Asianet Suvarna News Asianet Suvarna News

ಪೇಶ್ವೆ ಬ್ರಾಹ್ಮಣ ಬಾಂಬ್ ಬಳಿಕ ಯಡಿಯೂರಪ್ಪ ಅಸ್ತ್ರ, ಅಧಿಕಾರ ಹಿಡಿಯಲು ಹೆಚ್‌ಡಿಕೆ ನಾನಾ ವೇಷ!

2008ರ ವಚನಭ್ರಷ್ಟತೆ ಮತ್ತೆ ಅಬ್ಬರ, ಬಿಜೆಪಿಗೆ ವರವಾಗುತ್ತಾ?  ಹೆಚ್‌ಡಿಕೆ ಪೇಶ್ವೇ ಆರೋಪಕ್ಕೆ, ಪ್ರಹ್ಲಾದ್ ಜೋಶಿ ತಿರುಗೇಟು, ಜಾತಿವಾದಿ ಜನತಾದಳ ಎಂದು ಹೆಸರು ಬದಲಿಸಿ, ಸಿಟಿ ರವಿ ಟಾಂಗ್, ಮೋದಿ ಕಲಬುರಗಿ ಭೇಟಿಗೆ ಖರ್ಗೆ ವಿಚಲಿತ, ರಾಜ್ಯಸಭೆಯಲ್ಲಿ ಮೋದಿ ಭಾಷಣ ಸೇರಿದಂತೆ ಇಂದಿನ ಇಡೀ ದಿನ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published Feb 9, 2023, 10:51 PM IST | Last Updated Feb 9, 2023, 10:51 PM IST

ಹೆಚ್‌ಡಿ ಕುಮಾರಸ್ವಾಮಿ ಬ್ರಾಹ್ಮಣ ಹೇಳಿಕೆ ನೇರವಾಗಿ ಪ್ರಹ್ಲಾದ್ ಜೋಶಿಯನ್ನು ಗುರಿಯಾಸಿ ಅನ್ನೋ ಚರ್ಚೆ ನಡೆಯುತ್ತಿತ್ತು. ಆದರೆ ನಿನ್ನೆ ಹೆಚ್‌ಡಿಕೆ ಲಿಂಗಾಯಿತರು ಈ ಬಾರಿ ಬಿಜೆಪಿ ಕೈಹಿಡಿಯಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಬ್ರಾಹ್ಣಣ ಸಿಎಂ ಮಾಡುವ ಮೂಲಕ ಲಿಂಗಾಯಿತರಿಗೆ ಏನೂ ಇಲ್ಲ. ಬಿಜೆಪಿಗೆ ಮತ ಹಾಕಬೇಡಿ ಅನ್ನೋ ಅತೀ ದೊಡ್ಡ ಮಾಸ್ಟರ್ ಪ್ಲಾನ್ ಕುಮಾರಸ್ವಾಮಿ ಮಾಡಿದ್ದಾರೆ. ಇದೇ ವೇಳೆ ಬಿಎಸ್ ಯಡಿಯೂರಪ್ಪ ವಿಚಾರ ತಂದು ಲಿಂಗಾಯಿತ ಮತಗಳನ್ನು ಜೆಡಿಎಸ್‌ನತ್ತ ತಿರುಗಿಸಲು ಯತ್ನಿಸಿದ್ದಾರೆ. ಬ್ರಾಹ್ಮಣ ಸಿಎಂ ಬಳಿಕ ಹೆಚ್‌ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಯಡಿಯೂರಪ್ಪನವರು ನನ್ನ ಬಳಿ ಬಂದು ಮಂತ್ರಿ ಮಾಡಿ ಎಂದು ಮನವಿ ಮಾಡಿದ್ದರು. ಬಿಜೆಪಿಯಲ್ಲಿ ಆಗಿರುವ ಅವಮಾನದಿಂದ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ನಿಮ್ಮ ಪಕ್ಷದಲ್ಲಿ ಮಂತ್ರಿ ಸ್ಥಾನ ನೀಡಿ ಎಂದು ಬಿಎಸ್‌ವೈ ಕೇಳಿಕೊಂಡಿದ್ದರು. ಅವರಿಗೆ ರಾಜೀನಾಮೆ ನೀಡಬೇಡಿ ಎಂದು ಸಲಹೆ ನೀಡಿದ್ದೆ ಎಂದಿದ್ದಾರೆ. 

Video Top Stories