ಉತ್ತರ ಕರ್ನಾಟಕ ಪ್ರವಾಹ ಪೀಡಿತರಿಗೆ ನಟಿ ಲೀಲಾವತಿ ನೆರವು
ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ತಾಯಿ -ಮಗ ಇಂದು [ಗುರುವಾರ] ಸುವರ್ಣ ನ್ಯೂಸ್ ಕಚೇರಿಗೆ ಬಂದು ತಮ್ಮ ಕೈಲಾದ ಸಹಾಯ ಮಾಡಿದರು.
ಬೆಂಗಳೂರು, [ಆ.08]: ಕಳೆದ ಬಾರಿ ಕೊಡಗು ಜಿಲ್ಲೆ ಪ್ರವಾಹದಿಂದ ತತ್ತರಿಸಿದಾಗ ಸುವರ್ಣ ನ್ಯೂಸ್ ಜನರಲ್ಲಿ ನೆರವು ಕೇಳಿ ಆಹಾರ ಸಾಮಾಗ್ರಿ, ಬಟ್ಟೆ, ನೀರು ಎಲ್ಲವನ್ನೂ ನೆರೆ ಸಂತ್ರಸ್ತರಿಗೆ ತಲುಪಿಸುವ ಕೆಲಸ ಮಾಡಿತ್ತು. ಈ ಬಾರಿಯೂ ಸುವರ್ಣ ನ್ಯೂಸ್ ನೆರವು ಕಾರ್ಯಾಚರಣೆ ನಡೆಸುತ್ತಿದ್ದು, ಜನರು ನೀರು, ಆಹಾರ, ಬಟ್ಟೆ, ಬೆಡ್ಶೀಟ್ ಸೇರಿ ತಮ್ಮಿಂದಾಗುವ ನೆರವನ್ನು ಮಾಡಬಹುದಾಗಿದೆ. ಜನರು ಸುವರ್ಣ ನ್ಯೂಸ್ ಕಚೇರಿಗೆ ವಸ್ತುಗಳನ್ನು ತಂದು ನೀಡಬಹುದು. ನೆರೆ ಸಂತ್ರಸ್ತರಿಗೆ ಅಗತ್ಯವಿರುವ ವಸ್ತುಗಳನ್ನು ಕಚೇರಿಗೆ ತಂದು ಕೊಡಬಹುದಾಗಿದ್ದು, ಕಚೇರಿಯಿಂದ ಅದನ್ನು ನೆರೆ ಸಂತ್ರಸ್ತರಿಗೆ ತಲುಪಿಸಲಾಗುತ್ತಿದ್ದು, ಇದನ್ನು ಅರಿತು ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ತಾಯಿ -ಮಗ ಇಂದು [ಗುರುವಾರ] ಸುವರ್ಣ ನ್ಯೂಸ್ ಕಚೇರಿಗೆ ಬಂದು ತಮ್ಮ ಕೈಲಾದ ಸಹಾಯ ಮಾಡಿದರು.