ಪ್ರೇಯಸಿ ಕೊಲೆಗೆ ಯತ್ನಿಸಿ, ಆತ್ಮಹತ್ಯೆ ಮಾಡಿಕೊಂಡವ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ!
First Published May 27, 2020, 8:10 PM ISTಇವರಿಬ್ಬರು ಲವ್ ಬರ್ಡ್ಸ್. ಮೂಲತಃ ಮಂಡ್ಯ ಜಿಲ್ಲೆಯವರಾಗಿದ್ದು, ಕಾಲೇಜು ಓದುತ್ತಿರುವಾಗ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ. ಬಳಿಕ ಇಬ್ಬರು ಪ್ರೀತಿ-ಪ್ರೇಮ-ಪ್ರಣಯ ಪಕ್ಷಿಗಳಂತೆ ಈ ಜೋಡಿ ಹಕ್ಕಿ ಎಲ್ಲೆಂದರಲ್ಲಿ ತಿರುಗಾಡುತ್ತಾ ಕದ್ದುಮುಚ್ಚಿ ಪ್ರೀತಿ ಮಾಡುತ್ತಿತ್ತು. ಆದರೆ, ಅದೇನಾಯಿತೋ ಮದುವೆ ನಿರಾಕರಿಸಿದ್ದಾಳೆ ಹುಡುಗಿ. ರೊಚ್ಚಿಗೆದ್ದಿದ್ದಾನೆ ಹುಡುಗ. ಕಾದು ಕುಳಿದು, ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ನಿತ್ಯಾಶ್ರಿಗೆ ಚಿಕಿತ್ಸೆ ಮುಂದುವರಿದಿದೆ. ಹಲ್ಲೆ ಮಾಡಿದ ಗಿರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಓದುವಾಗ ರಾಷ್ಟ್ರೀಯ ಹಾಗೂ ರಾಜ್ಯ ತಂಡಗಳನ್ನೂ ಪ್ರತಿನಿಧಿಸಿದ್ದಿ ಗಿರೀಶ್ ಕಬಿಡ್ಡ ಆಟಗಾರನಾಗಿದ್ದು, ಪ್ರೆಯಸಿ ಮಾತಿಗೆ ಕಟ್ಟು ಬಿದ್ದು ಆಟ ಬಿಟ್ಟು ಬೆಂಗಳೂರು ಸೇರಿದ್ದ. ಆದರೆ, ಬರಬರುತ್ತಾ ನಿತ್ಯಾಶ್ರೀ ಗಿರೀಶ್ನನ್ನು ದೂರ ಮಾಡಲು ಆರಂಭಿಸಿದ್ದು, ಸಿರಿವಂತನನ್ನು ಮದುವೆಯಾಗುತ್ತೇನೆಂದು ಹೇಳುತ್ತಿದ್ದಳು ಎಂದು ಆರೋಪಿಸಲಾಗಿದೆ. ಈ ಜೋಡಿ ತೆಗೆದುಕೊಂಡು ಖಾಸಗೀ ಕ್ಷಣದ ಫೋಟೋಗಳಿವು.