ನ್ಯೂಯಾರ್ಕ್/ ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಈಗಾಗಲೇ 80ಕ್ಕೂ ಹೆಚ್ಚು ಸಲ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಯುದ್ಧದ ವೇಳೆ 10 ವಿಮಾನಗಳನ್ನು ಹೊಡೆದುರುಳಿಸಲಾಯಿತು’ ಎಂದಿದ್ದಾರೆ. ಇದೇ ವೇಳೆ ಟ್ರಂಪ್, ‘ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಪ್ ಅವರು ಯುದ್ಧ ನಿಲ್ಲಿಸಿದ್ದರಿಂದ 1 ಕೋಟಿ ಮಂದಿ ಜೀವ ಉಳಿಯಿತು ಎಂದು ನನ್ನಲ್ಲಿ ಹೇಳಿದ್ದರು’ ಎಂದಿದ್ದಾರೆ.

11:12 PM (IST) Feb 12
Kim Jong Un Names Daughter Kim Ju Ae as Official Successor ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಮ್ಮ 13 ವರ್ಷದ ಮಗಳು ಕಿಮ್ ಜು ಏ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ್ದಾರೆ ಎಂದು ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆ ತಿಳಿಸಿದೆ.
10:48 PM (IST) Feb 12
India Defeats Namibia by 93 Runs: T20 World Cup 2026 Match Update ಟಿ20 ವಿಶ್ವಕಪ್ ಪಂದ್ಯದಲ್ಲಿ, ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ನಮೀಬಿಯಾ ವಿರುದ್ಧ 93 ರನ್ಗಳ ಭರ್ಜರಿ ಜಯ ಸಾಧಿಸಿದೆ.
10:37 PM (IST) Feb 12
IPL Betting Case: Madras HC Orders MS Dhoni to Pay ₹10 Lakh 2013 ರ ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ತಮ್ಮನ್ನು ನಂಟು ಮಾಡಿದ್ದಕ್ಕಾಗಿ ಎಂಎಸ್ ಧೋನಿ 100 ಕೋಟಿ ರೂಪಾಯಿ ಪರಿಹಾರ ಕೋರಿದ್ದಾರೆ.
10:00 PM (IST) Feb 12
Will Abhishek Sharma Miss India vs Pakistan Clash? Surya Gives Update ಟೀಮ್ ಇಂಡಿಯಾದ ಸ್ಫೋಟಕ ಓಪನರ್ ಅಭಿಷೇಕ್ ಶರ್ಮಾ ಅವರ ಆರೋಗ್ಯದ ಬಗ್ಗೆ ನಾಯಕ ಸೂರ್ಯಕುಮಾರ್ ಯಾದವ್ ನೀಡಿರುವ ಅಪ್ಡೇಟ್, ಪಾಕಿಸ್ತಾನ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದ ಕುರಿತು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
09:49 PM (IST) Feb 12
ವೈದ್ಯರು ತನಗೆ ಗಂಡು ಮಗು ಜನಿಸಿದೆ ಎಂದು ಸುಳ್ಳು ಹೇಳಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
09:13 PM (IST) Feb 12
Sawalkot Dam: India's ₹5,129 Cr Project Ignites Tension with Pakistan ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಶಿಕ್ಷೆಯ ಕ್ರಮವಾಗಿ ಕಳೆದ ವರ್ಷ ಸಿಂಧೂ ಜಲ ಒಪ್ಪಂದವನ್ನು (ಐಡಬ್ಲ್ಯೂಟಿ) ಸ್ಥಗಿತಗೊಳಿಸಿದ ನಂತರ ಭಾರತವು ಸಾವಲ್ಕೋಟ್ ಮೆಗಾ ಅಣೆಕಟ್ಟು ಯೋಜನೆಯ ಕೆಲಸವನ್ನು ಪ್ರಾರಂಭಿಸಿದೆ.
09:10 PM (IST) Feb 12
ಭಾರತದ ಶೇ.62ರಷ್ಟು ಜೆನ್ಝಿ, ಮಿಲೇನಿಯಲ್ಸ್ಗೆ ಚಿನ್ನ ಖರೀದಿ ಮೊದಲ ಆಯ್ಕೆ, ಹೂಡಿಕೆ ರಹಸ್ಯ ಬಯಲಾಗಿದೆ. ಯುವ ಸಮೂಹ ಹೂಡಿಕೆ ವಿಚಾರದಲ್ಲಿ ಚಿನ್ನವನ್ನೇ ಆಯ್ಕೆ ಮಾಡುತ್ತಿದ್ದಾರೆ. ಸ್ಮೈಟನ್ ಪಲ್ಸ್ ಎಐ ಸರ್ವೇ ಮಾಹಿತಿ ಇಲ್ಲಿದೆ.
08:44 PM (IST) Feb 12
ಯುಎಇ ಜೈಲಿನಲ್ಲಿ 18 ತಿಂಗಳಿಂದ ಬಂಧನದಲ್ಲಿರುವ ಸಹೋದರ ವಿಕ್ರಾಂತ್ ಜೇಟ್ಲಿ ಬಿಡುಗಡೆಗೆ ನಟಿ ಸೆಲೀನಾ ಜೇಟ್ಲಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣದ ವಿಚಾರಣೆ ವೇಳೆ ಸೆಲೀನಾ ಮತ್ತು ಅವರ ಅತ್ತಿಗೆ ಚಾರುಲ್ ಜೇಟ್ಲಿ ನಡುವಿನ ಕಲಹ ಬಹಿರಂಗವಾಗಿದೆ.
07:28 PM (IST) Feb 12
ನಿಫಾ ವೈರಸ್ನಿಂದ ಆಸ್ಪತ್ರೆ ದಾಖಲಾದ ಬಂಗಾಳದ ನರ್ಸ್ ಹೃದಯಾಘಾತಕ್ಕೆ ಬಲಿ, ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ನಿಫಾ ವೈರಸ್ ಭೀತಿ ಆವರಿಸಿದೆ. ನರ್ಸ್ ಸಾವಿನ ಬೆನ್ನಲ್ಲೇ ಎಲ್ಲೆಡೆ ಅಲರ್ಟ್ ಪರಿಸ್ಥಿತಿ ನಿರ್ಮಾಣವಾಗಿದೆ.
07:00 PM (IST) Feb 12
06:54 PM (IST) Feb 12
ಟಿ20 ವಿಶ್ವಕಪ್ ನಡುವೆ ಭಾರತಕ್ಕೆ ಅಂಟಿತಾ ಕಳಂಕ? ಕುಡಿದು ಬಿಟ್ಟ ಕೂಲ್ ಡ್ರಿಂಗ್ಸ್ ಮರುಬಳಕೆ ವಿವಾದ ಜೋರಾಗಿದೆ. ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ವಿಡಿಯೋ ಒಂದು ಭಾರಿ ಕೋಲಾಹಲ ಸೃಷ್ಟಿಸಿದೆ.
06:46 PM (IST) Feb 12
06:24 PM (IST) Feb 12
ವಾಸ್ತು ಪ್ರಕಾರ, ಮನೆಯಲ್ಲಿ ಪೂಜಾ ಕೋಣೆಗೆ ವಿಶೇಷ ಸ್ಥಾನವಿದೆ. ಇಲ್ಲಿ ಇಡುವ ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ಮಹತ್ವವಿದೆ. ವಾಸ್ತು ಪ್ರಕಾರ, ಕೆಲವು ವಸ್ತುಗಳನ್ನು ಇಡುವುದರಿಂದ ದೇವರು ಪ್ರಸನ್ನರಾಗುತ್ತಾರೆ. ಹೀಗಾಗಿ ಈ ನಾಲ್ಕು ವಸ್ತುಗಳನ್ನು ತಪ್ಪದೇ ಮನೆಯ ದೇವರ ಕೋಣೆಯಲ್ಲಿಡಿ.
06:10 PM (IST) Feb 12
ನಾಲ್ವರಿದ್ದ ಹೆಲಿಕಾಪ್ಟರ್ ವಿದ್ಯಾರ್ಥಿಗಳಿದ್ದ ಶಾಲಾ ಮೈದಾನದಲ್ಲಿ ತುರ್ತು ಭೂಸ್ವರ್ಶ ಮಾಡಿದೆ. ತಾಂತ್ರಿಕ ಸಮಸ್ಯೆಯಿಂದ ಹೆಲಿಕಾಪ್ಟರ್ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿತ್ತು. ಭಯಾಕನ ವಿಡಿಯೋ ಸೆರೆಯಾಗಿದೆ.
05:31 PM (IST) Feb 12
ಕುಡಿದ ಮತ್ತಿನಲ್ಲಿ ಪೊಲೀಸಪ್ಪನ ಅವಾಂತರಕ್ಕೆ 24ರ ಯುವತಿ ದುರಂತ ಸಾವು ಕಂಡಿದ್ದಾಳೆ. ಪೊಲೀಸ್ ಎಂದು ಕಂಠಪೂರ್ತಿ ಕುಡಿದಿದ್ದಾನೆ. ಆದರೆ ಈತನ ಆಟಾಟೋಪಕ್ಕೆ ಯುವತಿ ಸ್ಥಳದಲ್ಲೆ ಮೃತಪಟ್ಟಿದ್ದಾಳೆ.
05:17 PM (IST) Feb 12
ನವದೆಹಲಿ: ಕ್ಯಾಬ್ ಡ್ರೈವರ್ಗಳು ದಿನನಿತ್ಯದ ತಮ್ಮ ಜೀವನದಲ್ಲಿ ಹಲವು ವಿಚಿತ್ರ ಸನ್ನಿವೇಶಗಳನ್ನು ಎದುರಿಸುತ್ತಾರೆ. ಆದರೆ ಇದೀಗ ಇಸ್ಕಾನ್ ಟೆಂಪಲ್ಗೆ ಕ್ಯಾಬ್ ಬುಕ್ ಮಾಡಿ, ಆಮೇಲೆ ಸೆ*ಕ್ಸ್ ಆಫರ್ ಕೊಟ್ಟಿದ್ದಾರೆ. ಇದಾದ ಬಳಿಕ ಆಗಿದ್ದೇನು ಎನ್ನುವುದನ್ನು ನೋಡೋಣ ಬನ್ನಿ.
05:11 PM (IST) Feb 12
ಕೊಲೆಯಾಗಿದ್ದಾಳೆ ಎನ್ನಲಾದ ಹೆಂಡ್ತಿ ಮಾಡಿದ ಆಧಾರ್ ಕಾರ್ಡ್ ಅಪ್ಡೇಟ್ನಿಂದಾಗಿ ಈಗ ಆಕೆಯ ಪೋಷಕರು ಕೊಲೆ ಆರೋಪದಿಂದ ಮುಕ್ತರಾಗಿದ್ದರೆ, ಇತ್ತ ಸಂದೀಪ್ಗೆ ತನ್ನ ಪತ್ನಿ ಮಗ ಬದುಕಿರುವ ವಿಚಾರ ತಿಳಿದು ಖುಷಿ ದುಃಖ ಎರಡು ಜೊತೆ ಜೊತೆಗೆ ಆಗಿದೆ. ಅದೇಕೆ ಅಂತೀರಾ ಮುಂದೆ ಓದಿ
04:28 PM (IST) Feb 12
ಟಿ20 ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ನೋರಾ ಫತೇಹಿ ಅವರ ನೃತ್ಯವನ್ನು ಡ್ರೆಸ್ಸಿಂಗ್ ರೂಮ್ನಿಂದ ಸೂರ್ಯಕುಮಾರ್ ಯಾದವ್ ತದೇಕಚಿತ್ತದಿಂದ ವೀಕ್ಷಿಸುತ್ತಿದ್ದರು. ಇದೇ ವೇಳೆ, ಗ್ಯಾಲರಿಯಲ್ಲಿದ್ದ ಅವರ ಪತ್ನಿ ದಿವಿಶಾ ಶೆಟ್ಟಿ ಈ ದೃಶ್ಯವನ್ನು ವಿಡಿಯೋ ಮಾಡಿ ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ.
04:01 PM (IST) Feb 12
ಹಳೇ ಸಿನಿಮಾ ಹಾಡು, ಸಿಗರೇಟು; ನ್ಯೂಸ್ ಆ್ಯಂಕರ್ ಸಲ್ಮಾ ನಾಪತ್ತೆ ಹಾಗೂ ಕೊಲೆ ಪ್ರಕರಣದ ಕರಾಳ ಸತ್ಯ ಬಯಲಾಗಿದೆ. ಸಲ್ಮಾ ಕೊಲೆಯಾಗಿದ್ದು ಹೇಗೆ, ಭೀಕರ ಘಟನೆಯ ಇಂಚಿಂಚು ಮಾಹಿತಿ ಕೋರ್ಟ್ನಲ್ಲಿ ಅನಾವರಣಗೊಂಡಿದೆ.
04:01 PM (IST) Feb 12
03:23 PM (IST) Feb 12
03:09 PM (IST) Feb 12
ಮಿಲಿಯನ್ ಜನರ ಮೆಚ್ಚುಗೆಗಳಿಸಿದ ಯುವತಿ ಶಾಯರಿ, ವೈರಲ್ ವಿಡಿಯೋ ಹಿಂದಿದೆ ಬಿಗ್ ಟ್ವಿಸ್ಟ್, ಈಕೆಯ ನಗು, ಸೌಂದರ್ಯಕ್ಕೆ ಜನ ಮಾರುಹೋಗಿದ್ದಾರೆ. ಹೇಳಿದ ಕವಿತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಈ ವಿಡಿಯೋದಲ್ಲಿರುವ ಟ್ವಿಸ್ಟ್ ಏನು?
02:19 PM (IST) Feb 12
01:56 PM (IST) Feb 12
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯ ಹೊಸ್ತಿಲಲ್ಲಿ, ವಿಜಯ್ ಅವರ ಮಾಜಿ ಗೆಳತಿಯೊಂದಿಗಿನ ಹಳೆಯ ಫೋಟೋಗಳು ವೈರಲ್ ಆಗಿವೆ. ಈ ಹಿಂದೆ ರಕ್ಷಿತ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥ ಮುರಿಯಲು ಕಾರಣವಾದ ಘಟನೆಯಂತೆಯೇ, ಈಗ ರಶ್ಮಿಕಾ ಕೂಡ ಎದುರಿಸುತ್ತಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.
01:18 PM (IST) Feb 12
01:08 PM (IST) Feb 12
ಮಗಳ ಭಾವಿ ಪತಿ ರಾಹುಲ್ ಜೊತೆ ಪಲಾಯನ ಮಾಡಿ ಸುದ್ದಿಯಾಗಿದ್ದ ಅನಿತಾ ದೇವಿ, ಇದೀಗ ಆತನನ್ನೂ ತೊರೆದಿದ್ದಾಳೆ. ರಾಹುಲ್ನಿಂದ ದೂರವಾಗಿರುವ ಆಕೆ, ಸದ್ಯ ತನ್ನ ಮಾಜಿ ಪತಿಯ ಭಾವ ಜಿತೇಂದ್ರ ಕುಮಾರ್ ಎಂಬಾತನ ಜೊತೆ ವಾಸವಾಗಿದ್ದಾಳೆ. ಅನಿತಾ ದೇವಿ ಕೈ ಕೊಟ್ಟಿದ್ದಕ್ಕೆ ಪೊಲೀಸ್ ಠಾಣೆ ಸುತ್ತಾಟ
12:51 PM (IST) Feb 12
ಬಿಗ್ಬಾಸ್ ಕನ್ನಡ ಸೀಸನ್ 11ರ ರನ್ನರ್ ಅಪ್ ರಕ್ಷಿತಾಗೆ, ವರ್ತೂರ್ ಸಂತೋಷ್ ಅವರು 2 ಲಕ್ಷ ರೂಪಾಯಿಗಳ ಬದಲಾಗಿ ಎರಡು ಹಳ್ಳಿಕಾರ್ ಹಸುಗಳನ್ನು ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
12:23 PM (IST) Feb 12
ಚೆಕ್ ಬೌನ್ಸ್ ಪ್ರಕರಣದಿಂದಾಗಿ ಸುದ್ದಿಯಲ್ಲಿರುವ ನಟ ರಾಜಪಾಲ್ ಯಾದವ್ ಅವರ ವೈಯಕ್ತಿಕ ಜೀವನವೂ ಒಂದು ರೀತಿ ದುರಂತ ಕಥೆ. ಕೇವಲ 20ನೇ ವಯಸ್ಸಿನಲ್ಲಿ ಪತ್ನಿಯನ್ನು ಕಳೆದುಕೊಂಡರೂ, ಕುಟುಂಬದ ಬೆಂಬಲದಿಂದ ಅವರು ಜೀವನವನ್ನು ಮತ್ತೆ ಕಟ್ಟಿಕೊಂಡರು. ಅವರ ಕಥೆ ಕುಟುಂಬ ಮತ್ತು ಪ್ರೀತಿಗೆ ಒಂದೊಳ್ಳೆಯ ಉದಾಹರಣೆ.
12:22 PM (IST) Feb 12
ತನ್ನ ಮದುವೆಯ ದಿನ, ಬಾಲ್ಯದಿಂದ ತನ್ನನ್ನು ಸಾಕಿ ಬೆಳೆಸಿದ ಆಯಾ ಬಂದಿದ್ದನ್ನು ಕಂಡು ವಧುವೊಬ್ಬಳು ಭಾವುಕಳಾಗುತ್ತಾಳೆ. 'ಅಮ್ಮ' ಎಂದು ಕರೆಯುತ್ತಾ ಆಕೆಯನ್ನು ಅಪ್ಪಿ ಅಳುವ ವಧು ಮತ್ತು ಅವಳನ್ನು ಸಮಾಧಾನಿಸುವ ಆಯಾಳ ಈ ಭಾವನಾತ್ಮಕ ವಿಡಿಯೋ ವೈರಲ್ ಆಗಿದೆ.
12:20 PM (IST) Feb 12
ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರನ್ನು ಪ್ರಚೋದಿಸಿದ್ದಾರೆ ಎಂಬ ಕಿರಣ್ ರಿಜಿಜು ಅವರ ಆರೋಪವನ್ನು ಪ್ರಿಯಾಂಕಾ ಗಾಂಧಿ ವಾದ್ರಾ ತಳ್ಳಿಹಾಕಿದ್ದಾರೆ. ತಾನು ಶಾಂತವಾಗಿಯೇ ಮಾತನಾಡಿದ್ದೆ ಎಂದಿದ್ದಾರೆ. ಸಂಸದರು ತಮ್ಮ ಮೇಲೆ ನಿಂದನೆ ಮಾಡಿದ್ದಾರೆ ಎಂದು ರಿಜಿಜು ಆರೋಪಿಸಿದ್ದರು.
12:18 PM (IST) Feb 12
ಭಾರತದ ಮೊದಲ "ಸಂಗೀತ ರಸ್ತೆ"ಯನ್ನು ಉದ್ಘಾಟಿಸಲಾಗಿದೆ. ಈ 500 ಮೀಟರ್ ಉದ್ದದ ರಸ್ತೆಯ ಮೇಲೆ ವಾಹನಗಳು ನಿರ್ದಿಷ್ಟ ವೇಗದಲ್ಲಿ ಚಲಿಸಿದಾಗ, ಎ.ಆರ್. ರೆಹಮಾನ್ ಅವರ ಪ್ರಸಿದ್ಧ 'ಜೈ ಹೋ' ಗೀತೆಯ ಸ್ವರಗಳು ಕೇಳಿಸುತ್ತವೆ.
12:10 PM (IST) Feb 12
Flipkart Valentine's Day sale Offer: ಫ್ಲಿಪ್ಕಾರ್ಟ್, ಪ್ರೇಮಿಗಳ ದಿನದ ವಿಶೇಷ ಸೇಲ್ನಲ್ಲಿ ಐಫೋನ್ ಮೇಲೆ ಬರೋಬ್ಬರಿ ₹13,000 ಮೆಗಾ ಡಿಸ್ಕೌಂಟ್ ನೀಡುತ್ತಿದೆ. ಈ ಕುರಿತ ಪೂರ್ಣ ವಿವರ ಇಲ್ಲಿದೆ.
12:03 PM (IST) Feb 12
ಟಿ20 ವಿಶ್ವಕಪ್ನ ತನ್ನ ಎರಡನೇ ಪಂದ್ಯದಲ್ಲಿ ಭಾರತ ತಂಡವು ನಮೀಬಿಯಾ ವಿರುದ್ಧ ಸೆಣಸಲಿದೆ. ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಇದೊಂದು ಪೂರ್ವಾಭ್ಯಾಸ ಪಂದ್ಯವಾಗಿದ್ದು, ಬ್ಯಾಟಿಂಗ್ ವೈಫಲ್ಯವನ್ನು ಸರಿಪಡಿಸಿಕೊಂಡು ಬೃಹತ್ ಗೆಲುವು ಸಾಧಿಸುವ ಗುರಿಯನ್ನು ಭಾರತ ಹೊಂದಿದೆ.
11:53 AM (IST) Feb 12
11:19 AM (IST) Feb 12
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿಂದು ಆತಿಥೇಯ ಭಾರತ ತಂಡವು ನಮೀಬಿಯಾ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಬಿಗ್ ಶಾಕ್ ಎದುರಾಗಿದ್ದು ಮತ್ತೊಬ್ಬ ಆಟಗಾರ ಗಾಯಗೊಂಡಿದ್ದಾನೆ. ಹೀಗಾಗಿ ಇಂದಿನ ಪಂದ್ಯಕ್ಕೆ ಭಾರತ ತಂಡವು ಮೂರು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ.
11:08 AM (IST) Feb 12
Poison Ladoo Murders Fakir Baba Arrested ದೆಹಲಿಯ ಪೀರಾಗಢಿಯಲ್ಲಿ ಕಾರಿನಲ್ಲಿ ಮೂರು ಶವಗಳು ಪತ್ತೆಯಾದ ಬಳಿಕ ಪೊಲೀಸರು ಫಕೀರ್ ಬಾಬಾನನ್ನು ಬಂಧಿಸಿದ್ದಾರೆ. ಈತ ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಒಟ್ಟು ಆರು ಕೊಲೆಗಳನ್ನು ಮಾಡಿರುವ ಶಂಕೆ ವ್ಯಕ್ತವಾಗಿದೆ.
10:36 AM (IST) Feb 12
ಬೆಂಗಳೂರು: ಕಳೆದ ನಾಲ್ಕೈದು ದಿನಗಳಿಂದ ಗಗನದತ್ತ ಮುಖಮಾಡಿದ ಚಿನ್ನದ ದರದಲ್ಲಿ ಭರ್ಜರಿ ಕುಸಿತ ಕಂಡಿದ್ದು, ಇಂದು ದೊಡ್ಡ ಮೊತ್ತದ ಇಳಿಕೆ ಕಂಡಿದೆ. ಆದರೆ ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ. ಹಾಗಿದ್ದರೇ ಫೆಬ್ರವರಿ 12ರ ಬೆಳಗ್ಗೆ ಚಿನ್ನ ಬೆಲೆ ಎಷ್ಟು ನೋಡೋಣ ಬನ್ನಿ.
09:45 AM (IST) Feb 12
ಪೋಷಕರ ವಿರೋಧದ ನಡುವೆ ಅನ್ಯಕೋಮಿನ ಅಜಿತ್ನನ್ನು ಪ್ರೀತಿಸಿ ಮದುವೆಯಾಗಿದ್ದ ಸನಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಕ್ಷಯರೋಗದಿಂದ ಮೃತಪಟ್ಟಿದ್ದಾಳೆಂದು ಪತಿ ಹೇಳಿದರೆ, ಇದು ಕೊ*ಲೆ ಎಂದು ಪೋಷಕರು ಆರೋಪಿಸಿದ್ದು, ಚಿತೆಯಲ್ಲಿ ಸುಡುತ್ತಿದ್ದ ಶವವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
08:59 AM (IST) Feb 12
ಕಂಪನಿಯು 135 ಕೋಟಿ ರೂಪಾಯಿ ಮೌಲ್ಯದ ಹೊಸ ಆರ್ಡರ್ ಪಡೆದ ನಂತರ ಅದರ ಷೇರುಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ಕಳೆದ ಐದು ವರ್ಷಗಳಲ್ಲಿ ಹೂಡಿಕೆದಾರರಿಗೆ ಶೇ.7950 ರಷ್ಟು ಲಾಭ ನೀಡಿರುವ ಈ ಮಲ್ಟಿಬ್ಯಾಗರ್ ಷೇರು, ಫೆಬ್ರವರಿ 11 ರಂದು 5% ಅಪ್ಪರ್ ಸರ್ಕ್ಯೂಟ್ ತಲುಪಿದೆ.
08:58 AM (IST) Feb 12
ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿಯೊಂದು ಜನ್ಮ ದಿನಾಂಕಕ್ಕೂ ಒಬ್ಬ ಅಧಿಪತಿ ಗ್ರಹ ಇರುತ್ತದೆ. ಕೆಲವು ವಿಶೇಷ ದಿನಾಂಕಗಳಲ್ಲಿ ಜನಿಸಿದವರಿಗೆ ಗ್ರಹಗಳ ಅನುಗ್ರಹ ಹುಟ್ಟಿನಿಂದಲೇ ಇರುತ್ತದೆ. ಇವರಿಗೆ ಅದೃಷ್ಟ ಕೂಡ ಹೆಚ್ಚಾಗಿರುತ್ತೆ. ಆ ದಿನಾಂಕಗಳು ಯಾವುವು ಅಂತ ನೋಡೋಣ ಬನ್ನಿ.