Asianet Suvarna News Asianet Suvarna News

ಬೈಕ್‌ನಲ್ಲಿ ಪ್ರವಾಹ ಪೀಡಿತ ಪ್ರದೇಶ ಪ್ರವಾಸ ಮಾಡಿದ ಶಾಸಕ ಡಾ. ಯತೀಂದ್ರ

ಕಪಿಲಾ ನದಿ ಪ್ರವಾಹದಲ್ಲಿ ಮುಳುಗಿರುವ ರೈತರ ಜಮೀನುಗಳಿಗೆ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲಿಸಿದರು. ನಂಜನಗೂಡು ತಾಲ್ಲೂಕಿನ ವರುಣ ವಿಧಾನಸಭ ಕ್ಷೇತ್ರದ ಆಲತ್ತೂರು, ಮೂಡಹಳ್ಳಿ ಹಾಗೂ ಬೊಕ್ಕಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು

First Published Jul 17, 2022, 3:01 PM IST | Last Updated Jul 17, 2022, 3:01 PM IST

ಕಪಿಲಾ ನದಿ ಪ್ರವಾಹದಲ್ಲಿ ಮುಳುಗಿರುವ ರೈತರ ಜಮೀನುಗಳಿಗೆ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲಿಸಿದರು. ನಂಜನಗೂಡು ತಾಲ್ಲೂಕಿನ ವರುಣ ವಿಧಾನಸಭ ಕ್ಷೇತ್ರದ ಆಲತ್ತೂರು, ಮೂಡಹಳ್ಳಿ ಹಾಗೂ ಬೊಕ್ಕಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ನೀರು ನುಗ್ಗಿ ರೈತರ ಫಸಲಿಗೆ ಶೀಘ್ರದಲ್ಲೆ ಪರಿಹಾರ ದೊರಕಿಸಲು ಕ್ರಮಕೈಗೊಳ್ಳಲು ರೈತರಿಗೆ ಭರವಸೆ ನೀಡಿದರು. ಕೃಷಿ ಇಲಾಖೆ ಅಧಿಕಾರಿ ದೀಪಕ್‌ ಅವರಿಗೆ ಬೆಳೆ ಹಾನಿ ಬಗ್ಗೆ ವರದಿ ನೀಡುವಂತೆ ಸೂಚಿಸಿದರು.

ಬ್ಲಾಕ್‌ ಅಧ್ಯಕ್ಷ ರಂಗಸ್ವಾಮಿ, ರಾಜ್ಯ ವಾಲ್ಮೀಕಿ ಅಭಿವೃದ್ಧಿ ಮಾಜಿ ಅಧ್ಯಕ್ಷ ಎಸ್‌ಇ ಬಸವರಾಜ…, ಶಾಸಕ ಯತೀಂದ್ರ ಅವರು ಸುತ್ತೂರು, ಆಲತ್ತೂರು, ಮೂಡಹಳ್ಳಿ, ಬೊಕ್ಕಳ್ಳಿ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ರೈತರ ಜೊತೆ ಸಂದರ್ಶನ ಮಾಡಿ ಶೀಘ್ರದಲ್ಲೇ ಪರಿಹಾರ ಕೊಡಿಸಲು ಭರವಸೆ ನೀಡಿದರು.

Video Top Stories