Asianet Suvarna News Asianet Suvarna News

ಲಕ್ಷ, ಲಕ್ಷ ಬಿಲ್ ಕಟ್ಟಿ ತಂದೆ ಶವ ಬಿಟ್ಟು ಹೋದ ಪುತ್ರ: ಅಂತ್ಯಸಂಸ್ಕಾರ ಮಾಡಿದ ಜಮೀರ್ ತಂಡ

ಇಲ್ಲೊಬ್ಬ ಮಗ ತನ್ನ ತಂದೆ ಸಾವನ್ನಪ್ಪಿ 22 ದಿನವಾದ್ರೂ ಅಂತ್ಯಸಂಸ್ಕಾರ ಮಾಡಿಲ್ಲ. ಆಸ್ಪತ್ರೆಗೆ ಒಂದುವರೆ ಲಕ್ಷ ರೂ. ಬಿಲೆ ಕಟ್ಟಿದ್ದಾನೆ. ಆದ್ರೆ, ತಂದೆ ಶವ ಮಾತ್ರ ತೆಗೆದುಕೊಂಡು ಹೋಗಿಲ್ಲ. ಆಸ್ಪತ್ರೆ ಸಿಬ್ಬಂದಿ ಫೋನ್ ಮಾಡಿದ್ರೂ ತಂದೆ ಶವ ತೆಗೆದುಕೊಂಡು ಹೋಗಲು ಬಂದಿಲ್ಲ. ಕೊನೆಗೆ ಕಾಂಗ್ರೆಸ್ ಶಾಸಕ ಜಮಿರ್ ಅಹ್ಮದ್ ಖಾನ್ ಅವರ ತಂಡ ಅಂತ್ಯ ಸಂಸ್ಕಾರ ನೆರವೇರಿಸಿದೆ.

ಬೆಂಗಳೂರು, (ಆ.22): ಮಹಾಮಾರಿ ಕೊರೋನಾ ವೈರಸ್ ಮನುಷ್ಯತ್ವವನ್ನೇ ಮರೆಸಿಬಿಟ್ಟಿದೆ. ಕೊರೋನಾ ಸಂಕಷ್ಟ ಕಾಲದಲ್ಲಿ ಮೃತರ ಅಂತ್ಯಸಂಸ್ಕಾರ ನಡೆಸುವುದಕ್ಕೆ ಸಂಬಂಧಿಕರೂ ಹಿಂದೆ ಮುಂದೆ ನೋಡುತ್ತಿರುವ ಸನ್ನಿವೇಶ ಸೃಷ್ಟಿಯಾಗಿದೆ.

ಉಡುಪಿ: ಕೊರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಿದ ಹಿಂದೂ ಜಾಗರಣ ವೇದಿಕೆ ತಂಡ

ಹೌದು...ಇಲ್ಲೊಬ್ಬ ಮಗ ತನ್ನ ತಂದೆ ಸಾವನ್ನಪ್ಪಿ 22 ದಿನವಾದ್ರೂ ಅಂತ್ಯಸಂಸ್ಕಾರ ಮಾಡಿಲ್ಲ. ಆಸ್ಪತ್ರೆಗೆ ಒಂದುವರೆ ಲಕ್ಷ ರೂ. ಬಿಲೆ ಕಟ್ಟಿದ್ದಾನೆ. ಆದ್ರೆ, ತಂದೆ ಶವ ಮಾತ್ರ ತೆಗೆದುಕೊಂಡು ಹೋಗಿಲ್ಲ. ಆಸ್ಪತ್ರೆ ಸಿಬ್ಬಂದಿ ಫೋನ್ ಮಾಡಿದ್ರೂ ತಂದೆ ಶವ ತೆಗೆದುಕೊಂಡು ಹೋಗಲು ಬಂದಿಲ್ಲ. ಕೊನೆಗೆ ಕಾಂಗ್ರೆಸ್ ಶಾಸಕ ಜಮಿರ್ ಅಹ್ಮದ್ ಖಾನ್ ಅವರ ತಂಡ ಅಂತ್ಯ ಸಂಸ್ಕಾರ ನೆರವೇರಿಸಿದೆ.

Video Top Stories