ಭಂಡಾರ: ಮಹಾರಾಷ್ಟ್ರದ ರೈತ ಮಹಿಳೆಯೊಬ್ಬರಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಬರಬೇಕಿದ್ದ 2 ಸಾವಿರ ರು.ಹಣದ ಬದಲು ಕೇವಲ 1 ಪೈಸೆ ರು. ಜಮೆ ಆಗಿರುವ ಸಂದೇಶ ಬಂದಿದೆ. ಈ ಬೆನ್ನಲ್ಲೇ ‘ತಾಂತ್ರಿಕ ದೋಷದಿಂದ ತಪ್ಪು ಸಂದೇಶ ಬಂದಿದೆ. ಆದರೆ ಪೂರ್ತಿ ಹಣ ಜಮಾ ಆಗಿದೆ’ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದೆ.
ಭಂಡಾರ ಜಿಲ್ಲೆಯ ಜೇವನಾಳ ಗ್ರಾಮದ 65 ವರ್ಷದ ರೈತ ಮಹಿಳೆ ಲಕ್ಷ್ಮೀಬಾಯಿ ಎನ್ನುವವರ ಮೊಬೈಲ್ಗೆ ‘ಕಿಸಾನ್ ಕಂತಿನ ಹಣವಾಗಿ 0.01 ರು. ಗಳನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ’ ಎನ್ನುವ ಸಂದೇಶ ಬಂದಿತ್ತು. ಇದರ ಬೆನ್ನಲ್ಲೇ ಅವರ ಪುತ್ರ ಮಾಧ್ಯಮಗಳಲ್ಲಿ ಅಳಲು ತೋಡಿಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಕೃಷಿ ಇಲಾಖೆ ‘ಸಂದೇಶ ತಾಂತ್ರಿಕ ದೋಷದಿಂದ ಹೋಗಿದೆ. ದಾಖಲೆಗಳ ಪ್ರಕಾರ ರೈತನ ಖಾತೆಗೆ 2000 ರು. ಯಶಸ್ವಿಯಾಗಿ ಜಮಾ ಆಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
09:19 AM (IST) Jul 01
ಚೆಸ್ಟರ್-ಲೆ-ಸ್ಟ್ರೀಟ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಗೆ ಕ್ಷಣಗಣನೆ ಶುರುವಾಗಿದೆ. ಹೀಗಿರಿವಾಗಲೇ ನಾಯಕ ಶ್ರೇಯಸ್ ಅಯ್ಯರ್ ಅವರ ಅಹಂನಿಂದ ಕೂಡಿದ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಅಯ್ಯರ್ ಏನಂದ್ರು ನೋಡೋಣ ಬನ್ನಿ.
08:57 AM (IST) Jul 01
ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ನಡುವಿನ ಗಾಢ ಸ್ನೇಹದ ಬಗ್ಗೆ ಭಾರತದಲ್ಲಿನ ಅಮೆರಿಕ ರಾಯಭಾರಿ ಸರ್ಗಿಯೋ ಗೋರ್ ಮಾತನಾಡಿದ್ದಾರೆ. ಟ್ರಂಪ್ ಅವರು ಮೋದಿಯನ್ನು ನಿಜವಾದ ಸ್ನೇಹಿತ ಎಂದು ಪರಿಗಣಿಸುತ್ತಾರೆ ಎಂಬುದಕ್ಕೆ ಸ್ವಾರಸ್ಯಕರ ಪ್ರಸಂಗವೊಂದನ್ನು ವಿವರಿಸಿದ್ದಾರೆ.
08:51 AM (IST) Jul 01
08:18 AM (IST) Jul 01
08:03 AM (IST) Jul 01
07:44 AM (IST) Jul 01
ತಮಿಳುನಾಡಿನ ಸಿಎಂ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಮಹತ್ವದ ಬದಲಾವಣೆ ತರಲು ನಿರ್ಧರಿಸಿದೆ. ಈ ಬಗ್ಗೆ ಸಿಎಂ ಜೋಸೆಫ್ ವಿಜಯ್ ಮಾಧ್ಯಮಗಳೊಂದಿಗೆ ಮಾತನಾಡಿ ಮಾಹಿತಿಯನ್ನು ನೀಡಿದ್ದಾರೆ.
07:34 AM (IST) Jul 01
07:08 AM (IST) Jul 01
ತೈಲ ಕಂಪನಿಗಳು ಜುಲೈ 1 ರಿಂದ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ₹183.50 ರಷ್ಟು ಇಳಿಕೆ ಮಾಡಿವೆ. ಆದರೆ, ಗೃಹಬಳಕೆಯ 14 ಕೆಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಸ್ಥಿರವಾಗಿರಿಸಲಾಗಿದೆ. ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ವಾಣಿಜ್ಯ ಸಿಲಿಂಡರ್ಗಳ ಬೆಲೆ ಕಡಿಮೆಯಾಗಿದೆ.