ಪಾಕ್..ಕಾಂಗ್ರೆಸ್ ವಿರುದ್ಧ ಮೋದಿ ಕೆಂಡಕಾರಿದ್ದೇಕೆ ? ಲೋಕ ಸಂಗ್ರಾಮದಲ್ಲಿ ವೋಟ್ ಜಿಹಾದ್ ಅಬ್ಬರ!

ಪಾಕ್..ಕಾಂಗ್ರೆಸ್ ವಿರುದ್ಧ ಮೋದಿ ಕೆಂಡಕಾರಿದ್ದೇಕೆ ? ಲೋಕ ಸಂಗ್ರಾಮದಲ್ಲಿ ವೋಟ್ ಜಿಹಾದ್ ಅಬ್ಬರ!

Published : May 03, 2024, 04:57 PM IST

ರಂಗೇರಿದ ರಣಕಣದಲ್ಲಿ ಚಿತ್ರವಿಚಿತ್ರ ಯುದ್ಧತಂತ್ರ!
ಬಿಜೆಪಿಗೆ ವರವಾಗುತ್ತಾ ಖರ್ಗೆ ಶಿವ-ರಾಮ ಹೇಳಿಕೆ!
ರಾಜು ಕಾಗೆ ವಿರುದ್ಧ ತಿರುಗಿಬಿತ್ತು ರಾಜ್ಯ ಬಿಜೆಪಿ!
ಪಾಕಿಸ್ತಾನದ ಸಂಸತ್ನಲ್ಲೂ ಮೋದಿ ಬಗ್ಗೆ ಆತಂಕ!

ಮಲ್ಲಿಕಾರ್ಜುನ ಖರ್ಗೆ, ಕಾಗೆಯಂಥಾ ಕಾಂಗ್ರೆಸ್(Congress) ನಾಯಕರ ಮಾತುಗಳು. ಕಮಲ ಪಡೆಗೆ ಅಸ್ತ್ರಗಳಾಗಿ ಬದಲಾಗ್ತಿದ್ದಾವೆ. ರಾಹುಲ್ ಗಾಂಧಿ(Rahul Gandhi) ಪರ ಪಾಕಿಸ್ತಾನದ ನಾಯಕರೇ ಪ್ರಚಾರ ಮಾಡ್ತಿದ್ದಾರೆ. ಅದರ ವಿರುದ್ಧ ಮೋದಿ ಕೆಂಡಕಾರ್ತಿದ್ದಾರೆ. ಇದರ ಮಧ್ಯೆ, ಈ ಲೋಕ ಸಂಗ್ರಾಮದಲ್ಲಿ ವೋಟ್ ಜಿಹಾದ್(Jihad) ಅಬ್ಬರ ಬೇರೆ ಸದ್ದು ಮಾಡ್ತಾ ಇದೆ. ರಂಗೇರಿದ ರಣಕಣದಲ್ಲಿ ಚಿತ್ರವಿಚಿತ್ರ ಯುದ್ಧತಂತ್ರ ಸಿದ್ಧವಾಗಿದೆ. ಮೂರನೇ ಬಾರಿ ಗೆಲ್ಲೋಕೆ ಮೋದಿ ಪಡೆ ಸಜ್ಜಾಗ್ತಾ ಇದೆ. ಮೋದಿ ಅಶ್ವಮೇಧ ಕುದುರೆನಾ ಕಟ್ಟಿಹಾಕೋಕೆ ಕಾಂಗ್ರೆಸ್ ಪಾಳಯ ಸನ್ನದ್ಧವಾಗ್ತಾ ಇದೆ. ಈ ಎರಡೂ ಸೇನೆಗಳ ನಡುವಿನ ಸಂಘರ್ಷ, ಅಕ್ಷರಶಃ ರಣರೋಚಕವಾಗ್ತಾ ಇದೆ. ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ಸಾಹೇಬ್ರು, ಲೋಕಸಭೆ ಚುನಾವಣೆಯ(Lok Sabha elections 2024) ಪ್ರಚಾರ ಕಾರ್ಯದಲ್ಲಿ ಫುಲ್ ಬ್ಯುಸಿ ಇದಾರೆ. ಮಂಗಳವಾರ ಛತ್ತೀಸ್‌ಗಢದಲ್ಲಿ  ಪ್ರಚಾರಕ್ಕೆ ಅಂತ ಹೋಗಿದ್ದ ಖರ್ಗೆ ಅವರು, ವೇದಿಕೆ ಮೇಲೆ ಒಂದು ಮಾತು ಹೇಳಿದ್ರು. ಅದೇನು ಅಂದ್ರೆ, ರಾಮ(Rama) ಮತ್ತು ಶಿವನ ಬಗ್ಗೆಯಾಗಿದೆ. ಕಾಂಗ್ರೆಸ್ ರಾಮ ಮತ್ತು ಶಿವ(Shiva), ಈ ಇಬ್ಬರ ಮಧ್ಯೆ ಬೇಧ ಕಲ್ಪಿಸಿ, ಅವರವರ ಮಧ್ಯೆನೇ ಯುದ್ಧ ಮಾಡಿಸೋಕೆ ನೋಡ್ತಾ ಇದೆ. ಅಂಥಾ ಸಂಘರ್ಷದ ಅವಶ್ಯಕತೆಯಾದ್ರೂ ಇದೆಯಾ ಅನ್ನೋದು ಬಿಜೆಪಿ ಪ್ರಶ್ನೆ. ಬಿಜೆಪಿ ರಾಮನೇ ತಮಗೆ ಗೆಲುವಿನ ಸರದಾರ ಅನ್ನೋ ಹಾಗೆ ಬಿಂಬಿಸ್ತಾ ಇದ್ರೆ, ಕಾಂಗ್ರೆಸ್ ರಾಮನ ವಿರುದ್ಧ ಹೇಳಿಕೆ ಕೊಟ್ಟು ಹೊಸ ಅಸ್ತ್ರ ಸಿಗುವಂತೆ ಮಾಡಿದೆ.

ಇದನ್ನೂ ವೀಕ್ಷಿಸಿ:  ಕಾನೂನಿನ ಕುಣಿಕೆಯಲ್ಲಿ ಬಂಧಿಯಾಗ್ತಾರಾ ಅಪ್ಪ-ಮಗ!? ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸಿದ ಸಂತ್ರಸ್ತೆ..!

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more