LIVE NOW
Published : Feb 12, 2026, 07:08 AM ISTUpdated : Feb 12, 2026, 10:36 AM IST

India Latest News Live: ಬಂಗಾರ ಖರೀದಿಸುವವರಿಗೆ ಗುಡ್‌ ನ್ಯೂಸ್; ಒಂದೇ ದಿನ 1200 ರುಪಾಯಿ ಕುಸಿತ! ಬೆಂಗಳೂರಲ್ಲಿಂದು ಚಿನ್ನದ ಬೆಲೆ ಎಷ್ಟು?

ಸಾರಾಂಶ

ನ್ಯೂಯಾರ್ಕ್‌/ ವಾಷಿಂಗ್ಟನ್‌: ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಈಗಾಗಲೇ 80ಕ್ಕೂ ಹೆಚ್ಚು ಸಲ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಯುದ್ಧದ ವೇಳೆ 10 ವಿಮಾನಗಳನ್ನು ಹೊಡೆದುರುಳಿಸಲಾಯಿತು’ ಎಂದಿದ್ದಾರೆ. ಇದೇ ವೇಳೆ ಟ್ರಂಪ್‌, ‘ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಪ್‌ ಅವರು ಯುದ್ಧ ನಿಲ್ಲಿಸಿದ್ದರಿಂದ 1 ಕೋಟಿ ಮಂದಿ ಜೀವ ಉಳಿಯಿತು ಎಂದು ನನ್ನಲ್ಲಿ ಹೇಳಿದ್ದರು’ ಎಂದಿದ್ದಾರೆ.

Gold Price Today

10:36 AM (IST) Feb 12

ಬಂಗಾರ ಖರೀದಿಸುವವರಿಗೆ ಗುಡ್‌ ನ್ಯೂಸ್; ಒಂದೇ ದಿನ 1200 ರುಪಾಯಿ ಕುಸಿತ! ಬೆಂಗಳೂರಲ್ಲಿಂದು ಚಿನ್ನದ ಬೆಲೆ ಎಷ್ಟು?

ಬೆಂಗಳೂರು: ಕಳೆದ ನಾಲ್ಕೈದು ದಿನಗಳಿಂದ ಗಗನದತ್ತ ಮುಖಮಾಡಿದ ಚಿನ್ನದ ದರದಲ್ಲಿ ಭರ್ಜರಿ ಕುಸಿತ ಕಂಡಿದ್ದು, ಇಂದು ದೊಡ್ಡ ಮೊತ್ತದ ಇಳಿಕೆ ಕಂಡಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ. ಹಾಗಿದ್ದರೇ ಫೆಬ್ರವರಿ 12ರ ಬೆಳಗ್ಗೆ ಚಿನ್ನ ಬೆಲೆ ಎಷ್ಟು ನೋಡೋಣ ಬನ್ನಿ.

Read Full Story

09:45 AM (IST) Feb 12

ಅಪ್ಪ-ಅಮ್ಮನ ಮಾತು ಕೇಳದೇ ಅಜಿತ್ ಜೊತೆ ಹೋದ ಸನಾ - ಚಿತೆಯಲ್ಲಿ ಸುಡುತ್ತಿದ್ದ ಮಗಳ ಶವ ತೆಗೆದ ಪೋಷಕರು!

ಪೋಷಕರ ವಿರೋಧದ ನಡುವೆ ಅನ್ಯಕೋಮಿನ ಅಜಿತ್‌ನನ್ನು ಪ್ರೀತಿಸಿ ಮದುವೆಯಾಗಿದ್ದ ಸನಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಕ್ಷಯರೋಗದಿಂದ ಮೃತಪಟ್ಟಿದ್ದಾಳೆಂದು ಪತಿ ಹೇಳಿದರೆ, ಇದು ಕೊ*ಲೆ ಎಂದು ಪೋಷಕರು ಆರೋಪಿಸಿದ್ದು, ಚಿತೆಯಲ್ಲಿ ಸುಡುತ್ತಿದ್ದ ಶವವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Read Full Story

08:59 AM (IST) Feb 12

ಒಂದೇ ಆರ್ಡರ್‌ನಿಂದ ಗಗನಕ್ಕೇರಿದ ಷೇರು ಬೆಲೆ; ಹೂಡಿಕೆದಾರರಿಗೆ ಶೇ.7950 ರಿಟರ್ನ್ ನೀಡಿದ ಮಲ್ಟಿಬ್ಯಾಗರ್ ಸ್ಟಾಕ್

ಕಂಪನಿಯು 135 ಕೋಟಿ ರೂಪಾಯಿ ಮೌಲ್ಯದ ಹೊಸ ಆರ್ಡರ್ ಪಡೆದ ನಂತರ ಅದರ ಷೇರುಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ಕಳೆದ ಐದು ವರ್ಷಗಳಲ್ಲಿ ಹೂಡಿಕೆದಾರರಿಗೆ ಶೇ.7950 ರಷ್ಟು ಲಾಭ ನೀಡಿರುವ ಈ ಮಲ್ಟಿಬ್ಯಾಗರ್ ಷೇರು, ಫೆಬ್ರವರಿ 11 ರಂದು 5% ಅಪ್ಪರ್ ಸರ್ಕ್ಯೂಟ್ ತಲುಪಿದೆ.

Read Full Story

08:58 AM (IST) Feb 12

ಈ 5 ದಿನಾಂಕಗಳಲ್ಲಿ ಹುಟ್ಟಿದ್ರೆ ಅದೃಷ್ಟ ನಿಮ್ಮ ಕಾಲು ಬುಡದಲ್ಲಿರುತ್ತೆ; ಸರ್ಕಾರಿ ಉದ್ಯೋಗ ಹುಡುಕಿಕೊಂಡು ಬರುತ್ತೆ!

ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿಯೊಂದು ಜನ್ಮ ದಿನಾಂಕಕ್ಕೂ ಒಬ್ಬ ಅಧಿಪತಿ ಗ್ರಹ ಇರುತ್ತದೆ. ಕೆಲವು ವಿಶೇಷ ದಿನಾಂಕಗಳಲ್ಲಿ ಜನಿಸಿದವರಿಗೆ ಗ್ರಹಗಳ ಅನುಗ್ರಹ ಹುಟ್ಟಿನಿಂದಲೇ ಇರುತ್ತದೆ. ಇವರಿಗೆ ಅದೃಷ್ಟ ಕೂಡ ಹೆಚ್ಚಾಗಿರುತ್ತೆ. ಆ ದಿನಾಂಕಗಳು ಯಾವುವು ಅಂತ ನೋಡೋಣ ಬನ್ನಿ.

 

Read Full Story

08:54 AM (IST) Feb 12

ಹೇರ್‌ ಕಟ್‌ ವೇಳೆ ಸಲೂನ್ ಎಡವಟ್ಟು - ಮಾಡೆಲ್‌ಗೆ 25 ಲಕ್ಷ ರೂ. ಪರಿಹಾರ ನೀಡಲು ಸುಪ್ರೀಂಕೋರ್ಟ್ ಆದೇಶ

ತಾನು ಹೇಳಿದ್ದಕ್ಕಿಂತ ಹೆಚ್ಚು ಕೂದಲು ಕತ್ತರಿಸಿದ ದೆಹಲಿಯ ಐಟಿಸಿ ಮೌರ್ಯ ಸಲೂನ್ ವಿರುದ್ಧ ಮಾಡೆಲ್ ಆಶ್ನಾ ರಾಯ್ ದೂರು ದಾಖಲಿಸಿದ್ದರು. ಹಲವು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ನಂತರ ಅಂತಿಮವಾಗಿ 25 ಲಕ್ಷ ರೂಪಾಯಿ ಪರಿಹಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Read Full Story

08:33 AM (IST) Feb 12

ಆಸ್ಪತ್ರೆಯಿಂದ ಅಭಿಷೇಕ್ ಶರ್ಮಾ ಡಿಸ್ಚಾರ್ಜ್! ಪಾಕ್ ಬೌಲರ್‌ಗಳಿಗೆ ಶುರುವಾಗಿದೆ ನಡುಕ!

ಟೀಮ್ ಇಂಡಿಯಾ ಸ್ಟಾರ್ ಓಪನರ್ ಅಭಿಷೇಕ್ ಶರ್ಮಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಅವರು ಚೇತರಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಇದು ಭಾರತ ತಂಡಕ್ಕೆ ದೊಡ್ಡ ಬೂಸ್ಟ್ ನೀಡಿದೆ.

Read Full Story

08:24 AM (IST) Feb 12

ಫೆಬ್ರವರಿ 28ರಂದು ಅಪರೂಪದ ಖಗೋಳ ವಿದ್ಯಮಾನ; ಆಕಾಶದಲ್ಲಿ ನಡೆಯಲಿದೆ 6 ಗ್ರಹಗಳ ವಿಸ್ಮಯ

Astronomical Phenomenon: ಫೆಬ್ರವರಿ 28 ರಂದು ಆರು ಗ್ರಹಗಳು ಆಕಾಶದಲ್ಲಿ ಒಂದೇ ನೇರ ರೇಖೆಯಲ್ಲಿ ಕಾಣಿಸಿಕೊಳ್ಳುವ 'ಗ್ರಹಗಳ ಮೆರವಣಿಗೆ' ಎಂಬ ಅಪರೂಪದ ಖಗೋಳ ವಿದ್ಯಮಾನ ಸಂಭವಿಸಲಿದೆ. ಸೂರ್ಯಾಸ್ತದ ನಂತರ ಗೋಚರಿಸುವ ಈ ದೃಶ್ಯವನ್ನು ಭಾರತದಲ್ಲಿಯೂ ಕಾಣಲಿದೆ.

Read Full Story

07:41 AM (IST) Feb 12

ಮದುವೆಗೆ ಬಂದ ಅತಿಥಿಗಳಿಗೆ ಚಿನ್ನದ ಬಿಸ್ಕಟ್ ಹಂಚಿದ ವಧುವಿನ ಸೋದರ; ವಿಡಿಯೋ ನೋಡಿ ನೆಟ್ಟಿಗರಿಂದ ಮನವಿ

ಸೌದಿ ಅರೇಬಿಯಾದ ಮದುವೆಯೊಂದರಲ್ಲಿ ಅತಿಥಿಗಳಿಗೆ ವಧುವಿನ ಸಹೋದರ ಚಿನ್ನದ ಬಿಸ್ಕಟ್‌ಗಳನ್ನು ಉಡುಗೊರೆಯಾಗಿ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಮಾರು 100 ಗ್ರಾಂ ತೂಕದ ಈ ಚಿನ್ನದ ಉಡುಗೊರೆಯನ್ನು ನೀಡಲಾಗಿದೆ.

Read Full Story

More Trending News