Asianet Suvarna News Asianet Suvarna News

ಮಂಗಳೂರು ಗೋಲಿಬಾರ್; ಎಸ್‌ಐಟಿ ಮಾಡಿ ಎಂದವರೆ ಅಪರಾಧ ಹಿನ್ನಲೆ ಉಳ್ಳವರು!

ಮಂಗಳೂರು ಗೋಲಿಬಾರ್ ಪ್ರಕರಣ/ ವಿಶೇಷ ತನಿಖಾ ತಂಡ ನೇಮಕ ಮಾಡಿ ತನಿಖೆ ಮಾಡಲು ಸಲ್ಲಿಸಿದ್ದ ಅರ್ಜಿ ತಿರಸ್ಕಾರ/ ಈಗಾಗಲೇ ಸಿಐಡಿ ಪ್ರಕರಣದ ವಿಚಾರಣೆ ಮಾಡುತ್ತಿದೆ

ಬೆಂಗಳೂರು(ಫೆ. 04)  ಮಂಗಳೂರು ಗೋಲಿಬಾರ್ ಸಂಬಂಧ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಯಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕಾರ ಮಾಡಲಾಗಿದೆ. ಈಗಾಗಲೇ ಸಿಐಡಿ ತನಿಖೆ ನಡೆಯುತ್ತಿದ್ದು ಪ್ರತ್ಯೇಕ ತಂಡ ರಚಿಸಿ ತನಿಖೆ ಮಾಡುವ ಅಗತ್ಯ ಇಲ್ಲ ಎಂದು ನ್ಯಾಯಾಲಯ ಹೇಳಿದೆ.

ಮಂಗಳೂರು ಗೋಲಿಬಾರ್ ಘಟನೆ ನೋಡಿದ್ರೆ ನೀವು ಸಾಕ್ಷಿ ಹೇಳಬಹುದು

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ದೂರುದಾರರ ಕ್ರಿಮಿನಲ್ ಹಿನ್ನಲೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ನ್ಯಾಯಾಲಯ ಅರ್ಜಿ ತಿರಸ್ಕಾರ ಮಾಡಿದೆ.