಡುಗೊರೆ ನೀಡುವುದಾಗಿ ಕರೆದು ಪತಿ ವಿಚ್ಛೇದನ ನೋಟಿಸ್ ನೀಡಿದ್ದನ್ನು ನೆನೆದ ಅವರು
06:49 PM (IST) Jan 13
ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಸಾಮಾನ್ಯ ವ್ಯಕ್ತಿ ಎಂದು ಭಾವಿಸಿ ಪೊಲೀಸ್ ಅಧಿಕಾರಿಯ ಮುಂದೆಯೇ ಡೀಲ್ ಮಾಡಲು ಹೋದಾಗ ಈ ದಂಧೆ ಬಯಲಾಗಿದ್ದು, ಐವರನ್ನು ಬಂಧಿಸಿ ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ.
06:36 PM (IST) Jan 13
06:08 PM (IST) Jan 13
ಜೋಹಾನ್ಸ್ಬರ್ಗ್ ಸೂಪರ್ ಕಿಂಗ್ಸ್ ತಂಡದ ನಾಯಕ ಫಾಫ್ ಡು ಪ್ಲೆಸಿಸ್, ಉಂಗುರದ ಬೆರಳಿನ ಗಾಯದ ಸಮಸ್ಯೆಯಿಂದಾಗಿ 2025-26ನೇ ಸಾಲಿನ ಸೌಥ್ ಆಫ್ರಿಕಾ ಟಿ20 ಲೀಗ್ನಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಅವರ ಅನುಪಸ್ಥಿತಿಯಲ್ಲಿ, ತಂಡವು ಹೊಸ ನಾಯಕನ ಹುಡುಕಾಟದಲ್ಲಿದೆ.
05:57 PM (IST) Jan 13
ಇರಾನ್ನಲ್ಲಿ ನಡೆದ ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ 12 ಸಾವಿರ ಮಂದಿ ಹತರಾಗಿದ್ದಾರೆ ಎಂದು ವರದಿಯಾಗಿದ್ದು, ಇದನ್ನು ಇರಾನ್ ಸರ್ಕಾರ ನಿರಾಕರಿಸಿದೆ. ಈ ನಡುವೆ, ಅಮೆರಿಕ ಅಧ್ಯಕ್ಷ ಟ್ರಂಪ್ ಇರಾನ್ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ.
05:49 PM (IST) Jan 13
ಯೂಟ್ಯೂಬ್ನಲ್ಲಿರುವ ಟಾಕ್ಸಿಕ್ ಟೀಸರ್ ವಿರುದ್ಧ ಅಸಮಾಧಾನ, ಪ್ರಮುಖವಾಗಿ ಮಹಿಳಾ ಆಯೋಗ ಸೆನ್ಸರ್ ಮಂಡಳಿಗೆ ಪತ್ರ ಬರೆದಿತ್ತು. ಯಶ್ ಟಾಕ್ಸಿಕ್ ಸಿನಿಮಾಗೆ ಕಾನೂನು ಸಂಕಷ್ಟ ಎದುರಾಗುತ್ತಿದ್ದಂತೆ ಸಿಬಿಎಫ್ಸಿ ಉತ್ತರ ನೀಡಿದೆ.
05:28 PM (IST) Jan 13
ದೇಶದೆಲ್ಲೆಡೆ ಕಳೆದ ವಾರ ತೀವ್ರಗೊಂಡಿದ್ದ ಆಡಳಿತ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿದಂತೆ ಸಾಮೂಹಿಕ ಬಂಧನದ ನಂತರ ಇರಾನ್ ಈಗ ತನ್ನ ಮೊದಲ ಪ್ರತಿಭಟನಾಕಾರರನನ್ನು ಗಲ್ಲಿಗೇರಿಸಲು ಸಜ್ಜಾಗಿದೆ ಎಂದು ವರದಿಯಾಗಿದೆ.
05:03 PM (IST) Jan 13
ಅಮೆರಿಕವು 'ಆಪರೇಷನ್ ಅಬ್ಸೊಲ್ಯೂಟ್ ರೆಸಲ್ವ್' ಮೂಲಕ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿದೆ. ಈ ಕಾರ್ಯಾಚರಣೆಯ ವೇಳೆ, ವೆನೆಜುವೆಲಾದ ರಷ್ಯಾದ ನಿರ್ಮಿತ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗಳು ಕಾರ್ಯನಿರ್ವಹಿಸದೆ ವಿಫಲವಾದವು.
04:54 PM (IST) Jan 13
ಬೆಂಗಳೂರು: ಎಂ ಎಸ್ ಧೋನಿ ಭಾರತ ಕ್ರಿಕೆಟ್ ಕಂಡ ದಿಗ್ಗಜ ನಾಯಕ. ಮೂರು ಐಸಿಸಿ ಟ್ರೋಫಿ ಗೆದ್ದ ಏಕೈಕ ಟೀಂ ಇಂಡಿಯಾ ಎನ್ನುವ ಹೆಗ್ಗಳಿಕೆ ಧೋನಿಗಿದೆ. ಆದ್ರೆ ರಾಹುಲ್ ದ್ರಾವಿಡ್ ಒಂದು ತಪ್ಪು ತೀರ್ಮಾನ ಮಾಡಿದ್ದಿದ್ರೆ ಬಹುಶಃ ಧೋನಿ ನಾಯಕನಾಗಿ ನಮಗೆ ಸಿಗುತ್ತಿರಲಿಲ್ಲ. ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.
04:04 PM (IST) Jan 13
Arjun Tendulkar to Marry Saniya Chandhok on March 5; Sara's Wedding Next? ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಸಚಿನ್ ತೆಂಡುಲ್ಕರ್ ಮಾತ್ರವಲ್ಲ, ಅವರ ಮಗಳು ಸಾರಾ ತೆಂಡುಲ್ಕರ್ ಮತ್ತು ಮಗ ಅರ್ಜುನ್ ತೆಂಡುಲ್ಕರ್ ಕೂಡ ಸಾಕಷ್ಟು ಸುದ್ದಿಯಲ್ಲಿರುತ್ತಾರೆ.
04:00 PM (IST) Jan 13
ಬುದ್ಧನ ಪ್ರತಿಮೆ ಎಂದು ನಾಲ್ಕು ವರ್ಷದಿಂದ ಪೂಜಿಸುತ್ತಿದ್ದ ಮಹಿಳೆಗೆ ಶಾಕ್, ಪ್ರತಿ ದಿನ ಬುದ್ಧನ ಪ್ರತಿಮೆ ಕುಳಿತು ಧ್ಯಾನ, ಪೂಜೆ ಮಾಡುತ್ತಿದ್ದ ಮಹಿಳೆಗೆ ತಾನು ಪೂಜಿಸಿದ್ದು ಬುದ್ಧನಲ್ಲ ಎಂಬ ಸತ್ಯ ಗೊತ್ತಾಗಿದೆ. ಮುಂದೇನಾಯ್ತು?
03:57 PM (IST) Jan 13
ಉತ್ತರ ಪ್ರದೇಶದ ಕುಶಿನಗರದಲ್ಲಿ, ವ್ಯಕ್ತಿಯೊಬ್ಬ ತನ್ನ ತಾಯಿ ಮತ್ತು ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ನಂತರ ಅವರ ತಲೆಗಳನ್ನು ಜಜ್ಜಿ, ಮಾಂಸವನ್ನು ಕಿತ್ತು ಗ್ರಾಮಸ್ಥರ ಮುಂದೆಯೇ ತಿಂದಿದ್ದಾನೆ.
03:56 PM (IST) Jan 13
ಏಕದಿನ ಕ್ರಿಕೆಟ್ನಲ್ಲಿ ಅದ್ಭುತ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ವಿರುದ್ಧ ಸತತ ಐದನೇ 50+ ರನ್ ಗಳಿಸಿದ್ದಾರೆ. ರಾಜ್ಕೋಟ್ನಲ್ಲಿ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಅವರು ಸಚಿನ್ ತೆಂಡೂಲ್ಕರ್ರ ಎರಡು ಮಹತ್ವದ ದಾಖಲೆಗಳನ್ನು ಮುರಿಯುವ ನಿರೀಕ್ಷೆಯಲ್ಲಿದ್ದಾರೆ.
03:31 PM (IST) Jan 13
ನರ್ಸ್ ಒಬ್ಬಳು ತನ್ನ ನೈಟ್ ಶಿಫ್ಟ್ ವೇಳೆ ಪ್ರಿಯಕರನನ್ನು ಆಸ್ಪತ್ರೆಗೆ ಕರೆತಂದು ರೋಗಿಗಳಿಗೆ ಔಷಧಿ ಸಿದ್ಧಪಡಿಸಲು ಬಿಟ್ಟಿದ್ದಾಳೆ. ಈ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಂತರ ವಿಡಿಯೋ ವೈರಲ್ ಆಗಿದ್ದು, ಆಸ್ಪತ್ರೆ ಆಡಳಿತ ಮಂಡಳಿ ಆಕೆಯನ್ನು ಕೆಲಸದಿಂದ ಅಮಾನತುಗೊಳಿಸಿದೆ.
03:19 PM (IST) Jan 13
ಎಲೆಕೋಸಿನಲ್ಲಿರುವ ಹುಳುವಿನಿಂದಾಗಿ 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ. ಸರಿಯಾಗಿ ತೊಳೆಯದ ಎಲೆಕೋಸನ್ನು ಸೇವಿಸಿದ್ದರಿಂದ, ಅದರಲ್ಲಿನ ಪರಾವಲಂಬಿ ಕೀಟವು ಆಕೆಯ ಮೆದುಳನ್ನು ಸೇರಿ ಮಾರಣಾಂತಿಕವಾಗಿ ಪರಿಣಮಿಸಿದೆ.
03:09 PM (IST) Jan 13
ಮೇರಿ ಕೋಮ್ ಅಕ್ರಮ ಸಂಬಂಧ ಬಹಿರಂಗಪಡಿಸಿದ ಪತಿ, 2013, 2017ರಲ್ಲಿನ ಮೇರಿ ಕೋಮ್ ಅಫೈರ್ ಕುರಿತ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಪತಿ ವಿರುದ್ದ ಮೇರಿ ಕೋಮ್ ಮಾಡಿದ ಆರೋಪದ ಬೆನ್ನಲ್ಲೇ ಇದೀಗ ಕಲಹ ಬೀದಿ ಜಗಳವಾಗಿದೆ.
03:05 PM (IST) Jan 13
No More 10-Minute Delivery: Blinkit, Zepto, Zomato Drop Time Deadline ಕೇಂದ್ರ ಕಾರ್ಮಿಕ ಸಚಿವರ ಮಧ್ಯಸ್ಥಿಕೆಯ ನಂತರ, ಡೆಲಿವರಿ ಏಜೆಂಟ್ಗಳ ಸುರಕ್ಷತೆಯ ಕಾಳಜಿಯಿಂದಾಗಿ ಕ್ವಿಕ್ ಕಾಮರ್ಸ್ ಪ್ಲಾಟ್ಫಾರ್ಮ್ ಬ್ಲಿಂಕಿಟ್ ತನ್ನ '10 ನಿಮಿಷಗಳ ಡೆಲಿವರಿ' ಜಾಹೀರಾತನ್ನು ಹಿಂಪಡೆದಿದೆ.
02:28 PM (IST) Jan 13
ಭಾರತೀಯ ರೈಲ್ವೆ, ಜನವರಿ 12, 2026 ರಿಂದ ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಯನ್ನು ಜಾರಿಗೆ ತಂದಿದೆ. ಈ ಕ್ರಮವು ನಕಲಿ ಖಾತೆಗಳು ಮತ್ತು ಏಜೆಂಟರ ಹಸ್ತಕ್ಷೇಪವನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
02:20 PM (IST) Jan 13
ಟಾಟಾ ಮೋಟಾರ್ಸ್ ಭಾರತದಲ್ಲಿ ಹೊಸ ಟಾಟಾ ಪಂಚ್ ಫೇಸ್ಲಿಫ್ಟ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಮಾದರಿಯು ನವೀಕರಿಸಿದ ವಿನ್ಯಾಸ, ಹಲವು ಹೊಸ ಬಣ್ಣಗಳು, ಸುಧಾರಿತ ಒಳಾಂಗಣ ವೈಶಿಷ್ಟ್ಯಗಳು, 5-ಸ್ಟಾರ್ ಸುರಕ್ಷತಾ ರೇಟಿಂಗ್ ಮತ್ತು ಹೊಸ 1.2 ಲೀಟರ್ ಐಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ.
01:58 PM (IST) Jan 13
ಭಾರತಕ್ಕೆ ಭೇಟಿ ನೀಡಿದ ಜೆನ್ನಿ ಆಡಂ ಎಂಬ ವಿದೇಶಿ ಪ್ರವಾಸಿ ಮಹಿಳೆ, ಭಾರತೀಯರೊಂದಿಗೆ ಎಚ್ಚರಿಕೆಯಿಂದಿರಿ ಎಂದು ಸಲಹೆ ನೀಡಿದ ರೀಲ್ಸ್ ಮಾಡಿದ್ದಾರೆ. ಈ ವೈರಲ್ ವಿಡಿಯೋ ಭಾರತೀಯರ ಅತಿಥಿ ಸತ್ಕಾರವನ್ನು ಜಗತ್ತಿಗೆ ಸಾರಿದೆ.
01:30 PM (IST) Jan 13
ಇರಾನ್ ಜೊತೆ ವ್ಯವಹಾರ ನಡೆಸುವ ದೇಶಗಳ ಮೇಲೆ ಶೇ.25ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ನಿರ್ಧಾರವು ಚೀನಾ, ಯುಎಇ ಮತ್ತು ಭಾರತದಂತಹ ಪ್ರಮುಖ ವ್ಯಾಪಾರ ಪಾಲುದಾರರ ಮೇಲೆ ಪರಿಣಾಮ ಬೀರಲಿದೆ.
01:18 PM (IST) Jan 13
12:24 PM (IST) Jan 13
ಗ್ಲುಕೋಮಾ ಯಾವುದೇ ಆರಂಭಿಕ ಲಕ್ಷಣಗಳಿಲ್ಲದೆ ಸದ್ದಿಲ್ಲದೆ ದೃಷ್ಟಿಯನ್ನು ಹಾನಿಗೊಳಿಸುವ ಕಾಯಿಲೆಯಾಗಿದೆ. ಇದು ಆಪ್ಟಿಕ್ ನರವನ್ನು ಹಾನಿಗೊಳಿಸಿ ಶಾಶ್ವತ ದೃಷ್ಟಿ ನಷ್ಟಕ್ಕೆ ಕಾರಣವಾಗುತ್ತದೆ, ಇದು ಸಾಮಾನ್ಯವಾಗಿ ರೋಗವು ಮುಂದುವರಿದ ಹಂತದಲ್ಲಿದ್ದಾಗ ಮಾತ್ರ ಪತ್ತೆಯಾಗುತ್ತದೆ.
11:59 AM (IST) Jan 13
ಅತಿವೇಗದ ಚಾಲನೆಗೆ ಚಲನ್ ವಿಧಿಸಿ, ವರ್ಷದ ಕೊನೆಯಲ್ಲಿ ಅದರಿಂದ ವಿನಾಯಿತಿ ಪಡೆಯುತ್ತೀರಿ. ಇದರಿಂದ, ವರ್ಷಾಂತ್ಯದಲ್ಲಿ ಪೊಲೀಸರು ರಿಯಾಯಿತಿ ನೀಡುತ್ತಾರೆ ಎಂದು ಜನರು ಭಾವಿಸುತ್ತಾರೆ ಮತ್ತು ಅವರು ಅದನ್ನು ಸುಲಭವಾಗಿ ತೆಗೆದುಕೊಳ್ಳುತ್ತಾರೆ ಎಂದು ಸಿಎಂ ಹೇಳಿದ್ದಾರೆ.
11:34 AM (IST) Jan 13
2025ರ ಐಪಿಎಲ್ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ದುರಂತದ ಬಳಿಕ, ಆರ್ಸಿಬಿ 2026ರ ಐಪಿಎಲ್ಗೆ ಹೊಸ ತವರು ಮೈದಾನದ ಹುಡುಕಾಟದಲ್ಲಿದೆ. ಸುರಕ್ಷತಾ ವರದಿಯಿಂದಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಆಯೋಜನೆ ಅಲಭ್ಯವಾಗಿದೆ.
10:36 AM (IST) Jan 13
10:12 AM (IST) Jan 13
10:08 AM (IST) Jan 13
09:04 AM (IST) Jan 13
ವಡೋದರಾ: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿಗೆ ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಕೊಹ್ಲಿಯೂ ತನ್ನ ಅಭಿಮಾನಿಗಳನ್ನು ಗೌರವಿಸುತ್ತಾ ಬಂದಿದ್ದಾರೆ. ಆದರೆ ಇದೀಗ ವಿರಾಟ್ ಕೊಹ್ಲಿ ತಮ್ಮ ಫ್ಯಾನ್ಸ್ ಮೇಲೆ ಸಿಟ್ಟಾಗಿದ್ದಾರೆ. ಯಾಕೆ? ಏನಾಯ್ತು?