Asianet Suvarna News Asianet Suvarna News

Hijab Row: 'ತಲೆಕೆಟ್ಟ ಈಶ್ವರಪ್ಪ, ಬೊಮ್ಮಾಯಿ ಬಾಯಿಗೆ ಬೀಗ'  ಗದಗದಲ್ಲಿ ಗುಡುಗಿದ ಡಿಕೆಶಿ

* ಕೆಎಸ್ ಈಶ್ವರಪ್ಪ ಅವರಿಗೆ ತಲೆ ಕೆಟ್ಟಿದೆ
* ಸಂವಿಧಾನ ವಿರೋಧಿ ಹೇಳಿಕೆ ನೀಡುವವರ ಮೇಲೆ ಕ್ರಮ ಇಲ್ಲ
* ಸಿಎಂ ಬೊಮ್ಮಾಯಿ ಬಾಯಿಗೆ ಹೊಲಿಗೆ ಹಾಕಿಕೊಂಡಿದ್ದಾರೆ

First Published Feb 13, 2022, 7:48 PM IST | Last Updated Feb 13, 2022, 7:54 PM IST

ಗದಗ(ಫೆ. 13)  ಕೆಂಪು ಕೋಟೆ ಮೇಲೆ ಭಗವಾಧ್ವಜ ಹಾರಾಡಲಿದೆ ಎಂಬ ಸಚಿವ  ಕೆಎಸ್ ಈಶ್ವರಪ್ಪ (KS Eshwarappa ) ಹೇಳಿಕೆಗೆ ಡಿಕೆ ಶಿವಕುಮಾರ್ (DK Shivakumar) ಕೆಂಡ ಕಾರಿದ್ದಾರೆ. ಸಂವಿಧಾನಕ್ಕೆ ಧಕ್ಕೆ ತರುವಂತಹ  ಹೇಳಿಕೆ ನೀಡಿದರೂ ಬಾಯಿಗೆ ಹೊಲಿಗೆ ಹಾಕಿಕೊಂಡು ಸಿಎಂ ಬೊಮ್ಮಾಯಿ ಕುಳಿತುಕೊಂಡಿದ್ಧಾರೆ ಎಂದಿದ್ದಾರೆ.

Karnataka Politics ಒಂದೇ ಫೋನ್‌ ಕಾಲ್, ಸಿಎಂ ಇಬ್ರಾಹಿಂ ಯುಟರ್ನ್, ಜೆಡಿಎಸ್‌ಗೆ ಬಿಗ್ ಶಾಕ್

ಈಶ್ವರಪ್ಪ ಅವರಿಗೆ ತಲೆ ಕೆಟ್ಟಿದೆ.  ಬೊಮ್ಮಾಯಿ (Basavaraj Bommai) ಮಂತ್ರಿ ಮಂಡಳದಲ್ಲಿ ಏನಾಗುತ್ತಿದೆ ಎನ್ನುವುದೋ ಗೊತ್ತಾಗುತ್ತಿಲ್ಲ. ಕಾಂಗ್ರೆಸ್ (Congress) ಅಧಿಕಾರದಲ್ಲಿ ಇದ್ದರೆ ಹತ್ತು ನಿಮಿಷದಲ್ಲಿ ಇಂಥವರ ರಾಜೀನಾಮೆ ಪಡೆದುಕೊಳ್ಳುತ್ತಿದ್ದೇವು ಎಂದಿದ್ದಾರೆ.