Asianet Suvarna News Asianet Suvarna News

ಕಾಶ್ಮೀರ ವಿಷಯದಲ್ಲಿ ಇಡೀ ವಿಶ್ವ ಭಾರತವನ್ನೇ ನಂಬುತ್ತೆ, ನಮ್ಮನ್ನಲ್ಲ: ಪಾಕ್‌ ಸಚಿವ

ಕಾಶ್ಮೀರ ವಿಷಯದಲ್ಲಿ ವಿಶ್ವ ಸಮುದಾಯ ಭಾರತವನ್ನೇ ನಂಬುತ್ತೆ, ನಮ್ಮನ್ನಲ್ಲ: ಪಾಕ್‌| ಪಾಕ್‌ ಒಳಾಡಳಿತ ಸಚಿವ ಇಜಾಜ್‌ ಅಹಮದ್‌ ಶಾ

International community believes India not us Pakistan minister on Kashmir
Author
Bangalore, First Published Sep 13, 2019, 10:52 AM IST

ಇಸ್ಲಾಮಾಬಾದ್‌[ಸೆ.13]: ಜಮ್ಮು- ಕಾಶ್ಮೀರಕ್ಕೆ ವಿಶೇಷಾಧಿಕಾರ ರದ್ದು ಮಾಡಿದ್ದಕ್ಕೆ ಕೆಂಡ ಕಾರುತ್ತಿರುವ ಪಾಕಿಸ್ತಾನಕ್ಕೆ ಮತ್ತೊಂದು ಮುಖಭಂಗ ಉಂಟಾಗಿದೆ. ಆಡಳಿತಾರೂಢ ಸರ್ಕಾರದ ಸಚಿವರೊಬ್ಬರು ‘ಜಮ್ಮು- ಕಾಶ್ಮೀರ ವಿಷಯದಲ್ಲಿ ವಿಶ್ವ ಸಮುದಾಯದ ನಂಬಿಕೆ ಗಳಿಸಿಕೊಳ್ಳುವಲ್ಲಿ ಇಮ್ರಾನ್‌ ಖಾನ್‌ ನೇತೃತ್ವದ ಸರ್ಕಾರ ಎಡವಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ.

ಕಾಶ್ಮೀರ ಹಮಾರಾ ಹೈ: ಜಮೈತ್ ಉಲೆಮಾ-ಎ-ಹಿಂದ್ ಘರ್ಜನೆ!

ಟಾಕ್‌ ಶೋದಲ್ಲಿ ಮಾತನಾಡಿರುವ ಪಾಕಿಸ್ತಾನ ಒಳಾಡಳಿತ ಸಚಿವ ಇಜಾಜ್‌ ಅಹಮದ್‌ ಶಾ, ದೇಶವನ್ನು ಆಳುತ್ತಿರುವ ನಾಯಕರು ರಾಷ್ಟ್ರದ ಮಾನವನ್ನು ಕಳೆಯುತ್ತಿದ್ದಾರೆ. ನಮ್ಮದು ಜವಾಬ್ದಾರಿಯುತ ರಾಷ್ಟ್ರವಲ್ಲ ಎಂಬ ರೀತಿಯಲ್ಲಿ ವಿಶ್ವ ಸಮುದಾಯ ಪರಿಭಾವಿಸಿದೆ ಎಂದು ಹೇಳಿದ್ದಾರೆ.

ಕಾಶ್ಮೀರ ವಿವಾದ: ನಾವು ತಲೆ ಹಾಕಲ್ಲ ಎಂದ ವಿಶ್ವಸಂಸ್ಥೆ ಮುಖ್ಯಸ್ಥ!

ಅಲ್ಲದೇ ಜಮ್ಮು- ಕಾಶ್ಮೀರದಲ್ಲಿ ಭಾರತ ಕರ್ಫ್ಯೂ ಹೇರಿದ್ದರಿಂದ ಜನರಿಗೆ ಸಕಾಲದಲ್ಲಿ ಔಷಧ, ಜೀವನಾವಶ್ಯಕ ವಸ್ತುಗಳು ಸಿಗುತ್ತಿಲ್ಲ ಎಂದು ಪಾಕಿಸ್ತಾನ ವಾದಿಸಿದರೂ, ವಿಶ್ವಸಮುದಾಯ ಮಾತ್ರ ಭಾರತದ ನಿರ್ಧಾರವನ್ನೇ ನಂಬುತ್ತದೆ. ನಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಇದು ನಮ್ಮ ನೈತಿಕ ಸೋಲಾಗಿದೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

Follow Us:
Download App:
  • android
  • ios