ಬೆಂಗಳೂರಿನಲ್ಲಿ ಸೋಂಕು ಹೆಚ್ಚಳಕ್ಕೆ ಶಾಕಿಂಗ್ ಕಾರಣ ಕೊಟ್ಟ ಆರ್ ಅಶೋಕ್
ಕೊರೊನಾ ಸೋಂಕು ಹೆಚ್ಚಳಕ್ಕೆ ಜನರ ನಿರ್ಲಕ್ಷ್ಯವೇ ಕಾರಣ ಎಂದು ಸರ್ಕಾರ ಪದೇ ಪದೇ ಹೇಳುತ್ತಿದೆ. ಇದೀಗ ಕಂದಾಯ ಸಚಿವ ಆರ್ ಅಶೋಕ್ ಇದೇ ಮಾತನ್ನು ಹೇಳಿದ್ದಾರೆ.
ಬೆಂಗಳೂರು (ಏ. 28): ಕೊರೊನಾ ಸೋಂಕು ಹೆಚ್ಚಳಕ್ಕೆ ಜನರ ನಿರ್ಲಕ್ಷ್ಯವೇ ಕಾರಣ ಎಂದು ಸರ್ಕಾರ ಪದೇ ಪದೇ ಹೇಳುತ್ತಿದೆ. ಇದೀಗ ಕಂದಾಯ ಸಚಿವ ಆರ್ ಅಶೋಕ್ ಇದೇ ಮಾತನ್ನು ಹೇಳಿದ್ದಾರೆ.
'ಬೆಂಗಳೂರಿನಲ್ಲಿ ಶೇ. 20 ರಷ್ಟು ಸೋಂಕಿತರು ತಮಗೆ ಕೊರೊನಾ ಸೋಂಕು ಇರುವುದನ್ನು ಹೇಳಿಲ್ಲವಂತೆ. ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಿಕೊಂಡು, ಮನೆ ಖಾಲಿ ಮಾಡಿದ್ದಾರೆ. ಎಸ್ಕೇಪ್ ಆಗಿರುವ ಸೋಂಕಿತರು ಎಲ್ಲಿ ಹೋಗಿದ್ದಾರೋ ಗೊತ್ತಿಲ್ಲ. ಇವರುಗಳಿಂದಲೇ ಸೋಂಕು ಹೆಚ್ಚಳವಾಗಿದೆ' ಎಂದಿದ್ದಾರೆ.