ತಬ್ಲಿಘಿಗಳನ್ನು ಹೀರೋಗಳು ಎಂದ ಕರ್ನಾಟಕ ಕೇಡರ್ IAS ಅಧಿಕಾರಿ!
ಒಂದೆಡೆ ಮುಗಿಯದ ಕೊರೋನಾ ಆತಂಕ/ ಸೋಶಿಯಲ್ ಮೀಡಿಯಾದಲ್ಲಿ ವಿವಾದ ಎಬ್ಬಿಸಿದ ಐಎಎಸ್ ಅಧಿಕಾರಿ ಟ್ವೀಟ್/ ಸಮುದಾಯದ ಓಲೈಕೆಗೆ ಹೀಗೆಲ್ಲ ಮಾಡಬೇಕಾ?
ಬೆಂಗಳೂರು(ಏ. 28) ಕೊರೋನಾ ವೈರಸ್ ಆತಂಕ ಇಡೀ ಪ್ರಪಂಚ ಕಾಣುತ್ತಿದ್ದರೆ ಇಲ್ಲೊಬ್ಬರು ಐಎಎಸ್ ಅಧಿಕಾರಿ ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ. ಸಹಜವಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಬೆಂಕಿ ಹಚ್ಚಿದೆ.
ತಬ್ಲಿಘಿಗಳನ್ನು ಹೀರೋಗಳು ಎಂದು ಈ ಅಧಿಕಾರಿ ಕರೆದಿದ್ದಾರೆ. ತಬ್ಲಿಘಿಗಳ ವಿರುದ್ಧ ನೀವೆಲ್ಲ ಆರೋಪಗಳ ಸುರಿಮಳೆ ಮಾಡಿದಿ, ಆದರೆ ಮಾತ್ರ ಅವರು ಪ್ಲಾಸ್ಮಾ ಚಿಕಿತ್ಸೆಗೆ ರಕ್ತ ನೀಡಿ ಹೂಮಳೆ ಸುರಿಸಿದ್ದಾರೆ ಎಂದು ಐಎಎಸ್ ಅಧಿಕಾರಿ ಮಹಮದ್ ಮೊಹಸಿನ್ ಟ್ವೀಟ್ ಮಾಡಿದ್ದಾರೆ.
ಈ ಎರಡು ಜಿಲ್ಲೆಗಳಲ್ಲಿ ತಬ್ಲಿಘಿಗಳು ಮಾಡಿದ ಎಟವಟ್ಟು ಸಣ್ಣದಾ!
ಪ್ಲಾಸ್ಮಾ ಚಿಕಿತ್ಸೆಗೆ ಕೊರೋನಾದಿಂದ ಚೇತರಿಸಿಕೊಂಡವರ ರಕ್ತ ಪಡೆಯಲಾಗುತ್ತಿದೆ. ತಬ್ಲಿಘಿಗಳಿಂದಲೂ ರಕ್ತ ಪಡೆದುಕೊಳ್ಳಲಾಗಿದೆ. ಆದರೆ ಇದೇ ವಿಚಾರವನ್ನು ಇಟ್ಟುಕೊಂಡು ಅಧಿಕಾರಿ ಟ್ವೀಟ್ ಮಾಡಿದ್ದಾರೆ.
ವಿವಾದ ಎಬ್ಬಿಸುವುದು ಈ ಅಧಿಕಾರಿಗೆ ಹೊಸದೇನೂ ಅಲ್ಲ. ಹಿಂದೆ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ಮೋದಿ ಅವರ ಕಾರಬನ್ನೇ ಪರಿಶೀಲನೆ ಮಾಡಿ ಸುದ್ದಿಯಾಗಿದ್ದು. ಸಮುದಾಯವೊಂದನ್ನು ಓಲೈಕೆ ಮಾಡಲು ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ ಎಂಬ ಪ್ರಶ್ನೆ ಸಹ ಎದ್ದಿದೆ.