Asianet Suvarna News Asianet Suvarna News

ಉದ್ಯೋಗದ ಬೆನ್ನಲ್ಲೇ ಮತ್ತೊಂದು ದಸರಾ ಗಿಫ್ಟ್: ಆಟೋ, ಕ್ಯಾಬ್​ ಚಾಲಕರಿಗೆ ಬಂಪರ್!

ನಿರೋದ್ಯೋಗಿಗಳಿಗೆ ಉದ್ಯೋಗದ ಬೆನ್ನಲ್ಲೇ ಕ್ಯಾಬ್, ಆಟೋ ಚಾಲಕರಿಗೆ ದಸರಾ ಉಡುಗೊರೆ ನೀಡಿದ ಆಂಧ್ರ ಸಿಎಂ| ವಾಹನ ಮಿತ್ರ ಯೋಜನೆ ಜಾರಿಗೊಳಿಸಿ ಚಾಲಕರಿಗೆ ಖುಷಿ ಕೊಟ್ಟ ಜಗನ್

Andhra Pradesh launches welfare scheme for auto taxi and cab drivers
Author
Bangalore, First Published Oct 5, 2019, 1:41 PM IST

ಅಮರಾವತಿ[ಅ.05]: ಕೆಲ ದಿನಗಳ ಹಿಂದಷ್ಟೇ 1.26 ಲಕ್ಷ ಸಿಬ್ಬಂದಿ ನೇಮಿಸಿ ಇತಿಹಾಸ ಸೃಷ್ಟಿಸಿದ್ದ ಆಂಧ್ರಪ್ರದೇಶ ಸಿಎಂ ಜನನ್ ಮೋಹನ್ ರೆಡ್ಡಿ ಸದ್ಯ ಮತ್ತೊನಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಕ್ಯಾಬ್ ಚಾಲಕರಿಗೆ ದಸರಾ ಉಡುಗೊರೆ ನೀಡಿದ್ದಾರೆ.

ಒಂದೇ ದಿನ 1.26 ಲಕ್ಷ ಸಿಬ್ಬಂದಿ ನೇಮಕ: ಸಿಎಂ ಜಗನ್ ಇತಿಹಾಸ!

ಹೌದು ಆಟೋ ಹಾಗೂ ಕ್ಯಾಬ್ ಚಾಲಕರಿಗಾಗಿ ಜಗನ್ ಮೋಹನ್ ರೆಡ್ಡಿ 'ವಾಹನ ಮಿತ್ರ' ಎಂಬ ಯೋಜನೆ ಜಾರಿಗೊಳಿಸಿದ್ದಾರೆ. ಈ ಯೋಜನೆಯಡಿಯಲ್ಲಿ  ಪ್ರತಿ ಆಟೋ, ಕ್ಯಾಬ್ ಮತ್ತು ಟ್ಯಾಕ್ಸಿ ಚಾಲಕರಿಗೆ ವರ್ಷವೊಂದಕ್ಕೆ 10 ಸಾವಿರ ರೂಪಾಯಿ ಸಹಾಯಧನ ಸಿಗಲಿದೆ. ಈ ಹಣವನ್ನು ವಿಮೆ, ವಾಹನ ರಿಪೇರಿ ಸೇರಿದಂತೆ ವಾಹನ ನಿರ್ವಹಣೆಗೆ ಈ ಹಣವನ್ನ ಬಳಸಿಕೊಳ್ಳಬಹುದು. ಪ್ರತಿಯೊಬ್ಬ ಚಾಲಕರ ಬ್ಯಾಂಕ್​ ಖಾತೆಗೆ ನೇರವಾಗಿ ಈ ಹಣ ಜಮಾವಣೆ ಮಾಡಲಾಗುತ್ತದೆ ಎಂದು ಆಂಧ್ರ ಸಿಎಂ ಜಗನ್ ಘೋಷಿಸಿದ್ದಾರೆ.

ದೇವಾಲಯಗಳಲ್ಲೂ SC/ST ಮೀಸಲು ಜಾರಿ, ಸರ್ಕಾರದ ಐತಿಹಾಸಿಕ ಕ್ರಮ!

ಈ ಯೋಜನೆ ಘೋಷಣೆ ಮಾಡಿದ ಸಿಎಂ ಜಗನ್ ಮೋಹನ್ ರೆಡ್ಡಿ 'ಆಟೋ ಹಾಗೂ ಕ್ಯಾಬ್ ಚಾಲಕರ ಕಷ್ಟವನ್ನು ನಾನೇ ಕಣ್ಣಾರೆ ನೋಡಿದ್ದೇನೆ. ಪ್ರತಿ ದಿನ 200 ರಿಂದ 500 ರೂಪಾಯಿ ಹಣ ಸಂಪಾದಿಸುವ ಚಾಲಕರಿಗೆ ಸಂಸಾರ ನಿಭಾಯಿಸುವುದು ಬಹಳ ಕಷ್ಟ. ಹೀಗಾಗಿ 5 ವರ್ಷದಲ್ಲಿ 50 ಸಾವಿರ ಹಣ ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುತ್ತದೆ. ಇಂತಹ ಯೋಜನೆ ಘೋಷಣೆ ಮಾಡಿರುವ ದೇಶದ ಏಕೈಕ ರಾಜ್ಯ ಆಂಧ್ರಪ್ರದೇಶ' ಎಂದಿದ್ದಾರೆ.

Follow Us:
Download App:
  • android
  • ios