Asianet Suvarna News Asianet Suvarna News

ಗೂಂಡಾ ಶಿವಕುಮಾರ್, ಜಾತಿವಾದಿ ಸಿದ್ದರಾಮಯ್ಯ ಬರಲ್ಲ, ಮತ್ತೆ ಅಧಿಕಾರಕ್ಕೆ ಬರೋದು ನಾವು: ಈಶ್ವರಪ್ಪ

ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರೋದು ನಾವೇ. ಗೂಂಡಾ ಶಿವಕುಮಾರ್ ಬರ್ತಾನಾ.? ಜಾತಿವಾದಿ ಸಿದ್ದರಾಮಯ್ಯ ಬರ್ತಾನಾ..? ಅವರೇ ಬಡಿದಾಡ್ತಾ ಇದಾರೆ' ಎಂದು ಈಶ್ವರಪ್ಪ ಟಾಂಗ್ ನೀಡಿದ್ದಾರೆ. 
 

First Published Feb 19, 2022, 3:16 PM IST | Last Updated Feb 19, 2022, 3:35 PM IST

ಬೆಂಗಳೂರು (ಫೆ. 19): ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರೋದು ನಾವೇ. ಗೂಂಡಾ ಶಿವಕುಮಾರ್ ಬರ್ತಾನಾ.? ಜಾತಿವಾದಿ ಸಿದ್ದರಾಮಯ್ಯ ಬರ್ತಾನಾ..? ಅವರೇ ಬಡಿದಾಡ್ತಾ ಇದಾರೆ' ಎಂದು ಈಶ್ವರಪ್ಪ ಟಾಂಗ್ ನೀಡಿದ್ದಾರೆ. 

ರಾಷ್ಟ್ರೀಯ ವಿಚಾರ ಬಂದಾಗ ಭದ್ರಾವತಿ ಹಿಂದೆ ಉಳಿದಿಲ್ಲ. ಎರಡು ಟಗರು ಹಿಂದಿಕ್ಕಿ ಬಿಜೆಪಿಗೆ ಅತಿ ಹೆಚ್ಚು ಮತ ನೀಡಿದೆ' ಎಂದು ಭದ್ರಾವತಿಯಲ್ಲಿ ಈಶ್ವರಪ್ಪ ಹೇಳಿದ್ದಾರೆ.

Flag Row: ನಾವೂ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ರೆ ಕೇಸ್ ಹಾಕಲಿ: ಡಿಕೆಶಿ ಸವಾಲು

ಸಚಿವ ಈಶ್ವರಪ್ಪ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿಧಾನಮಂಡಲದ ಉಭಯ ಸದನಗಳಲ್ಲಿ ಕಾಂಗ್ರೆಸ್‌ ಹೋರಾಟ ನಡೆಸುತ್ತಿದೆ.  ಈಶ್ವರಪ್ಪ ವಜಾಕ್ಕೆ ಪಟ್ಟು ಹಿಡಿದು ಉಭಯ ಸದನಗಳಲ್ಲಿ ಗದ್ದಲ ಸೃಷ್ಟಿಸಿದರು. ಕಾಂಗ್ರೆಸ್‌ ಧರಣಿ, ಘೋಷಣೆಗಳ ನಡುವೆಯೇ ಪ್ರಶ್ನೋತ್ತರ, ವಿಧೇಯಕ ಮಂಡನೆಯ ಮೂಲಕ ಕಲಾಪ ನಡೆಸಲು ಯತ್ನಿಸಿದರೂ ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಸದನವನ್ನು ಮೊಟಕುಗೊಳಿಸಿ ಸೋಮವಾರಕ್ಕೆ ಮುಂದೂಡಲಾಗಿದೆ.