ನವವಿವಾಹಿತರು ಹನಿಮೂನ್ ಸಂತೋಷವನ್ನು ಹಾಳು ಮಾಡಿಕೊಳ್ಳುವುದೇಕೆ?

First Published Sep 7, 2021, 6:18 PM IST

ನೀವು ಈಗಷ್ಟೇ ವಿವಾಹವಾಗಿದ್ದೀರಾ? ಮದುವೆ ನಂತರ ಮಧುಚಂದ್ರಕ್ಕೆ ಹೋಗಲು ತಯಾರಿ ನಡೆಸಿದ್ದೀರಾ? ಹನಿಮೂನ್ ಉತ್ಸಾಹ ದಂಪತಿಗಳಲ್ಲಿ ಅತ್ಯಂತ ಭಿನ್ನವಾಗಿದೆ. ಮದುವೆಯ ಎಲ್ಲಾ ಆಚರಣೆಗಳನ್ನು ಮುಗಿಸಿದ ನಂತರ, ಪ್ರತಿ ನವ ವಿವಾಹಿತನು ತನ್ನ ಸಂಗಾತಿಯೊಂದಿಗೆ ಸಾಕಷ್ಟು ಸಮಯವನ್ನು ಕಳೆಯಲು ಹನಿಮೂನ್ ಹೋಗಲು ಕಾಯುತ್ತಾನೆ.

ಮದುವೆಗಿಂತ ಮೊದಲೇ, ದಂಪತಿ ಮಧುಚಂದ್ರಕ್ಕೆ ಹೋಗಿ ಆ ಸುಂದರ ಜಾಗದಲ್ಲಿ ಏನು ಮಾಡಬೇಕು ಎಂಬುದನ್ನೆಲ್ಲಾ ಯೋಜಿಸುತ್ತಾರೆ. ಆಗಲೂ, ಹೆಚ್ಚಿನ ದಂಪತಿ ತಮ್ಮ ಪ್ರಯಾಣವನ್ನು ರೋಮ್ಯಾಂಟಿಕ್ ಮಾಡುವಲ್ಲಿ ತಪ್ಪುಗಳನ್ನು ಮಾಡುತ್ತಾರೆ, ಇದು ಅವರ ಹನಿಮೂನ್ ಸಂತೋಷವನ್ನು ಹಾಳು ಮಾಡುತ್ತದೆ.  

ಮೊದಲನೆಯದಾಗಿ, ಪೀಕ್ ಸೀಸನ್‌ನಲ್ಲಿ ಹೋಗಬೇಡಿ 
ಹನಿಮೂನ್ ಮೆಮೊರೇಬಲ್ ಆಗಿರಬೇಕು ಎಂದು ನೀವು ಬಯಸದಿದ್ದರೆ,  ಸಂಗಾತಿಯೊಂದಿಗೆ ಪ್ರಕೃತಿಯ ಸೌಂದರ್ಯ  ತುಂಬಾ ಆರಾಮವಾಗಿ ಆನಂದಿಸಬಹುದಾದ ಸ್ಥಳ ಆಯ್ಕೆ ಮಾಡಿ. ಪೀಕ್ ಸೀಸನ್‌ನಲ್ಲಿ ಮಧುಚಂದ್ರಕ್ಕಾಗಿ ಈಗಾಗಲೇ ಸಾಕಷ್ಟು ಜನಸಂದಣಿ ಇರುವ ಸ್ಥಳಗಳನ್ನು ಆಯ್ಕೆ ಮಾಡಬೇಡಿ. ಇದರಿಂದ ಜನಜಂಗುಳಿಯಲ್ಲಿ ಕಳೆದು ಹೋಗಬೇಕಾಗುತ್ತದೆ. 

ಜನ ಹೆಚ್ಚಾಗಿದ್ದರೆ ನೀವು ಈ ಮೊದಲೇ ಯೋಚಿಸಿದಷ್ಟು ಸುಂದರವಾಗಿ ಹನಿಮೂನ್ ಆನಂದಿಸಲು ಸಾಧ್ಯವಿಲ್ಲ. ಎರಡನೆಯದಾಗಿ, ನಿಮ್ಮ ಬಜೆಟ್ ಕೂಡ ಹಾಳಾಗಬಹುದು. ಹನಿಮೂನ್ ತಾಣಗಳು ಇತರೆ ಸ್ಥಳಗಳಿಗಿಂತ ಹೆಚ್ಚು ದುಬಾರಿ ಎಂಬುದನ್ನು ನೆನಪಿನಲ್ಲಿಡಿ. ಆದ್ದರಿಂದ, ಅಂತಹ ಸಮಯದಲ್ಲಿ,  ವೆಚ್ಚಗಳ ಬಗ್ಗೆಯೂ ಗಮನ ಹರಿಸಬೇಕು.

ಫೋಟೋವನ್ನು ನಂತರವೂ ಅಪ್ ಲೋಡ್ ಮಾಡಿ
ಹೆಚ್ಚಿನ ಜನರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಫೋಟೋಗಳನ್ನು ಅಪ್ ಲೋಡ್ ಮಾಡಲು ಇಷ್ಟಪಡುತ್ತಾರೆ. ನೀವು ಏಕಾಂಗಿಯಾಗಿ ಪ್ರಯಾಣಿಸುವಾಗ, ಸೋಷಿಯಲ್ ಮೀಡಿಯಾದಲ್ಲಿ ಅಪ್ ಡೇಟ್ ನೀಡುವುದೇನೋ ಸರಿ. ಆದರೆ ಸಂಗಾತಿಯೊಂದಿಗೆ ಹೊರಟಾಗ, ಈ ಸಮಯ ಮತ್ತೆ ಸಿಗೋದಿಲ್ಲ ಅನ್ನೋದನ್ನು ನೆನಪಿಡಿ. 

ಹನಿಮೂನ್‌ಗೆ ಹೋದಾಗ ಪ್ರತಿ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುತ್ತಾ, ಜೀವನದ ಅತ್ಯಂತ ರೋಮ್ಯಾಂಟಿಕ್ ಸಮಯವನ್ನು ವ್ಯರ್ಥ ಮಾಡಬೇಡಿ. ಲೈಕ್ಸ್, ಕಾಮೆಂಟ್ ಮತ್ತು ಶೇರ್ ನಿಮ್ಮ ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ಇನ್ನೊಂದು ನಿಮ್ಮ ಸಂಗಾತಿಗೆ ಕೆಟ್ಟ ಭಾವನೆಯನ್ನು ಉಂಟು ಮಾಡಬಹುದು ಎಚ್ಚರವಾಗಿರಿ. 

ಕೇವಲ ಪ್ರೀತಿಸಲು ವಿಷಯಗಳನ್ನು ಮಾತನಾಡಿ
ದಂಪತಿಗಳು ತಮ್ಮ ಹೃದಯದ ಆಲೋಚನೆಗಳನ್ನು ಪರಸ್ಪರ ಹಂಚಿಕೊಳ್ಳಲು, ಮನಸು ಬಿಚ್ಚಿ ಮಾತನಾಡಲು ಮಧುಚಂದ್ರ ಸರಿಯಾದ ಸಮಯ ಅನ್ನೋದು ತಪ್ಪಲ್ಲ. ಆದರೆ, ಈ ಮಧ್ಯೆ ಕೆಲವರು ತಮ್ಮ ಹಿಂದಿನ ದಿನಗಳ ಬಗ್ಗೆ ಮಾತನಾಡಿ ವರ್ತಮಾನವನ್ನು ಹಾಳು ಮಾಡಿಕೊಳ್ಳುವವರಿದ್ದಾರೆ. ಈ ತಪ್ಪು ಮಾಡಬೇಡಿ. 

ಸಂಗಾತಿ ನಿಮ್ಮ ಗತಕಾಲದ ಬಗ್ಗೆ ನಿಮ್ಮಿಂದ ತಿಳಿದುಕೊಳ್ಳಲು ಬಯಸಬಹುದು, ಆದರೆ ಇದು ಎಕ್ಸ್ ಅನ್ನು ನೆನಪಿಟ್ಟುಕೊಳ್ಳುವ ಸಮಯವಲ್ಲ ಎಂಬುದನ್ನು ನೆನಪಿನಲ್ಲಿಡಿ, ಆದರೆ ಈ ಸಮಯದಲ್ಲಿ ನೀವಿಬ್ಬರೂ ಪರಸ್ಪರ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಮಧು ಚಂದ್ರದಲ್ಲಿ ಕಳೆದು ಹೋದ ವಿಷಯಗಳನ್ನು ಚರ್ಚಿಸುವುದು ನೀವು ದೀರ್ಘಕಾಲದವರೆಗೆ ವಿಷಾದಿಸುವ ವಿಷಯವಾಗಿದೆ. ಆದುದರಿಂದ ಪ್ರೀತಿಗೆ ಮಾತ್ರ ಆದ್ಯತೆ ನೀಡಿ. 
 

ಅತಿಯಾಗಿ ಯೋಜಿಸುವುದನ್ನು ತಪ್ಪಿಸಿ
ಮದುವೆಯ ಎಲ್ಲಾ ಸಡಗರ ಸಂಭ್ರಮ ಮುಗಿದ ನಂತರ ಸಂಗಾತಿಯೊಂದಿಗೆ ಮಧುಚಂದ್ರಕ್ಕೆ ಹೋಗಲು ನೀವು ಎಷ್ಟು ಉತ್ಸುಕರಾಗಿದ್ದೀರಿ ಎಂದು ನಮಗೆ ತಿಳಿದಿದೆ. ಆದರೆ ಈ ಸಮಯದಲ್ಲಿ ಅತಿಯಾಗಿ ಯೋಜಿಸಬೇಡಿ. ನೀವು ಯಾವುದಾದರೂ ವಿಷಯದ ಬಗ್ಗೆ ಅತಿಯಾಗಿ ಉತ್ಸುಕರಾಗಿದ್ದಾಗ, ವಿಷಯಗಳು ನೀವು ಊಹಿಸಿದಷ್ಟು ಉತ್ತಮವಾಗಿರುವುದಿಲ್ಲ. ಆದ್ದರಿಂದ  ಹೆಚ್ಚು ಹೆಚ್ಚು ನಿರೀಕ್ಷೆಗಳನ್ನು ಮಾಡಬೇಡಿ. 

ನಿಮ್ಮ ಪ್ರಯಾಣದಲ್ಲಿ ಯಾವುದೇ ತಪ್ಪನ್ನು ಲೆಕ್ಕಿಸಬಾರದು. ಈ ಸಮಯದಲ್ಲಿ  ಜೀವನ ಸಂಗಾತಿಯೊಂದಿಗೆ ಹೊಸ ನೆನಪುಗಳನ್ನು ಸೃಷ್ಟಿಸುವತ್ತ ಮಾತ್ರ ಗಮನ ಹರಿಸಿ. ಯೋಜನೆಯಿಂದಾಗಿ ನಿಮ್ಮಿಬ್ಬರ ನಡುವೆ ದೊಡ್ಡ ಜಗಳಕ್ಕೆ ಕಾರಣವಾಗಲು ಬಿಡಬೇಡಿ. ಬದಲಾಗಿ ಹನಿಮೂನ್‌ನಿಂದ ವಾಪಾಸ್ ಬರುವಾಗ ಇಬ್ಬರ ನಡುವೆ ಪ್ರೀತಿ ಗಾಢವಾಗಿ ಬೆಳೆಯಬೇಕು. 

click me!