Asianet Suvarna News Asianet Suvarna News

ಸಂಪುಟ ವಿಸ್ತರಣೆಗಾಗಿ ರಾಹುಲ್ ಗಾಂಧಿ ಜೊತೆ ರಾತ್ರಿ ಸತತ ಸಭೆ, ಶುರುವಾಯ್ತು ಮಂತ್ರಿಗಿರಿ ಲಾಬಿ!

ಸಚಿವ ಸ್ಥಾನ ನೀಡುವಂತೆ ಸಚಿವರ ಲಾಬಿ, ದೆಹಲಿಯಲ್ಲಿ ಬೀಡುಬಿಟ್ಟ ನಾಯಕರು, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಣದಲ್ಲಿ ಯಾರು ಯಾರಿದ್ದಾರೆ, ಕೇಸರಿ ಬಣ್ಣದ ಬಗ್ಗೆ ಕಾಂಗ್ರೆಸ್ ಸಿಟ್ಟೇಕೆ? ಬಿಜೆಪಿ ತಿರುಗೇಟು, ವಿದ್ಯತ್ ಬಿಲ್ ಕಟ್ಟಲ್ಲ, ಟಿಕೆಟ್ ಖರೀದಿ ಮಾಡಲ್ಲ, ಜನರ ಗಲಾಟೆ ಸೇರಿದಂತೆ ಇಂದಿನ ಇಡೀ ದಿನದ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ. 

ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆ ಸರ್ಕಸ್ ಇದೀಗ ದೆಹಲಿಗೆ ತಲುಪಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ತಲುಪಿದ್ದಾರೆ. ರಾತ್ರಿ ರಾಹುಲ್ ಗಾಂಧಿ ಜೊತೆ ಸತತ ಸಭೆ ನಡೆಸಿ 20 ಶಾಸಕರ ಮಂತ್ರಿಗಿರಿ ಪಟ್ಟಿ ಅಂತಿಮಗೊಳ್ಳುವ ಸಾಧ್ಯತೆ ಇದೆ.ಕಾಂಗ್ರೆಸ್ ನಾಯಕರು ಈಗಾಗಲೇ ದೆಹಲಿಯಲ್ಲಿ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಭೇಟಿಯಾಗಿ ಮಂತ್ರಿಗಿರಿಗಾಗಿ ಲಾಬಿ ಶುರುಮಾಡಿದ್ದಾರೆ. ಕಾಂಗ್ರೆಸ್ ಬಹುತೇಕ ಶಾಸಕರು ಇದೀಗ ದೆಹಲ್ಲಿ ಬೀಡು ಬಿಟ್ಟಿದ್ದಾರೆ. ಇತ್ತ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಮುಗಿ ಬಿದ್ದಿದ್ದಾರೆ.ಡಿಕೆ ಶಿವಕುಮಾರ್ ನೀಡಿದ ಕೇಸರೀಕರಣ ವಾರ್ನಿಂಗ್‌ಗೆ ತಿರುಗೇಟು ನೀಡಿದ್ದಾರೆ. 

Video Top Stories