Published : Jan 13, 2026, 07:08 AM ISTUpdated : Jan 13, 2026, 10:27 PM IST

India Latest News Live: ತಡರಾತ್ರಿ ಗೋವಾ ಬೀಚ್ ಬಳಿ ದಾರಿ ತಪ್ಪಿ ಕಂಗಾಲಾದ ವಿದೇಶಿಯನ್ನು ಹೊಟೆಲ್ ತಲುಪಿಸಿದ ಮಹಿಳಾ ರೈಡರ್

ಸಾರಾಂಶ

ಮುಂಬೈ: ಮಹಾರಾಷ್ಟ್ರದಲ್ಲಿ ಜ.15ರಂದು ನಗರಾಡಳಿತ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಮಹಿಳೆಯರಿಗೆ ಪ್ರತಿ ತಿಂಗಳು 1,500 ರು. ನೀಡುವ ‘ಲಡ್ಕಿ ಬಹಿನ್‌’ ಯೋಜನೆಯ ಜನವರಿಯ ಕಂತನ್ನು ತಡೆಹಿಡಿಯುವಂತೆ ರಾಜ್ಯ ಚುನಾವಣಾ ಆಯೋಗವು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಕಳೆದ ಡಿಸೆಂಬರ್‌ನ ಹಣ ಈವರೆಗೆ ಫಲಾನುಭವಿಗಳ ಖಾತೆ ತಲುಪಿಲ್ಲ. ಹೀಗಿರುವಾಗ, ಇದನ್ನು ಮತ ಸೆಳೆಯುವ ತಂತ್ರವಾಗಿ ಸರ್ಕಾರ ಬಳಸಬಹುದು ಹಾಗೂ 2 ತಿಂಗಳ (ಡಿಸೆಂಬರ್‌, ಜನವರಿ) ಹಣ ಸೇರಿ ಒಟ್ಟು 3000 ರು.ಅನ್ನು ಮಕರಸಂಕ್ರಾಂತಿಯ ಉಡುಗೊರೆಯೆಂದು ಘೋಷಿಸಿ ಖಾತೆಗಳಿಗೆ ಜಮೆ ಮಾಡುವ ಸಾಧ್ಯತೆಯಿದೆ ಎಂದು ಹಲವು ದೂರುಗಳು ದಾಖಲಾಗಿದ್ದವು. ಹೀಗಾಗಿ ಆಯೋಗ ಈ ಆದೇಶ ಹೊರಡಿಸಿದೆ. ಇತ್ತೀಚಗೆ ಬಿಹಾರ ವಿಧಾನಸಭೆ ಚುನಾವಣೆ ವೇಳೆ ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆಯಡಿ 10,000 ರು. ಹಂಚಿದ್ದು ವಿವಾದವಾಗಿತ್ತು.

Goa foreign tourist rescue

10:27 PM (IST) Jan 13

ತಡರಾತ್ರಿ ಗೋವಾ ಬೀಚ್ ಬಳಿ ದಾರಿ ತಪ್ಪಿ ಕಂಗಾಲಾದ ವಿದೇಶಿಯನ್ನು ಹೊಟೆಲ್ ತಲುಪಿಸಿದ ಮಹಿಳಾ ರೈಡರ್

ತಡರಾತ್ರಿ ಗೋವಾ ಬೀಚ್ ಬಳಿ ದಾರಿ ತಪ್ಪಿ ಕಂಗಾಲಾದ ವಿದೇಶಿ ಮಹಿಳೆಯನ್ನು ಮಹಿಳಾ ರ್ಯಾಪಿಕ್ ಬೈಕ್ ರೈಡರ್ ಮರಳಿ ಹೊಟೆಲ್ ತಲುಪಿಸಿದ್ದಾರೆ. ಮಹಿಳಾ ಬೈಕ್ ರೈಡರ್‌ಗೆ ಮೆಚ್ಚುಗೆಯ ಸುರಿಮಳೆ ವ್ಯಕ್ತವಾಗುತ್ತಿದೆ.

Read Full Story

09:29 PM (IST) Jan 13

2ನೇ ಮಹಡಿಗೆ ಏಣಿ ಮೂಲಕ ಹತ್ತಿ ಮಲಗಿದ್ದ ಯುವತಿಯ ಚಿನ್ನದ ಸರ ಕದ್ದ ಕಳ್ಳ, ಸಿಸಿಟಿವಿ ದೃಶ್ಯ

2ನೇ ಮಹಡಿಗೆ ಏಣಿ ಮೂಲಕ ಹತ್ತಿ ಮಲಗಿದ್ದ ಯುವತಿಯ ಚಿನ್ನದ ಸರ ಕದ್ದ ಕಳ್ಳ, ಒಂದು ಸ್ವಲ್ಪವೂ ಶಬ್ದ ಬರದಂತೆ ಕೋಣೆಯೊಳಗೆ ನುಗ್ಗಿ ಮಲಗಿದ್ದ ಯುವತಿಗೆ ಗೊತ್ತೇ ಆಗದಂತೆ ಚಿನ್ನದ ಸರ ಕದ್ದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Read Full Story

09:03 PM (IST) Jan 13

ಅಣ್ಣಾಮಲೈಯಲ್ಲಿ ಏನಿದೆ? ಆತ ಝಿರೋ ಎಂದ ಠಾಕ್ರೆಗೆ ನೆಟ್ಟಿಗರ ಕ್ಲಾಸ್, ಪೇಚಿಗೆ ಸಿಲುಕಿದ ಶಿವಸೇನೆ

ಅಣ್ಣಾಮಲೈಯಲ್ಲಿ ಏನಿದೆ? ಆತ ಝಿರೋ ಎಂದು ಆದಿತ್ಯ ಠಾಕ್ರೆ ಗುಡುಗಿದ್ದಾರೆ. ಆದರೆ ಅಣ್ಣಾಮಲೈ ಅರ್ಹತೆ, ಐಪಿಎಸ್ ಅಧಿಕಾರಿ ಸೇರಿದಂತೆ ಹಲವು ಅಂಕಿ ಅಂಶಗಳ ಮುಂದಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಠಾಕ್ರೆಗೆ ಸರಿಯಾಗಿ ಝಾಡಿಸಲಾಗಿದೆ.

Read Full Story

08:53 PM (IST) Jan 13

15ನೇ ವಾರ್ಷಿಕೋತ್ಸವಕ್ಕೆ ಗಿಫ್ಟ್‌ ಎಂದು ಡಿವೋರ್ಸ್ ನೀಡಿದ ಪತಿ - ಮಕ್ಕಳ ಭೇಟಿ ಮಾಡಲಾಗದೇ ಕೊರಗುತ್ತಿರುವ ನಟಿ

ಬಾಲಿವುಡ್ ನಟಿ ಸೆಲೀನಾ ಜೇಟ್ಲಿ ತಮ್ಮ ದಾಂಪತ್ಯ ಜೀವನದ ಕರಾಳ ಮುಖವನ್ನು ಬಹಿರಂಗಪಡಿಸಿದ್ದಾರೆ. ವಿವಾಹ ವಾರ್ಷಿಕೋತ್ಸವದ ಉಡುಗೊರೆ ನೀಡುವುದಾಗಿ ಕರೆದು ಪತಿ ವಿಚ್ಛೇದನ ನೋಟಿಸ್ ನೀಡಿದ್ದನ್ನು ನೆನೆದ ಅವರು

Read Full Story

06:49 PM (IST) Jan 13

ಪೊಲೀಸರ ಮುಂದೆ ಡೀಲ್ ಮಾಡಲು ಹೋಗಿ ತಗಲಾಕೊಂಡ ಗ್ಯಾಂಗ್ - ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಐವರ ಬಂಧನ

ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಸಾಮಾನ್ಯ ವ್ಯಕ್ತಿ ಎಂದು ಭಾವಿಸಿ ಪೊಲೀಸ್ ಅಧಿಕಾರಿಯ ಮುಂದೆಯೇ ಡೀಲ್ ಮಾಡಲು ಹೋದಾಗ ಈ ದಂಧೆ ಬಯಲಾಗಿದ್ದು, ಐವರನ್ನು ಬಂಧಿಸಿ ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ.

Read Full Story

06:36 PM (IST) Jan 13

ಇದೇ ನನ್ನ ಮೊದಲ ಬ್ಯಾಟ್‌, ತೆಂಗಿನ ಹೆಡೆಯನ್ನು ವೇದಿಕೆಗೆ ತಂದು ತೋರಿಸಿದ ಟೀಮ್‌ ಇಂಡಿಯಾ ಬ್ಯಾಟರ್‌!

ಭಾರತ ಮಹಿಳಾ ತಂಡದ ಆಟಗಾರ್ತಿ ಸಜನಾ ಸಜೀವನ್, ತಮ್ಮ ಬಾಲ್ಯದಲ್ಲಿ ತೆಂಗಿನ ಹೆಡೆಯನ್ನೇ ಬ್ಯಾಟ್ ಆಗಿ ಬಳಸಿ ಕ್ರಿಕೆಟ್ ಆಡುತ್ತಿದ್ದ ನೆನಪನ್ನು ಹಂಚಿಕೊಂಡಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಅವರು, ತಮ್ಮ ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.
Read Full Story

06:08 PM (IST) Jan 13

CSK ಫ್ರಾಂಚೈಸಿಗೆ ಬಲವಾದ ಹೊಡೆತ; ಗಾಯದಿಂದಾಗಿ ತಂಡದ ಕ್ಯಾಪ್ಟನ್‌ ಟೂರ್ನಿಯಿಂದಲೇ ಔಟ್!

ಜೋಹಾನ್ಸ್‌ಬರ್ಗ್‌ ಸೂಪರ್ ಕಿಂಗ್ಸ್‌ ತಂಡದ ನಾಯಕ ಫಾಫ್ ಡು ಪ್ಲೆಸಿಸ್, ಉಂಗುರದ ಬೆರಳಿನ ಗಾಯದ ಸಮಸ್ಯೆಯಿಂದಾಗಿ 2025-26ನೇ ಸಾಲಿನ ಸೌಥ್ ಆಫ್ರಿಕಾ ಟಿ20 ಲೀಗ್‌ನಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಅವರ ಅನುಪಸ್ಥಿತಿಯಲ್ಲಿ, ತಂಡವು ಹೊಸ ನಾಯಕನ ಹುಡುಕಾಟದಲ್ಲಿದೆ.

Read Full Story

05:57 PM (IST) Jan 13

ಇರಾನ್ ಪ್ರತಿಭಟನೆಯಲ್ಲಿ 12 ಸಾವಿರ ಮಂದಿ ಸಾವು? ಆಧುನಿಕ ಜಗತ್ತಿನ ಅತಿದೊಡ್ಡ ನರಮೇಧಕ್ಕೆ ಜಗತ್ತಿನ ಖಂಡನೆ

ಇರಾನ್‌ನಲ್ಲಿ ನಡೆದ ಸರ್ಕಾರಿ ವಿರೋಧಿ ಪ್ರತಿಭಟನೆಯಲ್ಲಿ 12 ಸಾವಿರ ಮಂದಿ ಹತರಾಗಿದ್ದಾರೆ ಎಂದು ವರದಿಯಾಗಿದ್ದು, ಇದನ್ನು ಇರಾನ್ ಸರ್ಕಾರ ನಿರಾಕರಿಸಿದೆ. ಈ ನಡುವೆ, ಅಮೆರಿಕ ಅಧ್ಯಕ್ಷ ಟ್ರಂಪ್ ಇರಾನ್ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. 

Read Full Story

05:49 PM (IST) Jan 13

ಯೂಟ್ಯೂಬ್‌ನಲ್ಲಿರುವ ಟಾಕ್ಸಿಕ್ ಟೀಸರ್ ವಿರುದ್ಧ ಅಸಮಾಧಾನ, ಸೆನ್ಸರ್ ಬೋರ್ಡ್ ಮಹತ್ವದ ಹೇಳಿಕೆ

ಯೂಟ್ಯೂಬ್‌ನಲ್ಲಿರುವ ಟಾಕ್ಸಿಕ್ ಟೀಸರ್ ವಿರುದ್ಧ ಅಸಮಾಧಾನ, ಪ್ರಮುಖವಾಗಿ ಮಹಿಳಾ ಆಯೋಗ ಸೆನ್ಸರ್ ಮಂಡಳಿಗೆ ಪತ್ರ ಬರೆದಿತ್ತು. ಯಶ್ ಟಾಕ್ಸಿಕ್ ಸಿನಿಮಾಗೆ ಕಾನೂನು ಸಂಕಷ್ಟ ಎದುರಾಗುತ್ತಿದ್ದಂತೆ ಸಿಬಿಎಫ್‌ಸಿ ಉತ್ತರ ನೀಡಿದೆ.

 

Read Full Story

05:28 PM (IST) Jan 13

ಖಮೇನಿ ವಿರೋಧಿ ಪ್ರತಿಭಟನೆ - 26 ವರ್ಷದ ಯುವಕನ ಗಲ್ಲಿಗೇರಿಸಲಿರುವ ಇರಾನ್ ಸರ್ಕಾರ

ದೇಶದೆಲ್ಲೆಡೆ ಕಳೆದ ವಾರ ತೀವ್ರಗೊಂಡಿದ್ದ ಆಡಳಿತ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿದಂತೆ ಸಾಮೂಹಿಕ ಬಂಧನದ ನಂತರ ಇರಾನ್ ಈಗ ತನ್ನ ಮೊದಲ ಪ್ರತಿಭಟನಾಕಾರರನನ್ನು ಗಲ್ಲಿಗೇರಿಸಲು ಸಜ್ಜಾಗಿದೆ ಎಂದು ವರದಿಯಾಗಿದೆ.

Read Full Story

05:03 PM (IST) Jan 13

ಅಧ್ಯಕ್ಷನ ಬೆಡ್‌ರೂಮ್‌ಗೆ ನುಗ್ಗಿದ್ರೂ ವೆನುಜುವೇಲ ಆರ್ಮಿ ಏನ್ಮಾಡ್ತಿತ್ತು..! ಹೀಗಿತ್ತು ಅಮೆರಿಕ ಸೇನೆಯ ಆಪರೇಷನ್‌..

ಅಮೆರಿಕವು 'ಆಪರೇಷನ್ ಅಬ್ಸೊಲ್ಯೂಟ್ ರೆಸಲ್ವ್' ಮೂಲಕ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿದೆ. ಈ ಕಾರ್ಯಾಚರಣೆಯ ವೇಳೆ, ವೆನೆಜುವೆಲಾದ ರಷ್ಯಾದ ನಿರ್ಮಿತ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗಳು ಕಾರ್ಯನಿರ್ವಹಿಸದೆ ವಿಫಲವಾದವು. 

Read Full Story

04:54 PM (IST) Jan 13

ರಾಹುಲ್ ದ್ರಾವಿಡ್ ಅದೊಂದು ತಪ್ಪು ತೀರ್ಮಾನ ಮಾಡಿದ್ರೆ ಧೋನಿ ಕ್ಯಾಪ್ಟನ್ ಆಗ್ತಾನೇ ಇರಲಿಲ್ಲ!

ಬೆಂಗಳೂರು: ಎಂ ಎಸ್ ಧೋನಿ ಭಾರತ ಕ್ರಿಕೆಟ್ ಕಂಡ ದಿಗ್ಗಜ ನಾಯಕ. ಮೂರು ಐಸಿಸಿ ಟ್ರೋಫಿ ಗೆದ್ದ ಏಕೈಕ ಟೀಂ ಇಂಡಿಯಾ ಎನ್ನುವ ಹೆಗ್ಗಳಿಕೆ ಧೋನಿಗಿದೆ. ಆದ್ರೆ ರಾಹುಲ್ ದ್ರಾವಿಡ್ ಒಂದು ತಪ್ಪು ತೀರ್ಮಾನ ಮಾಡಿದ್ದಿದ್ರೆ ಬಹುಶಃ ಧೋನಿ ನಾಯಕನಾಗಿ ನಮಗೆ ಸಿಗುತ್ತಿರಲಿಲ್ಲ. ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

 

Read Full Story

04:04 PM (IST) Jan 13

ಅರ್ಜುನ್‌ ತೆಂಡುಲ್ಕರ್‌ ಮದುವೆ ನಿಶ್ಚಯವಾದ ಬೆನ್ನಲ್ಲೇ ಸಚಿನ್‌ ದೊಡ್ಡ ನಿರ್ಧಾರ, ಶೀಘ್ರವೇ ಸಾರಾ ತೆಂಡುಲ್ಕರ್‌ ವಿವಾಹ

Arjun Tendulkar to Marry Saniya Chandhok on March 5; Sara's Wedding Next? ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಸಚಿನ್ ತೆಂಡುಲ್ಕರ್ ಮಾತ್ರವಲ್ಲ, ಅವರ ಮಗಳು ಸಾರಾ ತೆಂಡುಲ್ಕರ್ ಮತ್ತು ಮಗ ಅರ್ಜುನ್ ತೆಂಡುಲ್ಕರ್ ಕೂಡ ಸಾಕಷ್ಟು ಸುದ್ದಿಯಲ್ಲಿರುತ್ತಾರೆ.

 

Read Full Story

04:00 PM (IST) Jan 13

ಬುದ್ಧನ ಪ್ರತಿಮೆ ಎಂದು ನಾಲ್ಕು ವರ್ಷದಿಂದ ಪೂಜಿಸುತ್ತಿದ್ದ ಮಹಿಳೆಗೆ ಶಾಕ್, ಸತ್ಯ ಗೊತ್ತಾದಾಗ ಅಚ್ಚರಿ

ಬುದ್ಧನ ಪ್ರತಿಮೆ ಎಂದು ನಾಲ್ಕು ವರ್ಷದಿಂದ ಪೂಜಿಸುತ್ತಿದ್ದ ಮಹಿಳೆಗೆ ಶಾಕ್, ಪ್ರತಿ ದಿನ ಬುದ್ಧನ ಪ್ರತಿಮೆ ಕುಳಿತು ಧ್ಯಾನ, ಪೂಜೆ ಮಾಡುತ್ತಿದ್ದ ಮಹಿಳೆಗೆ ತಾನು ಪೂಜಿಸಿದ್ದು ಬುದ್ಧನಲ್ಲ ಎಂಬ ಸತ್ಯ ಗೊತ್ತಾಗಿದೆ. ಮುಂದೇನಾಯ್ತು?

Read Full Story

03:57 PM (IST) Jan 13

ತಾಯಿ ಹಾಗೂ ಹೆಂಡ್ತಿ ಕೊಲೆ ಮಾಡಿ ಮಿದುಳಿನಿಂದ ಮಾಂಸ ಹೊರತೆಗೆದು ಸೇವಿಸಿದ ಮಾದಕ ವ್ಯಸನಿ

ಉತ್ತರ ಪ್ರದೇಶದ ಕುಶಿನಗರದಲ್ಲಿ, ವ್ಯಕ್ತಿಯೊಬ್ಬ ತನ್ನ ತಾಯಿ ಮತ್ತು ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ನಂತರ ಅವರ ತಲೆಗಳನ್ನು ಜಜ್ಜಿ, ಮಾಂಸವನ್ನು ಕಿತ್ತು ಗ್ರಾಮಸ್ಥರ ಮುಂದೆಯೇ ತಿಂದಿದ್ದಾನೆ. 

Read Full Story

03:56 PM (IST) Jan 13

ಕಿವೀಸ್ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರೋ ವಿಶ್ವದಾಖಲೆ ಮುರೀತಾರಾ ವಿರಾಟ್ ಕೊಹ್ಲಿ?

ಏಕದಿನ ಕ್ರಿಕೆಟ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ವಿರುದ್ಧ ಸತತ ಐದನೇ 50+ ರನ್ ಗಳಿಸಿದ್ದಾರೆ. ರಾಜ್‌ಕೋಟ್‌ನಲ್ಲಿ ನಡೆಯಲಿರುವ ಮುಂದಿನ ಪಂದ್ಯದಲ್ಲಿ ಅವರು ಸಚಿನ್ ತೆಂಡೂಲ್ಕರ್‌ರ ಎರಡು ಮಹತ್ವದ ದಾಖಲೆಗಳನ್ನು ಮುರಿಯುವ ನಿರೀಕ್ಷೆಯಲ್ಲಿದ್ದಾರೆ.

Read Full Story

03:31 PM (IST) Jan 13

ನೈಟ್ ಶಿಫ್ಟ್‌ ನರ್ಸ್ ಸಹಾಯಕ್ಕೆ ಬಂದ ಪ್ರಿಯಕರ; ಮೈಮರೆತು ಕೆಲಸ ಮಾಡಿದ ವಿಡಿಯೋ ವೈರಲ್ ಬೆನ್ನಲ್ಲೇ ಸಸ್ಪೆಂಡ್!

ನರ್ಸ್ ಒಬ್ಬಳು ತನ್ನ ನೈಟ್ ಶಿಫ್ಟ್ ವೇಳೆ ಪ್ರಿಯಕರನನ್ನು ಆಸ್ಪತ್ರೆಗೆ ಕರೆತಂದು ರೋಗಿಗಳಿಗೆ ಔಷಧಿ ಸಿದ್ಧಪಡಿಸಲು ಬಿಟ್ಟಿದ್ದಾಳೆ. ಈ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಂತರ ವಿಡಿಯೋ ವೈರಲ್ ಆಗಿದ್ದು, ಆಸ್ಪತ್ರೆ ಆಡಳಿತ ಮಂಡಳಿ ಆಕೆಯನ್ನು ಕೆಲಸದಿಂದ ಅಮಾನತುಗೊಳಿಸಿದೆ.

Read Full Story

03:19 PM (IST) Jan 13

ವೈದ್ಯೆಯಾಗೋ ಕನಸು ಕಂಡಾಕೆಯ ಪ್ರಾಣ ತೆಗೆದ ಎಲೆಕೋಸಿನ ಹುಳು - ಪಿಜ್ಜಾ, ಬರ್ಗರ್ ಪ್ರಿಯರಿಗೆ ವೈದ್ಯರ ಎಚ್ಚರಿಕೆ

ಎಲೆಕೋಸಿನಲ್ಲಿರುವ ಹುಳುವಿನಿಂದಾಗಿ 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ. ಸರಿಯಾಗಿ ತೊಳೆಯದ ಎಲೆಕೋಸನ್ನು ಸೇವಿಸಿದ್ದರಿಂದ, ಅದರಲ್ಲಿನ ಪರಾವಲಂಬಿ ಕೀಟವು ಆಕೆಯ ಮೆದುಳನ್ನು ಸೇರಿ ಮಾರಣಾಂತಿಕವಾಗಿ ಪರಿಣಮಿಸಿದೆ.  

Read Full Story

03:09 PM (IST) Jan 13

ಮೇರಿ ಕೋಮ್ ಅಕ್ರಮ ಸಂಬಂಧ ಬಹಿರಂಗಪಡಿಸಿದ ಪತಿ, ಬೀದಿ ಜಗಳವಾದ ಡಿವೋರ್ಸ್ ಕಲಹ

ಮೇರಿ ಕೋಮ್ ಅಕ್ರಮ ಸಂಬಂಧ ಬಹಿರಂಗಪಡಿಸಿದ ಪತಿ, 2013, 2017ರಲ್ಲಿನ ಮೇರಿ ಕೋಮ್ ಅಫೈರ್ ಕುರಿತ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಪತಿ ವಿರುದ್ದ ಮೇರಿ ಕೋಮ್ ಮಾಡಿದ ಆರೋಪದ ಬೆನ್ನಲ್ಲೇ ಇದೀಗ ಕಲಹ ಬೀದಿ ಜಗಳವಾಗಿದೆ.

 

Read Full Story

03:05 PM (IST) Jan 13

ಆನ್‌ಲೈನ್‌ನಲ್ಲಿ ಬುಕ್‌ ಮಾಡಿದ್ರೆ ಇನ್ನು 10 ನಿಮಿಷದಲ್ಲಿ ಡೆಲಿವರಿ ಇರೋದಿಲ್ಲ!

No More 10-Minute Delivery: Blinkit, Zepto, Zomato Drop Time Deadline ಕೇಂದ್ರ ಕಾರ್ಮಿಕ ಸಚಿವರ ಮಧ್ಯಸ್ಥಿಕೆಯ ನಂತರ, ಡೆಲಿವರಿ ಏಜೆಂಟ್‌ಗಳ ಸುರಕ್ಷತೆಯ ಕಾಳಜಿಯಿಂದಾಗಿ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಬ್ಲಿಂಕಿಟ್ ತನ್ನ '10 ನಿಮಿಷಗಳ ಡೆಲಿವರಿ' ಜಾಹೀರಾತನ್ನು ಹಿಂಪಡೆದಿದೆ. 

Read Full Story

02:28 PM (IST) Jan 13

ರೈಲ್ವೆ ಟಿಕೆಟ್ ಬುಕಿಂಗ್‌ನಲ್ಲಿ ಹೊಸ ರೂಲ್ಸ್; ಇನ್ಮುಂದೆ ಇದು ಕಡ್ಡಾಯ, ಪ್ರಯಾಣಿಕರೇ ಹುಷಾರ್

ಭಾರತೀಯ ರೈಲ್ವೆ, ಜನವರಿ 12, 2026 ರಿಂದ ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಯನ್ನು ಜಾರಿಗೆ ತಂದಿದೆ. ಈ ಕ್ರಮವು ನಕಲಿ ಖಾತೆಗಳು ಮತ್ತು ಏಜೆಂಟರ ಹಸ್ತಕ್ಷೇಪವನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

Read Full Story

02:20 PM (IST) Jan 13

ಹೊಸ ಟಾಟಾ ಪಂಚ್ ಫೇಸ್‌ಲಿಫ್ಟ್‌ - ರಸ್ತೆಗಿಳಿದ ಅಚ್ಚರಿಯ ಪವರ್‌ಪ್ಯಾಕ್ - ಬೆಲೆ ಕೇವಲ 5.59 ಲಕ್ಷ ವಿಶೇಷತೆ ಏನು?

ಟಾಟಾ ಮೋಟಾರ್ಸ್ ಭಾರತದಲ್ಲಿ ಹೊಸ ಟಾಟಾ ಪಂಚ್ ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಮಾದರಿಯು ನವೀಕರಿಸಿದ ವಿನ್ಯಾಸ, ಹಲವು ಹೊಸ ಬಣ್ಣಗಳು, ಸುಧಾರಿತ ಒಳಾಂಗಣ ವೈಶಿಷ್ಟ್ಯಗಳು, 5-ಸ್ಟಾರ್ ಸುರಕ್ಷತಾ ರೇಟಿಂಗ್ ಮತ್ತು ಹೊಸ 1.2 ಲೀಟರ್ ಐಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ.

Read Full Story

01:58 PM (IST) Jan 13

ಭಾರತದಲ್ಲಿನ ಜನರೊಂದಿಗೆ ಎಚ್ಚರಿಕೆಯಿಂದಿರಿ - ರೀಲ್ಸ್ ಮಾಡಿದ ಪ್ರವಾಸಿ ವಿದೇಶಿ ಮಹಿಳೆ

ಭಾರತಕ್ಕೆ ಭೇಟಿ ನೀಡಿದ ಜೆನ್ನಿ ಆಡಂ ಎಂಬ ವಿದೇಶಿ ಪ್ರವಾಸಿ ಮಹಿಳೆ, ಭಾರತೀಯರೊಂದಿಗೆ ಎಚ್ಚರಿಕೆಯಿಂದಿರಿ ಎಂದು ಸಲಹೆ ನೀಡಿದ ರೀಲ್ಸ್ ಮಾಡಿದ್ದಾರೆ. ಈ ವೈರಲ್ ವಿಡಿಯೋ ಭಾರತೀಯರ ಅತಿಥಿ ಸತ್ಕಾರವನ್ನು ಜಗತ್ತಿಗೆ ಸಾರಿದೆ.

Read Full Story

01:30 PM (IST) Jan 13

ಇರಾನ್‌ ಜೊತೆಗಿನ ವ್ಯಾಪಾರಕ್ಕೆ ಶೇ. 25ರಷ್ಟು ತೆರಿಗೆ ಘೋಷಿಸಿದ ಟ್ರಂಪ್‌, ಭಾರತದ ಮೇಲೂ ಪರಿಣಾಮ

ಇರಾನ್ ಜೊತೆ ವ್ಯವಹಾರ ನಡೆಸುವ ದೇಶಗಳ ಮೇಲೆ ಶೇ.25ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ನಿರ್ಧಾರವು ಚೀನಾ, ಯುಎಇ ಮತ್ತು ಭಾರತದಂತಹ ಪ್ರಮುಖ ವ್ಯಾಪಾರ ಪಾಲುದಾರರ ಮೇಲೆ ಪರಿಣಾಮ ಬೀರಲಿದೆ.

Read Full Story

01:18 PM (IST) Jan 13

ಕಿವೀಸ್ ಎದುರಿನ 2ನೇ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಎರಡು ಮೇಜರ್ ಚೇಂಜ್? ಸುಂದರ್ ಬದಲಿಗೆ ಯಾರಿಗೆ ಸಿಗುತ್ತೆ ಚಾನ್ಸ್?

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯ ಗೆದ್ದ ಭಾರತ, ಇದೀಗ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ಗಾಯಗೊಂಡಿರುವ ವಾಷಿಂಗ್ಟನ್ ಸುಂದರ್ ಬದಲಿಗೆ ಆಯುಷ್ ಬದೋನಿ, ನಿತೀಶ್ ಕುಮಾರ್ ರೆಡ್ಡಿ ರೇಸ್‌ನಲ್ಲಿದ್ದರೆ, ದುಬಾರಿಯಾಗಿದ್ದ ಪ್ರಸಿದ್ದ್ ಕೃಷ್ಣ ಬದಲಿಗೆ ಅರ್ಶದೀಪ್ ಸಿಂಗ್‌ಗೆ ಅವಕಾಶ ಸಿಗುವ ಸಾಧ್ಯತೆಯಿದೆ.
Read Full Story

12:24 PM (IST) Jan 13

Glaucoma - ಸದ್ದಿಲ್ಲದೇ ಕಣ್ಣು ಕುರುಡಾಗಿಸುವ ಕಾಯಿಲೆ - ಮೊದಲೇ ಎಚ್ಚೆತ್ತುಕೊಳ್ಳುವುದು ಹೇಗೆ? ಲಕ್ಷಣಗಳೇನು?

ಗ್ಲುಕೋಮಾ ಯಾವುದೇ ಆರಂಭಿಕ ಲಕ್ಷಣಗಳಿಲ್ಲದೆ ಸದ್ದಿಲ್ಲದೆ ದೃಷ್ಟಿಯನ್ನು ಹಾನಿಗೊಳಿಸುವ ಕಾಯಿಲೆಯಾಗಿದೆ. ಇದು ಆಪ್ಟಿಕ್ ನರವನ್ನು ಹಾನಿಗೊಳಿಸಿ ಶಾಶ್ವತ ದೃಷ್ಟಿ ನಷ್ಟಕ್ಕೆ ಕಾರಣವಾಗುತ್ತದೆ, ಇದು ಸಾಮಾನ್ಯವಾಗಿ ರೋಗವು ಮುಂದುವರಿದ ಹಂತದಲ್ಲಿದ್ದಾಗ ಮಾತ್ರ ಪತ್ತೆಯಾಗುತ್ತದೆ. 

Read Full Story

11:59 AM (IST) Jan 13

ಬ್ಯಾಂಕ್ ಖಾತೆಯಿಂದಲೇ ಟ್ರಾಫಿಕ್ ದಂಡ ಕಟ್? ಸಿಎಂ ರೇವಂತ್‌ ರೆಡ್ಡಿ ಹೊಸ ಪ್ಲಾನ್

ಅತಿವೇಗದ ಚಾಲನೆಗೆ ಚಲನ್ ವಿಧಿಸಿ, ವರ್ಷದ ಕೊನೆಯಲ್ಲಿ ಅದರಿಂದ ವಿನಾಯಿತಿ ಪಡೆಯುತ್ತೀರಿ. ಇದರಿಂದ, ವರ್ಷಾಂತ್ಯದಲ್ಲಿ ಪೊಲೀಸರು ರಿಯಾಯಿತಿ ನೀಡುತ್ತಾರೆ ಎಂದು ಜನರು ಭಾವಿಸುತ್ತಾರೆ ಮತ್ತು ಅವರು ಅದನ್ನು ಸುಲಭವಾಗಿ ತೆಗೆದುಕೊಳ್ಳುತ್ತಾರೆ ಎಂದು ಸಿಎಂ ಹೇಳಿದ್ದಾರೆ.

 

Read Full Story

11:34 AM (IST) Jan 13

IPL 2026 - RCB ಹೋಮ್‌ ಗ್ರೌಂಡ್‌ ಕುರಿತಾದ ಮಹತ್ವದ ಅಪ್‌ಡೇಟ್ಸ್‌; ಪುಣೆಯಲ್ಲ, ಈ 2 ಸ್ಟೇಡಿಯಂನಲ್ಲೇ ನಡೆಯುತ್ತೆ ಬೆಂಗಳೂರು ಮ್ಯಾಚ್!

2025ರ ಐಪಿಎಲ್ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ದುರಂತದ ಬಳಿಕ, ಆರ್‌ಸಿಬಿ 2026ರ ಐಪಿಎಲ್‌ಗೆ ಹೊಸ ತವರು ಮೈದಾನದ ಹುಡುಕಾಟದಲ್ಲಿದೆ. ಸುರಕ್ಷತಾ ವರದಿಯಿಂದಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ಆಯೋಜನೆ ಅಲಭ್ಯವಾಗಿದೆ.

Read Full Story

10:36 AM (IST) Jan 13

ನಮ್ಮಿಬ್ಬರ ಪ್ರೀತಿ ರಿಯಾಲಿಟಿ ಶೋಗೆ ಸೀಮಿತವಾಗಿತ್ತು; ಸತ್ಯ ಒಪ್ಪಿಕೊಂಡ ಕಾಮಿಡಿಯನ್

ಜಬರ್ದಸ್ತ್ ಶೋ ಮೂಲಕ ಜನಪ್ರಿಯರಾದ ಸುಧೀರ್ ಮತ್ತು ರಶ್ಮಿ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಇದೀಗ, ಸುಧೀರ್ ಅವರು ತಮ್ಮಿಬ್ಬರ ನಡುವಿನ ಲವ್ ಟ್ರ್ಯಾಕ್ ಕೇವಲ ಶೋಗಾಗಿ ಮಾತ್ರ ಸೀಮಿತವಾಗಿತ್ತು ಎಂದು ಸ್ಪಷ್ಟಪಡಿಸುವ ಮೂಲಕ ವರ್ಷಗಳ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.
Read Full Story

10:12 AM (IST) Jan 13

ವಿದೇಶಿ ಗರ್ಲ್‌ಫ್ರೆಂಡ್‌ ಜತೆ ಗೋವಾದಲ್ಲಿ ಶಿಖರ್ ಧವನ್ ಎಂಗೇಜ್‌ಮೆಂಟ್! ಗಬ್ಬರ್‌ ಸಿಂಗ್ ಪೋಸ್ಟ್ ವೈರಲ್

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಶಿಖರ್ ಧವನ್ ತಮ್ಮ ವಿದೇಶಿ ಗೆಳತಿ ಸೋಫಿ ಶೈನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಈ ಸುದ್ದಿಯನ್ನು ಖಚಿತಪಡಿಸಿದ್ದು, ಈ ಮೂಲಕ ತಮ್ಮ ಸಂಬಂಧದ ಕುರಿತ ಎಲ್ಲಾ ಊಹಾಪೋಹಗಳಿಗೆ ಅವರು ತೆರೆ ಎಳೆದಿದ್ದಾರೆ.
Read Full Story

10:08 AM (IST) Jan 13

110ನೇ ವಯಸ್ಸಲ್ಲಿ ತಂದೆಯಾಗಿದ್ದ ಸೌದಿಯ ಹಿರಿಯ ನಾಗರಿಕ ಶೇಖ್ ನಾಸರ್ ನಿಧನ

ಸೌದಿ ಅರೇಬಿಯಾದ ಅತ್ಯಂತ ಹಿರಿಯ ನಾಗರಿಕರಾಗಿದ್ದ ಶೇಖ್ ನಾಸರ್ ಬಿನ್ ರದ್ದಾನ್ ಅಲ್ ರಶೀದ್ ತಮ್ಮ 142ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ತಮ್ಮ 110ನೇ ವಯಸ್ಸಿನಲ್ಲಿ ಮದುವೆಯಾಗಿ ತಂದೆಯಾಗುವ ಮೂಲಕ ಜಗತ್ತನ್ನೇ ಬೆರಗುಗೊಳಿಸಿದ್ದ ಅವರು, ಆಧುನಿಕ ಸೌದಿಯ ಎಲ್ಲಾ ರಾಜರ ಆಳ್ವಿಕೆಗೆ ಸಾಕ್ಷಿಯಾಗಿದ್ದರು.
Read Full Story

09:04 AM (IST) Jan 13

ವಿರಾಟ್ ಕೊಹ್ಲಿ ಫ್ಯಾನ್ಸ್ ಮೇಲೆ ಸಿಟ್ಟಾಗಿದ್ದೇಕೆ? ಅಷ್ಟಕ್ಕೂ ಸ್ಟೇಡಿಯಂನಲ್ಲಿ ಆಗಿದ್ದೇನು?

ವಡೋದರಾ: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿಗೆ ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಕೊಹ್ಲಿಯೂ ತನ್ನ ಅಭಿಮಾನಿಗಳನ್ನು ಗೌರವಿಸುತ್ತಾ ಬಂದಿದ್ದಾರೆ. ಆದರೆ ಇದೀಗ ವಿರಾಟ್ ಕೊಹ್ಲಿ ತಮ್ಮ ಫ್ಯಾನ್ಸ್ ಮೇಲೆ ಸಿಟ್ಟಾಗಿದ್ದಾರೆ. ಯಾಕೆ? ಏನಾಯ್ತು?

 

Read Full Story

More Trending News