Asianet Suvarna News Asianet Suvarna News

ಹೆಣ್ಣು​ಮ​ಕ್ಕಳ ಕೆಣಕಿದವರ ಪರಿಸ್ಥಿತಿ ಏನಾಗಿದೆ.? ಇತಿಹಾಸ ಓದ್ಕೊಳ್ರಿ, ಕೇಸರಿ ಕಲಿಗೆ ಹೆಬ್ಬಾಳ್ಕರ್ ಟಾಂಗ್!

 'ರಾತ್ರಿ ರಾಜಕೀಯ ಮಾಡುವ ಸಂಸ್ಕೃತಿ ಭಾರತೀಯ ಜನತಾ ಪಾರ್ಟಿಯದ್ದಲ್ಲ. ಅದು ಕಾಂಗ್ರೆಸ್‌ ಸಂಸ್ಕೃತಿ. ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕಿಯಾಗಿದ್ದು ರಾತ್ರಿ ರಾಜಕೀಯದಿಂದ  ಎಂದು ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ವಿವಾದದ ಕಿಡಿ ಹೊತ್ತಿಸಿದ್ದಾರೆ.  
 

First Published Oct 3, 2021, 1:18 PM IST | Last Updated Oct 3, 2021, 1:18 PM IST

ಬೆಂಗಳೂರು (ಅ. 03): 'ರಾತ್ರಿ ರಾಜಕೀಯ ಮಾಡುವ ಸಂಸ್ಕೃತಿ ಭಾರತೀಯ ಜನತಾ ಪಾರ್ಟಿಯದ್ದಲ್ಲ. ಅದು ಕಾಂಗ್ರೆಸ್‌ ಸಂಸ್ಕೃತಿ. ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕಿಯಾಗಿದ್ದು ರಾತ್ರಿ ರಾಜಕೀಯದಿಂದ  ಎಂದು ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ವಿವಾದದ ಕಿಡಿ ಹೊತ್ತಿಸಿದ್ದಾರೆ.  

ಇದಕ್ಕೆ ಆಧುನಿಕ ಕಿತ್ತೂರು ರಾಣಿ ಚೆನ್ನಮ್ಮ, ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ಕೊಟ್ಟಿದ್ಧಾರೆ. ' ಹೆಣ್ಣು​ಮ​ಕ್ಕಳ ಬಗ್ಗೆ ಮಾತನಾಡಿದವರ ಪರಿಸ್ಥಿತಿ ಏನಾಗಿದೆ ಎನ್ನುವುದನ್ನು ಇತಿಹಾಸದ ಪುಟ ತಿರುವಿ ನೋಡಬೇಕು.  ನಿನಗೂ ಹೆಂಡಂದಿರಿದ್ದಾರೆ. ಮಗಳು ಇದ್ದಾಳೆ. ತಾಯಿ ಇದ್ದಾರೆ. ಅಕ್ಕ ತಂಗಿಯರು ಇದ್ದಾರೆ. ನೀನು ಏನು ಮಾತನಾಡಿದೆಯಲ್ಲ ನನಗೆ ಮಾತನಾಡಿಲ್ಲ. ನೀನು ಯಾರಿಗೆ ಮಾತನಾಡಿದ್ದೀಯಾ ಎನ್ನುವುದನ್ನು ವಿಮರ್ಶೆ ಮಾಡಿಕೊಳ್ಳಲಿ.  ನನ್ನ ಕ್ಷೇತ್ರದ ಮತದಾರರು, ನಮ್ಮ ಮುಖಂಡರು ಅವರಿಗೆ ಉತ್ತರ ಕೊಡುತ್ತಾರೆ' ಎಂದಿದ್ದಾರೆ. 

 

Video Top Stories