LIVE NOW
Published : Jul 01, 2026, 06:45 AM ISTUpdated : Jul 01, 2026, 10:43 PM IST

India Latest News Live: Charmy Kaur - 'ನಮ್ರತಾ ನನ್ನನ್ನು ಸಮಾಧಿ ಮಾಡ್ತಾರೆ' - ಮಹೇಶ್ ಬಾಬು ಮದುವೆ ಬಗ್ಗೆ ನಟಿಯ ಕಾಮೆಂಟ್ ವೈರಲ್!

ಸಾರಾಂಶ

ಭಂಡಾರ: ಮಹಾರಾಷ್ಟ್ರದ ರೈತ ಮಹಿಳೆಯೊಬ್ಬರಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಬರಬೇಕಿದ್ದ 2 ಸಾವಿರ ರು.ಹಣದ ಬದಲು ಕೇವಲ 1 ಪೈಸೆ ರು. ಜಮೆ ಆಗಿರುವ ಸಂದೇಶ ಬಂದಿದೆ. ಈ ಬೆನ್ನಲ್ಲೇ ‘ತಾಂತ್ರಿಕ ದೋಷದಿಂದ ತಪ್ಪು ಸಂದೇಶ ಬಂದಿದೆ. ಆದರೆ ಪೂರ್ತಿ ಹಣ ಜಮಾ ಆಗಿದೆ’ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದೆ.

ಭಂಡಾರ ಜಿಲ್ಲೆಯ ಜೇವನಾಳ ಗ್ರಾಮದ 65 ವರ್ಷದ ರೈತ ಮಹಿಳೆ ಲಕ್ಷ್ಮೀಬಾಯಿ ಎನ್ನುವವರ ಮೊಬೈಲ್‌ಗೆ ‘ಕಿಸಾನ್‌ ಕಂತಿನ ಹಣವಾಗಿ 0.01 ರು. ಗಳನ್ನು ನಿಮ್ಮ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿದೆ’ ಎನ್ನುವ ಸಂದೇಶ ಬಂದಿತ್ತು. ಇದರ ಬೆನ್ನಲ್ಲೇ ಅವರ ಪುತ್ರ ಮಾಧ್ಯಮಗಳಲ್ಲಿ ಅಳಲು ತೋಡಿಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಕೃಷಿ ಇಲಾಖೆ ‘ಸಂದೇಶ ತಾಂತ್ರಿಕ ದೋಷದಿಂದ ಹೋಗಿದೆ. ದಾಖಲೆಗಳ ಪ್ರಕಾರ ರೈತನ ಖಾತೆಗೆ 2000 ರು. ಯಶಸ್ವಿಯಾಗಿ ಜಮಾ ಆಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

10:43 PM (IST) Jul 01

Charmy Kaur - 'ನಮ್ರತಾ ನನ್ನನ್ನು ಸಮಾಧಿ ಮಾಡ್ತಾರೆ' - ಮಹೇಶ್ ಬಾಬು ಮದುವೆ ಬಗ್ಗೆ ನಟಿಯ ಕಾಮೆಂಟ್ ವೈರಲ್!

ಮಹೇಶ್ ಬಾಬು ಅವರನ್ನು ಮದುವೆಯಾಗಬೇಕೆಂಬ ಆಸೆ ಇತ್ತು ಎಂದು ನಟಿ ಚಾರ್ಮಿ ಕೌರ್ ಹೇಳಿದ ಹಳೆಯ ಕಾಮೆಂಟ್ ಮತ್ತೆ ವೈರಲ್ ಆಗಿದೆ. ನಮ್ರತಾ ಬಗ್ಗೆ ಹೇಳಿದ ತಮಾಷೆಯ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

Read Full Story

10:41 PM (IST) Jul 01

ನೋ ವೈಭವ್ ಸೂರ್ಯವಂಶಿ, ಇಂಗ್ಲೆಂಡ್ ವಿರುದ್ದ 2 ಓವರ್‌ಗೆ 2 ವಿಕೆಟ್, ಭಾರತ ತಂಡದ ಆಯ್ಕೆ ಟ್ರೋಲ್

ಸೋಶಿಯಲ್ ಮೀಡಿಯಾದಲ್ಲಿ ನೋ ವೈಭವ್ ಟ್ರೆಂಡ್ ಆಗುತ್ತಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಿಂದ ವೈಭವ್ ಕೈಬಿಡಲಾಗಿದೆ. ಇತ್ತ ಆರಂಭದಲ್ಲೇ ಭಾರತ 2 ವಿಕೆಟ್ ಕಳೆದುಕೊಂಡ ಬೆನ್ನಲ್ಲೇ ತಂಡದ ಆಯ್ಕೆ ಟ್ರೋಲ್ ಮಾಡಲಾಗುತ್ತಿದೆ.

 

Read Full Story

09:58 PM (IST) Jul 01

ಸೋಲಿನಿಂದ ಪಾಠ ಕಲಿಯದ ಭಾರತ, ಇಂಗ್ಲೆಂಡ್ ವಿರುದ್ಧ ಮೊದಲ ಟಿ20ಯಲ್ಲಿ ವೈಭವ್‌ಗಿಲ್ಲ ಸ್ಥಾನ

ಇಂಗ್ಲೆಂಡ್ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆದರೆ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. ವೈಭವ್ ಸೂರ್ಯವಂಶಿಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಸಿಕ್ಕಿಲ್ಲ.

Read Full Story

09:26 PM (IST) Jul 01

Neha Dhupia - 'ಈ ಚಾಳಿ ಬಿಡಿ' - 'ಬ್ಯಾಕ್ ಶಾಟ್' ತೆಗೆದ ಫೋಟೋಗ್ರಾಫರ್‌ಗಳ ಮೇಲೆ ನಟಿ ನೇಹಾ ಗರಂ!

ಮುಂಬೈ ಕಾರ್ಯಕ್ರಮವೊಂದರಲ್ಲಿ ನಟಿ ನೇಹಾ ಧೂಪಿಯಾ, ತಮ್ಮ 'ಬ್ಯಾಕ್ ಶಾಟ್' ಫೋಟೋಗಳನ್ನು ಕ್ಲಿಕ್ಕಿಸಿದ ಪಾಪರಾಜಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಇದು ಅಗೌರವದ ವರ್ತನೆ' ಎಂದು ಹೇಳಿದ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Read Full Story

09:22 PM (IST) Jul 01

Ketan Murder ಬಳಿಕ, ಸಿಯಾಳ ಹ್ಯಾಂಡಸಮ್‌ ಅಡ್ವೊಕೇಟ್ ಗದ್ದಲ ಶುರು - ಇವನ್ಯಾರು ಕೇಳಿದ ಅಪ್ಪ-ಅಮ್ಮ

ಭಾವಿ ಪತಿಯ ಕೊಲೆ ಆರೋಪ ಹೊತ್ತಿರುವ ಸಿಯಾ ಗೋಯಲ್, ಇದೀಗ ವಕೀಲರ ನೇಮಕಾತಿ ಕುರಿತ ವಿವಾದದಲ್ಲಿ ಸಿಲುಕಿದ್ದಾಳೆ. ತನ್ನನ್ನು ವಕೀಲರೆಂದು ಹೇಳಿಕೊಂಡಿದ್ದ ಅಶುತೋಷ್ ಶ್ರೀವಾಸ್ತವ, ಈ ಹೇಳಿಕೆಯನ್ನು ನಿರಾಕರಿಸಿದ ಸಿಯಾ ಸಹೋದರನ ಮೇಲೆ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
Read Full Story

08:08 PM (IST) Jul 01

ಬೆಂಗಳೂರಿನ ಫಾರ್ಮಾ ಕಂಪನಿ ಪ್ರಾಯೋಜಕತ್ವದಲ್ಲಿ ಯುರೋಪ್‌ ಟ್ರಿಪ್‌ ಮಾಡಿದ್ದ ವೈದ್ಯರ ಅಮಾನತು, ನೋಂದಣಿ ರದ್ದು

ಔಷಧೀಯ ಕಂಪನಿಯ ಪ್ರಾಯೋಜಿತ ವಿದೇಶಿ ಪ್ರವಾಸ ಕೈಗೊಂಡಿದ್ದಕ್ಕಾಗಿ ಗುಜರಾತ್ ವೈದ್ಯಕೀಯ ಮಂಡಳಿಯು ಮೂವರು ಪ್ರಖ್ಯಾತ ಚರ್ಮರೋಗ ವೈದ್ಯರ ನೋಂದಣಿಯನ್ನು 13 ತಿಂಗಳ ಕಾಲ ಅಮಾನತುಗೊಳಿಸಿದೆ. ವೃತ್ತಿಪರ ನಡವಳಿಕೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಕಠಿಣ ಕ್ರಮ ಜರುಗಿಸಲಾಗಿದೆ.

Read Full Story

07:51 PM (IST) Jul 01

SRH ಸಿಇಒ ಕಾವ್ಯಾ ಮಾರನ್ ಜೊತೆ ಹೆಸರು ಕೇಳಿಬಂದ ಅನಿರುಧ್ ರವಿಚಂದರ್ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ

ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯಾ ಮಾರನ್ ಜೊತೆ ಮದುವೆ ವದಂತಿಗಳಿಂದಾಗಿ ಸಂಗೀತ ನಿರ್ದೇಶಕ ಅನಿರುಧ್ ರವಿಚಂದರ್ ಮತ್ತೆ ಸುದ್ದಿಯಲ್ಲಿದ್ದಾರೆ. ಹಾಗಿದ್ರೆ ಯಾರು ಈ ಅನಿರುಧ್? ಅವರ ಶಿಕ್ಷಣ, ವೃತ್ತಿ, ಕುಟುಂಬ ಮತ್ತು ಕೆಲವು ಇಂಟ್ರೆಸ್ಟಿಂಗ್ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.

Read Full Story

07:32 PM (IST) Jul 01

ಗಿಳಿಯ ಹೊಟ್ಟೆಯಲ್ಲೇ ಸಿಲುಕಿದ ಎಕ್ಸ್‌ಟ್ರಾ ಲಾರ್ಜ್‌ ಮೊಟ್ಟೆ; ₹1.5 ಲಕ್ಷದ ಶಸ್ತ್ರಚಿಕಿತ್ಸೆಗಾಗಿ ಕೊಲ್ಕತ್ತಾದಿಂದ ದೆಹಲಿಗೆ ರವಾನೆ!

ಕೊನ್ನಗರದ ಕುಟುಂಬವೊಂದು ತಮ್ಮ 13 ವರ್ಷದ 'ಮಿಠೂ' ಗಿಳಿಯ ಜೀವ ಉಳಿಸಲು ಹೋರಾಡುತ್ತಿದೆ. ಗಿಳಿಯ ಹೊಟ್ಟೆಯಲ್ಲಿ ದೊಡ್ಡ ಮೊಟ್ಟೆಯೊಂದು ಸಿಲುಕಿಕೊಂಡಿದ್ದು (ಎಗ್-ಬೈಂಡಿಂಗ್), ಕೊಲ್ಕತ್ತಾದಲ್ಲಿ ಚಿಕಿತ್ಸೆ ಲಭ್ಯವಿಲ್ಲದ ಕಾರಣ, ತುರ್ತು ಶಸ್ತ್ರಚಿಕಿತ್ಸೆಗಾಗಿ ಕುಟುಂಬವು ಅದನ್ನು ದೆಹಲಿಗೆ ಕರೆದೊಯ್ದಿದೆ.
Read Full Story

07:07 PM (IST) Jul 01

ನಾಸಾದ ಐತಿಹಾಸಿಕ ಸಾಹಸ - 22 ವರ್ಷ ಹಳೆಯ 'ಸ್ವಿಫ್ಟ್' ದೂರದರ್ಶಕ ಉಳಿಸಲು ರೋಬೋಟ್ ಉಡಾವಣೆ!

ಅಮೆರಿಕದ ನಾಸಾ, ತನ್ನ 22 ವರ್ಷ ಹಳೆಯ ಸ್ವಿಫ್ಟ್ ಬಾಹ್ಯಾಕಾಶ ದೂರದರ್ಶಕವನ್ನು ನಾಶವಾಗದಂತೆ ರಕ್ಷಿಸಲು 'ಸ್ವಿಫ್ಟ್ ಬೂಸ್ಟ್' ಎಂಬ ಐತಿಹಾಸಿಕ ಕಾರ್ಯಾಚರಣೆಗೆ ಮುಂದಾಗಿದೆ. ಈ ಕಾರ್ಯಾಚರಣೆಯಲ್ಲಿ, ಖಾಸಗಿ ಸಂಸ್ಥೆಯ ರೋಬೋಟಿಕ್ ನೌಕೆಯು ದೂರದರ್ಶಕಕ್ಕೆ ಜೋಡಣೆಯಾಗಿ ಅದನ್ನು ಸುರಕ್ಷಿತ ಕಕ್ಷೆಗೆ ತಳ್ಳಲಿದೆ. ಈ ಯಶಸ್ಸು ಬಾಹ್ಯಾಕಾಶದಲ್ಲಿ ಉಪಗ್ರಹಗಳ ದುರಸ್ತಿ ಮತ್ತು ಮರುಬಳಕೆಯ ಹೊಸ ಯುಗಕ್ಕೆ ನಾಂದಿ ಹಾಡಲಿದೆ.
Read Full Story

06:52 PM (IST) Jul 01

Bollywood Bachelors - 50 ವರ್ಷ ದಾಟಿದ್ರೂ ಕೋಟ್ಯಾಧಿಪತಿ, ಆದ್ರೂ ಈ 9 ನಟರು ಯಾಕೆ ಮದುವೆಯಾಗಿಲ್ಲ?

ಸಲ್ಮಾನ್ ಖಾನ್, ಕರಣ್ ಜೋಹರ್, ಅಕ್ಷಯ್ ಖನ್ನಾ ಸೇರಿದಂತೆ ಬಾಲಿವುಡ್‌ನ 9 ಕೋಟ್ಯಾಧಿಪತಿ ನಟರು 50 ವರ್ಷ ದಾಟಿದರೂ ಇಂದಿಗೂ ಮದುವೆಯಾಗದೆ ಉಳಿದಿದ್ದಾರೆ. ಇದಕ್ಕೆ ಅವರದ್ದೇ ಆದ ಕಾರಣಗಳಿವೆ.

Read Full Story

06:46 PM (IST) Jul 01

Sunita Ahuja-Shocking - ನಮಗೆ ಎರಡು ಮನೆಗಳಿವೆ; ಅವರ ಮನೆಗೆ ಹಲವರು ಬರುತ್ತಾರೆ, ಆದರೆ ನನಗೆ ನನ್ನ ಸ್ವಂತ ಮನೆಯಲ್ಲಿ ಪ್ರೈವೆಸಿ ಅಗತ್ಯವಿದೆ; ಸುನೀತಾ ಅಹುಜಾ!

ಗೋವಿಂದ ಮತ್ತು ಸುನೀತಾ ದಂಪತಿ 1987ರಲ್ಲಿ ವಿವಾಹವಾಗಿದ್ದಾರೆ. ಟೀನಾ ಮತ್ತು ಯಶ್ವರ್ಧನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಕಾಣುತ್ತಿರುವ 'ಲಾಕ್ ಅಪ್ 2' ಶೋನಲ್ಲಿ ಸುನೀತಾ ತಮ್ಮ ದಾಂಪತ್ಯದ ಅಪಸ್ವರ ಹೇಳಿಕೊಂಡಿದ್ದಾರೆ.

Read Full Story

06:35 PM (IST) Jul 01

ದಾಖಲೆ ಬರೆದ GST ಸಂಗ್ರಹ - ಜೂನ್ ತಿಂಗಳಲ್ಲಿ ಮೋದಿ ಸರ್ಕಾರಕ್ಕೆ ಹರಿದುಬಂತು 1.95 ಲಕ್ಷ ಕೋಟಿ!

ಜೂನ್ ತಿಂಗಳಲ್ಲಿ ಭಾರತದ ಜಿಎಸ್‌ಟಿ ಸಂಗ್ರಹವು 1.95 ಲಕ್ಷ ಕೋಟಿ ರೂಪಾಯಿ ತಲುಪಿ, ಶೇಕಡಾ 13.9 ರಷ್ಟು ದಾಖಲೆಯ ಏರಿಕೆ ಕಂಡಿದೆ. ಆಮದು ತೆರಿಗೆಯ ಹೆಚ್ಚಳ ಇದಕ್ಕೆ ಪ್ರಮುಖ ಕಾರಣವಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ಸಂಗ್ರಹದಲ್ಲಿ ಅಗ್ರಸ್ಥಾನದಲ್ಲಿವೆ. ಈ ಬೆಳವಣಿಗೆಯು ದೇಶದ ಬಲಿಷ್ಠ ಆರ್ಥಿಕತೆಯನ್ನು ಸೂಚಿಸುತ್ತದೆ.

Read Full Story

06:25 PM (IST) Jul 01

ಭಾರತ-ಇಂಗ್ಲೆಂಡ್ ಇಂದಿನ ಮ್ಯಾಚ್ ಮಳೆಯಿಂದ ರದ್ದಾಗುತ್ತಾ? ಶುರುವಾಯ್ತು ಹೊಸ ಟೆನ್ಷನ್, ಹವಾಮಾನ ವರದಿ ಏನು?

ಡುರ್ಹಾಮ್‌: India vs England 1st T20 Weather Report ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಆದರೆ ಮೊದಲ ಪಂದ್ಯ ನಡೆಯೋದೇ ಅನುಮಾನ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ ನೋಡಿ.

Read Full Story

06:17 PM (IST) Jul 01

ರೈಲ್ವೆ ಟಿಕೆಟ್‌ ಬುಕ್‌ ಮಾಡುವಾಗ ಕಣ್ತಪ್ಪಿನಿಂದ ಒಂದೇ ಒಂದು ಅಂಕಿ ಮಿಸ್‌ ಆಗಿದ್ದಕ್ಕೆ 7 ಸಾವಿರ ಫೈನ್‌ ಕಟ್ಟಿದ ವ್ಯಕ್ತಿ!

ಆನ್‌ಲೈನ್ ರೈಲ್ವೆ ಟಿಕೆಟ್ ಬುಕ್ ಮಾಡುವಾಗ ವಯಸ್ಸನ್ನು '24'ರ ಬದಲು '1' ಎಂದು ತಪ್ಪಾಗಿ ನಮೂದಿಸಿದ್ದಕ್ಕೆ ಬೆಂಗಳೂರಿನ ಪ್ರಯಾಣಿಕರೊಬ್ಬರಿಗೆ ₹7,035 ದಂಡ ವಿಧಿಸಲಾಗಿದೆ. ಸೂಕ್ತ ಗುರುತಿನ ಚೀಟಿ ತೋರಿಸಿದರೂ ಟಿಟಿಇ ದಂಡ ವಿಧಿಸಿದೆ.

Read Full Story

06:01 PM (IST) Jul 01

ನೆಟ್‌ಫ್ಲಿಕ್ಸ್‌ನಲ್ಲಿ ನಂ.1 ಆದ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ - OTTಯಲ್ಲಿ ಧೂಳೆಬ್ಬಿಸಿದ 'ಬ್ಲಾಸ್ಟ್'

ಸೌತ್ ಸೂಪರ್‌ಸ್ಟಾರ್ ಅರ್ಜುನ್ ಸರ್ಜಾ ಅವರ 'ಬ್ಲಾಸ್ಟ್' ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿತ್ತು. ಈಗ ಈ ಚಿತ್ರ ಓಟಿಟಿಯಲ್ಲೂ ಧೂಳೆಬ್ಬಿಸುತ್ತಿದೆ. ಅಂದಹಾಗೆ, ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದ್ದಂತೆ ಈ ಸಿನಿಮಾ ನಂಬರ್ 1 ಸ್ಥಾನಕ್ಕೇರಿದೆ.

Read Full Story

04:54 PM (IST) Jul 01

ಎಐಗಿಂತ ಮನುಷ್ಯನ ಅನುಭವವೇ ಶ್ರೇಷ್ಠ - ಕೊನೆಗೂ ತಪ್ಪಿನ ಅರಿವಾಗಿ ಹಿರಿಯ ಎಂಜಿನಿಯರ್‌ಗಳನ್ನು ಮರಳಿ ನೇಮಿಸಿದ ಫೋರ್ಡ್!

ತಂತ್ರಜ್ಞಾನದ ಮೇಲೆ ಅತಿಯಾಗಿ ಅವಲಂಬಿತವಾಗಿದ್ದ ಫೋರ್ಡ್ ಕಂಪನಿ, ಕೃತಕ ಬುದ್ಧಿಮತ್ತೆ ನಿರೀಕ್ಷಿತ ಫಲಿತಾಂಶ ನೀಡದ ಕಾರಣ ತನ್ನ ಹಳೆಯ, ಅನುಭವಿ ಎಂಜಿನಿಯರ್‌ಗಳನ್ನು ಮರಳಿ ನೇಮಿಸಿಕೊಳ್ಳುತ್ತಿದೆ. ವಾಹನಗಳ ಗುಣಮಟ್ಟ ಕಾಯ್ದುಕೊಳ್ಳಲು ಮಾನವನ ಸೂಕ್ಷ್ಮ ಅನುಭವಕ್ಕೆ ಪರ್ಯಾಯವಿಲ್ಲ ಎಂದು ಕಂಪನಿ ಒಪ್ಪಿಕೊಂಡಿದೆ.

Read Full Story

04:49 PM (IST) Jul 01

ಬಹಿರಂಗವಾಗಿ ಕ್ಷಮೆ ಕೇಳಿದ ಶ್ರೀಶಾಂತ್, 3 ವರ್ಷದ ನಿಷೇಧ ಹಿಂಪಡೆದ KCA; ಮತ್ತೆ ಕ್ರಿಕೆಟ್ ಆಡಲು ಗ್ರೀನ್ ಸಿಗ್ನಲ್!

ಸಂಜು ಸ್ಯಾಮ್ಸನ್ ಅವರನ್ನು ಬೆಂಬಲಿಸಿ ಕೇರಳ ಕ್ರಿಕೆಟ್ ಅಸೋಸಿಯೇಷನ್ (ಕೆಸಿಎ) ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಎಸ್. ಶ್ರೀಶಾಂತ್ ಮೇಲೆ ಹೇರಲಾಗಿದ್ದ ಮೂರು ವರ್ಷಗಳ ನಿಷೇಧವನ್ನು ಹಿಂಪಡೆಯಲಾಗಿದೆ. ಶ್ರೀಶಾಂತ್ ಬೇಷರತ್ ಕ್ಷಮೆ ಕೋರಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಮುಂಬರುವ ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಭಾಗವಹಿಸಲು ಅವರಿಗೆ ದಾರಿ ಸುಗಮವಾಗಿದೆ.
Read Full Story

04:15 PM (IST) Jul 01

ವೈಭವ್ ಸೂರ್ಯವಂಶಿ ಇಂದು ಭಾರತಕ್ಕೆ ಪಾದಾರ್ಪಣೆ ಮಾಡ್ತಾರಾ? ದೊಡ್ಡ ಸುಳಿವು ಬಿಟ್ಟುಕೊಟ್ಟ 15 ವರ್ಷದ ಕ್ರಿಕೆಟಿಗ

ಡುರ್ಹಾಮ್‌: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗಲೇ ಎಲ್ಲರ ಕಣ್ಣು ವೈಭವ್ ಸೂರ್ಯವಂಶಿ ಮೇಲಿದೆ. ಹೀಗಿರುವಾಗಲೇ ವೈಭವ್ ಹಾಕಿರುವ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ.

 

Read Full Story

03:42 PM (IST) Jul 01

Yash Toxic- Ladies & Ladies - 'ಟಾಕ್ಸಿಕ್'ನಲ್ಲಿ ಪಂಚಕನ್ಯೆಯರ ಸೀಕ್ರೆಟ್; ಸ್ಟೋರಿ ಲೈನ್‌ ಏನ್ ಹೇಳ್ತಿದೆ? "ಪ್ರೀತಿಯು ಮಹಿಳೆಯರನ್ನು 'ಹಾಗೆ' ಮಾಡುತ್ತಾ!?

ಟೀಸರ್‌ನ ಕೊನೆಯಲ್ಲಿ ಯಶ್ ಮತ್ತು ಮಹಿಳಾ ಫೈಟರ್‌ಗಳ ನಡುವಿನ ಸಂಘರ್ಷದ ದೃಶ್ಯವಿದೆ. ಅಲ್ಲಿ ಯಶ್ ಹೊಡೆಯುವ ಆ ಒಂದು ಡೈಲಾಗ್ ಈಗ ಎಲ್ಲೆಡೆ ವೈರಲ್ ಆಗಿದೆ. "ಲೇಡೀಸ್ ಅಂಡ್ ಲೇಡೀಸ್.. ಒಬ್ಬೊಬ್ಬರಾಗಿ ಬರ್ತೀರಾ ಅಥವಾ ಎಲ್ಲರೂ ಒಟ್ಗೇ ಬರ್ತೀರಾ?" ಎಂದು ಯಶ್ ಕೇಳುವ ಸ್ಟೈಲ್ ಫ್ಯಾನ್ಸ್‌ಗೆ ಹಬ್ಬದಂತಿದೆ.

Read Full Story

03:06 PM (IST) Jul 01

Gold Colour - ಚಿನ್ನ ಹಳದಿ ಬಣ್ಣದಲ್ಲಿಯೇ ಯಾಕಿರುತ್ತೆ? ಇಲ್ಲಿದೆ ವೈಜ್ಞಾನಿಕ ರಹಸ್ಯ

ಚಿನ್ನ ಹಳದಿ ಬಣ್ಣದಲ್ಲಿಯೇ ಯಾಕಿರುತ್ತೆ? ಇಲ್ಲಿದೆ ವೈಜ್ಞಾನಿಕ ರಹಸ್ಯ. ಚಿನ್ನದ ಪರಮಾಣುವಿನಲ್ಲಿರುವ ಎಲೆಕ್ಟ್ರಾನ್‌ಗಳು ಅತಿ ವೇಗವಾಗಿ ಚಲಿಸುವುದರಿಂದ, ಐನ್‌ಸ್ಟೈನ್‌ನ ಸಾಪೇಕ್ಷತಾ ಸಿದ್ಧಾಂತದ ಪರಿಣಾಮಗಳು ಇದಕ್ಕೆ ಕಾರಣವಾಗಿವೆ.

Read Full Story

01:50 PM (IST) Jul 01

ವೆನೆಜುವೆಲಾದಲ್ಲಿ ಭಾರತೀಯ ನಾವಿಕ ನಿಗೂಢ ಸಾವು - ಭಾರತಕ್ಕೆ ತಂದ ಮೃತದೇಹದಲ್ಲಿ ಹೃದಯ ಶ್ವಾಸಕೋಶ, ಮೆದುಳೇ ಇಲ್ಲ..!

ವೆನೆಜುವೆಲಾದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಉತ್ತರ ಪ್ರದೇಶ ಮೂಲದ ರಾಕೇಶ್ ಚೌಹಾಣ್ ಪ್ರಕರಣದಲ್ಲಿ  ಮತ್ತಷ್ಟು ತಿರುವು ಪಡೆದುಕೊಂಡಿದೆ. ಭಾರತಕ್ಕೆ ತರಲಾದ ರಾಕೇಶ್ ಮೃತದೇಹಲ್ಲಿ ಮೆದುಳು, ಶ್ವಾಸಕೋಶ ಸೇರಿದಂತೆ ಹಲವು ಆಂತರಿಕ ಭಾಗಗಳಿಲ್ಲದಿರುವುದು ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.

Read Full Story

12:13 PM (IST) Jul 01

ಭಾರತ ಎದುರಿನ ಮೊದಲ ಟಿ20 ಪಂದ್ಯಕ್ಕೆ ಬಲಿಷ್ಠ ಇಂಗ್ಲೆಂಡ್ ಪ್ಲೇಯಿಂಗ್ XI ಪ್ರಕಟ; 2 ಮೇಜರ್ ಚೇಂಜ್, ಜೋಫ್ರಾ ಆರ್ಚರ್‌ಗಿಲ್ಲ ಸ್ಥಾನ!

ಬೆಂಗಳೂರು: ಹಾಲಿ ಚಾಂಪಿಯನ್ ಭಾರತ ತಂಡವಿಂದು ಬಲಿಷ್ಠ ಇಂಗ್ಲೆಂಡ್ ಎದುರು ಟಿ20 ಸರಣಿಯನ್ನಾಡಲು ಕಣಕ್ಕಿಳಿಯುತ್ತಿದೆ. ಮೊದಲ ಪಂದ್ಯಕ್ಕೆ ಇದೀಗ ಇಂಗ್ಲೆಂಡ್ ಆಡುವ ಹನ್ನೊಂದರ ಬಳಗ ಪ್ರಕಟವಾಗಿದೆ. ಇಂಗ್ಲೆಂಡ್ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ ನೋಡೋಣ ಬನ್ನಿ.

 

Read Full Story

11:55 AM (IST) Jul 01

Amarnath Yatra - ಅಮರನಾಥ ಯಾತ್ರೆಗೆ ಸ್ಪಾಟ್ ರಿಜಿಸ್ಟ್ರೇಷನ್ ಶುರು; ಭದ್ರತಾ ವ್ಯವಸ್ಥೆಗೆ ಭಕ್ತರು ಫಿದಾ!

ಜುಲೈ 3 ರಿಂದ ಅಮರನಾಥ ಯಾತ್ರೆ ಆರಂಭವಾಗಲಿದ್ದು, ತಾವಿ ನದಿ ತೀರದಲ್ಲಿ ಸ್ಪಾಟ್ ರಿಜಿಸ್ಟ್ರೇಷನ್ ಶುರುವಾಗಿದೆ. ವಾರ್ಷಿಕ ಯಾತ್ರೆಗೆ ಅಮರನಾಥ ದೇಗುಲ ಮಂಡಳಿ ಮಾಡಿರುವ ಭದ್ರತೆ ಮತ್ತು ವ್ಯವಸ್ಥೆಗಳನ್ನು ಭಕ್ತರು ಶ್ಲಾಘಿಸಿದ್ದಾರೆ.
Read Full Story

11:00 AM (IST) Jul 01

ಚಿನ್ನ ಕೊಳ್ಳೋರಿಗೆ ಗುಡ್ ನ್ಯೂಸ್; ಮತ್ತೆ ಬಂಗಾರದ ಬೆಲೆಯಲ್ಲಿ ಮಹಾ ಕುಸಿತ! ಇವತ್ತಿನ ಗೋಲ್ಡ್ ರೇಟ್ ಮಾಹಿತಿ ಇಲ್ಲಿದೆ

ಬೆಂಗಳೂರು: ಆಷಾಢ ಮಾಸ ಶುರುವಾದ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಕುಸಿತ ಕಾಣಲಾರಂಭಿಸಿದೆ. ಇದು ಚಿನ್ನ ಖರೀದಿಸುವವರ ಪಾಲಿಗೆ ನಿಜಕ್ಕೂ ಸಿಹಿಸುದ್ದಿಯಾಗಿದೆ. ಅಷ್ಟಕ್ಕೂ ಜುಲೈ 01ರಂದು ಚಿನ್ನದ ಬೆಲೆ ಎಷ್ಟಿದೆ ಎನ್ನುವುದನ್ನು ನೋಡೋಣ ಬನ್ನಿ.

 

Read Full Story

09:19 AM (IST) Jul 01

'ನನಗ್ಯಾವ....' ವೈಭವ್ ಸೂರ್ಯವಂಶಿ ಬಗ್ಗೆ ನಾಯಕ ಶ್ರೇಯಸ್ ಅಯ್ಯರ್ ವ್ಯಂಗ್ಯ? ಹೀಗ್ಯಾಕೆ ಅಂದ್ರು ಟೀಂ ಇಂಡಿಯಾ ಕ್ಯಾಪ್ಟನ್?

ಚೆಸ್ಟರ್-ಲೆ-ಸ್ಟ್ರೀಟ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಗೆ ಕ್ಷಣಗಣನೆ ಶುರುವಾಗಿದೆ. ಹೀಗಿರಿವಾಗಲೇ ನಾಯಕ ಶ್ರೇಯಸ್ ಅಯ್ಯರ್ ಅವರ ಅಹಂನಿಂದ ಕೂಡಿದ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಅಯ್ಯರ್ ಏನಂದ್ರು ನೋಡೋಣ ಬನ್ನಿ.

 

Read Full Story

08:57 AM (IST) Jul 01

ಮೋದಿ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳಿದ ಸ್ವಾರಸ್ಯಕರ ಘಟನೆ ಹಂಚಿಕೊಂಡ ಅಮೆರಿಕದ ರಾಯಭಾರಿ

ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ನಡುವಿನ ಗಾಢ ಸ್ನೇಹದ ಬಗ್ಗೆ ಭಾರತದಲ್ಲಿನ ಅಮೆರಿಕ ರಾಯಭಾರಿ ಸರ್ಗಿಯೋ ಗೋರ್ ಮಾತನಾಡಿದ್ದಾರೆ. ಟ್ರಂಪ್ ಅವರು ಮೋದಿಯನ್ನು ನಿಜವಾದ ಸ್ನೇಹಿತ ಎಂದು ಪರಿಗಣಿಸುತ್ತಾರೆ ಎಂಬುದಕ್ಕೆ ಸ್ವಾರಸ್ಯಕರ ಪ್ರಸಂಗವೊಂದನ್ನು ವಿವರಿಸಿದ್ದಾರೆ.

Read Full Story

08:51 AM (IST) Jul 01

ಐರ್ಲೆಂಡ್‌ ಶಾಕ್‌ ಬಳಿಕ ಭಾರತಕ್ಕಿನ್ನು ಇಂಗ್ಲೆಂಡ್‌ ಚಾಲೆಂಜ್‌..! ಇಂದು ವೈಭವ್ ಸೂರ್ಯವಂಶಿಗೆ ಸಿಗುತ್ತಾ ಸ್ಥಾನ?

ಐರ್ಲೆಂಡ್‌ ವಿರುದ್ಧದ ಸೋಲಿನ ನಂತರ, ಶ್ರೇಯಸ್‌ ಅಯ್ಯರ್‌ ನಾಯಕತ್ವದ ಭಾರತ ತಂಡವು ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿಗೆ ಸಜ್ಜಾಗಿದೆ. ಈ ಸರಣಿಯಲ್ಲಿ 15 ವರ್ಷದ ಯುವ ಆಟಗಾರ ವೈಭವ್‌ ಸೂರ್ಯವಂಶಿ ಪಾದಾರ್ಪಣೆ ಮಾಡುವ ನಿರೀಕ್ಷೆಯಿದ್ದು, ಹ್ಯಾರಿ ಬ್ರೂಕ್‌ ನೇತೃತ್ವದ ಇಂಗ್ಲೆಂಡ್ ತಂಡದಿಂದ ಕಠಿಣ ಸವಾಲು ಎದುರಾಗಲಿದೆ.
Read Full Story

08:18 AM (IST) Jul 01

FIFA World Cup - 1934ರ ಬಳಿಕ ಮೊದಲ ಬಾರಿ ಪ್ರಿಕ್ವಾರ್ಟರ್‌ಗೇರದೇ ಹೊರಬಿದ್ದ ನೆದರ್‌ಲೆಂಡ್ಸ್‌

ಫಿಫಾ ವಿಶ್ವಕಪ್‌ನಲ್ಲಿ ಮೊರಾಕ್ಕೊ ವಿರುದ್ಧ ನೆದರ್‌ಲೆಂಡ್ಸ್‌ ಪೆನಾಲ್ಟಿ ಶೂಟೌಟ್‌ನಲ್ಲಿ 2-3 ಗೋಲುಗಳಿಂದ ಸೋತಿದೆ. ಈ ಮೂಲಕ 3 ಬಾರಿ ರನ್ನರ್‌-ಅಪ್‌ ಆಗಿರುವ ಡಚ್ ಪಡೆ, ಇದೇ ಮೊದಲ ಬಾರಿಗೆ ಅಂತಿಮ 16ರ ಸುತ್ತು ತಲುಪಲು ವಿಫಲವಾಗಿ ಐತಿಹಾಸಿಕ ಮುಖಭಂಗ ಅನುಭವಿಸಿದೆ.
Read Full Story

08:03 AM (IST) Jul 01

ಫಿಫಾ ವಿಶ್ವಕಪ್ ಅಚ್ಚರಿ - ನಾಲ್ಕು ಬಾರಿಯ ಚಾಂಪಿಯನ್ ಜರ್ಮನಿಯ ಪತನಕ್ಕೆ ಕಾರಣವಾದ ಆ ಹೀರೋ ಯಾರು?

ಫಿಫಾ ವಿಶ್ವಕಪ್‌ನಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ದಾಖಲಾಗಿದ್ದು, 4 ಬಾರಿಯ ಚಾಂಪಿಯನ್ ಜರ್ಮನಿ ತಂಡವು ಪರಗ್ವೆ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಈ ಪಂದ್ಯದಲ್ಲಿ ಜರ್ಮನಿಯ ಹಲವು ಗೋಲು ಪ್ರಯತ್ನಗಳನ್ನು ತಡೆದು, ಪೆನಾಲ್ಟಿ ಶೂಟೌಟ್‌ನಲ್ಲೂ ಮಿಂಚಿದ ಪರಗ್ವೆ ಗೋಲ್‌ಕೀಪರ್ ಓರ್ಲಾಂಡೊ ಗಿಲ್ ಹೀರೋ ಆಗಿ ಹೊರಹೊಮ್ಮಿದರು.
Read Full Story

07:44 AM (IST) Jul 01

TVK Govt - ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದ ಸಿಎಂ ವಿಜಯ್; ತಮಿಳುಗರು ಫುಲ್ ಖುಷ್

ತಮಿಳುನಾಡಿನ ಸಿಎಂ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಮಹತ್ವದ ಬದಲಾವಣೆ ತರಲು ನಿರ್ಧರಿಸಿದೆ. ಈ ಬಗ್ಗೆ ಸಿಎಂ ಜೋಸೆಫ್ ವಿಜಯ್ ಮಾಧ್ಯಮಗಳೊಂದಿಗೆ ಮಾತನಾಡಿ ಮಾಹಿತಿಯನ್ನು ನೀಡಿದ್ದಾರೆ. 

Read Full Story

07:34 AM (IST) Jul 01

ರಾಮಮಂದಿರದಲ್ಲಿ ದೇಣಿಗೆ ಕಳವು - ಚಂಪತ್ ರಾಯ್ ಮುಂದೆ 4 ಪ್ರಶ್ನೆ ಮುಂದಿಟ್ಟ ಎಸ್‌ಐಟಿ

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ, ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಅವರನ್ನು ವಿಚಾರಣೆ ನಡೆಸಿದ್ದು, ಅವರು ಹಗರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ವಿವಾದವು ರಾಜಕೀಯ ತಿರುವು ಪಡೆದಿದ್ದು, ಕಾಂಗ್ರೆಸ್ ಪ್ರಧಾನಿ ಮೋದಿಯವರ ಮೌನವನ್ನು ಪ್ರಶ್ನಿಸಿದರೆ, ಸಿಎಂ ಯೋಗಿ ಆದಿತ್ಯನಾಥ್ ವಿಪಕ್ಷಗಳ ನಿಲುವನ್ನು ಟೀಕಿಸಿದ್ದಾರೆ.
Read Full Story

07:08 AM (IST) Jul 01

ಜುಲೈ ತಿಂಗಳ ಮೊದಲ ದಿನವೇ ಗುಡ್‌ನ್ಯೂಸ್; LPG ದರದಲ್ಲಿ ಗಣನೀಯ ಇಳಿಕೆ, ಕಡಿಮೆಯಾದ ಹೊರೆ

ತೈಲ ಕಂಪನಿಗಳು ಜುಲೈ 1 ರಿಂದ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹183.50 ರಷ್ಟು ಇಳಿಕೆ ಮಾಡಿವೆ. ಆದರೆ, ಗೃಹಬಳಕೆಯ 14 ಕೆಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಸ್ಥಿರವಾಗಿರಿಸಲಾಗಿದೆ. ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಕಡಿಮೆಯಾಗಿದೆ.

Read Full Story

More Trending News