LIVE NOW
Published : Jul 01, 2026, 06:45 AM ISTUpdated : Jul 01, 2026, 09:19 AM IST

India Latest News Live: 'ನನಗ್ಯಾವ....' ವೈಭವ್ ಸೂರ್ಯವಂಶಿ ಬಗ್ಗೆ ನಾಯಕ ಶ್ರೇಯಸ್ ಅಯ್ಯರ್ ವ್ಯಂಗ್ಯ? ಹೀಗ್ಯಾಕೆ ಅಂದ್ರು ಟೀಂ ಇಂಡಿಯಾ ಕ್ಯಾಪ್ಟನ್?

ಸಾರಾಂಶ

ಭಂಡಾರ: ಮಹಾರಾಷ್ಟ್ರದ ರೈತ ಮಹಿಳೆಯೊಬ್ಬರಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಬರಬೇಕಿದ್ದ 2 ಸಾವಿರ ರು.ಹಣದ ಬದಲು ಕೇವಲ 1 ಪೈಸೆ ರು. ಜಮೆ ಆಗಿರುವ ಸಂದೇಶ ಬಂದಿದೆ. ಈ ಬೆನ್ನಲ್ಲೇ ‘ತಾಂತ್ರಿಕ ದೋಷದಿಂದ ತಪ್ಪು ಸಂದೇಶ ಬಂದಿದೆ. ಆದರೆ ಪೂರ್ತಿ ಹಣ ಜಮಾ ಆಗಿದೆ’ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದೆ.

ಭಂಡಾರ ಜಿಲ್ಲೆಯ ಜೇವನಾಳ ಗ್ರಾಮದ 65 ವರ್ಷದ ರೈತ ಮಹಿಳೆ ಲಕ್ಷ್ಮೀಬಾಯಿ ಎನ್ನುವವರ ಮೊಬೈಲ್‌ಗೆ ‘ಕಿಸಾನ್‌ ಕಂತಿನ ಹಣವಾಗಿ 0.01 ರು. ಗಳನ್ನು ನಿಮ್ಮ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿದೆ’ ಎನ್ನುವ ಸಂದೇಶ ಬಂದಿತ್ತು. ಇದರ ಬೆನ್ನಲ್ಲೇ ಅವರ ಪುತ್ರ ಮಾಧ್ಯಮಗಳಲ್ಲಿ ಅಳಲು ತೋಡಿಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಕೃಷಿ ಇಲಾಖೆ ‘ಸಂದೇಶ ತಾಂತ್ರಿಕ ದೋಷದಿಂದ ಹೋಗಿದೆ. ದಾಖಲೆಗಳ ಪ್ರಕಾರ ರೈತನ ಖಾತೆಗೆ 2000 ರು. ಯಶಸ್ವಿಯಾಗಿ ಜಮಾ ಆಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

09:19 AM (IST) Jul 01

'ನನಗ್ಯಾವ....' ವೈಭವ್ ಸೂರ್ಯವಂಶಿ ಬಗ್ಗೆ ನಾಯಕ ಶ್ರೇಯಸ್ ಅಯ್ಯರ್ ವ್ಯಂಗ್ಯ? ಹೀಗ್ಯಾಕೆ ಅಂದ್ರು ಟೀಂ ಇಂಡಿಯಾ ಕ್ಯಾಪ್ಟನ್?

ಚೆಸ್ಟರ್-ಲೆ-ಸ್ಟ್ರೀಟ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಗೆ ಕ್ಷಣಗಣನೆ ಶುರುವಾಗಿದೆ. ಹೀಗಿರಿವಾಗಲೇ ನಾಯಕ ಶ್ರೇಯಸ್ ಅಯ್ಯರ್ ಅವರ ಅಹಂನಿಂದ ಕೂಡಿದ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಅಯ್ಯರ್ ಏನಂದ್ರು ನೋಡೋಣ ಬನ್ನಿ.

 

Read Full Story

08:57 AM (IST) Jul 01

ಮೋದಿ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳಿದ ಸ್ವಾರಸ್ಯಕರ ಘಟನೆ ಹಂಚಿಕೊಂಡ ಅಮೆರಿಕದ ರಾಯಭಾರಿ

ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ನಡುವಿನ ಗಾಢ ಸ್ನೇಹದ ಬಗ್ಗೆ ಭಾರತದಲ್ಲಿನ ಅಮೆರಿಕ ರಾಯಭಾರಿ ಸರ್ಗಿಯೋ ಗೋರ್ ಮಾತನಾಡಿದ್ದಾರೆ. ಟ್ರಂಪ್ ಅವರು ಮೋದಿಯನ್ನು ನಿಜವಾದ ಸ್ನೇಹಿತ ಎಂದು ಪರಿಗಣಿಸುತ್ತಾರೆ ಎಂಬುದಕ್ಕೆ ಸ್ವಾರಸ್ಯಕರ ಪ್ರಸಂಗವೊಂದನ್ನು ವಿವರಿಸಿದ್ದಾರೆ.

Read Full Story

08:51 AM (IST) Jul 01

ಐರ್ಲೆಂಡ್‌ ಶಾಕ್‌ ಬಳಿಕ ಭಾರತಕ್ಕಿನ್ನು ಇಂಗ್ಲೆಂಡ್‌ ಚಾಲೆಂಜ್‌..! ಇಂದು ವೈಭವ್ ಸೂರ್ಯವಂಶಿಗೆ ಸಿಗುತ್ತಾ ಸ್ಥಾನ?

ಐರ್ಲೆಂಡ್‌ ವಿರುದ್ಧದ ಸೋಲಿನ ನಂತರ, ಶ್ರೇಯಸ್‌ ಅಯ್ಯರ್‌ ನಾಯಕತ್ವದ ಭಾರತ ತಂಡವು ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿಗೆ ಸಜ್ಜಾಗಿದೆ. ಈ ಸರಣಿಯಲ್ಲಿ 15 ವರ್ಷದ ಯುವ ಆಟಗಾರ ವೈಭವ್‌ ಸೂರ್ಯವಂಶಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದ್ದು, ಹ್ಯಾರಿ ಬ್ರೂಕ್‌ ನೇತೃತ್ವದ ಇಂಗ್ಲೆಂಡ್ ತಂಡದಿಂದ ಕಠಿಣ ಸವಾಲು ಎದುರಾಗಲಿದೆ.
Read Full Story

08:18 AM (IST) Jul 01

FIFA World Cup - 1934ರ ಬಳಿಕ ಮೊದಲ ಬಾರಿ ಪ್ರಿಕ್ವಾರ್ಟರ್‌ಗೇರದೇ ಹೊರಬಿದ್ದ ನೆದರ್‌ಲೆಂಡ್ಸ್‌

ಫಿಫಾ ವಿಶ್ವಕಪ್‌ನಲ್ಲಿ ಮೊರಾಕ್ಕೊ ವಿರುದ್ಧ ನೆದರ್‌ಲೆಂಡ್ಸ್‌ ಪೆನಾಲ್ಟಿ ಶೂಟೌಟ್‌ನಲ್ಲಿ 2-3 ಗೋಲುಗಳಿಂದ ಸೋತಿದೆ. ಈ ಮೂಲಕ 3 ಬಾರಿ ರನ್ನರ್‌-ಅಪ್‌ ಆಗಿರುವ ಡಚ್ ಪಡೆ, ಇದೇ ಮೊದಲ ಬಾರಿಗೆ ಅಂತಿಮ 16ರ ಸುತ್ತು ತಲುಪಲು ವಿಫಲವಾಗಿ ಐತಿಹಾಸಿಕ ಮುಖಭಂಗ ಅನುಭವಿಸಿದೆ.
Read Full Story

08:03 AM (IST) Jul 01

ಫಿಫಾ ವಿಶ್ವಕಪ್ ಅಚ್ಚರಿ - ನಾಲ್ಕು ಬಾರಿಯ ಚಾಂಪಿಯನ್ ಜರ್ಮನಿಯ ಪತನಕ್ಕೆ ಕಾರಣವಾದ ಆ ಹೀರೋ ಯಾರು?

ಫಿಫಾ ವಿಶ್ವಕಪ್‌ನಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ದಾಖಲಾಗಿದ್ದು, 4 ಬಾರಿಯ ಚಾಂಪಿಯನ್ ಜರ್ಮನಿ ತಂಡವು ಪರಗ್ವೆ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಈ ಪಂದ್ಯದಲ್ಲಿ ಜರ್ಮನಿಯ ಹಲವು ಗೋಲು ಪ್ರಯತ್ನಗಳನ್ನು ತಡೆದು, ಪೆನಾಲ್ಟಿ ಶೂಟೌಟ್‌ನಲ್ಲೂ ಮಿಂಚಿದ ಪರಗ್ವೆ ಗೋಲ್‌ಕೀಪರ್ ಓರ್ಲಾಂಡೊ ಗಿಲ್ ಹೀರೋ ಆಗಿ ಹೊರಹೊಮ್ಮಿದರು.
Read Full Story

07:44 AM (IST) Jul 01

TVK Govt - ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದ ಸಿಎಂ ವಿಜಯ್; ತಮಿಳುಗರು ಫುಲ್ ಖುಷ್

ತಮಿಳುನಾಡಿನ ಸಿಎಂ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಮಹತ್ವದ ಬದಲಾವಣೆ ತರಲು ನಿರ್ಧರಿಸಿದೆ. ಈ ಬಗ್ಗೆ ಸಿಎಂ ಜೋಸೆಫ್ ವಿಜಯ್ ಮಾಧ್ಯಮಗಳೊಂದಿಗೆ ಮಾತನಾಡಿ ಮಾಹಿತಿಯನ್ನು ನೀಡಿದ್ದಾರೆ. 

Read Full Story

07:34 AM (IST) Jul 01

ರಾಮಮಂದಿರದಲ್ಲಿ ದೇಣಿಗೆ ಕಳವು - ಚಂಪತ್ ರಾಯ್ ಮುಂದೆ 4 ಪ್ರಶ್ನೆ ಮುಂದಿಟ್ಟ ಎಸ್‌ಐಟಿ

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ, ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಅವರನ್ನು ವಿಚಾರಣೆ ನಡೆಸಿದ್ದು, ಅವರು ಹಗರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ವಿವಾದವು ರಾಜಕೀಯ ತಿರುವು ಪಡೆದಿದ್ದು, ಕಾಂಗ್ರೆಸ್ ಪ್ರಧಾನಿ ಮೋದಿಯವರ ಮೌನವನ್ನು ಪ್ರಶ್ನಿಸಿದರೆ, ಸಿಎಂ ಯೋಗಿ ಆದಿತ್ಯನಾಥ್ ವಿಪಕ್ಷಗಳ ನಿಲುವನ್ನು ಟೀಕಿಸಿದ್ದಾರೆ.
Read Full Story

07:08 AM (IST) Jul 01

ಜುಲೈ ತಿಂಗಳ ಮೊದಲ ದಿನವೇ ಗುಡ್‌ನ್ಯೂಸ್; LPG ದರದಲ್ಲಿ ಗಣನೀಯ ಇಳಿಕೆ, ಕಡಿಮೆಯಾದ ಹೊರೆ

ತೈಲ ಕಂಪನಿಗಳು ಜುಲೈ 1 ರಿಂದ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹183.50 ರಷ್ಟು ಇಳಿಕೆ ಮಾಡಿವೆ. ಆದರೆ, ಗೃಹಬಳಕೆಯ 14 ಕೆಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಸ್ಥಿರವಾಗಿರಿಸಲಾಗಿದೆ. ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಕಡಿಮೆಯಾಗಿದೆ.

Read Full Story

More Trending News